Homeಮುಖಪುಟಕಾಡು ಬೆಳೆಸಲು ಜೀವ ಮುಡುಪಿಟ್ಟ ಭಟ್ರಳ್ಳಿ ಗೂಳೆಪ್ಪನವರಿಗೆ ವಾಲ್ಮೀಕಿ ಪ್ರಶಸ್ತಿ

ಕಾಡು ಬೆಳೆಸಲು ಜೀವ ಮುಡುಪಿಟ್ಟ ಭಟ್ರಳ್ಳಿ ಗೂಳೆಪ್ಪನವರಿಗೆ ವಾಲ್ಮೀಕಿ ಪ್ರಶಸ್ತಿ

- Advertisement -
- Advertisement -

ಸಂಶೋಧಕ, ಯುವ ಬರಹಗಾರ ಅರುಣ್ ಜೋಳದಕೂಡ್ಲಿಗಿಯವರು ತಮ್ಮ ಎಲೆ ಮರೆ-7ರ ಅಂಕಣದಲ್ಲಿ ಭಟ್ರಳ್ಳಿ ಗೂಳೆಪ್ಪನವರ ಬಗ್ಗೆ ಬರೆದಿದ್ದರು. ಈಗ ಭಟ್ರಳ್ಳಿ ಗೂಳೆಪ್ಪನವರಿಗೆ ವಾಲ್ಮೀಕಿ ಪ್ರಶಸ್ತಿ ದೊರೆತಿದೆ.

ನಂಜುಂಡಪ್ಪ ಅವರ ವರದಿ ಪ್ರಕಾರ ಅತೀ ಹಿಂದುಳಿದ ತಾಲೂಕುಗಳಲ್ಲಿ ಚಳ್ಳಕೆರೆ ಒಳಗೊಂಡಂತೆ ಮೊಳಕಾಲ್ಮೂರು ತಾಲೂಕು ಸೇರುತ್ತದೆ. ಹಾಗೆ ನೋಡಿದರೆ ಇದು ಕರ್ನಾಟಕದ ನಡುಮಧ್ಯೆ ಬರುವ ಭೂಭಾಗ. ಈ ಬಯಲ ಬಿಸಿಲಿಗೆ ಬಿರುಕುಬಿಟ್ಟ ನೆಲದಂತೆಯೂ, ಬಟ್ಟಂಬಯಲ ಆಲಯದಂತೆಯೂ ಇದೆ. ಹಿರಿಯೂರು ಚಳ್ಳಕೆರೆ ಮಾರ್ಗವಾಗಿ ಬಳ್ಳಾರಿಗೆ ಚಲಿಸುತ್ತಿದ್ದರೆ ಈ ಭಾಗದ ಬಂಡೆಗಳಿಂದ ಸುತ್ತುವರಿದ ಬೆಟ್ಟಗಳು ಎದುರಾಗುತ್ತವೆ. ಬಿತ್ತನೆ ಇಲ್ಲದ ಹೊಲಗಳು ಬಿಸಿಲ ಉಡುಪುತೊಟ್ಟು ದುಃಖಿಸುತ್ತಿರುವಂತೆ ಭಾಸವಾಗುತ್ತದೆ. ಸಂಗಾತಿಯಾಗಿ ಪೌಷ್ಠಿಕಾಂಶದ ಕೊರತೆಯಿಂದ ನರಳುತ್ತಿರುವ ಮಕ್ಕಳಂತಹ ಕುರುಚಲು ಕಾಡು ಅಲ್ಲಲ್ಲಿ ಕುಪ್ಪೆಕುಪ್ಪೆಯಾಗಿ ಕಾಣುತ್ತದೆ. ಈ ಮಧ್ಯೆಯೂ ಜೀವಚೈತನ್ಯದ ಕುರುಹು ಎಂಬಂತೆ ಹಾಡುವ ಹಕ್ಕಿಗಳು ಸುಳಿದಾಡುವ ಜೀವರಾಶಿ. ಉಳಿದಂತೆ ಬಯಲೆಂಬ ಬಯಲ ಜತೆ ಬಿಸಿಲೆಂಬ ಬಿಸಿಲು. ಇಂತಹ ಪರಿಸರದಲ್ಲಿ ಹಸಿರಿನ ಕನಸೊತ್ತು ಕಾಡಿನ ಕಾವಲಿಗೆ ತನ್ನ ಜೀವವನ್ನೆ ತೇದು ಗಂಧದ ವಾಸನೆ ಬೀರಿದಾತ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಭಟ್ರಳ್ಳಿಯ ತಳವಾರ ಗೂಳೆಪ್ಪ.

ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹಾಲಸಾಗರ ವ್ಯಾಪ್ತಿಯ ರಕ್ಷಿತ ಅರಣ್ಯವನ್ನು ಪ್ರವೇಶಿಸುತ್ತಿದ್ದಂತೆ ಭಟ್ರಳ್ಳಿ ಗೂಳೆಪ್ಪ ಕಣ್ಣಲ್ಲಿ ಕಣ್ಣಿಟ್ಟು ಬೆಳೆಸಿದ ಹಚ್ಚಹಸಿರಿನ ಕಾಡು ಸಿಗುತ್ತದೆ. ನಾನೊಮ್ಮೆ ಗೂಳೆಪ್ಪನನ್ನು ಭೇಟಿ ಮಾಡಲೆಂದು ಹೋದಾಗ ಗೂಳೆಪ್ಪ ಮಾತನಾಡುತ್ತಾ ಕಾಡಿನೊಳಗೆ ಕರೆದುಕೊಂಡು ಹೋಗತೊಡಗಿದರು. ತಾನು ಅಲ್ಲಲ್ಲಿ ತೋಡಿದ ನೀರುಗುಂಡಿಗಳನ್ನು ತೋರಿಸುತ್ತಾ ನೀರು ನಿಲ್ಲಿಸುವ ಸಾಹಸದ ಕಥೆಗಳನ್ನು ಹೇಳತೊಡಗಿದರು. ನಡಿಗೆಯ ಆರಂಭದಲ್ಲಿ ಬಿಡಿಬಿಡಿಯಾಗಿದ್ದ ಗಿಡಮರಗಳು ನಿಧಾನಕ್ಕೆ ಹೆಚ್ಚಾಗತೊಡಗಿದವು. ಮುಂದೆ ಸ್ವಲ್ಪ ದೂರದಲ್ಲಿ ಸಾಲುಸಾಲು ಆಸಿನ (ಆರಿಗಿಡ) ಮರಗಳು ಕಾಣತೊಡಗಿದವು. 50 ಹೆಕ್ಟೇರ್ ಪ್ರದೇಶದ ಈ ಕಾಡನ್ನು ಗೂಳೆಪ್ಪ ಕಣ್ಣಲ್ಲಿ ಕಣ್ಣಿಟ್ಟು ಕಾಪಿಟ್ಟಿದ್ದಾನೆ.
ಗೂಳೆಪ್ಪ ಈ ಮರಗಳನ್ನು ಯಾವಾಗ ನೆಟ್ಟವು ಎಂದು ಲೆಕ್ಕ ಇಟ್ಟು ಹೇಳುತ್ತಾರೆ. ಕೆಲವು 1995 ರಲ್ಲಿ ನೆಟ್ಟವಾಗಿದ್ದರೆ ಮತ್ತೆ ಕೆಲವು 1997 ರಲ್ಲಿ ನೆಟ್ಟವುಗಳು. ಅವೆಲ್ಲಾ ಈಗ ಎತ್ತರಕ್ಕೆ ಬೆಳೆದು ಗೂಳೆಪ್ಪನ ಹೆಸರೇಳುತ್ತಿವೆ. ಇಡೀ ಕಾಡಿನ ಜೀವನಾಡಿಯನ್ನು ಕೇಳಿಸಿಕೊಳ್ಳುವಷ್ಟು ಈ ಕಾಡಿನ ಜತೆ ಈತ ಬೆಸೆದುಕೊಂಡಿದ್ದಾನೆ. ಈ ಕಾಡನ್ನು ಸುತ್ತಿದ್ದರೆ ಕಡಿದು ಮೊಟಕಾದ ಒಂದೇ ಒಂದು ಬೊಡ್ಡೆಯೂ ಕಾಣಲು ಸಿಗುವುದಿಲ್ಲ. ಅಷ್ಟರಮಟ್ಟಿಗೆ ಗೂಳೆಪ್ಪನ ಕಾವಲು ಕಾಡನ್ನು ಸಂರಕ್ಷಿಸಿದೆ. ಆಲ, ಬೇವು, ಅರಳಿ, ನೇರಲ, ಬಿಕ್ಕೆ, ಕಮರ, ತಪ್ಸೆ, ದೊಂಡು ಜಾಲಿ, ಉಲಿಪೆ, ಸಪಳೆ, ಆಸು ಹೀಗೆ ಹತ್ತಾರು ಜಾತಿಯ ಮರಗಿಡಗಳು ನಿರಾತಂಕವಾಗಿ ಬೆಳೆಯುತ್ತಿವೆ. ಕವಳೆ, ಸೀತಾಫಲ, ಬಿಕ್ಕೆ, ಕಾರೆ, ಬರಗಿ, ಬೆಳವಿ, ಹುಣಸೆ, ಹತ್ತಿ ಮುಂತಾದ ಹಣ್ಣಿನ ಮರಗಿಡಗಳು ಕಾಲಾನುಸಾರ ಹಣ್ಣು ಕೊಡುತ್ತಿವೆ. ಕರಡಿ, ಕಾಡುಹಂದಿ, ಚಿರತೆ, ನರಿ, ಮೊಲ, ತೋಳ ಮೊದಲಾದ ಪ್ರಾಣಿಗಳು, ನವಿಲು, ಬೆಳವ, ಕೋಗಿಲೆ, ಕೌಜುಗ, ಗಿಡುಗ, ಕಾಜಾಣ, ಚಿವುಟ ಗುಬ್ಬಿ ಮೊದಲಾದ ಪಕ್ಷಿಗಳು ಒಳಗೊಂಡಂತೆ ಒಂದು ಕುಟುಂಬದ ಸದಸ್ಯರಂತೆ ನಲಿದಾಡಿಕೊಂಡಿವೆ.

ಹೀಗೆ ಗೂಳೆಪ್ಪ ಕಾಡಿಗೆ ಅಂಟಿಕೊಂಡ ಕಥೆಯೂ ಕುತೂಹಲಕಾರಿಯಾಗಿದೆ. ಸರಿಸುಮಾರು 30 ವರ್ಷದ ಹಿಂದೆ ಅರಣ್ಯ ಇಲಾಖೆಯು ಕಾಡಿನಲ್ಲಿ ಸಸಿ ನೆಡುವ ಕೆಲಸಕ್ಕೆ ದಿನಗೂಲಿ ಲೆಕ್ಕದಲ್ಲಿ ಗೂಳೆಪ್ಪನನ್ನು ಒಳಗೊಂಡಂತೆ ಅನೇಕರನ್ನು ಕೆಲಸಕ್ಕೆ ಹಚ್ಚಿತು. ಹೀಗೆ ಎಲ್ಲರಂತೆ ಗೂಳೆಪ್ಪನೂ ಸಸಿ ನೆಡುತ್ತಾ ಕಾಡಿನ ನಂಟಿಗೆ ಬಿದ್ದ. ಕೆಲಸ ಕಡಿಮೆಯಾದಂತೆ ಇಲಾಖೆ ಕೆಲಸಗಾರರ ಸಂಖ್ಯೆಯನ್ನು ಕಡಿತಗೊಳಿಸುತ್ತಾ ಬಂತು. ನಂತರ ಮಳೆಗಾಲದ ಆರಂಭಕ್ಕಷ್ಟೇ ಒಂದೆರಡು ತಿಂಗಳುಗಳಿಗೆ ಈ ಕೆಲಸ ಸೀಮಿತವಾಯಿತು. ಬರುಬರುತ್ತಾ ನಿಂತೇ ಹೋಯಿತು. ಹೀಗಿರುವಾಗ ಗೂಳೆಪ್ಪನಿಗೆ ಕಾಡಿನ ನಂಟು ಅಷ್ಟೊತ್ತಿಗೆ ಗಟ್ಟಿಯಾಗಿತ್ತು. ಇಲಾಖೆಯವರು ಕೂಲಿ ಕೊಟ್ರೆಷ್ಟು ಬಿಟ್ರೆಷ್ಟು ಸಸಿ ನೆಡುತ್ತಾ ಕಾಡನ್ನ ಕಾಯ್ತೀನಿ ಎಂಬ ನಿರ್ಧಾರಕ್ಕೆ ಬಂದರು. ಈ ಮಧ್ಯೆ ಅರಣ್ಯ ಇಲಾಖೆಯು ನೇಮಿಸಿದ ಕಾಡಿನ ವಾಚರುಗಳು ತಮ್ಮ ಎಂದಿನ ಸಂಬಳಕ್ಕಾಗಿ ಡ್ಯೂಟಿ ಮಾಡುತ್ತಿದ್ದರೆ, ಗೂಳೆಪ್ಪ ಕೂಲಿಯೂ ಇಲ್ಲದೆ ಕಾಡು ಕಾಯುವುದನ್ನು ತನ್ನ ನಿತ್ಯದ ಕರ್ಮವನ್ನಾಗಿಸಿಕೊಂಡ.

ದಿನವೂ ಗೂಳೆಪ್ಪನ ದಿನಚರಿ ಶುರುವಾಗುವುದು ಬೆಳಗ್ಗೆ 5 ಗಂಟೆಗೆ. ಅಷ್ಟೊತ್ತಿಗೆ ಊಟ ಮಾಡಿ, ಬುತ್ತಿ ನೀರು ತಗೊಂದು ಕೈಲೊಂದು ಮಚ್ಚು ಕೋಲಿಡಿದು ಕಾಡಿಗೆ ಹೊರಟರೆ ಮತ್ತೆ ಬರುವುದು ಸಂಜೆ ಏಳರ ಹೊತ್ತಿಗೆ. ಇಂತಹ ದಿನಚರಿಯನ್ನು ಈಗ್ಗೆ 30 ವರ್ಷಗಳಿಂದ ಮಾಡುತ್ತಾ ಬಂದಿರುವುದೇ ಒಂದು ಅಪರೂಪದ ಸಂಗತಿಯಾಗಿದೆ. ಗೂಳೆಪ್ಪ ಕಾಡಿಗೆ ಹೋಗುವುದನ್ನು ನೋಡಿದರೆ ಸಾಕು ಯಾರೂ ಆ ಕಡೆ ಸುಳಿಯುವುದಿಲ್ಲ. ಮರ ಕಡಿಯುವುದಿರಲಿ ಆಡು ಕುರಿ ದನಕರು ಮೇಯಿಸುವುದೂ ಇಲ್ಲಿ ನಿಷಿದ್ಧ. ಕೆಲವೊಮ್ಮೆ ಈತನ ಕಣ್ತಪ್ಪಿಸಿ ಮರ ಕಡಿವ ಕೆಲವರನ್ನು ರೇಂಜರರಿಗೆ ಹಿಡಿದುಕೊಟ್ಟದ್ದಕ್ಕೆ ಗೂಳೆಪ್ಪ ಊರವರ ವಿರೋಧವನ್ನೂ ಎದುರಿಸಬೇಕಾಯಿತು. ಇದರಿಂದಾಗಿ ಸುತ್ತಮುತ್ತಣ ಊರವರ ಜತೆ ಸಣ್ಣಪುಟ್ಟ ಜಗಳಗಳೂ ಮನಸ್ತಾಪಗಳೂ ನಡೆದವು. ಇದೀಗ ಇಂತಹ ಯಾವ ಸಂಘರ್ಷಗಳೂ ನಡೆಯುವಂತಿಲ್ಲ. ಸುತ್ತಮುತ್ತಣ ಊರವರಿಗೆ ಗೂಳೆಪ್ಪನ ಬಗ್ಗೆ ಎಂಥದೋ ಪ್ರೀತಿಸ್ನೇಹದ ಬೆಸುಗೆ ಸಾಧ್ಯವಾಗಿದೆ.

ಗೂಳೆಪ್ಪನ ಮನದಲ್ಲಿ ಅವಿತು ಕುಳಿತು ಬಿಕ್ಕಳಿಸುವ ದುಃಖದ ಕಡಲೊಂದಿದೆ. ಅದು ಗೂಳೆಪ್ಪನನ್ನು ಇನ್ನಷ್ಟು ಗಟ್ಟಿಗೊಳಿಸಿದಂತಿದೆ. ಆರು ಜನ ಮಕ್ಕಳು ಚಿಕ್ಕವರಿರುವಾಗಲೆ ಮಡದಿ ಅಕಾಲಿಕ ಮರಣವನ್ನಪ್ಪುತ್ತಾಳೆ. ಮಡದಿಯ ಸಾವು ಗೂಳೆಪ್ಪನನ್ನು ಇನ್ನಿಲ್ಲದ ಕಷ್ಟಕ್ಕೆ ಸಿಲುಕಿಸುತ್ತದೆ. ಇಂತಹ ಕಡುಕಷ್ಟದಲ್ಲಿ ಗೂಳೆಪ್ಪ ಮಕ್ಕಳಿಗೆ ಅಡುಗೆ ಮಾಡಿಟ್ಟು, ಅವರನ್ನೆಲ್ಲಾ ಶಾಲೆಗೆ ಕಳಿಸಿ ಮತ್ತೆ ತನ್ನ ಕಾಡುಕಾಯುವ ಕಾಯಕಕ್ಕೆ ಹೋಗುತ್ತಿದ್ದರು. ಈ ಮಧ್ಯೆ ಮರುಮದುವೆಗೆ ಸಲಹೆಗಳು ಬಂದರೂ ಗೂಳೆಪ್ಪ ಅತ್ತ ಕಡೆ ಗಮನ ಹರಿಸಲಿಲ್ಲ. ಬಹುಶಃ ಕಾಡಿನ ಗಿಡ ಮರ ಬಳ್ಳಿಗಳ ಜತೆಗಿನ ಒಡನಾಟವೇ ಅವರ ಒಂಟಿತನವನ್ನು ನೀಗಿ ಜೀವನೋತ್ಸಾಹವನ್ನು ತುಂಬಿದಂತಿದೆ.

ಗೂಳೆಪ್ಪನ ಈತನಕದ ಅನುಭವದಲ್ಲಿ ಹತ್ತು ಜನ ರೇಂಜರುಗಳು ಬಂದುಹೋಗಿದ್ದಾರೆ. ಇದರಲ್ಲಿ ದಿದಿಗಿ ಸಾಹೇಬರು ಎನ್ನುವ ರೇಂಜರನ್ನು ಗೂಳೆಪ್ಪ ಪ್ರೀತಿಯಿಂದ ನೆನೆಯುತ್ತಾರೆ. ಅವರು ತುಂಬಾ ಸ್ಟ್ರಿಕ್ಟ್ ಆಫೀಸರ್ ಆಗಿದ್ದರು ಯಾವ ಪಿಳ್ಳೆ ನರಿಯೂ ಕಾಡನ್ನು ಪ್ರವೇಶ ಮಾಡುವಂತಿರಲಿಲ್ಲ ಎನ್ನುವುದು ಆತನ ಅಭಿಪ್ರಾಯ. ಹಾಗಾಗಿ ಇವರಿದ್ದಾಗ ಗೂಳೆಪ್ಪನಿಗೆ ಆನೆಯ ಬಲ ಬಂದಂತಾಗಿತ್ತು. ಈ ಸಂದರ್ಭದಲ್ಲಿಯೇ ಗೂಳೆಪ್ಪನ ದಿನಗೂಲಿಯು ಸಂಬಳವಾಗಿ ಪರಿವರ್ತನೆ ಹೊಂದಿತು. ಇದರಿಂದಾಗಿ ಇದೀಗ ಗೂಳೆಪ್ಪ ನಿಯಮಿತವಾಗಿ ಒಂದಷ್ಟು ಸಂಬಳವನ್ನು ಪಡೆಯುವಂತಾಗಿದೆ. ಗೂಳೆಪ್ಪ ಕಾಯುವ ಕಾಡು ಗುಡೆಕೋಟೆ ಕರಡಿಧಾಮದ ವ್ಯಾಪ್ತಿಗೆ ಬಂದಿದೆ. ಎಂದಿನಂತೆ ಕಾಡಿನ ಮರ ಗಿಡ ಬಳ್ಳಿ ಹಕ್ಕಿ ಕ್ರಿಮಿಕೀಟ ಪ್ರಾಣಿಗಳ ಜತೆ ಪಿಸುಮಾತನ್ನಾಡುತ್ತಾ ಗೂಳೆಪ್ಪ ಕಾಡು ಕಾಯುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ.

  • ಅರುಣ್ ಜೋಳದ ಕೂಡ್ಲಿಗಿ

ಇದನ್ನೂ ಓದಿ: ಲೈಂಗಿಕ ವೃತ್ತಿಯಿಂದ ಲೇಖಕಿಯಾಗಿ ಬದಲಾದ ನಳಿನಿ ಜಮೀಲಾಗೆ ಕೇರಳ ರಾಜ್ಯ ಚಲನಚಿತ್ರ ಪ್ರಶಸ್ತಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಕಾನೂನು ಕ್ರಮ ಜರುಗಿಸಲು ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂ ತಡೆ

ನವದೆಹಲಿ: ಮೈಸೂರು ಜಿಲ್ಲಾಧಿಕಾರಿಯಾಗಿದ್ದ ಅವಧಿಯಲ್ಲಿ ನಡೆದ 2021 ರ "ಬಟ್ಟೆ ಚೀಲ ಹಗರಣ"ಕ್ಕೆ ಸಂಬಂಧಿಸಿದಂತೆ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲು ರಾಜ್ಯ ಸರ್ಕಾರಕ್ಕೆ ಅನುಮತಿ ನೀಡುವಂತೆ...

‘ಯುದ್ಧ ಸೃಷ್ಟಿಸಿದ್ದು ನೀವೇ’: ಹಾರ್ಮುಜ್ ಅಡ್ಡಿಗೆ ಅಮೆರಿಕವನ್ನು ದೂಷಿಸಿದ ಚೀನಾ, ಟ್ರಂಪ್ ಅವರ ‘ಧೈರ್ಯದ ಕೊರತೆ’ ಹೇಳಿಕೆಗೆ ತಿರುಗೇಟು

ಚೀನಾ ಮತ್ತು ಜಪಾನ್‌ನಂತಹ ದೇಶಗಳು ಹಾರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯಲು "ಧೈರ್ಯ" ಹೊಂದಿಲ್ಲ ಎಂದು ಹೇಳಿದ್ದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಗಳನ್ನು ಚೀನಾ ಬಲವಾಗಿ ವಿರೋಧಿಸಿದೆ. ಪತ್ರಿಕಾಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ಚೀನಾದ ವಿದೇಶಾಂಗ...

ಮೂರನೇ ಅತ್ಯಾಚಾರ ಪ್ರಕರಣ: ಸ್ವ-ಘೋಷಿತ ‘ದೇವಮಾನವ’ ಖರತ್‌ಗೆ ಏಳು ದಿನಗಳ ನ್ಯಾಯಾಂಗ ಬಂಧನ ವಿಧಿಸಿದ ನಾಸಿಕ್ ನ್ಯಾಯಾಲಯ

ನಾಸಿಕ್: ಗರ್ಭಿಣಿ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ದಾಖಲಾಗಿರುವ ಮೂರನೇ ಅತ್ಯಾಚಾರ ಪ್ರಕರಣದಲ್ಲಿ ಸ್ವಯಂ ಘೋಷಿತ ದೇವಮಾನವ ಅಶೋಕ್ ಖರತ್ ಅವರನ್ನು ಮಹಾರಾಷ್ಟ್ರದ ನಾಸಿಕ್ ನ್ಯಾಯಾಲಯ ಸೋಮವಾರ ಏಪ್ರಿಲ್...

‘ನನ್ನನ್ನು ಎದುರಿಸಲು 19 ರಾಜ್ಯಗಳು, ಕೇಂದ್ರ ಒಗ್ಗೂಡಿವೆ, ನಾನು ಸಾಮಾನ್ಯ ಜನರಿಗಾಗಿ ಏಕಾಂಗಿಯಾಗಿ ಹೋರಾಡುತ್ತಿದ್ದೇನೆ’: ಮಮತಾ ಬ್ಯಾನರ್ಜಿ

2026ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಮುನ್ನ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸೋಮವಾರ ತಮ್ಮ ವಿರುದ್ಧ ಹೋರಾಡಲು 19 ರಾಜ್ಯಗಳು ಮತ್ತು ಕೇಂದ್ರ ಸರ್ಕಾರಗಳು ಒಗ್ಗೂಡಿವೆ ಮತ್ತು ಅವರು ಸಾಮಾನ್ಯ ಜನರಿಗಾಗಿ ಏಕಾಂಗಿಯಾಗಿ...

ಮತಗಟ್ಟೆಗಳಲ್ಲಿ ಬಯೋಮೆಟ್ರಿಕ್ ವ್ಯವಸ್ಥೆ : ಕೇಂದ್ರ ಸರ್ಕಾರ, ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ನೋಟಿಸ್

ಚುನಾವಣಾ ಅಕ್ರಮಗಳನ್ನು ತಡೆಗಟ್ಟಲು ಮತದಾನ ಕೇಂದ್ರಗಳಲ್ಲಿ ಬೆರಳಚ್ಚು ಮತ್ತು ಕಣ್ಣಿನ ಮಣಿ (ಐರಿಸ್) ಆಧಾರಿತ ಬಯೋಮೆಟ್ರಿಕ್ ಗುರುತಿಸುವಿಕೆಯನ್ನು ಜಾರಿಗೆ ತರಬೇಕು ಎಂದು ಕೋರಿ ಸಲ್ಲಿಕೆಯಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ (ಪಿಐಎಲ್‌) ಸಂಬಂಧ ಸುಪ್ರೀಂ...

‘ಅಸ್ಸಾಂ ಮುಖ್ಯಮಂತ್ರಿ ದೇಶದ ಅತ್ಯಂತ ಭ್ರಷ್ಟ, ತಮ್ಮ ವಿರೋಧಿಗಳನ್ನು ಮುಗಿಸಲು ಅಧಿಕಾರ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ; ರಾಹುಲ್ ಗಾಂಧಿ

ನವದೆಹಲಿ: "ಅಸ್ಸಾಂನ ಪ್ರಸ್ತುತ ಮುಖ್ಯಮಂತ್ರಿ ದೇಶದ ಅತ್ಯಂತ ಭ್ರಷ್ಟ. ಅವರು ಕಾನೂನಿನಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ತಮ್ಮ ರಾಜಕೀಯ ವಿರೋಧಿಗಳು ಮತ್ತು ವಿಮರ್ಶಕರನ್ನು ಕಿರುಕುಳ ನೀಡಲು ಅವರು ರಾಜ್ಯ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುವುದು ಸಂವಿಧಾನಕ್ಕೆ ವಿರುದ್ಧವಾಗಿದೆ"...

ಕೃಷಿ ವೆಚ್ಚದ ಆಧಾರದ ಮೇಲೆ ಎಂಎಸ್‌ಪಿ ನಿಗದಿ ಕೋರಿ ರೈತರಿಂದ ಅರ್ಜಿ : ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್

ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್‌ಪಿ) ನಿಗದಿಪಡಿಸುವಾಗ, ಆಯಾ ರಾಜ್ಯ ಸರ್ಕಾರಗಳು ಪ್ರಸ್ತಾಪಿಸಿದ 'C2' ಎಂದು ಕರೆಯಲಾಗುವ ಕೃಷಿ ವೆಚ್ಚಕ್ಕೆ ಸಮರ್ಪಕ ಪ್ರಾಮುಖ್ಯತೆ ನೀಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಬೇಕೆಂದು ಕೋರಿ...

ದೆಹಲಿ ವಿವಿ: ಅಂಬೇಡ್ಕರ್ ಕಾಲೇಜಿನಲ್ಲಿ ಆರ್‌ಎಸ್‌ಎಸ್ ಕಾರ್ಯಕ್ರಮ ವಿರೋಧಿಸಿ ಪ್ರತಿಭಟಿಸಿದ ವಿದ್ಯಾರ್ಥಿಗಳ ಮೇಲೆ ಹಲ್ಲೆ, ಬಂಧನ

ಸೋಮವಾರ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಆಯೋಜಿಸಿದ್ದ ಕಾರ್ಯಕ್ರಮವನ್ನು ವಿರೋಧಿಸಿ ಪ್ರತಿಭಟಿಸಿದ ದೆಹಲಿ ವಿಶ್ವವಿದ್ಯಾಲಯದ ಡಾ. ಭೀಮ್ ರಾವ್ ಅಂಬೇಡ್ಕರ್ ಕಾಲೇಜಿನ ವಿದ್ಯಾರ್ಥಿಗಳ ಮೇಲೆ ಭದ್ರತಾ ಸಿಬ್ಬಂದಿ ಹಲ್ಲೆ ನಡೆಸಿ, ದೆಹಲಿ ಪೊಲೀಸರು...

ಪವನ್ ಖೇರಾಗೆ ನಿರೀಕ್ಷಣಾ ಜಾಮೀನು : ತೆಲಂಗಾಣ ಹೈಕೋರ್ಟ್ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಅಸ್ಸಾಂ ಸರ್ಕಾರ

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪತ್ನಿ ವಿರುದ್ಧದ ಹೇಳಿಕೆಗಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ಪವನ್ ಖೇರಾ ಅವರಿಗೆ ತೆಲಂಗಾಣ ಹೈಕೋರ್ಟ್ ಒಂದು ವಾರದ ಟ್ರಾನ್ಸಿಟ್ ನಿರೀಕ್ಷಣಾ ಜಾಮೀನು ನೀಡಿದ...

ಶಾಂತಿಗಾಗಿ ಕರೆ ನೀಡಿದ್ದ ಪೋಪ್ ಲಿಯೋ XIV ವಿರುದ್ಧ ಟ್ರಂಪ್ ವಾಗ್ದಾಳಿ; ತಾನೇ ಯೇಸು ಕ್ರಿಸ್ತ ಎಂಬಂತೆ ಎಐ ಫೋಟೋ ಹಂಚಿಕೊಂಡ ಅಮೆರಿಕ ಅಧ್ಯಕ್ಷ

ವಾಷಿಂಗ್ಟನ್: ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾನುವಾರ ರಾತ್ರಿ ಪೋಪ್ ಲಿಯೋ XIV ವಿರುದ್ಧ ಅಸಾಧಾರಣ ಟೀಕೆಗಳನ್ನು ವ್ಯಕ್ತಪಡಿಸಿದ್ದಾರೆ. ಅಮೆರಿಕದಲ್ಲಿ ಜನಿಸಿದ ಕ್ಯಾಥೋಲಿಕ್ ಚರ್ಚ್‌ನ ಜಾಗತಿಕ ನಾಯಕ "ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ" ಮತ್ತು...