Homeಅಂಕಣಗಳುರಾಮ ಕೃಷ್ಣ ಕಪ್ಪುಗಿದ್ರಲ್ಲವ..

ರಾಮ ಕೃಷ್ಣ ಕಪ್ಪುಗಿದ್ರಲ್ಲವ..

- Advertisement -
- Advertisement -

ಸಿಂಗಾಪುರದ ಮುಖಾಂತರ ಯೂರೋಪ್ ಪ್ರವಾಸ ಮುಗಿಸಿ ಕರ್ನಾಟಕಕ್ಕೆ ಬಂದ ಕುಮಾರಣ್ಣ ವಿಮಾನದಿಂದ ಇಳಿಯುವ ಕೊನೆ ಮೆಟ್ಟಿಲಲ್ಲೇ ಕರ್ನಾಟಕ ಸರ್ಕಾರದ ವರ್ಗಾವಣೆಯಲ್ಲಿ ಒಂದು ಸಾವಿರ ಕೋಟಿ ವ್ಯವಹಾರ ನಡೆದಿದೆ ಎಂದಿದ್ದಾರಲ್ಲಾ. ಸಿಂಗಾಪುರದಲ್ಲಿದ್ದ ಕುಮಾರಣ್ಣನಿಗೆ ಈ ಕಾಂಗ್ರೆಸ್ ಸರಕಾರದ ವರ್ಗಾವರ್ಗಿ ವಿವರ ಹೇಗೆ ಗೊತ್ತಾಯಿತು? ಕುಮಾರಣ್ಣನ ಕಡೆಯ ಅಧಿಕಾರಿಗಳು ಮತ್ತು ಅಭಿಮಾನಿಗಳು ಇನ್ನೆಂತಹ ಜಾಲ ಹೆಣೆದಿರಬಹುದು? ಜೊತೆಗೆ ಪೆನ್‌ಡ್ರೈವ್ ಬೇರೆ ಕೆಲಸ ಮಾಡುತ್ತಿದೆ. ಹೇಗಾದರಾಗಲಿ ಹುಷಾರಾಗಿರಬೇಕು ಎಂದು ಸಿದ್ದು ಸಂಪುಟದ ಸಚಿವರು ಚಿಂತಿಸುತ್ತಿರುವಾಗಲೇ, ಮಂತ್ರಿಗಳಲ್ಲಿ ಕೆಲವು ಚಾಲಾಕಿಗಳು ಕುಮಾರಣ್ಣ ಎರಡು ಬಾರಿ ಮುಖ್ಯಮಂತ್ರಿಯಾಗಿ ವರ್ಗಾವರ್ಗಿಯ ದಂಧೆ ಗ್ರಹಿಸಿದವರು, ಅಲ್ಲದೆ ಅಧಿಕಾರಕ್ಕೆ ಬಂದ ಆರಂಭದಲ್ಲೇ ಜನಾರ್ದನ ರೆಡ್ಡಿಯಿಂದ ವಸೂಲಿ ಮಾಡಿ ಅರಗಿಸಿಕೊಂಡವರು; ಈ ಅಂದಾಜಿನಲ್ಲೇ ಅವರು ಈ ಸರಕಾರದ ವಿರುದ್ಧ ಒಂದು ಸಾವಿರ ಕೋಟಿ ವ್ಯವಹಾರದ ದೂರನ್ನ ಮಾಡಿದ್ದಾರೆ. ಈ ವಿಷಯದಲ್ಲಿ ಅವರನ್ನ ಹಿಟ್ ಅಂಡ್ ರನ್ ಕೇಸಿಗೆ ಸೇರಿಸಿ ಮಾತನಾಡುವುದಕ್ಕಿಂತ ಕುಮಾರಣ್ಣನ ಅಂದಾಜಿಗೆ ಸಿಗದಂತೆ ವ್ಯವಹಾರ ಮಾಡಬೇಕಿದೆ. ಏಕೆಂದರೆ ಕಳೆದ ಚುನಾವಣೆಯಲ್ಲಿ ಮಾಡಿದ ಸಾಲ ಹಾಗೇ ಇದೆ ಎಂದು ಮಾತನಾಡಿಕೊಂಡರಂತಲ್ಲಾ, ಥೂತ್ತೇರಿ.

*****

ಕರ್ನಾಟಕ ಈವರೆಗೆ ಕಂಡ ಅತ್ಯಂತ ದುರ್ಬಲ ಗೃಹ ಸಚಿವರಾಗಿದ್ದ ಅರಗ ಜ್ಞಾನೇಂದ್ರ ಆಡಿರುವ ಮಾತೊಂದು ಇಡೀ ಕರ್ನಾಟಕದಲ್ಲೇ ಅಲ್ಲೊಲಕಲ್ಲೋಲವುಂಟುಮಾಡಿದೆಯಲ್ಲಾ. ಆರೆಸ್ಸ್ಸೆನ ಕಟ್ಟಾಳು ಮತ್ತು ಎಬಿವಿಪಿಯ ’ಧೀಮಂತ’ ವಿದ್ಯಾರ್ಥಿ, ಬಿಜೆಪಿಯ ’ಧೀಮಂತ’ ನಾಯಕನಾಗಿ ಬೆಳೆದು ಕಡಿದಾಳು ಮಂಜಪ್ಪ, ಶಾಂತವೇರಿ ಗೋಪಾಲಗೌಡರು ಮತ್ತು ಕಿಮ್ಮನೆ ರತ್ನಾಕರ್ ಪ್ರತಿನಿಧಿಸಿದ ತೀರ್ಥಹಳ್ಳಿಯಿಂದ ಗೆದ್ದುಬಂದು ಗೃಹ ಸಚಿವರೂ ಆಗಿದ್ದ ಜ್ಞಾನೇಂದ್ರ ಅರೆಗ್ನಾನಿಯಾಗಿ ಬದಲಾದದ್ದು ಯಾವಾಗ ಎಂದು ಯೋಚಿಸಿ ಪೋನ್ ಮಾಡಲಾಗಿ ರಿಂಗಾಯ್ತು

ರಿಂಗ್ ಟೋನ್, “ನಮಸ್ತೆ ಸಧಾವತ್ಸಲೇ ಮಾತೃಭೂಮಿ…”

“ಹಲೋ ಯಾರು?”

“ನಾನು ಸಾರ್ ನಿಮ್ಮ ಅಭಿಮಾನಿ.”

“ಅಭಿಮಾನಿ ಯಾರ್ರಿ?”

“ಅದು ಈ ಕ್ಷಣದ ಅಭಿಮಾನಿ ಸಾ. ಖರ್ಗೆಗೆ ಸರಿಯಾಗೇಳಿದ್ದಿರಿ ಬುಡಿ ಸಾ.”

“ನಾನೇನು ಹೇಳಿಲ್ಲ ಕಂಡ್ರಿ. ನನಿಗಾಗದವರು ಸುಳ್ಳು ಹೇಳ್ತ ಅವುರೆ. ಮಾಧ್ಯಮದವರು ಅದನ್ನೆ ನಂಬಿದಾರೆ.”

“ಅದೇನಾರ ಆಗ್ಲಿ, ಖರ್ಗೆ ಬಣ್ಣದ ಬಗ್ಗೆ ಹೇಳಿ, ನೋಡಿ ಸೀದು ಕರುಕಲಾಗ್ಯವುರೆ ಅಂದಿರದು ಸರಿ ಸಾ.”

“ರೀ ನಾನು ಅಂಗಂದೇಯಿಲ್ಲ ಕಂಡ್ರಿ.”

“ಅಂಗನ್ನಬಾರ್ದು ಸಾರ್. ಜಮೀರಹಮದ್ ತರ ಸಮರ್ಥಿಸಿಕೋಬೇಕು.”

“ಅವುರು ಏನನ್ನು ಸಮರ್ಥಿಸಿಕೊಂಡ್ರು ರೀ?”

“ಕುಮಾರಸ್ವಾಮಿ ಬಣ್ಣದ ಬಗ್ಗೆ ಆಡಿಕೊಳ್ಳುವಾಗ, ನಾನು ಕುಳ್ಳ ಎಂದು ಹೇಳ್ಕಂಡವರೆ.”

“ಅವುರ್‍ಯಾಕಂಗಂದರು?”

“ಕೆಲವರನ್ನ ಆಡಿಕೊಬೇಕಾದ್ರೆ ಕೆಲವು ಸಾರಿ ನಮ್ಮನ್ನ ಅಣಕಿಸಿಕೊಬೇಕಾಗತ್ತೆ, ಅದ್ಕೆ ಜಮೀರು ನಾನು ಕುಳ್ಳ ಸತ್ಯ ಅಲ್ಲವ ಅಂದು ಕುಮಾರಸ್ವಾಮಿ ಬಗ್ಗೆ ಹೇಳಿದ್ದು ನಿಜ ಅಲ್ಲವಾ” ಅಂದವರೆ ಸಾರ್.

“ಅವುರನಾರ ಅನ್ಲಿ, ನಾನು ಅನ್ನದೇಯಿರೊ ಮಾತನ್ನ ತಗೊಂಡು ರಾಜಕೀಯ ಮಾಡಿದಾರಲ್ರೀ.”

“ಹಂಗಿದ್ರೆ ನೀವು ಹಿಂಗೆ ಮಾಡಬಹುದು, ಅದು ನನ್ನ ಮಾತಲ್ಲ. ಮಿಮಿಕ್ರಿ ದಯಾನಂದರನ್ನ ಹಿಡಿದು ನನ್ನಂಗೆ ಮಾತಾಡ್ಸಿದಾರೆ. ನಾನು ಖರ್ಗೆ ಅಭಿಮಾನಿ ಅವರ ಕಾಲಿನ ಧೂಳಿಗೂ ಸಮ ಅಲ್ಲ. ಅಂತ ಪ್ರೆಸ್ ಸ್ಟೇಟುಮಂಟು ಕೊಡಿ ಸಾರ್.”

“ಈಗಾಗ್ಲೆ ಕೊಟ್ಟಿದ್ದಿನಿ ಕಂಡ್ರಿ.”

“ಅದರಲ್ಲೇ ಸಿಗಾಯ್ಕಂಡಿದ್ದಿರಲ್ಲ ಸಾರ್?”

“ಎಲ್ಲಿ ಸಿಗಾಯ್ಕಂಡಿದ್ದಿನ್ರಿ?”

“ಖರ್ಗೆಯವರನ್ನ ಟೀಕೀಸಿದ್ರೆ ನಾನು ಯಾವ ಶಿಕ್ಷೆ ಬೇಕಾದ್ರು ಅನುಭವುಸ್ತಿನಿ ಅಂದಿದ್ದಿರಿ.”

“ಸರಿ ಅಂದಿಲವಲ್ಲಾ…”

“ಅಂದಿರದ ಸಾಬೀತು ಮಾಡಿಕಂಡಿದ್ದಿರಿ.”

“ಹೇಗೆ ಅಂತ?”

“ನೀವು ಯಾವ ಮಾತನ್ನ ಆಡದೆ ಖರ್ಗೆ ಹೆಸರು ಹೆಂಗೆ ಬಂತು. ಇದ್ದಕ್ಕಿದ್ದಂಗೆ ಅವರನ್ನ ಹೊಗಳೊ ಕಾರಣ ಏನು? ವೈಯಕ್ತಕವಾಗಿ ನಿಂದಿಸಿ ಕೀಳುಮಟ್ಟದ ರಾಜಕಾರಣ ಮಾಡಲ್ಲ ಅಂದು ಅದ್ನೇ ಮಾಡಿದ್ದಿರಲ್ಲಾ ಸಾರ್. ಮನುಷ್ಯನ ಬಣ್ಣ ಆಕಾರ ಆಡಿಕಳದು ಅಪರಾಧ, ಅವನ್ನ ನೀವು ಮಾಡಬಾರದಿತ್ತು.”

“ಖಂಡಿತ ಮಾಡಿಲ್ಲ ಕಂಡ್ರಿ ನನ್ನ ಬಾಯಲ್ಲಿ ಆ ಮಾತೇ ಬರಲಿಲ್ಲಾ.”

“ಸರಿ, ಮಾಧ್ಯಮದ ಎದುರಿನ ಮೈಕಿನಲ್ಲಿ ಈ ಶಬ್ದ ಬಂತು, ನಿಮ್ಮ ತುಟಿ ಕೂಡ ಚಲಿಸಿವೆ ಸಾರ್.”

“ಅದೇ ಹೇಳಿದೆನಲ್ಲಾ, ನೀವೆ ಹೇಳಿದಂಗೆ ಮಿಮಿಕ್ರಿ ಕಲಾವಿದರ ಬಳಸಿ ಏನು ಬೇಕಾದ್ರು ಮಾಡಬಹುದು.”

“ಅದನ್ನ ಕೋರ್ಟಲ್ಲಿ ಸಾಬೀತು ಮಾಡ್ಸಿ. ಸಾರ್ ಹ್ಯಾಗಿದ್ರು ಬಿಜೆಪಿಗಳಿಗೆ ಕೋರ್ಟ್ ಅಂದ್ರೆ ತುಂಬಾ ಇಷ್ಟ. ನೀವು ಕೋರ್ಟಲ್ಲಿ ನಿಮ್ಮನ್ನ ಸಮರ್ಥಿಸಿಕೊಳ್ಳಬಹುದು; ರಾಹುಲಗಾಂಧಿ ನೋಡಿ, ತಪ್ಪು ಮಾಡಿಲ್ಲ, ತಪ್ಪು ಅಂತ ಒಪ್ಪಿಗಳಲ್ಲ ಅಂದ್ರು. ಅವರ ಪ್ರಾಮಾಣಿಕ ಮಾತಿಗೆ ಕೋರ್ಟ್ ಮನ್ನಣೆ ಕೊಟ್ಟು ಅವರ ಶಿಕ್ಷೆಗೆ ಸ್ಟೇ ತಂತು ಅಲ್ಲವ?”

“ಈಗ ನಾನೇನು ಮಾಡ್ಲಿ?”

“ಏನಿಲ್ಲ ಖರ್ಗೆಯವರ ಬಣ್ಣದ ಬಗ್ಗೆ ಮಾತಾಡಿದ್ದೀನಿ. ಯಾಕಂದ್ರೆ, ನಮ್ಮ ಶ್ರೀರಾಮಚಂದ್ರ ಕಪ್ಪಗಿದ್ದ, ಹನ್ನೆರಡು ವರ್ಷ ಅರಣ್ಯದಲ್ಲಿ ಅಲದೂ ಕಾಯಿ ಕುಸುರು ತಿಂದು ಕರಕಲಾಗಿದ್ದ. ನಮ್ಮ ಖರ್ಗೆ ಸಾಹೇಬರಿಗೆ ಕಚ್ಛೆ ಹಾಕಿ ಕೈಗೆ ಬಿಲ್ಲು ಬಾಣ ಕೊಟ್ರೆ ಥೇಟ್ ಶ್ರೀರಾಮಚಂದ್ರನಂಗೇ ಕಾಣ್ತಾರೆ. ಆ ವೇಶದಲ್ಲಿ ಅವರ ಕಾಲಿಗೆ ಬೀಳಂಗಾಗತ್ತೆ; ಇನ್ನ ನಮ್ಮ ಕೃಷ್ಣನೂ ಕಪ್ಪಗಿದ್ದ. ಇವರಿಬ್ಬರು ನಮ್ಮ ಬಿಜೆಪಿ ಪಾರ್ಟಿಗೆ ಎರಡು ಚಕ್ರ ಇದ್ದಂಗೆ; ಅದರಲ್ಲೂ ಕೃಷ್ಣ ದನ ಕಾಯ್ತಾ ಕಾಯ್ತ ಕಪ್ಪಗೆ ಕರಕಲಾಗಿದ್ದ. ನಮ್ಮ ಪುರೋಹಿತಶಾಹಿಗಳು ಕಪ್ಪು ಬಣ್ಣನ ಒಪ್ಪದೇಯಿರದ್ರಿಂದ ಅವುರಿಬ್ಬರಿಗೂ ನಾಟಕದಲ್ಲಿ ಮತ್ತು ಸಿನಿಮಾದಲ್ಲಿ ನೀಲಿಬಣ್ಣ ಬಳಿತರೆ. ಈ ಭೂಮಿ ಮೇಲೆ ಯಾರಾದ್ರು ನೀಲಿ ಬಣ್ಣಕ್ಕಿದ್ದಾರ? ಆದ್ರಿಂದ ನಮ್ಮ ಪುರೋಹಿತಶಾಹಿಗಳು ಕಪ್ಪುಬಣ್ಣ ಒಪ್ಪದೆ ನೀಲಿ ಬಣ್ಣ ಬಳದು ನಾವೆಲ್ಲಾ ಕಪ್ಪುಬಣ್ಣ ದ್ವೇಷ ಮಾಡಂಗೆ ಮಾಡಿದಾರೆ. ಆ ಕಾರಣಕ್ಕೆ ನನ್ನ ಬಾಯಿ ತಪ್ಪಿ ಖಂಡ್ರೆ ಖರ್ಗೆ ಕುರಿತು ಮಾತನಾಡುವಾಗ, ಆ ಬಯಲುಸೀಮೆ, ಗುಲಬರ್ಗಾ, ರಾಯಚೂರು, ಬಳ್ಳಾರಿ ಕಡೆಯೆಲ್ಲ ಬಿಸಲಲ್ಲಿ ಬೆಂದು ಹ್ಯಂಗೆ ಕರಲಾಗ್ಯವುರೆ ನೋಡಿ ಅಂದೆ ಸಾ, ಅಂತ ಹೇಳಿ.”

“ನಿಮ್ಮ ಮಾತ ಕೇಳಿದ್ರೆ ಜೈಲಿಗೋಗಬೇಕಾಯ್ತದೆ.”

“ಮತ್ತೇನು ಮಾಡ್ತಿರಿ ಸಾರ್?”

“ನಾನು ಅಂದೇಯಿಲ್ಲ ಅಂತಿನಿ, ಮಾತು ನಂದಲ್ಲ ವಾಯ್ಸು ನಂದಲ್ಲ ಅಂತಿನಿ.”

“ಥೂತ್ತೇರಿ.”


ಇದನ್ನೂ ಓದಿ: ಕುಮಾರಣ್ಣ ಪೇಶ್ವೆಗಳೊಂದಿಗೆ ಹೋಗಲಿದ್ದಾರಂತಲ್ಲಾ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ನೀಟ್ ಪ್ರತಿಭಟನೆಯಲ್ಲಿ ಪೆಲೆಟ್ ಗನ್ ಬಳಕೆ ಆರೋಪ; RAF ಮದ್ದುಗುಂಡುಗಳ ದಾಖಲೆ ಕೇಳಿದ ಸುಪ್ರೀಂ ಕೋರ್ಟ್

ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ಜಂತರ್ ಮಂತರ್‌ನಲ್ಲಿ ನಿಯೋಜಿಸಲಾಗಿದ್ದ ಕ್ಷಿಪ್ರ ಕಾರ್ಯ ಪಡೆ (RAF) ಯ ಮದ್ದುಗುಂಡುಗಳ ದಾಖಲೆಯನ್ನು ಸಂರಕ್ಷಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ (ಜುಲೈ...

ಕ್ರಿಸ್ತನಿಗಿಂತ ಮೊದಲೇ ಇಲ್ಲಿದ್ದೇವೆ..ನಮಗೆ ಯಾವುದೇ ದಾಖಲೆಗಳು ಬೇಡ : ಎಸ್‌ಐಆರ್ ತಿರಸ್ಕರಿಸಿದ ಜಾರ್ಖಂಡ್‌ನ ಆದಿವಾಸಿಗಳು

ಜಾರ್ಖಂಡ್‌ನ ಖುಂತಿ ಜಿಲ್ಲೆಯ ದಟ್ಟ ಅರಣ್ಯ ಭಾಗದಲ್ಲಿ ವಾಸಿಸುವ ಮುಂಡಾ ಬುಡಕಟ್ಟು ಸಮುದಾಯದ ಒಂದು ವರ್ಗವು ಚುನಾವಣಾ ಆಯೋಗದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯನ್ನು ತೀವ್ರವಾಗಿ ವಿರೋಧಿಸಿದ್ದು, ಆಧುನಿಕ...

NICE ನಲ್ಲಿ ಯೋಜನೆಯಲ್ಲಿ ‘ನೈಸ್’ ಎನ್ನುವಂತಹದ್ದು ಏನೂ ಇಲ್ಲ: ರಾಜ್ಯದ ಅತಿದೊಡ್ಡ ಹಗರಣ ಎಂದ ಹೈಕೋರ್ಟ್

ಬೆಂಗಳೂರು-ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆ (ಬಿಎಂಐಸಿಪಿ) ಅಥವಾ 'ನೈಸ್' ಯೋಜನೆ ಕರ್ನಾಟಕದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಹಗರಣಗಳಲ್ಲಿ ಒಂದಾಗಿ ಕಾಣಿಸುತ್ತಿದೆ ಎಂದು ಕರ್ನಾಟಕ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್...

ಪ್ರತಿಭಟನೆಗೆ ಹೋಗುವ ಮಹಿಳೆಯರು ಗ್ಯಾಂಗ್‌ರೇಪ್‌ ಆನಂದಿಸುತ್ತಾರೆ ಎಂದಿದ್ದ ಟಿ.ಜಿ. ಮೋಹನ್‌ದಾಸ್‌ ವಿರುದ್ಧ ಎಫ್‌ಐಆರ್‌ ದಾಖಲು

ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವವರ ಮೇಲೆ, ನನ್ನ ಕೈಯಲ್ಲಿ ಅಧಿಕಾರವಿದ್ದರೆ ಗುಂಡು ಹಾರಿಸುತ್ತಿದ್ದೆ ಎಂದು ಇತ್ತೀಚಿನ ಯೂಟ್ಯೂಬ್ ವೀಡಿಯೊದಲ್ಲಿ ಹೇಳಿಕೆ ನೀಡಿದ್ದ ಹಿಂದುತ್ವವಾದಿ ಚಿಂತಕ ಟಿ.ಜಿ. ಮೋಹನ್‌ದಾಸ್ ವಿರುದ್ಧ ತಿರುವನಂತಪುರಂ ಸಿಟಿ...

ಫ್ರಾನ್ಸ್‌ನಲ್ಲಿ ಕೆಲಸದ ಸಮಯ ಟ್ರ್ಯಾಕಿಂಗ್ ಲೋಪ: ಇನ್ಫೋಸಿಸ್‌ಗೆ ₹1.9 ಕೋಟಿ ದಂಡ: ನಾರಾಯಣಮೂರ್ತಿಯವರ ‘70 ಗಂಟೆ ಶ್ರಮ’ದ ಮಾದರಿ ಟ್ರೋಲ್

ಭಾರತೀಯ ಐಟಿ ರಫ್ತು ಸೇವಾ ರಂಗದ ಬೃಹತ್ ಸಂಸ್ಥೆಯಾದ ಇನ್ಫೋಸಿಸ್‌ಗೆ ಫ್ರಾನ್ಸ್‌ನಲ್ಲಿ ಹಿನ್ನಡೆಯಾಗಿದೆ. ಉದ್ಯೋಗಿಗಳ ಕೆಲಸದ ಸಮಯವನ್ನು ದಾಖಲಿಸುವ ವ್ಯವಸ್ಥೆಯಲ್ಲಿನ ನ್ಯೂನತೆಗಳು ಹಾಗೂ ಸ್ಥಳೀಯ ಕಾರ್ಮಿಕ ನಿಯಮಾವಳಿಗಳ ಪಾಲನೆಯಲ್ಲಿ ಕಂಡುಬಂದ ಲೋಪಗಳ ಹಿನ್ನೆಲೆಯಲ್ಲಿ...

ವೋಟರ್ ಐಡಿ, ಬ್ಯಾಂಕ್ ಪಾಸ್‌ಬುಕ್, ಆಧಾರ್, ಜಮೀನಿನ ಹಕ್ಕು ಪತ್ರ ಇದ್ದ ಮಾತ್ರಕ್ಕೆ ಭಾರತೀಯ ಪ್ರಜೆಯಾಗಲ್ಲ: ಕಲ್ಕತ್ತಾ ಹೈಕೋರ್ಟ್

ಆಧಾರ್ ಕಾರ್ಡ್, ಪಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಬ್ಯಾಂಕ್ ಪಾಸ್‌ಬುಕ್ ಮತ್ತು ಪಿತ್ರಾರ್ಜಿತ ಜಮೀನಿನ ದಾಖಲೆಗಳು ಭಾರತೀಯ ಪೌರತ್ವವನ್ನು ನಿರೂಪಿಸಲು ಅಂತಿಮ ಅಥವಾ ನಿರ್ಣಾಯಕ ಪುರಾವೆಗಳಲ್ಲ ಎಂದು ಕಲ್ಕತ್ತಾ ಹೈಕೋರ್ಟ್ ಮಹತ್ವದ...

‘ನಿಮ್ಮ ಸಮಯ ಬಂದಿದೆ’: ಟೌನ್‌ಶಿಪ್ ಯೋಜನೆ ವಿರುದ್ಧದ ಪ್ರತಿಭಟನೆಗೆ 500 ದಿನ: ‘Gen-Z’ ಯುವಕರ ಬೆಂಬಲ ಕೋರಿದ ಬಿಡದಿ ರೈತರು

ಬೆಂಗಳೂರು: ಪ್ರಸ್ತಾವಿತ ಬಿಡದಿ ಟೌನ್‌ಶಿಪ್ ಯೋಜನೆ ವಿರುದ್ಧ ಕೃಷಿ ಭೂಮಿ ಉಳಿವಿಗಾಗಿ ನಡೆಯುತ್ತಿರುವ ರೈತರ ಸುದೀರ್ಘ ಹೋರಾಟವು ಇದೀಗ ಒಂದು ಪ್ರಮುಖ ಘಟ್ಟಕ್ಕೆ ಬಂದು ತಲುಪಿದೆ. ಭೂಸ್ವಾಧೀನದ ವಿರುದ್ಧ ಸತತವಾಗಿ ನಡೆಯುತ್ತಿರುವ ಈ...

ಕೊಡಗಿನ ಆದಿವಾಸಿ ಹಾಡಿಗಳಲ್ಲಿ ಎಸ್‌ಐಆರ್ ಅವ್ಯವಸ್ಥೆ : ಬಿಎಲ್‌ಒಗಳಿಗೆ ತರಬೇತಿಯ ಕೊರತೆ, ಇನ್ನೂ ತಲುಪದ ಗಣತಿ ಫಾರಂ

ಕರ್ನಾಟಕದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಬಹಳ ಯಶಸ್ವಿಯಾಗಿ ನಡೆಯುತ್ತಿದೆ, ಮತದಾರರಿಗೆ ಎಲ್ಲಾ ರೀತಿಯ ಸಹಾಯಗಳನ್ನು ಒದಗಿಸಲಾಗುತ್ತಿದೆ ಎಂದು ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಅನ್ಬುಕುಮಾರ್ ಅವರು ಪದೇ...

SIR: ಉಡುಪಿಯಲ್ಲಿ ಕರ್ತವ್ಯನಿರತ BLO ಮೇಲೆ ಹಲ್ಲೆಗೆತ್ನಿಸಿದ ಮಾಜಿ ಪಂಚಾಯತ್ ಅಧ್ಯಕ್ಷ, FIR ದಾಖಲು

ಚುನಾವಣಾ ಮತದಾರರ ಪಟ್ಟಿ ಪರಿಷ್ಕರಣೆ (SIR) ಕರ್ತವ್ಯದಲ್ಲಿದ್ದ ಅಂಗನವಾಡಿ ಕಾರ್ಯಕರ್ತೆ ಹಾಗೂ ಬಿಎಲ್‌ಒ (BLO) ಮಹಿಳೆ ಮೇಲೆ ಕರ್ತವ್ಯಕ್ಕೆ ಅಡ್ಡಿಪಡಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಹಾಕಿದ ಗಂಭೀರ ಆರೋಪ ಉಡುಪಿ...

ಕೋಟ್ಯಾಂತರ ವಿದ್ಯಾರ್ಥಿಗಳ ಭವಿಷ್ಯದ ಜೊತೆ NTA ಚೆಲ್ಲಾಟ: RTI ನಲ್ಲಿ ಬಯಲಾಯ್ತು NTA ಕರ್ಮಕಾಂಡ

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಎನ್ನುವ ಈ ಸರ್ಕಾರಿ ಸಂಸ್ಥೆಯ ಮೇಲೆ ಪ್ರತಿವರ್ಷ ಕೋಟ್ಯಂತರ ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಕನಸುಗಳನ್ನು ಇಟ್ಟುಕೊಳ್ಳುತ್ತಾರೆ. 2018ರಲ್ಲಿ ಸ್ಥಾಪನೆಯಾದ ದಿನದಿಂದ ಇಲ್ಲಿಯವರೆಗೆ ಎನ್‌ಟಿಎ ಸುಮಾರು 270ಕ್ಕೂ ಹೆಚ್ಚು...