Homeನಾನು ಗೌರಿಗಡಿಯನ್ನು ಸೈನ್ಯಕ್ಕೆ ಬಿಡಿ, ಬಾಹ್ಯಾಕಾಶವನ್ನು ವಿಜ್ಞಾನಿಗಳಿಗೆ ಬಿಡಿ. ಬನ್ನಿ ನಮ್ಮೊಡನೆ ಮಾತನಾಡಿ

ಗಡಿಯನ್ನು ಸೈನ್ಯಕ್ಕೆ ಬಿಡಿ, ಬಾಹ್ಯಾಕಾಶವನ್ನು ವಿಜ್ಞಾನಿಗಳಿಗೆ ಬಿಡಿ. ಬನ್ನಿ ನಮ್ಮೊಡನೆ ಮಾತನಾಡಿ

- Advertisement -
- Advertisement -

| ಡಾ. ವಾಸು ಎಚ್.ವಿ |

ದೇಶದ ಸಮಸ್ಯೆಗಳ ಸುತ್ತ ಚುನಾವಣೆ ಎದುರಿಸಲು ಹಿಂಜರಿಯುತ್ತಿರುವ ಬಿಜೆಪಿ

2019ರ ಚುನಾವಣೆಯ ಒಂದು ಅತೀ ಮುಖ್ಯ ಲಕ್ಷಣವೆಂದರೆ, ಅಧಿಕಾರಾರೂಢ ಪಕ್ಷವು ದೇಶದ ಜನರ ಅಸಲೀ ಸಮಸ್ಯೆಗಳು ಚುನಾವಣೆಯಲ್ಲಿ ಚರ್ಚೆಯಾಗಬಾರದೆಂದು ಬಯಸುತ್ತಿದೆ. ಅದಕ್ಕಾಗಿ ಇನ್ನಿಲ್ಲದ ಸರ್ಕಸ್ ಮಾಡುತ್ತಿದೆ. ಇದಕ್ಕೆ ಕಾರಣಗಳಿವೆ.

ಇನ್ನು 10 ವರ್ಷಗಳ ಕಾಲ ನಾನೇ ಪ್ರಧಾನಿ ಎಂದು ಖಚಿತವಾಗಿ ಭಾವಿಸಿಕೊಂಡಿದ್ದ ಬಿಜೆಪಿಯ ನಂಬಿಕೆ ಮೂರೂವರೆ ವರ್ಷಗಳಲ್ಲೇ ಅಲ್ಲಾಡಿತು. ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯೇ ಅಧಿಕಾರಕ್ಕೆ ಬಂದರೂ ಸಂಭ್ರಮಿಸಲಾಗದಷ್ಟು ತೆಳ್ಳಗಿನ ಮಾರ್ಜಿನ್‍ನಲ್ಲಿ ಗೆದ್ದಿದ್ದರು. ಆ ನಂತರ ನಡೆದ ಪಂಚ ರಾಜ್ಯಗಳ ಚುನಾವಣೆಯಲ್ಲಿ ಎಲ್ಲಾ ಕಡೆ ಸೋತರಷ್ಟೇ ಅಲ್ಲದೇ, ಈ ಹಿಂದೆ ಅಧಿಕಾರದಲ್ಲಿದ್ದ ಮೂರು ದೊಡ್ಡ ರಾಜ್ಯಗಳನ್ನು ಕಳೆದುಕೊಂಡಿದ್ದರು. ಇಲ್ಲಿಂದ ಬಿಜೆಪಿಯ ಗ್ರಾಫ್ ಇಳಿಯುತ್ತಾ ಹೋಯಿತು. ಆದರೆ, ಪ್ರಧಾನಿ ಅಭ್ಯರ್ಥಿಯಾಗಿ ಮೋದಿಯವರ ಜನಪ್ರಿಯತೆ ರಾಹುಲ್ ಗಾಂಧಿಗಿಂತ ಎಷ್ಟೋ ಮೇಲೆ ಇತ್ತು, ಇಂದಿಗೂ ಇದೆ.

ಅದು ಕುಸಿಯಲು ಆರಂಭಿಸಿದ್ದು ರಾಫೇಲ್ ಭ್ರಷ್ಟಾಚಾರದ ಸದ್ದು ಹೆಚ್ಚಾಗುತ್ತಾ ಹೋದಂತೆ. ಜನವರಿಯ ನಂತರ ನಡೆದ ಸಮೀಕ್ಷೆಗಳಲ್ಲೆಲ್ಲಾ ಬಿಜೆಪಿಯ ಕುಸಿತವು ಕಾಣುತ್ತಾ ಬಂದಿತು. ಮೊದಮೊದಲು ಬಿಜೆಪಿಗೆ ಬಹುಮತ ಬರಲ್ಲ ಅಂತ ಇದ್ದದ್ದು, ಎನ್‍ಡಿಎಗೂ ಬಹುಮತ ಬರಲ್ಲ ಅಂತ ಖಚಿತವಾಯಿತು. ಚುನಾವಣೆ ಹೊತ್ತಿಗೆ ಈ ಗ್ರಾಫ್ ಮತ್ತಷ್ಟು ಇಳಿದರೆ ಏನು ಮಾಡೋದು ಎನ್ನುವ ಚಿಂತೆಯಲ್ಲಿದ್ದ ಅವರಿಗೆ ಪುಲ್ವಾಮಾ ನೆರವಿಗೆ ಬಂದಿತು.

ಸಿಆರ್‍ಪಿಎಫ್ ಯೋಧರು ಸತ್ತಿದ್ದಕ್ಕೆ ಇಡೀ ದೇಶವೇ ಮರುಗಿತು. ಆದರೆ ಬಿಜೆಪಿಗೆ ಒಂಥರಾ ಸಂಭ್ರಮವಿತ್ತು. ಪಾಕಿಸ್ತಾನದ ಮೇಲೆ ಒಂದು ದಾಳಿ ನಡೆಸಿ (ಈ ದಾಳಿಯ ‘ಸಾಧನೆ’ಯ ಕುರಿತ ವಿವಾದಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ) ಮಸ್ಕುಲಾರ್ ನ್ಯಾಷನಲಿಸಂ ಮೂಲಕ ಚೇತರಿಕೆ ಪಡೆದುಕೊಳ್ಳಲು ನೋಡಿದರು. ಮಸ್ಕುಲಾರ್ ನ್ಯಾಷನಲಿಸಂ ಎಂದರೆ, ದೇಶದ ಅಸಲೀ ಸಮಸ್ಯೆಗಳನ್ನು ಬಗೆಹರಿಸಿ, ಜನರನ್ನು ಸಬಲಗೊಳಿಸಿ ದೇಶ ಕಟ್ಟುವ ಬದಲಿಗೆ ಹೊರಗಿನ ಶತ್ರುವಿನ ವಿರುದ್ಧ ತೋಳೇರಿಸುತ್ತಾ ತನ್ನ ಬಲ ಹೆಚ್ಚಿಸಿಕೊಳ್ಳುವುದು. ಒಂದು ವೇಳೆ ಶತ್ರು ಇಲ್ಲದಿದ್ದರೆ ಅಂತಹ ಶತ್ರುವನ್ನು ಸೃಷ್ಟಿಸುವುದು ಇದಕ್ಕೆ ಅಗತ್ಯವಿದೆ. ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗೆ ನೆರವು ನೀಡುತ್ತಿರುವ ನೆರೆಯ ಪಾಕಿಸ್ತಾನ ಇರುವುದು ಬಿಜೆಪಿಗೆ ಬಹಳ ಅನುಕೂಲ. ಬಿಜೆಪಿ ಆಡಳಿತಾವಧಿಯಲ್ಲಿ ಹಿಂದಿಗಿಂತ ಹೆಚ್ಚು ಭಯೋತ್ಪಾದಕ ಚಟುವಟಿಕೆ ನಡೆದಿದ್ದರೂ, ಹೆಚ್ಚು ಸೈನಿಕರು ಸತ್ತಿದ್ದರೂ ಲೋಪ ಎಲ್ಲಾಯಿತು ಎಂದು ನೋಡಿಕೊಳ್ಳುವ ಬದಲು, ಸೈನಿಕರ ಶವವಿಟ್ಟುಕೊಂಡು ಅದರ ದುರ್ಬಳಕೆಗೆ ಮುಂದಾಯಿತು.

ನಿಧಾನಕ್ಕೆ ಈ ಏರ್‍ಸ್ಟ್ರೈಕ್‍ಗಳು ಜನರ ತಲೆಯಿಂದ ಮರೆಯಾಗುತ್ತಾ, ಅಸಲೀ ವಿಚಾರಗಳು ಮುಂದಕ್ಕೆ ಬಂದವು. ಜನರು ಮತ್ತೆ ನಿರುದ್ಯೋಗ, ರೈತರಿಗೆ ಬೆಲೆ ಇತ್ಯಾದಿಗಳನ್ನು ಮಾತಾಡುತ್ತಾ ಬಂದರು. ಜೊತೆಗೆ ರಾಹುಲ್‍ಗಾಂಧಿ ಬಡವರ ಖಾತೆಗೆ ಸರಾಸರಿ 72,000 ರೂ ಹಾಕುವ ನ್ಯಾಯ್ ಯೋಜನೆ ಪ್ರಕಟಿಸಿದರು. ಚರ್ಚೆ ಬಡವರ ಸುತ್ತಲೂ ಶುರುವಾಯಿತು.

ಇದೀಗ ಮತ್ತೆ ಮೋದಿಯವರು ರಂಗಕ್ಕಿಳಿದರು. ಇಸ್ರೋ ಮುಖ್ಯಸ್ಥರು ಮಾಡಬೇಕಾದ ಪ್ರಕಟಣೆಯನ್ನು ತಾವೇ ಮಾಡಲು ನಿಂತರು. ಸಿನೀಮಿಯಗೊಳಿಸಲು ಬೆಳಿಗ್ಗೆ 11ಕ್ಕೆ ಒಂದು ಟ್ವೀಟ್ ಮಾಡಿ, ತಾನು 11.45ಕ್ಕೆ ರಾಷ್ಟ್ರವನ್ನುದ್ದೇಶಿಸಿ ಮಾತಾಡಲಿದ್ದೇನೆಂದು ಘೋಷಿಸಿದರು. ಆ ನಂತರ 20 ನಿಮಿಷಕ್ಕೂ ಹೆಚ್ಚು ಕಾಯಿಸಿ ಭಾಷಣ ಮಾಡಿದರು. ನಿಸ್ಸಂದೇಹವಾಗಿ ದೇಶವು ಹೆಮ್ಮೆ ಪಟ್ಟುಕೊಳ್ಳಬೇಕಾದ ಒಂದು ಸಾಧನೆಯನ್ನು, ಈ ದೇಶದ ವಿಜ್ಞಾನಿಗಳ ಸಾಧನೆಯನ್ನು ಮುಂದಿಟ್ಟರು. ಆದರೆ, ಅವರ ಉದ್ದೇಶ ಅದಾಗಿರಲಿಲ್ಲ. ಮತ್ತೆ ಗೋದಿ ಮೀಡಿಯಾ ಒಂದು ವಾರ ಕಾಲ ಚರ್ಚೆಯನ್ನು ದೇಶದೊಳಗಿನ ಸಮಸ್ಯೆಗಳ ಕುರಿತು ಯಾರೂ ಮಾತಾಡದಂತೆ ನೋಡಿಕೊಳ್ಳುತ್ತದೆ ಎಂಬುದು ಅವರಿಗೆ ಗೊತ್ತು.

ಬಿಜೆಪಿಗೆ ಏಕೆ ಇಷ್ಟೊಂದು ಹೆದರಿಕೆ? ಈಗ ದೇಶದಲ್ಲಿ ಶೇ.25ರಷ್ಟು ಕಡುಬಡವರಿದ್ದು, ಅವರ ಅಕೌಂಟಿಗೆ ಹಣ ಹಾಕುತ್ತೇವೆಂದು ರಾಹುಲ್‍ಗಾಂಧಿ ಪ್ರಕಟಿಸಿದಾಗ ಅವರನ್ನು ಕೌಂಟರ್ ಮಾಡುವುದು ಕಷ್ಟವೇ? ಅಲ್ಲಾ ಕಣಪ್ಪಾ, ಈ ದೇಶದಲ್ಲಿ 40 ವರ್ಷ ನಿಮ್ಮ ಕುಟುಂಬದವರೇ ಆಳಿದ್ದೀರಿ, ಈಗಲೂ ಇಷ್ಟು ಕಡುಬಡವರು ಏಕಿದ್ದಾರೆ ಎಂದು ಕೇಳಬಹುದಲ್ಲವೇ? ನಿರುದ್ಯೋಗ, ರೈತರಿಗೆ ಒಳ್ಳೆಯ ಬೆಲೆ ಇತ್ಯಾದಿಗಳ ವಿಚಾರದಲ್ಲಿ ಕಾಂಗ್ರೆಸ್ ಈ ದೇಶಕ್ಕೆ ಅದ್ಭುತವಾದದ್ದೇನೂ ಮಾಡಿಲ್ಲ. ಆದರೆ ಅದನ್ನು ಪ್ರಶ್ನೆ ಮಾಡಲು ಹೊರಟರೆ, ಹೌದು ಕಾಂಗ್ರೆಸ್ ಅದ್ಭುತವಾದದ್ದನ್ನು ಮಾಡಿರಲಿಲ್ಲ, ಬಿಜೆಪಿ ಪರಿಸ್ಥಿತಿಯನ್ನು ಮತ್ತಷ್ಟು ಅಧ್ವಾನಗೊಳಿಸಿತು ಎಂಬುದು ಬಯಲಾಗುತ್ತದೆ. ಇದೇ ನಿಮ್ಮ ಸಮಸ್ಯೆಯೇ?

ಗಡಿಯಿಂದ ಒಳಕ್ಕೆ ಬನ್ನಿ ಬಾಹ್ಯಾಕಾಶದಿಂದ ಕೆಳಗಿಳಿದು ಬನ್ನಿ. ದೇಶದ ಅಸಲೀ ಸಮಸ್ಯೆಗಳ ಕುರಿತು ಚರ್ಚಿಸಿ. ಗಡಿಯನ್ನು ಸೈನ್ಯಕ್ಕೆ ಬಿಡಿ, ಬಾಹ್ಯಾಕಾಶವನ್ನು ವಿಜ್ಞಾನಿಗಳಿಗೆ ಬಿಡಿ.

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...