Homeನೂರರ ನೋಟಕ್ರಿಮಿನಲ್ ಎಂಪಿ, ಎಂಎಲ್‌ಎಗಳ ವಿರುದ್ಧ ನ್ಯಾಯಾಲಯ ಸೆಟೆದು ನಿಲ್ಲಲಿ: ಎಚ್.ಎಸ್ ದೊರೆಸ್ವಾಮಿ

ಕ್ರಿಮಿನಲ್ ಎಂಪಿ, ಎಂಎಲ್‌ಎಗಳ ವಿರುದ್ಧ ನ್ಯಾಯಾಲಯ ಸೆಟೆದು ನಿಲ್ಲಲಿ: ಎಚ್.ಎಸ್ ದೊರೆಸ್ವಾಮಿ

2009ರ ಲೋಕಸಭೆಯಲ್ಲಿ ಇದ್ದ 542 ಸದಸ್ಯರ ಪೈಕಿ 162 ಸದಸ್ಯರ ವಿರುದ್ಧ ಕೊಲೆ, ಕೊಲೆ ಪ್ರಯತ್ನ, ವ್ಯಕ್ತಿಗಳ ಅಪಹರಣ, ದರೋಡೆ ಮತ್ತು ಅತ್ಯಾಚಾರ ಕೇಸುಗಳು ಇವೆ.

- Advertisement -
- Advertisement -

2014 ರಲ್ಲಿ ಸರ್ವೋಚ್ಚ ನ್ಯಾಯಾಲಯ ಕ್ರಿಮಿನಲ್ ಕೇಸುಗಳನ್ನು ಎದುರಿಸುತ್ತಿರುವ ಎಂಪಿಗಳು ಮತ್ತು ಎಂಎಲ್‌ಎಗಳ ಮೇಲೆ ಕೇಸುಗಳು ದಾಖಲಾದರೆ, ಅದರ ಚಾರ್ಜ್ ಶೀಟ್ ಹಾಕಿದ ನಂತರ, ವಿಚಾರಣೆಯನ್ನು ಒಂದು ವರ್ಷಗಳ ಒಳಗಾಗಿ ಪೂರೈಸಬೇಕೆಂದೂ, ಕೋರ್ಟ್ ಕಲಾಪಗಳನ್ನು ವಿಚಾರಣೆ ಮುಗಿಯುವವರೆಗೂ ಪ್ರತಿದಿನವೂ ನಡೆಸಬೇಕೆಂದು ಆಜ್ಞೆ ಮಾಡಿತು. ಈ ಆಜ್ಞೆ ದೂರಗಾಮಿ ಫಲವನ್ನು ನೀಡುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು. ಈ ಮೂಲಕ ರಾಜಕೀಯ ಪಕ್ಷಗಳು ಕ್ರಿಮಿನಲ್‌ಗಳನ್ನು ಉಮೇದುದಾರರನ್ನಾಗಿ ನಿಲ್ಲಿಸುವ ದುಷ್ಟನೀತಿ ತಪ್ಪೀತೆಂದು ನ್ಯಾಯಾಲಯ ಆಶಿಸಿತು. ಯಾರಿಗೆ ನಂಬರ್‌ಗೇಮ್‌ನಲ್ಲಿ ಆಸಕ್ತಿ ಇದೆಯೋ ಯಾರಿಗೆ ಅಧಿಕಾರ ಹಿಡಿಯುವುದರಲ್ಲಿ ಆಸಕ್ತಿ ಇದೆಯೋ ಅಂತಹವರು ಕ್ರಿಮಿನಲ್‌ಗಳಿಗೆ ಟಿಕೆಟ್ ಕೊಡುವುದಕ್ಕೆ ಹಿಂಜರಿಯಬಹುದು.

ಈ ಕೇಸು ದಾಖಲಿಸಿದ್ದ ಎನ್‌ಜಿಒ ಸಂಸ್ಥೆ 4 ಬೇಡಿಕೆಗಳನ್ನಿಟ್ಟಿದ್ದವು. 1) ದಾರುಣವಾದ ಕ್ರಿಮಿನಲ್ ಅಪರಾಧಗಳನ್ನು ಎಸಗಿದ ಚಾರ್ಜ್‌ಗಳನ್ನು ಎದುರಿಸುತ್ತಿರುವವರು ಚುನಾವಣೆಗೆ ನಿಲ್ಲದಂತೆ ಮಾರ್ಗಸೂಚಿಯನ್ನು ರೂಪಿಸಿ. 2) ಯಾವ ಕ್ರಿಮಿನಲ್‌ಗಳ ಮೇಲೆ ಚಾರ್ಜ್ ಶೀಟ್ ಹಾಕಲಾಗಿದೆಯೋ ಅಂತಹವನ ಬಗೆಗೆ ಆರು ತಿಂಗಳೊಳಗಾಗಿ ನ್ಯಾಯಾಲಯ ತನ್ನ ತೀರ್ಪನ್ನು ನೀಡಬೇಕು. 3) ಯಾರ ಮೇಲೆ ಗುರುತರವಾದ ಕ್ರಿಮಿನಲ್ ಅಪರಾಧಗಳನ್ನು ಹೊರಿಸಲಾಗಿದೆಯೋ ಅಂತಹವರನ್ನು ಲೋಕಸಭೆ, ವಿಧಾನಸಭೆಗಳ ಸದಸ್ಯತ್ವದಿಂದ ತೆಗೆದುಹಾಕುವ ಕಾನೂನುಗಳನ್ನು ರಚಿಸಬೇಕು. 4) 1951ರ Representation of the Peopleನ ಸೆಕ್ಷನ್ 8(4)ನ್ನು (ಟ್ರಯಲ್ ನ್ಯಾಯಾಲಯದಲ್ಲಿ ತಪ್ಪಿತಸ್ಥ ಎಂಬ ತೀರ್ಪು ನೀಡಲಾಗಿದ್ದರೂ, ಅದರ ವಿರುದ್ಧ ತಪ್ಪಿತಸ್ಥ ಎಂಪಿ, ಎಂಎಲ್‌ಎ ಅಥವಾ ಎಂಎಲ್‌ಸಿ ಉನ್ನತ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರೆ ಅವರು ತಮ್ಮ ಸ್ಥಾನದಲ್ಲಿ ಮುಂದುವರೆಯಲು ಅವಕಾಶ ನೀಡುತ್ತದೆ) ರಾಜ್ಯಾಂಗ ವಿರೋಧಿ ಎಂದು ಘೋಷಿಸಬೇಕು.

ಚುನಾವಣಾ ಕಮಿಷನ್ ಈ ನಾಲ್ಕು ಸಲಹೆಗಳನ್ನು ಒಪ್ಪಿಕೊಂಡಿತಾದರೂ ಕೇಂದ್ರ ಸರ್ಕಾರ ಇದಕ್ಕೆ ತನ್ನ ಆಕ್ಷೇಪಣೆಗಳನ್ನು ಸಲ್ಲಿಸಿತು. ಇದು policy matter ಆಗಿದ್ದೂ ಪಾರ್ಲಿಮೆಂಟ್‌ನಿಂದ ಕಾನೂನು ರಚನೆಯಾಗಬೇಕಾಗಿರುವುದರಿಂದ ಈ ಕುರಿತು ಸರ್ವೋಚ್ಚ ನ್ಯಾಯಾಲಯ ವಿಚಾರಣೆ ಮಾಡುವಂತಿಲ್ಲ ಎಂದು ಮನವಿ ಮಾಡಿತು. ಆದರೆ ಸರ್ವೋಚ್ಚ ನ್ಯಾಯಾಲಯ ಸರ್ಕಾರದ ಈ ವಾದವನ್ನು ತಳ್ಳಿಹಾಕಿ ಈ ವಿಚಾರದಲ್ಲಿ ಲಾಕಮಿಷನ್‌ನ ಶಿಫಾರಸ್ಸು ಏನೆಂದು ಕೇಳಿತು.

2009ರ ಲೋಕಸಭೆಯಲ್ಲಿ ಇದ್ದ 542 ಸದಸ್ಯರ ಪೈಕಿ 162 ಸದಸ್ಯರ ವಿರುದ್ಧ ದಾರುಣವಾದ ಕ್ರಿಮಿನಲ್ ಕೇಸುಗಳಿದ್ದವು. ಕೊಲೆ, ಕೊಲೆ ಪ್ರಯತ್ನ, ವ್ಯಕ್ತಿಗಳ ಅಪಹರಣ, ದರೋಡೆ ಮತ್ತು ಅತ್ಯಾಚಾರ ಕೇಸುಗಳು ಅವರ ವಿರುದ್ಧ ಇವೆ. ಇವರ ವಿರುದ್ಧದ ಖಟ್ಳೆಗಳು 7 ವರ್ಷಗಳಷ್ಟು ಹಳೆಯದಾದರೂ ಇನ್ನೂ ಕೋರ್ಟ್ ವಿಚಾರಣೆ ಮುಗಿದಿಲ್ಲ ಎಂದು ಲಾಕಮಿಷನ್ ನ್ಯಾಯಾಲಯಕ್ಕೆ ತಿಳಿಸಿದೆ. ಈ ಕೇಸುಗಳು ಸುಳ್ಳು ಪ್ರಮಾಣಪತ್ರ ಸಲ್ಲಿಸಿರುವುದಕ್ಕೆ ಸಂಬಂಧಪಟ್ಟವು.

9 ಎಂಪಿಗಳ ಕೇಸುಗಳು 20 ವರ್ಷದಷ್ಟು ಹಳೆಯವಾದರೂ ಇನ್ನೂ ವಿಚಾರಣೆ ಮುಗಿದಿಲ್ಲ. ಹಣದ ಪ್ರಭಾವ, ಅಧಿಕಾರ ಪ್ರಭಾವ ಈ ಕ್ಯಾನ್ಸರ್ ಹರಡುವುದರಲ್ಲಿ ಪ್ರಮುಖ ಪಾತ್ರ ವಹಿಸಿವೆ. ಅಷ್ಟೆ ಅಲ್ಲದೆ ಕೇಸನ್ನು ಮುಂದಕ್ಕೆ ತಳ್ಳಲು ಇದೇ ಪ್ರಭಾವವನ್ನು ಬಳಸಲಾಗಿದೆ. 1951ರ ರಾಜ್ಯಾಂಗದ RPI Actನ ಸೆಕ್ಷನ್ 8(4), ಬೆಂಕಿಗೆ ತುಪ್ಪ ಸುರಿದಂತೆ ನ್ಯಾಯದಾನಕ್ಕೆ ಅಡ್ಡಗಾಲು ಹಾಕಿದೆ. 2013 ರಲ್ಲಿ ಸರ್ವೋಚ್ಚ ನ್ಯಾಯಾಲಯ ಸೆಕ್ಷನ್ 8(4)ನ್ನು ರಾಜ್ಯಾಂಗ ವಿರೋಧಿ ಸೆಕ್ಷನ್ ಎಂದು ತೀರ್ಪಿತ್ತಿತು. ಆದರೆ ಪಾರ್ಲಿಮೆಂಟ್ ಇದುವರೆಗೆ ರಾಜ್ಯಾಂಗದಿಂದ ಈ ಸೆಕ್ಷನ್ ತೆಗೆದುಹಾಕಲು ಯಾವುದೇ ಕ್ರಮ ಕೈಗೊಂಡಿಲ್ಲ. ಸರ್ವೋಚ್ಚ ನ್ಯಾಯಾಲಯ ರಾಜ್ಯಾಂಗ ವಿರೋಧಿ ಎಂದು ಹೇಳಿ ಕೇಂದ್ರ ಸರ್ಕಾರ ಪಾರ್ಲಿಮೆಂಟಿನಲ್ಲಿ ಈ ವಿಷಯವನ್ನು ಮಂಡಿಸಿ ಆ ಸೆಕ್ಷನ್ ಕಿತ್ತು ಹಾಕಲು ಮೀನಾಮೇಷ ಎಣಿಸುತ್ತಿದೆ. ಹತ್ತಾರು ವರ್ಷಗಳ ಹಿಂದೆ ಕೋರ್ಟು ಆ ಸೆಕ್ಷನ್ನುಗಳನ್ನು ಕಿತ್ತು ಹಾಕಲು ಸರ್ಕಾರಕ್ಕೆ ತಿಳಿಸಿದ್ದರೂ ಈ ಕ್ರಿಮಿನಲ್ ಎಂಪಿಗಳನ್ನು ರಕ್ಷಿಸಿಕೊಂಡೇ ಬಂದಿದೆ.

ಆದ್ದರಿಂದ ಸರ್ವೋಚ್ಚ ನ್ಯಾಯಾಲಯ ಸರ್ಕಾರಕ್ಕೆ ಇಂತಿಷ್ಟು ತಿಂಗಳುಗಳಲ್ಲಿ ರಾಜ್ಯಾಂಗದಲ್ಲಿ ತಿದ್ದುಪಡಿ ತಂದು ಹಾಲಿ ಇರುವ ಕಳಂಕಿತ ಎಂಪಿ, ಎಂಎಲ್‌ಎಗಳನ್ನು ಹೊರದೂಡಬೇಕೆಂದೂ, ಕಳಂಕಿತ ಮಾಜಿ ಎಂಪಿಗಳು, ಎಂಎಲ್‌ಎಗಳ ಮೇಲೂ ಕ್ರಿಮಿನಲ್ ಕೇಸುಗಳನ್ನು ಹಾಕಬೇಕೆಂದೂ ಆಜ್ಞೆ ಮಾಡಬೇಕು. ಇಂತಹ ಒತ್ತಡ ನ್ಯಾಯಾಲಯದಿಂದ ಬರದಿದ್ದರೆ ಈ ಭಂಡಸರ್ಕಾರ ತನ್ನ ದುರ್ನೀತಿಯನ್ನು ಮುಂದುವರೆಸುತ್ತಲೇ ಹೋಗುತ್ತದೆ.


ಇದನ್ನೂ ಓದಿ: ಸರ್ಕಾರಿ ನೌಕರರ ರಾಜಕೀಯ ಒಲವಿನ ಬಗ್ಗೆ ಸರ್ಕಾರದ ನಿರ್ಬಂಧ ತಪ್ಪು: ಎಚ್.ಎಸ್ ದೊರೆಸ್ವಾಮಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...