Homeಕರ್ನಾಟಕ`ಅರಮನೆಯಲ್ಲಿ ಕುಳಿತರೆ ಆಮ್ಲಜನಕ ಸಿಗದು' - ಸಿಎಂಗೆ ಶಾಸಕ ಎಚ್. ಕೆ. ಪಾಟೀಲ್ ಮುಖಾಮುಖಿ ಕ್ಲಾಸ್!

`ಅರಮನೆಯಲ್ಲಿ ಕುಳಿತರೆ ಆಮ್ಲಜನಕ ಸಿಗದು’ – ಸಿಎಂಗೆ ಶಾಸಕ ಎಚ್. ಕೆ. ಪಾಟೀಲ್ ಮುಖಾಮುಖಿ ಕ್ಲಾಸ್!

- Advertisement -
- Advertisement -

ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಜೆಡಿಎಸ್‌ನ ಕುಮಾರಸ್ವಾಮಿ ಕೊರೊನಾ ನಿರ್ವಹಣೆಗೆ ಸಂಬಂಧಿಸಿದಂತೆ ದಿನವೂ ರಾಜ್ಯ ಸರ್ಕಾರವನ್ನು ಎಚ್ಚರಿಸುತ್ತ ಬಂದಿದ್ದಾರೆ. ಇನ್ನೊಂದು ಕಡೆ ಅಸಂಖ್ಯಾತ ಸಾಮಾಜಿಕ ಸಂಘಟನೆಗಳು ಪ್ರತಿನಿತ್ಯ ಕೋವಿಡ್ ಸಂತ್ರಸ್ತರು ಮತ್ತು ಕುಟುಂಬಗಳಿಗೆ ನೆರವು ನೀಡುತ್ತಿವೆ. ಜೊತೆಗೇ ಪ್ರತಿದಿನ ಹಲವು ನಿರ್ಣಾಯಕ ಪ್ರಶ್ನೆಗಳನ್ನು ಕೇಳುತ್ತಿವೆ. ಆದರೆ, ದುರುದ್ದೇಶದಲ್ಲಿ ಬಿಬಿಎಂಪಿ ಕೋವಿಡ್ ರೂಮ್ ಹೊಕ್ಕ ಸಂಸದ ತೇಜಸ್ವಿ ಸೂರ್ಯ ಮತ್ತು ಪಟಾಲಂನ ಮಾತು ಕೇಳಿ ಸರ್ಕಾರ ಕ್ರಮ ಜರುಗಿಸಿದೆ.

ಆದರೆ ಯಾವುದೋ ಗೊಂದಲದಲ್ಲಿರುವ, ಅಸಹಾಯಕತೆಯಲ್ಲಿರುವಂತೆ ಕಾಣುವ ಸಿಎಂ ಯಡಿಯೂರಪ್ಪ ಏನನ್ನೂ ಸ್ಪಷ್ಟವಾಗಿ ಹೇಳುತ್ತಿಲ್ಲ.

ನಿನ್ನೆ ಬುಧವಾರ, ಆಕ್ಸಿಜನ್ ಪಡೆದುಕೊಳ್ಳುವ ಬಗೆಯನ್ನು ನೇರ ಯಡಿಯೂರಪ್ಪರಿಗೆ ವಿವರಿಸಿರುವ, ಅದಕ್ಕೆ ಅಗತ್ಯವಾದ ವೈಜ್ಞಾನಿಕ ಮತ್ತು ಕಾರ್ಯಸಾಧ್ಯವಾದ ವಿವರಗಳನ್ನು ನೀಡಿ ಬಂದಿರುವ ಮಾಜಿ ಸಚಿವ, ಗದಗಿನ ಹಾಲಿ ಶಾಸಕ ಎಚ್.ಕೆ ಪಾಟೀಲರಿಗೆ, ‘ನೀವು ಆಕ್ಸಿಜನ್ ಕುರಿತು ವಿವರಿಸುವಾಗ ಸಿಎಂ ಸಾಹೇಬರ ಭಾವ, ಮನಸ್ಥಿತಿ ಹೇಗಿತ್ತು?’ ಎಂದು ನಾನುಗೌರಿ.ಕಾಂ ಪ್ರಶ್ನೆ ಮಾಡಿತು.

ಇದನ್ನೂ ಓದಿ: ‘ಬೆಡ್‌ ಬ್ಲಾಕ್‌’ ವಿವಾದ: ಬಿಬಿಎಂಪಿ ಜಂಟಿ ಆಯುಕ್ತ ಸರ್ಫರಾಜ್ ಖಾನ್ ಬರೆದ ಭಾವನಾತ್ಮಕ ಪತ್ರ

‘ಒಂಥರಾ ಅಸಹಾಕತೆಯಿದೆ, ಇನ್ನೊಂದು ಕಡೆ ಒಳ ರಾಜಕಾರಣದ ಒತ್ತಡವಿದೆ. ರಾಜ್ಯದಲ್ಲಿ ಆಕ್ಸಿಜನ್ ಸಮಸ್ಯೆ ಬಗ್ಗೆ ಅವರಲ್ಲಿ ವಿವರವಾದ ಮಾಹಿತಿ ಇಲ್ಲ’ ಎಂದು ಪಾಟೀಲ್ ಹೇಳಿದರು.

‘ಸಂಗ್ರಹಣೆ ಸಮಸ್ಯೆ ಇದೆ, ಸಾಗಾಣಿಕೆ ಸಮಸ್ಯೆ ಇದೆ ಎಂದು ಮುಖ್ಯಮಂತ್ರಿ ಹೇಳುತ್ತ ಹೋದರು. ಇದು ಅವರ ಅಜ್ಞಾನವೋ ಅಥವಾ ಟೆನ್ಸನ್ನೋ? ಇಲ್ಲಾ ಈ ತಜ್ಞರ ಸಮಿತಿ ಆಕ್ಸಿಜನ್ ಕುರಿತ ವಾಸ್ತವವನ್ನು ಅವರಿಗೆ ತಿಳಿಸಲಿಲ್ಲವೋ? ’ಅರಮನೆಯಲ್ಲಿ ಕುಳಿತರೆ ಆಮ್ಲಜನಕ ಸಿಗದು’ ಎಂಬುದನ್ನು ಅವರಿಗೆ ಹೇಳಿದೆ. ವಿಧಾನಸೌಧದ ಮೂರನೇ ಮಹಡಿ ಮೇಲೆ ನಿಂತು ನೋಡಿದರೆ ಅಲ್ಲಿಂದಲೇ ಆಕ್ಸಿಜನ್ ಸಂಗ್ರಹಿಸಬಹುದಾದ ಮೂರು ಸ್ಥಳಗಳು ಗೋಚರಿಸುತ್ತವೆ ಎಂಬುದನ್ನೂ ಸಿಎಂ ಅವರಿಗೆ ಹೇಳಿದ್ದೇನೆ.

ಆದರೆ, ಒಟ್ಟಿನಲ್ಲಿ ಈ ಸರ್ಕಾರಕ್ಕೆ ಮೊದಲನೆದಾಗಿ, ರಾಜಕೀಯ ಇಚ್ಛಾಶಕ್ತಿಯಿಲ್ಲ. ಎರಡನೇದಾಗಿ, ಈ ಸರ್ಕಾರದ ಬಳಿ ಸುಸೂತ್ರ ಯೋಜನೆಗಳಿಲ್ಲ, ಸಚಿವರ ನಡುವೆ ಸಮನ್ವತೆಯೇ ಇಲ್ಲ. ಮೂರನೇದಾಗಿ, ಅವರ ಪಕ್ಷದ ಆಂತರಿಕ ಭಿನ್ನಮತವನ್ನು ಈ ಬಿಕ್ಕಟ್ಟಿನ ಸಮಯದಲ್ಲೂ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುವ ಹೀನ ಕೆಲಸ ನಡೆದಿದೆ’ ಎಂದರು

ಯಡಿಯೂರಪ್ಪನವರಿಗೆ ಹೇಳಿದ್ದನ್ನು ಅವರು ಲಿಖಿತ ರೂಪದ ಮನವಿಯಲ್ಲೂ ಹೇಳಿದರು. ಯಡಿಯೂರಪ್ಪ ಮನೆಯ ಹೊರಗಡೆ ಮಾಧ್ಯಮಗಳ ಮುಂದೆ ಎಲ್ಲವನ್ನೂ ತಿಳಿಸಿದರು. ’ಅರಮನೆಯಲ್ಲಿ ಕುಳಿತರೆ ಆಮ್ಲಜನಕ ಸಿಗದು’ ಎಂದೂ ಹೇಳಿದರು. ಆದರೆ ತೇಜಸ್ವಿ ಸೂರ್ಯ ಎಂಬ ಪಲಾಯನವಾದಿ, ಕುತಂತ್ರಿ ಸಂಸದನ ಹಿಂದೆ ಸುತ್ತುತ್ತಿದ್ದ ಮಾಧ್ಯಮಗಳಿಗೆ ಎಚ್. ಕೆ. ಪಾಟೀಲ್ ಹೇಳಿದ್ದು ಮುಖ್ಯ ಅನಿಸಲೇ ಇಲ್ಲ.

ಇದನ್ನೂ ಓದಿ: ತೇಜಸ್ವಿ ಸೂರ್ಯ, ನಿಮ್ಮ ಮೆದುಳಲ್ಲಿರುವ ಕೋಮು ವೈರಸ್‌ ಕೊರೊನಾಗಿಂತಲೂ ಅಪಾಯಕಾರಿ, ಚಿಕಿತ್ಸೆ ಪಡ್ಕೊಳ್ಳಿ: ಸಿದ್ದರಾಮಯ್ಯ

ತೇಜಸ್ವಿ ಸೂರ್ಯನಂತೆ ಎಲ್ಲಿಗೋ ಎಚ್. ಕೆ. ಪಾಟೀಲ್ ನುಗ್ಗಲಿಲ್ಲ, ಅವರು ದೇಶದ ಹಲವು ವಿಜ್ಞಾನಿಗಳು, ವೈದ್ಯರು, ಇಂಜಿನಿಯರ್‌ಗಳು ಮತ್ತು ನೀತಿ ನಿರೂಪಕರನ್ನು ಮಾತನಾಡಿಸಿ ಈ ಮನವಿ ತಯಾರಿಸಿದರು.
ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಪ್ರೊ. ಭ್ರಮರ್ ಮುಖರ್ಜಿಯನ್ನು ಉಲ್ಲೇಖಿಸಿದ ಅವರು, ಮೇ ಮಧ್ಯದ ಹೊತ್ತಿಗೆ, 8-15 ಲಕ್ಷ ದೈನಿಕ ಪಾಸಿಟಿವ್ ಪ್ರಕರಣಗಳು ಮತ್ತು ಸುಮಾರು 4,500 ಸಾವುಗಳು ಸಂಭವಿಸಬಹುದು ಎಂದು ಯಡಿಯೂರಪ್ಪನವರಿಗೆ ಹೇಳಿದ್ದಾರೆ.

ಬಳ್ಳಾರಿ, ಕೊಪ್ಪಳ ಮತ್ತು ರಾಜ್ಯಗಳ ವಿವಿಧ ಭಾಗಗಳಲ್ಲಿ ದಿನವೂ ಉತ್ಪಾದನೆಯಾಗುವ ಆಮ್ಲಜನಕ ಪ್ರಮಾಣವನ್ನು ಮತ್ತು ಆ ಸ್ಥಾವರಗಳ ಒಟ್ಟು ಸಾಮರ್ಥ್ಯದ ಮಾಹಿತಿಯನ್ನು ಕೆಮಿಕಲ್ ಇಂಜಿನಿಯರ್ ಡಾ. ಅರುಣ್ ಪಾಟೀಲ್ ಮತ್ತು ಕೆಲವು ಸಣ್ಣ ಉದ್ಯಮಿಗಳ ಮೂಲಕ ಪಡೆದು, ನಿಖರ ಮಾಹಿತಿ ಒದಗಿಸಿರುವ ಎಚ್.ಕೆ.ಪಾಟೀಲರು, ಈ ಸ್ಥಾವರಗಳಿಂದ ಗರಿಷ್ಠ ಉತ್ಪಾದನೆ ಹೇಗೆ ಮಾಡಬಹುದು ಎಂಬುದನ್ನು ವಿಜ್ಞಾನಿಗಳು, ಇಂಜಿನಿಯರ್‌ಗಳ ಉಲ್ಲೇಖಗಳೊಂದಿಗೆ ವಿವರಿಸಿದ್ದಾರೆ.

’ಸಂಗ್ರಹಣೆ ಮತ್ತು ಸಾಗಾಣಿಕೆ ಕಷ್ಟವಾಗಿದೆ’ ಎಂಬ ಯಡಿಯೂರಪ್ಪನವರ ಅಪ್ರಬುದ್ಧ ಅಸಹಾಯಕತೆಗೂ, ಶಾಸಕ ಪಾಟೀಲ್ ಪರಿಹಾರ ಸೂಚಿಸಿದ್ದಾರೆ. ರಾಜ್ಯದಲ್ಲಿ 17 ಲಕ್ಷ ಲೀಟರ್ ದ್ರವ ಆಮ್ಲಜನಕ ಶೇಖರಿಸುವ ಸಾಮರ್ಥ್ಯವಿದೆ ಎಂಬುದನ್ನು ಸಿಎಂಗೆ ವಿವರಿಸಿದ ಅವರು, ಯಾವ ಯಾವ ಪಾಯಿಂಟ್‌ಗಳಲ್ಲಿ ಶೇಖರಣೆ ಮಾಡಬಹುದೆಂಬ ವಿವರಣೆ ನೀಡಿದ್ದಾರೆ.

ಇದನ್ನೂ ಓದಿ: ಕೋವಿಡ್ ಎರಡನೆ ಅಲೆಯ ಸುನಾಮಿ; ಸಕಾರಾತ್ಮಕವಾಗಿ ಮುನ್ನಡೆಯಬೇಕು, ಸರಕಾರಾತ್ಮಕವಾಗಿಯಲ್ಲ

ಸಾಗಾಣಿಕೆ ಸಮಸ್ಯೆ ಕುರಿತು ತಜ್ಞರೊಂದಿಗೆ ಮಾತನಾಡಿರುವ ಅವರು, ನೈಟ್ರೋಜನ್ ಟ್ಯಾಂಕರುಗಳ ವಾಲ್ವ್ ಚೇಂಜ್ ಮಾಡಿ, ಅದಕ್ಕೆ ಕಾಪರ್ (ಸತುವಿನ) ವಾಲ್ವ್ ಹಾಕಿದರೆ ಸಮಸ್ಯೆ ಬಗೆಹರಿದಂತೆ. ಇದು ಎರಡು ದಿನದ ಕೆಲಸ ಎಂದಿದ್ದಾರೆ.

ನಾನುಗೌರಿ.ಕಾಂ ಜೊತೆ ಈ ವಿಷಯವಾಗಿ ಮಾತನಾಡಿದ ಅವರು, “ನಮ್ಮ ವಾಯುಸೇನೆಯ ವಿಮಾನಗಳನ್ಮು ಯಾವುದೋ ಕಾರಣಕ್ಕೆ ಮನರಂಜನೆಗೆ ಹಾರಿಸುತ್ತದೆ ಕೇಂದ್ರ ಸರ್ಕಾರ. ಈಗ ರಾಜ್ಯ ಸರ್ಕಾರವು, ಕೇಂದ್ರ ಮತ್ತು ಮೋದಿಯವರಿಗೆ ವಾಯುದಳದ ವಿಮಾನ ಒದಗಿಸಲು ಒತ್ತಡ ಹಾಕಬೇಕು. ದುಬಾರಿ ಸೇನಾ ವಿಮಾನಗಳು ಮೇಲಿನಿಂದ ಹೂ ಚೆಲ್ಲುವುದಕ್ಕಲ್ಲ, ಜನರು ಸಾಯುತ್ತಿರುವಾಗ ಅವನ್ನು ಆಕ್ಸಿಜನ್ ಪೂರೈಕೆಗೆ ಬಳಸಬೇಕು” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಳ್ಳಾರಿಯ ತೋರಣಘಟ್ಟ ವಿಮಾನ ನಿಲ್ದಾಣದಿಂದ ದ್ರವ ಆಮ್ಲಜನಕದ ಟ್ಯಾಂಕರ್‌ಗಳನ್ನು ಏರ್ ಕಾರ್ಗೊದಲ್ಲಿ ಕಳಿಸಿದರೆ ಬೆಂಗಳೂರು ಎಚ್‌ಎಎಲ್ ವಿಮಾನ ನಿಲ್ದಾಣ ತಲುಪಲು ಒಂದು ತಾಸೂ ಹಿಡಿಯುವುದಿಲ್ಲ. ನಂತರ ಮಾರತ್‌ಹಳ್ಳಿಯ ಸಂಗ್ರಾಹಾರ ಮತ್ತು ಐಐಎಸ್‌ಸಿಯ ಯು. ಅರ್. ರಾವ್ ಸಂಗ್ರಹಾರಕ್ಕೆ ಕಳಿಸುವುದೇನೂ ಸಮಸ್ಯೆ ಅಲ್ಲ ಎಂದರು.

ಇದನ್ನೂ ಓದಿ: ಬೆಂಬಲಿಗರನ್ನು ಸೆಳೆಯಲು ‘ಪಾಕಿಸ್ತಾನಿ’ ಯುವತಿಯ ಫೋಟೊ ಬಳಸುತ್ತಿರುವ BJP ಐಟಿ ಸೆಲ್!

’ಆದರೆ ರಾಜಕೀಯ ಇಚ್ಛಾಶಕ್ತಿಯೇ ಇಲ್ಲದ, ಇಂತಹ ದುರಂತದ ಸಮಯದಲ್ಲೂ ಕೇಂದ್ರ ಸರ್ಕಾರದ ಮುಂದೆ ಹಕ್ಕು ಮಂಡಿಸದ ರಾಜ್ಯ ಸರ್ಕಾರ ನಿರ್ಜೀವವಾಗಿದೆ’ ಎಂದು ಅವರು ಬೇಸರ ವ್ಯಕ್ತಪಡಿಸಿದರು.

`ನೀವು ವಿರೋಧ ಪಕ್ಷದವರಾಗಿ ಇಂತಹ ಪಾಸಿಟಿವ್ ಸಲಹೆ ನೀಡ್ತಾ ಇದ್ದೀರಾ…ಹೈಕೋರ್ಟ್ ಕೂಡ ಕೇಂದ್ರಕ್ಕೆ ರಾಜ್ಯದ ಪಾಲಿನ ಆಕ್ಸಿಜನ್ ಒದಗಿಸಿ ಎಂದು ತರಾಟೆಗೆ ತೆಗೆದುಕೊಂಡಿದೆ.. ಆದರೆ ನಮ್ಮ 25 ಬಿಜೆಪಿ ಸಂಸದರು ಧ್ವನಿ ಎತ್ತಾನೇ ಇಲ್ವಲ್ಲ?’ ಎಂಬ ಪ್ರಶ್ನೆಗೆ ಉತ್ತರಿಸಿದ ಎಚ್ ಕೆ ಪಾಟೀಲ್, `ಈ ಬಗ್ಗೆ ಏನು ಹೇಳಬೇಕೋ ತಿಳಿಯದಾಗಿದೆ. ಅವರ (ಬಿಜೆಪಿ) ಭಾಷೆಯಲ್ಲಿ ಬಯ್ಯೋದೊಂದೇ ಬಾಕಿ ಉಳಿದಿದೆ’ ಎಂದರು.

ದಿಢೀರನೆ ಬಂದು ಕಲ್ಲು ತೂರಿ ಪರಾರಿ ಆಗಿರುವ ಸಂಸದ ತೇಜಸ್ವಿ ಸೂರ್ಯ ಅವರ ಬಗ್ಗೆ ಕೇಳಿದಾಗ, “ಇಂತಹ ನೀಚರನ್ನು ಇಟ್ಟುಕೊಂಡು ಕೋವಿಡ್ ನಿಯಂತ್ರಣ ಸಾಧ್ಯವೇ” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಅವರ ಮನವಿಯನ್ನು ಅಂದರೆ ಯಡಿಯೂರಪ್ಪನವರಿಗೆ ಅವರು ಹೇಳಿದ್ದನ್ನು ಇಲ್ಲಿ ಹಾಕಿದ್ದೇವೆ, ಓದಿ..

ಇದನ್ನೂ ಓದಿ: ‘ಬೆನ್ನೆಲುಬಿಲ್ಲದ ಮೋದಿ’ ‘ಡೈಪರ್‌ ಸೂರ್ಯ ಎಕ್ಸ್‌ಪೋಸ್ಡ್’- ಟ್ವಿಟರ್‌ನಲ್ಲಿ BJP ವಿರೋಧಿ ಹವಾ!

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದಲಿತರು, ಅಲ್ಪಸಂಖ್ಯಾತರ ಮೇಲಿನ ಹಿಂಸಾಚಾರದ ಕುರಿತು ವಿಶ್ವಸಂಸ್ಥೆಯ ಕಠಿಣ ಪ್ರಶ್ನೆ: ಸಂಶೋಧನಾತ್ಮಕ ವರದಿಗಳನ್ನು ಆಧರಿಸಿ ಭಾರತಕ್ಕೆ CERD ಚಾಟಿ

ನವದೆಹಲಿ: ಭಾರತದಲ್ಲಿ ದಲಿತರು, ಆದಿವಾಸಿಗಳು, ಮುಸ್ಲಿಮರು ಹಾಗೂ ಇತರ ಅಲ್ಪಸಂಖ್ಯಾತ ಸಮುದಾಯಗಳು ಎದುರಿಸುತ್ತಿರುವ ತಾರತಮ್ಯ, ಹಿಂಸೆ ಮತ್ತು ಹಕ್ಕುಗಳ ಉಲ್ಲಂಘನೆ ಕುರಿತು ವಿಶ್ವಸಂಸ್ಥೆಯ ಜನಾಂಗೀಯ ತಾರತಮ್ಯ ನಿರ್ಮೂಲನೆ ಕುರಿತ ಸಮಿತಿ (CERD) ತೀವ್ರ...

ಪಶ್ಚಿಮ ಬಂಗಾಳ| ಕಳೆದ ಒಂದು ತಿಂಗಳಲ್ಲಿ ಕ್ರಿಶ್ಚಿಯನ್ನರ ಮೇಲೆ ಸತತ ದಾಳಿ

ಪಶ್ಚಿಮ ಬಂಗಾಳದ ಚರ್ಚ್ ಒಂದರ ಆವರಣದಲ್ಲಿರುವ ಸ್ಮಶಾನದಲ್ಲಿ ಮೃತರೊಬ್ಬರಿಗೆ ಕೊನೆಯ ವಿದಾಯ ಕೋರುತ್ತಿದ್ದ ಕ್ರಿಶ್ಚಿಯನ್ ಕುಟುಂಬದ ಮೇಲೆ ಹಿಂದುತ್ವ ಗುಂಪೊಂದು ದಾಳಿ ನಡೆಸಿದೆ ಎಂದು ಆರೋಪಿಸಲಾಗಿದೆ. ಈ ಘಟನೆಯು ಆಗಸ್ಟ್ 14 ರಂದು ಪೂರ್ಬ...

‘ನಮ್ಮ ರಕ್ತದಿಂದ ಅವರು ಬಾಯಾರಿಕೆಯನ್ನು ತಣಿಸಿಕೊಳ್ಳುತ್ತಾರೆಯೇ?’: ಕೇರಳ ವಿವಿಯಲ್ಲಿ ಜಾತಿ ತಾರತಮ್ಯದ ವಿರುದ್ಧ ದಲಿತ ಸಂಶೋಧನಾ ವಿದ್ಯಾರ್ಥಿನಿ ಅನಿರ್ದಿಷ್ಟಾವಧಿ ಉಪವಾಸ

ತಿರುವನಂತಪುರಂ: ಜಾತಿ ಮತ್ತು ಲಿಂಗ ಆಧಾರಿತ ತಾರತಮ್ಯ, ಕಿರುಕುಳ ಹಾಗೂ ಶೈಕ್ಷಣಿಕ ಅವಕಾಶಗಳ ನಿರಾಕರಣೆಯ ಆರೋಪಗಳನ್ನು ಮುಂದಿಟ್ಟುಕೊಂಡು ಕೇರಳದ ತುಂಚತ್ ಎಳುಥಾಚನ್ ಮಲಯಾಳಂ ವಿಶ್ವವಿದ್ಯಾಲಯದ ದಲಿತ ಪಿಎಚ್‌ಡಿ ಸಂಶೋಧನಾ ವಿದ್ಯಾರ್ಥಿನಿ ಅನಘಾ ಶಾಸಿ...

ಸ್ವತಂತ್ರ ಭಾರದ್ವಾಜ್ ಬಂಧನದ ಬೆನ್ನಲ್ಲೇ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿನಿ ಮನೆ ಮೇಲೆ ಕಲ್ಲು ತೂರಾಟ, ಪೊಲೀಸರ ರಕ್ಷಣೆಗೆ ಮನವಿ

ನವದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಸಿಜೆಪಿ ಪ್ರತಿಭಟನೆಯ ವೇಳೆ ಸಂಜಯ್ ಆಝಾದ್ ಎಂಬುವವರ ಮೇಲೆ ಸ್ವಯಂಘೋಷಿತ ಗೋರಕ್ಷಕ ಸ್ವತಂತ್ರ ಭಾರದ್ವಾಜ್ ಭೀಕರವಾಗಿ ಹಲ್ಲೆ ನಡೆಸಿದ್ದನು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆತನನ್ನು ಬಂಧಿಸಿದ...

ಜನ್ ಧನ್ ಯೋಜನೆಯಡಿ ತೆರೆಯಲಾದ ಪ್ರತಿ ನಾಲ್ಕನೇ ಬ್ಯಾಂಕ್‌ ಖಾತೆ ನಿಷ್ಕ್ರಿಯ: ಆರ್‌ಟಿಐ ಮಾಹಿತಿ

ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆಯಡಿ ಲಭ್ಯವಾಗಿರುವ ಉತ್ತರದ ಪ್ರಕಾರ, ಪ್ರಧಾನಮಂತ್ರಿ ಜನ್ ಧನ್ ಯೋಜನೆಯಡಿ ತೆರೆಯಲಾದ ಪ್ರತಿ ನಾಲ್ಕನೇ ಖಾತೆಯು ನಿಷ್ಕ್ರಿಯಗೊಂಡಿದೆ. ಸುಮಾರು 5.72 ಕೋಟಿ ಖಾತೆಗಳಲ್ಲಿ ಶೂನ್ಯ ಬ್ಯಾಲೆನ್ಸ್ ಇದೆ. ಆಗಸ್ಟ್ 12,...

ಬಡ ಪೌರ ಕಾರ್ಮಿಕರ ಮೇಲೆ ದರ್ಪ ಮೆರೆದ ಸಚಿವ ಕೃಷ್ಣ ಬೈರೇಗೌಡ : ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ

ಸೇವೆಯನ್ನು ಖಾಯಂಗೊಳಿಸುವಂತೆ ಮನವಿ ಮಾಡಿದ ಬಡ ಪೌರ ಕಾರ್ಮಿಕರೊಂದಿಗೆ ಗ್ರೇಟರ್ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ದರ್ಪ ಮೆರೆದಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಶನಿವಾರ (ಸೆ.6) ಬೆಂಗಳೂರಿನ...

ಗ್ರಾಮೀಣ ಭಾಗದ ಶಾಲಾ ಮಕ್ಕಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ 7.5% ಮೀಸಲಾತಿ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಗ್ರಾಮೀಣ ಹಾಗೂ ಬಡ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸಿಗೆ ಬಲ ತುಂಬುವ ನಿಟ್ಟಿನಲ್ಲಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಶೇಕಡಾ 7.5 ರಷ್ಟು ಮೀಸಲಾತಿ ಕಲ್ಪಿಸುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್...

ಪಶ್ಚಿಮ ಬಂಗಾಳದ ಪ್ರವಾಸೋದ್ಯಮ ಜಾಹೀರಾತಿನಲ್ಲಿ ಐಫೆಲ್ ಟವರ್, ಈಜಿಪ್ಟ್ ಪಿರಮಿಡ್: ಆದರೆ ಬಂಗಾಳವೇ ನಾಪತ್ತೆ!

ಪಶ್ಚಿಮ ಬಂಗಾಳವನ್ನು ಜಾಗತಿಕ ಪ್ರವಾಸೋದ್ಯಮ ಭೂಪಟದಲ್ಲಿ ಮುನ್ನೆಲೆಗೆ ತರುವ ಉದ್ದೇಶದಿಂದ ಬಿಡುಗಡೆ ಮಾಡಲಾದ ರಾಜ್ಯದ ಹೊಸ ಪ್ರವಾಸೋದ್ಯಮ ಜಾಹೀರಾತು ಈಗ ತೀವ್ರ ಟೀಕೆ ಹಾಗೂ ಅಪಹಾಸ್ಯಕ್ಕೆ ಈಡಾಗಿದೆ. ಈ ಜಾಹೀರಾತನ್ನು ಒಮ್ಮೆ ಗಮನಿಸಿದರೆ...

ಅಮೆರಿಕದಲ್ಲಿ ಮೋಹನ್‌ ಭಾಗವತ್ ಸೌಹಾರ್ದತೆ ಮಾತು; ಮಹಾರಾಷ್ಟ್ರದ ಗಾರ್ಬಾ-ದಾಂಡಿಯಾ ಕಾರ್ಯಕ್ರಮಗಳಲ್ಲಿ ಮುಸ್ಲಿಮರಿಗೆ ನಿಷೇಧ ಹೇರಿದ ವಿಎಚ್‌ಪಿ

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರು ನ್ಯೂಯಾರ್ಕ್‌ನಲ್ಲಿ ಮಾಡಿದ ಭಾಷಣದಲ್ಲಿ ಧಾರ್ಮಿಕ ಸೌಹಾರ್ದತೆ, ಪರಸ್ಪರ ಗೌರವ ಮತ್ತು ಪ್ರತಿಯೊಂದು ಸಮುದಾಯದ ಗುರುತಿನ ರಕ್ಷಣೆ ಕುರಿತು ಮಾತನಾಡಿದ ಕೆಲವೇ ದಿನಗಳ...

ಸೈಬರ್ ವಂಚನೆಗೊಳಗಾದ ಸಂತ್ರಸ್ತರಿಗೆ ನೆರವು: ಕರ್ನಾಟಕದಲ್ಲಿ ಶೀಘ್ರವೇ ‘ಇ-ಶೂನ್ಯ ಎಫ್‌ಐಆರ್’ ಜಾರಿ

ಸೈಬರ್ ವಂಚನೆಗೊಳಗಾದ ಸಂತ್ರಸ್ತರು ಇನ್ನು ಮುಂದೆ ದೂರು ದಾಖಲಿಸಲು ಪೊಲೀಸ್ ಠಾಣೆಗಳಿಗೆ ಅಲೆಯಬೇಕಿಲ್ಲ. ಸೈಬರ್ ಅಪರಾಧ ಪ್ರಕರಣಗಳ ಎಫ್‌ಐಆರ್ ದಾಖಲಾತಿಯನ್ನು ಚುರುಕುಗೊಳಿಸುವ ಹಾಗೂ ಜನಸ್ನೇಹಿಯಾಗಿಸುವ ಉದ್ದೇಶದಿಂದ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ...