- Advertisement -
- Advertisement -
ತೀವ್ರ ಕುತೂಹಲ ಕೆರಳಿಸಿದ್ದ ಉಪಚುನಾವಣೆಯ 15 ಕ್ಷೇತ್ರಗಳ ಮತ ಎಣಿಕೆ ಮುಗಿಯುತ್ತಾ ಬಂದಿದ್ದು ಬಹುತೇಕ ಫಲಿತಾಂಶ ಸ್ಪಷ್ಟಗೊಂಡಿದೆ.
ಪಕ್ಷೇತರ ಅಭ್ಯರ್ಥಿ ಶರತ್ ಬಚ್ಚೇಗೌಡ ಹೊಸಕೋಟೆಯಲ್ಲಿ ಗೆಲುವಿನ ಕಡೆ ಮುನ್ನುಗ್ಗಿದ್ದರೆ, ಹುಣಸೂರಿನಲ್ಲಿ ಕಾಂಗ್ರೆಸ್ ಗೆದ್ದಿದ್ದು ಶಿವಾಜಿನಗರದಲ್ಲಿ ಗೆಲುವಿನ ಕಡೆ ಮುಖಮಾಡಿದೆ. ಯಶವಂತಪುರದಲ್ಲಿ ಜೆಡಿಎಸ್ನ ಜವರಾಯಿಗೌಡ ಮತ್ತು ಬಿಜೆಪಿಯ ಎಸ್.ಟಿ ಸೋಮಶೇಖರ್ ನಡುವೆ ತೀವ್ರ ಪೈಪೋಟಿ ನಡೆದಿದೆ.
ಇನ್ನುಳಿದ 11 ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿದೆ ಅಥವಾ ಭಾರೀ ಮುನ್ನಡೆ ಗಳಿಸಿದೆ. ಆ ಕ್ಷೇತ್ರಗಳೆಂದರೆ
ಯಲ್ಲಾಪುರ – ಶಿವರಾಮ್ ಹೆಬ್ಬಾರ್
ಅಥಣಿ – ಮಹೇಶ್ ಕುಮಟಳ್ಳಿ
ಗೋಕಾಕ್ – ರಮೇಶ್ ಜಾರಕಿಹೊಳಿ
ಕಾಗವಾಡ – ಶ್ರೀಮಂತ ಪಾಟೀಲ್
ಹಿರೆ ಕೆರೂರು – ಬಿ.ಸಿ ಪಾಟೀಲ್
ರಾಣಿ ಬೆನ್ನೂರು – ಅರುಣ್ ಕುಮಾರ್
ವಿಜಯನಗರ – ಆನಂದ್ ಸಿಂಗ್
ಮಹಾಲಕ್ಷ್ಮಿ ಲೇಔಟ್ – ಕೆ.ಗೋಪಾಲಯ್ಯ
ಕೆ.ಆರ್ ಪುರಂ – ಭೈರತಿ ಬಸವರಾಜ್
ಚಿಕ್ಕಬಳ್ಳಾಪುರ – ಡಾ.ಕೆ ಸುಧಾಕರ್
ಕೆ.ಆರ್ ಪೇಟೆ – ಕೆ.ಸಿ ನಾರಾಯಣಗೌಡ