Homeಅಂಕಣಗಳುಲಸಿಕಾಯಣ: ಲಸಿಕೆಯೋ, ಔಷಧಿಯೋ, ಭೈರವಿ ಭಜನೆಯೋ

ಲಸಿಕಾಯಣ: ಲಸಿಕೆಯೋ, ಔಷಧಿಯೋ, ಭೈರವಿ ಭಜನೆಯೋ

- Advertisement -
- Advertisement -

ಇಪ್ಪತ್ತೊಂದು ದಿವಸ ಮನ್ಯಾಗ ಕುತಗೊಂಡು ಎಲ್ಲಾರಿಗೂ ಸಾಕಾಗಿ ಹೋಗೇತಿ. ಕೆಲವರಂತೂ ಕುಂತಲ್ಲೇ ಕುಂತು ಕುಂತು ಬೂಳಸ ಬಂದು ಬಿಟ್ಟಾರು.

ಜನರಿಗೆ ನೀವು ಠೀವಿ ನೋಡ್ರಿ, ಫೋನಿನ್ಯಾಗ ಸಮಾಜ ವಿರೋಧಿ ಮಾಧ್ಯಮದ ಪೋಸ್ಟುಗಳನ್ನ ಪೋಸ್ಟಮೆನ್‍ಗತೆ ಮಂದಿಗೆ ಹಂಚಿಕೊಂತ ಕೂತ ಬಿಡ್ರಿ ಅಂದರ ಹೂಂ ಅಂತೇವಿ. ಆದರ “ನೀವು ಹಿಂಗ ಇರಬ್ಯಾಡ್ರಿ, ಒಂದು ಈಟು ಬುದ್ಧಿ ಉಪಯೋಗ ಮಾಡ್ರಿ” ಅಂತ ಅಂದರ ಹೆಂಗ? ಅದೊಂದು ಬಿಟ್ಟು ಬ್ಯಾರೆ ಏನರ ಹೇಳರಿ, ಮಾಡೇವಿ, ಇದನ್ನ ಮಾತ್ರ ಅನಬ್ಯಾಡ್ರಿ,” ಅಂತ ಅಂತೀರೇನೋ? ಇರಲಿ, ಇದೊಂದು ಸಲ ಕೇಳ್ರಿ.

`ಈ ಕೊರೊನಾ ವೈರಸ್ಸನ ಅಪಾಯವನ್ನೇ ನಮ್ಮ ವಿಜ್ಞಾನಿಗಳು ಅನ್ನಿಸಿಕೊಳ್ಳೋರು ಅರ್ಥ ಮಾಡಿಕೊಂಡಿಲ್ಲ, ಇನ್ನ ಇಸ್ಲಾಮಿನ ಅಪಾಯವನ್ನು ಹೇಗೆ ಅರ್ಥ ಮಾಡಿಕೊಂಡಾರು ಅಂತ ಹೇಳಿ ನಮ್ಮ ನವ್ಯಾತೀತ ಚಿಂತಕ ಅನಂತ ಕುಮಾರ ಹೆಗಡೆ ಅವರು ಹೇಳ್ಯಾರ. ಸರ್ವೇ ಸಾಮಾನ್ಯವಾಗಿ ಅವರು ಮಾತಾಡೋದು ಕಮ್ಮಿ. ಅವರ ಕೈ ಆಡೋದ ಜಾಸ್ತಿ. ಹಿಂಗಾಗಿ ಅವರೇನೋ ಅಪರೂಪಕ್ಕೊಮ್ಮೆ ಮಾತಾಡಿರಬೇಕು ಅಂತ ಜನಾ ಸುಮ್ಮನಿರಬೇಕು.

ಆದರ ನಿಜವಾಗಿಯೂ ವಿಜ್ಞಾನಿಗಳಿಗೆ ಈ ಕರೋನಾ ಅಥವಾ ಕಿರೀಟಿ ವೈರಸ್ಸು ವ್ಯಾಧಿಯನ್ನು ಅರ್ಥ ಮಾಡಿಕೊಳ್ಳೋದರಾಗ ಹಿಂಬರಿಕಿ ಆಗೇದೇನು? ಅವರು ಸೋತು ಹೋಗ್ಯಾರೇನು? ಅವರಿಗೆ ಅರ್ಥನ ಆಗಿಲ್ಲಾ ಅಂದರ ನಮ್ಮ ಗತಿ ಏನು?

ಈ ಹೊಸಾ ಇಂಗ್ಲೀಷ ಪಿಚ್ಚರ ಬಂದಿರತಾವಲ್ಲಾ. ಅದರಾಗ ಯಾವಾನೋ ಒಬ್ಬವ ರಷಿಯಾ/ ಇರಾನ/ ‍ಅಫಘಾನಿಸ್ತಾನ/ ಉತ್ತರ ಕೋರಿಯಾದಿಂದ ಬರತಾನ, ಯಾರಿಗೂ ಗೊತ್ತಾಗದಂಗ ಜನರ ನಡುವ ಒಂದು ವೈರಸ್ ಬಿಟ್ಟ ಬಿಡತಾನ.

ಇದರಿಂದಾಗಿ ಹೀರೋ- ಹಿರೋಯಿನಿ ಇಬ್ಬಳಾರನ್ನ ಬಿಟ್ಟು ಎಲ್ಲಾರು ಷಟದು ಹೋಗತಾರು. ಕಡೀಕೆ ಅದಕ್ಕ ಒಂದು ಭಾರತೀಯ/ ಪೂರ್ವ ಯುರೋಪಿಯನ್ನ/ ಆಫ್ರಿಕನ್ ವಿಜ್ಞಾನಿ ಎಂಟಿಡೋಟು ಅಥವಾ ನಂಜುಮುರಕಾ ಕಂಡು ಹಿಡಿತಾನ. ಅದರಿಂದ ಕೆಲವರ ಜೀವ ಉಳೀತೇತಿ.

ಈಗನೂ ಹಂಗ ಆಗೋದ ಐತೇನು? ನಾವೆಲ್ಲಾ ಭೈರವಿ ಭಜನೆ ಹಾಡಿಕೊಂತ ಹೋಗಾವರ ಅದೇವೇನು?

ಇಂಥಾ ಎಲ್ಲಾ ಪ್ರಶ್ನಿಗಳ ಉತ್ತರ ಏನು ಅಂತ ಅಂದರ. “ಇಲ್ಲಾ”. ವಿಜ್ಞಾನಿಗಳು- ಭಾರತೀರಾಗಿರಲಿ, ಹೊರಗಿನವರಾಗಿರಲಿ, ಇದರ ಮ್ಯಾಲೆ ಭಾಳ ಕೆಲಸಾ ಮಾಡಾಕುಂತಾರು. ಮನಿ- ಮಠಾ ಬಿಟ್ಟು ಹಗಲೂ -ರಾತ್ರಿ ಅದರಾಗ ಸಂಶೋಧನೆ ನಡದೇತಿ. ಎಂದಿನಂತೆ ನಮ್ಮ ಸರಕಾರಗಳು ಇಂಥಾದೆಲ್ಲಾ ನಮ್ಮಿಂದ ಮುಚ್ಚಿ ಇಡಾಕ ಹತ್ಯಾರ.

ಇದು ಎರಡು ಲೆವಲ್ಲಿನೊಳಗ ಕೆಲಸ ನಡದದ. ಒಂದು ಲಸಿಕೆ ತಯಾರು ಮಾಡೋದು, ಇನ್ನೊಂದು ಔಷಧಿ ಕಂಡು ಹಿಡಿಯೋದು.

ಇದರೊಳಗ ಒಂದು ಸಣ್ಣ ವ್ಯತ್ಯಾಸ ಅದ.

ಔಷಧಿ ಅಂದರ ರಸಾಯನಶಾಸ್ತ್ರದ ಸಂಶೋಧನೆಯೊಳಗಿಂದ ಹುಟ್ಟೋದು. ಲಸಿಕೆ ಉಪಯೋಗ ಅಂದರ ಜೀವಶಾಸ್ತ್ರಜ್ಞರ ತಡಕಾಟ.

ಔಷಧಿ ಅಂದರ ಕೆಲವು ರಸಾಯನಿಕಗಳನ್ನ ತೊಗೊಳ್ಳೋದು, ಅವು ಬ್ಯಾಕ್ಟೀರಿಯಾ, ವೈರಸ್ಸು ಅಥವಾ ಇತರ ರೋಗಾಣುಗಳನ್ನು ನಿಷ್ಕ್ರಿಯ ಗೊಳಿಸತದೋ ಇಲ್ಲೋ ಅಂತ ನೋಡೋದು.

ಇದು ಸಾಮಾನ್ಯವಾಗಿ ಆಗತದ ಅಂದರ ಆ ರೋಗಾಣುವಿನ ಜೀವಕೋಶದ ಚರ್ಮವನ್ನು ಕರಗಿಸಿ ಬಿಡತದ. ಔಷಧಿ ಶಾಸ್ತ್ರಜ್ಞರು ಹೆಂಗ ಮಾಡತಾರ ಅಂದರ ಈಗ ಮಾರುಕಟ್ಟೆಯೊಳಗ ಇರೋ ಔಷಧಿಗಳನ್ನು ಬೇರೆ ಬೇರೆ ರೋಗಗಳನ್ನ ಗುಣ ಪಡಿಸಲಿಕ್ಕೆ ಉಪಯೋಗ ಮಾಡತಾರ. ಇದಕ್ಕ ರಿಪರಪಸಿಂಗ ಅಥವಾ ಮರುಪ್ರಯೋಜನ ಮಾಡೋದು ಅಂತಾರ.

ಕರೋನಾದ ವಿರುದ್ಧ ರೆಮೆಡೆಸಿವಿರ, ಏಸೈಕ್ಲೋವಿರ, ಪೆನ್ಸಿಕ್ಲೋವಿರ, ಫಾವಿಪಿರಾವಿರ ಮುಂತಾದ ಔಷಧಿ ಬಗ್ಗೆ ಸಂಶೋಧನೆ ನಡದದ. ಇನ್ನು ನಮ್ಮ ಟ್ರಂಪಣ್ಣನವರ ಧಮಕಿ ಡ್ರಗ್ ಹೈಡ್ರೋಕ್ಸಿ ಕ್ಲೋರೋಕ್ವಿನ್ ಸಹಿತ ಉಪಯೋಗಸಲಿಕ್ಕೆ ಹತ್ಯಾರ. ಇದರಾಗ ಯಾವುದು ಹೆಚ್ಚು ಪ್ರಾಯೋಜಕ ಅನಸತದೋ ಅದನ್ನ ಎಲ್ಲಾರಿಗೂ ಕೊಡತಾರ.

ಇವೆಲ್ಲಾ ಈಗ ಬೇರೆ ಬೇರೆ ರೋಗಗಳಿಗೆ ಬಳಸೋ ಔಷಧಿ. ಇವನ್ನು ಉಪಯೋಗಿಸೋ ಔಚಿತ್ಯ ಏನಂದರ ಹೊಸಾ ಔಷಧಿ ಕಂಡು ಹಿಡೀಬೇಕು ಅಂದರ ಅದಕ್ಕ ಹತ್ತು- ಇಪ್ಪತ್ತು ವರ್ಷ ಹಿಡೀತದ. ಯಾಕಂದರ ಅದನ್ನ ಮದಲಿಗೆ ಪ್ರಾಣಿಗಳ ಮ್ಯಾಲೆ, ಆಮ್ಯಾಲೆ ಮನುಷರ ಮ್ಯಾಲೆ ಪ್ರಯೋಗ ಮಾಡಿ ಆಮ್ಯಾಲೆ ಮಾರುಕಟ್ಟೆ ಒಳಗ ಬಿಡಬೇಕಾಗತದ.

ಇನ್ನ ಲಸಿಕೆ ಅಂದರ ಯಾವ ವೈರಸ್ಸು ರೋಗಾಣುಗಳ ವಿರುದ್ಧ ನೀವು ಲಸಿಕೆ ತಯಾರಿಸಲಿಕ್ಕೆ ಹೊಂಟಿರತೀರೋ ಅದರದ ನಿರುಪದ್ರವಿ ರೂಪವೊಂದನ್ನ ತಯಾರು ಮಾಡಿ ನಿಮಗ ಕೊಡೋದು. ಅದರಿಂದ ನಿಮ್ಮ ದೇಹದ ರೋಗ ನಿರೋಧಕ ಶಕ್ತಿ ಅದರ ವಿರುದ್ಧ ಹೋರಾಡೋವಂಥಾ ಪ್ರತಿಜೀವಿಗಳನ್ನ ತಯಾರು ಮಾಡತದ. ಇಂಥಾ ಲಸಿಕೆ ಸುಮಾರು 60-80 ಶೇಕಡಾ ಜನರಿಗೆ ಸಿಕ್ಕಿತಲಾ ಅಂದರ ಇಡೀ ಜನಸಂಖ್ಯೆಗೆ ರೋಗ ನಿರೋಧಕ ಶಕ್ತಿ ಬರತದ.

ಇವೆರಡೂ ಆಗಲಿಲ್ಲ ಅಂದರ ಸರಕಾರ ಕೈಚೆಲ್ಲಿ ಕುತಕೋಬೇಕು. ಅವಾಗ ಎನಾಗತದ ಅಂದರ ಕೆಲವು ದಶಕಗಳ ನಂತರ ಹಿಂಡು ನಿರೋಧ ಬರತದ. ಅಷ್ಟರೊಳಗ ಭಾಳ ಜನ ಸ್ವರ್ಗ ವಾಸಿಗಳಾಗಿರತಾರ. ಆಗ ನಮ್ಮಲ್ಲಿ ಹಣೆಬರಾ ಗಟ್ಟಿ ಇದ್ದು ಉಳದೋರು, ಮತ್ತು ನಾವು ಆರಿಸಿ ಕಳಿಸಿದವರು ಕೋಲಾಟ ಆಡಬಹುದು – ಯಾರು ಹಿತವರು ನಿನಗೆ ಈ ಮೂವರೊಳಗ ಅಂತ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೆನಡಾದಲ್ಲಿ ನೆಲಮಂಗಲ ಮೂಲದ 37ವರ್ಷದ ಟೆಕ್ಕಿಯನ್ನು ಗುಂಡಿಟ್ಟು ಹತ್ಯೆ ಮಾಡಿದ ಅಪರಿಚಿತ ಗುಂಪು 

ಬೆಂಗಳೂರು: ಕೆನಡಾದ ಟೊರೊಂಟೊದಲ್ಲಿರುವ ಜನನಿಬಿಡ ಶಾಪಿಂಗ್ ಸೆಂಟರ್‌ನ ಪಾರ್ಕಿಂಗ್ ಸ್ಥಳದಲ್ಲಿ ಅಪರಿಚಿತ ವ್ಯಕ್ತಿಗಳು ಗುಂಡು ಹಾರಿಸಿ ಬೆಂಗಳೂರು ಮೂಲದ 37 ವರ್ಷದ ಟೆಕ್ಕಿಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನೆಲಮಂಗಲ ಬಳಿಯ ತ್ಯಾಮಗೊಂಡ್ಲು ನಿವಾಸಿ...

ತೆಲಂಗಾಣ| ಪುರಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಬಿಜೆಪಿ ಅಭ್ಯರ್ಥಿ ಆತ್ಮಹತ್ಯೆಗೆ ಶರಣು; ಕುಟುಂಬದಿಂದ ಬೆದರಿಕೆ ಆರೋಪ

ಪುರಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ವ್ಯಕ್ತಿಯೊಬ್ಬ ಆತ್ಮಹತ್ಯೆಯಿಂದ ಸಾವನ್ನಪ್ಪಿರುವ ಘಟನೆ ತೆಲಂಗಾಣದಿಂದ ವರದಿಯಾಗಿದೆ. ಸೋಮವಾರ ತಡರಾತ್ರಿ ನಾರಾಯಣಪೇಟೆ ಜಿಲ್ಲೆಯ ಮಕ್ತಲ್ ಪುರಸಭೆಯಲ್ಲಿ ಈ ಘಟನೆ ನಡೆದಿದೆ. ಮಕ್ತಲ್ ಪುರಸಭೆಯ...

ದ್ವೇಷ ಭಾಷಣ : ಅಸ್ಸಾಂ ಸಿಎಂ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಕಮ್ಯುನಿಸ್ಟ್ ಪಕ್ಷಗಳು

ಮುಸ್ಲಿಮರ ವಿರುದ್ಧ ಪದೇ ಪದೇ ದ್ವೇಷ ಕಾರುತ್ತಿರುವ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಕಮ್ಯುನಿಷ್ಟ್ ಪಾರ್ಟಿ ಆಫ್ ಇಂಡಿಯಾ (ಮಾರ್ಕಿಸ್ಟ್ -ಸಿಪಿಐ (ಎಂ)) ಮತ್ತು ಕಮ್ಯುನಿಷ್ಟ್...

ಬಿಹಾರ: ಬಹುಜನ ಸಮುದಾಯಗಳಲ್ಲಿ ಉನ್ನತ ಶಿಕ್ಷಣವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಬೋಧ್ ಗಯಾದಲ್ಲಿ ಬಹುಜನ ವಿದ್ವಾಂಸರ ಸಮ್ಮೇಳನ

ಭಾರತದ ಪ್ರಮುಖ ವಿಶ್ವವಿದ್ಯಾಲಯಗಳ ವಿದ್ವಾಂಸರು, ಶಿಕ್ಷಣ ತಜ್ಞರು ಮತ್ತು ಸಾಮಾಜಿಕ ಕಾರ್ಯಕರ್ತರು ಬೋಧ್ ಗಯಾದಲ್ಲಿ ಒಟ್ಟುಗೂಡಿ ಬಹುಜನ ಸಮುದಾಯಕ್ಕೆ ಸಮಾನತೆ ಮತ್ತು ಸಾಮಾಜಿಕ ಪರಿವರ್ತನೆಯನ್ನು ಮುನ್ನಡೆಸುವಲ್ಲಿ ಉನ್ನತ ಶಿಕ್ಷಣದ ಪಾತ್ರದ ಕುರಿತು ಚರ್ಚಿಸಿದರು. ಫೆಬ್ರವರಿ...

ಭಾರತೀಯ ಬಿಷಪ್‌ಗಳ ಸಂಸ್ಥೆಯ ಮುಖ್ಯಸ್ಥರಾಗಿ ದಲಿತ ಕಾರ್ಡಿನಲ್ ಪೂಲಾ ಆಯ್ಕೆ

ಭಾರತೀಯ ಬಿಷಪ್‌ಗಳ ಸಂಸ್ಥೆಯ ಮುಖ್ಯಸ್ಥರಾಗಿ ದಲಿತ ಕಾರ್ಡಿನಲ್ ಪೂಲಾ ಅವರು ಆಯ್ಕೆಯಾಗಿದ್ದಾರೆ. ಭಾರತದ ಕ್ಯಾಥೋಲಿಕ್‌ಗಳಲ್ಲಿ ಸುಮಾರು ಮೂರನೇ ಎರಡರಷ್ಟು ಜನಸಂಖ್ಯೆ ದಲಿತರೇ ಇದ್ದಾರೆ ಎಂದು ನಂಬಲಾಗಿದ್ದರೂ, ಅವರು ಧಾರ್ಮಿಕ ಆಚರಣೆ ಮತ್ತು ಬಿಷಪ್‌...

ಪಶ್ಚಿಮ ಬಂಗಾಳ ಎಸ್‌ಐಆರ್ ಗಡುವು ವಿಸ್ತರಿಸಲು ಸುಪ್ರೀಂ ಕೋರ್ಟ್ ನಿರ್ದೇಶನ

ಪಶ್ಚಿಮ ಬಂಗಾಳದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಸೋಮವಾರ (ಫೆ.9) ಹಲವಾರು ನಿರ್ದೇಶನಗಳನ್ನು ನೀಡಿದೆ. ಚುನಾವಣಾ ಆಯೋಗವು ನಿಯೋಜಿಸಿರುವ ಮೈಕ್ರೋ-ಅಬ್ಸರ್ವರ್‌ಗಳ (ಸೂಕ್ಷ್ಮ ವೀಕ್ಷಕರು) ಬದಲಿಗೆ ಗ್ರೂಪ್...

ಮುಸ್ಲಿಮರಿಗೆ ಗುಂಡಿಕ್ಕುವಂತೆ ವಿಡಿಯೋ ಹಂಚಿಕೆ: ಅಸ್ಸಾಂ ಸಿಎಂ ವಿರುದ್ಧ ಓವೈಸಿ ದೂರು: ದ್ವೇಷ ಭಾಷಣ ಆದೇಶ ಉಲ್ಲೇಖ 

ಅಸ್ಸಾಂ ಬಿಜೆಪಿ ಘಟಕದ ಅಧಿಕೃತ 'ಎಕ್ಸ್' ಹ್ಯಾಂಡಲ್‌ನಲ್ಲಿ ಪೋಸ್ಟ್ ಮಾಡಲಾದ ಮತ್ತು ಈಗ ಅಳಿಸಲಾದ ವೀಡಿಯೊದಲ್ಲಿ, ಮುಸ್ಲಿಮರ ಮೇಲೆ ಸಾಂಕೇತಿಕವಾಗಿ ಗುಂಡು ಹಾರಿಸುತ್ತಿರುವುದನ್ನು ತೋರಿಸಲಾಗಿದೆ ಎಂದು ಆರೋಪಿಸಿ ಹಿಮಂತ ಬಿಸ್ವಾ ಶರ್ಮಾ ವಿರುದ್ಧ...

ನರವಾಣೆ ಪುಸ್ತಕಕ್ಕೆ ಹೆದರಿ ಪ್ರಧಾನಿ ಲೋಕಸಭೆಗೆ ಬರುತ್ತಿಲ್ಲ : ರಾಹುಲ್ ಗಾಂಧಿ

ಪ್ರತಿಪಕ್ಷಗಳು ಎತ್ತಿರುವ ವಿಷಯಗಳಿಂದ, ವಿಶೇಷವಾಗಿ ಮಾಜಿ ಸೇನಾ ಮುಖ್ಯಸ್ಥ ಎಂ.ಎಂ ನರವಾಣೆ ಅವರ ಪುಸ್ತಕದ ವಿಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಭಯಗೊಂಡಿದ್ದಾರೆ. ಹಾಗಾಗಿ, ಅವರು ರಾಷ್ಟ್ರಪತಿಯ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಗೆ...

ಡಿಜಿಟಲ್ ‘ಡಕಾಯಿತಿ’: 54,000 ಕೋಟಿಗೂ ಹೆಚ್ಚಿನ ಹಣ ವಂಚನೆ: ಎಸ್‌ಒಪಿ ರಚಿಸಲು ಕೇಂದ್ರಕ್ಕೆ ಸೂಚನೆ ನೀಡಿದ ಸುಪ್ರೀಂ

ನವದೆಹಲಿ: ಡಿಜಿಟಲ್ ವಂಚನೆಯಿಂದ 54,000 ಕೋಟಿ ರೂ.ಗಳಿಗೂ ಹೆಚ್ಚು ಹಣವನ್ನು ವಂಚಿಸುವುದು ಸಂಪೂರ್ಣ "ದರೋಡೆ ಅಥವಾ ಡಕಾಯಿತಿ" ಎಂದು ಸುಪ್ರೀಂ ಕೋರ್ಟ್ ಸೋಮವಾರ ಬಣ್ಣಿಸಿದೆ ಮತ್ತು ಅಂತಹ ಪ್ರಕರಣಗಳನ್ನು ನಿಭಾಯಿಸಲು ಆರ್‌ಬಿಐ, ಬ್ಯಾಂಕುಗಳು...

ಪಾಕಿಸ್ತಾನ ನಂಟು : ಸಿಎಂ ಶರ್ಮಾ ಆರೋಪ ನಿರಾಧಾರ, ಸಿ-ಗ್ರೇಡ್ ಸಿನಿಮಾ ಎಂದ ಗೌರವ್ ಗೊಗೊಯ್

ತಮಗೂ ಪಾಕಿಸ್ತಾನಕ್ಕೂ ಸಂಬಂಧವಿದೆ ಎಂಬ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರ ಆರೋಪಗಳನ್ನು ಅಸ್ಸಾಂ ಕಾಂಗ್ರೆಸ್ ಅಧ್ಯಕ್ಷ ಗೌರವ್ ಗೊಗೊಯ್ ತಳ್ಳಿಹಾಕಿದ್ದು, ಎಸ್‌ಐಟಿ ವರದಿಯು ಕಳೆದ ಆರು ತಿಂಗಳಿನಿಂದ ಮುಖ್ಯಮಂತ್ರಿ ಬಳಿಯೇ ಇದೆ....