Homeಮುಖಪುಟಗಾಂಧಿಯನ್ನು ಕೊಂದ ಮತಾಂಧತೆಯಿಂದ ಗಳಿಸಿದ್ದಾದರೂ ಏನು?

ಗಾಂಧಿಯನ್ನು ಕೊಂದ ಮತಾಂಧತೆಯಿಂದ ಗಳಿಸಿದ್ದಾದರೂ ಏನು?

- Advertisement -
- Advertisement -

ಭಾರತಕ್ಕೆ ಸ್ವಾತಂತ್ರ್ಯ ಲಭಿಸಿ ಒಂದು ವರ್ಷ ತುಂಬಿ ಕೆಲವು ತಿಂಗಳಾಗಿತ್ತಷ್ಟೇ. 1949 ಜನವರಿ 30ರ ಇಳಿಸಂಜೆ ಸ್ವತಂತ್ರ ದೇಶ ನಡುಗಿಹೋಗುವಂತ ಹತ್ಯೆ ನಡೆದೇಹೋಗಿತ್ತು. ಅಹಿಂಸೆಯೂ ಹೋರಾಟದ ಅಸ್ತ್ರವಾಗಬಲ್ಲದು ಎಂದು ಇಡೀ ವಿಶ್ವಕ್ಕೆ ಭೋದಿಸಿದ್ದ ಮಹಾತ್ಮ ಗಾಂಧಿ, ಮತಾಂಧನೊಬ್ಬನ ಕ್ರೌರ್ಯಕ್ಕೆ ತಮ್ಮದೇ ನೆಲದಲ್ಲಿ ರಕ್ತದ ಮಡುವಿನಲ್ಲಿ ಪ್ರಾಣ ಚೆಲ್ಲಿದ್ದರು. ಆದರೆ, ಹೀಗೆ ಈ ಮಣ್ಣನ್ನು ತ್ಯಜಿಸುವಾಗಲು ಗಾಂಧಿ ಎಂಬ ಮಹಾನ್ ವ್ಯಕ್ತಿ, ರಾಜಕೀಯ ಹೋರಾಟದಲ್ಲಿ ಗಾಂಧಿ ಮಾರ್ಗವನ್ನು ತುಳಿಯುವ ಮಾರ್ಟಿನ್ ಲೂಥರ್ ಕಿಂಗ್, ನೆಲ್ಸನ್ ಮಂಡೇಲಾರಂತಹ ಸಾವಿರಾರು ಜನರನ್ನು ವಿಶ್ವದಾದ್ಯಂತ ಪ್ರಭಾವಿಸಿ, ಶಾಂತಿ ಎಂಬ ಬೃಹತ್ ಅಸ್ತ್ರವನ್ನು ಈ ಜಗತ್ತಿಗೆ ಉಡುಗೊರೆಯಾಗಿ ನೀಡಿಯೇ ಹೋಗಿದ್ದರು.

ರಾಷ್ಟ್ರಪಿತ ಮಹಾತ್ಮ ಗಾಂಧಿ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಇದೇ ಮಣ್ಣಲ್ಲಿ ನಿಂತು ಗಾಂಧಿಯ ಕುರಿತು ಯೋಚಿಸಿದಂತೆಲ್ಲಾ ಆ ವ್ಯಕ್ತಿಯೋರ್ವನೊಳಗಿನ ಹತ್ತಾರು ಮುಖಗಳು ಕಾಣಿಸಿಕೊಳ್ಳುತ್ತವೆ. ಅವುಗಳ ಬಗ್ಗೆ ಪ್ರತಿ ವರ್ಷ ಹೊಸಹೊಸ ಚಿಂತನ-ಮಂಥನಗಳಾಗುತ್ತಿವೆ. ಬದುಕಿನುದ್ದಕ್ಕೂ ಅವರೋರ್ವ ಹೋರಾಟಗಾರರಾಗಿದ್ದರು, ಅರ್ಥಶಾಸ್ತಜ್ಞರಾಗಿದ್ದರು, ಸಂತನಾಗಿದ್ದರು, ಸತ್ಯ ಅಹಿಂಸೆಯ ಪರಿಪಾಲಕರಾಗಿದ್ದರು, ತಮ್ಮ ಹೋರಾಟದ ಬದುಕನ್ನೇ ಸಂದೇಶವನ್ನಾಗಿ ನೀಡಿದ್ದರು. ಆದರೂ ಅವರು ಈ ದೇಶದಲ್ಲಿ ಕೊಲ್ಲಲು ಅರ್ಹ ವ್ಯಕ್ತಿಯಾಗಿ ಹೋಗಿದ್ದರು ಎಂಬುದೇ ಇಲ್ಲಿನ ದುರಂತ!

PC : Arab News (ಮಹಮ್ಮದ್ ಅಲಿ ಜಿನ್ನಾ)

ಹೀಗೆ ಹಲವು ವಲಯಗಳಲ್ಲಿ ತಮ್ಮ ಪ್ರಭಾವ ಬೀರಿದ್ದ ವ್ಯಕ್ತಿಗಳು ಭಾರತದಲ್ಲಿ ವಿರಳವೇ ಎನ್ನಬಹುದು. ಇಡೀ ಮನುಕುಲವನ್ನು ಪ್ರೀತಿಸಿದ್ದ ಗಾಂಧಿ ಎಂಬ ಮಹಾನ್ ಚೇತನವನ್ನು, ಸಹ ಜೀವಿಯನ್ನು, ಮನುಷ್ಯನನ್ನಾಗಿ ನೋಡಲಾಗದೆ ಮತಾಂಧತೆಯ ಅಮಲು ಕೊಂದು ಹಾಕಿದ್ದು ಎಂದಿಗೂ ಮರೆಯಲಾಗದ ಸಂಗತಿಯಾಗಿ ಉಳಿದುಕೊಂಡಿದೆ. ಅಸಲಿಗೆ ಗಾಂಧಿಯನ್ನು ಕೊಂದು ನಾವು ಪಡೆದದ್ದಾದರೂ ಏನು? ಎಂಬುದನ್ನು ಕುರಿತು ಪ್ರಶ್ನಿಸುತ್ತಾ ಸಾಗಿದಂತೆಲ್ಲಾ ಇಂದಿನ ಪರಿಸ್ಥಿತಿ ನಮ್ಮ ಕಣ್ಣಮುಂದೆ ಬಂದು, ಗಾಢವಾದ ನೋವು ಮತ್ತು ಹತಾಶೆ ನಮ್ಮೆದುರು ಆವರಿಸುವುದು ದಿಟ.

ಜಗತ್ತಿನಲ್ಲಿ ಕೊಂದು ಉಳಿಸಿಕೊಳ್ಳುವ ಧರ್ಮವಿಲ್ಲ. ಎಲ್ಲರನ್ನೂ ಸಮನಾಗಿ ಕಾಣುವುದೇ ಸನಾತನ ಧರ್ಮ ಎಂದು ಸಾರಿ, ತನ್ನ ಬದುಕಿನುದ್ದಕ್ಕೂ ಸತ್ಯ ಅಹಿಂಸೆಯೇ ಮೂಲಧ್ಯೇಯ ಎಂದು ನಂಬಿ ಬದುಕಿದ್ದ, ವಿಶ್ವಕ್ಕೆ ಶಾಂತಿಯನ್ನು ಪ್ರೀತಿಯನ್ನು ಹಂಚಿ ಉಂಡಿದ್ದ, ಸನಾತನ ಧರ್ಮವನ್ನು ಸುಧಾರಿಸಲು ಶ್ರಮಿಸಿದ್ದ ಮಹಾತ್ಮ ಗಾಂಧಿಗೆ ಭಾರತೀಯರು ಕೊನೆಗೆ ನೀಡಿದ್ದು ಕೇವಲ ನೋವನ್ನಷ್ಟೆ. ಅವರು ಗತಿಸಿದ ಮೇಲೆಯೂ ಅವರ ಆಶಯಗಳನ್ನು ಕೊಲ್ಲುವುದು ಅವ್ಯಾಹತವಾಗಿ ಮುಂದುವರೆದಿದೆ.

ಗಾಂಧಿ ಈ ನೆಲದಲ್ಲಿ ಹುಟ್ಟಿ 152 ವರ್ಷ ಗತಿಸಿದ್ದರೆ, ಅವರು ಗತಿಸಿ 72 ವರ್ಷಗಳಾಗಿವೆ. ಗಾಂಧಿಯನ್ನು ಕೊಂದ ಅದೇ ಜನ ಈ ವರ್ಷಗಳಲ್ಲಿ ಗಾಂಧಿ ಬದುಕು ಮತ್ತು ಕೆಲಸಗಳು ಕಟ್ಟಿಕೊಟ್ಟ ಗಾಂಧಿವಾದವನ್ನು ಕೊಲ್ಲುವ ಪ್ರಕ್ರಿಯೆಯಲ್ಲಿದ್ದಾರೆ. ಗಾಂಧಿ ಹತ್ಯೆಯನ್ನು ಮರುಸೃಷ್ಟಿಸಿ ವಿಕೃತ ಆನಂದವನ್ನು ಅನುಭವಿಸುತ್ತಿದ್ದಾರೆ. ಅಲ್ಲದೆ, ಬಹಿರಂಗವಾಗಿ ಗಾಂಧಿ ಹತ್ಯೆಯನ್ನು ಈಗಲೂ ಸಮರ್ಥಿಸಿಕೊಳ್ಳುತ್ತ ಸಮಾಜದಲ್ಲಿ ವಿಷಬೀಜವನ್ನು ಬಿತ್ತುವಲ್ಲಿ ನಿರತರಾಗಿದ್ದಾರೆ. ಗೋಡ್ಸೆ ಸಂಸ್ಕೃತಿಯ ಬಾಹುಗಳನ್ನು ವಿಸ್ತರಿಸುತ್ತಿದ್ದಾರೆ. ಯಾವುದೇ ಸಮಾಜಕ್ಕೆ ಇದು ಆಘಾತಕಾರಿ ಬೆಳವಣಿಗೆ ಎಂದು ಬೇರೆ ಬಿಡಿಸಿ ಹೇಳಬೇಕಿಲ್ಲ.

ಅಂದಿನ ಗೋಡ್ಸೆ ಮನಸ್ಥಿತಿ 7 ದಶಕ ಕಳೆದರೂ ಕಿಂಚಿತ್ತೂ ಬದಲಾಗಿಲ್ಲ ಎಂಬುದು ವಿಷದನೀಯ. ಬದಲಾಗಿ ಇಷ್ಟು ವರ್ಷಗಳ ನಂತರ ಮತಾಂಧತೆ ಎಂಬುದು ಗೋಡ್ಸೆ 2.0 ವರ್ಷನ್ ಆಗಿ ಬದಲಾಗಿದೆ, ಮತ್ತಷ್ಟು ವಿಕೃತವಾಗಿದೆ. ಹೀಗಾಗಿ ಇಂದಿನ ಮತಾಂಧತೆ ಎಂಬುದು ಎಷ್ಟರಮಟ್ಟಿಗೆ ವಿಕೃತಿಯನ್ನು ತನ್ನೊಡಲೊಳಗಿಟ್ಟುಕೊಂಡು ಬೆಳೆದಿದೆ ಎಂಬುದನ್ನು ಅರಿಯಲು ಮತ್ತೆ ಇತಿಹಾಸದ ಕಡೆಗೆ ಹೊರಳಲೇಬೇಕು.

ಗಾಂಧಿ ಹತ್ಯೆ ಮತ್ತು ಗೋಡ್ಸೆ ಸಂಸ್ಕೃತಿ

1947 ಆಗಸ್ಟ್ 15 ರಂದು ಭಾರತಕ್ಕೆ ಸ್ವಾತಂತ್ರ್ಯ ಲಭಿಸಿತ್ತು. ಮೂರು ಶತಮಾನಗಳ ಕಾಲ ನಮ್ಮನ್ನು ದಾಸ್ಯಕ್ಕೊಳಪಡಿಸಿದ್ದ ಬ್ರಿಟಿಷ್ ಪಾರುಪತ್ಯ ಅಂದಿಗೆ ಅಂತ್ಯವಾಗಿತ್ತು. ಇಡೀ ರಾಷ್ಟ್ರದಾದ್ಯಂತ ಹರ್ಷಾಚರಣೆಗಳು ಮುಗಿಲು ಮುಟ್ಟಿದ್ದವು. ಆದರೆ, ಮಹಾತ್ಮಾ ಗಾಂಧಿ ಈ ಹರ್ಷಾಚರಣೆಯ ಭಾಗವಾಗಲಿಲ್ಲ. ಬದಲಿಗೆ, ಅವರು ಯಾವ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದರೋ, ಅದು ದಕ್ಕಿದ ಮೇಲೂ ಅದೇ ದಿನ ಬಂಗಾಳದ ಕೋಮುಗಲಭೆ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದರು, ಕೋಮುಗಲಭೆಯನ್ನು ನಿಲ್ಲಿಸುವಂತೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಇದು ವ್ಯಕ್ತಿಯೊಬ್ಬನೊಳಗಿನ ಪ್ರಬುದ್ಧತೆಯ ಪ್ರತಿರೋಧದ ದ್ಯೊತಕವಾಗಿತ್ತು.

PC : The Indian Express

ರಾಜಕೀಯ ಅಧಿಕಾರವಷ್ಟೇ ಅವರ ಗುರಿಯಾಗಿರದೆ, ಸಾಮಾಜಿಕ ಸಾಮರಸ್ಯ, ಬದಲಾವಣೆ ಅವರ ಮಾರ್ಗವಾಗಿತ್ತು. ಆ ಮಾರ್ಗ ಮರೆತು, ಅಂತ್ಯದಲ್ಲಿ ಮೈಮರೆತವರೂ ಕೂಡ ಎಷ್ಟೋ ಜನ!

ಭಾರತದ ಇತಿಹಾಸದಲ್ಲಿ 1945 ರಿಂದ 1947 ರಾಜಕೀಯ ಸಂದಿಗ್ಧತೆಯ ಕಾಲ. ಹಿಂದೂಗಳ ಪರವಾಗಿ ಹಿಂದೂ ಮಹಾಸಭಾ ಹಾಗೂ ಗೋಡ್ಸೆಯಂತವರು ಬಯಸಿದ್ದನ್ನೆ, ಮುಸ್ಲಿಮರ ಪರ ಮಹಮ್ಮದ್ ಅಲಿ ಜಿನ್ನಾ ಬಯಸಿದ್ದರು ಹಾಗೂ ಅದನ್ನು ಪಡೆಯುವಲ್ಲೂ ಸಫಲವಾಗಿದ್ದರು. ಇದಕ್ಕೆ ಬ್ರಿಟಿಷ್ ಆಳರಸರ ತೆರೆಮರೆಯ ಬೆಂಬಲವೂ ಇತ್ತು. ಕೊನೆಗೂ 1947 ಆಗಸ್ಟ್ 14 ನಡುರಾತ್ರಿ ದೇಶದ ಸ್ವಾತಂತ್ರ್ಯದ ಜೊತೆಗೆ ಮತಾಂಧತೆ ಎಂಬ ಕಟುಕನ ಕತ್ತಿಯಿಂದ ದೇಶ ಇಬ್ಭಾಗವಾಗಿತ್ತು. ಪರಿಣಾಮ ಎರಡೂ ದೇಶಗಳಲ್ಲೂ ಕೋಮುಗಲಭೆಯ ಕಿಚ್ಚು ಹೊತ್ತಿಕೊಂಡಿತ್ತು.

ಸಹಸ್ರ ಸಂಖ್ಯೆಯಲ್ಲಿ ಹಿಂದೂಗಳು ಹಾಗೂ ಮುಸ್ಲಿಮರ ಹೆಣ ಬಿದ್ದವು. ಭಾರತ ಇಬ್ಭಾಗವಾಗುವುದನ್ನು ತಡೆಯಲು ಗಾಂಧಿ ಪಣತೊಟ್ಟಿದ್ದರು. ಆದರೆ, ಅವರ ಎಷ್ಟೋ ಹೋರಾಟಗಳು ಕೈಗೂಡದೇ ಹೋದಂತೆ ಅದೂ ಕೂಡ ಸಾಧ್ಯವಾಗಿರಲಿಲ್ಲ. ಕೊನೆಗೆ ಕೋಮು ಗಲಭೆಯಿಂದ ನಲುಗಿದ್ದ ಪೂರ್ವ ಬಂಗಾಲದ ನವಾಖಲಿಗೆ ತೆರಳಿ ಹಿಂದೂ-ಮುಸ್ಲಿಮರ ಸಾಮರಸ್ಯಕ್ಕೆ ಸತ್ಯಾಗ್ರಹ ಹೂಡಿದರು. ಬಿಹಾರದ ಮುಸಲ್ಮಾನರ ರಕ್ಷಣೆಗಾಗಿ ವಕಾಲತ್ತು ವಹಿಸಿದ್ದರು. ಕೊಲ್ಕತ್ತೆಯಲ್ಲಿ ಉಪವಾಸ ಮಾಡಿ ಹಿಂದೂ ಹಾಗೂ ಮುಸ್ಲಿಮರು ಶಸ್ತ್ರತ್ಯಾಗ ಮಾಡುವಂತೆ ಹಲವರನ್ನು ಪ್ರಭಾವಿಸಿದರು. ತಮ್ಮಿಂದ ಸಾಧ್ಯವಾದಷ್ಟು ಶಾಂತಿ ಸ್ಥಾಪನೆಗೆ ಮುಂದಾಗಿದ್ದರು. ಏನಾದರೇನು? ಕಾಳ್ಗಿಚ್ಚಿನಂತೆ ಹಬ್ಬುತ್ತಿದ್ದ ಮತೀಯ ಬೆಂಕಿಯನ್ನು ತನ್ನ ಶಾಂತಿಯ ಮಂತ್ರದಿಂದ ನಂದಿಸಲು ಪ್ರಯತ್ನಿಸಿದ ಗಾಂಧಿ ಕೊನೆಗೂ ಸೋತಿದ್ದರು. ದೇಶದ ವಿಭಜನೆ ಆಗಿಯೇ ಹೋಯಿತು. ತಾವೇ ಹಲವು ವರ್ಷಗಳ ಕಾಲ ಮುನ್ನಡೆಸಿದ್ದ ಕಾಂಗ್ರೆಸ್ ಮತೀಯ ಗಲಭೆಗೆ ಹೆದರಿ ವಿಭಜನೆಗೆ ಒಪ್ಪಿಗೆ ಸೂಚಿಸಿತ್ತು. ವಿಭಜನೆಯೇ ಗಾಂಧಿಯ ಜೀವವನ್ನು ಒಂದು ಮಟ್ಟಕ್ಕೆ ಕೊಂದುಹಾಕಿತ್ತು.

ಗಾಂಧಿಯನ್ನು ಕೊಲ್ಲಲು ನಿರ್ಧಾರ ಮಾಡಿದ ಬಳಿಕ, ಆಪ್ಟೆ ಹಾಗೂ ಗೋಡ್ಸೆ ಜನವರಿ.20ಕ್ಕೆ ಆ ಕೆಲಸ ಮಾಡಿ ಮುಗಿಸಲು ದಿನಾಂಕ ನಿಗದಿ ಮಾಡಿದ್ದರು. ಬಳಿಕ ಯೋಜನೆ ಬದಲಿಸಿ ಜನವರಿ.30ಕ್ಕೆ ನಿಗದಿಪಡಿಸಲಾಯಿತು. ಅಂದು ಬೂದು ಬಣ್ಣದ ಅಂಗಿ ಧರಿಸಿದ ವ್ಯಕ್ತಿಯೊಬ್ಬ ಬಿರ್ಲಾ ಗೇಟ್ ಮೂಲಕ ಪ್ರವೇಶಿಸಿದಾಗ ಯಾರೂ ಆತನನ್ನು ತಪಾಸಣೆ ಮಾಡಲಿಲ್ಲ. ಈ ಹಿಂದೆ ಕೂಡ ಗಾಂಧಿಯವರನ್ನು ಕೊಲ್ಲುವ ಪ್ರಯತ್ನ ನಡೆದಿತ್ತು. ಗಾಂಧೀಜಿ ಜನತೆಯತ್ತ ಕೈಬೀಸುತ್ತಾ ಪ್ರಾರ್ಥನೆಗೆ ತೆರಳುವ ಹೊತ್ತಿಗೆ ಕೇವಲ ಕೆಲವೇ ಅಡಿಗಳ ಮುಂದೆ ನಿಂತಿದ್ದ
ಗೋಡ್ಸೆ ನೋಡನೋಡುತ್ತಿದ್ದಂತೆ ಅವರ ಎದೆಗೆ ನಾಲ್ಕು ಗುಂಡುಗಳನ್ನು ಹೊಕ್ಕಿಸಿದ್ದ. ತನ್ನ ಜೀವಮಾನವಿಡೀ ಶಾಂತಿಸ್ಥಾಪನೆಗಾಗಿ ಹೋರಾಡಿದ್ದ ಬಾಪು ಕೊನೆಗೂ ರಕ್ತದೋಕುಳಿಯಲ್ಲಿ ಕೊನೆಯುಸಿರೆಳೆದಿದ್ದರು. ಸ್ವತಂತ್ರ ಭಾರತವನ್ನು ಬೆಚ್ಚಿಬೀಳಿಸಿದ ಹತ್ಯೆ ಹೀಗೆ ನಡೆದುಹೋಗಿತ್ತು. ಸಾಮರಸ್ಯದ ಸ್ವರಾಜ್ಯವೂ ರಕ್ತದ ಮಡುವಿನಲ್ಲಿ ಒದ್ದಾಡುತ್ತಿತ್ತು!

ಹತ್ಯೆಗೆ ಗೋಡ್ಸೆಯ ಸಮರ್ಥನೆ ಏನು?

ಗಾಂಧಿ ಹತ್ಯೆಯ ನಂತರ ನಡೆದ ಕೋರ್ಟ್ ವಿಚಾರಣೆಯಲ್ಲಿ ’ನಾನೇಕೆ ಗಾಂಧಿಯನ್ನು ಹತ್ಯೆ ಮಾಡಿದೆ’ ಎಂದು ಗೋಡ್ಸೆ ತನ್ನ ಪರ ವಾದವನ್ನು ಸವಿವರವಾಗಿ ಮಂಡಿಸಿ, ಗಾಂಧಿಹತ್ಯೆಯನ್ನು ಸಮರ್ಥಿಸಿಕೊಂಡಿದ್ದ. ಗಾಂಧೀಜಿ ವಿರುದ್ಧ ಆತನ ತಕರಾರುಗಳಲ್ಲಿ ಕೆಲವು ಹೀಗಿದ್ದವು…

1. ಅಖಂಡ ಭಾರತ ನಿರ್ಮಾಣ ನನ್ನ ಕನಸು. ಗಾಂಧೀಜಿಯಿಂದಾಗಿ ದೇಶ ವಿಭಜನೆಯಾಗಿ ಪಾಕಿಸ್ತಾನ ನಿರ್ಮಾಣವಾಯಿತು!

2. ದೇಶದ ಮೂರನೇ ಒಂದು ಭಾಗ ಆಗಸ್ಟ್ 15, 1947ರಂದು ವಿದೇಶವಾಗಿ ಹೋಯಿತು. ಅದಕ್ಕೆ ಕಾರಣ ಗಾಂಧಿ!

3. ದೇಶವೇ ಸಂಕಷ್ಟದಲ್ಲಿದ್ದಾಗ ಗಾಂಧೀಜಿ ಪಾಕಿಸ್ತಾನಕ್ಕೆ 55 ಕೋಟಿ ಪರಿಹಾರ ಕೊಡಿ ಎಂದು ಉಪವಾಸಕ್ಕೆ ಕುಳಿತಿದ್ದರು, ಇದು ಸರಿಯಲ್ಲ!

4. ಗಾಂಧೀಜಿಯ ಮುಸ್ಲಿಂ ಓಲೈಕೆಯಿಂದಾಗಿಯೇ ದೇಶ ವಿಭಜನೆಯಾಗಿದ್ದು!

5. ದೇಶ ವಿಭಜನೆಯಾಗಿ ಗಡಿಯಲ್ಲಿ ಹಿಂದೂಗಳ ಮಾರಣಹೋಮವಾಗುತ್ತಿದ್ದರೂ ಗಾಂಧಿಮೌನ ವಹಿಸಿದ್ದರು!

6. ಪಾಕಿಸ್ತಾನದಿಂದ ಬಂದ ಹಿಂದೂ ನಿರಾಶ್ರಿತರಿಂದ ತುಂಬಿಹೋಗಿದ್ದ ಮಸೀದಿ ಖಾಲಿ ಮಾಡಿ ಮುಸ್ಲಿಮರಿಗೆ ಜಾಗ ಕೊಡಿ ಎಂದು ಗಾಂಧಿ ಉಪವಾಸ ಕುಳಿತಿದ್ದರು!

7. ದೇಶದಲ್ಲೇ ಉಳಿದುಕೊಂಡ ಮುಸ್ಲಿಮರಿಗೆ ಆಶ್ರಯ ನೀಡಬೇಕು ಎಂದು ಗಾಂಧಿ ಒತ್ತಾಯಿಸಿದರು!

PC : India Today

8. ಪಾಕಿಸ್ತಾನದಿಂದ ಭಾರತಕ್ಕೆ ಬಂದ ನಿರಾಶ್ರಿತ ಹಿಂದೂಗಳ ಬಗ್ಗೆ ಗಾಂಧಿ ಕಿಂಚಿತ್ತೂ ಕರುಣೆ ತೋರಲಿಲ್ಲ!

9. ಗಾಂಧಿಯನ್ನು ರಾಷ್ಟ್ರಪಿತ ಎನ್ನುವುದಾದರೆ ಅವರು ಆ ಸ್ಥಾನವನ್ನು ಸರಿಯಾಗಿ ನಿಭಾಯಿಸಲಿಲ್ಲ. ಗಾಂಧಿ ಪಾಕಿಸ್ತಾನದ ರಾಷ್ಟ್ರಪಿತ!

10. ಗಾಂಧಿ ಇಲ್ಲದ ಭಾರತ ಶಕ್ತಿಶಾಲಿಯಾಗುತ್ತದೆ ಎಂಬ ಕಾರಣಕ್ಕೆ ಗಾಂಧಿಯನ್ನು ಕೊಂದೆ!

ಇವು ಗಾಂಧಿ ಹತ್ಯೆಗೆ ಗೋಡ್ಸೆ ನೀಡಿದ ಸಮರ್ಥನೆಗಳಲ್ಲಿ ಕೆಲವು. ಆದರೆ, ನಿಜದಲ್ಲಿ ಗಾಂಧೀಜಿಯ ಬಗ್ಗೆ ನಾಥೂರಾಮನ ಸಿಟ್ಟೇನೆಂದರೆ, ಕೋಮುದಳ್ಳುರಿಯ ಮಾರಣಹೋಮದಲ್ಲಿ ಗಾಂಧಿ ಪಾಲ್ಗೊಳ್ಳಲಿಲ್ಲ. ಹಿಂದೂಗಳ ಪರವಾಗಿ ಕತ್ತಿ ಎತ್ತಿ ನಿಲ್ಲಲಿಲ್ಲ ಎಂಬುದು. ಗಾಂಧೀಜಿಯಾದರೋ ಸತ್ಯ ಹಾಗೂ ಅಹಿಂಸೆಯ ಪರವಾಗಿ ನಿಂತಿದ್ದರು.

ಮಾನವೀಯತೆಯ ಪರ ಇದ್ದವರು. ಮನುಷ್ಯತ್ವವನ್ನು ನಂಬಿ ಆಚರಣೆಗೆ ತಂದಿದ್ದವರು. ಅಂತಹ ತಳಹದಿಯಲ್ಲಿ ಸನಾತನ ಧರ್ಮ ಸುಧಾರಣೆಗೊಳ್ಳಬೇಕು ಎಂದು ನಂಬಿದ್ದವರು. ಎಲ್ಲರೂ ದೇವರ ದೃಷ್ಟಿಯಲ್ಲಿ ಸಮಾನರು ಎಂಬ ಗಾಂಧಿಯ ತತ್ವದ ಅಗಾಧತೆಯನ್ನು ಮತ್ತು ಅದರ ವ್ಯಾಪ್ತಿಯನ್ನು ಅರ್ಥೈಸಿಕೊಳ್ಳುವಲ್ಲಿ ಗೋಡ್ಸೆ ವಿಫಲನಾಗಿದ್ದ. ಆ ರೀತಿ ನಂಬಿದ್ದ ಅಸಂಖ್ಯಾತ ಮತಾಂಧರ ಸಂಕೇತವಾಗಿದ್ದ ಗೋಡ್ಸೆ. ವಿಪರ್ಯಾಸವೆಂದರೆ ಗಾಂಧಿಯ ನಿಜದ ತತ್ವ ಇಂದಿಗೂ ಗೋಡ್ಸೆ ಆರಾಧಕರಿಗೆ ಅರ್ಥವಾಗಿಲ್ಲ, ಅರ್ಥವಾದರೂ ಅದನ್ನು ಜೀರ್ಣಿಸಿಕೊಳ್ಳುವಷ್ಟು ಪ್ರೀತಿ ಮತ್ತು ಮಾನವೀಯತೆಯ ಎಸಳು ಅವರ ಹೃದಯದಲ್ಲಿಲ್ಲ ಎಂಬುದೇ ದಿಟ. ಈ ಮತಾಂಧತೆ ಅಂದು ಗಾಂಧಿ ಎಂಬ ವ್ಯಕ್ತಿಯನ್ನಷ್ಟೇ ಆಹುತಿ ತೆಗೆದುಕೊಳ್ಳಲಿಲ್ಲ, ಇಡೀ ದೇಶದ ಹೃದಯವಾಗಬೇಕಿದ್ದ ಮಾನವತೆಯನ್ನು ಅದು ಬಲಿ ತೆಗೆದುಕೊಂಡಿತು. ಆ ಕೊಲೆಯನ್ನು ಇನ್ನೂ ವಿಜೃಂಭಿಸುತ್ತಿರುವ ಮನಸ್ಸುಗಳು ಸುಧಾರಣೆಯಾಗದ ಹೊರತು ನಿಜ ಗಾಂಧೀ ಜಯಂತಿಗೆ ಅರ್ಥವೆಂತು?


ಇದನ್ನೂ ಓದಿ: ಅಸಮ್ಮತಿಸುತ್ತಿರುವ ಅಧಿಕಾರಿಗಳು ಮತ್ತು ಸಂವಿಧಾನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...