Homeಅಂಕಣಗಳುನಾವೀಗ ಚುನಾವಣಾ ಸರ್ವಾಧಿಕಾರದತ್ತ ನಡೆಯುತ್ತಿದ್ದೇವೆಯೇ? – ಎಚ್.ಎಸ್ ದೊರೆಸ್ವಾಮಿ

ನಾವೀಗ ಚುನಾವಣಾ ಸರ್ವಾಧಿಕಾರದತ್ತ ನಡೆಯುತ್ತಿದ್ದೇವೆಯೇ? – ಎಚ್.ಎಸ್ ದೊರೆಸ್ವಾಮಿ

ಬಿಜೆಪಿ ಈ ಚುನಾವಣೆಯಲ್ಲಿ ಬ್ರೂಟ್ majority ಪಡೆದಿರುವುದಕ್ಕೆ ಎರಡು ಕಾರಣ

- Advertisement -
- Advertisement -

ಹೆಚ್.ಎಸ್‍.ದೊರೆಸ್ವಾಮಿ |

ಇದೊಂದು ಪೂರ್ವ ನಿರ್ಧಾರಿತ ಚುನಾವಣೆ ಎಂದು ಚುನಾವಣೆಯ ಫಲಿತಾಂಶ ಹೇಳುತ್ತದೆ. ಬಿಜೆಪಿ ಈ ಚುನಾವಣೆಯಲ್ಲಿ ಬ್ರೂಟ್ majority ಪಡೆದಿರುವುದಕ್ಕೆ ಎರಡು ಕಾರಣಗಳಿರಬಹುದು. ಮೊದಲನೆಯದು, ವ್ಯವಸ್ಥಿತವಾಗಿ ಮತ ಎಣಿಕೆ ಯಂತ್ರಗಳನ್ನು ಬಿಜೆಪಿಯ ಪರವಾಗಿ ಹೊಂದಾಣಿಕೆ ಮಾಡಿಕೊಂಡಿರಬಹುದು. ಇಲ್ಲವೇ ಮತದಾರರೆಲ್ಲ ಬಿಜೆಪಿ ಕಡೆಗೆ ವಾಲಿರಬಹುದು. ಈ ಸಂದೇಹ ಮೂಡುವುದಕ್ಕೆ ಕಾರಣ ಏನು? ನೋಡಿ ವಿರೋಧ ಪಕ್ಷಗಳ ನಾಯಕರನ್ನೂ ಯಂತ್ರ ಬಲಿ ತೆಗೆದುಕೊಂಡಿರುವುದು. ನಾಲ್ಕಾರು ಮತಯಂತ್ರಗಳಲ್ಲಿ ಮಾತ್ರ ಈ ಪ್ರಮಾದ ನಡೆದಿದೆಯೆಂದರೆ ಪ್ರತಿಪಕ್ಷಗಳು ದೇಶದ ತುಂಬಾ ಹುಯಿಲೆಬ್ಬಿಸುತ್ತಿದ್ದರು. ಸಾರಾಸಗಟಾಗಿ ಎಲ್ಲಾ ಮತಯಂತ್ರಗಳು ಒಂದೇ ಬಗೆಯ ಫಲಿತಾಂಶವನ್ನು ಪ್ರಕಟಿಸಿರುವುದರಿಂದ ಎಲ್ಲಾ ಪಕ್ಷಗಳ ಬಾಯಿ ಬಂದಾಗಿದೆ.

ಮಾಜಿ ಚುನಾವಣಾ ಆಯೋಗದ ಮುಖ್ಯಸ್ಥರಾಗಿದ್ದ ಒ.ಪಿ.ರಾವತ್ ಅವರು ಹೇಳಿಕೆ ನೀಡಿ, ಚುನಾವಣೆಗಳು ಮುಗಿದ ಮೇಲೆ ಭದ್ರವಾಗಿ ಇಡಬೇಕಾಗಿರುವ ಮತಯಂತ್ರಗಳನ್ನು ಹೊತ್ತ ಲಾರಿಗಳು ಅನೇಕ ಕೇಂದ್ರಗಳಿಂದ ಸಾಗಿಸಲ್ಪಟ್ಟಿರುವುದನ್ನು ತಾವು ನೋಡಿದ್ದಾಗಿ ಹೇಳಿದ್ದಾರೆ. ಅವು ಎಲ್ಲಿಗೆ ಕೊಂಡೊಯ್ಯಲಾದವು? ಏಕೆ ಕೊಂಡೊಯ್ಯಲಾದವು? ಆ ಮತಯಂತ್ರಗಳನ್ನು ಮೊದಲು ಇಟ್ಟ ಸ್ಥಳಗಳಲ್ಲಿಯೇ ಭದ್ರವಾಗಿ ಇಡಬೇಕಾಗಿತ್ತಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಒಟ್ಟಿನಲ್ಲಿ ಚುನಾವಣೆ ಮುಗಿದಿದೆ. ಫಲಿತಾಂಶ ಪ್ರಕಟವಾಗಿದೆ. ಪ್ರತಿಪಕ್ಷದ ದಿಗ್ಗಜಗಳು ಉರುಳಿಬಿದ್ದಿವೆ. ಪಾರ್ಲಿಮೆಂಟಿನಲ್ಲಿ ಶಕ್ತಿಯುತವಾದ ಪ್ರತಿಪಕ್ಷ ಇಲ್ಲವಾಗಿದೆ. ಅಲ್ಲದೆ ಪ್ರತಿಪಕ್ಷದವರ ಸಂಖ್ಯಾಬಲವು ಕುಸಿದಿದೆ.
ಮೋದಿಯವರಿಗೆ ಈಗ ಆನೆ ಬಲ ಬಂದಿದೆ. ಅವರ ಮುಂದೆ ಎರಡು option ಗಳಿವೆ. ಮೋದಿಯವರು ಸೇಡಿನ ರಾಜಕೀಯ ಆರಂಭಿಸಬಹುದು. ಎಲ್ಲ ಪಕ್ಷಗಳ ಅದರಲ್ಲೂ ಮುಖ್ಯವಾಗಿ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಆಮ್ ಆದ್ಮಿ ಪಾರ್ಟಿಯ ಮುಖ್ಯಸ್ಥರನ್ನೆಲ್ಲ ಸೆರೆಮನೆಗೆ ಕಳಿಸಿ, ಆ ಸಂಸ್ಥೆಗಳು ಅನಾಥವಾಗುವಂತೆ ಮಾಡಿ ಆ ಪಕ್ಷಗಳನ್ನು ನಿರ್ನಾಮ ಮಾಡಲು ಪೊಲೀಸ್, ಸಿಬಿಐ, ಆದಾಯ ತೆರಿಗೆ ಇಲಾಖೆಯವರನ್ನು ಹಸ್ತಕರನ್ನಾಗಿ ಮಾಡಿಕೊಂಡು ಅವರ ಮುಖಾಂತರ ಕ್ರಮಕೈಗೊಳ್ಳಬಹುದು. ಈ ಮುಖಾಂತರ ಭಾರತದಲ್ಲಿ ವಿರೋಧ ಪಕ್ಷಗಳೇ ಇಲ್ಲದಂತೆ ಮಾಡಿ ಏಕಸ್ವಾಮ್ಯದ ಚಕ್ರಾಧಿಪತ್ಯ ಕಟ್ಟುವ ಸಂಕಲ್ಪ ಮಾಡಬಹುದು. ಮೇಲೆ ಹೇಳಿದ ಹುನ್ನಾರವನ್ನು ಮೋದಿಯವರು ತಮ್ಮ ಅಧಿಕಾರದ ಮೊದಲ ಅವಧಿಯಲ್ಲೇ ಆರಂಭ ಮಾಡಿದ್ದಾರೆ. ಆ ಕೆಲಸವನ್ನು ಪೂರ್ಣಗೊಳಿಸಲು ಈ ಎರಡನೆಯ ಅವಧಿಯನ್ನು ಬಳಸಿಕೊಳ್ಳುವರೇ ಎಂಬುದನ್ನು ಕಾದು ನೋಡಬೇಕು . ಎರಡನೆಯ ಪ್ರತೀಕಾರದ ಕಾರ್ಯಕ್ರಮವಾಗಿ ಹಿಂದುತ್ವ ಪ್ರತಿಪಾದಕರನ್ನು ಎದುರಿಸುತ್ತಿರುವ ಸಿವಿಲ್ ಸೊಸೈಟಿಯ ಕಾರ್ಯಕರ್ತರನ್ನು ಬಗ್ಗುಬಡಿಯುವ ಸಂಕಲ್ಪ ಮಾಡಬಹುದು. ಇಲ್ಲವೇ ನಿರುದ್ಯೋಗ ಸಮಸ್ಯೆ ಬಗೆಹರಿಸುವ ಬಗೆಗೆ ದೇಶದ ಪ್ರಗತಿಯ ಬಗೆಗೆ, ರಕ್ಷಣೆಯ ಬಗೆಗೆ, ಬಡತನ ನಿರ್ಮೂಲನೆ ಬಗೆಗೆ ಬಡವ-ಬಲ್ಲಿದರ ಮಧ್ಯದ ಕಂದಕವನ್ನು ಮುಚ್ಚುವ ಬಗೆಗೆ ಮಾತ್ರ ಗಮನಕೊಟ್ಟು ಬಡವರ, ದಲಿತರ, ದುಡಿಮೆಗಾರರ ಶ್ರೇಯಸ್ಸನ್ನು ಕೋರುವ ಕೆಲಸಕ್ಕೆ ಪೂರ್ಣ ಸಮಯ ಕೊಡುತ್ತಾರೆಯೇ ಎಂಬುದನ್ನು ಕಾತರದಿಂದ ಸಿವಿಲ್ ಸೊಸೈಟಿ ಎದುರುನೋಡುತ್ತಿದೆ.

ಮೋದಿಯವರು ತಮ್ಮ ಮೊದಲ ಅವಧಿಯಲ್ಲಿ ಕೆಲವು ಒಳ್ಳೆಯ ಕೆಲಸಗಳನ್ನೂ ಪ್ರಾರಂಭಿಸಿದ್ದಾರೆ. 2014ರ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕೊಟ್ಟ ಅನೇಕ ಆಶ್ವಾಸನೆಗಳು, ಆಶ್ವಾಸನೆಗಳಾಗಿಯೇ ಉಳಿದವು. ಉದಾಹರಣೆಗೆ ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿ, ಬಡತನ ನಿವಾರಣೆ, ಭ್ರಷ್ಟಾಚಾರ ನಿರ್ಮೂಲನೆ, ನಮ್ಮ ದೇಶದಲ್ಲಿ, ಪರದೇಶಗಳಲ್ಲಿ ಭಾರತೀಯರು ಹೊಂದಿರುವ ಕಾಳಧನವನ್ನು ಹೊರತೆಗೆಯುವುದು ಮುಂತಾದ ಭರವಸೆಗಳು ಕಾರ್ಯಗತವಾಗಲೇ ಇಲ್ಲ. ಬಡವರಿಗೆಲ್ಲ ಉಚಿತ ಗ್ಯಾಸ್ ನೀಡುವ ಕಾರ್ಯ ನಡೆದಿದೆ. ಆದರೆ ಕೆಲ ಕೋಟಾಧಿಪತಿಗಳಿಗೆ ಸಾಲಮನ್ನಾ ಮಾಡಲಾಗಿದೆ. ಕೊಳ್ಳೆ ಹೊಡೆಯಲು ಅವಕಾಶ ಕಲ್ಪಿಸಿಕೊಡಲಾಗಿದೆ. ಬರ್ಬರ ಕಾನೂನುಗಳನ್ನು ರಚಿಸಲಾಗಿದೆ. ವಿರೋಧ ವ್ಯಕ್ತಪಡಿಸುವವರನ್ನು ದಂಡಿಸಲು ಈ ಕಾನೂನುಗಳನ್ನು ಬಳಸಲಾಗಿದೆ.
ಚುನಾವಣೆಯ ಫಲಿತಾಂಶವನ್ನು ಅಂದಾಜು ಮಾಡುವ ಪರಿಣತ ಸಂಸ್ಥೆಗಳು, ಹಿಂದೆಲ್ಲಾ ಅಂದಾಜು ಮಾಡಿದಾಗ, ಅವುಗಳಲ್ಲಿ ತುಂಬಾ ವ್ಯತ್ಯಾಸ ಕಂಡುಬರುತ್ತಿತ್ತು. ಈ ಸಾರಿ ಎಣಿಕೆಗೆ ಎರಡು ದಿನ ಮೊದಲು ಪ್ರಕಟವಾದ ಫಲಿತಾಂಶಗಳಲ್ಲಿ ವ್ಯತ್ಯಾಸವೇನು ಕಾಣಲಿಲ್ಲ. ಅಷ್ಟು ನಿಖರವಾಗಿ ಎಲ್ಲಾ ಪರಿಣಿತ ಸಂಸ್ಥೆಗಳು ಒಂದೇ ರೀತಿಯ ಫಲಿತಾಂಶ ಪ್ರಕಟಿಸಿದ್ದಂತೂ ಚುನಾವಣಾ ಆಯೋಗವೇ ಪೂರ್ವಭಾವಿಯಾಗಿ ಫಲಿತಾಂಶವನ್ನು ಹೇಳಿಬರೆಸಿದಂತಿತ್ತು.

ಮೋದಿ ಆಡಳಿತ ನಡೆಸಿದ್ದಕ್ಕಿಂತಲೂ ಹೆಚ್ಚಾಗಿ ಚುನಾವಣಾ ಪ್ರಚಾರ ಕಾರ್ಯದಲ್ಲಿಯೇ ಈ ಐದೂ ವರ್ಷ ಕಳೆದರು. ವಿರೋಧ ಪಕ್ಷಗಳು ಮೋದಿಯವರ ಈ sಣಡಿಚಿಣegಥಿ ಯನ್ನು ಗಮನಿಸಲೇ ಇಲ್ಲ. ಮೋದಿ ಒಬ್ಬ ಸಾಂಪ್ರದಾಯಕ ರಾಜಕಾರಣಿಯಲ್ಲ ಎಂಬುದನ್ನು ವಿರೋಧ ಪಕ್ಷಗಳವರು ಬಹಳ ನಿಧಾನವಾಗಿ ತಿಳಿದರು. ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳು ಮೋದಿಯ ಅಡಿಯಾಳಾಗಿ ಕೆಲಸ ಮಾಡಿದವು. ಅವೆಲ್ಲವನ್ನೂ ಇವರು ಕೊಂಡಿದ್ದರು ಎನ್ನುವ ರೀತಿಯಲ್ಲಿ ಅವು ನಡೆದುಕೊಂಡವು.

ಮೋದಿ ಸರ್ಕಾರದ ಸಣ್ಣಪುಟ್ಟ ಸಾಧನೆಗಳತ್ತ ಅಬ್ಬರದ ಪ್ರಚಾರ ನೀಡುವ ಮೂಲಕ ಜನರ ಗಮನ ಸೆಳೆದರು. ಮೋದಿಯವರ ಆರ್ಥಿಕ ವೈಫಲ್ಯಗಳನ್ನು ಪಟ್ಟಿಮಾಡಿ ವಿರೋಧ ಪಕ್ಷಗಳು ಚುನಾವಣೆಯ ಸಂದರ್ಭದಲ್ಲಿ ದಾಳಿ ಮಾಡಿದರೂ ಮೋದಿ ಮತ್ತು ಷಾ ಅದನ್ನು ಅಲ್ಲಗಳೆದು ಹೂಂಕಾರ ಮಾಡಿದರು. ಮೋದಿ ಅವರ ಬಣ್ಣಬಣ್ಣದ ಮಾತುಗಾರಿಕೆ ಮಸುಕಾಗಲೇ ಇಲ್ಲ. ಆರ್ಥಿಕ ತಜ್ಞರು ಮೋದಿಯ ವೈಫಲ್ಯವನ್ನು ಸುದೀರ್ಘವಾಗಿ ಬರೆದು ತಿಳಿಸಿದರೂ ತಮ್ಮ ವಿರೋಧವಾಗಿ ಹೇಳುವುದು ತಜ್ಞರ ಚಾಳಿ ಎಂದು ಭಂಡವಾದ ಮಾಡಿದರು.
ಮೋದಿ ಬಾಯಿಬಡುಕರು ಜನಸಾಮಾನ್ಯರನ್ನು ಭಾವೋದ್ರೇಕಗೊಳಿಸುವುದರಲ್ಲಿ ಪ್ರವೀಣರು. Mass appeal ಮಾಡುವ ವ್ಯಕ್ತಿಗಳಾದ ಜವಾಹರ್‍ಲಾಲ್ ನೆಹರೂ, ಸರ್ದಾರ್ ವಲ್ಲಭಾಯಿ ಪಟೇಲ್, ಜೆ.ಬಿ. ಕೃಪಾಲಾನಿ, ಪಟ್ಟಾಭಿ ಸೀತಾರಾಮಯ್ಯ, ಸಿ.ರಾಜಗೋಪಾಲಾಚಾರಿ, ಬಾಲಗಂಗಾಧರ ತಿಲಕ್, ಟಿ.ಪ್ರಕಾಶಂ, ಕೆ.ಟಿ.ಭಾಷ್ಯಂ, ಕೆ.ಪಟ್ಟಾಭಿರಾಮನ್, ಗಂಗಾಧರರಾವ್ ದೇಶಪಾಂಡೆ ಮುಂತಾದವರು ಪ್ರತಿ ಪ್ರಾಂತದಲ್ಲೂ ಇದ್ದರು. ಆದರೆ ಅವರ್ಯಾರು ಬಾಯಿ ಬಡುಕರಾಗಿರಲಿಲ್ಲ. ಈಗ ಈ ಪರಂಪರೆಯ ನಾಯಕರನ್ನು ದುರ್ಬೀನು ಹಿಡಿದುಕೊಂಡು ಹುಡುಕಬೇಕು. ಬಾಯಿ ಬಡುಕ ಮೋದಿಯವರ ಎದುರಿಗೆ ನಿಂತು ಸೇರಿಗೆ ಸವ್ವಾಸೇರು ಎಂದು ಬಾಯಿ ಬಡಿಯುವ ನೇತಾರರು ಯಾವ ಪಕ್ಷದಲ್ಲೂ ಇಲ್ಲ.

ಪ್ರತಿ ಪ್ರಾಂತದಲ್ಲೂ ಆಗ ಇಬ್ಬರು, ಮೂವರು ಅಖಿಲ ಭಾರತ ನಾಯಕರಿದ್ದರು. ಉತ್ತರ ಪ್ರದೇಶದಲ್ಲಿ ಮೋತಿಲಾಲ್ ನೆಹರೂ, ಜವಾಹರ್‍ಲಾಲ್ ನೆಹರೂ, ಗೋವಿಂದ ವಲ್ಲಭ ಪಂತ್, ಮದನ ಮೋಹನ ಮಾಳವೀಯ, ವಾಯುವ್ಯ ಗಡಿಪ್ರಾಂತ್ಯದಲ್ಲಿ ಖಾನ್ ಅಬ್ದುಲ್ ಗಫರ್‍ಖಾನ್, ಖಾನ್ ಸಾಹೇಬ್, ಗುಜರಾತಿನಲ್ಲಿ ಮಹಾತ್ಮಗಾಂಧಿ, ವಿಠ್ಠಲ್ ಭಾಯ್ ಪಟೇಲ್, ವಲ್ಲಭ ಭಾಯ್ ಪಟೇಲ್, ಮೊರಾರ್ಜಿ ದೇಸಾಯಿ, ಬಂಗಾಳದಲ್ಲಿ ಸುಭಾಷ್ ಚಂದ್ರ ಭೋಸ್, ಶರತ್ ಚಂದ್ರ ಭೋಸ್, ಬಿ.ಸಿ.ರಾಯ್, ಬಿಪಿನ್ ಚಂದ್ರಪಾಲ್, ಆಂಧ್ರದಲ್ಲಿ ಪಟ್ಟಾಭಿ ಸೀತಾರಾಮಯ್ಯ, ಬುಲುಸು ಸಾಂಬಮೂರ್ತಿ, ಟಿ.ಪ್ರಕಾಶಂ, ಕೇರಳದಲ್ಲಿ ಕೇಳಪ್ಪನ್, ಪಟ್ಟಂತಾನು ಪಿಳ್ಳೈ, ಮಹಾರಾಷ್ಟ್ರದಲ್ಲಿ ಬಾಲಗಂಗಾಧರ ತಿಲಕ್, ಎಸ್.ಕೆ.ಪಾಟೀಲ್, ಕರ್ನಾಟಕದಲ್ಲಿ ಗಂಗಾಧರ್ ದೇಶಪಾಂಡೆ, ಆರ್.ಆರ್.ದಿವಾಕರ್, ಕೆ.ಟಿ.ಭಾಷ್ಯಂ, ಕೌಜಲಗಿ ಹನುಮಂತರಾವ್, ಕಾರ್ನಾಡ್ ಸದಾಶಿವರಾವ್, ಅಣ್ಣು ಗುರೂಜಿ, ಕಾಶ್ಮೀರದಲ್ಲಿ ಷೇಕ್ ಅಬ್ದುಲ್ಲಾ – ಇವರೆಲ್ಲ ಅಖಿಲ ಭಾರತ ಮಟ್ಟದ ನಾಯಕರಾಗಿದ್ದರು. ಅವರಿಗೆಲ್ಲಾ ಹೋಲಿಸಿದರೆ ಈಗಿನ ನಾಯಕರು ಪಿಗ್ಮಿಗಳು. ಅದೊಂದು ಪರ್ವಕಾಲ. ಎಲ್ಲಾ ಕ್ಷೇತ್ರಗಳಲ್ಲೂ ದಿಗ್ಗಜರು ಜನಿಸಿದ ಯುಗ ಸಾಹಿತ್ಯ ಕ್ಷೇತ್ರದಲ್ಲಿ ರವೀಂದ್ರನಾಥ ಟ್ಯಾಗೋರ್, ಬಂಕಿಮಚಂದ್ರ ಚಟರ್ಜಿ, ಕೆ.ವಿ.ಪುಟ್ಟಪ್ಪ, ವಿಜ್ಞಾನ ಕ್ಷೇತ್ರದಲ್ಲಿ ಸಿ.ವಿ.ರಾಮನ್, ಜಗದೀಶ್ ಚಂದ್ರ ಬೋಸ್, ಧಾರ್ಮಿಕ ಕ್ಷೇತ್ರದಲ್ಲಿ ರಾಮಕೃಷ್ಣ ಪರಮಹಂಸರು, ವಿವೇಕಾನಂದರು, ರಮಣಮಹರ್ಷಿಗಳು, ಅರವಿಂದ ಘೋಷ್, ದಯಾನಂದ ಸರಸ್ವತಿ, ಹೀಗೆ ಎಲ್ಲಾ ಕ್ಷೇತ್ರಗಳಲ್ಲೂ ದಿಗ್ಗಜರು ಹುಟ್ಟಿಕೊಂಡರು. ಅದೊಂದು ರಿನೈಸೆನ್ಸ್ ಕಾಲ.
ಈ ಚುನಾವಣೆಯಲ್ಲಿ ಹಿಂದೆಂದಿಗಿಂತಲೂ ಹೆಚ್ಚಾಗಿ ಸತ್ಯದ ಮುಖವಾಡವಿರುವ ಅಸತ್ಯದ ಮಾತುಗಳನ್ನೇ ಷಾ ಮತ್ತು ಮೋದಿ ಅವರು ಬಳಸಿದರು. ಚೌಕಿದಾರ್ ಚೋರ್ ಎಂದರು ರಾಹುಲ್ ಗಾಂಧಿ. ಆ ಚೌಕಿದಾರರು ಮತ್ತೆ ಅಧಿಕಾರ ಹಿಡಿದಿದ್ದಾರೆ. ಮೋದಿ ಸರ್ಕಾರದ ವೈಫಲ್ಯಗಳನ್ನು ವಿರೋಧ ಪಕ್ಷಗಳು ಸಾರಿ ಹೇಳಿದರಾದರೂ ಪರಸ್ಪರ ನಿಂದನೆಯ ಪ್ರವಾಹದಲ್ಲಿ ಅದು ಮುಳುಗಿಹೋಯಿತು.
ಮೋದಿಗಿಂತ ಮೊದಲು ಪ್ರಧಾನಿಗಳಾದವರು ವಿಷಯಾಧಾರಿತ ಟೀಕೆಗಳನ್ನೇ ಚುನಾವಣೆಯ ಉದ್ದಕ್ಕೂ ಮಾಡುತ್ತಿದ್ದರು. ಮೋದಿಯಂತೆ ಕಾಂಗ್ರೆಸ್ ಅನ್ನೂ ನಿರ್ನಾಮ ಮಾಡುತ್ತೇನೆ ಎಂದು ಅಬ್ಬರದ ವೀರಾವೇಶದ ಭಾಷಣಗಳನ್ನು ಮಾಡಲಿಲ್ಲ. ಬಿಜೆಪಿ ಈ ಚುನಾವಣೆಯಲ್ಲಿ ಗೆಲ್ಲುತ್ತದೆ. ಈ ಚುನಾವಣೆ ನಮ್ಮ ಗಣರಾಜ್ಯವನ್ನು ಧ್ವಂಸಮಾಡಲು ಚುನಾವಣಾ ಸರ್ವಾಧಿಕಾರವನ್ನು (Electoral dictatorship) ಚಲಾಯಿಸಲು ಹೊರಟಿದೆ. ಇದು ಮೋದಿಯವರ ಮೊದಲ ಹೆಜ್ಜೆಯ ಪ್ರಯೋಗ ಎಂದು ಭವಿಷ್ಯ ನುಡಿದವರು ಯೋಗೇಂದ್ರ ಯಾದವ್. ಬಹುಶಃ ಆ ದಿಕ್ಕಿನತ್ತ ಈ ದೇಶವು ನಡೆದಿರುವ ಎಲ್ಲಾ ಸೂಚನೆಗಳೂ ಕಾಣುತ್ತಿವೆ. ಮೇಲೆ ಹೇಳಿದ ಭಾರತದ ರಿನೈಸನ್ಸ್ ಕಾಲದ ಮುತ್ಸದ್ದಿತನಕ್ಕೆ, ಪ್ರಜಾತಾಂತ್ರಿಕ ನಡವಳಿಕೆಗಳಿಗೆ ಹಂತಹಂತವಾಗಿ ಮರಳಲು ಬೇಕಾದ ಎಲ್ಲಾ ಪ್ರಯತ್ನಗಳನ್ನು ನಾವು ಮಾಡುವುದೊಂದೇ ಇದಕ್ಕೆ ಪರಿಹಾರ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...