Homeರಾಜಕೀಯಎನ್‍ಆರ್‍ಸಿ: ಶುರುವಾಯಿತೇ ಶಾ ಸಂಚು? ವಿದೇಶಿ ಹೆಸರಲ್ಲಿ ಸೇನಾಧಿಕಾರಿ ಬಂಧನ

ಎನ್‍ಆರ್‍ಸಿ: ಶುರುವಾಯಿತೇ ಶಾ ಸಂಚು? ವಿದೇಶಿ ಹೆಸರಲ್ಲಿ ಸೇನಾಧಿಕಾರಿ ಬಂಧನ

ಭಾರತೀಯ ಸೇನೆಯ ಲೆಫ್ಟಿನೆಂಟ್ ‘ವಿದೇಶಿ.. ಬಂಧನದಲ್ಲೀಗ ಅವರು ‘ಪರದೇಶಿ’...

- Advertisement -
- Advertisement -

ರಾಷ್ಟ್ರೀಯ ನಾಗರೀಕತ್ವ ನೋಂದಣಿ (ಎನ್‍ಆರ್‍ಸಿ) ಈಶಾನ್ಯ ಮತ್ತು ಪೂರ್ವ ರಾಜ್ಯಗಳಲ್ಲಿ ಬಿಜೆಪಿಯ ಮ್ರಮುಖ ಚುನಾವಣಾ ವಿಷಯವಾಗಿತ್ತು. ಈ ಹಿಂದೆಯೇ ಅಸ್ಸಾಂನಂತಹ ರಾಜ್ಯದಲ್ಲಿ ಈ ಪ್ರಯೋಗ ಆರಂಭವಾಗಿದೆ. ಇದರ ಅಡಿಯಲ್ಲಿ ಭಾರತೀಯ ಸೇನೆಯಲ್ಲಿ 30 ಬರ್ಷಗಳ ಕಾಲ ಸೇವೆ ಸಲ್ಲಿಸಿದ ನಿವೃತ್ತ ಲೆಫ್ಟಿನೆಂಟ್ ಒಬ್ಬರನ್ನು ವಿದೇಶಿ ಎಂದು ಗುರುತಿಸಿ ಬಂಧಿಸಲಾಗಿದೆ. ಅವರು ಮುಸ್ಲಿಂ ಎನ್ನುವುದು ಕಾಕತಾಳೀಯವಲ್ಲ…
ಎನ್‍ಆರ್‍ಸಿ ಮುಂದೆ ಸೃಷ್ಟಿಸಲಿರುವ ಅನಾಹುತಗಳಿಗೆ ಸಾಕ್ಷಿಯಾಗಿ ಈಶಾನ್ಯ ಮತ್ತು ಪೂರ್ವ ರಾಜ್ಯಗಳಲ್ಲಿ ಹಲವಾರು ಜನರನ್ನು ವಿದೇಶಿ ವಲಸಿಗರು ಎಂದು ಗುರುತಿಸುವ ಸಂಚು ಶುರುವಾಗಿದೆ. ಮೊನ್ನೆ ಮೇ 29ರಂದು ಅಸ್ಸಾಂ ಪೊಲೀಸರು ಮೊಹಮ್ಮದ್ ಸನಾವುಲ್ಲಾ ಎಂಬ ನಿವೃತ್ತ ಗೌರವಾನ್ವಿತ ಲೆಫ್ಟಿನೆಂಟ್‍ರನ್ನು ವಶಕ್ಕೆ ಪಡೆದಿದ್ದಾರೆ. ‘ಬೋಕೊ ಫಾರಿನರ್ಸ್ ಟ್ರಿಬ್ಯುನಲ್’ ಅವರನ್ನು ವಿದೇಶಿಯೆಂದು ಗುರುತಿಸಿದೆ.
ಇದೇನೂ ಮೊದಲಲ್ಲ. ಹಲವಾರು ನಿವೃತ್ತ ಸೇನಾಧಿಕಾರಿಗಳು ಈಗಾಗಲೇ ವಿಚಾರಣೆ ಹೆಸರಲ್ಲಿ ಕಿರುಕುಳ ಅನುಭವಿಸಿದ್ದಾರೆ. ದೇಶಕ್ಕೆ ಅವರು ನೀಡಿದ ಕೊಡುಗೆಯೂ ಈ ಭಯಾನಕ ಎನ್‍ಆರ್‍ಸಿ ಮುಂದೆ ನಗಣ್ಯ. ಹೀಗಾದರೆ ಅಲ್ಲಿನ ಜನಸಾಮಾನ್ಯರ ಪರಿಸ್ಥಿತಿಯನ್ನು ಊಹಿಸಿ.
ಈ ಸಲದ ಚುನಾವಣೆ ಪ್ರಚಾರದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಲವಾರು ಕಡೆ ಎನ್‍ಆರ್‍ಸಿ ವಿಷಯ ಪ್ರಸ್ತಾಪಿಸಿ, ಪಶ್ಚಿಮ ಬಂಗಾಳ ಸೇರಿದಂತೆ ದೇಶದ ಎಲ್ಲ ಕಡೆ ಎನ್‍ಆರ್‍ಸಿ ಬಳಸಿ ನುಸುಳುಕೋರರನ್ನು ದೇಶದಿಂದ ಹೊರ ಹಾಕುತ್ತೇವೆ. ಇದರಲ್ಲಿ ಹಿಂದೂ ನಿರಾಶ್ರಿತರಿದ್ದರೆ ಅವರಿಗೆ ಇಲ್ಲಿಯ ನಾಗರಿಕತ್ವ ನೀಡುತ್ತೇವೆ. ಉಳಿದವರನ್ನು ಎತ್ತಿ ಬಿಸಾಡುತ್ತೇವೆ’ ಎಂದು ಪ್ರಚೊದನಾಜಾರ ಭಾಷಣಗಳನ್ನು ಮಾಡಿದ್ದರು. ಅವರ ಗುರಿ ಬಾಂಗ್ಲಾ ಮೂಲದ ಮುಸ್ಲಿಂರೇ ಎಂಬುದು ಸ್ಪಷ್ಟ. ಇದನ್ನು ದೇಶಾದ್ಯಂತ ವಿಸ್ರಿಸಿದರೆ ಘನಘೋರ ದೌರ್ಜನ್ಯಗಳಾಗುವುದಂತೂ ಸತ್ಯ. ಹಿಂದೊಮ್ಮೆ ಬಾಂಗ್ಲಾ ವಲಸಿಗರನ್ನು ಇದೇ ಶಾ ಕ್ರಿಮಿಕೀಟಗಳಿಗೆ ಹೋಲಿಸಿದ್ದರು. ಈ ಪುಣ್ಯಾತ್ಮನಿಗೆ ಗೃಹ ಖಾತೆ ನೀಡಿದರಂತೂ ಪರಿಸ್ಥಿತಿ ಅಧ್ವಾನವಾಗಲಿದೆ.
51 ವರ್ಷದ ಸನಾವುಲ್ಲಾ ಭಾರತೀಯ ಸೇನೆಗೆ ಸಾಮಾನ್ಯ ಸೈನಿಕನಾಗಿ ಸೇವೆಗೆ ಸೇರಿ, ಜಮ್ಮು-ಕಾಶ್ಮೀರ ಮತ್ತು ಮಣಿಪುರಗಳಲ್ಲಿ ಆಂತರಿಕ ಸಶಸ್ತ್ರ ಬಂಡಾಯಗಳ ವಿರುದ್ಧದ ಹೋರಾಟದಲ್ಲಿ ಪಾಲೊಂಡಿದ್ದಾರೆ. ಅವರ ಸೇವೆ ಮನ್ನಿಸಿ 2014ರಲ್ಲಿ ರಾಷ್ಟ್ಪತಿ ಅವರಿಗೆ ಜೂನಿಯರ್ ಕಮೀಚನ್ ಅಧಿಕಾರಿ ದರ್ಜಗೆ ಬಡ್ತಿ ನೀಡಿದ್ದಾರೆ.
ನಿವೃತ್ತಿ ನಂತರ ಅವರು ಅಸ್ಸಾಂ ಗಡಿ ಭದ್ರತಾ ಪಡೆಗೆ ಎಸ್‍ಐ ಎಂದು ನೇಮಕಗೊಂಡಿದ್ದರು. ಈಗ ಫಾರಿನರ್ಸ್ ಟ್ರಿಬ್ಯುನಲ್ (ಎಫ್‍ಟಿ) ಸೂಚನೆಯ ಮೇರೆಗೆ ಅದೇ ಪೊಲೀಸರೇ ಅವರನ್ನು ಅರೆಸ್ಟಟ ಮಾಡಿದ್ದಾರೆ. ಅವರನ್ನು ಈಗ ಗೋಲ್‍ಪಾರಾ ಡಿಟೆನ್ಸನ್ ಕೇಂದ್ರದಲ್ಲಿ ಇಡಲಾಗಿದೆ. ಸನಾವುಲ್ಲಾ ಬಂಧನದ ವಿರುದ್ಧ ಹೈಕೋರ್ಟಿಗೆ ಹೋಗಲಿರುವ ವಕೀಲ ಅಮಾನ್ ವಡುದ್ ‘ಕ್ವಿಂಟ್’ನೊಂದಿಗೆ ಮಾತನಾಡಿ, ಫಾರಿನರ್ಸ್ ಟ್ರಿಬ್ಯುನಲ್ ಸರಿಯಾದ ತನಿಖೆ ಮಾಡದೇ ಸನಾವುಲ್ಲಾ ಅವರನ್ನು ವಿದೇಶಿ ನಾಗರಿಕ ಎಂದು ಹೇಳಿರುವುದು ಅಕ್ಷಮ್ಯ, 30 ವರ್ಷ ಈ ದೇಶದ ಸೇನೆಯ ಭಾಗವಾಗಿದ್ದವರಿಗೇ ಈ ಸ್ಥಿತಿಯಾದರೆ ಜನಸಾಮಾನ್ಯರ ಪಾಡೇನು? ಎಂದು ಪ್ರಶ್ನಿಸಿದ್ದಾರೆ.
ಅಸ್ಸಾಂ ಗಡಿ ಭದ್ರತಾ ಪೊಲೀಸರ5ನ್ನೂ ದೂರಿರುವ ಅವರು, ವೆರಿಫಿಕೆಷನ್ ರಿಪೋರ್ಟಿನಲ್ಲಿ ಸನಾವುಲ್ಲಾ ಒಬ್ಬ ದಿನಗೂಲಿ ಕಾರ್ಮಿಕ ಎಂದು ಉಲ್ಲೇಖಿಸಿದ್ದಾರೆ ಎಂದೂ ತಿಳಿಸಿದ್ದಾರೆ. ಎಫ್‍ಟಿ ವರದಿಯಲ್ಲಿ ಸನಾವುಲ್ಲಾ ವಿದೇಶಿ ಎಂದು ನಿರ್ಧರಿಸಲು, ‘1986ರ ಮತದಾರರ ಪಟ್ಟಿಯಲ್ಲಿ 20 ವರ್ಷದವರಾಗಿದ್ದ ಅವರು ತಮ್ಮ ಹೆಸರನ್ನು ನೋಂದಾಯಿಸಿರಲಿಲ್ಲ’ ಎಂಬ ವಿಚುತ್ರ ಕಾರಣವನ್ನೂ ನೀಡಲಾಗಿದೆ. ಆದರೆ, ಮತದಾನದ ಕನಿಷ್ಠ ವಯಸ್ಸನ್ನು 21ರಿಂದ 18ಕ್ಕೆ ಇಳಿಸಿದ್ದು 1989ರಲ್ಲಿ ಎಂಬ ವಾಸ್ತವವನ್ನೂ ಕಡೆಗಣಿಸಲಾಗಿದೆ.
‘ಕೋರ್ಟಿನ ಆದೇಶದ ಮೇರೆಗೆ ಸನಾವುಲ್ಲಾ ಅವರನ್ನು ನಾವು ಬಂಧಿಸಿದ್ದೇವೆ. ಎಫ್‍ಟಿ ವರದಿಯೇ ನಮಗೆ ಫೈನಲ್/ ಸನಾವುಲ್ಲಾ ಅವರು ಕೋರ್ಟಿಗೆ ಹೋಗಲು ಅವಕಾಶಗಳಿವೆ’ ಎಂದು ಅನಿನ್‍ಗಾಂವ್‍ನ ಹೆಚ್ಚುವರಿ ಎಸ್‍ಪಿ ಸಂಜೀಬ್ ಸೈಕಿಯಾ ತಿಳಿಸಿದ್ದಾರೆ.
ಕಳೆದ ವರ್ಷವೇ ಈ ಬಗ್ಗೆ ನೋಟಿಸ್ ಬಂದಾದ ಮೇಲೆ ಸನಾವುಲ್ಲಾ ವಿವಿಧ ಪೊಲೀಸ್ ಠಾಣೆಗಳಿಗೆ ತೆರಳಿ ವಿವರ ಪರಿಶೀಲಿಸಿದ್ದಾರೆ. ಆದರೆ, ಬೋಕೊ ಎಫ್‍ಟಿ ವರದಿಯಲ್ಲಿ ಆಗಿಚ್ಯಾ ಗ್ರಾಮದ ಮೊಹಮ್ಮದ್ ಸಮಸ್ಯಲ್ ಹಕ್ ಎಂಬುವರ ಹೆಸರಿದ್ದು, ಅದನ್ನೇ ತಪ್ಪಾಗಿ ನನ್ನ ಮೇಲೆ ಕೇಸಉ ಹೂಡಲು ಎಫ್‍ಟಿ ಬಳಸಿಕೊಂಡಿದ್ದಾರೆ…. 30 ವರ್ಷ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿದ ನನಗೆ ವಿದೇಶಿ ಪಟ್ಟ ಕಟ್ಟಿ ಬಂಧನದಲ್ಲಿ ಇಡುವ ಉಡುಗೊರೆಯನ್ನು ನೀಡಲಾಗುತ್ತಿದೆ’ ಎಂದು ಸ್ವತ: ಸನಾವುಲ್ಲಾ ನ್ಯೂಸ್ 18 ಮಾಧ್ಯಮದ ಮುಂದೆ ಹೇಳಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಗಣಪತಿ ಹಬ್ಬದ ನೆಪದಲ್ಲಿ ಮೈಸೂರಿನಲ್ಲಿ ಸೌಹಾರ್ದತೆ ಕೆಡಿಸಲು ಯತ್ನ? ಭದ್ರತಾ ನಿಯಮಗಳನ್ನೇ ಧಿಕ್ಕರಿಸಿದ BJP ನಾಯಕರು

ಗಣೇಶೋತ್ಸವದ ಮೆರವಣಿಗೆಗಳನ್ನು ನೆಪವಾಗಿಸಿಕೊಂಡು ಕೋಮು ಸೌಹಾರ್ದತೆಗೆ ಧಕ್ಕೆ ತರುವ, ಸೂಕ್ಷ್ಮ ಪ್ರದೇಶಗಳಲ್ಲಿ ಪ್ರಚೋದನಾಕಾರಿ ಘೋಷಣೆಗಳನ್ನು ಕೂಗಿ ಗಲಭೆಗೆ ಪ್ರೇರೇಪಿಸುವ ರಕ್ತದಾಹಿ ಕೃತ್ಯಗಳಿಗೆ ಬ್ರೇಕ್ ಹಾಕಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ....

SIR: ವಿಶೇಷ ತೀವ್ರ ಪರಿಷ್ಕರಣೆ’ ಎಂಬ ಪ್ರಹಸನ, ಆಯೋಗದ ತಪ್ಪುಗಳಿಗೆ ಮತದಾರರು ಪ್ರಾಯಶ್ಚಿತ್ತ ಪಡಬೇಕೇ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಹೆಸರಿನಲ್ಲಿ ರಾಜ್ಯಾದ್ಯಂತ ಮತದಾರರನ್ನು 2002ರ ಮತದಾರರ ಪಟ್ಟಿಯೊಂದಿಗೆ ‘ಮ್ಯಾಪಿಂಗ್’ ಮಾಡುವ ಬೃಹತ್ ಪ್ರಕ್ರಿಯೆಯನ್ನು ಚುನಾವಣಾ ಆಯೋಗವು ಕೈಗೆತ್ತಿಕೊಂಡಿದೆ. 2002ರಲ್ಲಿದ್ದ ದತ್ತಾಂಶವನ್ನು ಇಂದಿನ ಪಟ್ಟಿಯೊಂದಿಗೆ ಹೋಲಿಸಿ,...

ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ್ದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ್‌ಗೆ ಬೆದರಿಕೆ

ಶನಿವಾರ (ಸೆ. 12) ನಡೆದಿದ್ದ ಸುದ್ದಿಗೋಷ್ಠಿಯೊಂದರಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಪ್ರಶ್ನಿಸಿದ ಪತ್ರಕರ್ತೆ ದಿವ್ಯಾ ಶ್ರೀವಾಸ್ತವ ಅವರ ವೀಡಿಯೊ ವೈರಲ್ ಆದ ಬಳಿಕ, ಅವರು ಆನ್‌ಲೈನ್ ಬೆದರಿಕೆಗಳು ಮತ್ತು...

ಅಲಿಗಢ ಮುಸ್ಲಿಂ ವಿವಿ ಪ್ರತಿಭಟನೆಯ ‘ಪಕ್ಷಪಾತಿ’ ನಿರೂಪಣೆ : ಝೀ ನ್ಯೂಸ್‌ಗೆ ₹2 ಲಕ್ಷ ದಂಡ ವಿಧಿಸಿದ ಎನ್‌ಬಿಡಿಎಸ್‌ಎ

ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ (AMU) ನಡೆದ ವಿದ್ಯಾರ್ಥಿ ಪ್ರತಿಭಟನೆಯ ವೇಳೆ ಪ್ಯಾಲೆಸ್ತೀನ್ ಪರ ಘೋಷಣೆಗಳನ್ನು ಕೂಗಿದ ಘಟನೆಯನ್ನು ವರದಿ ಮಾಡುವಾಗ ಪ್ರಸಾರ ನೀತಿ ಸಂಹಿತೆಯನ್ನು ಉಲ್ಲಂಘಿಸಿದೆ ಎಂದು ಪರಿಗಣಿಸಿ, 'ಝೀ ನ್ಯೂಸ್' (Zee...

‘ಕೆಲವರು ಮುಸ್ಲಿಮರನ್ನು ಬೈದ್ರೆ ಮಾತ್ರ ಲೀಡರ್‌ ಆಗೋದು ಅನ್ಕೊಂಡಿದಾರೆ!’: ಆರ್‌. ಅಶೋಕ್‌ ಹಳೆಯ ಹೇಳಿಕೆ ಮುಂದಿಟ್ಟು ಪ್ರಿಯಾಂಕ್ ಖರ್ಗೆ ಟೀಕೆ!

ಮೈಸೂರಿನ ಟಿ. ನರಸೀಪುರದಲ್ಲಿ ಗಣಪತಿ ಮೆರವಣಿಗೆ ಸಾಗುವ ಮಾರ್ಗದ ವಿಚಾರವಾಗಿ ಬಿಜೆಪಿ ಪ್ರತಿಭಟನೆಗೆ ಮುಂದಾಗಿರುವ ಬೆನ್ನಲ್ಲೇ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ವಿರುದ್ಧ ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ...

ಠಾಣೆಗೆ ನುಸುಳುತ್ತೇನೆ ಎಂದ ಪ್ರತಾಪ್ ಸಿಂಹನಿಗೆ ಪರಪ್ಪನ ಜೈಲಿಗೂ ರೆಡಿಯಾಗಿ ಎಂದ ಸಚಿವ ಪ್ರಿಯಾಂಕ್ ಖರ್ಗೆ

ಮಾಜಿ ಸಂಸದ ಪ್ರತಾಪ್ ಸಿಂಹ ಅವರನ್ನು ನೇರವಾಗಿ ಗುರಿಯಾಗಿಸಿಕೊಂಡು ಸಚಿವ ಪ್ರಿಯಾಂಕ್ ಖರ್ಗೆ ತೀವ್ರ ವಾಗ್ದಾಳಿ ನಡೆಸಿದ್ದು, ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸುವ ಅಥವಾ ಅವರಿಗೆ ಬೆದರಿಕೆ ಹಾಕುವ ರೀತಿಯಲ್ಲಿ ಮಾತನಾಡುವವರ ವಿರುದ್ಧ ಸರ್ಕಾರ...

ಆಹಾರ ಪದ್ಧತಿ- ಧಾರ್ಮಿಕ ಆಚರಣೆಗಳನ್ನು ಆರಿಸಿಕೊಳ್ಳಲು ಜನರಿಗೆ ಸ್ವಾತಂತ್ರ್ಯವಿದೆ: ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ

ದುರ್ಗಾ ಪೂಜೆಯ ಸಂದರ್ಭದಲ್ಲಿ ಬಂಗಾಳಿಗಳು ಮಾಂಸಾಹಾರ ಸೇವಿಸುವುದರ ಕುರಿತು ಬಾಗೇಶ್ವರ ಬಾಬಾ ಎಂದೇ ಜನಪ್ರಿಯರಾಗಿರುವ ಧೀರೇಂದ್ರ ಶಾಸ್ತ್ರಿ ಅವರ ಹೇಳಿಕೆಗೆ ಪರೋಕ್ಷವಾಗಿ ಪ್ರತಿಕ್ರಿಯಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಸುವೇಂದು ಅಧಿಕಾರಿ, "ತಮ್ಮ ಆಹಾರ...

ಕರ್ನಾಟಕದಲ್ಲಿ 2 ಗಂಟೆಗಳ ಬೃಹತ್ ಕಾರ್ಯಾಚರಣೆ: 800 ಬಾಲಕಾರ್ಮಿಕರ ರಕ್ಷಣೆ; ಬೆಂಗಳೂರಿನಲ್ಲೇ 503 ಮಕ್ಕಳು

ಬಾಲಕಾರ್ಮಿಕ ಪದ್ಧತಿಯ ವಿರುದ್ಧ ಕರ್ನಾಟಕ ಪೊಲೀಸರು ಹಾಗೂ ಕಾರ್ಮಿಕ ಇಲಾಖೆ ಶನಿವಾರ ರಾಜ್ಯಾದ್ಯಂತ ನಡೆಸಿದ ವಿಶೇಷ ಕಾರ್ಯಾಚರಣೆಯಲ್ಲಿ 800 ಮಕ್ಕಳನ್ನು ರಕ್ಷಿಸಲಾಗಿದೆ. ರಾಜ್ಯದ 962 ಪೊಲೀಸ್ ಠಾಣೆಗಳು ಹಾಗೂ ಘಟಕಗಳ ವ್ಯಾಪ್ತಿಯಲ್ಲಿ 16,951...

‘ದಿ ಹಿಂದೂ’, ‘ದೈನಿಕ್ ಭಾಸ್ಕರ್’ ಗಳಲ್ಲಿ ಅತ್ಯಾಚಾರ ಅಪರಾಧಿ ಗುರ್ಮೀತ್ ರಾಮ್ ರಹೀಮ್ ಸಮರ್ಥಿಸುವ ಜಾಹೀರಾತು: ಓದುಗರಲ್ಲಿ ಕ್ಷಮೆಯಾಚಿಸಿದ ‘ದಿ ಹಿಂದೂ’

ನವದೆಹಲಿ: ಇಬ್ಬರು ಮಹಿಳಾ ಶಿಷ್ಯೆಯರ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿರುವ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್ ಅವರನ್ನು ಸಮರ್ಥಿಸುವ ರೀತಿಯಲ್ಲಿ ಪೂರ್ಣ ಪುಟದ ಮುಖಪುಟ ಜಾಹೀರಾತು...

ದ್ವಿ-ರಾಷ್ಟ್ರ ಪರಿಹಾರ : ಬ್ರಿಕ್ಸ್ ನಿಲುವು ಸ್ವಾಗತಿಸಿದ ಪ್ಯಾಲೆಸ್ತೀನ್

ಪ್ಯಾಲೆಸ್ತೀನ್-ಇಸ್ರೇಲ್ ವಿವಾದಕ್ಕೆ ದ್ವಿ-ರಾಷ್ಟ್ರ ಪರಿಹಾರವನ್ನು ಕಂಡುಕೊಳ್ಳುವಂತೆ ಕರೆ ನೀಡಿರುವ ಬ್ರಿಕ್ಸ್ (BRICS) ಜಂಟಿ ಘೋಷಣೆಯನ್ನು ಪ್ಯಾಲೆಸ್ತೀನ್ ವಿದೇಶಾಂಗ ಮತ್ತು ವಲಸಿಗರ ಸಚಿವಾಲಯವು ಮುಕ್ತಕಂಠದಿಂದ ಸ್ವಾಗತಿಸಿದೆ. ಬ್ರಿಕ್ಸ್‌ ಶೃಂಗಸಭೆ, ಜೆರುಸಲೆಮ್ ಸೇರಿದಂತೆ ಪ್ಯಾಲೆಸ್ತೀನಿಯರನ್ನು ಅವರದೇ ಭೂಮಿಯಿಂದ...