Homeಕರ್ನಾಟಕತೇಜಸ್ವಿ ಸೂರ್ಯರಿಗೆ ಒಂದು ಪತ್ರ

ತೇಜಸ್ವಿ ಸೂರ್ಯರಿಗೆ ಒಂದು ಪತ್ರ

- Advertisement -
- Advertisement -

ಕೋವಿಡ್ ಸೋಂಕಿತರಿಗೆ ಆಸ್ಪತ್ರೆಯಲ್ಲಿ ಹಾಸಿಗೆ ಒದಗಿಸುವ ವಿಷಯದಲ್ಲಿ ದೊಡ್ಡ ಹಗರಣವೇ ಇದೆ. ಇದರ ಹಿಂದೆ ಮುಸ್ಲಿಮರ ಕೈವಾಡವಿದೆ ಎಂದು ಬಹಿರಂಗಗೊಳಿಸಿದ ಬೆಂಗಳೂರಿನ ದಕ್ಷಿಣ ಕ್ಷೇತ್ರದ ಲೋಕಸಭಾ ಸದಸ್ಯ 16 ಜನ ಮುಸ್ಲಿಂ ಗುತ್ತಿಗೆ ನೌಕರರ ಹೆಸರುಗಳನ್ನು ಓದುತ್ತಿದ್ದಂತೆ ಈ ನಾಡಿನ ಬಹುತೇಕ ಜನ ನಂಬಿದ್ದಲ್ಲದೆ ಕೂಡಲೇ ಈಶ್ವರಪ್ಪ ಪ್ರತಿಕ್ರಿಯಿಸಿ ಹಿಂದೂಗಳಿಗೆ ಸಮಸ್ಯೆ ನೀಡುವ ಈ ಸಂಚಿನಲ್ಲಿ ಯಾವುದೋ ಮುಸ್ಲಿಂ ಸಂಘಟನೆ ಕೈವಾಡವಿದೆ ಎಂದುಬಿಟ್ಟರು. ಇದಕ್ಕಿಂತ ಮುಖ್ಯವಾಗಿ ತೇಜಸ್ವಿಸೂರ್ಯ ಎಂಬುವವರು ಮುಸ್ಲಿಮರ ಹೆಸರು ಓದುತ್ತಿರುವಾಗ, ಅಲ್ಲಿದ್ದ ಒಬ್ಬ ಶಾಸಕ ಇದೇನು ಮದರಸ ನಡೆಸುತ್ತಿದ್ದೀರ? ಹಜ್ ಯಾತ್ರೆಯ ಲಿಸ್ಟಾ ಎಂದು ಉದ್ಗಾರ ತೆಗೆದರು. ಈ ಉದ್ಗಾರ ಸಮಂಜಸವೆಂದು ನಂಬಿದ ಜನರು ಸತ್ಯದರ್ಶನವಾದಂತೆ ಮುಸ್ಲಿಮರ ಮೇಲೆ ಸಿಟ್ಟಾದರು. ಈ ಹಿಂದೆ ಸಾವಿರಾರು ವರ್ಷ ಹರಿಜನರ ಹೆಸರು ಹೇಳಿದರೆ ಕಾರಣವಿಲ್ಲದೆ ಸಿಟ್ಟು ಅಸಹನೆ ತೋರುತ್ತಿದ್ದ ಜನ ಈಗ ಆ ಭಾವನೆಯನ್ನ ಮುಸ್ಲಿಮರ ಕಡೆ ತಿರುಗಿಸಿದ್ದಾರೆ. ಮುಸ್ಲಿಮರ ಬಗ್ಗೆ ಯಾವುದೇ ಅಪಪ್ರಚಾರವನ್ನು ಅಲ್ಲಗಳೆಯದೆ ನಂಬುವಂತಹ ವಾತಾವರಣವನ್ನು ಸಂಘಪರಿವಾರದವರು ಮಾಡುತ್ತ ಬಂದಿದ್ದಾರೆ. ಇದನ್ನು ಖಂಡಿಸುವ ದನಿಗಳು ಬಹಳ ಕ್ಷೀಣವಾಗಿದೆ.

ಮುಸ್ಲಿಮರು ಮತ್ತು ದಲಿತರ ಕಡೆಗೆ ನೀವು ಒಂದು ಮುಗುಳುನಗೆ ಬೀರಿದರೆ ಸಾಕು ಅವರು ಅದಕ್ಕಿಂತ ಹೆಚ್ಚಿನ ಪ್ರೀತಿ ತೋರುತ್ತಾರೆ ಎಂದು ಲಂಕೇಶ್ ದಾಖಲಿಸಿದ್ದರು. ಆ ಕೂಡಲೇ ದಲಿತರು ಮತ್ತು ಮುಸ್ಲಿಮರು ತಮ್ಮ ಪರವಾಗಿ ಲಂಕೇಶ್ ಇದ್ದಾರೆ ಎಂದು ಅತೀವ ಪ್ರೀತಿ ವಿಶ್ವಾಸದಲ್ಲಿ ಅವರನ್ನ ನಡೆಸಿಕೊಂಡರು. ವಿವೇಕಾನಂದರನ್ನು ಮೆರೆಸುವ ಪವಿತ್ರ ಹಿಂದೂಗಳು ಅವರ ಒಂದು ಮಾತನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕಿತ್ತು. ಈ ಭಾರತವನ್ನು ಮಸ್ಲಿಂ ದೇಹ ಮತ್ತು ಹಿಂದೂ ತಲೆಯಿಂದ ನಿರ್ಮಿಸಬೇಕು ಎಂಬ ಅವರ ಮಾತನ್ನು ಇಡಿಯಾಗಿ ತೆಗೆದುಕೊಂಡು ನೋಡಿದರೆ ಮುಸ್ಲಿಮರದೇನೂ ಶಕ್ತಿವಂತ ದೇಹ, ಆದರೆ ತೇಜಸ್ವಿ ತಲೆ ದೇಶಕಟ್ಟುವ ಆಲೋಚನೆ ಬಿಟ್ಟು ಶುದ್ಧ ಮನೆಹಾಳತನದಲ್ಲಿ ನಿರತವಾಗಿದೆ ಎನಿಸುತ್ತದೆ. ಆತ ಯಾರೋ ಕೊಟ್ಟ ಮುಸ್ಲಿಂ ಹೆಸರುಗಳನ್ನು ಓದಿದೆ ಎನ್ನುತ್ತಿದ್ದಾರೆ. ಹಾಗೆ ಓದಲು ಕಾರಣ ಆತನಲ್ಲಿರುವ ಮುಸ್ಲಿಂ ದ್ವೇಶ ಮತ್ತು ಪೂರ್ವಗ್ರಹಗಳು. ಹಿಂದೊಮ್ಮೆ ಈತ ಸಿಎಎ ವಿರುದ್ಧದ ಪ್ರತಿಭಟನೆ ವಿಷಯದಲ್ಲಿ ಭಾಷಣ ಮಾಡುತ್ತ ಎದೆಯಲ್ಲಿ ಮೂರಕ್ಷರವಿಲ್ಲದ ಪಂಚರ್ ಹಾಕುವ ಜನರ ಪ್ರತಿಭಟನೆಯಿದು ಎಂದು ಜನರಿಂದ ಶಿಳ್ಳೆ ಚಪ್ಪಾಳೆಗಿಟ್ಟಿಸಿಕೊಂಡುಬಿಟ್ಟಿದ್ದನ್ನ, ಚಪ್ಪಾಳೆ ಶಿಳ್ಳೆ ಹೊಡೆದ ಜನ ಕೂಡ ದೈಹಿಕ ಶ್ರಮವಿಲ್ಲದೆ ಮೆರೆಯುವ ಜನ ಎಂಬುದನ್ನು ಮರೆಯಬಾರದು. ಆಯ್ತು ಪಂಚರ್ ಹಾಕುವ ಜನ ಎಂದು ಮೂದಲಿಸಿದ ತೇಜಸ್ವಿಸೂರ್ಯ ಪಂಚರಾದ ಟೈರ್ ಬಿಚ್ಚಿ ಪಂಚರ್ ಹಾಕಿ ಮತ್ತೆ ಅದನ್ನು ಗಾಡಿಗೆ ಫಿಕ್ಸ್ ಮಾಡಿದ್ದಾರೆಯೇ? ಈ ಕೆಲಸವನ್ನ ಆತನ ಪರಂಪರೆಯವರೇ ಮಾಡಿಲ್ಲ.

ತೇಜಸ್ವಿ ಸೂರ್ಯ

ನಾನು ಇನ್ನೊಂದು ಸವಾಲನ್ನು ಈತನಿಗೆ ಹಾಕುತ್ತೇನೆ. ಹೆಗಲ ಮೇಲೆ ನೇಗಿಲು-ನೊಗ ಹೊತ್ತು, ಅದನ್ನು ಎತ್ತಿ ಹಿಡಿದುಕೊಂಡು, ಹೊತ್ತು ಹುಟ್ಟುವುದಕ್ಕೂ ಮುನ್ನ ಹೋಗಿ ಮೂವ್ವತ್ತು ಕುಂಟೆ ಹೊಲ ಉಳಲಿ ನೋಡೋಣ! ಇದು ಸಾಧ್ಯವಿದ್ದರೆ ದೆಹಲಿಯ ಗಡಿಯಲ್ಲಿ ಕೂತ ರೈತರ ಬದುಕು ಅರಿವಿಗೆ ಬರುತ್ತಿತ್ತು. ನಿಮ್ಮಂತಹ ರಾಜಕಾರಣಿಗಳು, ದೇಶದ ರಾಷ್ಟ್ರಪತಿ, ಪ್ರಧಾನಿ ಎಲ್ಲರೂ ಈ ಭೂಮಿಯಿಂದ ಬಂದ ಧಾನ್ಯವನ್ನೇ ತಿನ್ನುವುದು. ಆ ಕಾರಣಕ್ಕಾದರೂ ದೈಹಿಕ ಶ್ರಮದಿಂದ ಬೆಳೆದ ಅನ್ನದಾತನ ಕೂಗು ನಿಮ್ಮ ಅರಿವಿಗೆ ಬರಬೇಕಿತ್ತು. ಏನು ಮಾಡುವುದು ಮನುಧರ್ಮಶಾಸ್ತ್ರದಲ್ಲೇ ಬೇಸಾಯಕ್ಕೆ ಕಿಂಚಿತ್ ಬೆಲೆಯಿಲ್ಲ!

ಇನ್ನು ಎದೆಯಲ್ಲಿ ಮೂರಕ್ಷರ ಇಲ್ಲದವರು ಎಂದಿದ್ದಿರಿ. ಇದಕ್ಕು ನೀವು ಪ್ರತಿನಿಧಿಸುವ ಪರಂಪರೆಯವರೇ ಕಾರಣ ಅಲ್ಲವೇ? ಶೂದ್ರರನ್ನ ವಿದ್ಯಾವಂಚಿತರನ್ನಾಗಿಸಬೇಕು ಎಂಬುದು ನೀವು ಮೆರಸುವ ಶಾಸ್ತ್ರದಲ್ಲೇ ಇರುವಾಗ, ಮೂರಕ್ಷರದಿಂದ ವಂಚಿತರಾಗರುವುದಕ್ಕೆ ಯಾರು ಹೊಣೆಗಾರರು? ನಿಮ್ಮ ಕೆಟ್ಟ ಗಾಡಿಯನ್ನು ರಿಪೇರಿ ಮಾಡುವ ಗ್ಯಾರೇಜಿನ ಕಾರ್ಯಕ್ಷಮತೆ ಮೂರಕ್ಷರಕ್ಕಿಂತ ಮಿಗಿಲಲ್ಲವೇ!

ಕೊನೆಗೆ ಕ್ಷಮೆ ಕೇಳುವಂತಾಯ್ತು, ಪತ್ರಕರ್ತರ ಪ್ರಶ್ನೆಗೆ ಉತ್ತರಿಸಲಾಗದ ನಿಮ್ಮ ಮುಖದಲ್ಲಿ ಅಪರಾದದ ಛಾಯೆಯಿತ್ತು. ಇದು ನಿಮ್ಮನ್ನ ಎದುರಿಸಿದವರ ಗೆಲವು. ಹಿಂದೂ ಧರ್ಮದ ಜಾತೀಯತೆ, ಅಸ್ಪೃಶ್ಯತೆಯನ್ನು ಸಹಿಸಲಸಾಧ್ಯವಾಗಿ ಅನ್ಯ ಧರ್ಮಕ್ಕೆ ಹೋದವರು ಅಲ್ಲೂ ಇರಲಾಗದೆ ಅಭದ್ರತೆ ಎದುರಿಸುವಂತಹ ಸ್ಥಿತಿಯನ್ನು ನಿರ್ಮಾಣ ಮಾಡುವುದರಲ್ಲಿ ನಿಮ್ಮಂತವರ ಕೊಡುಗೆ ದೊಡ್ಡದಿದೆ. ಇಂತಹ ಕೆಲಸಗಳಿಂದ ಈ ದೇಶದ ಯಾವ ಪ್ರಜೆಯೂ ನೆಮ್ಮದಿಯಾಗಿಲ್ಲ. ನಮ್ಮ ಕಣ್ಣೆದುರೇ ನೀವು ಟಿಪ್ಪು ಮತಾಂಧ ಕನ್ನಡ ವಿರೋಧಿ ಎಂಬೆರೆಡು ಸುಳ್ಳುಗಳನ್ನು ಹರಿಯಬಿಟ್ಟಿರಿ; ಆತ ಮತಾಂಧನಾಗಿದ್ದರೆ ಆತನ ಸಚಿವ ಸಂಪುಟದಲ್ಲಿ ಐದು ಜನ ಬ್ರಾಹ್ಮಣರು ಮೂವರು ಮುಸ್ಲಿಮರಿರುತ್ತಿರಲಿಲ್ಲ. ದಿವಾನ್ ಪೂರ್ಣಯ್ಯನೇ ಬ್ರಾಹ್ಮಣನಾಗಿದ್ದು ಬಹುಸಂಖ್ಯಾತ ಒಕ್ಕಲಿಗರೇ ಇದ್ದ ಪ್ರದೇಶದಲ್ಲಿ ರಾಜನಾಗಿದ್ದ ಆತ ಪ್ರಜೆಗಳು ಮೆಚ್ಚುವ ಆಡಳಿತ ನೀಡಿದ್ದ. ಗ್ರಾಮದೇವತೆಗಳಿಗೆ ಕೊಡುತ್ತಿದ್ದ ನರಬಲಿ ನಿಲ್ಲಿಸಿದ್ದ. ಜೀತಪದ್ಧತಿ ನಿಲ್ಲಿಸಿದ್ದ. ರೈತರಿಗೆ ಸುಲಭದ ಬೆಲೆಯಲ್ಲಿ ಗಾಡಿಗಳನ್ನು ನಿರ್ಮಿಸಿ ಕೊಡಿಸಿದ್ದ. ಇವತ್ತಿಗೂ ಗಂಜಾಂಗಾಡಿ ಎಂಬ ಹೆಸರಿದೆ ಗೊತ್ತೆ, ಇವೆಲ್ಲ ನಿಮ್ಮ ಮತಾಂಧ ಕಣ್ಣಿಗೆ ಕಾಣುವುದಿಲ್ಲ.

ಇನ್ನ ಶಂಕರಮೂರ್ತಿ ಎಂಬ ರಾಜಕಾರಣಿ ಹೋದಲ್ಲಿ ಬಂದಲ್ಲಿ ಟಿಪ್ಪು ಕನ್ನಡ ವಿರೋಧಿ ಎಂದು ಸಾರುತ್ತ ಬಂದು ಈಗ ಮೂಲೆ ಸೇರಿದ್ದು ಇತಿಹಾಸ. ಆದರೆ ಟಿಪ್ಪು ಶೃಂಗೇರಿಗೆ ಬರೆದ ಪತ್ರಗಳು ಕನ್ನಡದಲ್ಲಿವೆ. ಈ ಬಗ್ಗೆ ಶೃಂಗೇರಿಯವರು ಉತ್ತರ ಕೊಡದೆ ಮೌನವಾಗಿದ್ದು ಆಶ್ಚರ್ಯ ಹುಟ್ಟಿಸಲಿಲ್ಲ. ನಾನು ಮೊದಲ ಬಾರಿ ಶೃಂಗೇರಿಗೆ ಹೋದಾಗ ಅಲ್ಲಿ ಬರೀ ಬ್ರಾಹ್ಮಣರೇ ಇದ್ದಾರೆಂದು ಭಾವಿಸಿದ್ದೆ. ಆದರೆ ಊರ ಹೆಬ್ಬಾಗಿಲಲ್ಲೇ ಮುಸ್ಲಿಮರಿದ್ದರು. ಈಗ ನೆನಪಿಸಿಕೊಂಡರೆ ಅವರಿಲ್ಲದಿದ್ದರೆ ಗತಿಯೇನು ಅನ್ನಿಸುತ್ತಿದೆ. ಏಕೆಂದರೆ ಶೃಂಗೇರಿಯ ಪ್ರಕಾಶ್ ದೀಕ್ಷಿತರು ಕೊರೊನಾದಿಂದ ತೀರಿಕೊಂಡಾಗ ಇಡೀ ಶೃಂಗೇರಿಯ ಜನ ಅತ್ತ ಸುಳಿಯದೆ ಸಂಸ್ಕಾರ ಕಾದಂಬರಿಯನ್ನು ನೆನಪಿಗೆ ತಂದರು. ಆಗ ಮುಸ್ಲಿಂ ಸಂಘಟನೆಯ ಹುಡುಗರು ಬಂದು ಓಡಾಡಿ ಸೌದೆ ಸಂಗ್ರಹಿಸಿ ಪ್ರಕಾಶ್ ದೀಕ್ಷಿತರ ಶವ ಸಂಸ್ಕಾರವನ್ನು ಬ್ರಾಹ್ಮಣ ಪದ್ಧತಿಯ ಪ್ರಕಾರ ನೆರವೇರಿಸಿದ್ದಾರೆ. ಇನ್ನ ಬೆಂಗಳೂರಿನ ಬೆಡ್ ಹಗರಣದಲ್ಲಿ ಮುಸ್ಲಿಂ ಸಂಘಟನೆ ಕೈವಾಡವಿರಬಹುದೆಂದು ಸುಳ್ಳು ಹೇಳಿದ ಈಶ್ವರಪ್ಪನ ಕ್ಷೇತ್ರದಲ್ಲಿ ಈಗಾಗಲೇ ಏಳೆಂಟು ಶವಗಳನ್ನು ಹಿಂದೂ ಸಂಸ್ಕೃತಿಯಂತೆ ಮುಸ್ಲಿಮರು ಅಂತ್ಯಸಂಸ್ಕಾರ ಮಾಡಿದ್ದಾರೆ.

ಇದಿಷ್ಟೆ ಅಲ್ಲ ಶಿಕಾರಿಪುರ, ಸಾಗರ ಪ್ರದೇಶದಲ್ಲಿ ಮುಸ್ಲಿಂ ಸಂಘಟನೆಗಳಾದ ಪಿಎಫ್‌ಐ ಮತ್ತು ಎಸ್‌ಡಿಪಿಐ ಸಂಘಟನೆಯ ಯುವಕರು ನಿರಂತರವಾಗಿ ಕೊರೊನಾ ಬಲಿಪಡೆದ ಕಾರಣಕ್ಕೆ ಅನಾಥವಾದ ಶವಗಳಿಗೆ ಸಂಸ್ಕಾರ ಮಾಡುತ್ತಿದ್ದಾರೆ. ಈಶ್ವರಪ್ಪ ಮತ್ತು ತೇಜಸ್ವಿ ಈ ಯುವಕರ ಪಟ್ಟಿ ತಯಾರಿಸಿ ಸಭೆ ಸಮಾರಂಭದಲ್ಲಿ ಓದಿ ಪ್ರಾಯಶ್ಚಿತ್ತ ಮಾಡಿಕೊಳ್ಳುವುದು ಒಳ್ಳೆಯದು. ಇದೆಲ್ಲಕ್ಕಿಂತ ಮುಖ್ಯವಾಗಿ ನಾವೆಲ್ಲ ಒಂದು ವೇಳೆ ಕೊರೊನಾಕ್ಕೆ ಬಲಿಯಾದರೆ ಹೆದರುವ ಅಗತ್ಯವಿಲ್ಲ! ಮುಸ್ಲಿಂ ಸಂಘಟನೆ ಹುಡುಗರು ಬಂದು ನಮ್ಮ ಪದ್ಧತಿಯಂತೆಯೇ ಸಂಸ್ಕಾರ ಮಾಡಿ ನಮ್ಮನ್ನು ಸ್ವರ್ಗಕ್ಕೊ ನರಕಕ್ಕೊ ಸೇರಿಸುವುದರಲ್ಲಿ ಯಾವ ಸಂಶಯವೂ ಇಲ್ಲ. ಯಾವುದಕ್ಕೂ ಮೊದಲು ಅವರಿಗೆಲ್ಲಾ ಸನ್ಮಾನ ಮಾಡಿ ನಮ್ಮ ಸಂಸ್ಕಾರದ ಖರ್ಚನ್ನು ಈಗಲೇ ಕೊಟ್ಟುಬಿಟ್ಟರೆ ಋಣಭಾರವಿಲ್ಲದೆ ನಿರ್ಗಮಿಸಬಹುದು!


ಇದನ್ನೂ ಓದಿ: ಖಾಸಗಿ ಆಸ್ಪತ್ರೆಯಲ್ಲಿ ಹಣ ನೀಡಿ ಲಸಿಕೆ ಹಾಕಿಸಿಕೊಳ್ಳಿ ಎಂದು ತೇಜಸ್ವಿ ಸೂರ್ಯ ಪ್ರಚಾರ: ತರಾಟೆ ತೆಗೆದುಕೊಂಡ ಜನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಂತರ್ ಮಂತರ್ ಹಲ್ಲೆ ಪ್ರಕರಣ: ಎಸ್‌ಸಿ/ಎಸ್‌ಟಿ, ಪೋಕ್ಸೊ ಕಾಯ್ದೆಯಡಿ ಬಂಧಿಸಲಾಗಿದ್ದ ಆರೋಪಿ ಸ್ವತಂತ್ರ ಭಾರದ್ವಾಜ್‌ಗೆ ಮಧ್ಯಂತರ ಜಾಮೀನು

ನವದೆಹಲಿ: ಜಂತರ್ ಮಂತರ್‌ನಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಸ್ವತಂತ್ರ ಭಾರದ್ವಾಜ್‌ಗೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಮೂರು ವಾರಗಳ ಮಧ್ಯಂತರ ಜಾಮೀನು ಮಂಜೂರು ಮಾಡಿದೆ....

ವಿಡಿಯೋದಲ್ಲಿ ‘ಅಸ್ಸಲಾಮು ಅಲೈಕುಮ್’ – ‘ಇನ್ಶಾ ಅಲ್ಲಾ’ ಎಂದಿದ್ದಕ್ಕೆ ಐಪಿಎಸ್ ಅಧಿಕಾರಿ ವರ್ಗಾವಣೆ

'ಅಸ್ಸಲಾಮು ಅಲೈಕುಮ್' ಮತ್ತು 'ಇನ್ಶಾ ಅಲ್ಲಾ' ಎಂದಿದ್ದಕ್ಕೆ ಬಲಪಂಥೀಯ ಸಂಘಟನೆಯೊಂದು ಪಶ್ಚಿಮ ಬಂಗಾಳದ ಗೃಹ ಕಾರ್ಯದರ್ಶಿಗೆ ದೂರು ನೀಡಿದ ಬೆನ್ನಲ್ಲೇ, ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಅಧಿಕಾರಿ ಬುಷ್ರಾ ಬಾನೋ ಅವರನ್ನು ವರ್ಗಾವಣೆ...

ಪಾನ್ ಮಸಾಲಾ ಜಾಹೀರಾತು ವಿವಾದ: ಶಾರುಖ್, ಅಜಯ್ , ಶ್ರಾಫ್‌ ಅರ್ಜಿ ವಜಾಗೊಳಿಸಿದ ದೆಹಲಿ ಹೈಕೋರ್ಟ್‌

ವಿಮಲ್ ಇಲಾಯಚಿ ಹೆಸರಿನಲ್ಲಿ ನಿಷೇಧಿತ ಪಾನ್ ಮಸಾಲಾ ಉತ್ಪನ್ನದ ಪರೋಕ್ಷ ಪ್ರಚಾರ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟರಾದ ಶಾರುಖ್ ಖಾನ್, ಅಜಯ್ ದೇವಗನ್ ಹಾಗೂ ಟೈಗರ್ ಶ್ರಾಫ್ ಅವರಿಗೆ ಮಹಾರಾಷ್ಟ್ರ ಆಹಾರ...

“ಏಕರೂಪತೆಯು ಸಮಾನತೆಯಲ್ಲ”: 21 ಎನ್‌ಡಿಎ ಆಡಳಿತದ ರಾಜ್ಯಗಳಲ್ಲಿ ಯುಸಿಸಿ ಜಾರಿ ಕುರಿತ ಅಮಿತ್ ಶಾ ಘೋಷಣೆಗೆ ವಿಪಕ್ಷಗಳ ಕಿಡಿ

2029ರ ಲೋಕಸಭಾ ಚುನಾವಣೆಗೂ ಮುನ್ನ ಬಿಜೆಪಿ ನೇತೃತ್ವದ ಎನ್‌ಡಿಎ ಆಡಳಿತವಿರುವ ಎಲ್ಲಾ 21 ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (ಯುಸಿಸಿ) ಜಾರಿಗೊಳಿಸಲಾಗುವುದು ಎಂದು ಅಮಿತ್ ಶಾ ಘೋಷಿಸಿದ ಬೆನ್ನಲ್ಲೇ, ವಿಪಕ್ಷಗಳು ಬಿಜೆಪಿ ತನ್ನ...

ಉತ್ತರ ಪ್ರದೇಶ| ಫಿರೋಜಾಬಾದ್ ಖಾಕಿ ದೌರ್ಜನ್ಯ; ಪೊಲೀಸರ ಭೂಟು ಕಾಲಿನ ಒದೆತಕ್ಕೆ ಗರ್ಭಿಣಿ ಸಾವು

ಉತ್ತರ ಪ್ರದೇಶದ ಫಿರೋಜಾಬಾದ್‌ನ ಶಿಕೋಹಾಬಾದ್ ಪ್ರದೇಶದಲ್ಲಿ ಕಳ್ಳತನ ಪ್ರಕರಣದ ಶಂಕಿತ ಆರೋಪಿಯೊಬ್ಬನನ್ನು ಬಂಧಿಸಲು ಬಂದಿದ್ದ ಪೊಲೀಸರು ಆತನ ಗರ್ಭಿಣಿ ಹೆಂಡತಿಗೆ ಒದ್ದಿದ್ದರಿಂದ ಆಕೆ ಮೃತಪಟ್ಟಿದ್ದು, ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಸಬ್‌ಇನ್ಸ್‌ಪೆಕ್ಟರ್‌ಗಳು ಸೇರಿದಂತೆ...

ಕೋಲ್ಕತ್ತಾ | 48 ದಿನಗಳಿಂದ ಮುಸ್ಲಿಂ ಕಾಲೋನಿಗೆ ನೀರು ಬಂದ್ : ಬಿಜೆಪಿ ಸರ್ಕಾರದಿಂದ ದ್ವೇಷ ಸಾಧನೆ ಆರೋಪ

ಉತ್ತರ ಕೋಲ್ಕತ್ತಾದ ಕಾಶಿಪುರದ ಜ್ಯೋತಿನಗರ ಕಾಲೋನಿ ನಿವಾಸಿಗಳು ಕಳೆದ 48 ದಿನಗಳಿಂದ ಕುಡಿಯುವ ನೀರಿಗಾಗಿ ಹಾಹಾಕಾರಪಡುತ್ತಿದ್ದಾರೆ. ಇಲ್ಲಿನ ನೂರಾರು ಕುಟುಂಬಗಳಿಗೆ ನೀರಿನ ಮೂಲವಾಗಿರುವ ಐದು ಸಾರ್ವಜನಿಕ ನಲ್ಲಿಗಳು ಸಂಪೂರ್ಣವಾಗಿ ಒಣಗಿ ಹೋಗಿವೆ. ಇದರಿಂದಾಗಿ...

ಗುರುಗ್ರಾಮ| ಮಹಿಳಾ ಬೈಕರ್‌ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಾಲಕನ ಬಂಧನ

ಗುರುಗ್ರಾಮದಲ್ಲಿ ಮಹಿಳಾ ಸ್ಪೋರ್ಟ್ಸ್ ಬೈಕ್ ಸವಾರೆಗೆ ಕಾರಿನಿಂದ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಚಾಲಕ ಕಲ್ಯಾಣ್ ಬೈನ್ಸ್ಲಾನನ್ನು ರಾಜಸ್ಥಾನದ ರಾಜ್‌ಗಢದಲ್ಲಿ ಮಂಗಳವಾರ ಬಂಧಿಸಲಾಗಿದೆ ಎಂದು ಗುರುಗ್ರಾಮ ಕಮಿಷನರ್ ಸಿಬಾಶ್ ಕಬೀರಾಜ್ ತಿಳಿಸಿದ್ದಾರೆ. ಈ...

ಸರ್ಕಾರ ಆಧಾರ್ ವ್ಯವಸ್ಥೆಯನ್ನು ನಂಬುವುದಾದರೆ, SIR‌ ತಪಾಸಣೆಗೂ ಇದನ್ನೇ ಬಳಸಲಿ: ಆರ್‌ ಎಸ್‌ ಶರ್ಮಾ ಸಲಹೆ

ಪ್ರಸ್ತುತ ಚರ್ಚೆಯಲ್ಲಿರುವ ಮತದಾರರ ಪಟ್ಟಿ ಪರಿಷ್ಕರಣೆ (SIR) ಮತ್ತು ದಾಖಲೆಗಳ ತಪಾಸಣೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಆಧಾರ್‌ ವ್ಯವಸ್ಥೆಯ ಮಾಜಿ ಮುಖ್ಯಸ್ಥ (UIDAI) ಶರ್ಮಾ ಅವರು ಮಹತ್ವದ ಸಲಹೆಯೊಂದನ್ನು ನೀಡಿದ್ದಾರೆ. ಪ್ರತಿ ಬಾರಿ ಸಾವಿರಾರು...

ಸೋಶಿಯಲ್ ಮೀಡಿಯಾಗಳಲ್ಲಿ ಅಪ್ರಾಪ್ತರಿಗೆ ಹೆಚ್ಚುತ್ತಿರುವ ಅಪಾಯ; ಲೈಂಗಿಕ ಶೋಷಣೆ ತಡೆಗೆ ಮೆಟಾದಿಂದ ಮಹತ್ವದ ನಿರ್ಧಾರ!

ಸಾಮಾಜಿಕ ಜಾಲತಾಣಗಳ ಬಳಕೆ ಯುವಜನರು ಮತ್ತು ಮಕ್ಕಳ ದೈನಂದಿನ ಬದುಕಿನ ಅವಿಭಾಜ್ಯ ಭಾಗವಾಗಿರುವ ಬೆನ್ನಲ್ಲೇ, ಆನ್‌ಲೈನ್‌ನಲ್ಲಿ ಮಕ್ಕಳ ಲೈಂಗಿಕ ಶೋಷಣೆ ಮತ್ತು ದೌರ್ಜನ್ಯಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಎದುರಿಸಲು ಮೆಟಾ ಮಹತ್ವದ ನಿರ್ಧಾರ ಕೈಗೊಂಡಿದೆ....

ಬೆಂಗಳೂರಿನ ಎನ್‌ಎಲ್‌ಎಸ್‌ಐಯು‌ನಲ್ಲಿ ಉಮರ್ ಖಾಲಿದ್ ಸಾಕ್ಷ್ಯಚಿತ್ರ ಪ್ರದರ್ಶನ; ಕೇಂದ್ರದ ಹಸ್ತಕ್ಷೇಪಕ್ಕೆ ಎಬಿವಿಪಿ ಮನವಿ

ಬೆಂಗಳೂರಿನಲ್ಲಿರುವ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿಯಲ್ಲಿ (ಎನ್‌ಎಲ್‌ಎಸ್‌ಐಯು‌) ಜೈಲಿನಲ್ಲಿರುವ ಹೋರಾಟಗಾರ ಉಮರ್ ಖಾಲಿದ್ ಕುರಿತಾದ ಸಾಕ್ಷ್ಯಚಿತ್ರದ ಪ್ರದರ್ಶನವನ್ನು ಕಾಯಂ ಆಗಿ ರದ್ದುಗೊಳಿಸಲು ಆರ್‌ಎಸ್ಎಸ್ ಸಂಯೋಜಿತ ವಿದ್ಯಾರ್ಥಿ ಸಂಘಟನೆ ಎಬಿವಿಪಿ ಕೇಂದ್ರ...