Homeಮುಖಪುಟದಲಿತರನ್ನು ರಾಜಕೀಯ ಪಕ್ಷಗಳು 'ಗುಲಾಮರಂತೆ' ನಡೆಸಿಕೊಳ್ಳುತ್ತಿವೆ: ಬಿಜೆಪಿ ಶಾಸಕ ಮೇಘವಾಲ್

ದಲಿತರನ್ನು ರಾಜಕೀಯ ಪಕ್ಷಗಳು ‘ಗುಲಾಮರಂತೆ’ ನಡೆಸಿಕೊಳ್ಳುತ್ತಿವೆ: ಬಿಜೆಪಿ ಶಾಸಕ ಮೇಘವಾಲ್

- Advertisement -
- Advertisement -

ರಾಜಕೀಯ ಪಕ್ಷಗಳು ಪರಿಶಿಷ್ಟ ಜಾತಿಯವರನ್ನು ಗುಲಾಮರಂತೆ ನಡೆಸಿಕೊಳ್ಳುತ್ತಿದ್ದು, ಮುಕ್ತವಾಗಿ ಮಾತನಾಡಿದರೆ ಚುನಾವಣೆಗೆ ಟಿಕೆಟ್ ನೀಡುವುದಿಲ್ಲ ಎಂದು ಬಿಜೆಪಿ ಶಾಸಕ ಕೈಲಾಶ್ ಮೇಘವಾಲ್ ಹೇಳಿದ್ದಾರೆ.

ಭಾನುವಾರ ಸಂಜೆ ಭಿಲ್ವಾರಾ ಜಿಲ್ಲೆಯ ಶಾಹ್ಪುರದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡುವಾಗ ರಾಜಸ್ಥಾನದ ಮಾಜಿ ವಿಧಾನಸಭಾ ಸ್ಪೀಕರ್  ಮೇಘವಾಲ್ ಈ ರೀತಿಯಲ್ಲಿ ಟೀಕೆಗಳನ್ನು ಮಾಡಿದರು.

“ಇದು ನನ್ನ ಕ್ಷೇತ್ರ, ಈ ಕ್ಷೇತ್ರ ಹಿಂದುಳಿದಿತ್ತು ಮತ್ತು ಈಗಲೂ ಹಿಂದುಳಿದಿದೆ ಏಕೆಂದರೆ, 1952ರಿಂದ ಇದು ಮೀಸಲು ಕ್ಷೇತ್ರವಾಗಿದೆ” ಎಂದು ಶಹಾಪುರ ಶಾಸಕ ಮೇಘವಾಲ್ ಹೇಳಿದರು.

ಇದನ್ನೂ ಓದಿ: ಮಧ್ಯಪ್ರದೇಶ: ದಲಿತರು ದೇವಾಲಯ ಪ್ರವೇಶಿಸಿದರೆಂದು ಹಿಂಸಾಚಾರ; 14 ಜನರಿಗೆ ಗಾಯ

”ಇಂದಿನ ರಾಜಕೀಯದಲ್ಲಿ ರಾಜಕೀಯ ಪಕ್ಷಗಳು ಪರಿಶಿಷ್ಟ ಜಾತಿಯವರನ್ನು ಗುಲಾಮರಂತೆ ನಡೆಸಿಕೊಳ್ಳುತ್ತವೆ ಎಂದು ಹೇಳಲು ನನಗೆ ಯಾವುದೇ ಹಿಂಜರಿಕೆಯಿಲ್ಲ. ಅವರಿಗೆ ಮುಕ್ತವಾಗಿ ಮಾತನಾಡುವ ಸ್ವಾತಂತ್ರ್ಯವಿಲ್ಲ. ಅವರು ಮುಕ್ತವಾಗಿ ಮಾತನಾಡಿದರೆ ಟಿಕೆಟ್ ನೀಡುವುದಿಲ್ಲ” ಎಂದರು.

ಈ ವಿಚಾರವಾಗಿ ಮೇಘವಾಲ್ ಅವರನ್ನು ಪಿಟಿಐ ಸಂಪರ್ಕಿಸಿದಾಗ ಅವರು, ”ನಾನು ಏನು ಹೇಳಲು ಬಯಸಿದ್ದೇನೋ ಅದನ್ನೆಲ್ಲ ಹೇಳಿದ್ದೇನೆ. ನಾನು ಅದರ ಬಗ್ಗೆ ಹೆಚ್ಚಿನ ಪ್ರತಿಕ್ರಿಯೆ ನೀಡುವುದಿಲ್ಲ, ನಾನು ಹೇಳಿರುವುದರ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಆದರೆ ಅದೇ ಸತ್ಯ” ಎಂದು ಅವರು ಹೇಳಿದರು.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...