ರಾಜಕೀಯ ಪಕ್ಷಗಳು ಪರಿಶಿಷ್ಟ ಜಾತಿಯವರನ್ನು ಗುಲಾಮರಂತೆ ನಡೆಸಿಕೊಳ್ಳುತ್ತಿದ್ದು, ಮುಕ್ತವಾಗಿ ಮಾತನಾಡಿದರೆ ಚುನಾವಣೆಗೆ ಟಿಕೆಟ್ ನೀಡುವುದಿಲ್ಲ ಎಂದು ಬಿಜೆಪಿ ಶಾಸಕ ಕೈಲಾಶ್ ಮೇಘವಾಲ್ ಹೇಳಿದ್ದಾರೆ.
ಭಾನುವಾರ ಸಂಜೆ ಭಿಲ್ವಾರಾ ಜಿಲ್ಲೆಯ ಶಾಹ್ಪುರದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡುವಾಗ ರಾಜಸ್ಥಾನದ ಮಾಜಿ ವಿಧಾನಸಭಾ ಸ್ಪೀಕರ್ ಮೇಘವಾಲ್ ಈ ರೀತಿಯಲ್ಲಿ ಟೀಕೆಗಳನ್ನು ಮಾಡಿದರು.
“ಇದು ನನ್ನ ಕ್ಷೇತ್ರ, ಈ ಕ್ಷೇತ್ರ ಹಿಂದುಳಿದಿತ್ತು ಮತ್ತು ಈಗಲೂ ಹಿಂದುಳಿದಿದೆ ಏಕೆಂದರೆ, 1952ರಿಂದ ಇದು ಮೀಸಲು ಕ್ಷೇತ್ರವಾಗಿದೆ” ಎಂದು ಶಹಾಪುರ ಶಾಸಕ ಮೇಘವಾಲ್ ಹೇಳಿದರು.
ಇದನ್ನೂ ಓದಿ: ಮಧ್ಯಪ್ರದೇಶ: ದಲಿತರು ದೇವಾಲಯ ಪ್ರವೇಶಿಸಿದರೆಂದು ಹಿಂಸಾಚಾರ; 14 ಜನರಿಗೆ ಗಾಯ
”ಇಂದಿನ ರಾಜಕೀಯದಲ್ಲಿ ರಾಜಕೀಯ ಪಕ್ಷಗಳು ಪರಿಶಿಷ್ಟ ಜಾತಿಯವರನ್ನು ಗುಲಾಮರಂತೆ ನಡೆಸಿಕೊಳ್ಳುತ್ತವೆ ಎಂದು ಹೇಳಲು ನನಗೆ ಯಾವುದೇ ಹಿಂಜರಿಕೆಯಿಲ್ಲ. ಅವರಿಗೆ ಮುಕ್ತವಾಗಿ ಮಾತನಾಡುವ ಸ್ವಾತಂತ್ರ್ಯವಿಲ್ಲ. ಅವರು ಮುಕ್ತವಾಗಿ ಮಾತನಾಡಿದರೆ ಟಿಕೆಟ್ ನೀಡುವುದಿಲ್ಲ” ಎಂದರು.
ಈ ವಿಚಾರವಾಗಿ ಮೇಘವಾಲ್ ಅವರನ್ನು ಪಿಟಿಐ ಸಂಪರ್ಕಿಸಿದಾಗ ಅವರು, ”ನಾನು ಏನು ಹೇಳಲು ಬಯಸಿದ್ದೇನೋ ಅದನ್ನೆಲ್ಲ ಹೇಳಿದ್ದೇನೆ. ನಾನು ಅದರ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ, ನಾನು ಹೇಳಿರುವುದರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಆದರೆ ಅದೇ ಸತ್ಯ” ಎಂದು ಅವರು ಹೇಳಿದರು.