Homeಮುಖಪುಟಓಟಿಟಿಯಲ್ಲಿ ಬಿಡುಗಡೆಯಾದ ‘ಲಾ’ ಸೃಷ್ಟಿಸಿದ ಚರ್ಚೆಗಳ ಸುತ್ತ...!

ಓಟಿಟಿಯಲ್ಲಿ ಬಿಡುಗಡೆಯಾದ ‘ಲಾ’ ಸೃಷ್ಟಿಸಿದ ಚರ್ಚೆಗಳ ಸುತ್ತ…!

- Advertisement -
- Advertisement -

ಪುನೀತ್ ರಾಜ್‌ಕುಮಾರ್ ಅವರ ಪಿಆರ್‌ಕೆ ಪ್ರೊಡಕ್ಷನ್ ನಿರ್ಮಾಣದ ‘ಲಾ’ ಸಿನಿಮಾ ಕಳೆದವಾರವಷ್ಟೇ ಓಟಿಟಿ (ಓವರ್ ದ ಟಾಪ್) ಪ್ಲಾಟ್‌ಫಾರ್ಮ್ನಲ್ಲಿ ರಿಲೀಸ್ ಅಗಿದೆ. ಓಟಿಟಿಯಲ್ಲಿ ಬಿಡುಗಡೆಯಾದ ಕನ್ನಡದ ಮೊದಲ ಸಿನಿಮಾಗಳಲ್ಲಿ ಇದೂ ಒಂದು ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. (ಹಿಂದೆ ಆದರ್ಶ್ ಈಶ್ವರಪ್ಪ ನಿರ್ದೇಶನದ ಭಿನ್ನ ಕೂಡ ಓಟಿಟಿಯಲ್ಲಿ ಬಿಡುಗಡೆಯಾಗಿ ಸದ್ದು ಮಾಡಿತ್ತು). ಈಗ ‘ಲಾ’ ಸಿನಿಮಾ ಅಮೆಜಾನ್  ಪ್ರೈಂನಲ್ಲಿ ಬಿಡುಗಡೆಯಾದ ಮೇಲೆ ಎರಡು ರೀತಿಯ ಚರ್ಚೆಯನ್ನು ಹುಟ್ಟುಹಾಕಿದೆ.

ಒಂದು, ಈ ಸಿನಿಮಾ ಚಿತ್ರಿಸಿರುವ ಕತೆಯ ಚಿತ್ರಣದ ಅಂಕುಡೊಂಕುಗಳಿಂದಾಗಿ, ಥಿಯೇಟರ್‌ಗಳಲ್ಲಿ ಹಣ ಮಾಡಲಾಗದ ಇಂತಹ ಸಿನಿಮಾಗಷ್ಟೇ ಓಟಿಟಿ ಪ್ಲಾಟ್‌ಫಾರ್ಮ್ನಲ್ಲಿ ರಿಲೀಸ್ ಆಗುತ್ತವೆ ಅನ್ನುವುದು.. ಮತ್ತೊಂದು, ಸಿನಿಮಾಗಳನ್ನು ಓಟಿಟಿಗಳಲ್ಲಿ ನೋಡುವುದು ನಿರ್ದೇಶಕರಿಗೆ ಮಾಡುವ ಅವಮಾನ ಎಂಬಂತಹ ಭ್ರಮೆ..

ಮೊನ್ನೆ ಮೊನ್ನೆಯಷ್ಟೇ ಆರಂಭಗೊಂಡ ಎಫ್‌ಯುಸಿ (ಫಿಲ್ಮ್ಮೇರ‍್ಸ್ ಯುನೈಟೆಡ್ ಕ್ಲಬ್) ಎಂಬ ತಂಡ ತಮ್ಮ ವೆಬ್‌ಸೈಟ್‌ನಲ್ಲಿ ಅಂಕಣವೊಂದನ್ನು ಪ್ರಕಟಿಸಿದೆ. ಜನರು ಓಟಿಟಿಗಳಲ್ಲಿ ಸಿನಿಮಾ ನೋಡುವುದರ ಬಗ್ಗೆ ಆ ಅಂಕಣ ಪ್ರಶ್ನೆ ಎತ್ತಿದೆ. ಮನೆಯಲ್ಲಿ ಕುಳಿತು ಸಿನಿಮಾ ನೋಡುವುದರಿಂದಾಗುವ ಸಮಸ್ಯೆಗಳ ಜೊತೆಗೆ, ಸಿನಿಮಾಗಳನ್ನು ಓಟಿಟಿಯಲ್ಲಿ ನೋಡುವುದೇ ನಿರ್ದೇಶಕರಿಗೆ ಮಾಡುವ ಅವಮಾನವೆಂದು ಹೇಳಿದೆ.

ಹಾಗೆ ನೋಡಿದರೆ, ವಿಶ್ವದ ಮೂಲೆಮೂಲೆಗೂ ಸಿನಿಮಾಗಳಿಗೆ ಹೆದ್ದಾರಿ ಮಾಡಿಕೊಡುವ ಓಟಿಟಿಯ ಹಾದಿಗೆ ಕನ್ನಡ ಚಿತ್ರರಂಗ ಈಗಷ್ಟೇ ಕಾಲ್ನಡಿಗೆಯ ಹಾದಿಯನ್ನು ಹುಡುಕುತ್ತಿದೆ. ಹಲವು ವರ್ಷಗಳಿಂದ ಚಾಲ್ತಿಯಲ್ಲಿರುವ ಓಟಿಟಿಗಳಲ್ಲಿ ಕನ್ನಡ ಚಿತ್ರಗಳಿಗೆ ಇತ್ತೀಚೆಗಷ್ಟೇ ಅವಕಾಶಗಳು ಸಿಗುತ್ತಿವೆ. ಆಗಲೇ ಅದರ ವಿರುದ್ಧ ಅಭಿಪ್ರಾಯ ಮೂಡಿಸುವ ಹೊಸ ತಂತ್ರವೂ ಹೆಣೆದುಕೊಳ್ಳುತ್ತಿದೆ.

ಇಡೀ ಜಗತ್ತೇ ಡಬ್ಬಿಂಗ್‌ಗೆ ಓಕೆ ಎಂದಿದ್ದ ಸಂದರ್ಭದಲ್ಲಿಯೂ ಸ್ಯಾಂಡಲ್‌ವುಡ್‌ನ ಕೆಲವರದ್ದು ಇಂತದ್ದೇ ತಗಾದೆ ಇತ್ತು. ಅದೆಲ್ಲವನ್ನು ಬದಿಗೊತ್ತಿ, ಈಗ ಡಬ್ಬಿಂಗ್ ದುನಿಯಾ ಕನ್ನಡ ಚಿತ್ರರಂಗದಲ್ಲಿ ಪಸರಿಸುತ್ತಿದೆ. ಅಂತೆಯೇ ಓಟಿಟಿಯೂ ಈಗಷ್ಟೇ ಕನ್ನಡದಲ್ಲಿ ಚಿಗುರೊಡೆಯಲಾರಂಭಿಸಿದೆ.

‘ಕನ್ನಡ ಚಿತ್ರರಂಗದಲ್ಲಿ ಓಟಿಟಿಗೆ ನೆಲೆಯಿಲ್ಲ – ಓಟಿಟಿಯಲ್ಲಿ ಕನ್ನಡ ಚಿತ್ರಗಳಿಗೂ ಸ್ಥಾನ ಉಳಿಯುವುದಿಲ್ಲ’ ಇದು ಸದ್ಯಕ್ಕೆ ಕನ್ನಡ ಚಿತ್ರರಂಗದ ಯಥಾಸ್ಥಿತಿವಾದಿಗಳ ಅಭಿಪ್ರಾಯ. ಇದಕ್ಕೆ ಹೌದು ಎಂಬಂತೆ, ಕನ್ನಡದಲ್ಲಷ್ಟೇ ಅಲ್ಲ, ಭಾರತೀಯ ಚಿತ್ರರಂಗದಲ್ಲಿಯೇ ಯಾವ ಸ್ಟಾರ್ ನಟನ ಸಿನಿಮಾಗಳನ್ನು ನೇರವಾಗಿ ಓಟಿಟಿಯಲ್ಲಿ ರಿಲೀಸ್ ಮಾಡಲು ಪ್ರೊಡ್ಯೂಸರ್‌ಗಳು, ಸ್ಟಾರ್ ಆಕ್ಟರ್‌ಗಳೂ ಮುಂದೆ ಬರುತ್ತಿಲ್ಲ. ಬಿಗ್ ಬಜೆಟ್‌ನ ಸಿನಿಮಾಗಳು ಓಟಿಟಿಯಲ್ಲಿ ಬಿಡುಗಡೆಯಾದರೆ ಹಾಕಿರುವ ಬಂಡವಾಳವನ್ನು ಲಾಭದ ಸಮೇತ ವಾಪಸ್ ಕೊಡುತ್ತವೆ ಎಂಬ ಭರವಸೆ ಯಾರಿಗೂ ಇಲ್ಲ. ಸದ್ಯಕ್ಕೆ ಅದು ಸತ್ಯವೂ ಹೌದು.

ಕಾರಣ, ಓಟಿಟಿ ವೇದಿಕೆಗಳು ಭಾರತೀಯರಿಗೆ ಹೆಚ್ಚಾಗಿ ಪರಿಚಿತವಾಗಿಲ್ಲ. ಬಹುಸಂಖ್ಯಾತ ಜನರನ್ನು ಓಟಿಟಿ ಇನ್ನೂ ರೀಚ್ ಆಗಿಲ್ಲ. ಅಲ್ಲದೆ, ಥಿಯೇಟರ್‌ಗಳಲ್ಲಿ ಸಿನಿಮಾ ನೋಡುವ ಜನರ  ಕ್ರೇಜ್ ಓಟಿಟಿ ಎಡೆಗೆ ಇನ್ನೂ ತಿರುಗಿದಂತೆ ಕಾಣುತ್ತಿಲ್ಲ. ಹಾಗೆಂದ ಮಾತ್ರಕ್ಕೆ ಓಟಿಟಿ ಕೇವಲ ಕಡಿಮೆ ಬಜೆಟ್‌ನ ಹಾಗೂ ಡಬ್ಬಾ ಸಿನಿಮಾಗಳಿಗಷ್ಟೇ ಸೀಮಿತವೂ ಆಗಿಲ್ಲ. ಹಾಲಿವುಡ್‌ನ ಜನಪ್ರಿಯ ಸಿನಿಮಾಗಳೂ ಕೂಡ ಓಟಿಟಿಯಲ್ಲಿ ರಿಲೀಸ್ ಆಗುತ್ತಿವೆ. ಅಂತಹ ಸಿನಿಮಾಗಳಲ್ಲಿ ಸ್ನೈಡರ್ ಕಟ್ ಕೂಡ ಒಂದು. ಈ ಸಿನಿಮಾದ  ಟ್ರೈಲರ್ ಯೂಟ್ಯೂಬ್ ಹಾಗೂ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದು, ಸದ್ಯದಲ್ಲೇ ಬಿಡುಗಡೆಗೆ
ರೆಡಿಯಾಗಿದೆ.

ಸಿನಿಮಾ ನೋಡುವಾಗ ಥಿಯೇಟರ್‌ಗಳಲ್ಲಿ ಸಿಗುವ ಮಜಾ ಓಟಿಟಿಯಲ್ಲಿ ಸಿಗುವುದಿಲ್ಲ ಎನ್ನುವ ಮಾತೂ ಇದೆ. ಜೋಷ್ ಇರುವುದಿಲ್ಲ. ಸಿನಿಮಾಗಳನ್ನು ಸಮೂಹದಲ್ಲಿ ನೋಡುವ ಆನಂದವೇ ಬೇರೆ ರೀತಿಯದ್ದು. ಸಿನಿಮಾ ಮುಗಿದು ಥಿಯೇಟರ್‌ನಿಂದ ಹೊರಬರುವಾಗ ಎಂಥದ್ದೂ ಒಂದು ಫೀಲ್ ಮನಸ್ಸಲ್ಲಿ ಮೂಡುತ್ತದೆ. ಅಂತಹ ಫೀಲ್ ಓಟಿಟಿಯಲ್ಲಿ ಹುಟ್ಟಲಾರದು ಎಂಬ ಮಾತುಗಳು. ಆದರೆ, ಸದ್ಯ ಓಟಿಟಿಯಲ್ಲಿ ಸಿಗುತ್ತಿರುವ ಕಂಟೆಂಟ್ (ಗುಣಮಟ್ಟ ಹಾಗೂ ಅದು ಲಭ್ಯವಿರುವ ಮಾದರಿ) ಥಿಯೇಟರ್‌ಗಳಲ್ಲಿ ಸಿಗುತ್ತಿಲ್ಲ ಎಂಬುದು ಅಷ್ಟೇ ಸತ್ಯ.

ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಂನಂತಹ ಜಗತ್ತಿನಾದ್ಯಂತ ಹರಡಿರುವ ಓಟಿಟಿ ಪ್ಲಾಟ್‌ಫಾರ್ಮ್ಗಳಲ್ಲಿ ಈಗಷ್ಟೆ ಕನ್ನಡ ಸಿನಿಮಾಗಳಿಗೆ ಸ್ಥಾನ ಸಿಗುತ್ತಿದೆ. ಕನ್ನಡ ಸಿನಿಮಾಗಳು ಎಲ್ಲೆಡೆ ಹರಡುವ ಅವಕಾಶವನ್ನೂ ಉಂಟು ಮಾಡಿದೆ. ಆದರೆ, ಕನ್ನಡ ಚಿತ್ರರಂಗವೇ ಇದಕ್ಕೆ ಇನ್ನೂ ಸಿದ್ದವಾಗಿಲ್ಲ.

ಇದೆಲ್ಲದರ ನಡುವೆ, ಓಕೆ (ಓನ್ಲೀ ಕನ್ನಡ) ಎಂಬ ಕನ್ನಡ ಸಿನಿಮಾಗಳಿಗಷ್ಟೇ ಸೀಮಿತವಾದ ಹೊಸ ಓಟಿಟಿ ಪ್ಲಾಟ್‌ಫಾರ್ಮ್ ಕೂಡ ಆರಂಭವಾಗುತ್ತಿದೆ. ಕನ್ನಡದ ನಾಟಕ, ಸಿನಿಮಾ, ವೆಬ್ ಸೀರಿಸ್‌ಗಳ ನಿರ್ಮಾಣ ಮತ್ತು ಬಿಡುಗಡೆಗಾಗಿ ಇದು ಆರಂಭಗೊಳ್ಳುತ್ತಿದೆ. ಕನ್ನಡದಲ್ಲಿ ಹೊಸದೊಂದು ಪ್ಲಾಟ್‌ಫಾರ್ಮ್ ಕ್ರಿಯೇಟ್ ಮಾಡುವ ಸದಭಿರುಚಿಯೊಂದಿಗೆ ಪ್ರಯೋಗ್ ಸ್ಟುಡಿಯೂ ಮತ್ತು ಮಯೂರ್ ಮೋಷನ್ ಪಿಕ್ರ‍್ಸ್ ಇದಕ್ಕೆ ಮುಂದಾಗಿವೆ.

ಸದ್ಯದ ಪರಿಸ್ಥಿತಿಯಲ್ಲಿ ಥಿಯೇಟರ್‌ಗಳು, ಮಲ್ಟಿಪ್ಲೆಕ್ಸ್ಗಳು, ಮಾಲ್‌ಗಳು ಮುಚ್ಚಿರುವುದರಿಂದಾಗಿ ಒಂದಷ್ಟು ಪ್ರಮಾಣದ ಜನರು ಓಟಿಟಿಗಳ ಮೊರೆ ಹೋಗಿದ್ದಾರೆ. ಅದು ಹೀಗೆಯೇ ಇರಲಾರದು. ಹೆಚ್ಚು ಬಂಡವಾಳ ಹಾಕಿ ನಿರ್ಮಾಣ ಮಾಡಿದ ಸಿನಿಮಾಗಳು ಥಿಯೇಟರ್‌ನಲ್ಲಿ ರಿಲೀಸ್ ಅಗಿಯೇ ಬಂಡವಾಳವನ್ನು ಮರಳಿ ತರುವಲ್ಲಿ ಪೈಪೋಟಿ ಎದುರಿಸುತ್ತಿವೆ. ಹೀಗಿರುವಾಗ ಓಟಿಟಿಗಳು ಸಿನಿಮಾಗೆ ಸುರಿದ ಬಂಡವಾಳವನ್ನು ವಾಪಸ್ ನೀಡಬಲ್ಲವೇ ಎಂಬ ಪ್ರಶ್ನೆಯೂ ಎದುರಾಗುತ್ತದೆ. ಈ ದೆಸೆಯಲ್ಲಿ ಓಟಿಟಿ ಕಂಪ್ಲೀಟ್ಲಿ ಕಡ್ಳೆಪುರಿ ವ್ಯಾಪಾರವಿದ್ದಂತೆ, ಅದಕ್ಕೆ ಎಂದೂ ಭವಿಷ್ಯವಿಲ್ಲ ಎಂಬುದು ಸದ್ಯಕ್ಕೆ ಕನ್ನಡ ಸಿನಿಮಾ ರಂಗದ ಅಭಿಪ್ರಾಯ.

ಆದರೆ, ಡಿಜಿಟೈಸ್ ಆಗುತ್ತಿರುವ ಜನರು ಓಟಿಟಿಗಳೆಡೆಗೆ ಮುಖ ಮಾಡಿದ್ದಾರೆ. ಮುಂದಿನ ಸಿನಿಮಾಗಳ ಭವಿಷ್ಯ ಓಟಿಟಿಯೇ ಎಂಬುದು ಡಿಜಿಟಲ್ ಕ್ಷೇತ್ರದವರ ಅಭಿಪ್ರಾಯ.
ಇದೆಲ್ಲದರ ನಡುವೆ, ಓಟಿಟಿಯಲ್ಲಿ ರಿಲೀಸ್ ಆದ ‘ಲಾ’ ಸಿನಿಮಾ ಕನ್ನಡ ಚಿತ್ರರಂಗದಲ್ಲಿ ಓಟಿಟಿ ಬಗೆಗೆ ಒಂದು ನೆಗೆಟಿವ್ ಅಪ್ರೋಚ್ ಕಟ್ಟಿಕೊಟ್ಟಿದೆ. ನಿರೀಕ್ಷಿತ ಗುಣಮಟ್ಟದಲ್ಲಿ ಸಿನಿಮಾ ಮೂಡದೆ ಇದ್ದದ್ದೂ ಕಾರಣ ಇರಬಹುದು. ಏನೇ ಇರಿಲಿ, ಕನ್ನಡದ ಮಟ್ಟಿಗೆ ಓಟಿಟಿ ಹವಾ ಈಗಷ್ಟೇ ಹಬ್ಬುತ್ತಿದೆ. ಕನ್ನಡ ಸಿನಿಮಾ ಮತ್ತು ಕನ್ನಡದಲ್ಲಿ ಓಟಿಟಿಯ ಭವಿಷ್ಯ ಏನಾಗಲಿದೆ ಎಂಬುದನ್ನು ಸಿನಿಪ್ರೇಮಿಗಳೇ ಮುಂದೆ ತೆರೆದಿಡಲಿದ್ದಾರೆ.

– ಸೋಮಶೇಖರ್ ಚಲ್ಯ


ಓದಿ:

ಸಿನೆಮಾದ ಮೂಲಕ ಜಾತಿ ಮುಕ್ತ ಸಮಾಜ ಕಟ್ಟಲೊರಟ ಅಂಬೇಡ್ಕರ್‌ವಾದಿ ನಿರ್ದೇಶಕ ಪ.ರಂಜಿತ್.


 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...