ನಾನು ನಾಳೆ ದೆಹಲಿಗೆ ಬರುತ್ತಿದ್ದೇನೆ, ದೇಶವನ್ನು ಒಡೆಯಲು ಕೆಲಸ ಮಾಡುವ ಬಿಜೆಪಿ ದೆಹಲಿಯಲ್ಲಿ ಸರ್ಕಾರವನ್ನು ರಚಿಸಲು ನಾವು ಅನುಮತಿಸುವುದಿಲ್ಲ ಎಂದು ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಅಜಾದ್ ಘೋಷಿಸಿದ್ದಾರೆ.
ಸಂವಿಧಾನವನ್ನು ಹಿಡಿದುಕೊಂಡು ಒಂದು ನಿಮಿಷದ ವಿಡಿಯೋವನ್ನು ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿರುವ ಅವರು ಜೈ ಭೀಮ್ ಸ್ನೇಹಿತರೇ, ಗೌರವಾನ್ವಿತ ನ್ಯಾಯಾಲಯವು ನನಗೆ ದೆಹಲಿಗೆ ಬರಲು ಅವಕಾಶ ನೀಡಿದೆ, ನಾನು ನ್ಯಾಯಾಂಗಕ್ಕೆ ಧನ್ಯವಾದ ಹೇಳುತ್ತೇನೆ, ಇದು ನ್ಯಾಯಾಂಗದಲ್ಲಿ ಜನರ ವಿಶ್ವಾಸವನ್ನು ಇನ್ನಷ್ಟು ಹೆಚ್ಚಿಸುತ್ತದೆ. ಇದು ಸಂವಿಧಾನದ ವಿಜಯ ಎಂದು ತಿಳಿಸಿದ್ದಾರೆ.
जय भीम साथियों, माननीय न्यायालय ने मुझे दिल्ली आने की इजाजत दे दी है मैं न्यायपालिका का धन्यवाद करता हूँ,इससे न्यायपालिका में लोगों का विश्वास और बढ़ेगा। यह संविधान की जीत है। मैं कल दिल्ली आ रहा हूँ देश को तोड़ने का काम कर रही भाजपा सरकार को हम दिल्ली में सरकार नही बनाने देंगे। pic.twitter.com/uJn3bhjpX5
— Chandra Shekhar Aazad (@BhimArmyChief) January 21, 2020
ನಾನು ದೆಹಲಿಗೆ ಬಂದು ಅಕ್ಕಂದಿರನ್ನು, ಅಮ್ಮಂದಿರುನ್ನು ಸಹೋದರರನ್ನು ಭೇಟಿಯಾಗುತ್ತೇನೆ. ಇವರು ಬಹಳ ದಿನಗಳಿಂದ ಸಿಎಎ, ಎನ್ಆರ್ಸಿ ವಿರುದ್ಧ ಹೋರಾಡುತ್ತಿದ್ದಾರೆ. ಅವರ ಸಂಘರ್ಷದೊಂದಿಗೆ ನಾನು ಪಾಲುದಾರನಾಗುತ್ತೇನೆ.
ಕೇಂದ್ರದಲ್ಲಿ ಬಿಜೆಪಿ ಸರ್ಕಾರವಿದೆ. ಇದು ಸಂವಿಧಾನದ ವಿರುದ್ಧವಿದ್ದು ರಾಜ್ಯದಲ್ಲಿಯೂ ಅದೇ ಸರ್ಕಾರ ಜಾರಿಗೆ ಬಂದರೆ ಜನರ ಗೋಳು ಹೇಳತೀರದು. ಸಂವಿಧಾನದ ಆಶಯಗಳು ಮಣ್ಣುಪಾಲಾಗುತ್ತವೆ. ಹಾಗಾಗಿ ಅದನ್ನು ತಡೆಯುವುದು ನಮ್ಮ ಜವಬ್ದಾರಿ ಎಂದು ಅಜಾದ್ ತಿಳಿಸಿದ್ದಾರೆ.