Homeಕರ್ನಾಟಕತೇಜಸ್ವಿ ಸೂರ್ಯರಿಗೆ ಒಂದು ಪತ್ರ

ತೇಜಸ್ವಿ ಸೂರ್ಯರಿಗೆ ಒಂದು ಪತ್ರ

- Advertisement -
- Advertisement -

ಕೋವಿಡ್ ಸೋಂಕಿತರಿಗೆ ಆಸ್ಪತ್ರೆಯಲ್ಲಿ ಹಾಸಿಗೆ ಒದಗಿಸುವ ವಿಷಯದಲ್ಲಿ ದೊಡ್ಡ ಹಗರಣವೇ ಇದೆ. ಇದರ ಹಿಂದೆ ಮುಸ್ಲಿಮರ ಕೈವಾಡವಿದೆ ಎಂದು ಬಹಿರಂಗಗೊಳಿಸಿದ ಬೆಂಗಳೂರಿನ ದಕ್ಷಿಣ ಕ್ಷೇತ್ರದ ಲೋಕಸಭಾ ಸದಸ್ಯ 16 ಜನ ಮುಸ್ಲಿಂ ಗುತ್ತಿಗೆ ನೌಕರರ ಹೆಸರುಗಳನ್ನು ಓದುತ್ತಿದ್ದಂತೆ ಈ ನಾಡಿನ ಬಹುತೇಕ ಜನ ನಂಬಿದ್ದಲ್ಲದೆ ಕೂಡಲೇ ಈಶ್ವರಪ್ಪ ಪ್ರತಿಕ್ರಿಯಿಸಿ ಹಿಂದೂಗಳಿಗೆ ಸಮಸ್ಯೆ ನೀಡುವ ಈ ಸಂಚಿನಲ್ಲಿ ಯಾವುದೋ ಮುಸ್ಲಿಂ ಸಂಘಟನೆ ಕೈವಾಡವಿದೆ ಎಂದುಬಿಟ್ಟರು. ಇದಕ್ಕಿಂತ ಮುಖ್ಯವಾಗಿ ತೇಜಸ್ವಿಸೂರ್ಯ ಎಂಬುವವರು ಮುಸ್ಲಿಮರ ಹೆಸರು ಓದುತ್ತಿರುವಾಗ, ಅಲ್ಲಿದ್ದ ಒಬ್ಬ ಶಾಸಕ ಇದೇನು ಮದರಸ ನಡೆಸುತ್ತಿದ್ದೀರ? ಹಜ್ ಯಾತ್ರೆಯ ಲಿಸ್ಟಾ ಎಂದು ಉದ್ಗಾರ ತೆಗೆದರು. ಈ ಉದ್ಗಾರ ಸಮಂಜಸವೆಂದು ನಂಬಿದ ಜನರು ಸತ್ಯದರ್ಶನವಾದಂತೆ ಮುಸ್ಲಿಮರ ಮೇಲೆ ಸಿಟ್ಟಾದರು. ಈ ಹಿಂದೆ ಸಾವಿರಾರು ವರ್ಷ ಹರಿಜನರ ಹೆಸರು ಹೇಳಿದರೆ ಕಾರಣವಿಲ್ಲದೆ ಸಿಟ್ಟು ಅಸಹನೆ ತೋರುತ್ತಿದ್ದ ಜನ ಈಗ ಆ ಭಾವನೆಯನ್ನ ಮುಸ್ಲಿಮರ ಕಡೆ ತಿರುಗಿಸಿದ್ದಾರೆ. ಮುಸ್ಲಿಮರ ಬಗ್ಗೆ ಯಾವುದೇ ಅಪಪ್ರಚಾರವನ್ನು ಅಲ್ಲಗಳೆಯದೆ ನಂಬುವಂತಹ ವಾತಾವರಣವನ್ನು ಸಂಘಪರಿವಾರದವರು ಮಾಡುತ್ತ ಬಂದಿದ್ದಾರೆ. ಇದನ್ನು ಖಂಡಿಸುವ ದನಿಗಳು ಬಹಳ ಕ್ಷೀಣವಾಗಿದೆ.

ಮುಸ್ಲಿಮರು ಮತ್ತು ದಲಿತರ ಕಡೆಗೆ ನೀವು ಒಂದು ಮುಗುಳುನಗೆ ಬೀರಿದರೆ ಸಾಕು ಅವರು ಅದಕ್ಕಿಂತ ಹೆಚ್ಚಿನ ಪ್ರೀತಿ ತೋರುತ್ತಾರೆ ಎಂದು ಲಂಕೇಶ್ ದಾಖಲಿಸಿದ್ದರು. ಆ ಕೂಡಲೇ ದಲಿತರು ಮತ್ತು ಮುಸ್ಲಿಮರು ತಮ್ಮ ಪರವಾಗಿ ಲಂಕೇಶ್ ಇದ್ದಾರೆ ಎಂದು ಅತೀವ ಪ್ರೀತಿ ವಿಶ್ವಾಸದಲ್ಲಿ ಅವರನ್ನ ನಡೆಸಿಕೊಂಡರು. ವಿವೇಕಾನಂದರನ್ನು ಮೆರೆಸುವ ಪವಿತ್ರ ಹಿಂದೂಗಳು ಅವರ ಒಂದು ಮಾತನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕಿತ್ತು. ಈ ಭಾರತವನ್ನು ಮಸ್ಲಿಂ ದೇಹ ಮತ್ತು ಹಿಂದೂ ತಲೆಯಿಂದ ನಿರ್ಮಿಸಬೇಕು ಎಂಬ ಅವರ ಮಾತನ್ನು ಇಡಿಯಾಗಿ ತೆಗೆದುಕೊಂಡು ನೋಡಿದರೆ ಮುಸ್ಲಿಮರದೇನೂ ಶಕ್ತಿವಂತ ದೇಹ, ಆದರೆ ತೇಜಸ್ವಿ ತಲೆ ದೇಶಕಟ್ಟುವ ಆಲೋಚನೆ ಬಿಟ್ಟು ಶುದ್ಧ ಮನೆಹಾಳತನದಲ್ಲಿ ನಿರತವಾಗಿದೆ ಎನಿಸುತ್ತದೆ. ಆತ ಯಾರೋ ಕೊಟ್ಟ ಮುಸ್ಲಿಂ ಹೆಸರುಗಳನ್ನು ಓದಿದೆ ಎನ್ನುತ್ತಿದ್ದಾರೆ. ಹಾಗೆ ಓದಲು ಕಾರಣ ಆತನಲ್ಲಿರುವ ಮುಸ್ಲಿಂ ದ್ವೇಶ ಮತ್ತು ಪೂರ್ವಗ್ರಹಗಳು. ಹಿಂದೊಮ್ಮೆ ಈತ ಸಿಎಎ ವಿರುದ್ಧದ ಪ್ರತಿಭಟನೆ ವಿಷಯದಲ್ಲಿ ಭಾಷಣ ಮಾಡುತ್ತ ಎದೆಯಲ್ಲಿ ಮೂರಕ್ಷರವಿಲ್ಲದ ಪಂಚರ್ ಹಾಕುವ ಜನರ ಪ್ರತಿಭಟನೆಯಿದು ಎಂದು ಜನರಿಂದ ಶಿಳ್ಳೆ ಚಪ್ಪಾಳೆಗಿಟ್ಟಿಸಿಕೊಂಡುಬಿಟ್ಟಿದ್ದನ್ನ, ಚಪ್ಪಾಳೆ ಶಿಳ್ಳೆ ಹೊಡೆದ ಜನ ಕೂಡ ದೈಹಿಕ ಶ್ರಮವಿಲ್ಲದೆ ಮೆರೆಯುವ ಜನ ಎಂಬುದನ್ನು ಮರೆಯಬಾರದು. ಆಯ್ತು ಪಂಚರ್ ಹಾಕುವ ಜನ ಎಂದು ಮೂದಲಿಸಿದ ತೇಜಸ್ವಿಸೂರ್ಯ ಪಂಚರಾದ ಟೈರ್ ಬಿಚ್ಚಿ ಪಂಚರ್ ಹಾಕಿ ಮತ್ತೆ ಅದನ್ನು ಗಾಡಿಗೆ ಫಿಕ್ಸ್ ಮಾಡಿದ್ದಾರೆಯೇ? ಈ ಕೆಲಸವನ್ನ ಆತನ ಪರಂಪರೆಯವರೇ ಮಾಡಿಲ್ಲ.

ತೇಜಸ್ವಿ ಸೂರ್ಯ

ನಾನು ಇನ್ನೊಂದು ಸವಾಲನ್ನು ಈತನಿಗೆ ಹಾಕುತ್ತೇನೆ. ಹೆಗಲ ಮೇಲೆ ನೇಗಿಲು-ನೊಗ ಹೊತ್ತು, ಅದನ್ನು ಎತ್ತಿ ಹಿಡಿದುಕೊಂಡು, ಹೊತ್ತು ಹುಟ್ಟುವುದಕ್ಕೂ ಮುನ್ನ ಹೋಗಿ ಮೂವ್ವತ್ತು ಕುಂಟೆ ಹೊಲ ಉಳಲಿ ನೋಡೋಣ! ಇದು ಸಾಧ್ಯವಿದ್ದರೆ ದೆಹಲಿಯ ಗಡಿಯಲ್ಲಿ ಕೂತ ರೈತರ ಬದುಕು ಅರಿವಿಗೆ ಬರುತ್ತಿತ್ತು. ನಿಮ್ಮಂತಹ ರಾಜಕಾರಣಿಗಳು, ದೇಶದ ರಾಷ್ಟ್ರಪತಿ, ಪ್ರಧಾನಿ ಎಲ್ಲರೂ ಈ ಭೂಮಿಯಿಂದ ಬಂದ ಧಾನ್ಯವನ್ನೇ ತಿನ್ನುವುದು. ಆ ಕಾರಣಕ್ಕಾದರೂ ದೈಹಿಕ ಶ್ರಮದಿಂದ ಬೆಳೆದ ಅನ್ನದಾತನ ಕೂಗು ನಿಮ್ಮ ಅರಿವಿಗೆ ಬರಬೇಕಿತ್ತು. ಏನು ಮಾಡುವುದು ಮನುಧರ್ಮಶಾಸ್ತ್ರದಲ್ಲೇ ಬೇಸಾಯಕ್ಕೆ ಕಿಂಚಿತ್ ಬೆಲೆಯಿಲ್ಲ!

ಇನ್ನು ಎದೆಯಲ್ಲಿ ಮೂರಕ್ಷರ ಇಲ್ಲದವರು ಎಂದಿದ್ದಿರಿ. ಇದಕ್ಕು ನೀವು ಪ್ರತಿನಿಧಿಸುವ ಪರಂಪರೆಯವರೇ ಕಾರಣ ಅಲ್ಲವೇ? ಶೂದ್ರರನ್ನ ವಿದ್ಯಾವಂಚಿತರನ್ನಾಗಿಸಬೇಕು ಎಂಬುದು ನೀವು ಮೆರಸುವ ಶಾಸ್ತ್ರದಲ್ಲೇ ಇರುವಾಗ, ಮೂರಕ್ಷರದಿಂದ ವಂಚಿತರಾಗರುವುದಕ್ಕೆ ಯಾರು ಹೊಣೆಗಾರರು? ನಿಮ್ಮ ಕೆಟ್ಟ ಗಾಡಿಯನ್ನು ರಿಪೇರಿ ಮಾಡುವ ಗ್ಯಾರೇಜಿನ ಕಾರ್ಯಕ್ಷಮತೆ ಮೂರಕ್ಷರಕ್ಕಿಂತ ಮಿಗಿಲಲ್ಲವೇ!

ಕೊನೆಗೆ ಕ್ಷಮೆ ಕೇಳುವಂತಾಯ್ತು, ಪತ್ರಕರ್ತರ ಪ್ರಶ್ನೆಗೆ ಉತ್ತರಿಸಲಾಗದ ನಿಮ್ಮ ಮುಖದಲ್ಲಿ ಅಪರಾದದ ಛಾಯೆಯಿತ್ತು. ಇದು ನಿಮ್ಮನ್ನ ಎದುರಿಸಿದವರ ಗೆಲವು. ಹಿಂದೂ ಧರ್ಮದ ಜಾತೀಯತೆ, ಅಸ್ಪೃಶ್ಯತೆಯನ್ನು ಸಹಿಸಲಸಾಧ್ಯವಾಗಿ ಅನ್ಯ ಧರ್ಮಕ್ಕೆ ಹೋದವರು ಅಲ್ಲೂ ಇರಲಾಗದೆ ಅಭದ್ರತೆ ಎದುರಿಸುವಂತಹ ಸ್ಥಿತಿಯನ್ನು ನಿರ್ಮಾಣ ಮಾಡುವುದರಲ್ಲಿ ನಿಮ್ಮಂತವರ ಕೊಡುಗೆ ದೊಡ್ಡದಿದೆ. ಇಂತಹ ಕೆಲಸಗಳಿಂದ ಈ ದೇಶದ ಯಾವ ಪ್ರಜೆಯೂ ನೆಮ್ಮದಿಯಾಗಿಲ್ಲ. ನಮ್ಮ ಕಣ್ಣೆದುರೇ ನೀವು ಟಿಪ್ಪು ಮತಾಂಧ ಕನ್ನಡ ವಿರೋಧಿ ಎಂಬೆರೆಡು ಸುಳ್ಳುಗಳನ್ನು ಹರಿಯಬಿಟ್ಟಿರಿ; ಆತ ಮತಾಂಧನಾಗಿದ್ದರೆ ಆತನ ಸಚಿವ ಸಂಪುಟದಲ್ಲಿ ಐದು ಜನ ಬ್ರಾಹ್ಮಣರು ಮೂವರು ಮುಸ್ಲಿಮರಿರುತ್ತಿರಲಿಲ್ಲ. ದಿವಾನ್ ಪೂರ್ಣಯ್ಯನೇ ಬ್ರಾಹ್ಮಣನಾಗಿದ್ದು ಬಹುಸಂಖ್ಯಾತ ಒಕ್ಕಲಿಗರೇ ಇದ್ದ ಪ್ರದೇಶದಲ್ಲಿ ರಾಜನಾಗಿದ್ದ ಆತ ಪ್ರಜೆಗಳು ಮೆಚ್ಚುವ ಆಡಳಿತ ನೀಡಿದ್ದ. ಗ್ರಾಮದೇವತೆಗಳಿಗೆ ಕೊಡುತ್ತಿದ್ದ ನರಬಲಿ ನಿಲ್ಲಿಸಿದ್ದ. ಜೀತಪದ್ಧತಿ ನಿಲ್ಲಿಸಿದ್ದ. ರೈತರಿಗೆ ಸುಲಭದ ಬೆಲೆಯಲ್ಲಿ ಗಾಡಿಗಳನ್ನು ನಿರ್ಮಿಸಿ ಕೊಡಿಸಿದ್ದ. ಇವತ್ತಿಗೂ ಗಂಜಾಂಗಾಡಿ ಎಂಬ ಹೆಸರಿದೆ ಗೊತ್ತೆ, ಇವೆಲ್ಲ ನಿಮ್ಮ ಮತಾಂಧ ಕಣ್ಣಿಗೆ ಕಾಣುವುದಿಲ್ಲ.

ಇನ್ನ ಶಂಕರಮೂರ್ತಿ ಎಂಬ ರಾಜಕಾರಣಿ ಹೋದಲ್ಲಿ ಬಂದಲ್ಲಿ ಟಿಪ್ಪು ಕನ್ನಡ ವಿರೋಧಿ ಎಂದು ಸಾರುತ್ತ ಬಂದು ಈಗ ಮೂಲೆ ಸೇರಿದ್ದು ಇತಿಹಾಸ. ಆದರೆ ಟಿಪ್ಪು ಶೃಂಗೇರಿಗೆ ಬರೆದ ಪತ್ರಗಳು ಕನ್ನಡದಲ್ಲಿವೆ. ಈ ಬಗ್ಗೆ ಶೃಂಗೇರಿಯವರು ಉತ್ತರ ಕೊಡದೆ ಮೌನವಾಗಿದ್ದು ಆಶ್ಚರ್ಯ ಹುಟ್ಟಿಸಲಿಲ್ಲ. ನಾನು ಮೊದಲ ಬಾರಿ ಶೃಂಗೇರಿಗೆ ಹೋದಾಗ ಅಲ್ಲಿ ಬರೀ ಬ್ರಾಹ್ಮಣರೇ ಇದ್ದಾರೆಂದು ಭಾವಿಸಿದ್ದೆ. ಆದರೆ ಊರ ಹೆಬ್ಬಾಗಿಲಲ್ಲೇ ಮುಸ್ಲಿಮರಿದ್ದರು. ಈಗ ನೆನಪಿಸಿಕೊಂಡರೆ ಅವರಿಲ್ಲದಿದ್ದರೆ ಗತಿಯೇನು ಅನ್ನಿಸುತ್ತಿದೆ. ಏಕೆಂದರೆ ಶೃಂಗೇರಿಯ ಪ್ರಕಾಶ್ ದೀಕ್ಷಿತರು ಕೊರೊನಾದಿಂದ ತೀರಿಕೊಂಡಾಗ ಇಡೀ ಶೃಂಗೇರಿಯ ಜನ ಅತ್ತ ಸುಳಿಯದೆ ಸಂಸ್ಕಾರ ಕಾದಂಬರಿಯನ್ನು ನೆನಪಿಗೆ ತಂದರು. ಆಗ ಮುಸ್ಲಿಂ ಸಂಘಟನೆಯ ಹುಡುಗರು ಬಂದು ಓಡಾಡಿ ಸೌದೆ ಸಂಗ್ರಹಿಸಿ ಪ್ರಕಾಶ್ ದೀಕ್ಷಿತರ ಶವ ಸಂಸ್ಕಾರವನ್ನು ಬ್ರಾಹ್ಮಣ ಪದ್ಧತಿಯ ಪ್ರಕಾರ ನೆರವೇರಿಸಿದ್ದಾರೆ. ಇನ್ನ ಬೆಂಗಳೂರಿನ ಬೆಡ್ ಹಗರಣದಲ್ಲಿ ಮುಸ್ಲಿಂ ಸಂಘಟನೆ ಕೈವಾಡವಿರಬಹುದೆಂದು ಸುಳ್ಳು ಹೇಳಿದ ಈಶ್ವರಪ್ಪನ ಕ್ಷೇತ್ರದಲ್ಲಿ ಈಗಾಗಲೇ ಏಳೆಂಟು ಶವಗಳನ್ನು ಹಿಂದೂ ಸಂಸ್ಕೃತಿಯಂತೆ ಮುಸ್ಲಿಮರು ಅಂತ್ಯಸಂಸ್ಕಾರ ಮಾಡಿದ್ದಾರೆ.

ಇದಿಷ್ಟೆ ಅಲ್ಲ ಶಿಕಾರಿಪುರ, ಸಾಗರ ಪ್ರದೇಶದಲ್ಲಿ ಮುಸ್ಲಿಂ ಸಂಘಟನೆಗಳಾದ ಪಿಎಫ್‌ಐ ಮತ್ತು ಎಸ್‌ಡಿಪಿಐ ಸಂಘಟನೆಯ ಯುವಕರು ನಿರಂತರವಾಗಿ ಕೊರೊನಾ ಬಲಿಪಡೆದ ಕಾರಣಕ್ಕೆ ಅನಾಥವಾದ ಶವಗಳಿಗೆ ಸಂಸ್ಕಾರ ಮಾಡುತ್ತಿದ್ದಾರೆ. ಈಶ್ವರಪ್ಪ ಮತ್ತು ತೇಜಸ್ವಿ ಈ ಯುವಕರ ಪಟ್ಟಿ ತಯಾರಿಸಿ ಸಭೆ ಸಮಾರಂಭದಲ್ಲಿ ಓದಿ ಪ್ರಾಯಶ್ಚಿತ್ತ ಮಾಡಿಕೊಳ್ಳುವುದು ಒಳ್ಳೆಯದು. ಇದೆಲ್ಲಕ್ಕಿಂತ ಮುಖ್ಯವಾಗಿ ನಾವೆಲ್ಲ ಒಂದು ವೇಳೆ ಕೊರೊನಾಕ್ಕೆ ಬಲಿಯಾದರೆ ಹೆದರುವ ಅಗತ್ಯವಿಲ್ಲ! ಮುಸ್ಲಿಂ ಸಂಘಟನೆ ಹುಡುಗರು ಬಂದು ನಮ್ಮ ಪದ್ಧತಿಯಂತೆಯೇ ಸಂಸ್ಕಾರ ಮಾಡಿ ನಮ್ಮನ್ನು ಸ್ವರ್ಗಕ್ಕೊ ನರಕಕ್ಕೊ ಸೇರಿಸುವುದರಲ್ಲಿ ಯಾವ ಸಂಶಯವೂ ಇಲ್ಲ. ಯಾವುದಕ್ಕೂ ಮೊದಲು ಅವರಿಗೆಲ್ಲಾ ಸನ್ಮಾನ ಮಾಡಿ ನಮ್ಮ ಸಂಸ್ಕಾರದ ಖರ್ಚನ್ನು ಈಗಲೇ ಕೊಟ್ಟುಬಿಟ್ಟರೆ ಋಣಭಾರವಿಲ್ಲದೆ ನಿರ್ಗಮಿಸಬಹುದು!


ಇದನ್ನೂ ಓದಿ: ಖಾಸಗಿ ಆಸ್ಪತ್ರೆಯಲ್ಲಿ ಹಣ ನೀಡಿ ಲಸಿಕೆ ಹಾಕಿಸಿಕೊಳ್ಳಿ ಎಂದು ತೇಜಸ್ವಿ ಸೂರ್ಯ ಪ್ರಚಾರ: ತರಾಟೆ ತೆಗೆದುಕೊಂಡ ಜನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...