Homeಮುಖಪುಟಬೆಳ್ಳಿ ಚುಕ್ಕಿ: ಲ್ಯಾಬ್‌ನಲ್ಲಿ ವಿನ್ಯಾಸಗೊಳಿಸಿದ ಕೃತಕ ಸೂರ್ಯ; ಶುದ್ಧ ಶಕ್ತಿಯತ್ತ ದಾಪುಗಾಲು?

ಬೆಳ್ಳಿ ಚುಕ್ಕಿ: ಲ್ಯಾಬ್‌ನಲ್ಲಿ ವಿನ್ಯಾಸಗೊಳಿಸಿದ ಕೃತಕ ಸೂರ್ಯ; ಶುದ್ಧ ಶಕ್ತಿಯತ್ತ ದಾಪುಗಾಲು?

- Advertisement -
- Advertisement -

ಜೂನ್ ಮೊದಲ ವಾರದಲ್ಲಿ ಒಂದು ಸುದ್ದಿ ಬಂತು. ಪ್ರಯೋಗಾಲಯಕ್ಕೆ ಸಂಬಂಧಿಸಿದ್ದಾದರೂ ಇದೇನು ಕೊರೊನಾ ವೈರಸ್ ಸಂಬಂಧಿತ ಸುದ್ದಿಯಲ್ಲ. ಚೈನಾದ ಹಾಫೈ ಇನ್ಸಿಟಿಟ್ಯೂಟ್ ಆಫ್ ಫಿಸಿಕಲ್ ಸೈನ್ಸ್‌ನಲ್ಲಿ ಕೃತಕ ಸೂರ್ಯನನ್ನು ವಿನ್ಯಾಸಗೊಳಿಸಿದ್ದು, ಇದು 120 ಮಿಲಿಯನ್ ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಉರಿಯುತ್ತಿದೆ ಎಂಬ ವಿಶಿಷ್ಟ ಸುದ್ದಿ. ಹೌದು ನೀವು ಓದಿದ್ದು ನಿಜ. ‘ಕೃತಕ ಸೂರ್ಯ’ನೇ! ವಿಚಿತ್ರ ಅನ್ನಿಸೊದಿಲ್ವಾ? ಹಾಗಾದರೆ ಚೈನಾ ತಾನೇ ವಿನ್ಯಾಸಗೊಳಿಸಿದ ಕೃತಕ ಸೂರ್ಯನಿಂದ ಬೆಳಕು ಪಡೆಯತ್ತಾ? ಇಂತಹ ಹಲವು ಪ್ರಶ್ನೆಗಳು ನಮ್ಮನ್ನು ಕಾಡಬಹುದು. ಹಾಗಾದರೆ ಈ ಕೃತಕ ಸೂರ್ಯ ನಿಜವಾಗಲೂ ಆಕಾಶದಲ್ಲಿ ಕಾಣುವ ಸೂರ್ಯನ ತರಹವೇ ಇರತ್ತಾ? ಅದು ಬೆಳಕು ನೀಡುತ್ತಾ?

ಶಕ್ತಿ (Energy) ಜೀವ ಉಗಮಕ್ಕೆ ಮೂಲ ಕಾರಣ. ಸೌರ ಮಂಡಲದ ಗ್ರಹಗಳಲ್ಲಿ ಭೂಮಿಯು ಜೀವ ಸಂಕುಲವನ್ನು ಪೋಷಿಸುತ್ತಿದೆ. ಇದಕ್ಕೆ ಕಾರಣ ಭೂಮಿಗೆ ಹತ್ತಿರವಿರುವ ನಕ್ಷತ್ರ ಸೂರ್ಯ. ಸೂರ್ಯನ ಶಕ್ತಿ ಇಲ್ಲದಿದ್ದರೆ ಭೂಮಿಯಲ್ಲಿ ಜೀವ ಸಂಕುಲ ಉಗಮವಾಗುತ್ತಿರಲಿಲ್ಲ ಎನ್ನುವುದು ಅಷ್ಟೇ ಸತ್ಯ. ಆದರೆ, ಪ್ರಶ್ನೆ ಇರುವುದು ಸೂರ್ಯನಿಗೆ ಶಕ್ತಿ ಎಲ್ಲಿಂದ ಬರುತ್ತದೆ ಎಂದು? ಇದಕ್ಕೆ ಉತ್ತರ ಸೂರ್ಯನ ಒಳಗಡೆ ನಡೆಯುತ್ತಿರುವ ಉಷ್ಣ ಭೈಜಿಕ ಸಮ್ಮಿಲನ ಕ್ರಿಯೆ – Thermo Nuclear Fusion Reaction.

ಸೂರ್ಯ ಒಂದು ನಕ್ಷತ್ರ. ಸೂರ್ಯನಲ್ಲಿ ಶೇ75 ರಷ್ಟು ಹೈಡ್ರೋಜನ್ ಅನಿಲ ಇದೆ. ಸೂರ್ಯನ ತಿರುಳಲ್ಲಿ ಎರಡು ಹೈಡ್ರೋಜನ್ ನ್ಯೂಕ್ಲಿಯಸ್‌ಗಳು ಘರ್ಷಣೆಯಾಗಿ, ಸಮ್ಮಿಲನಗೊಂಡು ಹೀಲಿಯಂ ನ್ಯೂಕ್ಲಿಯಸ್ ಆಗಿ ಪರಿವರ್ತನೆಗೊಳ್ಳುತ್ತದೆ. ಹೀಗೆ, ಎರಡು ಹೈಡ್ರೋಜನ್ ಪರಮಾಣು ಸಮ್ಮಿಲನಗೊಂಡು ಹೀಲಿಯಂ ಪರಮಾಣುವಾಗಿ ಪರಿವರ್ತನೆಗೊಂಡಾಗ ಅಪಾರ ಪ್ರಮಾಣದ ಶಕ್ತಿ ಬಿಡುಗಡೆಯಾಗುತ್ತದೆ. ಈ ಶಕ್ತಿ ಎಲ್ಲಿಂದ ಬರುತ್ತದೆ? ಹೊಸದಾಗಿ ರೂಪುಗೊಂಡ ಹೀಲಿಯಂ ಪರಮಾಣುವಿನ ದ್ರವ್ಯರಾಶಿಯು, ಸಮ್ಮಿಲಗೊಂಡ ಎರಡು ಹೈಡ್ರೋಜನ್ ಪರಮಾಣುವಿನ ದ್ರವ್ಯರಾಶಿಗಿಂತಲೂ ಕಡಿಮೆ ಇರುತ್ತದೆ.

ಈ ವ್ಯತ್ಯಾಸದ ದ್ರವ್ಯರಾಶಿಯು ಐನ್‌ಸ್ಟೈನ್ ಪ್ರಸ್ತಾಪಿಸಿರುವ E=mc2 (ಶಕ್ತಿ ಮತ್ತು ದ್ರವ್ಯರಾಶಿಯ ಸಮಾನತೆಯ ಸಮೀಕರಣ) ನಿಯಮಾನುಸಾರ ಶಕ್ತಿಯಾಗಿ ಬಿಡುಗಡೆಯಾಗುತ್ತದೆ. ಈ ಕ್ರಿಯೆಯನ್ನು ಉಷ್ಣ ಭೈಜಿಕ ಸಮ್ಮಿಲನ ಕ್ರಿಯೆ ಎಂದು ಕರೆಯುತ್ತಾರೆ. ಸೂರ್ಯ ಒಂದು ಸೆಕೆಂಡಿಗೆ ಸುಮಾರು 600 ಲಕ್ಷ ಟನ್‌ಗಳ ಹೈಡ್ರೋಜನ್ ಪರಮಾಣುಗಳನ್ನು ಹೀಲಿಯಂ ಪರಮಾಣುವಾಗಿ ಪರಿವರ್ತಿಸುತ್ತದೆ. ಈ ಕ್ರಿಯೆಯೇ ಸೂರ್ಯನ ತಿರುಳಲ್ಲಿ ಅಗಾಧ ಪ್ರಮಾಣದ ಶಕ್ತಿ ಉತ್ಪತ್ತಿಗೆ ಕಾರಣವಾಗಿದೆ. ಈ ಶಕ್ತಿಯೇ ಸೂರ್ಯನನ್ನು ಬೆಂಕಿ ಉಂಡೆಯಂತೆ ಹೊಳೆಯುವ ಹಾಗೆ ಮಾಡಿರುವುದು. ಈ ಕಾರಣದಿಂದ ಸೂರ್ಯನ ತಿರುಳಲ್ಲಿ ನಮ್ಮ ಕಲ್ಪನೆಗೂ ನಿಲುಕದ 15 ಲಕ್ಷ ಡಿಗ್ರಿ ಸೆಲ್ಸಿಯಸ್ ತಾಪಮಾನ ಇರುವುದು. ಉಷ್ಣ ಭೈಜಿಕ ಸಮ್ಮಿಲನ ಕ್ರಿಯೆ ಎಲ್ಲಾ ನಕ್ಷತ್ರಗಳ ತಿರುಳಲ್ಲೂ ನಡೆಯುವ ಸಾಮನ್ಯ ಕ್ರಿಯೆ.

ಸೂರ್ಯನ ಬಗ್ಗೆ ಏನೋ ತಿಳಿದೆವು. ಹಾಗಾದರೆ ಚೈನಾದಲ್ಲಿ ವಿನ್ಯಾಸ ಮಾಡಿದ ಕೃತಕ ಸೂರ್ಯನ ಕತೆ ಏನು? ಈ ಸೂರ್ಯನನ್ನು ಲ್ಯಾಬ್‌ನಲ್ಲಿ ವಿನ್ಯಾಸಗೊಳಿಸಲಾಗಿದ್ದು, ಇದರ ತಾಪಮಾನ 120 ಲಕ್ಷ ಡಿಗ್ರಿ ಸೆಲ್ಸಿಯಸ್. ಅಂದರೆ, ಸೂರ್ಯನ ತಿರುಳಲ್ಲಿರುವ ತಾಪಮಾನಕ್ಕಿಂತಲೂ 8 ಪಟ್ಟು ಹೆಚ್ಚು!

ಕೃತಕ ಸೂರ್ಯನ ಸೃಷ್ಟಿ

International Thermonuclear Experimental Reactor- ITER ಅಂದರೆ, ಅಂತರಾಷ್ಟ್ರೀಯ ಉಷ್ಣ ಭೈಜಿಕ ಪ್ರಯೋಗ ಅಣು ಕೇಂದ್ರ. ಇದು ಪ್ರಪಂಚದ ಹಲವು ದೇಶಗಳು (ಪ್ರಮುಖವಾಗಿ 8 ದೇಶಗಳು ಯೂರೋಪ್, ಅಮೆರಿಕ, ಭಾರತ, ಜಪಾನ್, ರಷ್ಯ, ಸೌತ್ ಕೊರಿಯಾ ಮತ್ತು ಚೈನಾ) ಸೇರಿ ನಡೆಸುತ್ತಿರುವ ಮಹಾ ಯೋಜನೆಯಾಗಿದೆ. ಈ ಯೋಜನೆಯ ಉದ್ದೇಶ, ಸೂರ್ಯನ ತಿರುಳಲ್ಲಿ ನಡೆಯುತ್ತಿರುವ ಉಷ್ಣ ಭೈಜಿಕ ಸಮ್ಮಿಲನ ಕ್ರಿಯೆಯನ್ನು ಭೂಮಿಯಲ್ಲಿ ನಿಯಂತ್ರಿತವಾಗಿ ಸೃಷ್ಟಿಸಿ, ಅದರಿಂದ ಬರುವ ಅಪಾರ ಪ್ರಮಾಣದ ‘ಶುದ್ಧ’ ಶಕ್ತಿಯನ್ನು ಪ್ರಪಂಚದಾದ್ಯಂತ ಮಾನವನ ಬಳಕೆಗೆ ಉಪಯೋಗಿಸುವುದು. ಈ ಮಹಾ ಯೋಜನೆಗೆ ಸಂಬಂಧಿಸಿದಂತೆ, ಹಲವು ದೇಶಗಳಲ್ಲಿ ನಿಯಂತ್ರಿತವಾಗಿ ಉಷ್ಣ ಭೈಜಿಕ ಸಮ್ಮಿಲನ ಕ್ರಿಯೆ ನಡೆಸಲು ಅನುಕೂಲವಾಗುವಂತೆ ಅಣು ಕೇಂದ್ರವನ್ನು ತೆರೆಯಲಾಗಿದೆ. ಅದರಲ್ಲಿ ಒಂದು ಚೈನಾ ದೇಶದ ಚೈನೀಸ್ ಅಕಾಡೆಮಿ ಆಫ್ ಸೈನ್ಸ್‌ಸ್‌ನ ಹಾಫೈ ಇನ್ಸಿಟಿಟ್ಯೂಟ್ ಆಫ್ ಫಿಸಿಕಲ್ ಸೈನ್ಸ್‌ನಲ್ಲಿ ಎಕ್ಸ್‌ಪರಿಮೆಂಟಲ್ ಅಡ್ವಾನ್ಸ್ ಸೂಪರ್‌ಕಂಡಕ್ಟಿಂಗ್ ಟೊಕಾಮಾಕ್ (Experimental Advance Superconducting Tokamak- EAST) ಎಂಬ ವಿನೂತನವಾದ ರಿಯಾಕ್ಟರ್‌ಅನ್ನು ಸ್ಥಾಪಿಸಲಾಗಿದೆ. ಈ ರಿಯಾಕ್ಟರ್ ಒಳಗೆ ಉಷ್ಣ ಭೈಜಿಕ ಸಮ್ಮಿಲನ ಕ್ರಿಯೆಯನ್ನು ಸೃಷ್ಟಿಸಬಹುದಾಗಿದೆ. ಈ ರಿಯಾಕ್ಟರ್‌ಅನ್ನೇ ‘ಕೃತಕ ಸೂರ್ಯ’ ಎಂದು ಕರೆದಿರುವುದು.

ಈ ಜೂನ್ ತಿಂಗಳ ಪ್ರಾರಂಭದಲ್ಲಿ, ಈ ರಿಯಾಕ್ಟರ್ ಒಳಗೆ 101 ಸೆಕೆಂಡುಗಳ ಕಾಲ ಉಷ್ಣ ಭೈಜಿಕ ಸಮ್ಮಿಲನ ಕ್ರಿಯೆಯನ್ನು ನಿಯಂತ್ರಿತವಾಗಿ ಸೃಷ್ಟಿಸಲಾಗಿತ್ತು. ಇದಕ್ಕೆ ಭೂಮಿಯಲ್ಲಿ ಹೇರಳವಾಗಿ ಸಿಗುವ ಹೈಡ್ರೋಜನ್‌ನ ಐಸೋಟೋಪ್ ಆದ ಡ್ಯೂಟೋರಿಯಮ್‌ಅನ್ನು ಬಳಸಲಾಗಿತ್ತು. ಈ ಕ್ರಿಯೆಯ ಸಮಯದಲ್ಲಿ ರಿಯಾಕ್ಟರ್ ಒಳಗಿನ ತಾಪಮಾನ 120 ಲಕ್ಷ ಡಿಗ್ರಿ ಸೆಲ್ಸಿಯಸ್‌ವರೆಗೂ ತಲುಪಿತ್ತು. ಈ ಸಂಶೋಧನೆಯು ಇನ್ನೂ ಪ್ರಯೋಗದ ಹಂತದಲ್ಲಿಯೇ ಇದೆ. ಹಿಂದೆ ಹಲವು ಬಾರಿ ಇಂತಹ ಪ್ರಯೋಗಗಳೂ ನಡೆದಿದ್ದರೂ, ರಿಯಾಕ್ಟರ್ ಒಳಗೆ 101 ಸೆಕೆಂಡುಗಳ ಕಾಲ ಉಷ್ಣ ಬೈಜಿಕ ಸಮ್ಮಿಲನ ಕ್ರಿಯೆಯು ಸಕ್ರಿಯವಾಗಿರುವುದು ಇದೇ ಮೊದಲು!

ಈ ಸಂಶೋಧನೆಗೆ ಬಹಳ ದೊಡ್ಡ ಮಟ್ಟದ ಧನಸಹಾಯವೂ ಬೇಕು ಮತ್ತು ಕಾಲವು ಬೇಕು, ಹಾಗೂ ಇಂದು ಒಂದು ದೇಶದಿಂದ ಮಾತ್ರ ಆಗುವ ಕೆಲಸವಂತೂ ಅಲ್ಲ. ಹೀಗಾಗಿ, ಹಲವು ದೇಶಗಳು ITER ಯೋಜನೆಗೆ ಕೈಜೊಡಿಸಿ, ಇಂತಹ ಹಲವು ‘ಕೃತಕ ಸೂರ್ಯ’ಗಳನ್ನು ವಿವಿಧ ದೇಶಗಳಲ್ಲಿ ಸ್ಥಾಪಿಸಲು ಕಾರ್ಯಸೂಚಿಗಳನ್ನು ಈಗಾಗಲೇ ಸಿದ್ಧಪಡಿಸಲಾಗಿದೆ. ಇಲ್ಲಿಯವರೆಗೂ ಉಷ್ಣ ಭೈಜಿಕ ಸಮ್ಮಿಲನ ಕ್ರಿಯೆಯನ್ನು ಅತ್ಯಂತ ಕಡಿಮೆ ಸಮಯದವರೆಗೆ (ಅಂದರೆ, ಸೆಕೆಂಡುಗಳ ಕಾಲದವರೆಗೆ) ಮಾತ್ರ ಇಂತಹ ರಿಯಾಕ್ಟರ್‌ನಲ್ಲಿ ಸೃಷ್ಟಿಸಲು ಸಾಧ್ಯವಾಗಿದ್ದು, ಹೆಚ್ಚಿನ ಸಮಯದವರೆಗೆ ಈ ಕ್ರಿಯೆಯನ್ನು ಸಕ್ರಿಯವಾಗಿರುವಂತೆ ಮಾಡುವುದಕ್ಕೆ ಇನ್ನೂ ಸಂಶೋಧನೆಗಳೂ ನಡೆಯುತ್ತಿವೆ. ಭಾರತ ಕೂಡ ಈ ಮಹಾ ಯೋಜನೆಗೆ ಕೈಜೊಡಿಸಿದ್ದು, ಇಂತಹ ರಿಯಾಕ್ಟರ್‌ಗಳ ಸ್ಥಾಪನೆಗೆ ಹಲವು ಉಪಕರಣಗಳನ್ನು ತಯಾರಿಸಿ ನೀಡುತ್ತಿದೆ.

ಉಷ್ಣ ಭೈಜಿಕ ಸಮ್ಮಿಲನ ಕ್ರಿಯೆಯಿಂದ ಬರುವ ಶಕ್ತಿ ಶುದ್ಧ ಶಕ್ತಿ ಹೇಗೆ?

21ನೇ ಶತಮಾನದ ಆಧುನಿಕ ಪ್ರಪಂಚಲ್ಲಿ ಮಾನವ ವಿವಿಧ ಮೂಲಗಳಿಂದ ಉತ್ಪಾದಿಸುವ ಶಕ್ತಿಯನ್ನು (ವಿದ್ಯುತ್ ಶಕ್ತಿ, ಇಂಧನ ಶಕ್ತಿ ಮತ್ತು ಇತರೆ ಶಕ್ತಿಯ ರೂಪಗಳು) ತೀವ್ರ ಗತಿಯಲ್ಲಿ ವಿನಿಯೋಗಿಸುತ್ತಿದ್ದೇವೆ. ವಿದ್ಯುತ್ ಶಕ್ತಿ ಇಂದು ಅತಿ ಹೆಚ್ಚು ಬಳಕೆಯಲಿದೆ. ಇಂಧನ ಶಕ್ತಿಯಿಂದ ಚಾಲು ಇರುತ್ತಿದ್ದ ಹಲವು ಕೆಲಸಗಳು ಇಂದು ವಿದ್ಯುತ್ ಶಕ್ತಿಯಿಂದ ಚಾಲು ಆಗುತ್ತಿವೆ. ಹೀಗಿರುವಾಗ ವಿದ್ಯುತ್ ಶಕ್ತಿಯ ಬೇಡಿಕೆ ಮತ್ತು ಪೂರೈಕೆ ಮುಂದಿನ ದಿನಗಳಲ್ಲಿ ಹೆಚ್ಚಲಿದೆ. ಹಾಗಾಗಿ ವಿದ್ಯುತ್ ಶಕ್ತಿಯನ್ನು ಅತಿ ವೇಗವಾಗಿ ಉತ್ಪಾದಿಸುವುದು ನಮ್ಮ ಮುಂದಿರುವ ದೊಡ್ಡ ಸವಾಲು. ಇಂದಿಗೆ ಈ ಸವಾಲು ಅಷ್ಟು ದೊಡ್ಡದಲ್ಲದಿದ್ದರೂ, ಈಗ ಸರಿಯಾದ ಕ್ರಮವಹಿಸದಿದ್ದರೆ, ಮುಂದಿನ ದಶಕದಲ್ಲಿ ಇದು ಬಹು ದೊಡ್ಡ ಸಮಸ್ಯೆಯನ್ನು ಒಡ್ಡಬಲ್ಲದು.

ಈಗ ವಿದ್ಯುತ್ ಶಕ್ತಿ ಉತ್ಪಾದನೆಗೆ ಜಲ ವಿದ್ಯುತ್, ಉಷ್ಣ ವಿದ್ಯುತ್ ಮತ್ತು ಅಣು ವಿದ್ಯುತ್ ಸ್ಥಾವರಗಳ ಮೇಲೆ ಹೆಚ್ಚು ಅವಲಂಬಿತರಾಗಿದ್ದೇವೆ (ಸೌರ ವಿದ್ಯುತ್, ಪವನ ವಿದ್ಯುತ್ ಮತ್ತು ಇತರೆ ಸ್ಥಾವರಗಳು ಅಷ್ಟು ದೊಡ್ಡ ಮಟ್ಟದಲ್ಲಿ ನಮ್ಮ ಅಗತ್ಯತೆಯನ್ನು ಇನ್ನೂ ಪೂರೈಸುತ್ತಿಲ್ಲ). ಆದರೆ, ಈ ಕೇಂದ್ರಗಳ ಸ್ಥಾಪನೆಯಿಂಚ ಹಿಡಿದು, ಅವಗಳ ಕಾರ್ಯಾಚಾರಣೆಯವರೆಗೂ ವಿವಿಧ ರೀತಿಯಲ್ಲಿ ನಿಸರ್ಗಕ್ಕೆ ಬಹಳ ದೊಡ್ಡ ಮಟ್ಟದಲ್ಲಿ ಹಾನಿಯಾಗುತ್ತಿರುತ್ತದೆ.

ಈ ಕೇಂದ್ರಗಳಿಂದ ನಮ್ಮ ಅಗತ್ಯತೆ ತಕ್ಕಂತೆ ವಿದ್ಯುತ್ ಶಕ್ತಿ ಪಡೆಯಬಹುದಾದರೂ, ಅಷ್ಟೇ ಪ್ರಮಾಣದ ಹಾನಿಯನ್ನು ಈ ಕೇಂದ್ರಗಳು ನಿಸರ್ಗಕ್ಕೆ ಮಾಡುತ್ತಿರುತ್ತವೆ. ಜಲ ವಿದ್ಯುತ್ ಯೋಜನೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಕಾಡುಗಳ ನಾಶ, ನದಿಗಳ ನೈಸರ್ಗಿಕ ಹರಿವನ್ನು ತಡೆಯುವುದು, ಬದಲಿಸುವುದು; ಉಷ್ಣ ವಿದ್ಯುತ್ ಸ್ಥಾವರದಲ್ಲಿನ ಕಲ್ಲಿದ್ದಲು ಬಳಕೆಗಾಗಿ ಕಲ್ಲದ್ದಲು ಗಣಿಗಳನ್ನು ಹೆಚ್ಚಿಸುವುದು, ಮತ್ತು ಸ್ಥಾವರದ ಪ್ರದೇಶದಲ್ಲಿ ಅತಿ ಹೆಚ್ಚು ವಾಯು ಮಾಲಿನ್ಯ ಉಂಟಾಗುವುದು; ಅಣು ವಿದ್ಯುತ್ ಸ್ಥಾವರಗಳಲ್ಲಿ ವಿಕಿರಣಶೀಲ ವಸ್ತುಗಳನ್ನು ಉಪಯೋಗಿಸುವುದರಿಂದ, ಸ್ಥಾವರಗಳು ಅನಿಯಂತ್ರಿತವಾದರೆ ಅತಿ ಹೆಚ್ಚು ದುಷ್ಪರಿಣಾಮ ಮಾನವನ ಮೇಲೆ ಮತ್ತು ನಿಸರ್ಗದ ಮೇಲೆ ಉಂಟಾಗುತ್ತದಲ್ಲದೆ, ಈ ಸ್ಥಾವರಗಳ ವಿಷ ತ್ಯಾಜ್ಯಗಳನ್ನು ವಿಲೇವಾರಿ ಮಾಡುವುದು ಅತ್ಯಂತ ಕಷ್ಟದ ಕೆಲಸವಾಗಿದೆ.

ಸದ್ಯದ ಪರಿಸ್ಥಿತಿ ಹೀಗಿರುವಾಗ, ವಿದ್ಯುತ್ ಶಕ್ತಿಯ ಅಗತ್ಯತೆಗೆ ತಕ್ಕಂತೆ ಇಂತಹ ವಿದ್ಯುತ್ ಉತ್ಪಾದನಾ ಕೇಂದ್ರಗಳ ಸ್ಥಾಪನೆ ಹೆಚ್ಚಾದರೆ, ನಿಸರ್ಗಕ್ಕೆ ಮತ್ತೆ ಸರಿಪಡಿಸಲಾಗದ ಬಹು ದೊಡ್ಡ ಪ್ರಮಾಣದ ಹಾನಿ ಉಂಟಾಗುವುದಂತೂ ಸತ್ಯ. ಈ ಕಾರಣದಿಂದ ಈ ಶಕ್ತಿಯು ನಮಗೆ ಉಪಯೋಗವಾದರು, ಇದರ ಅಡ್ಡ ಪರಿಣಾಮಗಳೂ ಅತಿ ಹೆಚ್ಚಾಗಿರುತ್ತದೆ. ಆದುದರಿಂದಲೇ, ವಿದ್ಯುತ್ ಶಕ್ತಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಮತ್ತು ಅತಿ ವೇಗವಾಗಿ ಉತ್ಪತ್ತಿಮಾಡಲು ಇರುವ ಮತ್ತೊಂದು ವಿಧಾನವನ್ನು ಹುಡುಕಲು ಹೊರಟಾಗ ಸಿಕ್ಕ ಉತ್ತರ ನಮ್ಮ ಸೂರ್ಯ!

ಹೌದು ಸೂರ್ಯನ ತಿರುಳಲ್ಲಿ ನಡೆಯುತ್ತಿರುವ ಉಷ್ಣ ಭೈಜಿಕ ಸಮ್ಮಿಲನ ಕ್ರಿಯೆ ಅತ್ಯಂತ ಅಗಾಧವಾದ ಶಕ್ತಿಯನ್ನು ನೀಡುತ್ತದೆ. ಭೂಮಿಯಲ್ಲಿ ನಿಯಂತ್ರಿತವಾಗಿ ಇಂತಹ ಕ್ರಿಯೆಯನ್ನು ಸೃಷ್ಟಿಸಲು ಒಂದು ರಿಯಾಕ್ಟರ್‌ಅನ್ನು ವಿನ್ಯಾಸ ಮಾಡಿದರೆ, ಅದರ ಸಹಾಯದಿಂದ, ಹೇಗೆ ಅಣು ವಿದ್ಯುತ್ ಸ್ಥಾವರದಲ್ಲಿ ವಿದ್ಯುತ್ ಉತ್ಪಾದಿಸಲಾಗುತ್ತದೆಯೋ, ಹಾಗೆಯೇ ಈ ರಿಯಾಕ್ಟರ್‌ನಲ್ಲಿ ದೊರಕುವ ಅಪಾರ ಪ್ರಮಾಣದ ಶಕ್ತಿಯಿಂದ ವಿದ್ಯುತ್ ಉತ್ಪಾದಿಸಬಹುದು. ಈ ಉಷ್ಣ ಭೈಜಿಕ ಸಮ್ಮಿಲನ ಕ್ರಿಯೆಯಲ್ಲಿ ಯಾವ ವಿಕಿರಣಶೀಲ ವಸ್ತುಗಳೂ ಬಿಡುಗಡೆಯಾಗುವುದಿಲ್ಲ ಮತ್ತು ಇದರಿಂದ ಅತ್ಯಂತ ಕಡಿಮೆ ತ್ಯಾಜ್ಯ ಉತ್ಪತ್ತಿಯಾಗುತ್ತದೆ. ಇದು, ನಿಸರ್ಗಕ್ಕೆ ದೊಡ್ಡಮಟ್ಟದ ಹಾನಿ ಉಂಟುಮಾಡಲಾರದು ಎನ್ನವುದು ಸದ್ಯದ ತಿಳುವಳಿಕೆ. ಆದುದರಿಂದ, ಇದನ್ನು ಶುದ್ಧ ಶಕ್ತಿ (Clean Energy) ಎಂದೂ ಕರೆಯುವುದುಂಟು. ಹಾಗಾಗಿ, ಹಲವು ದೇಶಗಳು ಒಟ್ಟುಗೂಡಿ ಮುಂದಿನ ಒಂದು ದಶಕದಲ್ಲಿ ಪೂರ್ಣ ಪ್ರಮಾಣದಲ್ಲಿ ಕೆಲಸ ನಿರ್ವಹಿಸುವ ‘ಕೃತಕ ಸೂರ್ಯ’ ರಿಯಾಕ್ಟರ್‌ಅನ್ನು ತಯಾರಿಸಲು ಹೊರಟಿರುವುದು.


ಇದನ್ನೂ ಓದಿ: ಬೆಳ್ಳಿ ಚುಕ್ಕಿ: ನೀವು ಕಂಡಿರೇ ನೀವೂ ಕಂಡಿರೇ ಬಣ್ಣದುಂಗುರವಾ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಸಾವರ್ಕರ್ ದೇವರನ್ನು, ಧಾರ್ಮಿಕ ನಂಬಿಕೆಗಳನ್ನು ಪ್ರಶ್ನಿಸಿದ್ದರು’: ಪುಣೆ ನ್ಯಾಯಾಲಯದಲ್ಲಿ ಮೊಮ್ಮಗ ಸತ್ಯಕಿ ಸಾವರ್ಕರ್ ಒಪ್ಪಿಗೆ

ಪುಣೆ: ಕಾಂಗ್ರೆಸ್ ನಾಯಕ ಹಾಗೂ ಸಂಸತ್ತಿನ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ವಿಚಾರಣೆಯು ಅತ್ಯಂತ ಕುತೂಹಲಕಾರಿ ಮತ್ತು ರಾಜಕೀಯ-ಸೈದ್ಧಾಂತಿಕ ತಿರುವನ್ನು ಪಡೆದುಕೊಂಡಿದೆ. ವಿನಾಯಕ ದಾಮೋದರ್...

ಮಾಜಿ ಸಚಿವ ಧರ್ಮೇಂದ್ರ ಪ್ರಧಾನ್ ಮಗಳ ಫೋನ್ ಬಿಲ್ ವಿವಾದ: ₹68 ಸಾವಿರ ಬಿಲ್-ಪೇ ಆಗಿದ್ದು ಸರ್ಕಾರಿ ಹಣದಲ್ಲಾ?

ಮಾಜಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಪುತ್ರಿ ನೈಮಿಷಾ ಪ್ರಧಾನ್ ಅವರು ಮತ್ತೊಮ್ಮೆ ವಿವಾದದ ಕೇಂದ್ರಬಿಂದುವಾಗಿದ್ದಾರೆ. ವಾರಗಳ ಹಿಂದೆ ನೀಟ್ ಪರೀಕ್ಷೆಯ ಪತ್ರಿಕೆ ಸೋರಿಕೆ ಖಂಡಿಸಿ ಕಾಕ್ರೋಚ್ ಜನತಾ ಪಾರ್ಟಿ...

ಇರಾನ್ ವಸತಿ ಕಟ್ಟಡದ ಮೇಲೆ ಅಮೆರಿಕಾ ದಾಳಿ: ಎರಡು ವರ್ಷದ ಮಗು ಸೇರಿ ಒಂದೇ ಕುಟುಂಬದ ಮೂವರ ಸಾವು

ಮಧ್ಯಪ್ರಾಚ್ಯದಲ್ಲಿ ಅಮೆರಿಕ ತನ್ನ ಸಾಮ್ರಾಜ್ಯಶಾಹಿ ಆಧಿಪತ್ಯ ಸ್ಥಾಪನೆಗಾಗಿ ನಡೆಸುತ್ತಿರುವ ಯುದ್ಧಕೋರ ನೀತಿ ಮತ್ತೊಮ್ಮೆ ನಿರಪರಾಧಿ ಸಾರ್ವಜನಿಕರ ರಕ್ತ ಹರಿಸಿದೆ. ಇರಾನ್ ಮೇಲಿನ ಅಮೆರಿಕ ಪಡೆಗಳ ಸರಣಿ ಮತ್ತು ಭೀಕರ ಬಾಂಬ್ ದಾಳಿಗಳು ಕೇವಲ...

SIR: ASDDO ಪಟ್ಟಿಯಲ್ಲಿ ಬೆಂಗಳೂರಿಗೆ ಪ್ರಥಮ ಸ್ಥಾನ, ರಾಜ್ಯದಲ್ಲಿ 2 ಕೋಟಿ ಮತದಾರರ ಹೆಸರು ರದ್ದಾಗುವ ಬೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ರಾಜಧಾನಿ ಬೆಂಗಳೂರು ಅತ್ಯಂತ ಪ್ರಮುಖ ಹಾಗೂ ಕಳವಳಕಾರಿ ಕೇಂದ್ರವಾಗಿ ಹೊರಹೊಮ್ಮಿದೆ. ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ನೋಂದಾಯಿತ ಮತದಾರರ ಪೈಕಿ...

ಉಮರ್ ಖಾಲಿದ್ ಜಾಮೀನು ಅರ್ಜಿ; ಪೊಲೀಸರ ನಿಲುವು ಕೇಳಿದ ದೆಹಲಿ ಹೈಕೋರ್ಟ್

ಫೆಬ್ರವರಿ 2020 ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆಯ ಹಿಂದಿನ "ದೊಡ್ಡ ಪಿತೂರಿ"ಗೆ ಸಂಬಂಧಿಸಿದಂತೆ ಭಯೋತ್ಪಾದನಾ ವಿರೋಧಿ ಕಾನೂನು ಯುಎಪಿಎ ಅಡಿಯಲ್ಲಿ ಪ್ರಕರಣದಲ್ಲಿ ಜಾಮೀನು ಕೋರಿ ಉಮರ್ ಖಾಲಿದ್ ಸಲ್ಲಿಸಿದ ಅರ್ಜಿಯ ಕುರಿತು...

ಮುಂಬೈ: ‘ಶಾಲಾ ಜಿಹಾದ್’ ಎಂಬ ಬಿಜೆಪಿ ನಾಯಕನ ಕೋಮುದ್ವೇಷಕ್ಕೆ ಶಾಲೆಗೆ ನುಗ್ಗಿದ ಬುಲ್ಡೋಜರ್: ಬಿಎಂಸಿಗೆ ಚಾಟಿ ಬೀಸಿದ ಬಾಂಬೆ ಹೈಕೋರ್ಟ್

ಬಿಜೆಪಿ ನಾಯಕ ಕಿರೀಟ್ ಸೋಮಯ್ಯ ಅವರ “ಶಾಲಾ ಜಿಹಾದ್” ಎಂಬ ವಿಷಕಾರಿ ಹೇಳಿಕೆಯ ನಂತರ ಮುಂಬೈನ ಗೋವಂಡಿಯಲ್ಲಿ ಬಡ ಮುಸ್ಲಿಂ ಮಕ್ಕಳ ಶಿಕ್ಷಣದ ಆಶಾಕಿರಣವಾಗಿದ್ದ ತೆಹ್ಜೀಬ್ ಇಸ್ಲಾಮಿಕ್ ಇಂಗ್ಲಿಷ್ ಶಾಲೆಯನ್ನು ಬೃಹನ್ಮುಂಬೈ ಮುನ್ಸಿಪಲ್...

ಹಾಕಿ ತಂಡಕ್ಕೆ ಕೇಸರಿ ಜರ್ಸಿ: ‘ನಮ್ಮ ಗುರುತೇ ನೀಲಿ, ಕೇಸರಿ ಬಣ್ಣದ ತರ್ಕವೇನು?’: ಮಾಜಿ ಹಾಕಿ ಪಟು ಆಕ್ರೋಶ: ಬಿಜೆಪಿ ನಡೆಗೆ ವಿಪಕ್ಷಗಳ ಟೀಕೆ

ಭಾರತೀಯ ಕ್ರೀಡಾರಂಗದ ಹೆಮ್ಮೆಯ ಸಾಂಪ್ರದಾಯಿಕ 'ನೀಲಿ' (ಬ್ಲೂ) ಬಣ್ಣವನ್ನು ಕಳಚಿ, ಹಾಕಿ ತಂಡಕ್ಕೆ ಬಲವಂತವಾಗಿ ಕೇಸರಿ ಬಣ್ಣದ ಜೆರ್ಸಿ ತೊಡಿಸಲು ಹೊರಟಿರುವುದು ಇದೀಗ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಮುಂಬರುವ ಎಫ್‌ಐಎಚ್ (FIH) ವಿಶ್ವಕಪ್‌ಗಾಗಿ...

ತಮಿಳುನಾಡು: ಶಾಲಾ ಮಕ್ಕಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡಲು ಚಿಂತನೆ

ತಮಿಳುನಾಡಿನ ಸರ್ಕಾರಿ ಶಾಲೆಗಳ ಮಧ್ಯಾಹ್ನದ ಬಿಸಿಊಟದ ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ವಾರಕ್ಕೊಮ್ಮೆ ಚಿಕನ್ ಬಿರಿಯಾನಿ ನೀಡುವ ಪ್ರಸ್ತಾವನೆಯನ್ನು ತಮಿಳುನಾಡು ಸರ್ಕಾರ ಪರಿಶೀಲಿಸುತ್ತಿದ್ದು, ಶಾಲಾ ಶಿಕ್ಷಣ ಸಚಿವ ರಾಜ್‌ಮೋಹನ್ ಅವರು ಈ ಕುರಿತು ಮುಖ್ಯಮಂತ್ರಿ ಸಿ....

ಪ್ರಶ್ನೆಪತ್ರಿಕೆ ಸೋರಿಕೆ ವಿರೋಧಿ ಮಸೂದೆಯಲ್ಲಿ ಸುಧಾರಣೆಗಳಿಲ್ಲ, ರಾಜಕೀಯ ಮಾತ್ರ: ಕೇಂದ್ರದ ವಿರುದ್ಧ ಖರ್ಗೆ ವಾಗ್ದಾಳಿ

ಪಬ್ಲಿಕ್ ಪರೀಕ್ಷೆಗಳ (ಅನ್ಯಾಯಯುತ ವಿಧಾನಗಳ ತಡೆಗಟ್ಟುವಿಕೆ) ತಿದ್ದುಪಡಿ ಮಸೂದೆ 2026 ರ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಕೇಂದ್ರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದರು....

ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಕೆ ಆರೋಪ; ಗೃಹ ಸಚಿವ ಅಮಿತ್‌ ಶಾ ಮೌನ ಪ್ರಶ್ನಿಸಿದ ಕಪಿಲ್ ಸಿಬಲ್

ಜುಲೈ 20 ರಂದು ದೆಹಲಿಯಲ್ಲಿ ನಡೆದ ಸಂಶತ್ ಚಲೋ ಪ್ರತಿಭಟನಾ ಮೆರವಣಿಗೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೆಲೆಟ್ ಗನ್ ಬಳಸಲಾಗಿದೆ ಎಂಬ ಆರೋಪದ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಮೌನವನ್ನು...