Homeಮುಖಪುಟಒಳಮೀಸಲು ರಾಜಕೀಯ ಆಡುಂಬೊಲವಾಗದಿರಲಿ - ಎನ್. ರವಿಕುಮಾರ್

ಒಳಮೀಸಲು ರಾಜಕೀಯ ಆಡುಂಬೊಲವಾಗದಿರಲಿ – ಎನ್. ರವಿಕುಮಾರ್

- Advertisement -
- Advertisement -

ಒಳಮೀಸಲಾತಿಯನ್ನು ಕೇವಲ ಒಂದು ಸವಲತ್ತಿನ ಕಾರ್ಯಸೂಚಿಯಾಗಿ ನೋಡದೆ ಸಾಮಾಜಿಕ ಆಯಾಮಗಳಿಂದಲೂ ಅವಲೋಕಿಸಿ ನೋಡಿದಾಗ ಅಸ್ಪೃಶ್ಯ ಬದುಕಿನ ಸತ್ಯ ದರ್ಶನವಾಗುತ್ತದೆ. ಪರಿಶಿಷ್ಟ ಜಾತಿಯ 101 ಜಾತಿಗಳಲ್ಲಿ ಸ್ಪೃಶ್ಯ-ಅಸ್ಪೃಶ್ಯ ಸ್ತರಗಳನ್ನು ಮೊದಲು ಮನಗಾಣಬೇಕು. ಹೊಲೆ-ಮಾದಿಗರು ಹೊರಗಿಟ್ಟ ಸಮುದಾಯವಾಗಿಯೇ ಬದುಕುತ್ತಿರುವ ಕಾಲ ಇನ್ನೂ ಜೀವಂತವಾಗಿದೆ. ಪರಿಶಿಷ್ಟ ಜಾತಿಯಲ್ಲಿನ ಬಹುತೇಕ ಬಲಾಢ್ಯ ಸ್ಪೃಶ್ಯಜಾತಿಗಳು ಮಾದಿಗರನ್ನು ಹೊಸ್ತಿಲ ಒಳಗೂ ಬಿಟ್ಟುಕೊಳ್ಳದೆ, ತಮ್ಮ ಹೊಲ, ಗದ್ದೆಗಳ ಜೀತಕ್ಕೂ ಇಟ್ಟುಕೊಂಡ ಪ್ರಕರಣಗಳು ಇವೆ. ಮಾದಿಗ ಸಮುದಾಯ ನಾಗರಿಕ ಸಮಾಜದ ಹೇಲು-ಉಚ್ಚೆ ಬಾಚಿ ಬಳಿಯುವ ದಾರುಣ ಬದುಕಿನಿಂದ ಮತ್ತು ಈ ಕಾಲಕ್ಕೂ ಪುಟ್‍ಬಾತ್‍ನಲ್ಲಿ ಅಂಬೇಡ್ಕರ್, ಬಾಬು ಜಗಜೀವನ ರಾಂ ಹೆಸರಿನಲ್ಲಿ ಪೆಟ್ಟಿಗೆಗಳನ್ನಿಟ್ಟುಕೊಂಡು ಚಪ್ಪಲಿ ಹೊಲಿಯುವ ಕಸುಬಿನಿಂದ ಈಗಿನ ತಲೆಮಾರುಗಳು ಇನ್ನೂ ಮುಕ್ತಿಹೊಂದಿಲ್ಲ. ಪರಿಶಿಷ್ಟ ಜಾತಿಗಳಲ್ಲಿನ ಸ್ಪೃಶ್ಯ-ಅಸ್ಪೃಶ್ಯ ಜಾತಿಗಳಿಗೆ ಒಟ್ಟು ಮೀಸಲಾತಿ ಅನ್ವಯವಾಗಿರುವಾಗ ಈ ಇಬ್ಬರ ನಡುವೆ ಇಂತಹ ಅಮಾನುಷ ಅಂತರ ಏಕಿದೆ ಎಂಬುದನ್ನು ಒಳಮೀಸಲಾತಿ ವಿರೋಧಿಸುವ ಸಹೋದರರು ಯೋಚಿಸಬೇಕಾಗಿದೆ.

ಒಳಮೀಸಲಾತಿಯ ಕೂಗು ಇಂದು – ನೆನ್ನೆಯದಲ್ಲ. 1994-95 ರಲ್ಲಿ ಆಂಧ್ರದಲ್ಲಿ ಆರಂಭಗೊಂಡ ಒಳಮೀಸಲಾತಿಯ ಕೂಗಿನ ಹಿಂದೆ ಜನಸಂಖ್ಯೆ ಆಧರಿಸಿ ಬಹುಸಂಖ್ಯಾತರಾಗಿದ್ದ ಅಸ್ಪೃಶ್ಯ ಜಾತಿಗಳು ಮೀಸಲಾತಿಯ ಫಲವನ್ನು ದಕ್ಕಿಸಿಕೊಳ್ಳಲಾಗದ ನೋವು ಸ್ಫೋಟಗೊಂಡಿತು. ಆಂಧ್ರದಲ್ಲಿ ಭುಗಿಲೆದ್ದ ಹೋರಾಟದ ಪರಿಣಾಮ ಅಂದಿನ ಆಂಧ್ರ ಸರ್ಕಾರ ಜಸ್ಟೀಸ್ ರಾಮಚಂದ್ರ ರಾವ್ ಆಯೋಗವನ್ನು ರಚಿಸಿದ್ದು, ಆಯೋಗವು ಮಾದಿಗ ಮತ್ತು ಸಂಬಂಧಿತ ಅಸ್ಪೃಶ್ಯ ಜಾತಿಗಳಿಗೆ ಒಳಮೀಸಲಾತಿ ನೀಡುವ ಅಗತ್ಯತೆಯನ್ನು ಸ್ಪಷ್ಟವಾಗಿ ವೈಜ್ಞಾನಿಕ ಕೋನದಲ್ಲಿ ಮಂಡಿಸಿತು. ಸರ್ಕಾರ ಕೂಡ ಇದನ್ನು ಅನುಷ್ಠಾನಗೊಳಿಸಲು ಮುಂದಾದಾಗ ಆರ್ಥಿಕವಾಗಿ ಪ್ರಬಲವಾಗಿದ್ದ ಮಾಲ ಸಮುದಾಯವು ನ್ಯಾಯಾಲಯಕ್ಕೆ ಮೊರೆಹೋಗಿದ್ದರಿಂದ ಉದ್ದೇಶಿತ ಒಳಮೀಸಲಾತಿಗೆ ಹಿನ್ನಡೆಯಾಯಿತು.

ಆಂಧ್ರದ ಚಳವಳಿಯಿಂದ ಪ್ರೇರಣೆಗೊಂಡು ಕರ್ನಾಟಕದಲ್ಲೂ ಒಳಮೀಸಲಾತಿ ಹೋರಾಟ ಆರಂಭಗೊಂಡಿತು. ಅದರ ಪರಿಣಾಮದಿಂದ ರಚನೆಯಾದ ಜಸ್ಟಿಸ್ ಸದಾಶಿವ ಆಯೋಗದ ವರದಿಯಲ್ಲಿ ಜನಸಂಖ್ಯೆಗನುಗುಣವಾಗಿ ಮೀಸಲು ಹಂಚಿಕೆಯ ಮಾನದಂಡವೊಂದು ಪ್ರಸ್ತಾಪಿತವಾಗಿದೆ. ಒಟ್ಟು ಮೀಸಲು ಪ್ರಮಾಣ ಶೇ. 15ರಲ್ಲಿ – ಶೇ. 33.47 ರಷ್ಟಿರುವ ಮಾದಿಗ ಸಮುದಾಯಕ್ಕೆ ಶೇ. 6, ಶೇ. 32 ರಷ್ಟು ಪ್ರಮಾಣದ ಜನಸಂಖ್ಯೆ ಹೊಂದಿರುವ ಬಲಗೈ ಸಮುದಾಯಕ್ಕೆ ಶೇ. 5 ಉಳಿದ ಸ್ಪೃಶ್ಯ ಮತ್ತು ಸಂಬಂಧಿತ ಜಾತಿಗಳಿಗೆ ಶೇ. 3 ಮತ್ತು ಇತರೆ ಜಾತಿಗಳಿಗೆ ಶೇ. 1 ರಷ್ಟು ಮೀಸಲಾತಿಯ ಹಂಚಿಕೆಯನ್ನು ಪ್ರತಿಪಾದಿಸಿದೆ. ಜನಸಂಖ್ಯೆ ಆಧರಿಸಿ ಮೀಸಲು ಪ್ರಮಾಣ ಹಂಚಿಕೆಯಾಗುವುದು ನ್ಯಾಯಸಮ್ಮತವೂ ಮತ್ತು ಹಕ್ಕು ಆಗಿರುವಾಗ ಇದನ್ನು ವಿರೋಧಿಸುವುದು ಸಾಮಾಜಿಕ ನ್ಯಾಯದ ಉಲ್ಲಂಘನೆಯೂ ಆಗುತ್ತದೆ. ಮೀಸಲಾತಿಯ ಬಗೆಗಿನ ವೈಜ್ಞಾನಿಕವಾದ ಮತ್ತು ಪ್ರಜಾತಾಂತ್ರಿಕವಾದ ನಿಲುವನ್ನು ಬಿತ್ತುವ ಮತ್ತು ಹೊಂದುವ ಅಗತ್ಯ ಎಲ್ಲಾ ಕಾಲಕ್ಕೂ ಇರತಕ್ಕದ್ದು. ಅದು ಒಳಮೀಸಲಾತಿಗೂ ವಿಸ್ತರಿಸಬೇಕು. ಈ ಮೂಲಕ ಹಂಚುಣ್ಣುವ ಮನೋಧರ್ಮವನ್ನು ಧರಿಸಲು ಸಾಧ್ಯ.

ಇದನ್ನೂ ಓದಿ: ಒಳಮೀಸಲಾತಿಯೆಂಬುದು ಅಣ್ಣನ ಪಾಲು ಅಣ್ಣನಿಗೆ, ತಮ್ಮನ ಪಾಲು ತಮ್ಮನಿಗೆ ಎಂಬ ಸರಳ ಸೂತ್ರ – ಅಂಬಣ್ಣ ಅರೋಲಿಕರ್

ನೆನಗುದಿಗೆ ಬಿದ್ದಿದ್ದ ಜಸ್ಟಿಸ್ ಸದಾಶಿವ ಆಯೋಗಕ್ಕೆ 2010ರಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪನವರು ಹಣಕಾಸು ನೀಡಿ ಚಾಲನೆ ನೀಡಿದರು. ಈಗ ಯಡಿಯೂರಪ್ಪನವರೆ ಮುಖ್ಯಮಂತ್ರಿಯಾಗಿದ್ದಾರೆ. ವರದಿ ಮಂಡನೆಯಾಗಿ ಎಂಟು ವರ್ಷಗಳು ಕಳೆದಿವೆ. ಆದರೆ ಈ ವರದಿ ಕೇವಲ ರಾಜಕೀಯ ಕಾರಣಕ್ಕಾಗಿ ಬಳಕೆಯಾಗದೆ ಉದ್ದೇಶಿತ ನ್ಯಾಯವನ್ನು ಜಾರಿಗೊಳಿಸುವ ಬದ್ಧತೆಯನ್ನು ತೋರಬೇಕಿದೆ. ಇಲ್ಲಿ ಮೂಲಭೂತವಾದ ಪ್ರಶ್ನೆಯೆಂದರೆ, ಜಸ್ಟಿಸ್ ಸದಾಶಿವ ಆಯೋಗದ ವರದಿಯನ್ನು ಒಪ್ಪುವುದು, ತಿರಸ್ಕರಿಸುವ ಹೊಣೆಗಾರಿಕೆ ಯಾರದ್ದು?!

ಈ ವರದಿಯ ಚರ್ಚೆ ಹಾದಿ – ಬೀದಿಯಲ್ಲಿ ನಡೆಯಬೇಕಾ? ಪರಿಶಿಷ್ಟ ಸಹೋದರರು ಪರ-ವಿರೋಧಗಳ ಹಗೆಗೆ ಬಿದ್ದು ಬೀದಿಗೆ ಬರಬೇಕಾ?

ಸುಪ್ರೀಂ ಕೋರ್ಟ್ ರಾಷ್ಟ್ರ ಮಟ್ಟದಲ್ಲೇ ಒಳಮೀಸಲಾತಿ ಕುರಿತಂತೆ ಸಕಾರಾತ್ಮಕವಾಗಿ ತನ್ನ ಅಭಿಪ್ರಾಯವನ್ನು ವ್ಯಕ್ತಿಪಡಿಸಿದೆ. ವಿಸ್ತೃತ ಪೀಠದ ಪರಿಶೀಲನೆಗೂ ಒಪ್ಪಿಸಿದೆ. ವಿಸ್ತೃತ ಸಂವಿಧಾನಿಕ ನ್ಯಾಯಪೀಠ ತನ್ನ ಅಂತಿಮ ತೀರ್ಪು ನೀಡುವವರೆಗೂ ಒಳಮೀಸಲು ವಂಚಿತ ಸಮುದಾಯಗಳು ರಾಜಕೀಯ ಪಕ್ಷಗಳ ಓಲೈಕೆಯ ಬಾಲಂಗೋಚಿಗಳಾಗಿ ಬದುಕುವಂತಾಗಬಹುದು. ಕೇಂದ್ರ ಸರ್ಕಾರ ಬ್ರಾಹ್ಮಣ ಸಮುದಾಯದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಶೇ10 ಮೀಸಲಾತಿಯನ್ನು ಸುಗ್ರೀವಾಜ್ಞೆ ಮೂಲಕ ತನ್ನ ಪರಮ ಕರ್ತವ್ಯದಂತೆ ದಿನಬೆಳಗಾಗುವುದರೊಳಗೆ ಅನುಷ್ಠಾನಗೊಳಿಸಿರುವಾಗ ಒಳಮೀಸಲಾತಿ ವಿಚಾರದಲ್ಲಿ ಯಾಕೆ ನ್ಯಾಯಾಲಯದ ಕಡೆ ಬೆರಳು ತೋರಿ ಕುಳಿತಿರುವುದು?

ಪರಿಶಿಷ್ಟ ಜಾತಿಗಳಲ್ಲಿನ ಸಮುದಾಯಗಳ ನಡುವೆ ಪರ-ವಿರೋಧದ ಸಂಗತಿ ಎನ್ನುವುದಕ್ಕಿಂತ ಸರ್ಕಾರದ ಇಚ್ಛಾಶಕ್ತಿಯ ಪ್ರಶ್ನೆಯೂ ಅಡಗಿದೆ. ರಾಜ್ಯ ಸರ್ಕಾರವೇ ರಚಿಸಿದ ಸದಾಶಿವ ಆಯೋಗವು ಸ್ಪಷ್ಟವಾಗಿ ವರದಿಯನ್ನು ನೀಡಿರುವಾಗ ಸರ್ಕಾರ ವರದಿಯನ್ನು ವಿಧಾನಮಂಡಲದಲ್ಲಿ ಮಂಡಿಸಿ ಚರ್ಚೆಗೊಳಪಡಿಸಲಿ. ವಿಧಾನಮಂಡಲ ಸಾಂವಿಧಾನಿಕ ವೇದಿಕೆಯಾಗಿರುವಾಗ ಒಳಮೀಸಲಾತಿ ಫಲಿತಾಂಶವೂ ಅಲ್ಲೆ ಇತ್ಯರ್ಥವಾಗಬಾರದೇಕೆ? ಸಂಬಂಧಿತ ಜಾತಿಗಳ ನಡುವೆ ಕಲಹಕ್ಕೆ ಎಡೆಮಾಡುವಂತೆ ವರದಿಯನ್ನು ತೇಲಿಸಿಬಿಟ್ಟು ಲಾಭ-ನಷ್ಟದ ಲೆಕ್ಕಾಚಾರದಲ್ಲಿ ಕೂರುವುದು ನಾಗರಿಕ ಸರ್ಕಾರದ ಹೊಣೆಗಾರಿಕೆಯಲ್ಲ. ಸದನದಲ್ಲಿ ವರದಿ ಮಂಡನೆಯಾಗಿ ಅದರಲ್ಲಿರಬಹುದಾದ ಭೂತ, ಹಾವು ಚೇಳುಗಳು ಹೊರಬರಲಿ. ಜೊತೆಗೆ ಹಲವರ ಬಣ್ಣಗಳೂ ಬಯಲಾಗಲಿ. ಒಳಮೀಸಲಾತಿ ಬಗ್ಗೆ ರಾಜ್ಯ ಸರ್ಕಾರ ತನ್ನ ನಿಲುವನ್ನು ಪ್ರಕಟಿಸುವ ಮೂಲಕ ಸಮಾಜದ ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳಬೇಕು.

ಒಳಮೀಸಲಾತಿಗೆ ಸಂಬಂಧಿಸಿದಂತೆ ಸದಾಶಿವ ಆಯೋಗದ ವರದಿ ಮತ್ತು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿ ಹಾಗೂ ಇತ್ತೀಚೆಗಷ್ಟೆ ಜಸ್ಟಿಸ್ ನಾಗಮೋಹನ ದಾಸ್ ಆಯೋಗದ (ಮೀಸಲು ಪ್ರಮಾಣ ಹೆಚ್ಚಳ) ವರದಿಯೂ ಸರ್ಕಾರದ ಮುಂದೆ ಇವೆ. ಈ ಮೂರು ಆಯೋಗದ ವರದಿಗಳಲ್ಲಿ ಜನಸಂಖ್ಯೆಗನುಗುಣವಾಗಿ ಮೀಸಲಾತಿ ಹಂಚುವ ಸಮಾನ ನ್ಯಾಯ ಪ್ರತಿಪಾದನೆಯಾಗಿರುವುದು ಮಹತ್ವದ ಸಂಗತಿ. ಒಳಮೀಸಲಾತಿ ಎಂಬುದು ಅಸ್ಪೃಶ್ಯ ಸಮುದಾಯವನ್ನು ವಂಚಿಸುವ ರಾಜಕೀಯ ಆಡುಂಬೊಲವಾಗದಿರಲಿ.

ಸಾಮಾಜಿಕ ನ್ಯಾಯವೆಂಬುದು ಕಟ್ಟಕಡೆಯ ದುರ್ಬಲ ವ್ಯಕ್ತಿಗೂ ದಕ್ಕಿದಾಗ ಅದು ಸಾರ್ಥಕಗೊಳ್ಳುತ್ತದೆ. ಒಟ್ಟಾರೆ ಮೀಸಲಾತಿಯನ್ನು ಅನುಷ್ಠಾನಗೊಳಿಸುವಾಗ ಇದ್ದ ಸಾಮಾಜಿಕ ನ್ಯಾಯದ ಪರಿಕಲ್ಪನೆ ಮತ್ತು ಪ್ರತಿಪಾದನೆ ಒಳಮೀಸಲಾತಿ ವಿಷಯದಲ್ಲೂ ಇರಬೇಕಾಗುತ್ತದೆ. ಒಳಮೀಸಲಾತಿಯನ್ನು ವಿರೋಧಿಸುವವರು ಅಂತಿಮವಾಗಿ ಮೀಸಲಾತಿಯ ವಿರೋಧಿಗಳೂ ಆಗಿರುತ್ತಾರೆ.
ಎನ್. ರವಿಕುಮಾರ್
ಶಿವಮೊಗ್ಗದ ಟೆಲೆಕ್ಸ್ ಪತ್ರಿಕೆಯ ಬರಹಗಳಿಂದ ಎಲ್ಲರಿಗೂ ಪರಿಚಿತರಾಗಿರುವ ರವಿಕುಮಾರ್. ‘ಟೆಲೆಕ್ಸ್ ರವಿ’ ಎಂದೇ ಹೆಚ್ಚಿನವರಿಗೆ ಗೊತ್ತಿದ್ದಾರೆ. ತಮ್ಮ ತೀಕ್ಷ್ಣ ಕವಿತೆಗಳು ಹಾಗೂ ಖಚಿತ ಬರಹಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಚ್ಚುಮೆಚ್ಚು

ಇದನ್ನೂ ಓದಿ: ಒಳ ಮೀಸಲಾತಿ: ಕಣ್ಣ ಗಾಯವನರಿಯುವ ಕ್ರಮ – ಹುಲಿಕುಂಟೆ ಮೂರ್ತಿ
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...