Homeಮುಖಪುಟಕೋಟಾ ಆಸ್ಪತ್ರೆಯ ಮಕ್ಕಳ ಸಾವಿನ ಚರ್ಚೆಯ ಸುತ್ತ ಹೆಣೆದುಕೊಂಡಿದೆಯಾ ರಾಜಕೀಯ ವಿಷಸರ್ಪ!?

ಕೋಟಾ ಆಸ್ಪತ್ರೆಯ ಮಕ್ಕಳ ಸಾವಿನ ಚರ್ಚೆಯ ಸುತ್ತ ಹೆಣೆದುಕೊಂಡಿದೆಯಾ ರಾಜಕೀಯ ವಿಷಸರ್ಪ!?

- Advertisement -
- Advertisement -

ಮಕ್ಕಳ ಸಾವಿನ ಕುರಿತು ಹೇಳಿಕೆ ನೀಡುತ್ತಾ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ “ಮಕ್ಕಳು ಪ್ರತಿ ವರ್ಷ ಸಾಯ್ತಾರೆ. ಅದ್ರಲ್ಲಿ ಹೊಸದೇನೂ ಇಲ್ಲ” ಅಂತ ಹೇಳಿದ್ದು ನಿಜಕ್ಕೂ ಅಕ್ಷಮ್ಯ ಹೊಣೆಗೇಡಿ ಹೇಳಿಕೆ. ಆದ್ರೆ ಆ ಹೊಣೆಗೇಡಿ ಹೇಳಿಕೆಯಲ್ಲೂ ಸಣ್ಣದೊಂದು ಸತ್ಯ ಅಡಗಿರೋದನ್ನು ಆಸ್ಪತ್ರೆಯ ದಾಖಲೆಗಳೇ ರುಜುವಾತು ಮಾಡುತ್ತಿವೆ.

ರಾಜಸ್ತಾನದ ಕೋಟಾದಲ್ಲಿರುವ ಜೆಕೆ ಲೋನ್ ಸರ್ಕಾರಿ ಆಸ್ಪತ್ರೆಯಲ್ಲಿ ಕಳೆದ ತಿಂಗಳು ನೂರು ಮಕ್ಕಳು ಅಸುನೀಗಿದ್ದು ರಾಷ್ಟ್ರಮಟ್ಟದಲ್ಲಿ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ. ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್‍ರನ್ನು ಬಿಜೆಪಿ ತರಾಟೆಗೆ ತೆಗೆದುಕೊಂಡಿದ್ದರೆ, ರಾಷ್ಟ್ರೀಯ ನ್ಯೂಸ್ ಮೀಡಿಯಾಗಳು ಆಸ್ಪತ್ರೆಗೆ ಮೂಲಸೌಕರ್ಯ ಕಲ್ಪಿಸದ ರಾಜ್ಯ ಸರ್ಕಾರದ ವಿರುದ್ಧ ಗಂಭೀರ ಚರ್ಚೆಗಳನ್ನು ನಡೆಸುತ್ತಿವೆ. ಹೌದು, ವಿರೋಧ ಪಕ್ಷ ಮತ್ತು ಸಂವಿಧಾನದ ನಾಲ್ಕನೇ ಆಯಾಮವಾದ ಮಾಧ್ಯಮ, ಸರ್ಕಾರವೊಂದರ ವೈಫಲ್ಯವನ್ನು ಹೀಗೆ ಪ್ರಶ್ನಿಸಲೇಬೇಕು. ಜಗತ್ತನ್ನೇ ನೋಡದ ಹಸುಗೂಸುಗಳು ತಾವು ಮಾಡದ ತಪ್ಪಿಗೆ ಕಣ್ಮುಚ್ಚುವಂತೆ ಆದದ್ದು ಅಕ್ಷಮ್ಯ ಅಪರಾಧ. ಹಿಂದೆ ಬಿಜೆಪಿ ಸಿಎಂ ಯೋಗಿ ಆದಿತ್ಯನಾಥರ ಉತ್ತರಪ್ರದೇಶದ ಗೋರಖ್‍ಪುರ ಆಸ್ಪತ್ರೆಯಲ್ಲಿ ಆಮ್ಲಜನಕ ಪೂರೈಕೆಯಿಲ್ಲದೆ 71 ನವಜಾತ ಶಿಶುಗಳು ಅಸುನೀಗಿದಾಗ ದೇಶ ತಲ್ಲಣಿಸಿದ್ದು ಇದೇ ಕಾರಣಕ್ಕೆ.

ಆದರೆ ರಾಜಸ್ಥಾನದ ಕೋಟಾ ಆಸ್ಪತ್ರೆಯ ಹಸುಗೂಸುಗಳ ಸಾವು ಚರ್ಚೆಗೆ ಬಂದಿರುವುದು ಇಂಥಾ ನೈಜ ಕಾಳಜಿಗಿಂತಲೂ ಹೆಚ್ಚಾಗಿ ರಾಜಕೀಯಪ್ರೇರಿತ ಕಾರಣಕ್ಕಾ ಎಂಬ ಅನುಮಾನ ಆಸ್ಪತ್ರೆಯ ಹಳೆಯ ರೆಕಾರ್ಡುಗಳನ್ನು ಪರಿಶೀಲಿಸಿದಾಗ ಮೂಡುತ್ತೆ. ಆಸ್ಪತ್ರೆಯ ದಾಖಲಾತಿಯ ಪ್ರಕಾರ 2019ರಲ್ಲಿ 963 ಮಕ್ಕಳು ಅಲ್ಲಿ ಅಸುನೀಗಿದ್ದಾರೆ. ಅವುಗಳಲ್ಲಿ ಬಹುಪಾಲು ನವಜಾತ ಶಿಶುಗಳು. ಅಚ್ಚರಿಯ ಸಂಗತಿಯೆಂದರೆ, ಕಳೆದ ಐದು ವರ್ಷಗಳ ಲೆಕ್ಕ ನೋಡಿದರೆ ಅಲ್ಲಿ ಇದೇ ಅತಿ ಕಡಿಮೆ ಮಕ್ಕಳು ಸತ್ತ ವರ್ಷ! 2014ರಿಂದ ಆ ಆಸ್ಪತ್ರೆಯಲ್ಲಿ ಸರಾಸರಿ ಪ್ರತಿವರ್ಷ 1,100 ಮಕ್ಕಳು ಅಸುನೀಗುತ್ತಲೇ ಬಂದಿದ್ದಾರೆ!

ಇವತ್ತಿನ ದುರ್ಗತಿ ಕಳೆದ ಐದು ವರ್ಷದಿಂದ ಸತತವಾಗಿ, ಅಂದರೆ ಬಿಜೆಪಿಯ ವಸುಂಧರಾ ರಾಜೆ ಸಿಎಂ ಆಗಿದ್ದ ಅವಧಿಯುದ್ದಕ್ಕೂ, ಇತ್ತಿ ಎನ್ನುವುದಾದರೆ ಇಷ್ಟುದಿನ ನ್ಯಾಷನಲ್ (ಗೋದಿ) ಮೀಡಿಯಾಗಳೇಕೆ ಇದರತ್ತ ಕುರುಡಾಗಿದ್ದವು? ಈಗ ಕಾಂಗ್ರೆಸ್ ಅಧಿಕಾರಕ್ಕೇರಿದ ಮೇಲೆಯೇ, ಆ ಆಸ್ಪತ್ರೆಯ ಅವ್ಯವಸ್ಥೆ ಮೀಡಿಯಾಗಳ ಗಮನ ಸೆಳೆದಿರುವುದರ ಹಿಂದೆ ಯಾವ ರಾಜಕೀಯ ಕಾರಣವೂ ಇಲ್ಲ ಎಂದು ನಂಬುವುದೇಗೆ?

ವಿವಾದವನ್ನು ಚರ್ಚಿಸುತ್ತಿರುವ ಪ್ರತಿಯೊಬ್ಬರೂ ನೆನಪಿನಲ್ಲಿಟ್ಟುಕೊಳ್ಳಲೇಬೇಕಾದ ಸಂಗತಿ ಏನೆಂದರೆ, ಕಾಂಗ್ರೆಸ್‍ನ ಅಶೋಕ್ ಗೆಹ್ಲೋಟ್ ಮತ್ತು ಬಿಜೆಪಿಯ ವಸುಂಧರಾ ರಾಜೆ ಇಬ್ಬರ ಅವಧಿಯಲ್ಲೂ ಕೋಟಾ ಆಸ್ಪತ್ರೆಯಲ್ಲಿ ಪ್ರತಿವರ್ಷ ಸರಾಸರಿ 1,100 ಹಸುಗೂಸುಗಳು ತಮ್ಮದಲ್ಲದ ತಪ್ಪಿಗೆ ಸಾವನ್ನಪ್ಪುತ್ತಲೇ ಬಂದಿದ್ದಾರೆ. ಹಾಗೆ ನೋಡಿದರೆ ಈ ಅವಧಿಯಲ್ಲಿ ಅತಿಹೆಚ್ಚು, ಅಂದರೆ 1260 ಮಕ್ಕಳು ಸಾವನ್ನಪ್ಪಿದ್ದು 2015ರಲ್ಲಿ. ಆಗ ರಾಜಸ್ತಾನದಲ್ಲಿ ಅಧಿಕಾರದಲ್ಲಿದ್ದುದು ಬಿಜೆಪಿ ಸರ್ಕಾರ! ಆಗ್ಯಾಕೆ ಮೀಡಿಯಾಗಳು ಈ ದುರಂತದತ್ತ ಕಣ್ಣು ತೆರೆಯಲಿಲ್ಲ.

ಹಾಗಂತ ಈ ಸಾವಿನ ದುರಂತ ಇಷ್ಟು ವರ್ಷ ಯಾರ ಗಮನಕ್ಕೂ ಬಾರದ ಗೌಪ್ಯ ವಿದ್ಯಮಾನವಾಗಿರಲಿಲ್ಲ. ಆಸ್ಪತ್ರೆಯ ಮಕ್ಕಳಿಗೆ ಇಂಥಾ ದುಸ್ಥಿತಿ ಎದುರಾದ ಆರಂಭದ ದಿನಗಳಿಂದಲೇ ಇಲ್ಲಿನ ಸ್ಥಳೀಯ ಪತ್ರಕರ್ತರು ಆಸ್ಪತ್ರೆಯಲ್ಲಿರುವ ಮೂಲಸೌಕರ್ಯದ ಕೊರತೆ, ಸಿಬ್ಬಂದಿ ಕೊರತೆ, ನೈರ್ಮಲ್ಯೀಕರಣದ ವೈಫಲ್ಯಗಳ ಕುರಿತಂತೆ ಬೆಳಕು ಚೆಲ್ಲುತ್ತಲೇ ಬಂದಿದ್ದರು. ಕೆಲ ಪತ್ರಕರ್ತರಂತು ಆಸ್ಪತ್ರೆ ದುಸ್ಥಿತಿ ನೋಡಲಾಗದೆ ಎನ್‍ಐಸಿಯುನಲ್ಲಿ ಮಕ್ಕಳನ್ನು ಬೆಚ್ಚಗಿಡುವ ಹೀಟರ್‍ಗಳನ್ನೂ ದಾನ ಮಾಡಿದ್ದುಂಟು. ಬಿಜೆಪಿಯ ವಸುಂಧರಾ ರಾಜೆ ಸಿಎಂ ಆಗಿದ್ದ ಅವಧಿಯಿಂದಲೂ ಇಂಥಾ ವರದಿಗಾರಿಕೆ ನಡೆಯುತ್ತಲೇ ಇತ್ತು. ಆದರೆ ಅವೆಲ್ಲವೂ ಸ್ಥಳೀಯ ಸುದ್ದಿಗಳಾಗಿ ಕಳೆದುಹೋದವೇ ವಿನಃ, ನ್ಯಾಷನಲ್ ಮೀಡಿಯಾಗಳು ಅದರತ್ತ ತಿರುಗಿಯೂ ನೋಡಲಿಲ್ಲ.

ಕೋಟಾದ ಆಸ್ಪತ್ರೆ ಸಿಬ್ಬಂದಿಗಳ ಮತ್ತು ಮೂಲಸೌಕರ್ಯದ ಕೊರತೆಯಿಂದ ನಿರಂತರವಾಗಿ ನರಳುತ್ತಲೇ ಬಂದಿದೆ. ರೋಗಿಗಳಿಗೆ ಚಿಕಿತ್ಸೆ ನೀಡಲು ಮಂಜೂರಾದ 533 ಅಗತ್ಯ ಪರಿಕರಗಳ ಪೈಕಿ 213 ಮಾತ್ರ ಕಾರ್ಯನಿರ್ವಹಣಾ ಸ್ಥಿತಿಯಲ್ಲಿವೆ. ಇನ್ನುಳಿದ 320 ಉಪಕರಣಗಳು ಕೆಟ್ಟುಹೋಗಿಯೋ, ಮುರಿದೋ ಮೂಲೆ ಸೇರಿ ಯಾವುದೋ ಕಾಲವಾಗಿದೆ. ಆಸ್ಪತ್ರೆಯ ಆವರಣದಲ್ಲಿ ಹಂದಿಗಳು ಯಾವ ಎಗ್ಗಿಲ್ಲದೆ ತಿರುಗಾಡುತ್ತವೆ. ಕಿಟಕಿಯ ಗಾಜುಗಳೆಲ್ಲ ಹೊಡೆದು ಚಳಿ, ಗಾಳಿಯಿಂದ ರೋಗಿಗಳಿಗೆ ರಕ್ಷಣೆ ಇಲ್ಲದಾಗಿದೆ. ಒಂದು ಬೆಡ್ ಮೇಲೆ ನಾಲ್ಕು ಮಕ್ಕಳನ್ನು ಮಲಗಿಸಲಾಗುತ್ತಿದೆ. ಒಂದೊಂದು ವೆಂಟಿಲೇಟರನ್ನು ಏಕಕಾಲದಲ್ಲಿ ಇಬ್ಬರು ಮಕ್ಕಳಿಗೆ ಬಳಸಲಾಗುತ್ತಿದೆ. ಆಸ್ಪತ್ರೆಯ ಪರಿಸ್ಥಿತಿ ಇಂಥಾ ಕರುಣಾಜನಕವಾಗಿರುವುದರಿಂದಲೇ 2014ರಿಂದ ನಿರಂತರವಾಗಿ ಇಲ್ಲಿ ಮಕ್ಕಳು ಪ್ರತಿವರ್ಷ ಸಾವಿರಕ್ಕೂ ಮೇಲ್ಪಟ್ಟು ಅಸುನೀಗುತ್ತಲೇ ಇದ್ದಾರೆ. ಆದರೆ ಆಗೆಲ್ಲ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದುದರಿಂದ ತೆಪ್ಪಗಿದ್ದ ನ್ಯಾಷನಲ್ ಗೋದಿ ಮೀಡಿಯಾಗಳು, ಈಗ ಎಚ್ಚೆತ್ತು ಬೊಬ್ಬೆ ಹೊಡೆದುಕೊಳ್ಳುತ್ತಿವೆಯೆಂದರೆ, ಅದಕ್ಕೆ ಕಾರಣ ಅಸುನೀಗುತ್ತಿರುವ ಮಕ್ಕಳ ಮೇಲಿನ ಕಾಳಜಿಯಲ್ಲ, ಅಧಿಕಾರದಲ್ಲಿರೋದು ಕಾಂಗ್ರೆಸ್ ಸರ್ಕಾರ ಎಂಬ ಸಂಕಟ!

ಮಕ್ಕಳ ಸಾವಿನ ಕುರಿತು ಹೇಳಿಕೆ ನೀಡುತ್ತಾ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ “ಮಕ್ಕಳು ಪ್ರತಿ ವರ್ಷ ಸಾಯ್ತಾರೆ. ಅದ್ರಲ್ಲಿ ಹೊಸದೇನೂ ಇಲ್ಲ” ಅಂತ ಹೇಳಿದ್ದು ನಿಜಕ್ಕೂ ಅಕ್ಷಮ್ಯ ಹೊಣೆಗೇಡಿ ಹೇಳಿಕೆ. ಆದ್ರೆ ಆ ಹೊಣೆಗೇಡಿ ಹೇಳಿಕೆಯಲ್ಲೂ ಸಣ್ಣದೊಂದು ಸತ್ಯ ಅಡಗಿರೋದನ್ನು ಆಸ್ಪತ್ರೆಯ ದಾಖಲೆಗಳೇ ರುಜುವಾತು ಮಾಡುತ್ತಿವೆ.

ಅದೇನೇ ಇರಲಿ, ಅಕ್ಕಪಕ್ಕದ ಮೂರ್ನಾಲ್ಕು ಜಿಲ್ಲೆಗಳ ಬಡರೋಗಿಗಳಿಗೆ ಏಕಮಾತ್ರ ಆಸರೆಯಾಗಿ ಉಳಿದಿರುವ ಜೆಕೆ ಲೋನ್ ಆಸ್ಪತ್ರೆ ಇನ್ಮುಂದಾದರು ಸುಧಾರಿಸುವಂತಾದರೆ ಅಷ್ಟುಸಾಕು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಮೆರಿಕದೊಂದಿಗಿನ ಯುದ್ಧಕ್ಕೆ ಇರಾನ್ 40 ವರ್ಷಗಳಿಂದ ಸಿದ್ಧವಾಗಿತ್ತು: ನಿವೃತ್ತ ಲೆಫ್ಟಿನೆಂಟ್ ಜನರಲ್ ಧಿಲ್ಲೋನ್

"ತನ್ನ ಅತ್ಯುನ್ನತ ನಾಯಕತ್ವವನ್ನು ಕಳೆದುಕೊಳ್ಳುವಂತಹ ತುರ್ತು ಪರಿಸ್ಥಿತಿಗಳು ಸೇರಿದಂತೆ, ಅಮೆರಿಕದೊಂದಿಗಿನ ಸಂಭಾವ್ಯ ಯುದ್ಧಕ್ಕಾಗಿ ಇರಾನ್ ನಾಲ್ಕು ದಶಕಗಳಿಂದ ಸಿದ್ಧತೆ ನಡೆಸಿದೆ. ಹೀಗಾಗಿ ಎದುರಾಳಿಗಳಿಗೆ ಆ ದೇಶವನ್ನು ಸಂಪೂರ್ಣವಾಗಿ ನಾಶಪಡಿಸುವುದು ಕಷ್ಟಕರವಾಗಿದೆ" ಎಂದು ಭಾರತೀಯ...

ಸಚಿವ ಬಿ. ನಾಗೇಂದ್ರ ವಜಾಗೆ ಆಗ್ರಹಿಸಿ ಆಗಸ್ಟ್ 24ರಂದು ವಿಧಾನಸೌಧ ಮುತ್ತಿಗೆಗೆ ಕರೆ ನೀಡಿದ ಬಿಜೆಪಿ: ಉಲ್ಬಣಗೊಂಡ ರಾಜಕೀಯ ಸಂಘರ್ಷ

ಕರ್ನಾಟಕದ ರಾಜಕೀಯ ವಲಯದಲ್ಲಿ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣಕಾಸು ಅಕ್ರಮ ಪ್ರಕರಣವು ಭಾರಿ ಸಂಚಲನ ಮೂಡಿಸಿದ್ದು, ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಮತ್ತು ವಿರೋಧ ಪಕ್ಷಗಳ ನಡುವಿನ ಸಮರ...

ಕೇರಳ ವಿಶ್ವವಿದ್ಯಾಲಯದಲ್ಲಿ ಜಾತಿ ತಾರತಮ್ಯ; ದಲಿತ ಪಿಎಚ್‌ಡಿ ಸಂಶೋಧಕಿಯಿಂದ ಆರೋಪ

ತುಂಚತ್ ಎಝುತ್ತಚ್ಚನ್ ಮಲಯಾಳಂ ವಿಶ್ವವಿದ್ಯಾಲಯದ (ಟಿಇಎಂಯು) ದಲಿತ ಸಂಶೋಧಕಿಯೊಬ್ಬರು, "ಸಹಾಯಕ ಪ್ರಾಧ್ಯಾಪಕರೊಬ್ಬರು ತಮ್ಮ ವಿರುದ್ಧ ಜಾತಿ ಆಧಾರಿತ ತಾರತಮ್ಯ, ಕಿರುಕುಳ ಮತ್ತು ಪಿಎಚ್‌ಡಿ ಸಂಶೋಧನೆಗೆ ಅಡ್ಡಿಪಡಿಸುತ್ತಿದ್ದಾರೆ" ಎಂದು ಆರೋಪಿಸಿದ್ದಾರೆ. ಆಗಸ್ಟ್ 15 ರಿಂದ ತಿರೂರಿನ...

ಉತ್ತರ ಪ್ರದೇಶ| ಆಹಾರ ಸುರಕ್ಷತಾ ಅಧಿಕಾರಿಗಳ ದಾಳಿ; ತನ್ನದೇ ಅಂಗಡಿಯ ಸಿಹಿತಿಂಡಿ ತಿನ್ನಲು ನಿರಾಕರಿಸಿದ ಮಾಲೀಕ

ಆಹಾರ ಸುರಕ್ಷತಾ ದಾಳಿಯ ವೇಳೆ ಸಿಹಿ ತಿಂಡಿ ಅಂಗಡಿಯ ಮಾಲೀಕನೊಬ್ಬ ತನ್ನದೇ ಅಂಗಡಿಯಲ್ಲಿ ಮಾರಾಟಕ್ಕಿಟ್ಟಿದ್ದ ಸಿಹಿತಿಂಡಿಯನ್ನು ತಿನ್ನಲು ನಿರಾಕರಿಸಿ ಸುದ್ದಿಯಾಗಿರುವ ಘಟನೆ ಉತ್ತರ ಪ್ರದೇಶದ ಹಮೀರ್‌ಪುರದಲ್ಲಿ ನಡೆದಿದೆ. ಕಲಬೆರಕೆ ಹಾಗೂ ನಕಲಿ ಸಿಹಿತಿಂಡಿಗಳನ್ನು ಮಾರಾಟ...

ದೇಶದ ಅಭಿವೃದ್ಧಿಗೆ ಕೌಶಲ್ಯದ ಕೊರತೆ ಸವಾಲು: 8.7 ಕೋಟಿ ಯುವಜನರು ಶಿಕ್ಷಣ, ಉದ್ಯೋಗದಿಂದ ವಂಚಿತರಾಗಿದ್ದಾರೆ ಎಂದ ನೀತಿ ಆಯೋಗ

ಭಾರತದ ಆರ್ಥಿಕ ಪ್ರಗತಿ ಹಾಗೂ ಭವಿಷ್ಯದ ಅಭಿವೃದ್ಧಿಯ ಹಾದಿಯಲ್ಲಿ ದೇಶದ ಯುವಶಕ್ತಿಯನ್ನು ಬಳಸಿಕೊಳ್ಳುವುದು ಅತ್ಯಂತ ನಿರ್ಣಾಯಕವಾಗಿದೆ. ಆದರೆ ಪ್ರಸ್ತುತ ದೇಶದಲ್ಲಿ ಕೋಟ್ಯಂತರ ಯುವಜನರು ಯಾವುದೇ ರೀತಿಯ ಶಿಕ್ಷಣ, ಉದ್ಯೋಗ ಅಥವಾ ಕೌಶಲ್ಯ ತರಬೇತಿಯಲ್ಲಿ...

ಮೀಸಲಾತಿ ಭಿಕ್ಷೆಯಲ್ಲ, ಸಾಂವಿಧಾನಿಕ ಹಕ್ಕು: ಕೇಂದ್ರ ಸಚಿವ ಚಿರಾಗ್ ಪಾಸ್ವಾನ್

"ಯಾರದ್ದೋ ಬೇಡಿಕೆಗೆ ಮೀಸಲಾತಿಯನ್ನು ರದ್ದುಗೊಳಿಸಲು ಸಾಧ್ಯವಿಲ್ಲ. ಇದು ತಲೆಮಾರುಗಳಿಂದ ಸಾಮಾಜಿಕ ತಾರತಮ್ಯವನ್ನು ಎದುರಿಸಿದ ಸಮುದಾಯಗಳನ್ನು ಬೆಂಬಲಿಸಲು ಇರುವ ಸಾಂವಿಧಾನಿಕ ಹಕ್ಕು" ಎಂದು ಕೇಂದ್ರ ಸಚಿವ ಚಿರಾಗ್ ಪಾಸ್ವಾನ್ ಶುಕ್ರವಾರ ಹೇಳಿದ್ದಾರೆ. ದೆಹಲಿಗೆ ತೆರಳುವ...

ಸರ್ಕಾರಿ ಶಾಲೆಗೆ ಅತಿಕ್ರಮಣ ಮತ್ತು ಶಿಕ್ಷಕರಿಗೆ ಬೆದರಿಕೆ ಆರೋಪ: ಲಾತೂರ್‌ನಲ್ಲಿ ಸಿಜೆಪಿ ನಾಯಕ ಅಭಿಜೀತ್ ದೀಪ್ಕೆ ವಿರುದ್ಧ ಎಫ್‌ಐಆರ್ ದಾಖಲು

ಅನುಮತಿಯಿಲ್ಲದೆ ಸರ್ಕಾರಿ ಶಾಲೆಯ ತರಗತಿ ಕೊಠಡಿಗೆ ಪ್ರವೇಶಿಸಿ, ಶೈಕ್ಷಣಿಕ ಕಾರ್ಯಗಳಿಗೆ ಅಡ್ಡಿಪಡಿಸಿದ ಹಾಗೂ ಕರ್ತವ್ಯದಲ್ಲಿದ್ದ ಶಿಕ್ಷಕರಿಗೆ ಬೆದರಿಕೆಯೊಡ್ಡಿದ ಆರೋಪದ ಮೇಲೆ ಜಿರಳೆ ಜನತಾ ಪಕ್ಷದ (ಸಿಜೆಪಿ) ಸಂಚಾಲಕ ಅಭಿಜೀತ್ ದೀಪ್ಕೆ ಮತ್ತು ಅವರ...

ಸರ್ಕಾರಿ ಶಾಲೆಗೆ ಅತಿಕ್ರಮಣ ಮತ್ತು ಶಿಕ್ಷಕರಿಗೆ ಬೆದರಿಕೆ ಆರೋಪ: ಲಾತೂರ್‌ನಲ್ಲಿ ಸಿಜೆಪಿ ನಾಯಕ ಅಭಿಜೀತ್ ದೀಪ್ಕೆ ವಿರುದ್ಧ ಎಫ್‌ಐಆರ್ ದಾಖಲು

ಅನುಮತಿಯಿಲ್ಲದೆ ಸರ್ಕಾರಿ ಶಾಲೆಯ ತರಗತಿ ಕೊಠಡಿಗೆ ಪ್ರವೇಶಿಸಿ, ಶೈಕ್ಷಣಿಕ ಕಾರ್ಯಗಳಿಗೆ ಅಡ್ಡಿಪಡಿಸಿದ ಹಾಗೂ ಕರ್ತವ್ಯದಲ್ಲಿದ್ದ ಶಿಕ್ಷಕರಿಗೆ ಬೆದರಿಕೆಯೊಡ್ಡಿದ ಆರೋಪದ ಮೇಲೆ ಜಿರಳೆ ಜನತಾ ಪಕ್ಷದ (ಸಿಜೆಪಿ) ಸಂಚಾಲಕ ಅಭಿಜೀತ್ ದೀಪ್ಕೆ ಮತ್ತು ಅವರ...

ಶೇ.80 ರಷ್ಟು ಮಹಿಳೆಯರು ಕಿರುಕುಳ ಎದುರಿಸುತ್ತಿದ್ದಾರೆ; ಹಿಂಸಾಚಾರವು ಅವರ ಪ್ರಗತಿಗೆ ಅಡ್ಡಿಯಾಗಿದೆ: ರಾಹುಲ್ ಗಾಂಧಿ

ದೇಶದ ಅತಿದೊಡ್ಡ ಆಸ್ತಿಯಾಗಿರುವ ಮಹಿಳೆಯರು ಪ್ರಗತಿ ಸಾಧಿಸುವುದನ್ನು ತಡೆಯಲು ಸಮಾಜದಲ್ಲಿ ಹಿಂಸಾಚಾರವನ್ನು ಬಳಸಲಾಗುತ್ತಿದೆ. ಶೇಕಡಾ 80 ರಷ್ಟು ಜನರು ಕಿರುಕುಳ ಎದುರಿಸುತ್ತಿದ್ದಾರೆ ಎಂದು ಕಾಂಗ್ರೆಸ್‌ ನಾಯಕ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ...

‘ಅಕ್ರಮ ವಲಸಿಗರ ಪರಿಶೀಲನೆ’ ನೆಪದಲ್ಲಿ ಬಂಗಾಳಿ ವಲಸೆ ಕಾರ್ಮಿಕರ ಮೇಲೆ ಬೆಂಗಳೂರು ಪೊಲೀಸರಿಂದ ದೌರ್ಜನ್ಯ: ಜಂಟಿ ಸತ್ಯಶೋಧನಾ ವರದಿ

ಬೆಂಗಳೂರು ನಗರದಲ್ಲಿ ನಡೆದ "ಅಕ್ರಮ ವಲಸಿಗರ ಪರಿಶೀಲನೆ" ಕಾರ್ಯಾಚರಣೆಯ ಹೆಸರಿನಲ್ಲಿ ಬಂಗಾಳಿ ಮಾತನಾಡುವ ವಲಸೆ ಕಾರ್ಮಿಕರನ್ನು ಭಾಷೆ ಮತ್ತು ವರ್ಗದ ಆಧಾರದ ಮೇಲೆ ಪ್ರೊಫೈಲಿಂಗ್ ಮಾಡಿ, ಅವರ ಮೇಲೆ ಅನಿಯಂತ್ರಿತ ಬಂಧನ, ಹಲ್ಲೆ...