ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ಜನವರಿ 17 ರಂದು ರಾಜಿನಾಮೆ ನೀಡಿದ್ದ ಹರಿಯಾಣದ ಭಾರತೀಯ ರಾಷ್ಟ್ರೀಯ ಲೋಕ್ದಳ (ಐಎನ್ಎಲ್ಡಿ)ಪಕ್ಷದ ಶಾಸಕ ಅಭಯ್ ಸಿಂಗ್ ಚೌಟಾಲ ಸಾವಿರಾರು ರೈತರೊಂದಿಗೆ ಗಾಜಿಪುರ ಗಡಿಯನ್ನು ತಲುಪಿದ್ದಾರೆ.
ಚೌಟಾಲ ಅವರು ಕೇಂದ್ರ ಸರ್ಕಾರದ ಕೃಷಿ ಕಾನೂನನ್ನು ವಿರೋಧಿಸಿ ತಮ್ಮ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ್ದರು. ಶನಿವಾರ (ಇಂದು) ಕಾರುಗಳ ಗುಂಪುಗಳು ಚಲಿಸುತ್ತಿರುವ ಸಿನಿಮೀಯ ವಿಡಿಯೋವೊಂದನ್ನು ಟ್ವಿಟ್ಟರ್ನಲ್ಲಿ ಹಾಕಿದ್ದು, “ಸ್ವಲ್ಪ ಸಮಯದಲ್ಲೇ ಸಾವಿರಾರು ರೈತರೊಂದಿಗೆ ಗಾಜಿಪುರ ಗಡಿಯನ್ನು ತಲುಪಿಲಿದ್ದೇವೆ. ಸರ್ಕಾರದ ಪ್ರತಿ ಪಿತೂರಿಯನ್ನು ಮುರಿದು ಅವರಿಗೆ ಉತ್ತರಿಸಲಿದ್ದೇವೆ” ಎಂದು ಹೇಳಿದ್ದಾರೆ.
ಚೌಟಾಲ ಟ್ವೀಟ್ಟರ್ನಲ್ಲಿ ಹಾಕಿರುವ ವೀಡಿಯೋ ಸಿನಿಮೀಯ ರೀತಿಯದ್ದಾಗಿದ್ದು, ಹಲವಾರು ಕಾರುಗಳಲ್ಲಿ ಅವರು ಗಾಜಿಪುರ್ಗೆ ತೆರಳಿದ್ದಾರೆ. ಹಲವರು ಅವರನ್ನು ಅಭಿನಂಧಿಸಿದ್ದಾರೆ.
थोड़ी देर में हजारों किसानों के साथ गाजीपुर बॉर्डर पहुंच रहा हूँ! सरकार की हर साजिश का मुंह तोड़ जबाव देंगे ||#farmersrprotest #किसान_एकता_जिंदाबाद pic.twitter.com/4etFiDL0dt
— Abhay Singh Chautala (@AbhaySChautala) January 30, 2021
ಇದನ್ನೂ ಓದಿ: ಮೋದಿ ಗೋಡ್ಸೆ ದಿನ ಆಚರಿಸಬಹುದು ಅಷ್ಟೆ: ರೈತ ಮುಖಂಡ ಬಡಗಲಪುರ ನಾಗೇಂದ್ರ
ಜನವರಿ 17 ರಂದು ಅವರು, “ನನಗೆ ಕುರ್ಚಿ ಬೇಡ, ನನ್ನ ದೇಶದ ರೈತನಿಗೆ ಸಂತೋಷ ಬೇಕು! ಸರ್ಕಾರ ಜಾರಿಗೆ ತಂದಿರುವ ಈ ಕರಾಳ ಕಾನೂನುಗಳ ವಿರುದ್ಧ ನಾನು ರಾಜೀನಾಮೆ ನೀಡಿದ್ದೇನೆ. ಪ್ರತಿಪಕ್ಷದಲ್ಲಿ ಕುಳಿತಿರುವ ಇತರ ಎಲ್ಲ ನಾಯಕರು ಮತ್ತು ರೈತರ ಮಕ್ಕಳು ಎನಿಸಿಕೊಂಡವರು ರೈತನೊಂದಿಗೆ ನಿಲ್ಲಬೇಕೆಂದು ನಾನು ವಿನಂತಿಸುತ್ತೇನೆ” ಎಂದು ಟ್ವಿಟ್ಟರ್ನಲ್ಲಿ ಬರೆದುಕೊಂಡಿದ್ದರು. ಜೊತೆಗೆ ರಾಜಿನಾಮೆ ನೀಡುತ್ತಿರುವ ವಿಡಿಯೋವನ್ನು ಕೂಡಾ ಹಾಕಿಕೊಂಡಿದ್ದರು.
मुझे कुर्सी नहीं मेरे देश का किसान खुशहाल चाहिए! सरकार द्वारा लागू इन काले कानूनों के खिलाफ मेने अपना इस्तीफा दे दिया है।
मैं विपक्ष में बैठे अन्य सभी नेताओं ओर किसान पुत्रों से निवेदन करता हूँ कि वो इस संघर्ष की लड़ाई में किसान के साथ खड़े हों ||#FarmerProtests #किसान_आंदोलन pic.twitter.com/cBKUC4LKp7— Abhay Singh Chautala (@AbhaySChautala) January 27, 2021
ಬಿಕೆಯು ನಾಯಕ ರಾಕೇಶ್ ಟಿಕಾಯತ್ ನೇತೃತ್ವದಲ್ಲಿ ಪ್ರತಿಭಟಿಸುತ್ತಿರುವ ಹೋರಾಟಗಾರರನ್ನು ಹೊರಹಾಕಲು ಗುರುವಾರ ರಾತ್ರಿ ಭಾರಿ ಪೊಲೀಸ್ ನಿಯೋಜನೆ ಮಾಡಿದ್ದು ರೈತರ ಭಾವನೆಗಳನ್ನು ಕೆರಳಿಸಿದೆ. ಅದರಲ್ಲೂ ವಿಶೇಷವಾಗಿ ಜಾಟ್ ಸಮುದಾಯದ ರೈತರು ಆಕ್ರೋಶಗೊಂಡಿದ್ದಾರೆ. ಶುಕ್ರವಾರದಿಂದ ಗಾಜಿಪುರ್ ಗಡಿಗಳಲ್ಲಿ ಭಾರಿ ರೈತರು ಜಮಾವಣೆಯಾಗುತ್ತಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಕೇರಳ, ಗೋವಾದ ಬೀಫ್ ಗೋಮಾತೆಯಲ್ಲವೆ: ಬಿಜೆಪಿಗೆ ಸಿದ್ದರಾಮಯ್ಯ ಪ್ರಶ್ನೆ
ಸಭಾ ಮರ್ಯಾದೆ ಉಲ್ಲಂಘಿಸಿದ ಸುವರ್ಣ ನ್ಯೂಸ್ ಪತ್ರಕರ್ತೆ. ರೈತರಿಂದ ಗೋದಿ ಮೀಡಿಯಾ ಎಂದು ಛೀಮಾರಿ