Homeಮುಖಪುಟ2 ಕೋಟಿ ಜನಕ್ಕೆ ಆಹಾರ ಹಂಚಿದ ವಿಕಾಸ್ ಖನ್ನಾ: ಸೆಲ್ಯೂಟ್ ಎಂದ ನೆಟ್ಟಿಗರು

2 ಕೋಟಿ ಜನಕ್ಕೆ ಆಹಾರ ಹಂಚಿದ ವಿಕಾಸ್ ಖನ್ನಾ: ಸೆಲ್ಯೂಟ್ ಎಂದ ನೆಟ್ಟಿಗರು

ಕೊರೊನಾ ಸಾಂಕ್ರಾಮಿಕವು ಜನರಲ್ಲಿ ಭೀತಿ ಹುಟ್ಟಿಸಿ ದಿನೇ ದಿನೇ ಉಲ್ಭಣಿಸುತ್ತಿರುವಾಗ ಸೋನು ಸೂದ್, ವಿಕಾಸ್ ಖನ್ನಾ ಥರಹದ ಜನರ ದಿಟ್ಟ ಪ್ರಯತ್ನಗಳು ಭರವಸೆ ಮೂಡಿಸುತ್ತಿವೆ. ಅವರಿಗೆ ನಮ್ಮದೊಂದು ಸಲಾಂ ಇರಲಿ.

- Advertisement -
- Advertisement -

‘ನನ್ನ ಮೊಮ್ಮಗನಿಗೆ ಹೇಗೆ ಅಡುಗೆ ಮಾಡಬೇಕು ಅನ್ನೋದನ್ನು ಕಲಿಸಿದ್ದೇನೆ; ನೀನು ಅವನಿಗೆ ಯಾಕೆ ಅಡುಗೆ ಮಾಡಬೇಕು ಅನ್ನೋದನ್ನು ಕಲಿಸಿಕೊಡು’. ಇದು ಮಲೆಯಾಳಂನ ಖ್ಯಾತ ಸಿನೆಮಾ ಉಸ್ತಾದ್ ಹೋಟೆಲ್ ನಲ್ಲಿ ಬರುವ ಸಂಭಾಷಣೆ… ಜಗತ್ತಿನಲ್ಲಿ ಇಂದಿಗೂ ಲಕ್ಷಾಂತರ ಜನ ಹಸಿವಿನಿಂದ ಸಾಯುತ್ತಿರುವಾಗ ಈ ಸಂಭಾಷಣೆಗೆ ತನ್ನದೇ ಆದ ಮಹತ್ವವಿದೆ.

ನಿಜ ಜೀವನದಲ್ಲಿ ಹೇಗೆ ಅಡುಗೆ ಮಾಡಬೇಕು ಎಂಬುದರ ಜೊತೆಗೆ ಏಕೆ ಅಡುಗೆ ಮಾಡಬೇಕು ಎಂಬುದನ್ನು ತೋರಿಸಿಕೊಟ್ಟವರು ಭಾರತದ ಪ್ರಖ್ಯಾತ ಬಾಣಸಿಗರಾದ ವಿಕಾಸ್‌ ಖನ್ನಾರವರು.

ಅನಿರೀಕ್ಷಿತವಾಗಿ ಎರಗಿದ ಲಾಕ್‌ಡೌನ್‌ ವೇಳೆ ತುತ್ತು ಊಟಕ್ಕಾಗಿ ಪರದಾಡುತ್ತಿದ್ದ ಲಕ್ಷಾಂತರ ಜನರ ಪಾಲಿಗೆ ವಿಕಾಸ್ ಖನ್ನಾ ಆಪತ್ಬಾಂಧವರಾಗಿದ್ದಾರೆ. ಭಾರತದ ಪ್ರಖ್ಯಾತ ಬಾಣಸಿಗರಾದ ಅವರು ತಮ್ಮ ಎಲ್ಲಾ ಖ್ಯಾತಿ ಪ್ರತಿಷ್ಠೆಗಳನ್ನು ಬದಿಗೊತ್ತಿ ತಮ್ಮ ‘ಫೀಡ್ ಇಂಡಿಯಾ ಇನಿಷಿಯೇಟಿವ್’ ಮೂಲಕ 2 ಕೋಟಿ ಜನರಿಗೆ ಆಹಾರವನ್ನು ಇದುವರೆಗೂ ಹಂಚಿದ್ದಾರೆ.

ಬಾಲಿವುಡ್ ನಟ ಸೋನು ಸೂದ್ ಲಾಕ್‌ಡೌನ್ ಸಮಯದಲ್ಲಿ ಸಿಕ್ಕಿಕೊಂಡ ಹತ್ತಾರು ಸಾವಿರ ಜನರನ್ನು ತಮ್ಮ ಊರುಗಳಿಗೆ ಕಳಿಸಿಕೊಡುವಲ್ಲಿ ಯಶಸ್ವಿಯಾದಂತೆಯೇ ವಿಕಾಸ್ ಖನ್ನಾ ಬಹಲಷ್ಟು ಜನರಿಗೆ ಆಹಾರ ತಲುಪಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ಈ ಮಾನವೀಯ ಕೃತ್ಯಗಳಿಗಾಗಿ ಹಾರ್ಮನಿ ಫೌಂಡೇಶನ್ ಅವರನ್ನು ಗೌರವಿಸಿದೆ.

ವಿಕಾಸ್ ಖನ್ನಾ ಪಂಜಾಬ್ ಮೂಲದವರು. ನವೆಂಬರ್ 14, 1971ರಲ್ಲಿ ಅಮೃತ್‌ಸರದಲ್ಲಿ ಜನಿಸಿದ ಅವರು, 17ನೇ ವಯಸ್ಸಿನಿಂದಲೇ ಸ್ವಂತ ಕಂಪನಿ ಆರಂಭಿಸಿದರು. ಸದ್ಯಕ್ಕೆ ಅಮೇರಿಕಾ ಹಾಟೆಸ್ಟ್ ಶೆಫ್ ಎಂದು ಕರೆಸಿಕೊಳ್ಳುವ ಅವರು ಹಲವು ಹೋಟೆಲ್‌ಗಳ ಮಾಲೀಕರಾಗಿದ್ದಾರೆ. ಪ್ರಪಂಚದ ಅತ್ಯುತ್ತಮ ಶೆಫ್‌ಗಳಲ್ಲಿ ಒಬ್ಬರಾಗಿದ್ದಾರೆ. ಪಂಜಾಬ್‌ನಲ್ಲಿ ಲಂಗರ್‌ಗಳನ್ನು (ಉಚಿತ ಸಾಮುದಾಯಿಕ ಅಡುಗೆ ಕೇಂದ್ರ) ನಡೆಸಲಾಗುತ್ತದೆ. ಆ ಮೂಲಕ ಹಸಿದವರಿಗೆ ಉಚಿತ ಊಟ ಒದಗಿಸುವುದು ಅವರ ಕಾಯಕ. ಆ ಹಿನ್ನೆಲೆಯಲ್ಲಿ ಬೆಳೆದುಬಂದ ವಿಕಾಸ್ ಇಂದು ಭಾರತದ ಬಹುಜನರಿಗೆ ಊಟ ಹಾಕುತ್ತಿದ್ದಾರೆ.

ಅಮೃತಸರದ ಲಂಗಾರ್‌ಗಳ ಪ್ರಭಾವದಿಂದ ಮತ್ತು ಅವರ ತಾಯಿಯಿಂದ ಪ್ರಭಾವಿತವಾಗಿದ್ದ ವಿಕಾಸ್ ಸಮಾಜಕ್ಕೆ ಮರಳಿ ನೀಡುವ ನೀತಿಯನ್ನು ಅನುಸರಿಸಿ ಫೀಡ್ ಇಂಡಿಯಾ ಇನಿಷಿಯೇಟಿವ್ ಆರಂಭಿಸಿದ್ದಾರೆ.

ಅನಾಥಾಶ್ರಮಗಳು, ವೃದ್ಧಾಶ್ರಮಗಳು ಮತ್ತು ಕುಷ್ಠರೋಗ ಕೇಂದ್ರಗಳಿಗೆ ಪಡಿತರವನ್ನು ಒದಗಿಸುವ ಮೂಲಕ ಫೀಡ್‌ಇಂಡಿಯಾ ಇನಿಶಿಯೇಟಿವ್ ಸಣ್ಣ ಪ್ರಮಾಣದಲ್ಲಿ ಪ್ರಾರಂಭವಾಯಿತು. ಅಂತಿಮವಾಗಿ, ಹೆದ್ದಾರಿಗಳು, ರೈಲು ನಿಲ್ದಾಣಗಳು ಮತ್ತು ಇತರ ಸ್ಥಳಗಳಲ್ಲಿ ಬೇಯಿಸಿದ ಊಟವನ್ನು ಒದಗಿಸುವ ಮೂಲಕ ದೊಡ್ಡದಾಗಿ ಬೆಳೆಯಿತು. ಇಂದು ಅವರು ದೇಶಾದ್ಯಂತ ಲಕ್ಷಾಂತರ ಕುಟುಂಬಗಳಿಗೆ ಆಹಾರ ಒದಗಿಸಲು ವಿವಿಧ ಕಂಪನಿಗಳೊಂದಿಗೆ ಪಾಲುದಾರಿಕೆ ಹೊಂದಿದ್ದಾರೆ. ರಾಷ್ಟ್ರೀಯ ವಿಪತ್ತು ಪರಿಹಾರ ಪಡೆಯ ವಾಲಂಟೀಯರ್ ಆಗಿರುವ ಅವರು ಇದುವರೆಗೂ ಭಾರತದ 100 ಕ್ಕೂ ಹೆಚ್ಚು ನಗರಗಳಲ್ಲಿ 70 ಲಕ್ಷ ಪ್ಯಾಕೆಟ್ ಪಡಿತರ ವಿತರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೇ ಸುಮಾರು ಒಂದೂವರೆ ಕೋಟಿ ಜನರಿಗೆ ಬೇಯಿಸಿದ ಆಹಾರ ವಿತರಿಸಿದ್ದಾರೆ.

ನಾನು ಹುಟ್ಟಿ ಬೆಳೆದಿದ್ದು ಭಾರತದಲ್ಲಿಯೇ ಆದರೂ ನನಗೆ ಹಸಿವಿನ ಪರಿಚಯವಾದುದ್ದು ನ್ಯೂಯಾರ್ಕ್‌ನಲ್ಲಿ ಎಂದು ಇತ್ತೀಚೆಗೆ ವಿಕಾಸ್ ಖನ್ನಾ ಹೇಳಿದ್ದ ಮಾತುಗಳು ವೈರಲ್ ಆಗಿದ್ದವು. ಅಷ್ಟೇ ಅಲ್ಲದೇ ಆಂಧ್ರಪ್ರದೇಶದ ಜನಪ್ರಿಯ ತಿನಿಸಾದ ದಿಬ್ಬಾ ರೊಟ್ಟಿ ಮಾಡುವುದನ್ನು ಯೂಟ್ಯೂಬ್ ನಿಂದ ನೋಡಿ ಕಲಿತ ಅವರು, ಅದಕ್ಕಾಗಿ ಅದನ್ನು ಕಲಿಸಿದ ಗುರುಗಳಿಗೆ ಗುರುದಕ್ಷಿಣೆ ಸಲ್ಲಿಸುವ ಮೂಲಕವೂ ಸುದ್ದಿಯಾಗಿದ್ದರು.

2020 ರಲ್ಲಿ ಏಷ್ಯಾದ  ಅತ್ಯಂತ ಪ್ರಭಾವಶಾಲಿ 100 ಜನರಲ್ಲಿ ಒಬ್ಬರಾಗಿ ವಿಕಾಸ್ ಖನ್ನಾ ಆಯ್ಕೆಯಾಗಿದ್ದಾರೆ. ಅವರ ಕುರಿತು ಖ್ಯಾತ ವ್ಯಂಗ್ಯಚಿತ್ರಕಾರ ಸತೀಶ್ ಆಚಾರ್ಯರವರು ಬರೆದ ಚಿತ್ರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬಹಳಷ್ಟು ಜನ ವಿಕಾಸ್ ಖನ್ನಾರವರ ನಿಸ್ವಾರ್ಥ ಕಾಳಜಿಗೆ ಧನ್ಯವಾದ ಸಲ್ಲಿಸಿದ್ದಾರೆ.

ಕೊರೊನಾ ಸಾಂಕ್ರಾಮಿಕವು ಜನರಲ್ಲಿ ಭೀತಿ ಹುಟ್ಟಿಸಿ ದಿನೇ ದಿನೇ ಉಲ್ಭಣಿಸುತ್ತಿರುವಾಗ ಸೋನು ಸೂದ್, ವಿಕಾಸ್ ಖನ್ನಾ ಥರಹದ ಜನರ ದಿಟ್ಟ ಪ್ರಯತ್ನಗಳು ಭರವಸೆ ಮೂಡಿಸುತ್ತಿವೆ. ಅವರಿಗೆ ನಮ್ಮದೊಂದು ಸಲಾಂ ಇರಲಿ.


ಇದನ್ನೂ ಓದಿ: ಸೋನು ಸೂದ್‌ ನಂತರ ಕಾರ್ಮಿಕರಿಗೆ ಸಹಾಯ ಮಾಡಲು ಪಣತೊಟ್ಟ ಸ್ವರ ಭಾಸ್ಕರ್‌

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...