Homeಮುಖಪುಟಗುಜರಾತ್‌ನಿಂದ ಮಾನವ ಕಳ್ಳಸಾಗಾಣೆ? ಪ್ರಾನ್ಸ್‌ನಿಂದ ವಿಮಾನ ವಾಪಾಸ್ಸಾದ ಬಳಿಕ ಬಲವಾದ ಸಂಶಯ

ಗುಜರಾತ್‌ನಿಂದ ಮಾನವ ಕಳ್ಳಸಾಗಾಣೆ? ಪ್ರಾನ್ಸ್‌ನಿಂದ ವಿಮಾನ ವಾಪಾಸ್ಸಾದ ಬಳಿಕ ಬಲವಾದ ಸಂಶಯ

- Advertisement -
- Advertisement -

ನಿಕರಾಗುವಾಗೆ ತೆರಳುತ್ತಿದ್ದ ವಿಮಾನ ತಾಂತ್ರಿಕ ಕಾರಣಕ್ಕೆ ಪ್ರಾನ್ಸ್‌ನ ವಾಟ್ರಿ ವಿಮಾನ ನಿಲ್ದಾಣದಲ್ಲಿ ಇಳಿದಿತ್ತು. ಈ ವೇಳೆ ಮಾನವ ಕಳ್ಳಸಾಗಣೆ ಶಂಕೆಯಲ್ಲಿ ಫ್ರಾನ್ಸ್‌ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ಬಳಿಕ ವಿಮಾನವನ್ನು ಭಾರತಕ್ಕೆ ವಾಪಾಸ್ಸು ಕಳುಹಿಸಿದ್ದರು. ಲೆಜೆಂಡ್ ಏರ್‌ಲೈನ್ಸ್‌ಗೆ ಸೇರಿದ A340 ವಿಮಾನ ಭಾರತಕ್ಕೆ ಬಂದಿಳಿದ ಬಳಿಕ ವಿಮಾನದಲ್ಲಿದ್ದ ಪ್ರಯಾಣಿಕರನ್ನು ಗುಜರಾತ್ ಅಪರಾಧ ತನಿಖಾ ಇಲಾಖೆ (ಸಿಐಡಿ)  ವಿಚಾರಣೆ ನಡೆಸಿದೆ. 21 ಮಂದಿಯ ಹೇಳಿಕೆಗಳನ್ನು ಸಿಐಡಿ ಪೊಲೀಸರು ದಾಖಲಿಸಿದ್ದು, ಈ ವೇಳೆ ಮಕ್ಕಳು ಸೇರಿ ಹಲವರಿಗೆ ಚಾರ್ಟರ್ಡ್ ವಿಮಾನವನ್ನು ಏಕೆ ಹತ್ತಿದರು ಎಂಬುದನ್ನು ವಿವರಿಸಲು ಸಾಧ್ಯವಾಗಲಿಲ್ಲ ಎಂದು ಸಿಐಡಿ ಅಧಿಕಾರಿಗಳು ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿದ ಐಡಿ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಎಸ್‌ಪಿ ರಾಜ್‌ಕುಮಾರ್, ಅವರನ್ನು ಫ್ರಾನ್ಸ್‌ನಿಂದ ವಾಪಸ್ ಕಳುಹಿಸಲಾಯಿತು. ನಿಕರಾಗುವಾದಲ್ಲಿ ಬಂದಿಳಿದ ನಂತರ ಅವರು ಅಕ್ರಮವಾಗಿ ಯುಎಸ್ ಪ್ರವೇಶಿಸಲು ನಿರ್ಧರಿಸಿದ್ದರು ಎಂಬ ವದಂತಿ ಇತ್ತು. ಅವರ ಹೇಳಿಕೆಗಳಲ್ಲಿ ಅವರು ಪ್ರವಾಸಿಗರಾಗಿ ಅಲ್ಲಿಗೆ ಹೋಗುತ್ತಿದ್ದಾರೆ ಎಂದು ನಮಗೆ ತಿಳಿಸಿದ್ದರು. ಅವರ ಪ್ರವಾಸದ ಹಿಂದೆ ಏಜೆಂಟ್‌ಗಳು ಯಾರೆಂಬುದನ್ನು ಕಂಡುಹಿಡಿಯಲು ನಾವು ತನಿಖೆ ನಡೆಸುತ್ತೇವೆ ಎಂದು ಹೇಳಿದ್ದಾರೆ.

ಅಮೆರಿಕಕ್ಕೆ ಹೋಗಲು ಅವರು ಅಸಲಿ ಅಥವಾ ನಕಲಿ ದಾಖಲೆಗಳನ್ನು ಬಳಸಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ನಾವು ಅವರ ದಾಖಲೆಗಳನ್ನು ಪರಿಶೀಲಿಸುತ್ತಿದ್ದೇವೆ. ನಾವು ಅವರ ಹಣಕಾಸಿನ ವಹಿವಾಟುಗಳನ್ನು ಸಹ ಪರಿಶೀಲಿಸುತ್ತೇವೆ ಏಕೆಂದರೆ ಅವರು ಸಾಮಾನ್ಯ ಪ್ರವಾಸಿಗರಂತೆ ಅಲ್ಲಿಗೆ ಹೋಗುತ್ತಿದ್ದರೆ ಅವರು ಹೆಚ್ಚು ಪಾವತಿಸಬಾರದಿತ್ತು ಎಂದು ಹೇಳಿದ್ದಾರೆ.

ಸಂತ್ರಸ್ತರಿಗೆ ಯುಎಸ್ ಮತ್ತು ಇತರ ದೇಶಗಳಿಗೆ ಕಾನೂನುಬಾಹಿರವಾಗಿ ಪ್ರವೇಶಿಸಲು ಸಹಾಯ ಮಾಡುವ ಭರವಸೆ ನೀಡಿದ ಏಜೆಂಟರ ವಿರುದ್ಧ ಕ್ರಮ ತೆಗೆದುಕೊಳ್ಳಲು ಸಿಐಡಿ ಬಯಸುತ್ತದೆ. ಈ ಏಜೆಂಟರು ನೀಡಿದ ಭರವಸೆಗಳ ಬಗ್ಗೆ ಸಂತ್ರಸ್ತರಿಂದ ಮಾಹಿತಿ ಪಡೆಯಲು ನಾವು 4 ತಂಡಗಳನ್ನು ರಚಿಸಿದ್ದೇವೆ ಎಂದು ಸಿಐಡಿ ಅಧಿಕಾರಿಗಳು ಹೇಳಿದ್ದಾರೆ.

ಲೆಜೆಂಡ್ ಏರ್‌ಲೈನ್ಸ್‌ಗೆ ಸೇರಿದ ನಿಕರಾಗುವಾಗೆ ಹೊರಟಿದ್ದ 276 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ವಿಮಾನದಲ್ಲಿ 65 ಗುಜರಾತಿಗಳು ಇದ್ದರು. ಮಾನವ ಕಳ್ಳಸಾಗಣೆಯ ಶಂಕೆ ಮೇಲೆ ವಿಮಾನ 4 ದಿನ ಫ್ರಾನ್ಸ್‌ನ ಪೊಲೀಸರ ವಶದಲ್ಲಿತ್ತು. ಇದರಲ್ಲಿ ಶಂಕಿತ ಇಬ್ಬರನ್ನು ಬಂಧಿಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು. ಸ್ವ ಇಚ್ಛೆಯಿಂದ ವಿಮಾನವೇರಿದ್ದಾಗಿ ಪ್ರಯಾಣಿಕರು ಹೇಳಿಕೆ ನೀಡಿದ್ದರಿಂದ ಎಲ್ಲರಿಗೂ ಪ್ರಯಾಣ ಮುಂದುವರಿಸಲು ಅನುಮತಿಸಲಾಯಿತು ಎಂದು ಫ್ರಾನ್ಸ್‌ ನ್ಯಾಯಾಂಗ ಮೂಲಗಳು ಹೇಳಿದ್ದವು. ವಿಮಾನ ಡಿ. 26 ರಂದು ಮುಂಬೈಗೆ ವಾಪಾಸ್ಸು ಬಂದಿಳಿದಿತ್ತು. ನಂತರ ಗುಜರಾತ್‌ನ 21 ಪ್ರಯಾಣಿಕರು ಬುಧವಾರ ರಾಜ್ಯಕ್ಕೆ ವಾಪಾಸ್ಸಾಗಿದ್ದರು.

ಅನೇಕ ಪ್ರಯಾಣಿಕರು ನಿಕರಾಗುವಾಗೆ ಪ್ರವಾಸಿಗರಾಗಿ ಪ್ರಯಾಣಿಸುತ್ತಿದ್ದೆವು ಎಂದು ಹೇಳಿಕೊಂಡಿದ್ದಾರೆ ಎಂದು ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ. ಪ್ರಯಾಣಿಕರು ತಾವು ನಿಕರಾಗುವಾಕ್ಕೆ ಪ್ರಯಾಣಿಸುತ್ತಿದ್ದೆವು ಎಂದು ಹೇಳಿದ್ದಾರೆ. ವೀಸಾಗಳನ್ನು ಪಡೆಯಲು ಅವರು ಮಾನ್ಯವಾದ ದಾಖಲೆಗಳನ್ನು ಹೊಂದಿದ್ದರು ಮತ್ತು ಕೆಲವರು ಪ್ರವಾಸಿ ವೀಸಾಗಳನ್ನು ಸಹ ಹೊಂದಿದ್ದರು. ಅವರು ಚಾರ್ಟರ್ಡ್ ವಿಮಾನವನ್ನು ಏಕೆ ಹತ್ತಿದರು ಎಂಬುದನ್ನು ವಿವರಿಸಲು ಸಾಧ್ಯವಾಗಲಿಲ್ಲ. ಅದರಲ್ಲಿ ಹೆಚ್ಚಾಗಿ ಒಂಟಿ ವ್ಯಕ್ತಿಗಳು ಮತ್ತು ಜೊತೆಯಲ್ಲಿ ಯಾರೂ ಇಲ್ಲದ ಅಪ್ರಾಪ್ತ ವಯಸ್ಕರನ್ನು ಹೊಂದಿತ್ತು. ಅವರು ಏಜೆಂಟರಿಗೆ ದೊಡ್ಡ ಮೊತ್ತದ ಹಣವನ್ನು ಏಕೆ ಪಾವತಿಸಿದರು ಎಂಬುದನ್ನು ವಿವರಣೆ ಕೊಟ್ಟಿಲ್ಲ ಎಂದು ಹೇಳಿದ್ದಾರೆ.

ಪ್ರಯಾಣಿಕರು ಕನಿಷ್ಠ ಇಬ್ಬರು ಸ್ಥಳೀಯ ಏಜೆಂಟರನ್ನು ಹೆಸರಿಸಿದ್ದಾರೆ ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದರು. ಅವರು ಮೆಕ್ಸಿಕೋ ಮೂಲಕ ಯುಎಸ್‌ಗೆ ಕರೆದೊಯ್ಯಲು ಪ್ರತಿ ವ್ಯಕ್ತಿಗೆ 50 ಲಕ್ಷ ಮತ್ತು ಅದಕ್ಕಿಂತ ಹೆಚ್ಚಿನ ಶುಲ್ಕವನ್ನು ವಿಧಿಸಿರಬಹುದು. ಪ್ರಸ್ತುತ ನಕಲಿ ದಾಖಲೆಗಳ ಪುರಾವೆ ಅಥವಾ ಪ್ರಯಾಣಿಕರು ದೂರು ಸಲ್ಲಿಸದ ಹೊರತು ಏಜೆಂಟ್‌ಗಳ ವಿರುದ್ಧ ಯಾವುದೇ ಪ್ರಕರಣವನ್ನು ದಾಖಲಿಸಲಾಗುವುದಿಲ್ಲ ಎಂದು ಅಧಿಕಾರಿ ಹೇಳಿದರು.

ಡಿ.15 ರಿಂದ ಗುಜರಾತಿಗಳ ಅಕ್ರಮ ವಲಸೆಗೆ ಅನುಕೂಲ ಮಾಡಿಕೊಡುವ ಏಜೆನ್ಸಿಗಳ ವಿರುದ್ಧದ ಕಾರ್ಯಾಚರಣೆಯಲ್ಲಿ ಅಹಮದಾಬಾದ್ ಮತ್ತು ಗಾಂಧಿನಗರ ವಲಯಗಳಲ್ಲಿ 15 ವಲಸೆ ಏಜೆಂಟ್‌ಗಳಲ್ಲಿ ಕನಿಷ್ಠ 8 ಜನರನ್ನು ಸಿಐಡಿ ಬಂಧಿಸಿದೆ.

ಇದನ್ನು ಓದಿ; ದೆಹಲಿ: ಮಾನವ ಕಳ್ಳ ಸಾಗಾಣಿಕೆ ಶಂಕೆ: ಏರ್ ಇಂಡಿಯಾ ಸಿಬ್ಬಂದಿ ಸೇರಿ ಐವರ ಬಂಧನ

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...