Homeಮುಖಪುಟಒಳಮೀಸಲು ರಾಜಕೀಯ ಆಡುಂಬೊಲವಾಗದಿರಲಿ - ಎನ್. ರವಿಕುಮಾರ್

ಒಳಮೀಸಲು ರಾಜಕೀಯ ಆಡುಂಬೊಲವಾಗದಿರಲಿ – ಎನ್. ರವಿಕುಮಾರ್

- Advertisement -
- Advertisement -

ಒಳಮೀಸಲಾತಿಯನ್ನು ಕೇವಲ ಒಂದು ಸವಲತ್ತಿನ ಕಾರ್ಯಸೂಚಿಯಾಗಿ ನೋಡದೆ ಸಾಮಾಜಿಕ ಆಯಾಮಗಳಿಂದಲೂ ಅವಲೋಕಿಸಿ ನೋಡಿದಾಗ ಅಸ್ಪೃಶ್ಯ ಬದುಕಿನ ಸತ್ಯ ದರ್ಶನವಾಗುತ್ತದೆ. ಪರಿಶಿಷ್ಟ ಜಾತಿಯ 101 ಜಾತಿಗಳಲ್ಲಿ ಸ್ಪೃಶ್ಯ-ಅಸ್ಪೃಶ್ಯ ಸ್ತರಗಳನ್ನು ಮೊದಲು ಮನಗಾಣಬೇಕು. ಹೊಲೆ-ಮಾದಿಗರು ಹೊರಗಿಟ್ಟ ಸಮುದಾಯವಾಗಿಯೇ ಬದುಕುತ್ತಿರುವ ಕಾಲ ಇನ್ನೂ ಜೀವಂತವಾಗಿದೆ. ಪರಿಶಿಷ್ಟ ಜಾತಿಯಲ್ಲಿನ ಬಹುತೇಕ ಬಲಾಢ್ಯ ಸ್ಪೃಶ್ಯಜಾತಿಗಳು ಮಾದಿಗರನ್ನು ಹೊಸ್ತಿಲ ಒಳಗೂ ಬಿಟ್ಟುಕೊಳ್ಳದೆ, ತಮ್ಮ ಹೊಲ, ಗದ್ದೆಗಳ ಜೀತಕ್ಕೂ ಇಟ್ಟುಕೊಂಡ ಪ್ರಕರಣಗಳು ಇವೆ. ಮಾದಿಗ ಸಮುದಾಯ ನಾಗರಿಕ ಸಮಾಜದ ಹೇಲು-ಉಚ್ಚೆ ಬಾಚಿ ಬಳಿಯುವ ದಾರುಣ ಬದುಕಿನಿಂದ ಮತ್ತು ಈ ಕಾಲಕ್ಕೂ ಪುಟ್‍ಬಾತ್‍ನಲ್ಲಿ ಅಂಬೇಡ್ಕರ್, ಬಾಬು ಜಗಜೀವನ ರಾಂ ಹೆಸರಿನಲ್ಲಿ ಪೆಟ್ಟಿಗೆಗಳನ್ನಿಟ್ಟುಕೊಂಡು ಚಪ್ಪಲಿ ಹೊಲಿಯುವ ಕಸುಬಿನಿಂದ ಈಗಿನ ತಲೆಮಾರುಗಳು ಇನ್ನೂ ಮುಕ್ತಿಹೊಂದಿಲ್ಲ. ಪರಿಶಿಷ್ಟ ಜಾತಿಗಳಲ್ಲಿನ ಸ್ಪೃಶ್ಯ-ಅಸ್ಪೃಶ್ಯ ಜಾತಿಗಳಿಗೆ ಒಟ್ಟು ಮೀಸಲಾತಿ ಅನ್ವಯವಾಗಿರುವಾಗ ಈ ಇಬ್ಬರ ನಡುವೆ ಇಂತಹ ಅಮಾನುಷ ಅಂತರ ಏಕಿದೆ ಎಂಬುದನ್ನು ಒಳಮೀಸಲಾತಿ ವಿರೋಧಿಸುವ ಸಹೋದರರು ಯೋಚಿಸಬೇಕಾಗಿದೆ.

ಒಳಮೀಸಲಾತಿಯ ಕೂಗು ಇಂದು – ನೆನ್ನೆಯದಲ್ಲ. 1994-95 ರಲ್ಲಿ ಆಂಧ್ರದಲ್ಲಿ ಆರಂಭಗೊಂಡ ಒಳಮೀಸಲಾತಿಯ ಕೂಗಿನ ಹಿಂದೆ ಜನಸಂಖ್ಯೆ ಆಧರಿಸಿ ಬಹುಸಂಖ್ಯಾತರಾಗಿದ್ದ ಅಸ್ಪೃಶ್ಯ ಜಾತಿಗಳು ಮೀಸಲಾತಿಯ ಫಲವನ್ನು ದಕ್ಕಿಸಿಕೊಳ್ಳಲಾಗದ ನೋವು ಸ್ಫೋಟಗೊಂಡಿತು. ಆಂಧ್ರದಲ್ಲಿ ಭುಗಿಲೆದ್ದ ಹೋರಾಟದ ಪರಿಣಾಮ ಅಂದಿನ ಆಂಧ್ರ ಸರ್ಕಾರ ಜಸ್ಟೀಸ್ ರಾಮಚಂದ್ರ ರಾವ್ ಆಯೋಗವನ್ನು ರಚಿಸಿದ್ದು, ಆಯೋಗವು ಮಾದಿಗ ಮತ್ತು ಸಂಬಂಧಿತ ಅಸ್ಪೃಶ್ಯ ಜಾತಿಗಳಿಗೆ ಒಳಮೀಸಲಾತಿ ನೀಡುವ ಅಗತ್ಯತೆಯನ್ನು ಸ್ಪಷ್ಟವಾಗಿ ವೈಜ್ಞಾನಿಕ ಕೋನದಲ್ಲಿ ಮಂಡಿಸಿತು. ಸರ್ಕಾರ ಕೂಡ ಇದನ್ನು ಅನುಷ್ಠಾನಗೊಳಿಸಲು ಮುಂದಾದಾಗ ಆರ್ಥಿಕವಾಗಿ ಪ್ರಬಲವಾಗಿದ್ದ ಮಾಲ ಸಮುದಾಯವು ನ್ಯಾಯಾಲಯಕ್ಕೆ ಮೊರೆಹೋಗಿದ್ದರಿಂದ ಉದ್ದೇಶಿತ ಒಳಮೀಸಲಾತಿಗೆ ಹಿನ್ನಡೆಯಾಯಿತು.

ಆಂಧ್ರದ ಚಳವಳಿಯಿಂದ ಪ್ರೇರಣೆಗೊಂಡು ಕರ್ನಾಟಕದಲ್ಲೂ ಒಳಮೀಸಲಾತಿ ಹೋರಾಟ ಆರಂಭಗೊಂಡಿತು. ಅದರ ಪರಿಣಾಮದಿಂದ ರಚನೆಯಾದ ಜಸ್ಟಿಸ್ ಸದಾಶಿವ ಆಯೋಗದ ವರದಿಯಲ್ಲಿ ಜನಸಂಖ್ಯೆಗನುಗುಣವಾಗಿ ಮೀಸಲು ಹಂಚಿಕೆಯ ಮಾನದಂಡವೊಂದು ಪ್ರಸ್ತಾಪಿತವಾಗಿದೆ. ಒಟ್ಟು ಮೀಸಲು ಪ್ರಮಾಣ ಶೇ. 15ರಲ್ಲಿ – ಶೇ. 33.47 ರಷ್ಟಿರುವ ಮಾದಿಗ ಸಮುದಾಯಕ್ಕೆ ಶೇ. 6, ಶೇ. 32 ರಷ್ಟು ಪ್ರಮಾಣದ ಜನಸಂಖ್ಯೆ ಹೊಂದಿರುವ ಬಲಗೈ ಸಮುದಾಯಕ್ಕೆ ಶೇ. 5 ಉಳಿದ ಸ್ಪೃಶ್ಯ ಮತ್ತು ಸಂಬಂಧಿತ ಜಾತಿಗಳಿಗೆ ಶೇ. 3 ಮತ್ತು ಇತರೆ ಜಾತಿಗಳಿಗೆ ಶೇ. 1 ರಷ್ಟು ಮೀಸಲಾತಿಯ ಹಂಚಿಕೆಯನ್ನು ಪ್ರತಿಪಾದಿಸಿದೆ. ಜನಸಂಖ್ಯೆ ಆಧರಿಸಿ ಮೀಸಲು ಪ್ರಮಾಣ ಹಂಚಿಕೆಯಾಗುವುದು ನ್ಯಾಯಸಮ್ಮತವೂ ಮತ್ತು ಹಕ್ಕು ಆಗಿರುವಾಗ ಇದನ್ನು ವಿರೋಧಿಸುವುದು ಸಾಮಾಜಿಕ ನ್ಯಾಯದ ಉಲ್ಲಂಘನೆಯೂ ಆಗುತ್ತದೆ. ಮೀಸಲಾತಿಯ ಬಗೆಗಿನ ವೈಜ್ಞಾನಿಕವಾದ ಮತ್ತು ಪ್ರಜಾತಾಂತ್ರಿಕವಾದ ನಿಲುವನ್ನು ಬಿತ್ತುವ ಮತ್ತು ಹೊಂದುವ ಅಗತ್ಯ ಎಲ್ಲಾ ಕಾಲಕ್ಕೂ ಇರತಕ್ಕದ್ದು. ಅದು ಒಳಮೀಸಲಾತಿಗೂ ವಿಸ್ತರಿಸಬೇಕು. ಈ ಮೂಲಕ ಹಂಚುಣ್ಣುವ ಮನೋಧರ್ಮವನ್ನು ಧರಿಸಲು ಸಾಧ್ಯ.

ಇದನ್ನೂ ಓದಿ: ಒಳಮೀಸಲಾತಿಯೆಂಬುದು ಅಣ್ಣನ ಪಾಲು ಅಣ್ಣನಿಗೆ, ತಮ್ಮನ ಪಾಲು ತಮ್ಮನಿಗೆ ಎಂಬ ಸರಳ ಸೂತ್ರ – ಅಂಬಣ್ಣ ಅರೋಲಿಕರ್

ನೆನಗುದಿಗೆ ಬಿದ್ದಿದ್ದ ಜಸ್ಟಿಸ್ ಸದಾಶಿವ ಆಯೋಗಕ್ಕೆ 2010ರಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪನವರು ಹಣಕಾಸು ನೀಡಿ ಚಾಲನೆ ನೀಡಿದರು. ಈಗ ಯಡಿಯೂರಪ್ಪನವರೆ ಮುಖ್ಯಮಂತ್ರಿಯಾಗಿದ್ದಾರೆ. ವರದಿ ಮಂಡನೆಯಾಗಿ ಎಂಟು ವರ್ಷಗಳು ಕಳೆದಿವೆ. ಆದರೆ ಈ ವರದಿ ಕೇವಲ ರಾಜಕೀಯ ಕಾರಣಕ್ಕಾಗಿ ಬಳಕೆಯಾಗದೆ ಉದ್ದೇಶಿತ ನ್ಯಾಯವನ್ನು ಜಾರಿಗೊಳಿಸುವ ಬದ್ಧತೆಯನ್ನು ತೋರಬೇಕಿದೆ. ಇಲ್ಲಿ ಮೂಲಭೂತವಾದ ಪ್ರಶ್ನೆಯೆಂದರೆ, ಜಸ್ಟಿಸ್ ಸದಾಶಿವ ಆಯೋಗದ ವರದಿಯನ್ನು ಒಪ್ಪುವುದು, ತಿರಸ್ಕರಿಸುವ ಹೊಣೆಗಾರಿಕೆ ಯಾರದ್ದು?!

ಈ ವರದಿಯ ಚರ್ಚೆ ಹಾದಿ – ಬೀದಿಯಲ್ಲಿ ನಡೆಯಬೇಕಾ? ಪರಿಶಿಷ್ಟ ಸಹೋದರರು ಪರ-ವಿರೋಧಗಳ ಹಗೆಗೆ ಬಿದ್ದು ಬೀದಿಗೆ ಬರಬೇಕಾ?

ಸುಪ್ರೀಂ ಕೋರ್ಟ್ ರಾಷ್ಟ್ರ ಮಟ್ಟದಲ್ಲೇ ಒಳಮೀಸಲಾತಿ ಕುರಿತಂತೆ ಸಕಾರಾತ್ಮಕವಾಗಿ ತನ್ನ ಅಭಿಪ್ರಾಯವನ್ನು ವ್ಯಕ್ತಿಪಡಿಸಿದೆ. ವಿಸ್ತೃತ ಪೀಠದ ಪರಿಶೀಲನೆಗೂ ಒಪ್ಪಿಸಿದೆ. ವಿಸ್ತೃತ ಸಂವಿಧಾನಿಕ ನ್ಯಾಯಪೀಠ ತನ್ನ ಅಂತಿಮ ತೀರ್ಪು ನೀಡುವವರೆಗೂ ಒಳಮೀಸಲು ವಂಚಿತ ಸಮುದಾಯಗಳು ರಾಜಕೀಯ ಪಕ್ಷಗಳ ಓಲೈಕೆಯ ಬಾಲಂಗೋಚಿಗಳಾಗಿ ಬದುಕುವಂತಾಗಬಹುದು. ಕೇಂದ್ರ ಸರ್ಕಾರ ಬ್ರಾಹ್ಮಣ ಸಮುದಾಯದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಶೇ10 ಮೀಸಲಾತಿಯನ್ನು ಸುಗ್ರೀವಾಜ್ಞೆ ಮೂಲಕ ತನ್ನ ಪರಮ ಕರ್ತವ್ಯದಂತೆ ದಿನಬೆಳಗಾಗುವುದರೊಳಗೆ ಅನುಷ್ಠಾನಗೊಳಿಸಿರುವಾಗ ಒಳಮೀಸಲಾತಿ ವಿಚಾರದಲ್ಲಿ ಯಾಕೆ ನ್ಯಾಯಾಲಯದ ಕಡೆ ಬೆರಳು ತೋರಿ ಕುಳಿತಿರುವುದು?

ಪರಿಶಿಷ್ಟ ಜಾತಿಗಳಲ್ಲಿನ ಸಮುದಾಯಗಳ ನಡುವೆ ಪರ-ವಿರೋಧದ ಸಂಗತಿ ಎನ್ನುವುದಕ್ಕಿಂತ ಸರ್ಕಾರದ ಇಚ್ಛಾಶಕ್ತಿಯ ಪ್ರಶ್ನೆಯೂ ಅಡಗಿದೆ. ರಾಜ್ಯ ಸರ್ಕಾರವೇ ರಚಿಸಿದ ಸದಾಶಿವ ಆಯೋಗವು ಸ್ಪಷ್ಟವಾಗಿ ವರದಿಯನ್ನು ನೀಡಿರುವಾಗ ಸರ್ಕಾರ ವರದಿಯನ್ನು ವಿಧಾನಮಂಡಲದಲ್ಲಿ ಮಂಡಿಸಿ ಚರ್ಚೆಗೊಳಪಡಿಸಲಿ. ವಿಧಾನಮಂಡಲ ಸಾಂವಿಧಾನಿಕ ವೇದಿಕೆಯಾಗಿರುವಾಗ ಒಳಮೀಸಲಾತಿ ಫಲಿತಾಂಶವೂ ಅಲ್ಲೆ ಇತ್ಯರ್ಥವಾಗಬಾರದೇಕೆ? ಸಂಬಂಧಿತ ಜಾತಿಗಳ ನಡುವೆ ಕಲಹಕ್ಕೆ ಎಡೆಮಾಡುವಂತೆ ವರದಿಯನ್ನು ತೇಲಿಸಿಬಿಟ್ಟು ಲಾಭ-ನಷ್ಟದ ಲೆಕ್ಕಾಚಾರದಲ್ಲಿ ಕೂರುವುದು ನಾಗರಿಕ ಸರ್ಕಾರದ ಹೊಣೆಗಾರಿಕೆಯಲ್ಲ. ಸದನದಲ್ಲಿ ವರದಿ ಮಂಡನೆಯಾಗಿ ಅದರಲ್ಲಿರಬಹುದಾದ ಭೂತ, ಹಾವು ಚೇಳುಗಳು ಹೊರಬರಲಿ. ಜೊತೆಗೆ ಹಲವರ ಬಣ್ಣಗಳೂ ಬಯಲಾಗಲಿ. ಒಳಮೀಸಲಾತಿ ಬಗ್ಗೆ ರಾಜ್ಯ ಸರ್ಕಾರ ತನ್ನ ನಿಲುವನ್ನು ಪ್ರಕಟಿಸುವ ಮೂಲಕ ಸಮಾಜದ ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳಬೇಕು.

ಒಳಮೀಸಲಾತಿಗೆ ಸಂಬಂಧಿಸಿದಂತೆ ಸದಾಶಿವ ಆಯೋಗದ ವರದಿ ಮತ್ತು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿ ಹಾಗೂ ಇತ್ತೀಚೆಗಷ್ಟೆ ಜಸ್ಟಿಸ್ ನಾಗಮೋಹನ ದಾಸ್ ಆಯೋಗದ (ಮೀಸಲು ಪ್ರಮಾಣ ಹೆಚ್ಚಳ) ವರದಿಯೂ ಸರ್ಕಾರದ ಮುಂದೆ ಇವೆ. ಈ ಮೂರು ಆಯೋಗದ ವರದಿಗಳಲ್ಲಿ ಜನಸಂಖ್ಯೆಗನುಗುಣವಾಗಿ ಮೀಸಲಾತಿ ಹಂಚುವ ಸಮಾನ ನ್ಯಾಯ ಪ್ರತಿಪಾದನೆಯಾಗಿರುವುದು ಮಹತ್ವದ ಸಂಗತಿ. ಒಳಮೀಸಲಾತಿ ಎಂಬುದು ಅಸ್ಪೃಶ್ಯ ಸಮುದಾಯವನ್ನು ವಂಚಿಸುವ ರಾಜಕೀಯ ಆಡುಂಬೊಲವಾಗದಿರಲಿ.

ಸಾಮಾಜಿಕ ನ್ಯಾಯವೆಂಬುದು ಕಟ್ಟಕಡೆಯ ದುರ್ಬಲ ವ್ಯಕ್ತಿಗೂ ದಕ್ಕಿದಾಗ ಅದು ಸಾರ್ಥಕಗೊಳ್ಳುತ್ತದೆ. ಒಟ್ಟಾರೆ ಮೀಸಲಾತಿಯನ್ನು ಅನುಷ್ಠಾನಗೊಳಿಸುವಾಗ ಇದ್ದ ಸಾಮಾಜಿಕ ನ್ಯಾಯದ ಪರಿಕಲ್ಪನೆ ಮತ್ತು ಪ್ರತಿಪಾದನೆ ಒಳಮೀಸಲಾತಿ ವಿಷಯದಲ್ಲೂ ಇರಬೇಕಾಗುತ್ತದೆ. ಒಳಮೀಸಲಾತಿಯನ್ನು ವಿರೋಧಿಸುವವರು ಅಂತಿಮವಾಗಿ ಮೀಸಲಾತಿಯ ವಿರೋಧಿಗಳೂ ಆಗಿರುತ್ತಾರೆ.
ಎನ್. ರವಿಕುಮಾರ್
ಶಿವಮೊಗ್ಗದ ಟೆಲೆಕ್ಸ್ ಪತ್ರಿಕೆಯ ಬರಹಗಳಿಂದ ಎಲ್ಲರಿಗೂ ಪರಿಚಿತರಾಗಿರುವ ರವಿಕುಮಾರ್. ‘ಟೆಲೆಕ್ಸ್ ರವಿ’ ಎಂದೇ ಹೆಚ್ಚಿನವರಿಗೆ ಗೊತ್ತಿದ್ದಾರೆ. ತಮ್ಮ ತೀಕ್ಷ್ಣ ಕವಿತೆಗಳು ಹಾಗೂ ಖಚಿತ ಬರಹಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಚ್ಚುಮೆಚ್ಚು

ಇದನ್ನೂ ಓದಿ: ಒಳ ಮೀಸಲಾತಿ: ಕಣ್ಣ ಗಾಯವನರಿಯುವ ಕ್ರಮ – ಹುಲಿಕುಂಟೆ ಮೂರ್ತಿ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ತಕ್ಷಣವೇ ‘SIR ಹೆಲ್ಪ್‌ ಡೆಸ್ಕ್‌’ ಸ್ಥಾಪಿಸುವಂತೆ ಅಧಿಕಾರಿಗಳಿಗೆ ಸಿಎಂ ಸೂಚನೆ

ರಾಜ್ಯದಲ್ಲಿ ಭಾರತೀಯ ಚುನಾವಣಾ ಆಯೋಗದಿಂದ ನಡೆಯುತ್ತಿರುವ ಎಸ್‌ಐಆರ್ (Special Electoral Roll Purification) ಪ್ರಕ್ರಿಯೆ ಸಂದರ್ಭದಲ್ಲಿ ರಾಜ್ಯದ ಯಾವುದೇ ಪ್ರಜೆಯೂ ತನ್ನ ಅತ್ಯಮೂಲ್ಯವಾದ ಮತದಾನದ ಹಕ್ಕನ್ನು ಕಳೆದುಕೊಳ್ಳಬಾರದು ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್...

ವಿಷಾಹಾರಕ್ಕೆ ಜಾಗತಿಕವಾಗಿ ವರ್ಷಕ್ಕೆ 15 ಲಕ್ಷ ಜನರು ಬಲಿ: ಮಕ್ಕಳಿಗೆ ಹೆಚ್ಚಿನ ಅಪಾಯ: ಭಾರತದ ಸ್ಥಿತಿಯೂ ಆತಂಕಕಾರಿ! 

ನಾವು ದಿನನಿತ್ಯ ಸೇವಿಸುವ ಆಹಾರವೇ ನಮ್ಮ ಜೀವಕ್ಕೆ ಕಂಟಕವಾಗುತ್ತಿದೆಯೇ? ಹೌದು ಎನ್ನುತ್ತದೆ ವಿಶ್ವ ಆರೋಗ್ಯ ಸಂಸ್ಥೆಯ (WHO) ಇತ್ತೀಚಿನ ಆಘಾತಕಾರಿ ವರದಿ. ಜಾಗತಿಕವಾಗಿ ಅಸುರಕ್ಷಿತ ಮತ್ತು ಕಲುಷಿತ ಆಹಾರದ ಸೇವನೆಯಿಂದಾಗಿ ಪ್ರತಿ ವರ್ಷ...

ಡಿಕೆಶಿ ಸಂಪುಟದಲ್ಲಿ ಅಲ್ಪಸಂಖ್ಯಾತರಿಗೆ ಸಿಗುತ್ತಾ ಸೂಕ್ತ ಪ್ರಾತಿನಿಧ್ಯ?

ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿ, ಡಿ.ಕೆ ಶಿವಕುಮಾರ್ ಹೊಸ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗಿದೆ. ಈ ಮೂಲಕ ಕಳೆದ ಒಂದು ವರ್ಷದಿಂದ ನಡೆಯುತ್ತಿದ್ದ ಸಿಎಂ ಬದಲಾವಣೆಯ...

‘ಕರ್ನಾಟಕದಲ್ಲಿ SIR’ ಮತ ಉಳಿಸಿಕೊಳ್ಳುವಂತೆ ಕಾರ್ಯಕರ್ತರಿಗೆ CM ಡಿ.ಕೆ ಶಿವಕುಮಾರ್ ಕರೆ!

ಕರ್ನಾಟಕ ರಾಜಕಾರಣದಲ್ಲಿ ಹೊಸ ಯುಗ ಆರಂಭವಾಗಿದೆ. ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಕೆಲಸ ಮಾಡದಿರುವ ಸಚಿವ ಮತ್ತು ಶಾಸಕರನ್ನು ಸುಮ್ಮನೆ ಬಿಡುವುದಿಲ್ಲ ಎಂದು...

ವೋಟರ್ ಐಡಿ, ಆಧಾರ್ ಇದ್ದರೂ ನೆಮ್ಮದಿ ಇಲ್ಲ, ಪಶ್ಚಿಮ ಬಂಗಾಳದಲ್ಲಿ ಶುರುವಾಯ್ತು ‘ಹೋಲ್ಡಿಂಗ್ ಸೆಂಟರ್’ಗಳ ಭಯ

ಪಶ್ಚಿಮ ಬಂಗಾಳದಲ್ಲಿ "ಯಾರು ಈಗಾಗಲೇ ಮತದಾರರ ಪಟ್ಟಿಯಿಂದ ಹೊರಗುಳಿದಿದ್ದಾರೋ ಮತ್ತು ಟ್ರಿಬ್ಯೂನಲ್‌ನ (ನ್ಯಾಯಮಂಡಳಿ) ಅನುಮೋದನೆಗಾಗಿ ಕಾಯುತ್ತಿದ್ದಾರೋ, ಅಂತಹವರಲ್ಲಿ ಹೊಸ ಪೊಲೀಸ್ ವ್ಯವಸ್ಥೆ ಮತ್ತು ಬಂಧನ ಕೇಂದ್ರಗಳು (ಡಿಟೆಂಷನ್ ಸೆಂಟರ್) ತಮ್ಮನ್ನು ವಿದೇಶಿಯರಂತೆ ನಡೆಸಿಕೊಳ್ಳಲ್ಪಡಬಹುದು...

ಕೇಂದ್ರ ಶಿಕ್ಷಣ ಸಚಿವರ ರಾಜೀನಾಮೆಗೆ ಆಗ್ರಹ : ಮೊದಲ ಬೀದಿ ಹೋರಾಟಕ್ಕೆ ಸಜ್ಜಾದ ಕಾಕ್ರೋಚ್ ಜನತಾ ಪಾರ್ಟಿ

ಸಾಮಾಜಿಕ ಜಾಲತಾಣಗಳಲ್ಲಿ ಹೊಸ ಅಲೆಯನ್ನು ಸೃಷ್ಟಿಸಿರುವ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ತನ್ನ ಮೊದಲ ಬೀದಿ ಹೋರಾಟಕ್ಕೆ ಸಜ್ಜಾಗಿದೆ. ಜೂನ್ 6, 2026ರಂದು ನವದೆಹಲಿಯ ಜಂತರ್ ಮಂತರ್‌ನಲ್ಲಿ ಸಿಜೆಪಿ ಪ್ರತಿಭಟನೆ ಆಯೋಜಿಸಿದ್ದು, ಇದರ...

ದೆಹಲಿ: ‘ಮಾಳವೀಯ ನಗರ’ ಅಗ್ನಿ ದುರಂತಕ್ಕೆ 21 ಜನರು ಬಲಿ: ವ್ಯವಸ್ಥೆಯ ವೈಫಲ್ಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿರುವ ನಾಗರೀಕರು 

ದೆಹಲಿಯ ಅತ್ಯಂತ ಜನನಿಬಿಡ ಮತ್ತು ವಾಣಿಜ್ಯ ಪ್ರದೇಶವಾದ ಮಾಳವೀಯ ನಗರದಲ್ಲಿ 2026 ಜೂನ್ 3, ಬುಧವಾರ ನಸುಕಿನ ಜಾವ ಸಂಭವಿಸಿದ ಭೀಕರ ಅಗ್ನಿ ದುರಂತವು ಇಡೀ ದೇಶವನ್ನು ಬೆಚ್ಚಿಬೀಳಿಸಿದೆ. 'ಫ್ಲೋರಿಶ್ ಸ್ಟೇ ಬಿ...

“ವಿಷ ಕಾರದೆ ಮಾತನಾಡಿ”: ಕಲ್ಲಡ್ಕ ಪ್ರಭಾಕರ ಭಟ್‌ಗೆ ಹೈಕೋರ್ಟ್ ತಾಕೀತು

ಹೆಚ್ಚು ಮಕ್ಕಳನ್ನು ಹೆರುವ ಮುಸ್ಲಿಂ ಮಹಿಳೆಯರನ್ನು ಲೇವಡಿ ಮಾಡುವ ಮೂಲಕ ಕೋಮು ದ್ವೇಷ ಹರಡಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ಹಿಂದುತ್ವ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಕಲ್ಲಡ್ಕ ಅವರಿಗೆ ತಮ್ಮ ಮುಂದಿನ ಭಾಷಣಗಳಲ್ಲಿ...

ಪತ್ರಕರ್ತ- ಚಿತ್ರ ನಿರ್ಮಾಪಕ ಸೇರಿದಂತೆ ಹಲವು ಕ್ಷೇತ್ರಗಳ ಪ್ರಮುಖರನ್ನು ವಕ್ತಾರರನ್ನಾಗಿ ನೇಮಿಸಿದ ಸಿಜೆಪಿ

ಆನ್‌ಲೈನ್ ಸೆನ್ಸೇಷನ್ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ)ಯು ಶಿಕ್ಷಣ ವ್ಯವಸ್ಥೆಯಲ್ಲಿನ ವೈಫಲ್ಯಗಳ ವಿರುದ್ಧ ಪ್ರಸ್ತಾಪಿಸಿದ ಪ್ರತಿಭಟನೆಗೆ ಮುಂಚಿತವಾಗಿ ತನ್ನ ವ್ಯಾಪ್ತಿಯನ್ನು ವಿಸ್ತರಿಸುವ ಸಲುವಾಗಿ ಮೂವರು ವಕ್ತಾರರ ಹೆಸರನ್ನು ಘೋಷಿಸಿದೆ. ಎಕ್ಸ್‌ನಲ್ಲಿನ ಪೋಸ್ಟ್‌ ಮಾಡಿರುವ ಅಭಿಜೀತ್...

CBSE ಪರೀಕ್ಷೆಯಲ್ಲಿ OSM ವಿವಾದ | ಸಂಸದೀಯ ಸಮಿತಿಯ ಮುಂದೆ ಹಾಜರಾದ ವಿದ್ಯಾರ್ಥಿ ಸಾರ್ಥಕ್ ಸಿದ್ಧಾಂತ್

ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (ಸಿಬಿಎಸ್‌ಸಿ) ಆನ್-ಸ್ಕ್ರೀನ್ ಮಾರ್ಕಿಂಗ್ (ಒಎಸ್‌ಎಂ) ಮೌಲ್ಯಮಾಪನ ವ್ಯವಸ್ಥೆಯಲ್ಲಿನ ಗಂಭೀರ ಲೋಪಗಳ ಕುರಿತು ವಿವಾದ ಭುಗಿಲೆದ್ದಿರುವ ನಡುವೆ, 17 ವರ್ಷದ ವಿದ್ಯಾರ್ಥಿ ಸಾರ್ಥಕ್ ಸಿದ್ಧಾಂತ್ ನವದೆಹಲಿಯ ಸಂಸತ್ ಭವನದಲ್ಲಿ...