Homeಅಂಕಣಗಳುಆಣೆ ಪ್ರಮಾಣಗಳ ನಡುವೆ ಸಿಲುಕಿದ ಪಂಚಮಸಾಲಿ ಮೀಸಲಾತಿ ಹೋರಾಟ

ಆಣೆ ಪ್ರಮಾಣಗಳ ನಡುವೆ ಸಿಲುಕಿದ ಪಂಚಮಸಾಲಿ ಮೀಸಲಾತಿ ಹೋರಾಟ

- Advertisement -
- Advertisement -

ಲಿಂಗಾಯತ ಪಂಚಮಸಾಲಿ ನಾಯಕರು ಮೀಸಲಾತಿ ಹೋರಾಟ ಸಮಿತಿ ಕಟ್ಟಿಕೊಂಡು ಹೋರಾಟ ನಡೆಸಿದ್ದಾರೆ. ಈಗ ಹಿಂದುಳಿದ ಪ್ರವರ್ಗ 3ಬಿಯಲ್ಲಿ ಇರುವ ಈ ಉಪಜಾತಿ 2ಎಗೆ ಸೇರಬೇಕು ಎನ್ನುವುದು ಅವರ ಆಗ್ರಹ.

ಶೇ.5 ಮೀಸಲು ಸೌಲಭ್ಯ ಇರುವ 3ಬಿ ಗುಂಪಿನಲ್ಲಿ ವೀರಶೈವ ಲಿಂಗಾಯತದ ಎಲ್ಲ ಉಪಜಾತಿಗಳು ಸೇರಿದಂತೆ ಸುಮಾರು 6 ಜಾತಿಗಳು ಹಾಗೂ ಹಾಗೂ ಅವುಗಳ ಸರಿಸಮಾನ ಜಾತಿಗಳು ಇವೆ. ಶೇ.15 ಮೀಸಲು ಇರುವ 2ಎ ಪ್ರವರ್ಗದಲ್ಲಿ 102 ಜಾತಿಗಳು ಹಾಗೂ ಅವುಗಳ ಸಮಾನಾಂತರ ಜಾತಿಗಳು ಇವೆ.

ಪ್ರತಿ ಗುಂಪಿನಲ್ಲೂ ಮೀಸಲು ಸೌಲಭ್ಯ ಸಮಾನವಾಗಿ ಹಂಚಿಕೆ ಆಗುತ್ತದೆ ಅಂದುಕೊಳ್ಳುವುದಾದರೆ ಈಗ ಪಂಚಮಶಾಲಿಗಳಿಗೆ ಶೇಕಡಾ 0.83 ಸೌಲಭ್ಯ ದೊರೆಯುತ್ತದೆ. ಆದರೆ ಅದನ್ನು 2ಎನಲ್ಲಿ ಸೇರಿಸಿದರೆ ಆ ಜಾತಿಯ ಅಭ್ಯರ್ಥಿಗಳಿಗೆ ಶೇ.0.14 ಸೌಲಭ್ಯ ದೊರೆಯುತ್ತದೆ. (ಬೇರೆಬೇರೆ ಸಮುದಾಯಗಳ ಜನಸಂಖ್ಯೆ ಹೆಚ್ಚುಕಮ್ಮಿಯುರುತ್ತದೆ ಎಂಬುದನ್ನು ಸದ್ಯಕ್ಕೆ ಬದಿಗಿರಿಸಿ ನೋಡಿದಾಗಲೂ 2ಎನಲ್ಲಿ ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಹೆಚ್ಚಳವಾಗುವ ಸಾಧ್ಯತೆಯಿದೆಯೇ ಎಂಬ ಪ್ರಶ್ನೆ ಉಳಿದೇ ತೀರುತ್ತದೆ.) ಎಲ್ಲಾ ಜಾತಿ ಸಮುದಾಯಗಳು ಹೆಚ್ಚಿನ ಸೌಲಭ್ಯಕ್ಕಾಗಿ ಆಗ್ರಹಿಸುತ್ತಿರುವಾಗ ಈ ಪಂಚಮಸಾಲಿ ಕಮಿಟಿ ಅಂದಾಜು ಎಂಟು ಪಟ್ಟು ಕಮ್ಮಿ ಸೌಲಭ್ಯಕ್ಕೆ ಹಾತೊರೆಯುತ್ತಿರುವುದೇಕೆ?

ಇದಕ್ಕೆ ಸಮುದಾಯದ ಅಭಿವೃದ್ಧಿ ಹೊರತಾಗಿ ಪಕ್ಷ ರಾಜಕಾರಣವೂ ಸೇರಿದಂತೆ ಇತರ ಕಾರಣಗಳು ಇರಬಹುದೇ? ಇದು ಇಡೀ ಪಂಚಮಸಾಲಿ ಸಮಾಜದ ಹೋರಾಟವೇ ಅಥವಾ ಆ ಜಾತಿಯ ಕೆಲ ರಾಜಕೀಯ ನಾಯಕರ ಅಸ್ತಿತ್ವದ ಹೋರಾಟವೇ? ಇದರಿಂದ ಸಮಾಜಕ್ಕೆ ಸಿಗುವುದು ಏನು? ಪುಢಾರಿಗಳಿಗೆ ದೊರೆಯುವುದು ಏನು? ಇದರ ಬಗ್ಗೆ ಸಮಾಜಕ್ಕಾಗಲೀ, ಮುಖಂಡರಿಗಾಗಲೀ ಸ್ಪಷ್ಟತೆ ಇದೆಯೇ? ಈ ಪ್ರಶ್ನೆಗಳಿಗೆ ಉತ್ತರ ಸುಲಭವಾಗಿ ದೊರೆಯುತ್ತಿಲ್ಲ.

ಮೇಲುನೋಟಕ್ಕೆ ಇದು ರಾಜಕೀಯ ಹೋರಾಟದಂತೆ ಕಾಣುತ್ತದೆ.

ಬಸನಗೌಡ ಪಾಟೀಲ ಯತ್ನಾಳ್

ಇದನ್ನು ಎರಡು ರೀತಿ ನೋಡಬಹುದು. ಬಸನಗೌಡ ಯತ್ನಾಳ್ ಸೇರಿದಂತೆ ಕೆಲವು ಬಿಜೆಪಿ ನಾಯಕರು ತಮಗೆ ಅಧಿಕಾರ ಸಿಗಲಿಲ್ಲ ಎನ್ನುವುದಕ್ಕೋ ಅಥವಾ ತಮ್ಮ ವಿರೋಧಿಗಳಿಗೆ ಅಧಿಕಾರ ಸಿಕ್ಕಿದೆ ಎನ್ನುವುದಕ್ಕೋ ಅಥವಾ ತಾವು ತಮ್ಮ ಸಮುದಾಯದಲ್ಲಿ ಪ್ರಶ್ನಾತೀತ ನಾಯಕರರಾಗಬೇಕು ಎನ್ನುವುದಕ್ಕೋ ಮನೆ-ಮಠ ಬಿಟ್ಟು ಬೀದಿಗೆ ಇಳಿದಂತೆ ಕಾಣುತ್ತದೆ.

ರಾಜ್ಯಮಟ್ಟದ ಸಹಕಾರಿ ಒಕ್ಕೂಟದ ಚುನಾವಣೆಯಲ್ಲಿ ತಮ್ಮ ಮಗನನ್ನು ಗೆಲ್ಲಿಸಲು ಹೋಗಿ ಸೌಹಾರ್ದ ಸಹಕಾರಿ ಸಂಘಟನೆಯ ದ್ವೇಷ ಕಟ್ಟಿಕೊಂಡ ಯತ್ನಾಳ್ ಅವರು ಬಿಜೆಪಿಯ ಮತ್ತು ಸಂಘ ಪರಿವಾರದ ಎಲ್ಲರ ಜೊತೆ ಸೌಹಾರ್ದ ಸಂಬಂಧಗಳನ್ನೇನು ಇಟ್ಟುಕೊಂಡಿಲ್ಲ. ಹಾಗೆಂದು ಬಿಜೆಪಿ ಯತ್ನಾಳ್‌ಗೌಡರಂತಹ ಬೇಫಿಕರ್ ಭಾಷಣಕಾರರನ್ನು ಕಳೆದುಕೊಳ್ಳಲು ತಯಾರಿಲ್ಲ. ಬಿಜೆಪಿಯ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು ಯತ್ನಾಳ್ ಅವರ ಮನೆಗೆ ಹೋಗಿ ತಾವು ನಮ್ಮ ಚುನಾವಣೆಯಲ್ಲಿ ‘ತಾರಾ ಪ್ರಚಾರಕ’ರಾಗಿ ಸೇವೆ ಸಲ್ಲಿಸಬೇಕು ಎಂದು ಕೇಳಿಕೊಂಡಿದ್ದಾರೆ. ತಾವು ಹಿಂದಿನದೆಲ್ಲಾ ಮರೆತು ಈ ಆಹ್ವಾನವನ್ನು ಒಪ್ಪಿಕೊಂಡಿದ್ದಾಗಿ ಯತ್ನಾಳ್ ನೋವುನುಂಗಿ ನಗು ಮುಖ ತೋರಿದ ಸ್ಥಿತಿಯಲ್ಲಿ ಘೋಷಿಸಿದ್ದಾರೆ.

ಇವರಿಗೆ ತಮ್ಮದೇ ಪಕ್ಷದ ಹಿಂದಿನ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹಾಗೂ ಅವರ ಮಗ ಬಿ.ವೈ ವಿಜಯೇಂದ್ರ ಅವರ ಮೇಲೆ ಸಿಟ್ಟಿದೆ. ಇದರ ಬಗ್ಗೆ ಕೇಳಿರಲಾರದವರು ಯಾರೂ ಇರಲಾರರು. ಇನ್ನು ಯತ್ನಾಳ್‌ರ ಮೇಲಿನ ಸಿಟ್ಟಿನಿಂದ ಒಂದಲ್ಲ ಎರಡಲ್ಲ ಐದು ಮಠ ಕಟ್ಟುತ್ತೇನೆ ಎಂದು ಹೇಳಿರುವ ಮುರುಗೇಶ್ ನಿರಾಣಿ ಮತ್ತು ಯತ್ನಾಳ್ ರಾಜಕೀಯ ವಿರೋಧಿಗಳು ಎನ್ನುವುದು ಕೂಟ ಅಷ್ಟೇ ಸಾಮಾನ್ಯ ತಿಳಿವಳಿಕೆ.

ಇದನ್ನೂ ಓದಿ: ಪಂಚಮಸಾಲಿಯೊಳಗೆ ಯತ್ನಾಳ್- ನಿರಾಣಿ ಕುಸ್ತಿ: ಸಭ್ಯತೆ ಮೀರಿದ ಟೀಕಾಪ್ರಹಾರ

ಯತ್ನಾಳ್ ಬಿಟ್ಟರೆ ಮೀಸಲಾತಿ ಹೋರಾಟದಲ್ಲಿ ಇರುವವರು ಬಿಜೆಪಿ ಹೊರತುಪಡಿಸಿ ಇತರ ಪಕ್ಷದಲ್ಲಿ ಇರುವ ಅವರ ಕುಲಬಾಂಧವರೇ. ರಾಜ್ಯದ ಅನೇಕ ಕಡೆ ಪಂಚಮಸಾಲಿ ಪ್ರತಿಭಟನೆಗಳನ್ನು ನೋಡಿದರೆ ಯತ್ನಾಳ್‌ರಿಗೆ ಬಿಜೆಪಿಯ ಮೇಲೆ ಪ್ರೀತಿ ಇದ್ದರೂ ಕೆಲ ಪ್ರತಿಸ್ಪರ್ಧಿಗಳ ಮೇಲಿನ ಸಿಟ್ಟಿನಿಂದ ಈ ರೀತಿ ಮಾಡುತ್ತಿದ್ದಾರೆ ಎಂದು ಅನ್ನಿಸದೆ ಇರದು.

ಆದರೆ ರಾಜ್ಯದ ಸಾಮಾಜಿಕ ರಚನೆಯನ್ನು ಬಲ್ಲವರು, ಜಾತಿ-ಉಪಜಾತಿ ರಾಜಕಾರಣದ ಒಳಪಟ್ಟುಗಳನ್ನು ಬಲ್ಲವರು ಇದು ಮೇಲೆ ಕಾಣುವಷ್ಟು ಸರಳವಾಗಿಲ್ಲ ಎನ್ನುತ್ತಾರೆ. ಇದು ರಾಜಕೀಯೋ-ಸಾಮಾಜಿಕ ತಂತ್ರ ಎಂದು ಅವರ ಅನಿಸಿಕೆ. 3ಬಿ ಪ್ರವರ್ಗದಲ್ಲಿ ವೀರಶೈವ-ಲಿಂಗಾಯತ ಜಾತಿ ಪಂಗಡಗಳು ಇದ್ದು ಪಂಚಮಸಾಲಿ ಜನಾಂಗಕ್ಕೆ ತಮ್ಮವರೊಡನೆ ಸ್ಪರ್ಧೆ ಇಷ್ಟವಿಲ್ಲ. ಇನ್ನು 2ಎ ಪ್ರವರ್ಗದಲ್ಲಿ ಲಿಂಗಾಯತರ ಬಣಜಿಗ ಉಪ ಜಾತಿಯನ್ನು ಜಗದೀಶ್ ಶೆಟ್ಟರ್ ಅವರು ತಮ್ಮ ಕಾಲದಲ್ಲಿ ಗದ್ದಲ ಇಲ್ಲದೆ ಸೇರಿಸಿಬಿಟ್ಟರು. ಬಣಜಿಗರು ಪಂಚಮಸಾಲಿಗಳಿಗೆ ಹೋಲಿಸಿದರೆ ಕಮ್ಮಿ ಸಂಖ್ಯೆಯಲ್ಲಿ ಇದ್ದಾರೆ. ಆದರೆ ಅವರಿಗೆ ಹೆಚ್ಚಿನ ಸೌಲಭ್ಯ ಸಿಕ್ಕಿತು. ಇನ್ನು ಲಿಂಗಾಯತ ಪ್ರಾತಿನಿಧ್ಯ ಎನ್ನುವ ಹೆಸರಿನಲ್ಲಿ ಕೇವಲ ಬಣಜಿಗರು ಎಲ್ಲ ಸೌಲಭ್ಯ ಬಾಚಿಕೊಂಡರು, ಪಂಚಮಸಾಲಿಗಳಿಗೆ ರಾಜಕೀಯ ಪ್ರಾತಿನಿಧ್ಯ ಸಿಗಲಿಲ್ಲ ಎನ್ನುವ ದುಃಖ ಯತ್ನಾಳ್ ಮತ್ತು ಇತರ ನಾಯಕರಿಗೆ ಇದ್ದಂತೆ ಇದೆ.

ಇನ್ನು 3ಬಿ ಗುಂಪಿನಲ್ಲಿ ಮರಾಠಾ ಸಮುದಾಯ ಇದ್ದು, 2ಎನಲ್ಲಿ ಕುರುಬ ಜನಾಂಗ ಇದೆ. ಮರಾಠರೊಂದಿಗೆ ಸ್ಪರ್ಧೆ ಮಾಡುವುದಕ್ಕಿಂತ ಕುರುಬ ಜನಾಂಗದ ಜೊತೆ ಸ್ಪರ್ಧೆ ಅನುಕೂಲ ಎನ್ನುವ ಲೆಕ್ಕಾಚಾರ ಇಂತಹ ನಾಯಕರಿಗೆ ಇದ್ದಂತೆ ಇದೆ.

ಬಸವರಾಜ್ ಬೊಮ್ಮಾಯಿ

ಉತ್ತರ ಕರ್ನಾಟಕದಾದ್ಯಂತ ಹಬ್ಬಿರುವ ಪಂಚಮಸಾಲಿ ಜನಾಂಗ ತಲೆತಲಾಂತರದಿಂದ ಭೂಮಾಲೀಕತ್ವ ಹೊಂದಿದೆ. ಅವರನ್ನು ಹಳ್ಳಿಗಳಲ್ಲಿ ಗೌಡರು-ಬಿರಾದಾರ, ಪಾಟೀಲ್ ಎಂದು ಕರೆಯುತ್ತಾರೆ. ಇವರ ಎದುರು ಇತರ ಹಿಂದುಳಿದ ಜಾತಿಯವರು ಸ್ಪರ್ಧೆ ಮಾಡಲು ಸಾಧ್ಯ ಇಲ್ಲ. ಉದಾಹರಣೆಗೆ ಗ್ರಾಮ ಪಂಚಾಯಿತಿ ಅಧ್ಯಕ್ಷನ ಸ್ಥಾನ 2ಎಗೆ ಮೀಸಲು ಎಂತಾದರೆ ಪಂಚಮಸಾಲಿಗಳ ಎದುರು ಇತರ ಹಿಂದುಳಿದ ಜಾತಿಯ ಯಾವುದೇ ಅಭ್ಯರ್ಥಿ ನಿಲ್ಲಲು ಸಾಧ್ಯ ಇಲ್ಲ. ಆದರೆ 3ಬಿನಲ್ಲಿ ಇದ್ದರೆ ಇವರು ಇತರ ಲಿಂಗಾಯತರ ಜೊತೆ ಸ್ಪರ್ಧೆ ಮಾಡಬೇಕಾಗುತ್ತದೆ. ಅದನ್ನು ತಪ್ಪಿಸಲು ಅವರು 2ಎಗೆ ಬದಲಾವಣೆಗೊಳ್ಳಬೇಕು ಎಂದು ಬಯಸುತ್ತಿದ್ದಾರೆ ಎನ್ನುವುದು ಕೆಲವರ ಅನಿಸಿಕೆ.

ಈ ಪಿಸುಮಾತುಗಳನ್ನು ತಳ್ಳಿಹಾಕಿರುವ ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು ನಮಗೆ ರಾಜಕೀಯ ಮೀಸಲಾತಿ ಬೇಡ. ಅದನ್ನು ನಾವು ಬರೆದುಕೊಟ್ಟಿದ್ದೇವೆ ಎನ್ನುವ ಮಾತು ಹೇಳಿದ್ದಾರೆ. ಇದು ಸಮಸ್ಯೆಯನ್ನು ಸರಳವಾಗಿಸುವ ಬದಲಾಗಿ ಇನ್ನೂ ನಿಗೂಢವಾಗಿಸುತ್ತದೆ. ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದಿರುವ ಜಾತಿಗಳಿಗೆ ಮಾತ್ರ ಕೆಲವು ಹಂತಗಳಲ್ಲಿ ರಾಜಕೀಯ ಮೀಸಲಾತಿ ಇದೆ.

ಕಾನೂನು ಸಚಿವ ಮಾಧುಸ್ವಾಮಿ ಅವರು ಸೂಚಿಸಿದಂತೆ ಆರ್ಥಿಕ ಹಿಂದುಳಿದವರ (ಇಡಬ್ಲೂಎಸ್) ಶೇ.10ರ ಕೋಟಾದಿಂದ ಒಂದು ಭಾಗವನ್ನು ಪಂಚಮಸಾಲಿಯವರಿಗೆ ಕೊಡಬಹುದು. ಇದಕ್ಕೆ ಹಿಂದುಳಿದ ವರ್ಗದ ಆಯೋಗದ ಶಿಫಾರಸ್ಸು ಅಗತ್ಯವಿಲ್ಲ. ಆದರೆ ಈ ಗುಂಪಿಗೆ ರಾಜಕೀಯ ಮೀಸಲಾತಿ ಇಲ್ಲ. ಕೂಡಲ ಸಂಗಮ ಸ್ವಾಮೀಜಿ ಅವರಿಗೆ ಈ ಸೂಚನೆ ಮೊದಲೇ ಸಿಕ್ಕಿತ್ತೇ?

ಆದರೆ ಇದು ಸುಲಭವಲ್ಲ. ಜಯಶ್ರೀ ಪಾಟೀಲ್ ಮತ್ತು ಇತರರು ಎನ್ನುವ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯ ಮರಾಠಾ ಜನಾಂಗಕ್ಕೆ ಕೊಟ್ಟಿದ್ದ 16 ಶೇಕಡಾ ಮೀಸಲಾತಿಯನ್ನು ತಳ್ಳಿಹಾಕಿದೆ. ಶೇ.50ರ ಮಿತಿಮೀರಿವುದು ಒಂದು ಕಾರಣವಾದರೆ ಆಯೋಗದ ಶಿಫಾರಸ್ಸು ಇರಲಿಲ್ಲ ಎನ್ನುವ ಕಾರಣ ಇನ್ನೊಂದು.

ತಮ್ಮ ರಾಜಕೀಯ ಚಾಣಾಕ್ಷ ತನಕ್ಕೆ ಹೆಸರಾದ ಬಸವರಾಜ ಬೊಮ್ಮಾಯಿ ಅವರು, ’ನೋಡಪ್ಪ ನಾನಂತೂ ಕೊಟ್ಟೆ, ಕೋರ್ಟ್‌ನವರು ಕೊಡದೇ ಹೋದರೆ ನಾನು ಏನು ಮಾಡಲಿ’ ಎನ್ನುವ ಮಾತಾಡಿ ಕೈಚೆಲ್ಲಬಹುದು. ’ಇನ್ನೊಂದು ಬಾರಿ ಅಧಿಕಾರ ಕೊಟ್ಟರೆ ನಾನು ಏನಾದರೂ ಮಾಡಿಯೇನು’ ಎನ್ನುವ ಆಶ್ವಾಸನೆ ಕೊಡಬಹುದು. ಈ ಹಿನ್ನೆಲೆಯಲ್ಲೇ ಅವರು ಯತ್ನಾಳ್ ಅವರಿಗೆ ಆಣೆ ಪ್ರಮಾಣ ಮಾಡಿದರೋ ಏನೋ? ಇದ್ದರೂ ಇರಬಹುದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಉದ್ಯಮಿ ಸಿಜೆ ರಾಯ್ ಮರಣೋತ್ತರ ಪರೀಕ್ಷೆ; ಹೃದಯ-ಶ್ವಾಸಕೋಶದಲ್ಲಿ 6.35 ಎಂಎಂ ಗುಂಡಿನ ಗಾಯ

ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಸಿಜೆ ರಾಯ್ ಅವರ ಆತ್ಮಹತ್ಯೆಯ ಮರಣೋತ್ತರ ಪರೀಕ್ಷೆಯ ವರದಿಗಯನ್ನು ಬೆಂಗಳೂರಿನ ಬೌರಿಂಗ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅರವಿಂದ್ ಎಂಎನ್ ವಿವರಿಸಿದ್ದಾರೆ. 6.35 ಎಂಎಂ ಗುಂಡಿನ ದಾಳಿಯು ತಕ್ಷಣದ...

ಮುಂಬೈ| ನಿರ್ದೇಶಕ ರೋಹಿತ್ ಶೆಟ್ಟಿ ಮನೆಯ ಹೊರಗೆ 4 ಸುತ್ತು ಗುಂಡು ಹಾರಿಸಿದ ಅಪರಿಚಿತರು

ಶನಿವಾರ ತಡರಾತ್ರಿ, ಬಾಲಿವುಡ್ ನಿರ್ದೇಶಕ ರೋಹಿತ್ ಶೆಟ್ಟಿ ಅವರ ಮುಂಬೈನ ಜುಹು ನಿವಾಸದ ಹೊರಗೆ ನಾಲ್ಕು ಸುತ್ತು ಗುಂಡು ಹಾರಿಸಲಾಗಿದ್ದು, ಘಟನೆಯಲ್ಲಿ ಯಾವುದೇ ಗಾಯಗಳಾಗಿಲ್ಲ ಎಂದು ವರದಿಯಾಗಿದೆ. ಚಿತ್ರ ನಿರ್ಮಾಪಕ-ನಿರ್ದೇಶಕರ ಕಟ್ಟಡದ ಬಳಿ ಅಪರಿಚಿತ...

ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಪ್ರಮಾಣ ವಚನ ಸ್ವೀಕಾರ

ಜನವರಿ 28ರಂದು ವಿಮಾನ ಅಪಘಾತದಲ್ಲಿ ನಿಧನರಾದ ಎನ್‌ಸಿಪಿ ನಾಯಕ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಶನಿವಾರ (ಜ.31) ಪ್ರಮಾಣವಚನ ಸ್ವೀಕರಿಸಿದರು. ಮುಂಬೈನ ಲೋಕಭವನದಲ್ಲಿ ನಡೆದ ಸರಳ ಸಮಾರಂಭದಲ್ಲಿ...

ಡೊನಾಲ್ಡ್ ಟ್ರಂಪ್, ಎಲಾನ್ ಮಸ್ಕ್‌ನಿಂದ ಬಿಲ್ ಗೇಟ್ಸ್‌ವರೆಗೆ : ಅಂತಿಮ ಎಪ್‌ಸ್ಟೀನ್‌ ಫೈಲ್‌ಗಳಲ್ಲಿ ಹಲವು ಪ್ರಮುಖರ ಹೆಸರು

ಅಮೆರಿಕದ ಸಂಸತ್ತು ಅಂಗೀಕರಿಸಿದ ಎಪ್‌ಸ್ಟೀನ್ ಫೈಲ್ಸ್ ಟ್ರಾನ್ಸ್‌ಪೆರೆನ್ಸಿ ಆಕ್ಟ್ (Epstein Files Transparency Act) ನಿಯಮದಂತೆ ಅಮೆರಿಕದ ನ್ಯಾಯ ಇಲಾಖೆ (ಡಿಒಜಿ) ಲೈಂಗಿಕ ದೌರ್ಜನ್ಯ ಪ್ರಕರಣದ ಅಪರಾಧಿ ಜೆಫ್ರಿ ಎಪ್‌ಸ್ಟೀನ್‌ಗೆ ಸಂಬಂಧಿಸಿದ ಅಂತಿಮ...

ಲಂಚ ಪ್ರಕರಣ : ಎಸ್‌ಇಸಿ ಸಮನ್ಸ್ ಸ್ವೀಕರಿಸಲು ಅದಾನಿ ಒಪ್ಪಿಗೆ

ಲಂಚ ಪ್ರಕರಣದಲ್ಲಿ ಅಮೆರಿಕದ ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್‌ಚೇಂಜ್ ಕಮಿಷನ್ (ಎಸ್‌ಇಸಿ) ನ ಸಮನ್ಸ್‌ಗಳನ್ನು ಸ್ವೀಕರಿಸಲು ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಪ್ಪಿಕೊಂಡಿದ್ದಾರೆ ಎಂದು ವರದಿಯಾಗಿದೆ. ನ್ಯೂಯಾರ್ಕ್‌ನ ಬ್ರೂಕ್ಲಿನ್‌ನಲ್ಲಿರುವ ಫೆಡರಲ್...

ಬೀದರ್‌ : ಮೊಳಕೇರಾ ಗ್ರಾಮದಲ್ಲಿ ಸ್ಫೋಟ ಪ್ರಕರಣ ; ಸಮಗ್ರ ತನಿಖೆಗೆ ಸಚಿವ ಈಶ್ವರ್ ಖಂಡ್ರೆ ಆದೇಶ

ಬೀದರ್ ಜಿಲ್ಲೆ ಹುಮನಾಬಾದ್ ತಾಲೂಕಿನ ಮೊಳಕೇರಾ ಗ್ರಾಮದ ಮೋಳಗಿ ಮಾರಯ್ಯ ದೇವಸ್ಥಾನ ರಸ್ತೆಯಲ್ಲಿ ಅನುಮಾನಾಸ್ಪದ ವಸ್ತು ಸ್ಫೋಟಗೊಂಡು, ಶಾಲೆಗೆ ತೆರಳುತ್ತಿದ್ದ ಮಕ್ಕಳೂ ಸೇರಿ 6 ಜನರು ಗಾಯಗೊಂಡಿರುವ ಘಟನೆ ಬಗ್ಗೆ ಆಘಾತ ವ್ಯಕ್ತಪಡಿಸಿರುವ...

ಜೈಲಿನಲ್ಲಿರುವ ಹೋರಾಟಗಾರ ಸೋನಮ್ ವಾಂಗ್‌ಚುಕ್‌ಗೆ ಅನಾರೋಗ್ಯ : ಜೋಧ್‌ಪುರದ ಏಮ್ಸ್‌ನಲ್ಲಿ ವೈದ್ಯಕೀಯ ಪರೀಕ್ಷೆ

ನ್ಯಾಯಾಂಗ ಬಂಧನದಲ್ಲಿರುವ ಲಡಾಖ್‌ನ ಹೋರಾಟಗಾರ ಹಾಗೂ ವಿಜ್ಞಾನಿ ಸೋನಮ್ ವಾಂಗ್‌ಚುಕ್ ಅವರ ಆರೋಗ್ಯ ಹದೆಗೆಟ್ಟಿದ್ದು, ಸುಪ್ರೀಂ ಕೋರ್ಟ್ ನಿರ್ದೇಶನ ಅನುಸಾರ ಜೋಧ್‌ಪುರದ ಏಮ್ಸ್‌ನಲ್ಲಿ ಅವರಿಗೆ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ. ಪೊಲೀಸರು ವಾಂಗ್‌ಚುಕ್ ಅವರನ್ನು ಜೋಧ್‌ಪುರ...

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ ತಿದ್ದುಪಡಿ : ಬಲವಂತದ ವಿವಾಹ, ಲಿವ್‌ಇನ್ ಸಂಬಂಧಕ್ಕೆ 7 ವರ್ಷ ಜೈಲು

ಉತ್ತರಾಖಂಡ ಏಕರೂಪ ನಾಗರಿಕ ಸಂಹಿತೆ (ತಿದ್ದುಪಡಿ) ಸುಗ್ರೀವಾಜ್ಞೆಗೆ ರಾಜ್ಯಪಾಲ ಹಾಗೂ ನಿವೃತ್ತ ಲೆಫ್ಟಿನೆಂಟ್ ಜನರಲ್ ಗುರ್ಮೀತ್ ಸಿಂಗ್ ಅವರು ಅಂಕಿತ ಹಾಕಿದ್ದಾರೆ. ಈ ತಿದ್ದುಪಡಿಯ ಪರಿಣಾಮ, ರಾಜ್ಯದಲ್ಲಿ ವಿವಾಹ ಹಾಗೂ ಲಿವ್‌ಇನ್ ಸಂಬಂಧಗಳಿಗೆ...

ಮಹಾರಾಷ್ಟ್ರದ ಡಿಸಿಎಂ ಆಗಿ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಆಯ್ಕೆ : ಇಂದು ಸಂಜೆ ಪ್ರಮಾಣ ವಚನ ಸ್ವೀಕಾರ; ವರದಿ

ಅಜಿತ್ ಪವಾರ್ ಅವರ ಅಕಾಲಿಕ ಸಾವಿನಿಂದ ತೆರವಾದ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸ್ಥಾನಕ್ಕೆ ಅಜಿತ್ ಪವಾರ್ ಅವರ ಪತ್ನಿ ಸುನೇತ್ರಾ ಪವಾರ್ ಅವರನ್ನು ನೇಮಿಸಲು ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ನಿರ್ಧರಿಸಿದೆ ಎಂದು ವರದಿಯಾಗಿದೆ....

ಶೂಟ್ ಮಾಡಿಕೊಂಡು ಪ್ರಾಣ ಬಿಟ್ಟ ಕಾನ್ಫಿಡೆಂಟ್ ಗ್ರೂಪ್ ಸಂಸ್ಥಾಪಕ ಸಿ.ಜೆ. ರಾಯ್: ಐಟಿ ದಾಳಿ ಒತ್ತಡದಿಂದ ಆತ್ಮಹತ್ಯೆ ಶಂಕೆ

ಬೆಂಗಳೂರು: ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ, ಕಾನ್ಫಿಡೆಂಟ್ ಗ್ರೂಪ್ (Confident Group) ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಶುಕ್ರವಾರ ಬೆಂಗಳೂರಿನ ತಮ್ಮ ಕಚೇರಿಯಲ್ಲಿ ಗನ್ ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.  ಕೇರಳ...