Homeಮುಖಪುಟಮಯನ್ಮಾರ್ ಮಿಲಿಟರಿ ದಂಗೆಯ ವಿರುದ್ಧ ಬಂಡಾಯ 8888 ರಿಂದ 2021

ಮಯನ್ಮಾರ್ ಮಿಲಿಟರಿ ದಂಗೆಯ ವಿರುದ್ಧ ಬಂಡಾಯ 8888 ರಿಂದ 2021

- Advertisement -
- Advertisement -

2021, ಫೆಬ್ರವರಿ ಒಂದರಂದು, ಮಯನ್ಮಾರ್‌ನ ಮಿಲಿಟರಿ, (ಟಾಟ್ಮಾಡಾವ್) ಪ್ರಜಾಸತ್ತಾತ್ಮಕವಾಗಿ ಚುನಾಯಿತರಾದ ಅಧ್ಯಕ್ಷ ವಿನ್ ಮೈಂಟ್ ಅವರನ್ನು ಮಿಲಿಟರಿ ದಂಗೆಯಲ್ಲಿ ಪದಚ್ಯುತಗೊಳಿಸಿತು. ಮಿಲಿಟರಿ ಅಲ್ಲಿ ತುರ್ತು ಪರಿಸ್ಥಿತಿಯನ್ನು ಘೋಷಿಸಿತು. 2020ರ ಚುನಾವಣೆಯಲ್ಲಿ ಪ್ರಚಾರ ಮಾರ್ಗಸೂಚಿಗಳನ್ನು ಹಾಗೂ ಕೋವಿಡ್-19 ನಿರ್ಬಂಧನೆಗಳನ್ನು ಉಲ್ಲಂಘಿಸಿದ್ದಾರೆಂದು ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ (ಎನ್‌ಎಲ್‌ಡಿ) ನಾಯಕರ ಮೇಲೆ ಅಲ್ಲಿನ ಮಿಲಿಟರಿ ದೋಷಾರೋಪ ಮಾಡುತ್ತಾ ಬಂದಿದೆ. 2020ರ ಚುನಾವಣೆಯಲ್ಲಿ ಎನ್‌ಎಲ್‌ಡಿ ಸಂಸತ್ತಿನ 476 ಸ್ಥಾನಗಳಲ್ಲಿ 396 ಸ್ಥಾನಗಳನ್ನು ಗೆದ್ದುಕೊಂಡಿತು. ಚುನಾವಣಾ ಫಲಿತಾಂಶಗಳು ವಂಚನೆ ಮತ್ತು ರಿಗ್ಗಿಂಗ್‌ನ ಫಲ ಎಂದು ಮಿಲಿಟರಿ ನಾಯಕರು ಪ್ರತಿಪಾದಿಸುತ್ತ ಬಂದಿದ್ದಾರೆ.

ಮಿಲಿಟರಿ ದಂಗೆಯ ನಂತರ ಪ್ರತಿಭಟನೆಗಳು ಪ್ರಾರಂಭವಾದವು. ಫೆಬ್ರವರಿ 2ರಂದು ಕೆಲವೇ ಜನರೊಂದಿಗೆ ಶುರುವಾದ ಪ್ರತಿಭಟನೆ, ಫೆಬ್ರವರಿ 7ರ ಹೊತ್ತಿಗೆ ಲಕ್ಷಗಳ ಸಂಖ್ಯೆಯಲ್ಲಿ ಜನರು ಪ್ರತಿಭಟಿಸುತ್ತಿದ್ದರು. ಈ ಪ್ರತಿಭಟನೆಗಳಿಗೆ ಯಾವ ನಾಯಕರೂ ಇರಲಿಲ್ಲ. ಮಿಲಿಟರಿ ಆಡಳಿತವನ್ನು ಕೊನೆಗೊಳಿಸಬೇಕು ಮತ್ತು ನಾಗರಿಕ ಆಡಳಿತವನ್ನು ಸ್ಥಾಪಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸುತ್ತ ಬಂದಿದ್ದಾರೆ. ಪ್ರತಿಭಟನಾಕಾರರನ್ನು ಚದುರಿಸಲು ಮಿಲಿಟರಿ ಜಲ-ಫಿರಂಗಿಗಳನ್ನು, ಬಳಸಿದೆ. ಫೆಬ್ರವರಿ 8 ರಿಂದ ಮಿಲಿಟರಿ ಅಲ್ಲಿ ತನ್ನ ’ಸೇನಾಡಳಿತ’ವನ್ನು ಸ್ಥಾಪಿಸಿದೆ.

PC : BBC

ಪ್ರತಿಭಟನೆಗಳು ದೇಶಾದ್ಯಂತ ಹರಡಿವೆ. ನೂರಾರು ಪ್ರತಿಭಟನಾಕಾರರನ್ನು ಹತ್ಯೆ ಮಾಡಲಾಗಿದೆ ಮತ್ತು ಸಾವಿರಾರು ಜನರನ್ನು ಬಂಧಿಸಲಾಗಿದೆ. ಎನ್‌ಎಲ್‌ಡಿಯ ನಾಯಕರನ್ನು ಜೈಲಿಗೆ ಹಾಕಲಾಗಿದೆ. ದೇಶಾದ್ಯಂತ ಅನೇಕ ಉಗ್ರಗಾಮಿ ಗುಂಪುಗಳು ಸರ್ಕಾರದ ವಿರುದ್ಧ ಬಹಿರಂಗ ಘೋಷಣೆಗಳನ್ನು ಮಾಡುತ್ತಿವೆ. ಮಯನ್ಮಾರ್ ನಾಗರಿಕ ಅಂತರ್ಯುದ್ಧದ ಅಂಚಿನಲ್ಲಿರಬಹುದು. ಇದರೊಂದಿಗೆ ಭಾರತದ ಗಡಿಯಲ್ಲಿ ನಿರಾಶ್ರಿತರ ಬಿಕ್ಕಟ್ಟು ಉಂಟಾಗಬಹುದು. ಈ ಪರಿಸ್ಥಿತಿಯಿಂದ ಮುಂದೆ ಒದಗಬಹುದಾದ ಸನ್ನಿವೇಶಕ್ಕೆ ಸಂಬಂಧಿಸಿದಂತೆ ಒಂದು ಪ್ರಬುದ್ಧ ನೀತಿಯನ್ನು ಭಾರತ ನಿರ್ಧರಿಸಬೇಕಾದ ಸಮಯ ಇದು.

ಹಿನ್ನೆಲೆ

ಸ್ವಾತಂತ್ರ್ಯ ಬಂದಾಗಿನಿಂದ ಮಯನ್ಮಾರ್ ಹೆಚ್ಚಾಗಿ ಮಿಲಿಟರಿ ಆಡಳಿತದಲ್ಲಿದೆ. 1985ರಲ್ಲಿ ಮತ್ತು 1987 ರಲ್ಲಿ ಸರ್ಕಾರವು ಡಿಮಾನೆಟೈಸೇಶನ್ ನೀತಿಯನ್ನು ಜಾರಿಗೆ ತಂದಿತು ಮತ್ತು ಸುಮಾರು ಶೇ 75ರಷ್ಟು ರಾಷ್ಟ್ರೀಯ ಕರೆನ್ಸಿಯನ್ನು ಇಲ್ಲವಾಗಿಸಿತು. ಪರಿಣಾಮವಾಗಿ, ಅನೇಕ ಜನರು ತಮ್ಮ ಉಳಿತಾಯವನ್ನು ಕಳೆದುಕೊಂಡರು. 1985ರ ಡಿಮಾನೆಟೈಸೇಶನ್ (ನೋಟು ಅಮಾನ್ಯೀಕರಣ) ಕೆಲವು ಸಣ್ಣ ಆಂದೋಲನಗಳಿಗೆ ಕಾರಣವಾಯಿತು. ಭೂಗತ ಪ್ರಭುತ್ವ ವಿರೋಧಿ ಪ್ರತಿರೋಧವು ರೂಪುಗೊಳ್ಳಲು ಪ್ರಾರಂಭಿಸಿತು. 1987ರ ಡಿಮಾನೆಟೈಸೇಶನ್ ಪ್ರತಿರೋಧದ ಎರಡನೇ ಅಲೆಗೆ ಕಾರಣವಾಯಿತು. ಇದು 8 ಆಗಸ್ಟ್ 1988 ರ ದಂಗೆಗೆ (8888 ದಂಗೆ ಎಂದೇ ಪ್ರಚಲಿತ) ಇದು ಕಾರಣವಾಯಿತು. ಶಿಕ್ಷಣಕ್ಕೆ ಬೇಕಾದ ಉಳಿತಾಯವನ್ನು ಕಳೆದುಕೊಂಡ ವಿದ್ಯಾರ್ಥಿಗಳು ಗಲಭೆಗಳನ್ನು ಮುನ್ನಡೆಸಿದರು. ಕೊನೆಗೆ, ಸಮಾಜದ ಇತರ ವರ್ಗಗಳು ಸೇರಿಕೊಂಡವು. ಪ್ರತಿಭಟನೆಗಳು ದೇಶಾದ್ಯಂತ ಹರಡಿದವು. ಆರಂಭದಲ್ಲಿ, ಮಿಲಿಟರಿ ’ಸೇನಾ ಕಾನೂನು’ ಘೋಷಿಸುವ ಮೂಲಕ ಪ್ರತಿಕ್ರಿಯಿಸಿತು. ಅಂತಿಮವಾಗಿ, ಅವರು ಚುನಾವಣೆ ನಡೆಸಲು ಒಪ್ಪುವ ಮೂಲಕ ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು.

8888 ದಂಗೆಯ ನಂತರ ಎನ್‌ಎಲ್‌ಡಿ ರಚನೆಯಾಯಿತು. ಪ್ರಸಿದ್ಧ ರಾಷ್ಟ್ರೀಯವಾದಿ ಆಂಗ್ ಸಾನ್ ಅವರ ಪುತ್ರಿ ಆಂಗ್ ಸಾನ್ ಸೂಕಿ ಮಿಲಿಟರಿ ಆಡಳಿತದ ಪ್ರತಿರೋಧದ ಮುಖವಾಗಿ ಮುನ್ನಲೆಗೆ ಬಂದರು. ಅವರು ಎನ್‌ಎಲ್‌ಡಿಯನ್ನು ಮುನ್ನಡೆಸಿದರು. 1990 ರಲ್ಲಿ ಚುನಾವಣೆಗಳು ನಡೆದವು. ಸಂಸತ್ತಿನ 492 ಸ್ಥಾನಗಳಲ್ಲಿ ಎನ್‌ಎಲ್‌ಡಿ 392 ಸ್ಥಾನಗಳನ್ನು ಗಳಿಸಿ ಶೇ.59 ಜನಪ್ರಿಯ ಮತಗಳನ್ನು ಗಳಿಸಿತು. ಮಿಲಿಟರಿ ಚುನಾವಣೆಗಳನ್ನು ನ್ಯಾಯಸಮ್ಮತವಲ್ಲವೆಂದು ಘೋಷಿಸಿತು ಮತ್ತು ಮಯನ್ಮಾರ್ ಆಡಳಿತವನ್ನು ತನ್ನ ಹತೋಟಿಯಲ್ಲಿ ಇಟ್ಟುಕೊಂಡಿತು.

1990ರ ದಶಕದಲ್ಲಿ ಆಂದೋಲನಗಳು ಮುಂದುವರೆದವು. ಎನ್‌ಎಲ್‌ಡಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಚಾರ ಮಾಡಿತು. ಅಮೆರಿಕ, ಬ್ರಿಟನ್, ಜಪಾನ್ ಮತ್ತು ಅನೇಕ ಯುರೋಪಿಯನ್ ದೇಶಗಳಿಂದ ಬೆಂಬಲವನ್ನು ಪಡೆದುಕೊಂಡಿತು, ಇದು ಮಯನ್ಮಾರ್ ವಿರುದ್ಧ ನಿರ್ಬಂಧಗಳಿಗೆ ಕಾರಣವಾಯಿತು. ಮಯನ್ಮಾರ್‌ನ ಆರ್ಥಿಕತೆ ಸಂಕಷ್ಟಕ್ಕೆ ಈಡಾಗಿತು. ವಿವಿಧ ಪ್ರದೇಶಗಳ ಉಗ್ರ ಜನಾಂಗೀಯ ಆಧಾರಿತ ಗುಂಪುಗಳು ಸ್ವಾತಂತ್ರ್ಯಕ್ಕಾಗಿ ಯುದ್ಧಗಳನ್ನು ಘೋಷಿಸಲು ಪ್ರಾರಂಭಿಸಿದವು.

2003ರಲ್ಲಿ, ಸರ್ಕಾರವು ಪ್ರಜಾಪ್ರಭುತ್ವ ಸ್ಥಾಪನೆಗೆ ಏಳು ಹಂತಗಳನ್ನು ಪ್ರಸ್ತಾಪಿಸಿತು. ಅಲ್ಲಿ ಅವರು ಸಂವಿಧಾನವನ್ನು ಸ್ಥಾಪಿಸಲು ಮತ್ತು ನಾಗರಿಕ ಆಡಳಿತಕ್ಕೆ ಹೋಗಲು ಒಪ್ಪಿದರು. ಅವರ ಪ್ರಸ್ತಾಪವನ್ನು ದೇಶದ ಪ್ರಮುಖ ಬಂಡುಕೋರ ಗುಂಪುಗಳು ಒಪ್ಪಿಕೊಂಡವು ಮತ್ತು ಪ್ರತಿ ಪ್ರದೇಶದಲ್ಲೂ ಪ್ರಾದೇಶಿಕ ಸಂವಿಧಾನಗಳನ್ನು ರೂಪಿಸಲು ಅವಕಾಶ ನೀಡುವ ಷರತ್ತಿನ ಮೇಲೆ ಅವರು ಕದನ ವಿರಾಮಕ್ಕೆ ಒಪ್ಪಿದರು,

2008ರಲ್ಲಿ ರಾಜ್ಯವು ಪ್ರಸ್ತಾವಿತ ಸಂವಿಧಾನದೊಂದಿಗೆ ಜನಾಭಿಪ್ರಾಯವನ್ನು ಪ್ರಸ್ತಾಪಿಸಿತು. ಹೊಸ ಸಂವಿಧಾನವು ಸಂಸತ್ತಿನ ಶೇ.25 ಸ್ಥಾನಗಳನ್ನು ನಿಯಂತ್ರಿಸುವ ಮೂಲಕ ಮಿಲಿಟರಿಗೆ ತನ್ನ ಪ್ರಭಾವವನ್ನು ಉಳಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ ಮತ್ತು ಉಪಾಧ್ಯಕ್ಷರಲ್ಲಿ ಒಬ್ಬರನ್ನು ನೇಮಿಸುತ್ತದೆ. ಜನಾಭಿಪ್ರಾಯ ಸಂಗ್ರಹಣೆ ನಡೆಯುವ ಎರಡು ತಿಂಗಳ ಮೊದಲು ಸಂವಿಧಾನವನ್ನು ಬಿಡುಗಡೆ ಮಾಡಲಾಯಿತು. ಈ ಅವಧಿಯಲ್ಲಿ ಪ್ರಮುಖ ಚಂಡಮಾರುತವಾದ ನಾರ್ಗಿಸ್ ಬಂದೆರಗಿತು. ಸಂವಿಧಾನವು ನಾಗರಿಕ ಹಕ್ಕುಗಳನ್ನು ಮೊಟಕುಗೊಳಿಸಿದೆ, ಸಾರ್ವಜನಿಕ ಚರ್ಚೆಗೆ ಸ್ವಲ್ಪ ಸಮಯವನ್ನು ನೀಡಿದೆ ಮತ್ತು ರಾಷ್ಟ್ರೀಯ ಬಿಕ್ಕಟ್ಟಿನ ಸಂದರ್ಭದಲ್ಲಿ ಇದು ಸಂಭವಿಸಿದೆ ಎಂದು ಜನಾಭಿಪ್ರಾಯ ಸಂಗ್ರಹಣೆಗೆ ಎನ್‌ಎಲ್‌ಡಿ ಆಕ್ಷೇಪ ವ್ಯಕ್ತಪಡಿಸಿತು.

ಕೊನೆಗೂ ಸಂವಿಧಾನವನ್ನು ಅಂಗೀಕರಿಸಲಾಯಿತು, ಮತ್ತು 2010 ರಲ್ಲಿ ಚುನಾವಣೆಗಳು ನಡೆದವು. ಎನ್‌ಎಲ್‌ಡಿ ಚುನಾವಣೆಯಲ್ಲಿ ಭಾಗವಹಿಸಲು ನಿರಾಕರಿಸಿತು. ಮಿಲಿಟರಿಯೊಂದಿಗೆ ಬಲವಾದ ಸಂಪರ್ಕ ಹೊಂದಿರುವ ಪಕ್ಷವಾದ ಯೂನಿಯನ್ ಸಾಲಿಡಾರಿಟಿ ಅಂಡ್ ಡೆವಲಪ್ಮೆಂಟ್ ಪಾರ್ಟಿ (ಯುಎಸ್‌ಡಿಪಿ) ಚುನಾವಣೆಯಲ್ಲಿ ಜಯ ಗಳಿಸಿತು. 2015ರ ಚುನಾವಣೆಯಲ್ಲಿ ಎನ್‌ಎಲ್‌ಡಿ ಸ್ಪರ್ಧಿಸಿ ಜಯ ಗಳಿಸಿತು.

2020ರ ಚುನಾವಣೆಯಲ್ಲಿ ತೀವ್ರ ಸ್ಪರ್ಧೆ ನಡೆಯಿತು. ಯುಎಸ್‌ಡಿಪಿ ವಿರುದ್ಧ ಎನ್‌ಎಲ್‌ಡಿ ಹೋರಾಟ ಎಂಬಂತೆ ಈ ಚುನಾವಣೆ ನಡೆಯಿತು. 2020 ರಲ್ಲಿನ ಸೋಲು ಮಿಲಿಟರಿ ಪ್ರಭಾವಕ್ಕೆ ಹೆಚ್ಚು ಸವಾಲು ಒಡ್ಡುವುದಕ್ಕೆ ಸಂಕೇತವಾಗಿತ್ತು. ಇದರ ಪರಿಣಾಮವಾಗಿ, ಮಿಲಿಟರಿ ದಂಗೆಯ ಮೂಲಕ ಅದು ಈಗ ಪ್ರತಿಕ್ರಿಯೆ ನೀಡಿದೆ.

PC : Digis Mak

ಮಯನ್ಮಾರ್ ಕೇಂದ್ರ ಸರ್ಕಾರದ ಬಗ್ಗೆ ಭಾರತ ಯಾವಾಗಲೂ ಹಸ್ತಕ್ಷೇಪ ಮಾಡದ ನೀತಿಯನ್ನು ಹೊಂದಿದೆ. ರಾಷ್ಟ್ರೀಯ ಸಾರ್ವಭೌಮತ್ವ ಮತ್ತು ಸ್ವ-ನಿರ್ಣಯವು ಪ್ರಮುಖ ತತ್ವಗಳು ಎಂದು ಸತತವಾಗಿ ವಾದಿಸುತ್ತಿರುವುದರಿಂದ ಇದು ಬಹುತೇಕ ವಿಷಯಗಳಲ್ಲಿ ಭಾರತದ ವಿದೇಶಾಂಗ ನೀತಿಗೆ ಅನುಗುಣವಾಗಿದೆ. ಮಯನ್ಮಾರ್‌ನೊಂದಿಗಿನ ಪರಿಸ್ಥಿತಿ ಹೆಚ್ಚು ತಂತ್ರಗಾರಿಕೆಯದ್ದಾಗಿದೆ. 8888ರ ದಂಗೆಯಂತೆ, ಮಯನ್ಮಾರ್‌ನಲ್ಲಿನ ಸಂಘರ್ಷವು ಭಾರತಕ್ಕೆ ನಿರಾಶ್ರಿತರ ಒಳಹರಿವಿಗೆ ಕಾರಣವಾಗಬಹುದು. ಭಾರತ ಅದಕ್ಕೆ ಸಿದ್ಧವಾದಂತೆ ಕಾಣುತ್ತಿಲ್ಲ.

ನೆರೆಯ ರಾಷ್ಟ್ರವಾಗಿ, ಎರಡೂ ಕಡೆಗಳಲ್ಲಿ ಅನೇಕ ಪ್ರತ್ಯೇಕತಾವಾದಿ ಚಳವಳಿಗಳು ಸಂಭವಿಸುತ್ತಿರುವ ಸಂದರ್ಭದಲ್ಲಿ ಭಾರತವು ಮಯನ್ಮಾರ್ ಬಗ್ಗೆ ಖಚಿತ ನಿಲುವು ತೆಗೆದುಕೊಳ್ಳುವುದನ್ನು ತಪ್ಪಿಸಿಕೊಂಡಿದೆ ಧ್ರುವೀಕರಿಸುವ ಕಾಲದಲ್ಲಿ, ಮಯನ್ಮಾರ್ ದೇಶದೊಳಗಿನ ಬಣಗಳು ಚೀನಾದ ಕಡೆಗೆ ಬಾಗುವ ಬಗ್ಗೆ ಭಾರತ ಸರ್ಕಾರ ಕಳವಳದಿಂದಿದ್ದು, ಅದರಿಂದ ತಟಸ್ಥ ನಿಲುವನ್ನು ಇಟ್ಟುಕೊಂಡಿದೆ. ಮಯನ್ಮಾರ್‌ನಲ್ಲಿ ತೈಲ ಮತ್ತು ಅನಿಲದ ದೊಡ್ಡ ಸಂಗ್ರಹವಿದೆ ಮತ್ತು ಭಾರತ ಈ ವ್ಯಾಪಾರಕ್ಕೆ ಕಾಯುತ್ತಿದೆ.

ಕಿಶೋರ್ ಗೋವಿಂದ

ಕಿಶೋರ್ ಗೋವಿಂದ
ಬೆಂಗಳೂರಿನಲ್ಲಿ ನೆಲೆಸಿರುವ ಕಿಶೋರ್ ಅವರು ಗಣಿತಶಾಸ್ತ್ರಜ್ಞರು. ಜಾಗತಿಕ ರಾಜಕೀಯ ಆಗುಹೋಗುಗಳನ್ನು ನಿಕಟವಾಗಿ ಗಮನಿಸುವ ಅವರು ಪತ್ರಿಕೆಗಳಿಗೆ ಲೇಖನಗಳನ್ನು ಬರೆದಿದ್ದಾರೆ.


ಇದನ್ನೂ ಓದಿ: ಈಶ್ವರಪ್ಪನವರು ಮೊದಲ ಬಾರಿ ಒಂದು ಒಳ್ಳೆಯ ಕೆಲಸ ಮಾಡಿದ್ದಾರೆ: ಸಿದ್ದರಾಮಯ್ಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...

ಸುರಿವ ಮಳೆಯಲ್ಲಿಯೂ ಎಸ್‌ಐಆರ್ ವಿರೋಧಿ ಜಾಥಾಕ್ಕೆ ಜೊತೆಯಾದ ಮಳವಳ್ಳಿ, ಮದ್ದೂರು, ಮಂಡ್ಯ ಜನತೆ

ಮಂಡ್ಯ: ಮಳವಳ್ಳಿಯ ಬಸ್ ನಿಲ್ದಾಣದ ಬಳಿ ಸುರಿವ ಮಳೆಯಲ್ಲಿಯೂ 'ಎಸ್‌ಐಆರ್ (SIR) ವಿರೋಧಿ ಕರ್ನಾಟಕ' ಜಾಥಾಕ್ಕೆ ಹೋರಾಟಗಾರರು, ಬರಹಗಾರರು, ಜನಚಳವಳಿಗಳ ಮುಖಂಡರು ಹಾಗೂ ಪ್ರಗತಿಪರರು ಬೆಂಬಲ ವ್ಯಕ್ತಪಡಿಸಿದರು‌. ಈ ವೇಳೆ ಎಸ್‌ಐಆರ್ ಕುರಿತು ಮಾತನಾಡಿದ...

ಚಿತ್ರದುರ್ಗದಲ್ಲಿ ಸಮಾರೋಪಗೊಂಡ ಮಾರ್ಗ -3 SIR ವಿರೋಧಿ ಜನಜಾಗೃತಿ ಜಾಥ: ಜೂನ್ 20ರ ಸಮಾವೇಶದ ಯಶಸ್ಸಿಗೆ ಕರೆ

ಚುನಾವಣಾ ಆಯೋಗ ಜಾರಿಗೆ ತರಲು ಹೊರಟಿರುವ ಎಸ್‌ಐಆರ್ (SIR) ವ್ಯವಸ್ಥೆಯನ್ನು ವಿರೋಧಿಸಿ ಹಮ್ಮಿಕೊಳ್ಳಲಾಗಿದ್ದ ‘ಎಸ್‌ಐಆರ್ ವಿರೋಧಿ ಜನಜಾಗೃತಿ ಜಾಥಾ’ವು ದಾವಣಗೆರೆಯಲ್ಲಿ ಪ್ರಚಾರ ಮುಗಿಸಿ ಚಿತ್ರದುರ್ಗವನ್ನು ತಲುಪಿದ್ದು, ಇಲ್ಲಿ ಯಶಸ್ವಿಯಾಗಿ ಸಮಾರೋಪಗೊಂಡಿದೆ. ಎದ್ದೇಳು ಕರ್ನಾಟಕ,...

ಗದಗ | ಮನುವಾದದ ಜಾರಿಗೆ ಎಸ್‌ಐಆರ್‌ ಹೇರಿಕೆ : ಡಾ.ಇಸಾಬೆಲ್ಲ ಝೇವಿಯರ್

ದೇಶದಲ್ಲಿ ಮನುವಾದ ಜಾರಿಗೆ ತರುವುದು ಆರ್‌ಎಸ್‌ಎಸ್‌-ಸಂಘಪರಿವಾರದ ಮೂಲ ಉದ್ದೇಶ, ಅದಕ್ಕಾಗಿ ಜನರ ಮೇಲೆ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಯಂತಹ ಹೊಸ ಹೊಸ ಪ್ರಕ್ರಿಯೆಗಳನ್ನು ಹೇರಲಾಗುತ್ತಿದೆ ಎಂದು ಸಾಮಾಜಿಕ ಹೋರಾಟಗಾರ್ತಿ...

ಸಂವಿಧಾನ ವಿರೋಧಿ ‘SIR’ಗೆ ಹರಿಹರದಲ್ಲಿ ತೀವ್ರ ವಿರೋಧ: ಜನಜಾಗೃತಿ ಜಾಥಾದ ಮೂಲಕ ಕೇಂದ್ರ ಸರ್ಕಾರದ ವಿರುದ್ಧ ನಾಗರಿಕರ ಆಕ್ರೋಶ

ದಾವಣಗೆರೆ ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಇತ್ತೀಚೆಗೆ ಕೇಂದ್ರ ಚುನಾವಣಾ ಆಯೋಗದ 'SIR' (ವಿಶೇಷ ಗುರುತಿನ ಪರಿಶೀಲನೆ/ಮರುಪರಿಶೀಲನಾ ಕ್ರಮ) ಯೋಜನೆ ವಿರುದ್ಧ ಬೃಹತ್ ಜನಜಾಗೃತಿ ಜಾಥಾ ಯಶಸ್ವಿಯಾಗಿ ಸಂಚರಿಸಿತು. ಸಾರ್ವಜನಿಕರಲ್ಲಿ ಈ ಯೋಜನೆಯ ಕುರಿತು...

“ಎಸ್ಐಆರ್ ಮೂಲಕ ಮನುವಾದದ ಜಾರಿಗೆ ಕುತಂತ್ರ ರೂಪಿಸುತ್ತಿರುವ ಬಿಜೆಪಿ ಗೆಲ್ಲಲು ಬಿಡುವುದಿಲ್ಲ”:  ಮೈಸೂರಿನಲ್ಲಿ ಜನಾಕ್ರೋಶ

2026 ಜೂನ್ 16 ರಂದು ಹುಣುಸೂರು, ಹೆಚ್.ಡಿ ಕೋಟೆ, ಮೈಸೂರಿನಲ್ಲಿ ಸಾಗಿದ ಎಸ್ಐಆರ್ ವಿರೋಧಿ ಕರ್ನಾಟಕ ಜಾಥಾಕ್ಕೆ ಹುಣುಸೂರಿನ ಸಂವಿಧಾನ ಸರ್ಕಲ್ ನಿಂದ ಅಭೂತಪೂರ್ವ ಬೆಂಬಲ ಸಿಕ್ಕಿತು. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್ಐಆರ್...