Homeಅಂಕಣಗಳುಇನ್ನಾದರು ಈ ಪ್ರಕೃತಿ ಸಂಪತ್ತುಗಳ ಲೂಟಿಗೆ ಕಡಿವಾಣ ಹಾಕಬೇಕು: ಎಚ್ ಎಸ್ ದೊರೆಸ್ವಾಮಿ

ಇನ್ನಾದರು ಈ ಪ್ರಕೃತಿ ಸಂಪತ್ತುಗಳ ಲೂಟಿಗೆ ಕಡಿವಾಣ ಹಾಕಬೇಕು: ಎಚ್ ಎಸ್ ದೊರೆಸ್ವಾಮಿ

- Advertisement -
- Advertisement -

ಗುಡ್ಡ ಕರಗಿಸುವವರ ಹಾವಳಿ ಕಳೆದ 40 ವರ್ಷಗಳಿಂದಲೂ ನಡೆಯುತ್ತಿದೆ. ಕಲ್ಲುಬಂಡೆ ಡಿ.ಕೆ. ಶಿವಕುಮಾರ್ ಅವರ ತಮ್ಮ ಎಂಪಿ. ಡಿ.ಕೆ. ಸುರೇಶ್, ಮಾಲೂರು ಶಾಸಕ ನಂಜೇಗೌಡ, ಮೇಲುಕೋಟೆ ಶಾಸಕ ಪುಟ್ಟರಾಜು, ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿ ಅವರ ಮಗ, ಅರಸೀಕೆರೆ ಶಾಸಕ ಶಿವಲಿಂಗೇಗೌಡ, ಹುನಗುಂದ ಶಾಸಕ ದೊಡ್ಡನಗೌಡ ಪಾಟೀಲ, ಬೆಳಗಾವಿಯ ಶಾಸಕ ಸತೀಶ್ ಜಾರಕಿಹೊಳಿ, ಶಾಸಕ ಅಮರೇಗೌಡ, ಬೈಯ್ಯಾಪುರದಲ್ಲಿ ಅವರ ಅಣ್ಣನ ಮಗ ಶರಣಗೌಡ ಪಾಟೀಲ್, ಕೊಪ್ಪಳ ಸಂಸದ ಸಂಗಣ್ಣ ಕರಡಿ ಅವರ ಮಗ ಅಮರೇಶ್ ಕರಡಿ ಶಾಸಕ ಹಾಲಪ್ಪ ಆಚಾರ್, ರಾಘವೇಂದ್ರ ಹಿಟ್ನಾಳ್, ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಕಲ್ಲು ಕರಗಿಸುವ ಗುತ್ತಿಗೆ ಪಡೆದಿದ್ದಾರೆ. ಇವರೆಲ್ಲಾ ಭೂ ವಿಜ್ಞಾನ ನಿರ್ದೇಶಕರಿಂದ ಪರವಾನಗಿ ಪಡೆದು ಗುಡ್ಡ ಕರಗಿಸುವವರು. ಅಕ್ರಮವಾಗಿ ಬೆಟ್ಟಗಳನ್ನು ಕರಗಿಸುವವರ ವಿರುದ್ಧ ನ್ಯಾಯಾಲಯಕ್ಕೆ 2015-2020ರವರೆಗೆ 9076 ಪ್ರಕರಣಗಳು ದಾಖಲಾಗಿವೆ.

ಶಿವಮೊಗ್ಗ ಜಿಲ್ಲೆಯಲ್ಲಿ ಕಲ್ಲು ತೆಗೆಯುತ್ತಿರುವ ಕ್ವಾರಿಗಳ ಸಂಖ್ಯೆ 150. ಅವುಗಳಲ್ಲಿ ಅಕ್ರಮವಾಗಿ ದೋಚುತ್ತಿರುವುದು 73 ಕ್ವಾರಿಗಳು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 120 ಕ್ವಾರಿಗಳಲ್ಲಿ ಕಲ್ಲು ಗಣಿಗಾರಿಕೆ ನಡೆಯುತ್ತಿದೆ. ಸ್ಥಳೀಯ ರಾಜಕಾರಣಿಗಳಲ್ಲದೇ ಹೊರ ಜಿಲ್ಲೆಗಳ ರಾಜಕಾರಣಿಗಳು ಇದ್ದಾರೆ. ಅಕ್ರಮ ಗಣಿಗಾರಿಕೆ ತಡೆಗಟ್ಟುವೆನೆಂದು ಗಣಿ ಮಂತ್ರಿ ಗುಡುಗುತ್ತಾರೆ. ಬೇಲಿಯೇ ಎದ್ದು ಹೊಲ ಮೇಯುವಾಗ ಪುಂಡ ಹಸುಗಳು ಹೊಲಕ್ಕೆ ನುಗ್ಗದೇ ಇರುತ್ತವೆಯೇ? ಶಾಸಕರೇ ಭ್ರಷ್ಟರಾದ ಮೇಲೆ ಇನ್ನು ದುರುಳ ಕಲ್ಲು ಉದ್ಯಮಿಗಳ ಭ್ರಷ್ಟಾಚಾರವನ್ನು ತಡೆಗಟ್ಟುವವರು ಯಾರು?

ಯಡಿಯೂರಪ್ಪನವರಿಗೆ ತಮ್ಮ ಸುತ್ತ ಇರುವ ಭ್ರಷ್ಟರ ಮೇಲೆ ಕ್ರಮ ಕೈಗೊಳ್ಳಲು ಸಾಧ್ಯವೇ? ಆ ಜನರ ನೆರವಿನಿಂದ ಅವರ ಸಿಂಹಾಸನ ಉಳಿದಿದೆ. ಅವರನ್ನು ಎದುರುಹಾಕಿಕೊಂಡರೆ ಅವರಿಗೆ ಉಳಿಗಾಲವಿದೆಯೇ? ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಲು ಬಿಡುತ್ತಾರಾ?

ಶಾಸಕರಿಗೂ, ಮಂತ್ರಿಗಳಿಗೂ, ಅಧಿಕಾರಿಗಳಿಗೂ ಒಂದು ಸಂದೇಶ ಕೊಡಲು ಬಯಸುತ್ತೇನೆ. ಗಾಂಧೀಜಿ ಎಚ್ಚರಿಸಿದಂತೆ ಪ್ರಕೃತಿ ಮಾನವನ ಆಸೆಯನ್ನು ಸಹಿಸಬಲ್ಲದು. ದುರಾಸೆಯನ್ನು ಸಹಿಸಲು ಸಾಧ್ಯವೇ? ನೀವೆಲ್ಲಾ ದುರಾಸೆಯನ್ನು ಸಹಿಸಿಕೊಂಡಿದ್ದೀರಿ. ಪ್ರಕೃತಿ ಬೆಟ್ಟ ಗುಡ್ಡಗಳನ್ನು ಸೃಷ್ಟಿ ಮಾಡಿದೆ. ಅರಣ್ಯ ಸೃಷ್ಟಿ ಮಾಡಿದೆ. ಖನಿಜಗಳನ್ನು ಭೂಗರ್ಭದಲ್ಲಿ ಅಡಗಿಸಿಟ್ಟಿದೆ. ಅದು ಮುಗಿದರೆ ಮತ್ತೆ ಉತ್ಪತ್ತಿಯಾಗದು. ಸಮುದ್ರದಲ್ಲಿ ಹವಳ ಮುಂತಾದ ಬೆಲೆಬಾಳುವ ಅಲಂಕಾರಿಕ ವಸ್ತುಗಳನ್ನು ತಯಾರಿಸುವ ಮುತ್ತು ರತ್ನಗಳನ್ನು ಹುದುಗಿಸಿಟ್ಟ ಪಶ್ಚಿಮ ಘಟ್ಟಗಳಂತಹ ಬೃಹದಾಕಾರದ ಅರಣ್ಯಗಳಿವೆ. ಕಪ್ಪತಗುಡ್ಡದಲ್ಲಿ ಬಂಗಾರ ಇದೆ ಎಂದು ಅದನ್ನು ಆಕ್ರಮಣ ಮಾಡಲು ಹೊಂಚುಹಾಕುತ್ತಿರುವ ಪಟ್ಟಭದ್ರರು ಇದ್ದಾರೆ.

PC : News Express

ಭಾರತದಲ್ಲಿ ದೊರೆಯುವ ಎಲ್ಲಾ ಖನಿಜಗಳನ್ನು ಬಗೆದು ದೋಚಬೇಕೆಂಬ, ಬೆಟ್ಟಗಳನ್ನೆಲ್ಲಾ ತಮ್ಮ ತಲೆಮಾರಿನಲ್ಲೇ ಕರಗಿಸಿ ತಮ್ಮ ತಿಜೋರಿ ತುಂಬಿಕೊಳ್ಳಲು, ಅರಣ್ಯವನ್ನೆಲ್ಲಾ ಕೊಳ್ಳೆ ಹೊಡೆದು ಬರಿದಾಗಿಸಬೇಕೆಂಬ ದುರಾತ್ಮರ ಮತ್ತು ಸಮುದ್ರದ ಆದಳದಲ್ಲಿರುವ ಪೆಟ್ರೋಲಿಯಂ, ಹವಳ ಮತ್ತು ಮುತ್ತುಗಳನ್ನು ದೋಚಬೇಕೆಂದಿರುವ ಕಾರ್ಪೋರೇಟ್ ಕುಳಗಳದ್ದು ಒಂದೇ ಸಂಕಲ್ಪ. ಅದೇನೆಂದರೆ ನಮ್ಮ ತಲೆಮಾರಿನಲ್ಲೇ ಈ ಎಲ್ಲವನ್ನೂ ದೋಚಿ ಮುಂದಿನ ತಲೆಮಾರಿಗೆ ಅವು ಯಾವುದೂ ಲಭ್ಯವಾಗದಂತೆ ಮಾಡುವ ಮ್ಯಾಡ್ ರೇಸ್‌ನಲ್ಲಿ ಮುಳುಗುವುದು. ಇವರಿಗೆಲ್ಲಾ ದುಡ್ಡೇ ಆರಾಧ್ಯ ದೈವ. ದುಡ್ಡಿಗಾಗಿ ಇವರು ಎಂತಹ ಪಾತಕ ಮಾಡಲು ಹೇಸುವವರಲ್ಲ.

ನಮ್ಮ ಸರ್ಕಾರಗಳು ಈ ದೋಚುವ ಜನರಿಗೆ ಪೂರ್ಣ ಸಹಕಾರ ಕೊಡುತ್ತದೆ. 32% ಅರಣ್ಯ ಇರಬೇಕೆಂಬ ಕಾಳಜಿ ಸರ್ಕಾರಕ್ಕಿಲ್ಲ. ಅದು ಈಗ 13% ಇಳಿದಿರಬಹುದು. ಆನೆ, ಹುಲಿ, ಕರಡಿ, ತೋಳಗಳಿಗೆ ಕಾಡು ಕಿರಿದಾಗುತ್ತಿರುವುದರಿಂದ ನೆಲೆತಪ್ಪಿ ಆಹಾರ, ನೀರು, ಅಭಾವ ಕಾಣಿಸಿರುವುದರಿಂದ ಅವು ಈಗ ಕಾಡು ಬಿಟ್ಟು ನಾಡಿಗೆ ಅಧಿಕ ಸಂಖ್ಯೆಯಲ್ಲಿ ವಲಸೆ ಬರುತ್ತಿವೆ. ನಾಡಿನಲ್ಲಿ ವಾಸಿಸುವ ಜನಕ್ಕೆ ನೆಮ್ಮದಿ ತಪ್ಪಿದೆ. ಕಾಡುಪ್ರಾಣಿಗಳ ಭಯ ಕಾಡುತ್ತಿದೆ. ಅರಣ್ಯವಾಸಿ ಹುಲಿ, ಚಿರತೆಗಳೊಡನೆ ಅನಿವಾರ್ಯವಾಗಿ ಸಹಬಾಳ್ವೆ ಮಾಡುವ ಅನಿವಾರ್ಯತೆ ಉಂಟಾಗಿದೆ. ಸರ್ಕಾರಕ್ಕೆ, ಖನಿಜ ಇಲಾಖೆಯ ಅಧಿಕಾರಿಗಳಿಗೆ ಚಿನ್ನವಾಗಲಿ, ಬೆಳ್ಳಿಯಾಗಲಿ, ತಾಮ್ರವಾಗಲಿ, ಕಬ್ಬಿಣವಾಗಲಿ, ಮ್ಯಾಂಗನೀಸ್ ಆಗಲಿ, ಬೆಟ್ಟದ ಕಲ್ಲುಗಳಾಗಲಿ ಅವು ಉತ್ಪತ್ತಿಯಾಗುವುದಕ್ಕೆ ನೂರರಿಂದ ಐನೂರು ವರ್ಷಗಳು ಬೇಕಾಗುತ್ತದೆ ಎಂಬ ಪರಿಜ್ಞಾನವಿಲ್ಲ.

ಈ ಖನಿಜಗಳು ಬರಿದಾಗುವುದಕ್ಕೆ ಬಿಡದೇ ನಮ್ಮ ತಲೆಮಾರಿನಲ್ಲಿ ಇಂತಿಷ್ಟು ಮಾತ್ರ ತೆಗೆಯಲು ಶಾಸನ ಮಾಡಬೇಕು. ಉಳಿದ ಖನಿಜಗಳನ್ನು ಮುಂದಿನ ತಲೆಮಾರಿನ ಜನರಿಗಾಗಿ ಮೀಸಲಿಡಬೇಕು. ಅದು ಸರ್ಕಾರದ ಧರ್ಮ.ಇನ್ನಾದರು ಈ ಪ್ರಕೃತಿ ಸಂಪತ್ತುಗಳ ಲೂಟಿಗೆ ಕಡಿವಾಣ ಹಾಕಬೇಕು. ನ್ಯಾಯದ ದೃಷ್ಟಿಯಿಂದ ನೋಡಿದರೆ ಈ ಎಲ್ಲಾ ಪ್ರಕೃತಿ ಸಂಪತ್ತನ್ನು ಸೃಷ್ಟಿಕರ್ತ ತಾನು ಸೃಷ್ಟಿಸಿದ ಎಲ್ಲಾ ಮನುಷ್ಯರಿಗೆ ದೊರೆಯುವಂತಾಗಲಿ ಎಂದು ಬಗೆದಿದ್ದ. ಅನೀತಿಯುತ ಸರ್ಕಾರಗಳು ದೋಚುವ ಮಹಾನುಭಾವರ ಪರವಾಗಿ ನಿಂತು, ಜನರಿಗೆ ಅವುಗಳು ದೊರೆಯದಂತೆ ವಂಚನೆ ಮಾಡುತ್ತಿವೆ. ಪ್ರಕೃತಿ ಸಂಪತ್ತು ಎಲ್ಲರಿಗೂ ಸುಲಭ ಬೆಲೆಯಲ್ಲಿ ದೊರೆಯುವಂತಾಗಬೇಕಾದರೆ ಪ್ರಕೃತಿ ನೀಡಿರುವ ಎಲ್ಲಾ ಸಂಪತ್ತನ್ನು ರಾಷ್ಟ್ರೀಕರಣ ಮಾಡಬೇಕು. ಸರ್ಕಾರ ಈಗಲಾದರೂ ಪ್ರಕೃತಿ ಸಂಪತ್ತಿಗೆ ಪ್ರಜೆಗಳು ಒಡೆಯರು ಎಂದು ಘೋಷಿಸಲಿ.


ಇದನ್ನೂ ಓದಿ: ನೂರರ ನೋಟ: ಕರ ನಿರಾಕರಣೆಯನ್ನು ನೆನಪಿಸಿದ ದೆಹಲಿ ರೈತ ಹೋರಾಟ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...