Homeಅಂಕಣಗಳುಲಸಿಕಾಯಣ: ಲಸಿಕೆಯೋ, ಔಷಧಿಯೋ, ಭೈರವಿ ಭಜನೆಯೋ

ಲಸಿಕಾಯಣ: ಲಸಿಕೆಯೋ, ಔಷಧಿಯೋ, ಭೈರವಿ ಭಜನೆಯೋ

- Advertisement -
- Advertisement -

ಇಪ್ಪತ್ತೊಂದು ದಿವಸ ಮನ್ಯಾಗ ಕುತಗೊಂಡು ಎಲ್ಲಾರಿಗೂ ಸಾಕಾಗಿ ಹೋಗೇತಿ. ಕೆಲವರಂತೂ ಕುಂತಲ್ಲೇ ಕುಂತು ಕುಂತು ಬೂಳಸ ಬಂದು ಬಿಟ್ಟಾರು.

ಜನರಿಗೆ ನೀವು ಠೀವಿ ನೋಡ್ರಿ, ಫೋನಿನ್ಯಾಗ ಸಮಾಜ ವಿರೋಧಿ ಮಾಧ್ಯಮದ ಪೋಸ್ಟುಗಳನ್ನ ಪೋಸ್ಟಮೆನ್‍ಗತೆ ಮಂದಿಗೆ ಹಂಚಿಕೊಂತ ಕೂತ ಬಿಡ್ರಿ ಅಂದರ ಹೂಂ ಅಂತೇವಿ. ಆದರ “ನೀವು ಹಿಂಗ ಇರಬ್ಯಾಡ್ರಿ, ಒಂದು ಈಟು ಬುದ್ಧಿ ಉಪಯೋಗ ಮಾಡ್ರಿ” ಅಂತ ಅಂದರ ಹೆಂಗ? ಅದೊಂದು ಬಿಟ್ಟು ಬ್ಯಾರೆ ಏನರ ಹೇಳರಿ, ಮಾಡೇವಿ, ಇದನ್ನ ಮಾತ್ರ ಅನಬ್ಯಾಡ್ರಿ,” ಅಂತ ಅಂತೀರೇನೋ? ಇರಲಿ, ಇದೊಂದು ಸಲ ಕೇಳ್ರಿ.

`ಈ ಕೊರೊನಾ ವೈರಸ್ಸನ ಅಪಾಯವನ್ನೇ ನಮ್ಮ ವಿಜ್ಞಾನಿಗಳು ಅನ್ನಿಸಿಕೊಳ್ಳೋರು ಅರ್ಥ ಮಾಡಿಕೊಂಡಿಲ್ಲ, ಇನ್ನ ಇಸ್ಲಾಮಿನ ಅಪಾಯವನ್ನು ಹೇಗೆ ಅರ್ಥ ಮಾಡಿಕೊಂಡಾರು ಅಂತ ಹೇಳಿ ನಮ್ಮ ನವ್ಯಾತೀತ ಚಿಂತಕ ಅನಂತ ಕುಮಾರ ಹೆಗಡೆ ಅವರು ಹೇಳ್ಯಾರ. ಸರ್ವೇ ಸಾಮಾನ್ಯವಾಗಿ ಅವರು ಮಾತಾಡೋದು ಕಮ್ಮಿ. ಅವರ ಕೈ ಆಡೋದ ಜಾಸ್ತಿ. ಹಿಂಗಾಗಿ ಅವರೇನೋ ಅಪರೂಪಕ್ಕೊಮ್ಮೆ ಮಾತಾಡಿರಬೇಕು ಅಂತ ಜನಾ ಸುಮ್ಮನಿರಬೇಕು.

ಆದರ ನಿಜವಾಗಿಯೂ ವಿಜ್ಞಾನಿಗಳಿಗೆ ಈ ಕರೋನಾ ಅಥವಾ ಕಿರೀಟಿ ವೈರಸ್ಸು ವ್ಯಾಧಿಯನ್ನು ಅರ್ಥ ಮಾಡಿಕೊಳ್ಳೋದರಾಗ ಹಿಂಬರಿಕಿ ಆಗೇದೇನು? ಅವರು ಸೋತು ಹೋಗ್ಯಾರೇನು? ಅವರಿಗೆ ಅರ್ಥನ ಆಗಿಲ್ಲಾ ಅಂದರ ನಮ್ಮ ಗತಿ ಏನು?

ಈ ಹೊಸಾ ಇಂಗ್ಲೀಷ ಪಿಚ್ಚರ ಬಂದಿರತಾವಲ್ಲಾ. ಅದರಾಗ ಯಾವಾನೋ ಒಬ್ಬವ ರಷಿಯಾ/ ಇರಾನ/ ‍ಅಫಘಾನಿಸ್ತಾನ/ ಉತ್ತರ ಕೋರಿಯಾದಿಂದ ಬರತಾನ, ಯಾರಿಗೂ ಗೊತ್ತಾಗದಂಗ ಜನರ ನಡುವ ಒಂದು ವೈರಸ್ ಬಿಟ್ಟ ಬಿಡತಾನ.

ಇದರಿಂದಾಗಿ ಹೀರೋ- ಹಿರೋಯಿನಿ ಇಬ್ಬಳಾರನ್ನ ಬಿಟ್ಟು ಎಲ್ಲಾರು ಷಟದು ಹೋಗತಾರು. ಕಡೀಕೆ ಅದಕ್ಕ ಒಂದು ಭಾರತೀಯ/ ಪೂರ್ವ ಯುರೋಪಿಯನ್ನ/ ಆಫ್ರಿಕನ್ ವಿಜ್ಞಾನಿ ಎಂಟಿಡೋಟು ಅಥವಾ ನಂಜುಮುರಕಾ ಕಂಡು ಹಿಡಿತಾನ. ಅದರಿಂದ ಕೆಲವರ ಜೀವ ಉಳೀತೇತಿ.

ಈಗನೂ ಹಂಗ ಆಗೋದ ಐತೇನು? ನಾವೆಲ್ಲಾ ಭೈರವಿ ಭಜನೆ ಹಾಡಿಕೊಂತ ಹೋಗಾವರ ಅದೇವೇನು?

ಇಂಥಾ ಎಲ್ಲಾ ಪ್ರಶ್ನಿಗಳ ಉತ್ತರ ಏನು ಅಂತ ಅಂದರ. “ಇಲ್ಲಾ”. ವಿಜ್ಞಾನಿಗಳು- ಭಾರತೀರಾಗಿರಲಿ, ಹೊರಗಿನವರಾಗಿರಲಿ, ಇದರ ಮ್ಯಾಲೆ ಭಾಳ ಕೆಲಸಾ ಮಾಡಾಕುಂತಾರು. ಮನಿ- ಮಠಾ ಬಿಟ್ಟು ಹಗಲೂ -ರಾತ್ರಿ ಅದರಾಗ ಸಂಶೋಧನೆ ನಡದೇತಿ. ಎಂದಿನಂತೆ ನಮ್ಮ ಸರಕಾರಗಳು ಇಂಥಾದೆಲ್ಲಾ ನಮ್ಮಿಂದ ಮುಚ್ಚಿ ಇಡಾಕ ಹತ್ಯಾರ.

ಇದು ಎರಡು ಲೆವಲ್ಲಿನೊಳಗ ಕೆಲಸ ನಡದದ. ಒಂದು ಲಸಿಕೆ ತಯಾರು ಮಾಡೋದು, ಇನ್ನೊಂದು ಔಷಧಿ ಕಂಡು ಹಿಡಿಯೋದು.

ಇದರೊಳಗ ಒಂದು ಸಣ್ಣ ವ್ಯತ್ಯಾಸ ಅದ.

ಔಷಧಿ ಅಂದರ ರಸಾಯನಶಾಸ್ತ್ರದ ಸಂಶೋಧನೆಯೊಳಗಿಂದ ಹುಟ್ಟೋದು. ಲಸಿಕೆ ಉಪಯೋಗ ಅಂದರ ಜೀವಶಾಸ್ತ್ರಜ್ಞರ ತಡಕಾಟ.

ಔಷಧಿ ಅಂದರ ಕೆಲವು ರಸಾಯನಿಕಗಳನ್ನ ತೊಗೊಳ್ಳೋದು, ಅವು ಬ್ಯಾಕ್ಟೀರಿಯಾ, ವೈರಸ್ಸು ಅಥವಾ ಇತರ ರೋಗಾಣುಗಳನ್ನು ನಿಷ್ಕ್ರಿಯ ಗೊಳಿಸತದೋ ಇಲ್ಲೋ ಅಂತ ನೋಡೋದು.

ಇದು ಸಾಮಾನ್ಯವಾಗಿ ಆಗತದ ಅಂದರ ಆ ರೋಗಾಣುವಿನ ಜೀವಕೋಶದ ಚರ್ಮವನ್ನು ಕರಗಿಸಿ ಬಿಡತದ. ಔಷಧಿ ಶಾಸ್ತ್ರಜ್ಞರು ಹೆಂಗ ಮಾಡತಾರ ಅಂದರ ಈಗ ಮಾರುಕಟ್ಟೆಯೊಳಗ ಇರೋ ಔಷಧಿಗಳನ್ನು ಬೇರೆ ಬೇರೆ ರೋಗಗಳನ್ನ ಗುಣ ಪಡಿಸಲಿಕ್ಕೆ ಉಪಯೋಗ ಮಾಡತಾರ. ಇದಕ್ಕ ರಿಪರಪಸಿಂಗ ಅಥವಾ ಮರುಪ್ರಯೋಜನ ಮಾಡೋದು ಅಂತಾರ.

ಕರೋನಾದ ವಿರುದ್ಧ ರೆಮೆಡೆಸಿವಿರ, ಏಸೈಕ್ಲೋವಿರ, ಪೆನ್ಸಿಕ್ಲೋವಿರ, ಫಾವಿಪಿರಾವಿರ ಮುಂತಾದ ಔಷಧಿ ಬಗ್ಗೆ ಸಂಶೋಧನೆ ನಡದದ. ಇನ್ನು ನಮ್ಮ ಟ್ರಂಪಣ್ಣನವರ ಧಮಕಿ ಡ್ರಗ್ ಹೈಡ್ರೋಕ್ಸಿ ಕ್ಲೋರೋಕ್ವಿನ್ ಸಹಿತ ಉಪಯೋಗಸಲಿಕ್ಕೆ ಹತ್ಯಾರ. ಇದರಾಗ ಯಾವುದು ಹೆಚ್ಚು ಪ್ರಾಯೋಜಕ ಅನಸತದೋ ಅದನ್ನ ಎಲ್ಲಾರಿಗೂ ಕೊಡತಾರ.

ಇವೆಲ್ಲಾ ಈಗ ಬೇರೆ ಬೇರೆ ರೋಗಗಳಿಗೆ ಬಳಸೋ ಔಷಧಿ. ಇವನ್ನು ಉಪಯೋಗಿಸೋ ಔಚಿತ್ಯ ಏನಂದರ ಹೊಸಾ ಔಷಧಿ ಕಂಡು ಹಿಡೀಬೇಕು ಅಂದರ ಅದಕ್ಕ ಹತ್ತು- ಇಪ್ಪತ್ತು ವರ್ಷ ಹಿಡೀತದ. ಯಾಕಂದರ ಅದನ್ನ ಮದಲಿಗೆ ಪ್ರಾಣಿಗಳ ಮ್ಯಾಲೆ, ಆಮ್ಯಾಲೆ ಮನುಷರ ಮ್ಯಾಲೆ ಪ್ರಯೋಗ ಮಾಡಿ ಆಮ್ಯಾಲೆ ಮಾರುಕಟ್ಟೆ ಒಳಗ ಬಿಡಬೇಕಾಗತದ.

ಇನ್ನ ಲಸಿಕೆ ಅಂದರ ಯಾವ ವೈರಸ್ಸು ರೋಗಾಣುಗಳ ವಿರುದ್ಧ ನೀವು ಲಸಿಕೆ ತಯಾರಿಸಲಿಕ್ಕೆ ಹೊಂಟಿರತೀರೋ ಅದರದ ನಿರುಪದ್ರವಿ ರೂಪವೊಂದನ್ನ ತಯಾರು ಮಾಡಿ ನಿಮಗ ಕೊಡೋದು. ಅದರಿಂದ ನಿಮ್ಮ ದೇಹದ ರೋಗ ನಿರೋಧಕ ಶಕ್ತಿ ಅದರ ವಿರುದ್ಧ ಹೋರಾಡೋವಂಥಾ ಪ್ರತಿಜೀವಿಗಳನ್ನ ತಯಾರು ಮಾಡತದ. ಇಂಥಾ ಲಸಿಕೆ ಸುಮಾರು 60-80 ಶೇಕಡಾ ಜನರಿಗೆ ಸಿಕ್ಕಿತಲಾ ಅಂದರ ಇಡೀ ಜನಸಂಖ್ಯೆಗೆ ರೋಗ ನಿರೋಧಕ ಶಕ್ತಿ ಬರತದ.

ಇವೆರಡೂ ಆಗಲಿಲ್ಲ ಅಂದರ ಸರಕಾರ ಕೈಚೆಲ್ಲಿ ಕುತಕೋಬೇಕು. ಅವಾಗ ಎನಾಗತದ ಅಂದರ ಕೆಲವು ದಶಕಗಳ ನಂತರ ಹಿಂಡು ನಿರೋಧ ಬರತದ. ಅಷ್ಟರೊಳಗ ಭಾಳ ಜನ ಸ್ವರ್ಗ ವಾಸಿಗಳಾಗಿರತಾರ. ಆಗ ನಮ್ಮಲ್ಲಿ ಹಣೆಬರಾ ಗಟ್ಟಿ ಇದ್ದು ಉಳದೋರು, ಮತ್ತು ನಾವು ಆರಿಸಿ ಕಳಿಸಿದವರು ಕೋಲಾಟ ಆಡಬಹುದು – ಯಾರು ಹಿತವರು ನಿನಗೆ ಈ ಮೂವರೊಳಗ ಅಂತ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...