Homeನಿಜವೋ ಸುಳ್ಳೋನಾನೇ ಒಂದು ಜುಮ್ಲಾ : ಗೋಡ್ಸೆ ಜೊತೆ ಒಂದು ಕಾಲ್ಪನಿಕ ಸಂದರ್ಶನ

ನಾನೇ ಒಂದು ಜುಮ್ಲಾ : ಗೋಡ್ಸೆ ಜೊತೆ ಒಂದು ಕಾಲ್ಪನಿಕ ಸಂದರ್ಶನ

- Advertisement -
- Advertisement -

ಸ್ವಾತಂತ್ರ್ಯ ಚಳವಳಿಯ ನೇತಾರ ಮಹಾತ್ಮ ಗಾಂಧಿಯವರನ್ನು ಕೊಂದ ದೇಶದ ಮೊದಲ ಭಯೋತ್ಪಾದಕ ನಾಥುರಾಮ್ ಗೋಡ್ಸೆಯನ್ನು ಗಲ್ಲಿಗೇರಿಸಿದ ದಿನ ಇಂದು. ಜೆ.ಎನ್.ಯು.ಎಸ್.ಯು ಮಾಜಿ ಅಧ್ಯಕ್ಷರಾದ ಲೋಕೇಶ್ ಮಾಲ್ತಿ ಪ್ರಕಾಶ್ ರವರು ಗೋಡ್ಸೆಯೊಂದಿಗೆ ಒಂದು ಕಾಲ್ಪನಿಕ ಸಂದರ್ಶನ ನಡೆಸಿದ್ದಾರೆ. 

ಭಾರತದಲ್ಲಿ 2014ರಿಂದ ದೇಶಭಕ್ತ ಸರ್ಕಾರ ಬಂದ ಮೇಲೆ, ತಾನು ಮತ್ತು ತನ್ನ ಸಾಹಸಗಳ ಬಗ್ಗೆ ಭಾರತದಲ್ಲಿ ಹೊಸ ಆಸಕ್ತಿ ಹುಟ್ಟಿದೆ ಎಂಬ ಸುದ್ದಿ ಕಳೆದೆರಡು ವರ್ಷಗಳ ಹಿಂದೆ ನಾಥುರಾಮ್ ಗೋಡ್ಸೆಯನ್ನು ತಲುಪಿತು. ಉಲ್ಲಸಿತನಾದ ಗೋಡ್ಸೆ ಭೂಮಿಗೆ ತಲುಪಲು ಟ್ರಾವೆಲ್ ವೀಸಾಕ್ಕೆ ಅರ್ಜಿ ಹಾಕಿದ. ಆದರೆ ಒಪ್ಪಿಗೆ ಪಡೆಯಲು ಹಲವಾರು ಅಡೆತಡೆ ಎದುರಾದವು. ಅದ್ಹೇಗೋ ಅಧಿಕಾರಿಗಳ ‘ರೆಡ್‍ಟೇಪ್’ ಬಾಹು ಯಮಲೋಕಕ್ಕೂ ಚಾಚಿತು.

ಕೈ ಬೆಚ್ಚಗಿಲ್ಲದೇ ಈ ಬಾಬುಗಳು ಗೋಡ್ಸೆ ಫೈಲನ್ನು ಮುಂದಕ್ಕೆ ಹೋಗಲು ಬಿಡಲೇ ಇಲ್ಲ. ಆದರೂ ಅದ್ಹೇಗೋ ಸ್ವಲ್ಪ ಮುಂದಕ್ಕೆ ಚಲಿಸಿದಾಗ ದುಷ್ಟ ಕಾಂಗ್ರೆಸ್ ಉನ್ನತ ಅಧಿಕಾರಿಗೆ ಈ ಗೋಡ್ಸೆ ಭೂಮಿಗೆ ಬರುವುದು ಇಷ್ಟವಾಗಲಿಲ್ಲ. ಗೋಡ್ಸೆ ಸ್ವರ್ಗ ಮತ್ತು ಭೂಮಿಯಲ್ಲಿರುವ ಕೆಲವು ಎಳೆಗಳನ್ನು ಎಳೆದ. ಅಂತಿಮವಾಗಿ ಭೂಮಿಯ ಮೇಲಿನ ಭಯಂಕರ ಹೆಣ್ಣುಮಗಳೊಬ್ಬಳು ಶಾಪ ಕೊಟ್ಟ ಪರಿಣಾಮವಾಗಿ ಆ ಉನ್ನತ ಅಧಿಕಾರಿ ಅಲ್ಲಿಂದ ವರ್ಗಾವಣೆಗೊಂಡ! ಹಾಂ, ಗೋಡ್ಸೆಗೆ ಭಾರತಕ್ಕೆ ಟ್ರಾವೆಲ್ ವೀಸಾ ಸಿಕ್ಕೇ ಬಿಡ್ತು. ಗೋಡ್ಸೆ ಕೇದಾರನಾಥದ ಗುಹೆಯೊಂದರಲ್ಲಿ ‘ಸಮಾಧಿ’ ಸ್ಥಿತಿಗೆ ತೆರಳುವ ಮುನ್ನ ನನಗೆ ಆತನ ಸಂದರ್ಶನ ಮಾಡುವ ಅವಕಾಶ ಸಿಕ್ಕಿತು. ಆ ಸಂದರ್ಶನದ ಕೆಲವು ತುಣುಕುಗಳು ನಿಮಗಾಗಿ:

ಪ್ರಶ್ನೆ: ಮಿ. ಗೋಡ್ಸೆ, ಹಲವಾರು ದಶಕಗಳ ನಂತರ ಮತ್ತೆ ಹೆಡ್‍ಲೈನಿನಲ್ಲಿರುವುದು ಹೇಗನಿಸುತ್ತೆ?
ಗೋಡ್ಸೆ: ಸೂಪರ್, ಗ್ರೇಟ್! ಇಂತಹ ಒಂದು ಅವಕಾಶ ಮಾಡಿಕೊಟ್ಟ ಸಾಧ್ವಿಗೆ ಥ್ಯಾಂಕ್ಸ್ ಹೇಳ ಬಯಸುತ್ತೇನೆ. ದೇಶಭಕ್ತರು ಅಧಿಕಾರಕ್ಕೆ ಬಂದಾಗಿನಿಂದ ನನಗೊಂದು ಸ್ಥಾನ ಸಿಕ್ಕೇ ಸಿಗುತ್ತೆ ಎಂಬ ಭರವಸೆಯಲ್ಲಿದ್ದೆ. ನಿಮಗೆ ಗೊತ್ತಾ, ಭೂಮಿಯ ಮೇಲೆ ನಿನಗಿಂತ ನನಗೆ ಹೆಚ್ಚು ಭಕ್ತರಿದ್ದಾರೆ ಎಂದು ನಾನು ಹಿಟ್ಲರ್‍ಗೇ ಚಾಲೆಂಜ್ ಮಾಡಿ ಬಂದಿದ್ದೇನೆ. ಅವನು ಇದರಲ್ಲಿ ಸೋತರೆ, ಗೋಮೂತ್ರ ಕುಡಿಯಲೇಬೇಕು. ಗೋಮೂತ್ರವಷ್ಟೇ ನಿನ್ನನ್ನು ನಿಜವಾದ ಆರ್ಯನನ್ನಾಗಿ ಮಾಡಬಲ್ಲದು ಎಂದು ಅವನಿಗೆ ಹೇಳಿದ್ದೇನೆ ಕೂಡ…

ಪ್ರ: ಆದರೆ, ಪ್ರಧಾನಿ ತಮಗೆ ಅಸಂತೋಷವಾಗಿದೆ ಎಂದಿದ್ದಾರೆ, ಅವರು ತಮ್ಮ ಹೃದಯದಿಂದ ಸಾದ್ವಿಯನ್ನು ಕ್ಷಮಿಸಲ್ಲವಂತೆ..
ಗೋಡ್ಸೆ: ಅವರು ಪಿಎಂ. ಅವರು ಬಹಳಷ್ಟು ಜನರನ್ನು ಓಲೈಸಬೇಕಾಗುತ್ತೆ. ಅದು ಡೆಮಾಕ್ರಸಿಯ ಧ್ವನಿ… ನೀವು ಎಲ್ಲರನ್ನು ಸಂತುಷ್ಟಗೊಳಿಸಬೇಕಾಗುತ್ತೆ.

ಪ್ರಶ್ನೆ: ಸಾಧ್ವಿಯನ್ನು ಎಂದೂ ಕ್ಷಮಿಸಲ್ಲ ಅಂದಿದ್ದಾರೆ ಅಂದಮೇಲೆ, ಸಾಧ್ವಿ ಏನೋ ಘನಘೋರ ತಪ್ಪು ಮಾಡಿರಬೇಕಲ್ಲ?
ಗೋಡ್ಸೆ: ಇದು ಎಲೆಕ್ಷನ್ ಟೈಮ್. ಎಲೆಕ್ಷನ್ ಟೈಮ್ ಅಂದರೆ ‘ಜುಮ್ಲಾ ಟೈಮ್’…

ಪ್ರಶ್ನೆ: ಅಂದ್ರೆ ಪಿಎಂ ಸುಮ್ಮನೇ ಒಂದು ‘ಜುಮ್ಲಾ’ ಹೊಡೀತಿದ್ದಾರೆ ವಿನಹ ಸತ್ಯವನ್ನಲ್ಲ?
ಗೋಡ್ಸೆ: ಜನರನ್ನು ಇದು ಸತ್ಯ ಅಂತಾ ನಂಬಿಸ್ತೀವಲ್ಲ, ಅದೇ ಸತ್ಯ…

ಪ್ರಶ್ನೆ: ಕೆಲವು ಜನ ಹೇಳ್ತಾರೆ, ನೀನು ದೇಶಭಕ್ತ ಅಂತಾ. ಅದು ಜುಮ್ಲಾನಾ, ಸತ್ಯವಾ?
ಗೋಡ್ಸೆ: ಅದು ವೀಕ್ಷಕನ (ಅಬ್ಸರ್ವರ್) ಮೇಲೆ ಅವಲಂಬಿತ…

ಪ್ರಶ್ನೆ: ಅಂದರೆ ಹಾಗೇ ಹೇಳತಿರೋ ವ್ಯಕ್ತಿ ಮೇಲಲ್ಲ…
ಗೋಡ್ಸೆ: ಅದು ಆತನ ಪಾಲಿಗೆ ಜುಮ್ಲಾ. ಆತನಿಗೆ ಗೊತ್ತು ತಾನೊಂದು ಜುಮ್ಲಾ ಹೊಡಿತಿದ್ದೀನಿ ಅಂತಾ. ಆದರೆ ಅದನ್ನು ಸತ್ಯ ಅಂತಾ ಸ್ವೀಕರಿಸ್ತಾರೆ ಅಂತಾನೂ ಆತನಿಗೆ ಗೊತ್ತಿರುತ್ತೆ. ಅದೇ ಜುಮ್ಲಾದ ಶಕ್ತಿ. ಅದು ಪಿಎಂ ತಮ್ಮ ಹೃದಯದಿಂದ ( ಅದಕ್ಕೂ ಹೃದಯ ಬೇಕು) ಯಾರನ್ನೋ ಕ್ಷಮಿಸುತ್ತಿದ್ದಾರೆ ಅನ್ನೋ ಬಿಂಬವೂ ಹೌದು, ಪಿಎಂ ತನ್ನ ಹೃದಯದಿಂದ ಕ್ಷಮಿಸಲ್ಲ ಅನ್ನುವ ಸತ್ಯವೂ ಹೌದು…

ಪ್ರಶ್ನೆ: ನಿನ್ನ ಬಗ್ಗೆ ನಿನಗೆ ಏನು ಅನಿಸುತ್ತೆ? ನೀನು ದೇಶಭಕ್ತನಾ?
ಗೋಡ್ಸೆ: ನಾನೊಬ್ಬ ಜುಮ್ಲಾ, ನಾನೊಂದು ಜುಮ್ಲಾ…

ಪ್ರಶ್ನೆ: ಅಂದರೆ ಇದೆಲ್ಲ ಒಂದು ಸುಳ್ಳಿನ ಕಂತೆ?
ಗೋಡ್ಸೆ: ಅದು ಸುಳ್ಳಿನ ಕಂತೆಯಲ್ಲ, ಅದು ‘ಫೀಲ್ ಗುಡ್’ ಭಾವ.. ಜುಮ್ಲಾದಿಂದ ನಿನಗೆ ಒಂದು ಆಹ್ಲಾದಕರ ಭಾವ ಆವರಿಸುತ್ತೆ, ಅದೇ ಜುಮ್ಲಾದ ಉದ್ದೇಶವೂ ಕೂಡ. ಅಚ್ಛೇ ದಿನ್ ಅಂದರೆ ಅದೇ…ಪಕೋಡಾ ಮಾರ್ತಾ ಮಾರ್ತಾ, ಗಾಡಿ ತೊಳಿತಾ ತೊಳಿತಾ ಅಥವಾ ಚಾ ಮಾರ್ತಾ ಮಾರ್ತಾ ನಿನಗೆ ‘ಫೀಲ್ ಗುಡ್’ ಎಂಬ ಸಂತೋಷದ ಭಾವ ಉಂಟಾಗುತ್ತೆ. ಕೊಲ್ಲೋ ಮೂಲಕವೂ ನೀನು ‘ಫೀಲ್‍ಗುಡ್’ ಆನಂದ ಪಡಿಬಹುದು. ಒಳ್ಳೆಯ ಭಾವನೆಗಳಿಗಿಂತ ಈ ‘ಫಿಲ್‍ಗುಡ್’ನ ಸೆನ್ಸೆಷನ್ ಇದೆಯಲ್ಲ, ಇದು ಬಹಳ ಬಹಳ ದೊಡ್ಡದು. ನಾನಿಲ್ಲಿ ಶಬ್ದಗಳ ಆಟ ಆಡ್ತಿಲ್ಲ. ಭಾರತೀಯ ಫಿಲಾಸಫಿಯಲ್ಲಿ ಎಲ್ಲವೂ ಮಾಯೆಯೇ. ಅದರರ್ಥ ಇಡೀ ವಿಶ್ವವೇ ಒಂದು ನಹಾನ್ ಜುಮ್ಲಾ. ನೀನು ಈಗಾಗಲೇ ಜುಮ್ಲಾಗಳ ನಡುವೆ ಸಿಕ್ಕಿ ಹಾಕಿಕೊಂಡಿದ್ದೀಯಾ. ಒಂದಿಷ್ಟು ಜುಮ್ಲಾ ಸೇರಿಸಿದ್ದಕ್ಕೆ ನನ್ನನ್ನು ಏಕೆ ದೂಷಣೆ ಮಾಡ್ತೀಯಾ? ಒಂದೇ ದಾರಿ ಅಂದರೆ ನ್ಯಾಯ ಪಡೆಯುವುದಲ್ಲ ಮುಕ್ತಿ ಪಡೆಯುವುದು. ಅದೊಂದು ಮರೀಚಿಕೆ.

ಪ್ರಶ್ನೆ: ಜನರಿಗೆ ಮೋಕ್ಷಕ್ಕಿಂತ ನ್ಯಾಯದ ಅಗತ್ಯ ಬಹಳ ಇದೆಯಲ್ಲ?
ಗೋಡ್ಸೆ: ಜನರಿಗೆ ತಮಗೇನೂ ಬೇಕಂತನೇ ಗೊತ್ತಿಲ್ಲ. ನನಗೆ ಜುಮ್ಲಾಗಳೇ ಬೇಕು ಅಂತಾ ಯಾವನಾದರೂ ಹೇಳಿದ್ದಾನಾ? ಇಲ್ಲ, ಆದರೆ ದೇಶಭಕ್ತ ಪಾರ್ಟಿಗೆ ಗೊತ್ತು, ಎಲ್ಲರಿಗೂ ಜುಮ್ಲಾ ಬೇಕು ಅಂತಾ. ಅದಕ್ಕೇ ಅವರು ಯಥೇಚ್ಛವಾಗಿ ಜುಮ್ಲಾಗಳನ್ನು ಒದಗಿಸ್ತಾ ಇದ್ದಾರೆ…7 ದಶಕಗಳಿಂದ ಜಾತ್ಯತೀತ ಸರ್ಕಾರಗಳು ಜನರನ್ನು ಈ ಹಸಿವಿನಿಂದ ಕಾಡಿದವು. ದೇಶಭಕ್ತ ಸರ್ಕಾರವು ಅವರ ಖಾಲಿ ಹೊಟ್ಟಗಳನ್ನು ಜುಮ್ಲಾಗಳಿಂದ ಭರ್ತಿ ಮಾಡಿತು.

ಪ್ರಶ್ನೆ: ನೀನು ಅಲ್ಲಿ ಮೇಲೆ ಮೋಡಗಳಲ್ಲಿ ಇರ್ತೀಯಾ. ಯಾವುದಾದರೂ ಸ್ಯಾಟ್‍ಲೈಟ್ ನಿನ್ನ ಇರುವಿಕೆಯನ್ನ ಪತ್ತೆ ಮಾಡಿದೆಯಾ?
ಗೋಡ್ಸೆ: ಇಲ್ಲವೇ ಇಲ್ಲ, ಸಾಧ್ಯಾನೇ ಇಲ್ಲ. ಮೋಡಗಳಲ್ಲಿ ಬದುಕುವುದರ ಅನುಕೂಲ ಅಂದ್ರೆನೇ ಅದು. ಸ್ಯಾಟ್‍ಲೈಟ್ಸ್ ಮತ್ತು ರೆಡಾರ್‍ಗಳು ಎಂದೂ ನಿನ್ನ ಪತ್ತೆ ಹಚ್ಚಕಾಗಲ್ಲ. ಅದಕ್ಕೇ ಟ್ರಂಪ್‍ಗೆ ಆಕಾಶದಲ್ಲಿ ನನ್ನ ಚಲನವಲನ ಗೊತ್ತಾಗದ ರೀತಿಯಲ್ಲಿ ನಾನು ಭಾರತದಲ್ಲಿ ಬಂದಿಳಿದೆ.
ಇದರ ನಂತರ ಗೋಡ್ಸೆ ತನ್ನ ‘ಸಮಾಧಿ’ಯತ್ತ ಹೊರಟ…


ಇದನ್ನೂ ಓದಿ: ಗಾಂಧಿ ಅಂದಿಗೂ ಇಂದಿಗೂ ಒಬ್ಬಂಟಿ. ಗೋಡ್ಸೆ ಅಂದಿಗೂ ಒಬ್ಬಂಟಿಯಲ್ಲ, ಇಂದಿಗೂ..

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

  1. ಗೋಡ್ಸೆ ಅವರನ್ನ ಭಯೋತ್ಪಾದಕ ಅಂತ ಕರೆಯುವುದಾದರೆ ,ಭಗತ್ ಸಿಂಗ್ ಅವರನ್ನು ನೇಣು ಕುಣಿಕೆ ತಪ್ಪಿಸಲು ಆಗದವರನ್ನ ,ಸುಭಾಷ್ ಚಂದ್ರಭೋಸ್ ಅವರ ಮೇಲೆ ಗೂಢಾಚಾರಿಕೆ ಮಾಡಲು ನೆರವಾದ ಸೋಕಾಲ್ಡ್ ಒಂದು ಕುಟುಂಬ ರಾಜಕಾರಣದ ಪರಿವಾರದವರನ್ನ ,ಚೀನಾದೊಂದಿಗೆ ಹಿಂದಿನಿಂದಲೂ ಸಹಾಯ ಪಡೆಯುತ್ತಿರುವ ಈಗಲೂ ನೆರವು ಪಡೆದು ಚೀನಾದ ಪರ ನಿಲ್ಲೋ ಭಾರತದ ಕಮ್ಯೂನಿಸ್ಟ್ ರನ್ನ ಯಾವ ಭಯೋತ್ಪಾದನೆ ಯವರು ಎಂದು ಕರೆಯಬಹುದು.

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...