Homeಅಂಕಣಗಳುಮೋದಿಗೂ ಅರ್ಜುನನಿಗೂ ಯಾವ ಸಂಬಂಧ!

ಮೋದಿಗೂ ಅರ್ಜುನನಿಗೂ ಯಾವ ಸಂಬಂಧ!

- Advertisement -
- Advertisement -

ಸಿದ್ದರಾಮಯ್ಯನವರ ಸರಕಾರ ರಚನೆಯಾಗಿ ತಿಂಗಳೊಪ್ಪತ್ತಾಗುವಷ್ಟರಲ್ಲಿ ಮುಖ್ಯಮಂತ್ರಿ ಕಾರ್ಯಾಲಯದಲ್ಲಿ ವರ್ಗಾವಣೆಗೆ 30 ಲಕ್ಷ ಲಂಚ ತೆಗೆದುಕೊಳ್ಳಲಾಗುತ್ತಿದೆಯೆಂದೂ ಕುಮಾರಸ್ವಾಮಿಯವರು ಬಾಂಬು ಸಿಡಿಸಿದ್ದಾರಲ್ಲಾ. ಈ ಬಗ್ಗೆ ಕಾಂಗೈ ಪಾಳಯದಲ್ಲಿ ದೊಡ್ಡ ಚರ್ಚೆಯೇ ನಡೆದು, ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗುವುದಕ್ಕೆ ಹಲವು ವರ್ಷಗಳ ಮೊದಲು ದೇವೇಗೌಡರ ಹದಿನೆಂಟು ತಿಂಗಳು ಮುಖ್ಯಮಂತ್ರಿಯಾಗಿದ್ದರು. ಆಗ ರೇವಣ್ಣನಿಗೆ ಮತ್ತು ಕುಮಾರಣ್ಣನಿಗೆ ದೇವೇಗೌಡರ ಸನಿಹದಲ್ಲಿ ಸುಳಿದಾಡುವ ವಿಷಯದಲ್ಲಿ ಜಗಳವೇ ಆಗಿತ್ತು. ಅದರಲ್ಲೂ ರೇವಣ್ಣ ಮುಖ್ಯಮಂತ್ರಿ ಇಲ್ಲದ ಸಮಯ ನೋಡಿ ಅವರ ಕುರ್ಚಿಯಲ್ಲಿ ಕುಳಿತು ಗೌಡರಂತೆ ಅತ್ತ ಇತ್ತ ನೋಡಿದ್ದು ಸದನದಲ್ಲಿ ಚರ್ಚೆಗೆ ಬಂದಿತ್ತು. ಮುಂದೆ ದೇವೇಗೌಡರು ಪ್ರಧಾನಿಯಾದಾಗಲೂ ಅವರ ಬೆಂಗಾವಲಿನಂತೆ ಕುಮಾರಣ್ಣ ಸುಳಿದಾಡುತ್ತಿದ್ದರು, ಆದ್ದರಿಂದ ಒಬ್ಬ ಮಾಜಿ ಮುಖ್ಯಮಂತ್ರಿ ಮಗನ ದೂರನ್ನು ಅಷ್ಟು ಸುಲಭವಾಗಿ ತೆಗೆದುಹಾಕಲಾಗುವುದಿಲ್ಲ. ಅವರ ಅನುಭವದ ಮಾತನ್ನು ಅಲ್ಲಗಳೆಯಲಾಗುವುದಿಲ್ಲ ಅದರಲ್ಲೂ ಕುಮಾರಣ್ಣ ತಮ್ಮ ಹುಡುಗರನ್ನು ಸಿದ್ದರಾಮಯ್ಯನವರ ಸುತ್ತ ಬಿಟ್ಟಿದ್ದಾರೆ. ಸದ್ಯಕ್ಕೆ ಆಡಳಿತಾತ್ಮಕವಾದ ದೂರು ಟೀಕೆಗಳಿಗಿಂತ ಕುಮಾರಣ್ಣ ಇಂತಹವುಗಳನ್ನ ಹುಡುಕಿ ಕಡ್ಡಿಗೀರುವುದರಿಂದ ತಾವೆಲ್ಲಾ ಹುಷಾರಾಗಿರಬೇಕೆಂದು ಕಾಂಗೈ ಶಾಸಕರು ಚರ್ಚಿಸಿದರಂತಲ್ಲಾ, ಥೂತ್ತೇರಿ.

*****

ಕರ್ನಾಟಕದ ವಿಧಾನಸೌಧದ ಚರಿತ್ರೆಯಲ್ಲಿ ವಿರೋಧಪಕ್ಷದ ನಾಯಕನಿಲ್ಲದೆ ಸದನ ಆರಂಭಗೊಂಡು ರಾಜ್ಯಪಾಲರು ಭಾಷಣ ಮಾಡಿದ್ದು, ಸದನ ನಡೆದದ್ದು ಇದೇ ಮೊದಲಿರಬೇಕು. ಸಂವಿಧಾನ ವಿರೋಧಿಗಳಾದವರಿಗೆ ಇದೇನು ಅವಮಾನದ ಪ್ರಸಂಗವಲ್ಲ. ಹಾಗೆ ನೋಡಿದರೆ ಬಿಜೆಪಿಗಳ ಪರಿವಾರಕ್ಕೆ ಅವಮಾನವೇ ಆಗುವುದಿಲ್ಲ; ಬೇಕಾದರೆ ಕೇಳಿ ನೋಡಿ. ಇನ್ನು ಈ ಕುರಿತು ಮಾಧ್ಯಮದ ಮಂದಮತಿಗಳು ಹೇಗಿದ್ದಾರೆಂದರೆ, ಅವರಿಗೂ ಅದೊಂದು ಸುದ್ದಿಯಲ್ಲ. ಸಿದ್ದಾರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವೆ ಮುಖ್ಯಮಂತ್ರಿ ಆಯ್ಕೆ ಸಮಯದಲ್ಲಿ ಜಟಾಪಟಿ ಇದ್ದಾಗ, ಕಡ್ಡಿ ರಂಗ ಹನುಮ ಜೊಷಿ ಪಾಸಿಗಳು ಟಿ.ವಿಯೊಳಗಿಂದ ಈಚೆಗೆ ನೆಗೆಯುವಂತಾಡಿದರು. ಇದೇ ಜನ ಎಡೂರಪ್ಪ ಸಂಪುಟ ರಚಿಸದೆ ಪ್ರವಾಹದ ಜಾಗಕ್ಕೆ ಒಬ್ಬರೇ ಹೋದಾಗ ಕಡುಬು ತುಂಬಿದ ಬಾಯಿ ಮಾಡಿಕೊಂಡಿದ್ದರು. ಇದಕ್ಕಿಂತ ಮುಖ್ಯವಾಗಿ ಆಕಸ್ಮಾತ್ ರೈತನಿಗೆ ಲಾಟರಿ ಹೊಡೆದಂತೆ ಟೊಮೊಟೊ ಕೆ.ಜಿ.ಗೆ ನೂರು ರೂಪಾಯಿ ಏರಿದ ಕೂಡಲೇ ರಕ್ತಕಾರುವುದಕ್ಕೆ ಶುರುಮಾಡಿದರು. ಆದರೆ ಇವರ ಕಣ್ಣೆದುರಿಗೆ ಡೀಸೆಲ್ ಪೆಟ್ರೋಲ್ ಬೆಲೆ ವಿಷದಂತೆ ಏರಿದ್ದು ಇವರಿಗೆ ದೊಡ್ಡ ಸುದ್ದಿಯೇ ಆಗಲಿಲ್ಲವಲ್ಲಾ. ಅಷ್ಟಕ್ಕೂ ಈ ಚಾನಲ್‌ಗಳು ಮನೆಯ ಹಟ್ಟಿ ಬಾಗಿಲಲ್ಲಿ ಕುಳಿತು ವದರುವ ವ್ಯಕ್ತಿಯಂತಾಗಿರುವುದು ಹಳೆಯ ಸುದ್ದಿಯಂತಲ್ಲಾ, ಥೂತ್ತೇರಿ.

*****

ಕೆ.ಎಸ್.ಆರ್.ಟಿ.ಸಿ ಆದಾಯ ಏರಿಕೆಯಾಗಿದೆ. ಮಹಿಳಾ ಪ್ರಯಾಣಿಕರ ಹಣವನ್ನು ತುಂಬಿಕೊಟ್ಟಿರುವ ಸರಕಾರದ ಬಗ್ಗೆ ಇಲಾಖೆ ಸಂತಸ ವ್ಯಕ್ತಪಡಿಸಿದೆ. ತಮ್ಮ ಜೀವಮಾನವಿಡೀ ಎಲ್ಲೂ ಹೋಗದೆ ಅಡುಗೆ ಮನೆ, ಕೊಟ್ಟಿಗೆ ಮತ್ತು ಹೊಲ, ತೋಟದ ದಾರಿ ಸವೆಸಿದ್ದ ಮಹಿಳೆಯರು ಮೊದಲಬಾರಿಗೆ ಕಳಸ, ಹೊರನಾಡು, ಸುಬ್ರಹ್ಮಣ್ಯ, ಧರ್ಮಸ್ಥಳ, ಮುರುಡೇಶ್ವರ, ಮಹದೇಶ್ವರಕ್ಕೆ ದಾಳಿಯಿಡುತ್ತಿದ್ದಾರೆ. ಸರಕಾರದ ಕಡೆಯಿಂದ ಅವರ ಕಡೆಗೆ ಒಳ್ಳೆ ಗಾಳಿ ಬೀಸಿದ್ದರಿಂದ ಕೆಲವರಿಗೆ ಸಹಜವಾಗಿ ಹೊಟ್ಟೆಗೆ ಸುಣ್ಣ ಹುಯ್ದಂತಾಗಿದೆ. ಮಹಿಳೆಗೆ ಸಿಗುವ ಒಂದು ಸಣ್ಣ ಸ್ವಾತಂತ್ರ್ಯ ಮತ್ತು ಸವಲತ್ತಿಗೆ ಕಂಗಾಲಾಗುವ ಕೆಲ ಪುರುಷ ಮೃಗಗಳು ಮಹಿಳೆಯರು ಬಸ್ಸತ್ತುವುದನ್ನು ಹತ್ತಲು ಹೋಗಿ ಬಾಗಿಲನ್ನೇ ಮುರಿದುದನ್ನು ದಿನವಿಡೀ ತೋರಿಸುತ್ತಿವೆ ಈ ಮಾಧ್ಯಮಗಳು. ಇತ್ತ ಕೆಲವು ಕಮಲ ಪಾರ್ಟಿಯರು ಹೆಂಗಳೆಯರನ್ನು ಹೀಗಳೆಯುತ್ತಿದ್ದಾರೆ. ಇಂತಹ ಮಹಿಳೆಯರು ಬಸ್ಸು ಹತ್ತಿದ ಕೂಡಲೆ ಟಿಕೆಟ್ ತೆಗೆದುಕೊಂಡರೆ ಎಷ್ಟು ಚಂದ ಅಲ್ಲವೆ ಎಂದು ತಮ್ಮ ಬಸ್ಸಿನಲ್ಲಿ ಫ್ರೀಯಾಗಿ ಓಡಾಡುವ ಮಹಿಳೆಯರು ಉತ್ತರವಾಗಿದೆಯಲ್ಲಾ, ಥೂತ್ತೇರಿ.

*****

ಇದನ್ನೂ ಓದಿ: ತುರ್ತುಪರಿಸ್ಥಿತಿಯ ಗರ್ಭದಲ್ಲೇ ಕಮಲ ಅರಳಿತಂತಲ್ಲಾ!

 

ಆಳುವ ಸರಕಾರವನ್ನು ಟೀಕಿಸುವುದು ವಿರೋಧ ಪಕ್ಷದ ಕೆಲಸ. ವಿರೋಧಿಗಳ ಮಾತುಗಳನ್ನ ಕೇಳಿಸಿಕೊಳ್ಳಬೇಕಾದರೆ ಅವರು ಘನತೆಯಿಂದಲೇ ಆರೋಪಿಸಬೇಕು. ಆದರೀಗ ವಿರೋಧಿಗಳು ಆಡುವ ಮಾತಿಗೆ ಜನಗಳು ಕನಿಕರದಿಂದ ಲೊಚಗರಿಯುತ್ತಿದ್ದಾರಲ್ಲಾ. ಉದಾಹರಣೆಗೆ ಅಕ್ಕಿ ಕೊಡಿ ಇಲ್ಲ ಹಣ ಕೊಡಿ ಎಂದು ಕೂಗುತ್ತಿದ್ದ ಬಿಜೆಪಿಗಳ ಬಾಯಿ ಬಂದ್ ಆಗುವಂತೆ ಸರಕಾರ ಐದು ಕೆ.ಜಿ ಬದಲು ಹಣಕೊಡಲು ಹೊರಟಿದೆ. ತಮ್ಮ ಮಾತು ತಮಗೇ ತಿರುಗುಬಾಣವಾದುದರಿಂದ ಗಲಿಬಿಲಿಯಾದ ಬಿಜೆಪಿಗಳು, ಮತ್ತೆ ಹಣ ಬೇಡ ಅಕ್ಕಿ ಕೊಡಿ ಎನ್ನುತ್ತಿವೆ. ಇವರ ಮಾತಿಗೆ ದನಿಗೂಡಿಸಿದ ಮತ್ತು ಒಂದು ಹೆಜ್ಜೆ ಮುಂದೆ ಹೋಗಿ, ಹಣ ಕೊಟ್ಟರೆ ಜನ ಕುಡಿದು ಇಸ್ಪೀಟ್ ಆಡುತ್ತಾರೆ ಎಂದುಬಿಟ್ಟಿದ್ದಾರಂತಲ್ಲಾ ಬಿಜೆಪಿ ಜತೆಗೆ ಮೈತ್ರಿಗೆ ಹವಣಿಸುತ್ತಿರುವ ಮುಖಂಡರು. ಇದಕ್ಕೆ ಕಾಂಗೈಗಳ ಕುಹಕವೇನೆಂದರೆ ಕುಮಾರಣ್ಣನ ಕಡೆಯ ಸೈನ್ಯದಲ್ಲಿ ಎಪ್ಪತ್ತು ಭಾಗ ಕುಡಿದು ಇಸ್ಪೀಟ್ ಆಡುವಂತವರೆ; ಬೇಕಿದ್ದರೆ ಚನ್ನಪಟ್ಟಣ ರಾಮನಗರದ ಕಡೆ ಹೋದರೆ ಗೊತ್ತಾಗುತ್ತದೆ; ತಮ್ಮವರು ಕುಡಿದು ಕಾರ್ಡ್ ಆಡಿಕೊಂಡು ಹಾಳಾಗುವುದನ್ನು ನೋಡಲಾಗುವುದಲ್ಲ, ಅದಕ್ಕೆ ಅವರು ಹಣ ಬೇಡ ಎನ್ನುತ್ತಿದ್ದಾರೆ. ಇದು ಒಂದೆಡೆಯಾದರೆ ಅವರ ಮಗ ನಿಖಿಲ್ ಮಂಡ್ಯದಲ್ಲಿ ಸಂಯುಕ್ತ ಆಭ್ಯರ್ಥಿಯಾಗಿ ಲೋಕಸಭಾ ಚುನಾವಣೆಯಲ್ಲಿ ಸೋತು, ತಮ್ಮದೇ ಪಕ್ಷದ ಅಭ್ಯರ್ಥಿಯಾಗಿ ವಿಧಾನಸಭೆಯ ಚುನಾವಣೆಯಲ್ಲಿ ರಾಮನಗರದಲ್ಲೂ ಸೋತರು. ಮುಂದೆ ಆತನ ಭವಿಷ್ಯ ಇರುವುದು ಕಾಂಗ್ರೆಸ್‌ನಲ್ಲಿ ಮಾತ್ರ ಎಂದು ರಾಮನಗರದ ಜೆ.ಡಿ.ಎಸ್‌ನ ನಿಷ್ಠಾವಂತ ಜನ ಮಾತನಾಡುತ್ತಿದ್ದಾರಂತಲ್ಲಾ, ಥೂತ್ತೇರಿ.

*****

ಫ್ರಾನ್ಸ್ ಹತ್ತಿ ಉರಿಯುತ್ತಿದೆ. ಪೊಲೀಸರು ಹುಡುಗನೊಬ್ಬನನ್ನು ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಾಂಗಿಯ ಗಲಭೆ ಸ್ಫೋಟಗೊಂಡು ಇಡೀ ದೇಶವೇ ಹತ್ತಿ ಉರಿದ ಉದಾಹರಣೆಯಿಲ್ಲ. ಇಂತಹ ಸ್ಫೋಟ ಸಂಭವಿಸಬೇಕಾದರೆ, ಹಲವು ಕಿಡಿಗಳು ಸೇರಿ ಸಿಡಿಮದ್ದಾಗಿರಬೇಕು. ಸಿಡಿಯಲು ಒಂದು ಕಾರಣ ಬೇಕಾಗಿತ್ತಷ್ಟೆ. ಜಗತ್ತಿನ ರಾಷ್ಟ್ರಗಳು ಎಚ್ಚೆತ್ತುಕೊಳ್ಳಬೇಕಾದ ಘಟನೆಯಿದು. ಹಾಗೆ ನೋಡಿದರೆ ಆ ದೇಶದ ಅಧ್ಯಕ್ಷ ಯಾಕೋ ನಮ್ಮ ಪ್ರಧಾನಿಯವರಂತೆ ಗೋಚರಿಸುತ್ತಿದ್ದಾನೆ. ಬೆಂಕಿ ಕಿಡಿಯನ್ನು ಆರಂಭದಲ್ಲೇ ಆರಿಸುವುದನ್ನು ಬಿಟ್ಟು ಮಹಡಿಮೇಲೆ ನಿಂತು ನೋಡುತ್ತಿರುವಂತೆ ಕಾಣುತ್ತಿದ್ದಾನೆ. ನಮ್ಮಲ್ಲೂ ಅಷ್ಟೇ ಅಲ್ಲವೆ? ನಮ್ಮ ಮಣಿಪುರ ಹೊತ್ತಿ ಉರಿಯುತ್ತಿದೆ. ಪ್ರಧಾನಿ ಆ ಬಗ್ಗೆ ಈವರೆಗೂ ಸಕಾರಾತ್ಮಕ ಕ್ರಮಕ್ಕೆ ಮುಂದಾಗಿಲ್ಲ. ಈ ವಿಷಯವಾಗಿ ನಮ್ಮ ಕಿಡಿಗೇಡಿ ಮನಸ್ಸು ಏನು ಹೇಳುತ್ತಿದೆಯೆಂದರೆ ಮೋದಿ ಗುಜರಾತ್ ಮುಖ್ಯಮಂತ್ರಿಯಾಗಿದ್ದವರು. ಪ್ರಧಾನಿಯಾದ ಅವರಿಗೆ ಭಾರತದ ಎಲ್ಲ ರಾಜ್ಯಗಳು ಗುಜರಾತಿನಂತೆಯೆ. ನಾನೀಗ ರಾಜ್ಯದ ಮುಖ್ಯಮಂತ್ರಿಯಲ್ಲ, ದೇಶದ ಪ್ರಧಾನಿ ಎಂಬ ಭಾವ ಬಂದಿದ್ದರೆ, ವಿದೇಶಕ್ಕೆ ಹೋಗಿ ಯೋಗ ಮಾಡುವುದರ ಬದಲು ಮಣಿಪುರಕ್ಕೆ ಹೋಗಿ ಜನರ ಮನಗೆಲ್ಲುತ್ತಿದ್ದರಂತಲ್ಲಾ, ಥೂತ್ತೇರಿ.

*****

ಎಲ್ಲಿ ಗಲಭೆಯಾಗುತ್ತದೋ ಅಲ್ಲಿ ಜನರನ್ನು ಸಂತೈಸಲು ಕಾಣಿಸಿಕೊಳ್ಳುವಂತಹ ರಾಹುಲ್ ಗಾಂಧಿ ಮಣಿಪುರಕ್ಕೆ ಹೋದರಂತಲ್ಲಾ. ಮಣಿಪುರದ ಹೆಸರು ನಮ್ಮ ಕರ್ನಾಟಕಕ್ಕೂ ಪರಿಚಿತ. ಡಾ.ರಾಜಕುಮಾರ್ ನಟಿಸಿದ ಬಬ್ರುವಾಹನ ಚಿತ್ರದಲ್ಲಿ, ತನ್ನ ತಂದೆಯಾದ ಅರ್ಜುನನನ್ನು ಕಾಣಲು ಬಂದ ಬಬ್ರುವಾಹನನನ್ನ ಕುರಿತು ಅಣ್ಣನವರು, ’ನೀನೆಯೋ ಮಣಿಪುರದ ಅರಸು ವೀರ ಬಬ್ರುವಾಹನ? ಅಂತಹ ಹೆಸರಿನ ಮಕ್ಕಳು ನನಗಿಲ್ಲ. ಹೋಗಿ ನಿಮ್ಮಮ್ಮನನ್ನು ಕೇಳು, ನನಗೆ ಜನ್ಮ ಕೊಟ್ಟ ತಂದೆ ಯಾರು ಅಂತ’ ಎಂದು ಮೂದಲಿಸುತ್ತಾರೆ. ಹಾಗಾಗಿ ಕರ್ನಾಟಕಕ್ಕೆ ಮಣಿಪುರ ಹೀಗೆ ಪರಿಚಯ, ಉಲೂಚಿ ಚಿತ್ರಾಂಗದೆಯರೂ ಪರಿಚಯ. ಈಗಲೂ ಮಣಿಪುರದಲ್ಲಿ ಸ್ತ್ರೀ ಶಕ್ತಿಯೇ ಮುಂದೆ; ಯಾರೋ ಮೂರ್ಖ, ಅರ್ಜುನ ಮತ್ತು ನಮ್ಮ ಮೋದಿಯವರನ್ನು ಹೋಲಿಕೆ ಮಾಡಿ ವಾಟ್ಸಾಪ್ ಮಾಡಿದ್ದಾನೆ. ಏನಾದರಾಗಲಿ, ಅರ್ಜುನ ತನ್ನ ಮಗನ ಬಗ್ಗೆಯೇ ಸಂಶಯಿಸಿದಂತೆ, ಮಣಿಪುರ ನಮ್ಮ ದೇಶದ ರಾಜ್ಯವೋ ಅಲ್ಲವೋ ಎಂದು ಸಂಶಯಿಸುವ ಹಾಗೆ ಪ್ರಧಾನಿ ನಡೆದುಕೊಂಡಿರುವುದು ಇಡೀ ದೇಶವೇ ಮುಜುಗರ ಪಡುವ ಸಂಗತಿಯಂತಲ್ಲಾ, ಥೂತ್ತೇರಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...