Homeಕರ್ನಾಟಕಹುರಿಗೊಳ್ಳುತ್ತಿದೆ ಶಿರಸಿ ಜಿಲ್ಲಾ ರಚನೆ ಹೋರಾಟ; ಹೊಸ ಜಿಲ್ಲೆಯ ಕೂಗು ಎದ್ದಿದೆ ಏಕೆ?

ಹುರಿಗೊಳ್ಳುತ್ತಿದೆ ಶಿರಸಿ ಜಿಲ್ಲಾ ರಚನೆ ಹೋರಾಟ; ಹೊಸ ಜಿಲ್ಲೆಯ ಕೂಗು ಎದ್ದಿದೆ ಏಕೆ?

- Advertisement -
- Advertisement -

ಮುಕ್ಕಾಲುಪಾಲು ಅರಣ್ಯದಿಂದ ಆವೃತವಾಗಿರುವ ಉತ್ತರ ಕನ್ನಡ ವಿಸ್ತೀರ್ಣದಲ್ಲಿ ಮೂರು ಗೋವಾ ರಾಜ್ಯಕ್ಕೆ ಸಮನಾಗಿದೆ. ಕರಾವಳಿ, ಮಲೆನಾಡು ಮತ್ತು ಅರೆ ಬಯಲುಸೀಮೆ ಒಳಗೊಂಡ ಈ ಜಿಲ್ಲೆ 10291 ಚ.ಕಿ.ಮೀ ನಷ್ಟು ದೊಡ್ಡದು. ವಾಸ್ತವ್ಯ ಹಾಗೂ ಸಾಗುವಳಿಗೆ ಯೋಗ್ಯವಾದ ಪ್ರದೇಶವಿರುವುದು ಶೇ.10 ರಷ್ಟು ಮಾತ್ರ. ಈ ವಿಶಾಲವಾದ ಜಿಲ್ಲೆಯನ್ನು ಎರಡಾಗಿ ವಿಭಾಗಿಸುವುದು ಆಡಳಿತಾತ್ಮಕವಾಗಿ ಅಭಿವೃದ್ಧಿಯ ದೃಷ್ಟಿಯಿಂದ ಮತ್ತು ನೈಸರ್ಗಿಕ ನ್ಯಾಯತತ್ವದಂತೆ ಸರಿಯಾದ ಕ್ರಮವೆಂಬುದರಲ್ಲಿ ಎರಡು ಮಾತೇ ಇಲ್ಲ. ಆದರೆ ಘಟ್ಟದ ಮೇಲಿನ ಘಟಾನುಘಟಿ ರಾಜಕೀಯ ಪಟುಗಳ ಇಚ್ಛಾಶಕ್ತಿಯ ಕೊರತೆ ಮತ್ತು ಪೆದ್ದುತನದಿಂದ ಜನರು ತೊಂದರೆಗೀಡಾಗಿ ಪರದಾಡುತ್ತಿದ್ದಾರೆ.

ಘಟ್ಟದ ಮೇಲಿನ ಆರು ತಾಲ್ಲೂಕುಗಳನ್ನು ಒಳಗೊಂಡ ’ಕದಂಬ’ ಜಿಲ್ಲೆ ಮತ್ತು ಕರಾವಳಿಯ ಐದು ತಾಲ್ಲೂಕುಗಳ ಜೊತೆ ಜೋಯಿಡ ಸೇರಿಸಿ ಉತ್ತರ ಕನ್ನಡ ಜಿಲ್ಲೆ ರಚನೆ ಮಾಡುವ ಅನಿವಾರ್ಯತೆ ಎದುರಾಗಿ ದಶಕಗಳೇ ಉರುಳಿಹೋಗಿವೆ. ಹಾಗೆ ನೋಡಿದರೆ ಶಿರಸಿಯನ್ನು ಜಿಲ್ಲಾ ಕೇಂದ್ರವಾಗಿಸಿ ಶಿರಸಿ ಜಿಲ್ಲೆ ಮಾಡಬೇಕೆಂಬ ಕೂಗು ಮೂರು ದಶಕಗಳ ಹಿಂದಿನದು. ಭಾವನೆಗಳ ಬಂಧನ, ಅನುಕೂಲತೆ ಸಹಿಸಿಕೊಳ್ಳುವ ಮೂಗರ್ಜಿ ಸ್ವಭಾವ, ಹೋರಾಟದ ಹಠ ಮಾಡದಿರುವುದು ಎಲ್ಲಕ್ಕಿಂತ ಹೆಚ್ಚಾಗಿ ಸ್ಥಳೀಯ ಶಾಸಕ, ಸಂಸದ, ಸಚಿವರ ಉದಾಸೀನತೆಯಿಂದಾಗಿ ಜಿಲ್ಲೆಯ ಕನಸು ನನಸಾಗಲೇ ಇಲ್ಲ.

ಮೂರ್ನಾಲ್ಕು ತಾಲ್ಲೂಕುಗಳುಳ್ಳ ಉಡುಪಿ, ಹಾವೇರಿ, ಯಾದಗಿರಿಯಂತಹ ಜಿಲ್ಲೆಗಳನ್ನು ಹಿಂದೆ ರಚಿಸಲಾಗಿತ್ತು. ವಿವೇಚನೆ, ವಿವೇಕದಿಂದ ಉತ್ತರ ಕನ್ನಡ ವಿಭಾಗಿಸಿದರೆ ಆರಾರು ತಾಲ್ಲೂಕುಗಳ ಎರಡು ಜಿಲ್ಲೆ ಹುಟ್ಟುಹಾಕಬಹುದು. ಜೋಯಿಡ ಘಟ್ಟದ ಪ್ರದೇಶದಲ್ಲಿದ್ದರೂ, ಅದೂ ಕಾರವಾರಕ್ಕೆ ಹತ್ತಿರದಲ್ಲಿದೆ. ಅದನ್ನು ಶಿರಸಿ ಜಿಲ್ಲೆಗೆ ಸೇರಿಸಿದರೆ ಪ್ರಸ್ತಾವಿತ ಜಿಲ್ಲಾ ಕೇಂದ್ರ ಶಿರಸಿಯಿಂದ ನೂರೈವತ್ತು ಕಿ.ಮೀ ಅಂತರದಲ್ಲಿರುತ್ತದೆ. ಜೊತೆಗೆ ಜೋಯಿಡದ ಸಾಂಸ್ಕೃತಿಕ, ವ್ಯಾವಹಾರಿಕ, ಕೌಟುಂಬಿಕ ಭಾಷಾ ಬಾಂಧವ್ಯ ಹೆಚ್ಚಾಗಿ ಕಾರವಾರದೊಂದಿಗಿದೆ. ಜೋಯಿಡದಲ್ಲಿ ಕೊಂಕಣಿ ಮಾತನಾಡುವ ಮಂದಿಯೇ ಜಾಸ್ತಿ. ಹೀಗಾಗಿ ಕನ್ನಡ ಮಾತನಾಡುವ ಶಿರಸಿ ಸೀಮೆ ಜೊತೆ ಜೋಯಿಡಕ್ಕೆ ಹೊಂದಾಣಿಕೆ ಹಲವು ಕಾರಣದಿಂದ ಸಾಧ್ಯವಾಗದು. ಹಾಗಾಗಿ ಅದನ್ನು ಕರಾವಳಿಯ ಉತ್ತರ ಕನ್ನಡದ ಜೊತೆ ಇಡುವುದೇ ಸೂಕ್ತ.

ಈಚೆಗೆ ದಾಂಡೇಲಿ ತಾಲ್ಲೂಕು ರಚನೆಯಾಗಿದೆ. ಕನ್ನಡದ ಮೊದಲ ರಾಜಧಾನಿ ಎಂಬ ಹೆಗ್ಗಳಿಕೆಯ ಬನವಾಸಿ ತಾಲ್ಲೂಕು ರಚನೆಯ ಹೋರಾಟ ಜೋರಾಗಿದೆ. ಕರಾವಳಿಯ ಗೋಕರ್ಣ ತಾಲ್ಲೂಕು ಮಾಡುವ ಪ್ರಸ್ತಾಪವೂ ಇದೆ. ಈ ಎರಡೂ ತಾಲ್ಲೂಕುಗಳು ಅಸ್ತಿತ್ವಕ್ಕೆ ಬಂದರೆ ಒಟ್ಟು 14 ತಾಲ್ಲೂಕುಗಳಾಗಿ ಎರಡೂ ಜಿಲ್ಲೆಗೆ ತಲಾ ಏಳೇಳು ತಾಲ್ಲೂಕುಗಳು ಸೇರುತ್ತವೆ. ಈ ಭೌಗೋಳಿಕ ಕಾರಣ ಹೊಸ ಜಿಲ್ಲೆಗೆ ಒತ್ತಾಸೆಯಾಗಿ ನಿಂತಿದೆ. ಶಿರಸಿ, ಸಿದ್ಧಾಪುರ, ಮುಂಡಗೋಡ, ಯಲ್ಲಾಪುರ, ದಾಂಡೇಲಿ ಮತ್ತು ಹಳಿಯಾಳ ತಾಲ್ಲೂಕುಗಳಿರುವ ಶಿರಸಿ ಜಿಲ್ಲೆ ಮತ್ತು ಜೋಯಿಡ, ಕಾರವಾರ, ಅಂಕೋಲಾ, ಕುಮುಟಾ, ಹೊನ್ನಾವರ ಮತ್ತು ಭಟ್ಕಳ ತಾಲ್ಲೂಕುಗಳ ಉತ್ತರ ಕನ್ನಡ (ಕರಾವಳಿ) ಜಿಲ್ಲೆ ರಚನೆ ಮಾಡುವುದರಿಂದ ಅಭಿವೃದ್ಧಿಯೂ ವೇಗ ಪಡೆದುಕೊಳ್ಳುತ್ತದೆ. ಆಡಳಿತಾತ್ಮಕವಾಗಿ ಅಧಿಕಾರಿಗಳ ಕಾರ್ಯಕ್ಷಮತೆ ಎಚ್ಚರ ತಪ್ಪದಂತೆ ನಿಗಾ ವಹಿಸುತ್ತದೆ. ಅವಳಿ ಜಿಲ್ಲಾ ರಚನೆಯಿಂದ ವೈವಿಧ್ಯತೆ, ವೈಶಿಷ್ಟ್ಯತೆ, ಪ್ರಾಕೃತಿಕ ಸೊಬಗಿಗೂ ಭಂಗ ಬರದು. ಉಡುಪಿ ದಕ್ಷಿಣ ಕನ್ನಡದ ಸಂಬಂಧದಂತೆ ಕಾರವಾರ-ಶಿರಸಿ ಜಿಲ್ಲೆಗಳ ನಂಟು ಅನ್ಯೋನ್ಯವಾಗೇ ಇರುತ್ತದೆ.

ಈಗಿನ ಜಿಲ್ಲಾ ಕೇಂದ್ರ ಕಾರವಾರದಿಂದ ಘಟ್ಟದ ಮೇಲಿನ ಎಲ್ಲಾ ತಾಲ್ಲೂಕುಗಳು ತುಂಬಾ ದೂರದಲ್ಲಿದೆ. ಮುಂಡಗೋಡದವರು ಸರ್ಕಾರಿ ಕೆಲಸ, ಕಾರ್ಯಕ್ಕಾಗಿ ಜಿಲ್ಲಾ ಕೇಂದ್ರಕ್ಕೆ ಬರಬೇಕೆಂದರೆ ಬರೋಬ್ಬರಿ 140 ಕಿ.ಮೀ ಕ್ರಮಿಸಬೇಕು. ಅವರು ಜಿಲ್ಲಾ ಕೇಂದ್ರ ತಲುಪುವಾಗಲೇ ಅರ್ಧ ದಿನ ಕಳೆದಿರುತ್ತದೆ. ಸಂಬಂಧಿಸಿದ ಅಧಿಕಾರಿಗಳು ಸಿಕ್ಕರೆ ಪುಣ್ಯ. ಮರಳಿ ಮನೆ ಸೇರುವಾಗ ನಡುರಾತ್ರಿ ಆಗಿರುತ್ತದೆ. ಅಧಿಕಾರಿಗಳಿಗೂ ಅಷ್ಟೆ. ಸಭೆ, ಸಮಾಲೋಚನೆ, ತರಬೇತಿ ಎಂದು ಜಿಲ್ಲಾ ಕೇಂದ್ರಕ್ಕೆ ಓಡಾಡಿ ಸ್ಥಳೀಯ ಕೆಲಸ ಕರ್ತವ್ಯ ನಿಭಾಯಿಸಲು ಸಾಧ್ಯವಾಗುವುದಿಲ್ಲ. ವ್ಯರ್ಥ ತಿರುಗಾಟ ಘಟ್ಟದ ಮೇಲಿನ ತಾಲ್ಲೂಕುಗಳಿಗೆ ಶಾಪದಂತೆ ಕಾಡುತ್ತಲೇ ಇದೆ. ಹೀಗಾಗಿ ವಿಭಜನೆ ಎರಡು ಜಿಲ್ಲೆಗಳ ಪ್ರಗತಿಗೂ ಪೂರಕ. ಎರಡೆರಡು ಆಡಳಿತ ವ್ಯವಸ್ಥೆ, ಎರಡೆರಡು ಅನುದಾನದಿಂದ ಅವಳಿ ಜಿಲ್ಲೆಗಳ ಅಭಿವೃದ್ಧಿ ನಕ್ಷೆಯೇ ಬದಲಾಗಲಿದೆ.

ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಜಿಲ್ಲಾ ಉಸ್ತುವಾರಿ ಮಂತ್ರಿಯಾಗಿದ್ದಾಗ ಶಿರಸಿ ಜಿಲ್ಲೆ ಮಾಡುವ ಪ್ರಯತ್ನ ಪಡದಿದ್ದರೂ ಹಲವು ಪ್ರತ್ಯೇಕ ಜಿಲ್ಲಾ ಮಟ್ಟದ ಕಚೇರಿ ಶಿರಸಿಗೆ ತಂದಿದ್ದರು. ಆಗ ಶಿಕ್ಷಣ ಮಂತ್ರಿಯಾಗಿದ್ದರಿಂದ ಶಿರಸಿಯನ್ನು ಶೈಕ್ಷಣಿಕ ಜಿಲ್ಲೆಯಾಗಿಸಿ ಉತ್ತರ ಕನ್ನಡದಿಂದ ಬೇರ್ಪಡಿಸಿದ್ದರು. ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗ, ಲೋಕೋಪಯೋಗಿ ಕಚೇರಿಗಳು ಶಿರಸಿಯಲ್ಲಿದೆ. ಶಿರಸಿಗೆ ಜಿಲ್ಲಾ ಕೇಂದ್ರವಾಗುವ ಅರ್ಹತೆ, ಅನುಕೂಲತೆ ಎರಡೂ ಇದೆ. ಉತ್ತರ ಕನ್ನಡದ ಜಿಲ್ಲಾ ಕೇಂದ್ರ ಕಾರವಾರವಾದರೂ ವಾಣಿಜ್ಯ, ಆರ್ಥಿಕ ಮತ್ತು ರಾಜಕೀಯ ಆಡಂಬೋಲ ಶಿರಸಿಯೇ. ವಾಣಿಜ್ಯ, ಕೃಷಿ, ಸಹಕಾರಿ ಕ್ಷೇತ್ರದ ಬೃಹತ್ ಸಂಸ್ಥೆಗಳು ಶಿರಸಿಯಲ್ಲಿವೆ. ತೋಟಗಾರಿಕೆ, ಅರಣ್ಯ, ಕಾನೂನು ಮಹಾವಿದ್ಯಾಲಯಗಳಿವೆ. ಜಿಲ್ಲಾ ಮಟ್ಟದ ನ್ಯಾಯಾಲಯ, ಕೃಷಿ ಸಂಶೋಧನಾ ಕೇಂದ್ರ, ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ವಿಭಾಗೀಯ ಕಚೇರಿಗಳಿವೆ.

ಜಿಲ್ಲಾ ಕೇಂದ್ರಕ್ಕೆ ಬೇಕಾದ ಹಲವು ಅನುಕೂಲಗಳು, ಸೌಲಭ್ಯಗಳು ಕಟ್ಟಡ ಇನ್ನಿತರ ಸೌಕರ್ಯ ಶಿರಸಿಯಲ್ಲಿದೆ. ಸರ್ಕಾರದ ಅಂಕಿಅಂಶಗಳು ಶಿರಸಿ ಪ್ರತ್ಯೇಕ ಜಿಲ್ಲೆಯ ಪ್ರಸ್ತುತತೆಯನ್ನು ಮನದಟ್ಟು ಮಾಡುತ್ತದೆ. ಹಾಗಂತ ಶಿರಸಿಯ ಶಾಸಕ ಕಂ ಸ್ಪೀಕರ್ ಕಾಗೇರಿಯಾಗಲಿ, ದೀರ್ಘ ಕಾಲ ಉತ್ತರ ಕನ್ನಡ ಆಳಿದ ಆರ್.ವಿ. ದೇಶಪಾಂಡೆಯಾಗಲಿ ಈಗ ಜಿಲ್ಲಾ ಉಸ್ತುವಾರಿ ಮಂತ್ರಿಗಿರಿ ಠಾಕುಠೀಕಿಂದ ಓಡಾಡುತ್ತಿರುವ ಶಿವರಾಮ ಹೆಬ್ಬಾರರಾಗಲಿ, ಸಂಸದ ಅನಂತ್ ಕುಮಾರ್ ಹೆಗಡೆಯಾಗಲಿ ಶಿರಸಿ ಜಿಲ್ಲಾ ರಚನೆಯನ್ನು ಗಂಭೀರವಾಗಿ ಪರಿಗಣಿಸಿಯೇ ಇಲ್ಲ. ಕಾಗೇರಿ, ಹೆಗಡೆ, ಹೆಬ್ಬಾರ್‌ಗಳ ತ್ರಿಕೋನ ಒಣಪ್ರತಿಷ್ಠೆಯ ಮೋಗಮ್ ಕಾಳದಲ್ಲಿ ಶಿರಸಿ ಜಿಲ್ಲಾ ರಚನೆ ಬೇಡಿಕೆಗೆ ಮಹತ್ವ ಬರುತ್ತಿಲ್ಲ.

ಹೀಗಿದ್ದರೂ ಶಿರಸಿಯಲ್ಲಿ ಜಿಲ್ಲಾ ರಚನೆಯ ಹೋರಾಟ ನಡೆಯುತ್ತಲೇ ಇದೆ. ಕೆಲವು ದಿನಗಳ ಹಿಂದೆ ಕಂದಾಯ ಮಂತ್ರಿಯನ್ನು ಹೋರಾಟ ಸಮಿತಿಯ ನಿಯೋಗ ಭೇಟಿಯಾಗಿ ಇದೇ ಬಜೆಟ್‌ನಲ್ಲಿ ಶಿರಸಿ ಜಿಲ್ಲೆ ರಚನೆ ನಿರ್ಣಯ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಸರಣಿ ಪ್ರತಿಭಟನೆಗಳು ಘಟ್ಟದ ಮೇಲೆ ನಡೆಯುತ್ತಿದೆ. ನಿಧಾನಕ್ಕೆ ಜಿಲ್ಲಾ ಬೇಡಿಕೆಯ ಹೋರಾಟ ಹುರಿಗಟ್ಟುತ್ತಿದೆ. ಈ ವರದಿ ಬರೆಯುವ ಹೊತ್ತಿಗೆ ಶಿರಸಿ ಬಾರ್ ಅಸೋಸಿಯೇಶನ್ ಮೂಲಕ ಜಿಲ್ಲಾ ಬೇಡಿಕೆ ಮಂಡಿಸಲು ನಿರ್ಧರಿಸಲಾಗಿದೆ. ಕಾಗೇರಿ, ಹೆಗಡೆ, ಹೆಬ್ಬಾರ್‌ಗಳಿಗೆ ತಮ್ಮನ್ನು ಆರಿಸಿ ಕಳಿಸಿದವರ ಕೂಗು ಕೇಳಿಸುವುದೇ?


ಇದನ್ನೂ ಓದಿ: ಕುರುಬ ಸಮುದಾಯ ಒಡೆಯುವುದೇ RSS, BJPಯವರ ಉದ್ದೇಶ: ಸಿದ್ದರಾಮಯ್ಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

2 COMMENTS

  1. ಅಭಿವೃದ್ಧಿಯ ಹೆಸರಲ್ಲಿ ನಿಮ್ಮ ಬೇಳೆ ಬೇಯಿಸಿಕೊಳ್ಳಬೇಡಿ.
    ಇವತ್ತು, ಉತ್ತರಕನ್ನಡ ವಿಭಿನ್ನವಾಗಿ ನಿಲ್ಲುವುದೇ ಅದರ ವಿಸ್ತಾರ ಮತ್ತು ಎಲ್ಲ ತರಹದ ಭೂ ಪ್ರದೇಶದಿಂದ. ಜಿಲ್ಲೆಯ ವಿಭಜನೆಯಿಂದ ಇನ್ನಷ್ಟು ಕಾಡು ನಾಶ ಮಾಡ್ತಾರೆಯೇ ಹೊರತೂ ಇನ್ನೇನು ಆಗಲ್ಲ…

LEAVE A REPLY

Please enter your comment!
Please enter your name here

- Advertisment -

ರಾಜಸ್ಥಾನ ಸ್ಥಳೀಯ ಸಂಸ್ಥೆ ಚುನಾವಣೆ: ಬಿಕಾನೇರ್‌ನ ನೋಖಾದಲ್ಲಿ ಸಿಪಿಐ(ಎಂ) ಐತಿಹಾಸಿಕ ಜಯಭೇರಿ

ರಾಜಸ್ಥಾನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಎಡಪಕ್ಷವಾದ ಸಿಪಿಐ(ಎಂ) (CPI-M) ಐತಿಹಾಸಿಕ ಸಾಧನೆ ಮಾಡಿದ್ದು, ಬಿಕಾನೇರ್ ಜಿಲ್ಲೆಯ ನೋಖಾ ನಗರ ಪಾಲಿಕೆಯ ಆಡಳಿತದ ಚುಕ್ಕಾಣಿಯನ್ನು ತನ್ನದಾಗಿಸಿಕೊಂಡಿದೆ. ಹಲವು ವರ್ಷಗಳಿಂದ ಬಿಜೆಪಿ ಹಾಗೂ ಎನ್‌ಸಿಪಿ (NCP)...

ಏಕರೂಪ ನಾಗರಿಕ ಸಂಹಿತೆಯನ್ನು ಸಂಸತ್ತಿನ ಬದಲು ರಾಜ್ಯಗಳ ಮೂಲಕವೇ ಜಾರಿಗೆ ಅಮಿತ್ ಶಾ ಮುಂದಾಗಿದ್ದೇಕೆ?

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೆಪ್ಟೆಂಬರ್ 13ರಂದು ಮುಂಬೈನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, 2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ಮತ್ತು ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ...

ದಿಶಾ ಸಾಲಿಯಾನ್ ಸಾವಿನ ಪ್ರಕರಣ : ಸಿಬಿಐ ಎಫ್ಐಆರ್‌ನಲ್ಲಿ ಆದಿತ್ಯ ಠಾಕ್ರೆ, ರಿಯಾ ಚಕ್ರವರ್ತಿ ಸೇರಿದಂತೆ ಹಲವರ ಹೆಸರು

ಬಾಂಬೆ ಹೈಕೋರ್ಟ್ ಆದೇಶದ ಮೇರೆಗೆ, ಕೇಂದ್ರೀಯ ತನಿಖಾ ದಳವು (ಸಿಬಿಐ) ನಟ ಸುಶಾಂತ್ ಸಿಂಗ್ ರಜಪೂತ್ ಅವರ ಮಾಜಿ ಮ್ಯಾನೇಜರ್ ದಿಶಾ ಸಾಲಿಯಾನ್ ಅವರ ನಿಗೂಢ ಸಾವಿಗೆ ಸಂಬಂಧಿಸಿದಂತೆ ಸೋಮವಾರ(ಸೆ.14) ಎಫ್‌ಐಆರ್ ದಾಖಲಿಸಿದೆ. ಶಿವಸೇನೆ...

ಟಿ. ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್‌ ಹೇಳಿದ್ದರಲ್ಲಿ ತಪ್ಪೇನಿದೆ? ಸಾರ್ವಜನಿಕರಿಂದ ಬೆಂಬಲ

ಮಸೀದಿಗಳ ಮುಂಭಾಗ ಯಾವುದೇ ಪ್ರಚೋದನಕಾರಿ ಕೃತ್ಯಗಳಿಗೆ ಆಸ್ಪದ ನೀಡದೆ, ರಾತ್ರಿ 10:30ರ ಒಳಗಾಗಿ ಡಿಜೆ ಸದ್ದಿಲ್ಲದೆ ನಿಯಮಾನುಸಾರ ಮೆರವಣಿಗೆ ಮುಗಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಂಡ ಇನ್ಸ್‌ಪೆಕ್ಟರ್ ಧನಂಜಯ್ ಅವರ ಪರವಾಗಿ ಈಗ ಸಾಮಾಜಿಕ...

ಅತ್ಯಾಚಾರ ಪ್ರಕರಣದಲ್ಲಿ 10 ವರ್ಷ ಜೈಲು ಶಿಕ್ಷೆ: ‘ತೆಹಲ್ಕಾ’ ಸಂಸ್ಥಾಪಕ ತರುಣ್ ತೇಜ್‌ಪಾಲ್ ನ್ಯಾಯಾಲಯಕ್ಕೆ ಶರಣು, ಜೈಲಿಗೆ ರವಾನೆ 

ಪಣಜಿ: 2013ರ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಬಾಂಬೆ ಹೈಕೋರ್ಟ್‌ನ ಗೋವಾ ಪೀಠದಿಂದ ದೋಷಿ ಎಂದು ತೀರ್ಪುಗೊಂಡು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆಗೆ ಗುರಿಯಾಗಿರುವ ‘ತೆಹಲ್ಕಾ’ ಸಂಸ್ಥಾಪಕ ಹಾಗೂ ಮಾಜಿ ಪ್ರಧಾನ ಸಂಪಾದಕ...

ಹೈದರಾಬಾದ್‌ನಲ್ಲಿ ಗಣೇಶ ವಿಗ್ರಹ ಖರೀದಿ ವಿಚಾರಕ್ಕೆ ಘರ್ಷಣೆ: 34 ವರ್ಷದ ವ್ಯಕ್ತಿ ಸಾವು: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

ಹೈದರಾಬಾದ್: ಗಣೇಶ ಚತುರ್ಥಿ ಆಚರಣೆಗೆ ಮುನ್ನ ಗಣೇಶ ವಿಗ್ರಹ ಖರೀದಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ವಾಗ್ವಾದವು ಹಿಂಸಾತ್ಮಕ ಘರ್ಷಣೆಗೆ ತಿರುಗಿ 34 ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಹೈದರಾಬಾದ್‌ನ ಜೋಡಿಮೆಟ್ಲಾ ಪ್ರದೇಶದಲ್ಲಿ ನಡೆದಿದೆ....

ಮಹಿಳಾ ಬೈಕರ್‌ಗೆ ಬೇಕಂತಲೇ ಢಿಕ್ಕಿ ಹೊಡೆದು ಪರಾರಿಯಾದ ಕಾರು ಸವಾರ! ಬೆಚ್ಚಿಬೀಳಿಸುವ ವಿಡಿಯೋ ವೈರಲ್

ಹರ್ಯಾಣದ ಗುರುಗ್ರಾಮದ ಗಾಲ್ಫ್ ಕೋರ್ಸ್ ರಸ್ತೆಯಲ್ಲಿ ಅತಿವೇಗವಾಗಿ ಬಂದ ಕಾರೊಂದು ಮಹಿಳಾ ಬೈಕ್ ಸವಾರಿಗೆ ಉದ್ದೇಶಪೂರ್ವಕವಾಗಿ ಢಿಕ್ಕಿ ಹೊಡೆದು ಪರಾರಿಯಾಗಿರುವ ಭೀಕರ ಘಟನೆ ನಡೆದಿದೆ. ಹಿಟ್ ಆ್ಯಂಡ್ ರನ್ ಶಂಕೆ ವ್ಯಕ್ತವಾಗಿರುವ ಈ...

ಪ. ಬಂಗಾಳ | 252 ಮದ್ರಸಾಗಳನ್ನು ಮುಚ್ಚಲು ಆದೇಶಿಸಿದ ಬಿಜೆಪಿ ಸರ್ಕಾರ; 100 ಸಂಸ್ಥೆಗಳಿಗೆ ಕಾರಣ ಕೇಳಿ ನೋಟಿಸ್

ರಾಜ್ಯದಾದ್ಯಂತ ಮದ್ರಸಾಗಳ ಸಮೀಕ್ಷೆಯನ್ನು ಪ್ರಾರಂಭಿಸಿದ ಮೂರು ತಿಂಗಳ ನಂತರ, ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರವು ಅನುಮೋದನೆಯ ಕೊರತೆ ಅಥವಾ ಇತರ ಅಕ್ರಮಗಳನ್ನು ಉಲ್ಲೇಖಿಸಿ 252 ಸಂಸ್ಥೆಗಳನ್ನು ಮುಚ್ಚಲು ಆದೇಶಿಸಿದೆ ಮತ್ತು ಇತರ...

ಟಿ. ನರಸೀಪುರ ಪ್ರತಿಭಟನೆ ವೇಳೆ ವಾಕ್ಸಮರ: ಪ್ರತಾಪ್ ಸಿಂಹ ಹಾಗೂ ಎಲ್. ನಾಗೇಂದ್ರ ನಡುವೆ ಬಹಿರಂಗ ನೂಕಾಟ-ತಳ್ಳಾಟ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ಮೆರವಣಿಗೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಮೈಸೂರು ಬಿಜೆಪಿಯಲ್ಲಿನ ಆಂತರಿಕ ಭಿನ್ನಮತ ಬಹಿರಂಗಗೊಂಡಿದೆ. ಪೊಲೀಸ್ ಇನ್ಸ್‌ಪೆಕ್ಟರ್ ಧನಂಜಯ್ ವಿರುದ್ಧ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಮಾಜಿ...

ಉಮರ್ ಖಾಲಿದ್ ಕುರಿತ ಸಾಕ್ಷ್ಯಚಿತ್ರ ಪ್ರದರ್ಶನ ಮುಂದೂಡಿದ NLSIU ವಿದ್ಯಾರ್ಥಿ ಸಂಘ; ಯಾವುದೇ ಒತ್ತಡಕ್ಕೆ ಮಣಿದಿಲ್ಲವೆಂದು ಸ್ಪಷ್ಟನೆ

ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯ (NLSIU) ಲಾ ಅಂಡ್ ಸೊಸೈಟಿ ಕಮಿಟಿಯು (LawSoc) ಉಮರ್ ಖಾಲಿದ್ ಅವರ ಜೈಲುವಾಸದ ಕುರಿತು ಲಲಿತ್ ವಾಚಾನಿ ನಿರ್ಮಿಸಿರುವ 'ಪ್ರಿಸನರ್ ನಂ. 626710...