Homeಕರ್ನಾಟಕದಲಿತ ಚಳವಳಿಯನ್ನು ಹೊಸ ತಲೆಮಾರು ಒಗ್ಗೂಡಿಸಬೇಕು: ಪ್ರೊ. ನಟರಾಜ್ ಹುಳಿಯಾರ್

ದಲಿತ ಚಳವಳಿಯನ್ನು ಹೊಸ ತಲೆಮಾರು ಒಗ್ಗೂಡಿಸಬೇಕು: ಪ್ರೊ. ನಟರಾಜ್ ಹುಳಿಯಾರ್

- Advertisement -
- Advertisement -

ರಾಜ್ಯದಲ್ಲಿ ಒಳ ಮೀಸಲಾತಿ ಜಾರಿ ಪ್ರಕ್ರಿಯೆ ಪ್ರಸ್ತುತ ಒಂದು ಹಂತಕ್ಕೆ ಬಂದಿದೆ; ಈ ವಿಷಯ ಪರಿಹಾರದ ಬಳಿಕ ಹೊಸ ತಲೆಮಾರು ದಲಿತ ಚಳುವಳಿಯನ್ನು ಒಗ್ಗೂಡಿಸುವ ಕೆಲಸ ಮಾಡಬೇಕು ಎಂದು ಪ್ರೊ. ನಟರಾಜ್ ಹುಳಿಯಾರ್ ಕರೆಕೊಟ್ಟರು.

ಬೆಂಗಳೂರು ನಗರ ವಿಶ್ವವಿದ್ಯಾಲಯದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಪ್ರೊ. ಬಿ.ಕೃಷ್ಣಪ್ಪ ಅವರ 88ನೇ ಜನ್ಮದಿನದ ಪ್ರಯುಕ್ತ ನಡೆದ ‘ನಾಗರಿಕ ಹಕ್ಕು ರಕ್ಷಣಾ ದಿನ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಕಾಲೇಜಿನ ಪ್ರಾಂಶುಪಾಲರಾಗಿದ್ದ ಪ್ರೊ. ಬಿ.ಕೃಷ್ಣಪ್ಪ ಅವರು ಟೀಚರ್ ಆಗಿ ಚಳವಳಿ ಹೇಗೆ ನಡೆಸಬೇಕು ಎಂದು ಒಂದು ಮಾದರಿ ಹಾಕಿಕೊಟ್ಟರು. ಕನ್ನಡ ಸಾಹಿತ್ಯದಲ್ಲಿ ದಲಿತ ವಿಮರ್ಶೆ ಹೇಗಿರಬೇಕು? ವಿದ್ಯಾರ್ಥಿಗಳ ನಡುವೆ ಚಳವಳಿ ಹೇಗೆ ಕಟ್ಟಬೇಕು ಎಂದು ಹೇಳಿಕೊಟ್ಟರು. ಇಂದು ಕರ್ನಾಟಕದ ಶಿಕ್ಷಣ ಸಂಸ್ಥೆಗಳಲ್ಲಿ ಕೃಷ್ಣಪ್ಪ ಅವರ ಮಾದರಿ ನಮ್ಮ ಎದುರಿಗಿದೆ. ದಲಿತ ಚಳವಳಿಗೆ ಮಾತ್ರವಲ್ಲ, ಕರ್ನಾಟಕಕ್ಕೆ ಅವರ ಮಾದರಿ ಹಬ್ಬಿದೆ ಎಂದರು.

ಭದ್ರಾವತಿಯಲ್ಲಿ ವಿಎಸ್ಎನ್ಎಲ್ ಕಾರ್ಖಾನೆಯಲ್ಲಿ ದಲಿತ ನೌಕರರಿಗೆ ಪ್ರತ್ಯೇಕ ಚಹಾ ನೀಡಲಾಗುತ್ತಿತ್ತು. ಪ್ರಬಲ ಜಾತಿ ನೌಕರರೊಬ್ಬರು ಬಂದು ಎಲ್ಲರಿಗೂ ಚಹಾ ನೀಡಬೇಕಾಗಿತ್ತು. ಅದನ್ನು ವಿರೋಧಿಸುವ ಮೂಲಕ  ಹೋರಾಟ ಕಟ್ಟಿದರು. ಅಲ್ಲಿಂದ ಅವರು ಅಸ್ಪೃಶ್ಯತೆ ವಿರೋಧಿ ಹೋರಾಟಕ್ಕೆ ಚಾಲನೆ ಕೊಟ್ಟರು. 70ರ ದಶಕದಲ್ಲಿ ಕೃಷ್ಣಪ್ಪ ಅವರು ಸಮಾಜ ಕಲ್ಯಾಣ ಇಲಾಖೆ ಕೆಲಸದ ಬಗ್ಗೆ ಹಾಗೂ ರಾಜ್ಯ ಬಜೆಟ್ ಬಗ್ಗೆ ಚರ್ಚೆ ಮಾಡುತ್ತಿದ್ದರು. ಸಮಾಜ ಕಲ್ಯಾಣ ಇಲಾಖೆ ಏನೆಲ್ಲಾ ಮಾಡಬೇಕು ಎಂದು ಸಲಹೆ ಕೊಡುತ್ತಿದ್ದರು. ಅಂದು ಕೃಷ್ಣಪ್ಪ ಅವರು ಮಾಡಿದ ಹೋರಾಟದ ಪರಿಣಾಮವಾಗಿ ಸರ್ಕಾರ ಈಗ ದಲಿತರಿಗೆ ಅವರ ಜನಸಂಖ್ಯೆಗೆ ಅನುಗುಣವಾಗಿ ಹಣ ಮೀಸಲಿಟ್ಟಿದೆ ಎಂದು ಹೇಳಿದರು.

ಕೃಷ್ಣಪ್ಪ ಅವರ ಹೋರಾಟದ ಫಲದಿಂದ ಇಂದು ದಲಿತರ ಭೂಮಿ ಪರಭಾರೆ ಬಗ್ಗೆ ಕಾನೂನಾಗಿದೆ. ಕೃಷ್ಣಪ್ಪ ಅವರ ಗತಕಾಲವನ್ನು ನೆನೆಪಿಸಿಕೊಂಡು ನಾವು ಇಂದು ವಿಷಾದ ವ್ಯಕ್ತಪಡಿಸುತ್ತಿದ್ದೇವೆ. ದಲಿತ ಚಳವಳಿಗೆ ಸಾಹಿತಿಗಳು, ಬರಹಗಾರರು, ಶಿಕ್ಷಕರು, ರಾಜಕಾರಣಿಗಳು ಸೇರಿದಂತೆ ಎಲ್ಲ ವಲಯದಿಂದ ಪ್ರತಿನಿಧಿಗಳು ಇದ್ದರು. ಇಂದು ದಲಿತ ಚಳವಳಿಗೆ ಅವರೆಲ್ಲರ ಸಂಪರ್ಕ ಕಡಿಮೆಯಾಗಿದೆ. ದಲಿತ ಚಳವಳಿಗೆ ವಿವಿಧ ವಲಯಗಳಿಂದ ಬರುತ್ತಿದ್ದ ಬೆಂಬಲ ಕ್ಷೀಣಿಸಿದೆ. ದಲಿತ ಚಳವಳಿಗೆ ಕೃಷ್ಣಪ್ಪ ಅವರು ಕೊಟ್ಟ ನುಡಿಗಟ್ಟುಗಳು ಈಗಲೂ ನಮ್ಮ ಬಳಿಯಲ್ಲಿ ಇದೆ; ಎಲ್ಲ ವಲಯಗಳ ಬುದ್ದಿಜೀವಿಗಳು ದಲಿತ ಚಳವಳಿ ಜೊತೆಗೆ ಸೇರಬೇಕು. ಏಕೆಂದರೆ, ಅಮೆರಿಕದಲ್ಲಿ ಒಬಾಮ ಎರಡು ಅವಧಿಗೆ ಅಧ್ಯಕ್ಷರಾಗಲೂ ಇದೇ ಕಾರಣ. ಅಲ್ಲಿನ ಸಾಂಸ್ಕೃತಿಕ ಅಧಿಕಾರದಿಂದ ಇದು ಸಾಧ್ಯವಾಯಿತು. ಸಿನಿಮಾ, ಹಾಡುಗಾರರು, ಬರಹಗಾರರು ಸೇರಿದಂತೆ ಎಲ್ಲರೂ ಕಪ್ಪು ಜನರ ಬಗ್ಗೆ ಮಾತನಾಡಿದರು ಎಂದರು.

ನಾವು ಅಂಬೇಡ್ಕರ್‌ವಾದವನ್ನು ಪ್ರಚಾರ ಮಾಡಬೇಕು. ಅಂಬೇಡ್ಕರ್ ಅವರ ವೈಚಾರಿಕತೆ ಸಮಾಜದಲ್ಲಿ ಹಬ್ಬದ ಕಾರಣಕ್ಕೆ ಇಂದು ದೇಶದಲ್ಲಿ ಹಲವೆಡೆ ಕಾಲ್ತುಳಿತ ಆಗುತ್ತಿದೆ. ಅಂಬೇಡ್ಕರ್ ಅವರ ಜಾತಿ ವಿನಾಶದ ಮಾದರಿಯನ್ನು ಮರೆತಿರುವ ನಾವು, ಜಾತಿ ಉಪಜಾತಿಗಳನ್ನು ಪೋಷಿಸಿಕೊಂಡು ಹೋಗುತ್ತಿದ್ದೇವೆ. ಜಾತಿ ಪ್ರಜ್ಞೆಯನ್ನು ನಾವು ನಮ್ಮ ತಲೆಯಿಂದ ಹೋಗಲಾಡಿಸಬೇಕು. ಜಾತಿ ಇಂದು ಎಲ್ಲವನ್ನೂ ನಿಯಂತ್ರಣ ಮಾಡುತ್ತಿದೆ. ಊಳಿಗಮಾನ್ಯ ಜಾತಿ ಹಾಗೂ ಪಕ್ಷಗಳು ದಲಿತ ರಾಜಕಾರಣಿಗಳ ವಿರುದ್ಧ ಮಾತನಾಡಲು ದಲಿತ ರಾಜಕಾರಣಿಗೇ ಸುಪಾರಿ ನೀಡುತ್ತಿವೆ. ಅದಕ್ಕೆ ನಮ್ಮ ಮಾಧ್ಯಮಗಳೂ ಹೆಚ್ಚು ಪ್ರಚಾರ ಕೊಡುತ್ತಿವೆ ಎಂದು ಹೇಳಿದರು.

ದಲಿತ ಚಳವಳಿಯ ಯುಜನರಿಗೆ ನನ್ನದೊಂದು ಸಲಹೆ. ಒಳ ಮೀಸಲಾತಿ ಜಾರಿ ಪ್ರಕ್ರಿಯೆ ಒಂದು ಹಂತಕ್ಕೆ ಬಂದಿದೆ. ಅದು ಪರಿಹಾರ ಆದ ನಂತರ ಹೊಸ ತಲೆಮಾರು ದಲಿತ ಚಳುವಳಿಯನ್ನು ಒಗ್ಗೂಡಿಸುವ ಕೆಲಸ ಮಾಡಬೇಕು ಎಂದರು ಕಿವಿಮಾತು ಹೇಳಿದರು.

ಸಿದ್ಧಾಂತಗಳಿಗೆ ಮಾತ್ರ ಜಗತ್ತು ಬದಲಿಸುವ ಶಕ್ತಿ ಇದೆ

ಯಾವ ಬಾಂಬು-ಬಂದೂಕಿಗೂ ಜಗತ್ತನ್ನು ಬದಲಾಯಿಸುವ ಶಕ್ತಿ ಇಲ್ಲ. ಗಟ್ಟಿ ಸಿದ್ಧಾಂತಗಳಿಗೆ ಮಾತ್ರ ಆ ಶಕ್ತಿ ಇದೆ ಎಂದು ಚಿಂತಕರು ಹಾಗೂ ಮುಖ್ಯಮಂತ್ರಿಗಳ ಆಪ್ತ ಕಾರ್ಯರ್ಶಿಗಳಾದ ಡಾ. ಎನ್.ವೆಂಕಟೇಶಯ್ಯ ಪ್ರತಿಪಾದಿಸಿದರು.

ಅಂಬೇಡ್ಕರ್‌ವಾದ ವಿಶೇಷಾಂಕ ಬಿಡುಗಡೆಗೊಳಿಸಿ ಮಾತನಾಡಿದ ಅವರು, “ದಲಿತ ಚಳವಳಿಗೆ ಈಗ 51 ವರ್ಷ ತುಂಬುತ್ತಿದೆ. ಜಗತ್ತನ್ನು ಬದಲಾಯಿಸುವ ಶಕ್ತಿ ಗಟ್ಟಿ ಸಿದ್ಧಾಂತಗಳಿಗೆ ಮಾತ್ರ ಇದೆ. ಯಾವುದೇ ಬಾಂಬು-ಬಂದೂಕುಗಳಿಗೆ ಅಲ್ಲ. ಸಿದ್ಧಾಂತವು ಮನುಷ್ಯ ಸಂಬಂಧಗಳನ್ನು ಗಟ್ಟಿಗೊಳಿಸುತ್ತದೆ. ಸಿದ್ಧಾಂತವು ಸಮಾಜದ ಬದಲಾವಣೆಗೆ ಸದಾ ಶ್ರಮಿಸುತ್ತದೆ; ಇಲ್ಲದಿದ್ದರೆ ಆ ಸಿದ್ದಾಂತ ಜೀವಂತ ಇರುವುದಿಲ್ಲ ಎಂದರು.

ಕೃಷ್ಣಪ್ಪ ಅವರ ಹೋರಾಟದ ಮಾರ್ಗಗಳು ಭೂಮಿ, ವಸತಿ ಶಾಲೆ, ಮೂಢನಂಬಿಕೆ ಮತ್ತು ಅಸ್ಪೃಶ್ಯತೆ ವಿರೊಧಿಯಾಗಿತ್ತು. ಅವರು ಪ್ರಮುಖವಾಗಿ ನಾಲ್ಕೈದು ಹೋರಾಟಗಳನ್ನು ರೂಪಿಸಿದರು. 70ರ ದಶಕದಲ್ಲಿ ಅವರು ನಡೆಸಿದ ಭೂಮಿ ಹೋರಾಟದಿಂದ ಇಂದು ಲಕ್ಷಾಂತರ ಜನ ಭೂ ಹಿಡುವಳಿದಾರರಾಗಿದ್ದಾರೆ; ಅದರಲ್ಲಿ ಬಹುತೇಕರು ದಲಿತರಿದ್ದಾರೆ. ‘ಹೆಂಡ ಬೇಡ, ವಸತಿ ಶಾಲೆ ಕೊಡಿ’ ಎಂಬ ಚಳವಳಿಯಿಂದ ಇಂದು ಇಡೀ ದೇಶದಲ್ಲೇ ಕರ್ನಾಟಕದಲ್ಲಿ ಮಾತ್ರ 8.35 ಲಕ್ಷ ವಿದ್ಯಾರ್ಥಿಗಳು ಹಾಸ್ಟೆಲ್‌ಗಳಲ್ಲಿ ಕಲಿಯುತ್ತಿದ್ದಾರೆ. ವಿಶೇಷವೆಂದರೆ ಈ ಶಾಲೆಗಳಲ್ಲಿ ಫಲಿತಾಂಶ ಕೂಡ ಉತ್ತಮವಾಗಿದೆ. ವಸತಿ ಶಾಲೆಗಳಲ್ಲಿ ಓದಿದ ಮಕ್ಕಳು ಇಂದು ಐಎಎಸ್-ಐಪಿಎಸ್ ಆಗಿದ್ದಾರೆ. ಶೇ.98ರಷ್ಟು ಮಕ್ಕಳು ಪ್ರತಿವರ್ಷ ಉತ್ತೀರ್ಣರಾಗುತ್ತಿದ್ದಾರೆ. ದಲಿತ ಚಳವಳಿ ಮತ್ತು ಕೃಷ್ಣಪ್ಪ ಅವರ ಮುಂದಾಲೋಚನೆಗಳೇ ಇದಕ್ಕೆಲ್ಲಾ ಕಾರಣ. ಅಂದರೆ ಒಂದು ಗಟ್ಟಿ ಸಿದ್ಧಾಂತದಿಂದ ಮಾತ್ರ ಇದೆಲ್ಲ ಸಾಧ್ಯ” ಎಂದರು.

ಹಾವೇರಿ| ಪೌರ ಕಾರ್ಮಿಕರ ಮೇಲೆ ಹಲ್ಲೆ: ಆರೋಪಿಗಳ ಬಂಧನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತಪ್ಪಾಗಿ ಸುದ್ದಿ ಪ್ರಕಟ : ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಲ್ಲಿ ಕ್ಷಮೆಯಾಚಿಸಿದ PTI

ತಮ್ಮ ಹೇಳಿಕೆಯನ್ನು ತಪ್ಪಾಗಿ ಪ್ರಸಾರ ಮಾಡಿದ್ದ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾ (PTI) ಅಧಿಕೃತವಾಗಿ ಕ್ಷಮೆಯಾಚಿಸಿದರೂ, ಅದರಿಂದ ಈಗಾಗಲೇ ಉಂಟಾಗಿರುವ ಹಾನಿ ಸರಿಪಡಿಸಲು ಸಾಧ್ಯವಿಲ್ಲ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಆ....

‘ನುಡಿಯು ಸಿರಿಯಲ್ಲ ಬದುಕು’ ಕರಾವಳಿಯಲ್ಲಿ ಮತ್ತೆ ಪ್ರತಿರೋಧದ ಧ್ವನಿ: ನವೆಂಬರ್ 28-29ಕ್ಕೆ ‘ಜನನುಡಿ-2026’

"ನವೆಂಬರ್ ಕೊನೆಯ ಶನಿವಾರ ಮತ್ತು ಭಾನುವಾರ ಮಂಗಳೂರಿನಲ್ಲಿ ಕೇವಲ ವಿಚಾರ ಸಂಕಿರಣ ಮಾತ್ರವಲ್ಲ, ಹರಟೆ, ಚರ್ಚೆ, ಸೌಹಾರ್ದತೆಯ ಮೀನೂಟ ಹಾಗೂ ಪ್ರೀತಿಯೊಂದಿಗೆ ಸಂವಿಧಾನಿಕ ಮೌಲ್ಯಗಳನ್ನು ಎತ್ತಿಹಿಡಿಯುವ ಹೊಸ ಬೆಳಕನ್ನು ಕಂಡುಕೊಳ್ಳಲಿದ್ದೇವೆ," ಎಂದು 'ಅಭಿಮತ...

‘ಟ್ರಂಪ್’ ಗಾಗಿ ಭಾರತದ ಹಿತವನ್ನು ಬಲಿ ಕೊಟ್ಟ ಕೇಂದ್ರ: E20 ಎಥೆನಾಲ್ ನೀತಿ ಹಿಂಪಡೆಯಲು ಕೇಜ್ರಿವಾಲ್ ಪಟ್ಟು

ವಾಹನಗಳ ಎಂಜಿನ್‌ಗೆ ಹಾನಿಯುಂಟುಮಾಡುತ್ತಿದೆ ಎಂದು ಆರೋಪಿಸಲಾದ ಇ20 (E20) ಎಥೆನಾಲ್ ಮಿಶ್ರಿತ ಪೆಟ್ರೋಲ್ ನೀತಿಯನ್ನು ಹಿಂಪಡೆಯುವಂತೆ ಆಗ್ರಹಿಸಿ, ದೇಶಾದ್ಯಂತ ಸಂಗ್ರಹಿಸಲಾಗಿದ್ದ 2.30 ಲಕ್ಷಕ್ಕೂ ಅಧಿಕ ಸಾರ್ವಜನಿಕ ಸಹಿಗಳ ಮನವಿ ಪತ್ರದೊಂದಿಗೆ ಪ್ರಧಾನಿ ನರೇಂದ್ರ...

ಗಾಝಾ | ಇಸ್ರೇಲ್ ನರಮೇಧಕ್ಕೆ ಬಲಿಯಾದ ಎರಡು ಕುಟುಂಬಗಳ 112 ಸದಸ್ಯರ ಸಾಮೂಹಿಕ ಅಂತ್ಯಸಂಸ್ಕಾರ: ಸಾವಿರಾರು ಜನರಿಂದ ಕಣ್ಣೀರ ವಿದಾಯ

ಇಸ್ರೇಲ್ ಬಾಂಬ್ ದಾಳಿಯಿಂದ ಧ್ವಂಸಗೊಂಡಿದ್ದ ಮನೆಗಳ ಅವಶೇಷಗಳ ಅಡಿಯಲ್ಲಿ ಇತ್ತೀಚೆಗೆ ಪತ್ತೆಯಾದ ಗಾಝಾದ ಹಸಾಯ್ನ ಮತ್ತು ಅಬು ಶರಿಯಾ ಕುಟುಂಬಗಳ 112 ಸದಸ್ಯರ ಮೃತದೇಹಗಳ ಅಂತ್ಯ ಸಂಸ್ಕಾರ ಮಂಗಳವಾರ (ಆ.4) ನಡೆಯಿತು. ಸಾವಿರಾರು...

E20 ಇಂಧನ ರಾದ್ಧಾಂತ: ನಾಗ್ಪುರದಲ್ಲಿ ಗಡ್ಕರಿ ಮನೆಗೆ ಮುತ್ತಿಗೆ ಯತ್ನ, ಯುವ ಕಾಂಗ್ರೆಸ್ ಕಾರ್ಯಕರ್ತರ ಬಂಧನ

ಎಥೆನಾಲ್ ಮಿಶ್ರಿತ ಇ20 (E20) ಇಂಧನದಿಂದ ದೇಶದ ಲಕ್ಷಾಂತರ ವಾಹನ ಮಾಲೀಕರು ಎಂಜಿನ್ ಹಾನಿ ಮತ್ತು ಮೈಲೇಜ್ ಅಭಾವ ಎದುರಿಸುತ್ತಿದ್ದಾರೆ ಎಂಬ ಆಕ್ರೋಶದ ನಡುವೆಯೇ, ನಾಗ್ಪುರದಲ್ಲಿ ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್...

ರಾಜ್ಯದಲ್ಲಿ ‘SIR’ ಅವಾಂತರ: 1.ಕೋಟಿಗೂ ಹೆಚ್ಚು ಮತದಾರರನ್ನು ಹೊರಗಿಡಲು ಸಂಚು, ‘SIR ವಿರೋಧಿ ಕರ್ನಾಟಕ’ ಆಕ್ರೋಶ

ಕರ್ನಾಟಕದಲ್ಲಿ ಜಾರಿಯಲ್ಲಿರುವ ಬೂತ್ ಮಟ್ಟದ ಮತದಾರರ ಪಟ್ಟಿ ಸರಿಪಡಿಸುವ 'ಎಸ್‌ಐಆರ್' (SIR) ಪ್ರಕ್ರಿಯೆಯಲ್ಲಿ ಭಾರೀ ಅವ್ಯವಹಾರ ಮತ್ತು ಕಪಟತನ ನಡೆದಿದ್ದು, ರಾಜ್ಯದ ಶೇ. 20 ರಷ್ಟು (ಆಗಸ್ಟ್ 2026ರ ಹೊತ್ತಿಗೆ ಸುಮಾರು 1.10...

‘ಜನರು ಬಿಜೆಪಿಯಿಂದ ಅತೃಪ್ತರಾಗಿದ್ದಾರೆ…’: ದಾಟಿಯಾ ಉಪಚುನಾವಣೆಯಲ್ಲಿ ಗೆಲುವಿನ ನಂತರ ಆಡಳಿತ ಪಕ್ಷದ ವಿರುದ್ಧ ಘನಶ್ಯಾಮ್ ಸಿಂಗ್ ವಾಗ್ದಾಳಿ

ಭೋಪಾಲ್ (ಮಧ್ಯಪ್ರದೇಶ): ಮಧ್ಯಪ್ರದೇಶದ ದಾಟಿಯಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ನೂತನವಾಗಿ ಆಯ್ಕೆಯಾಗಿರುವ ಕಾಂಗ್ರೆಸ್ ಶಾಸಕ ಘನಶ್ಯಾಮ್ ಸಿಂಗ್ ಅವರು, ತಮ್ಮ ಅಭೂತಪೂರ್ವ ಗೆಲುವನ್ನು ಬಿಜೆಪಿಯ 'ಭ್ರಷ್ಟಾಚಾರ'ಕ್ಕೆ ಸಾರ್ವಜನಿಕರು ನೀಡಿದ ತಕ್ಕ ಹಾಗೂ ಸೂಕ್ತ...

ಇಂದಿನ ವಿಚಾರಣೆ ಬಳಿಕ ಉದಯನಿಧಿ ಬಿಡುಗಡೆಗೆ ಮದ್ರಾಸ್ ಹೈಕೋರ್ಟ್ ನಿರ್ದೇಶನ

ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇಲೆ ಬಂಧಿತರಾದ ತಮಿಳುನಾಡು ವಿಧಾನಸಭೆಯ ವಿಪಕ್ಷ ನಾಯಕ ಉದಯನಿಧಿ ಸ್ಟಾಲಿನ್ ಅವರನ್ನು, ವಿಚಾರಣೆಯಯ ಬಳಿಕ ಸ್ಟೇಷನ್ ಬೇಲ್ (ಠಾಣಾ ಜಾಮೀನು) ಮೇಲೆ ಬಿಡುಗಡೆ ಮಾಡುವಂತೆ ಮದ್ರಾಸ್ ಹೈಕೋರ್ಟ್...

ರಾಜೀನಾಮೆ ನೀಡಿದರೆ ಕೆಲವೇ ನಿಮಿಷಗಳಲ್ಲಿ ಅಂಗೀಕರಿಸುವೆ, ಸಚಿವ ಸ್ಥಾನ ವಂಚಿತರ ಬೆದರಿಕೆಗೆ ಸಿಎಂ ಡಿ.ಕೆ. ಶಿವಕುಮಾರ್ ವಾರ್ನಿಂಗ್

ಪಕ್ಷದ ಹಿತವೇ ಎಲ್ಲಕ್ಕಿಂತ ಮುಖ್ಯ. ಸಚಿವ ಸ್ಥಾನ ಸಿಗಲಿಲ್ಲ ಎಂಬ ಕಾರಣಕ್ಕೆ ಯಾರಾದರೂ ರಾಜೀನಾಮೆ ಸಲ್ಲಿಸಿದರೆ, ಕೆಲವೇ ನಿಮಿಷಗಳಲ್ಲಿ ಅದನ್ನು ನಾನು ಅಂಗೀಕರಿಸುತ್ತೇನೆ" ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಖಡಕ್ ಎಚ್ಚರಿಕೆ ನೀಡಿದ್ದಾರೆ. ಶಾಸಕರ...

ನಮಗೆ ಚುನಾವಣಾ ರಾಜಕೀಯದ ಉದ್ದೇಶವಿಲ್ಲ, ಜನಾಂದೋಲನವೇ ನಮ್ಮ ಗುರಿ: ಸಿಜೆಪಿ ಸಂಸ್ಥಾಪಕ ಅಭಿಜೀತ್ ದೀಪ್ಕೆ

ಕಾಕ್ರೋಚ್ ಜನತಾ ಪಾರ್ಟಿ (CJP) ಚುನಾವಣಾ ರಾಜಕೀಯಕ್ಕೆ ಪ್ರವೇಶಿಸುವ ಯಾವುದೇ ಉದ್ದೇಶವನ್ನು ಹೊಂದಿಲ್ಲ, ಬದಲಾಗಿ ದೇಶದ ಪ್ರಜಾಸತ್ತಾತ್ಮಕ ಸಂಸ್ಥೆಗಳ ಮೇಲಿನ ಜನರ ನಂಬಿಕೆಯನ್ನು ಮರುಸ್ಥಾಪಿಸಲು ಬೃಹತ್ ಜನಾಂದೋಲನವನ್ನು ಕಟ್ಟುವುದೇ ನಮ್ಮ ಮೂಲ ಗುರಿ...