Homeಮುಖಪುಟಜನಪರ ಜಾಲತಾಣಗಳ ಸಮಾಗಮ: ಓದುಗರಿಗೆ ಆರೋಗ್ಯಕರ ಸುದ್ದಿ ನೀಡುವ ವಿಶ್ವಾಸದಲ್ಲಿ ’ಡಿಜಿಪಬ್’

ಜನಪರ ಜಾಲತಾಣಗಳ ಸಮಾಗಮ: ಓದುಗರಿಗೆ ಆರೋಗ್ಯಕರ ಸುದ್ದಿ ನೀಡುವ ವಿಶ್ವಾಸದಲ್ಲಿ ’ಡಿಜಿಪಬ್’

ಆಲ್ಟ್ ನ್ಯೂಸ್, ಆರ್ಟಿಕಲ್ 14, ಬೂಮ್‌ಲೈವ್, ಕೋಬ್ರಾಪೋಸ್ಟ್, ಎಚ್‌ಡಬ್ಲ್ಯೂ ನ್ಯೂಸ್, ನ್ಯೂಸ್‌ಕ್ಲಿಕ್, ನ್ಯೂಸ್‌ಲಾಂಡ್ರಿ, ಸ್ಕ್ರಾಲ್, ನ್ಯೂಸ್ ಮಿನಿಟ್, ಕ್ವಿಂಟ್ ಮತ್ತು ದಿ ವೈರ್ ಡಿಐಜಿಐಪಬ್‌ನ ಸ್ಥಾಪಕ ಸದಸ್ಯ ಸಂಸ್ಥೆಗಳಾಗಿವೆ.

- Advertisement -
- Advertisement -

ಪ್ರತಿ ದಿನ ಒಂದಲ್ಲ ಒಂದು ಕಾರಣಕ್ಕೆ ಮಾಧ್ಯಮಗಳನ್ನು ಟೀಕಿಸುತ್ತಲೇ ಇರುತ್ತೇವೆ. ಆ ಸುದ್ದಿ ಹಾಗಿದೆ, ಇ ಸುದ್ದಿ ಹೀಗಿದೆ. ಎಷ್ಟು ಸೆನ್ಸಿಟಿವ್ ವಿಷಯ ಹೀಗೆ ತೋರಿಸ್ತಿದ್ದಾರೆ ಹಾಗೆ ಹೀಗೆ ಅಂತಾ ಗೋಣಗಿಕೊಳ್ಳುತ್ತೇವೆ. ಇಂತಹ ಟೀಕೆ, ವಿಮರ್ಶೆ ಹಿನ್ನಲೆ, ಡಿಜಿಟಲ್ ಯುಗಕ್ಕೆ ಆರೋಗ್ಯಕರ ಸುದ್ದಿ ಪರಿಸರ ವ್ಯವಸ್ಥೆಯನ್ನು ರಚಿಸಲು 11 ಡಿಜಿಟಲ್ ಸುದ್ದಿ ಸಂಸ್ಥೆಗಳು ಮಂಗಳವಾರ ಡಿಜಿಪಬ್ ನ್ಯೂಸ್ ಇಂಡಿಯಾ ಫೌಂಡೇಶನ್ ಅನ್ನು ಪ್ರಾರಂಭಿಸಿವೆ.

“ಡಿಜಿಪಬ್ ನ್ಯೂಸ್ ಇಂಡಿಯಾ ಫೌಂಡೇಶನ್ ಅನ್ನು ದೃಢವಾದ ಡಿಜಿಟಲ್ ನ್ಯೂಸ್ ಪರಿಸರ ವಿಜ್ಞಾನವನ್ನು ನಿರ್ಮಿಸಲು, ಉತ್ತಮ ಅಭ್ಯಾಸಗಳನ್ನು ಪ್ರತಿನಿಧಿಸಲು, ವರ್ಧಿಸಲು ಮತ್ತು ವಿಕಸಿಸಲು ರಚಿಸಲಾಗಿದೆ. ಡಿಜಿಪಬ್ ನಿಜವಾಗಿಯೂ ವಿಶ್ವ ದರ್ಜೆಯ, ಸ್ವತಂತ್ರ ಮತ್ತು ಪತ್ರಿಕೋದ್ಯಮದ ಉನ್ನತ ಗುಣಮಟ್ಟವನ್ನು ಎತ್ತಿಹಿಡಿಯುತ್ತದೆ” ಎಂದು ಸಂಘ ಪತ್ರಿಕಾ ಪ್ರಕಟಣೆ ತಿಳಿಸಿದೆ.

“ಪರಂಪರೆ ಮಾಧ್ಯಮದ ಅನ್ವೇಷಣೆಗಳು ಮತ್ತು ಆಸಕ್ತಿಗಳು ಯಾವಾಗಲೂ ಡಿಜಿಟಲ್ ಮಾಧ್ಯಮದಂತೆಯೇ ಇರಬಾರದು ಎಂಬ ಅಂಶವನ್ನು ಒತ್ತಿಹೇಳುತ್ತದೆ. ಅದರಲ್ಲೂ ವಿಶೇಷವಾಗಿ ನಿಯಂತ್ರಣ, ವ್ಯವಹಾರ ಮಾದರಿಗಳು, ತಂತ್ರಜ್ಞಾನ ಮತ್ತು ರಚನೆಗಳಿಗೆ ಸಂಬಂಧಿಸಿದಂತೆ” ಎಂದು ತಿಳಿಸಿದೆ.

ಆಲ್ಟ್ ನ್ಯೂಸ್, ಆರ್ಟಿಕಲ್ 14, ಬೂಮ್‌ಲೈವ್, ಕೋಬ್ರಾಪೋಸ್ಟ್, ಎಚ್‌ಡಬ್ಲ್ಯೂ ನ್ಯೂಸ್, ನ್ಯೂಸ್‌ಕ್ಲಿಕ್, ನ್ಯೂಸ್‌ಲಾಂಡ್ರಿ, ಸ್ಕ್ರಾಲ್, ನ್ಯೂಸ್ ಮಿನಿಟ್, ಕ್ವಿಂಟ್ ಮತ್ತು ದಿ ವೈರ್ ಡಿಐಜಿಐಪಬ್‌ನ ಸ್ಥಾಪಕ ಸದಸ್ಯ ಸಂಸ್ಥೆಗಳಾಗಿವೆ. ಡಿಜಿಪಬ್ ಸದಸ್ಯತ್ವವು ಪ್ರಸ್ತುತ ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಡಿಜಿಟಲ್ ಸುದ್ದಿ ಮಳಿಗೆಗಳು ಮತ್ತು ಪತ್ರಕರ್ತರಿಗೆ ಸೀಮಿತವಾಗಿದೆ.

ಇದನ್ನೂ ಓದಿ: ರಿಪಬ್ಲಿಕ್ ಟಿವಿ ಪತ್ರಕರ್ತರನ್ನು ಬಲಿಪಶು ಮಾಡಬೇಡಿ: ಎಡಿಟರ್ಸ್ ಗಿಲ್ಡ್

ಡಿಜಿಟಲ್ ಮಾಧ್ಯಮದಲ್ಲಿ ಕೆಲಸ ಮಾಡುವ ಹವ್ಯಾಸಿ ಮತ್ತು ಸ್ವತಂತ್ರ ಪತ್ರಕರ್ತರಿಗೆ ಡಿಜಿಪಬ್ ಮುಕ್ತವಾಗಿದೆ.  “ಡಿಜಿಟಲ್ ಸುದ್ದಿ ಪರಿಸರ ವ್ಯವಸ್ಥೆಯ ಅಗತ್ಯತೆಗಳನ್ನು ಸಂಸ್ಥೆಗಳು ಮಾತ್ರ ಪ್ರತಿನಿಧಿಸಬೇಕು ಅಥವಾ ಧ್ವನಿ ನೀಡಬೇಕು ಎಂದು ಪ್ರತಿಷ್ಠಾನವು ನಂಬುವುದಿಲ್ಲ. ಈ ವ್ಯವಸ್ಥೆಯ ಭದ್ರಕೋಟೆ ರೂಪಿಸುವಲ್ಲಿ ಸ್ವತಂತ್ರ ಪತ್ರಕರ್ತರ ಕೊಡುಗೆಯನ್ನು ಗುರುತಿಸುವುದು ಕಡ್ಡಾಯವಾಗಿದೆ” ಎಂದು ಪತ್ರಿಕಾ ಪ್ರಕಟಣೆ ಹೇಳಿದೆ.

ನ್ಯೂಸ್ ಮಿನಿಟ್‌ನ ಧನ್ಯಾ ರಾಜೇಂದ್ರನ್ ಅವರು ಸಂಘದ ಮೊದಲ ಅಧ್ಯಕ್ಷರಾಗಿದ್ದಾರೆ. ನ್ಯೂಸ್‌ಕ್ಲಿಕ್‌ನ ಪ್ರಬೀರ್ ಪುರ್‌ಕಯಸ್ಥ ಉಪಾಧ್ಯಕ್ಷರಾಗಿದ್ದಾರೆ. ಕ್ವಿಂಟ್‌ನ ರಿತು ಕಪೂರ್ ಮತ್ತು ನ್ಯೂಸ್‌ಲಾಂಡ್ರಿಯ ಅಭಿನಂದನ್ ಸೇಖ್ರಿ ಪ್ರಧಾನ ಕಾರ್ಯದರ್ಶಿಗಳಾಗಿ ಕಾರ್ಯ ನಿರ್ವಹಿಸಲಿದ್ದಾರೆ.

“ಡಿಜಿಟಲ್ ಸುದ್ದಿ ಮಾಧ್ಯಮ ಸಂಸ್ಥೆಗಳು ವಿಶ್ವಾಸಾರ್ಹ ಮಾಹಿತಿಯನ್ನು ಒದಗಿಸಲು ಮತ್ತು ಪ್ರಜಾಪ್ರಭುತ್ವವನ್ನು ಕಾಪಾಡಿಕೊಳ್ಳಲು ನಮ್ಮ ಜೀವನದಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ. ಈ ಹಿನ್ನೆಲೆಯಲ್ಲಿ “ಡಿಜಿಟಲ್” ಮೊದಲ ಸುದ್ದಿ ಸಂಸ್ಥೆಗಳ ಈ ಸಂಘಟಿತ ಪ್ರಯತ್ನವು ಸುದ್ದಿ ಪರಿಸರ ವ್ಯವಸ್ಥೆಯನ್ನು ಆರೋಗ್ಯಕರವಾಗಿಡಲು ನಮಗೆ ಸಹಾಯ ಮಾಡುತ್ತದೆ” ಎಂದು ರಾಜೇಂದ್ರನ್ ಹೇಳಿದರು.  ಜೊತೆಗೆ “ಇಂದು ಪತ್ರಿಕೋದ್ಯಮವು ಎದುರಿಸುತ್ತಿರುವ ಬೃಹತ್ ಸವಾಲುಗಳನ್ನು ಒಟ್ಟಾಗಿ ಪರಿಹರಿಸಲು ಇದು ನಮಗೆ ಸಹಾಯ ಮಾಡುತ್ತದೆ” ಎನ್ನುತ್ತಾರೆ.

ಇದನ್ನೂ ಓದಿ: ಸುಶಾಂತ್ ಪ್ರಕರಣ: ರಿಪಬ್ಲಿಕ್ ಟಿವಿಯನ್ನು ತರಾಟೆಗೆ ತೆಗೆದುಕೊಂಡ ಬಾಂಬೆ ಹೈಕೋರ್ಟ್!

“ಭಾರತದಲ್ಲಿ, ನ್ಯೂಸ್ ಬ್ರಾಡ್ಕಾಸ್ಟಿಂಗ್ ಅಸೋಸಿಯೇಷನ್ ​​ಮತ್ತು ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ ಇದ್ದರೂ, ದೂರದರ್ಶನ ಸುದ್ದಿ ವಾಹಿನಿಗಳು ಮತ್ತು ಪತ್ರಿಕೆಗಳು ಕ್ರಮವಾಗಿ ಸ್ವಯಂ ನಿಯಂತ್ರಣ ಹೊಂದಿವೆ. ಆದರೆ ಡಿಜಿಟಲ್ ಮಾಧ್ಯಮ ಸಂಸ್ಥೆಗಳನ್ನು ಪ್ರತಿನಿಧಿಸುವ ಅಂತಹ ಯಾವುದೇ ಸಂಸ್ಥೆ ಇರಲಿಲ್ಲ ಹಾಗಾಗಿ ಡಿಜಿಪಬ್ ಈ ಸ್ಥಾನವನ್ನು ತುಂಬಲು ಪ್ರಯತ್ನಿಸುತ್ತದೆ” ಎಂದು ತಿಳಿಸಿದ್ದಾರೆ.

ಭಾರತದ ಡಿಜಿಟಲ್ ಮಾಧ್ಯಮವನ್ನು ಪ್ರತಿನಿಧಿಸುವುದಾಗಿ ಹೇಳಿಕೊಳ್ಳುವ ಇತರ ಎರಡು ಸಂಸ್ಥೆಗಳು ಇವೆ. ಒಂದು ಡಿಜಿಟಲ್ ನ್ಯೂಸ್ ಪಬ್ಲಿಷರ್ಸ್ ಅಸೋಸಿಯೇಷನ್ (DNPA), ಇದರಲ್ಲಿ ಟೈಮ್ಸ್ ಗ್ರೂಪ್, ಇಂಡಿಯಾ ಟುಡೆ ಗ್ರೂಪ್, ಹಿಂದೂಸ್ತಾನ್ ಟೈಮ್ಸ್, ಎನ್‌ಡಿಟಿವಿ ಸೇರಿವೆ.

ಎರಡನೆಯದು ಇಂಡಿಯನ್ ಡಿಜಿಟಲ್ ಮೀಡಿಯಾ ಅಸೋಸಿಯೇಷನ್(IDMA), ಇದರಲ್ಲಿ ರಿಪಬ್ಲಿಕ್ ಟಿವಿ, ಇಂಡಿಯಾ ನ್ಯೂಸ್, ಒಡಿಶಾ ಟಿವಿ, ನ್ಯೂಸ್ ಎಕ್ಸ್, ಸಂಡೇ ಗಾರ್ಡಿಯನ್, ಒಪಿಇಂಡಿಯಾ ಮತ್ತು ಗೋವಾ ಕ್ರಾನಿಕಲ್ ಚಾನೆಲ್‌ಗಳು ಸದಸ್ಯರಾಗಿವೆ.

IDMA ಗುಜರಾತ್ ಮತ್ತು ಅಸ್ಸಾಂನ ಎರಡು ಅಸ್ಪಷ್ಟ ಪ್ರಾದೇಶಿಕ ವೆಬ್‌ಸೈಟ್‌ಗಳನ್ನು ಅದರ ಸದಸ್ಯರೆಂದು ಪರಿಗಣಿಸಿದರೆ, DNPA ಡಿಜಿಟಲ್ ಸುದ್ದಿ ನೀಡುವ ಮಾಧ್ಯಮ ಸಂಸ್ಥೆಗಳ ಸಂಘವಾಗಿದೆ. ಆದರೆ ಸಂಪೂರ್ನವಾಗಿ ಡಿಜಿಟಲ್ ಮಾಧ್ಯಮಕ್ಕೆ ಒಂದು ಸಂಸ್ಥೆ ಇಲ್ಲ.

ಮಾಧ್ಯಮಗಳು ತಮ್ಮ ಮಿತಿಗಳನ್ನು ಮೀರುತ್ತಿರುವ ಈ ಸಂದರ್ಭದಲ್ಲಿ, ಮಾಧ್ಯಮಗಳ ಮೇಲೆ ಹಲವಾರು ಪ್ರಕರಣಗಳು ದಾಖಲಾಗುತ್ತಿರುವ ಈ ಸಮಯದಲ್ಲಿ ಆರೋಗ್ಯಕರ ಸುದ್ದಿಗಳನ್ನು ನೀಡುವ ಒಂದು ವೇದಿಕೆಯ ಅವಶ್ಯಕತೆ ಕಂಡಿತ ಇದೆ. ಇದೆ ವಿಶ್ವಾಸವನ್ನು ಡಿಜಿಪಬ್ ವ್ಯಕ್ತಪಡಿಸಿದೆ.


ಇದನ್ನೂ ಓದಿ: Explainer: ಏನಿದು ಟಿಆರ್‌ಪಿ? ಹೇಗೆ ತಿರುಚಲಾಗುತ್ತದೆ? ರಿಪಬ್ಲಿಕ್ ಟಿವಿ ಸಿಕ್ಕಿಬಿದ್ದಿದ್ದು ಹೇಗೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...

ತಾರತಮ್ಯ ಮುಕ್ತ ಕ್ಯಾಂಪಸ್ ನಿರ್ಮಾಣದತ್ತ ಮಹತ್ವದ ಹೆಜ್ಜೆ; ‘ರೋಹಿತ್ ವೇಮುಲ ಮಸೂದೆ’ಗೆ ಸಚಿವ ಸಂಪುಟ ಅನುಮೋದನೆ

ಕರ್ನಾಟಕ ಸರ್ಕಾರದ ಸಚಿವ ಸಂಪುಟ ಗುರುವಾರ (ಏ.16) ದಂದು ಕರ್ನಾಟಕ ರೋಹಿತ್ ವೇಮುಲ (ಹೊರಗಿಡುವಿಕೆ ಅಥವಾ ಅನ್ಯಾಯ ತಡೆಗಟ್ಟುವಿಕೆ) (ಶಿಕ್ಷಣ ಮತ್ತು ಘನತೆಯ ಹಕ್ಕು) ಮಸೂದೆ’ಗೆ ಅನುಮೋದನೆ ನೀಡಿದೆ. ಹೈದರಾಬಾದ್‌ನ ಕೆಂದ್ರೀಯ ವಿಶ್ವವಿದ್ಯಾಲಯದಲ್ಲಿ...

ಕ್ಷೇತ್ರ ಮರುವಿಂಗಡನೆ : ಗೃಹ ಸಚಿವ ಅಮಿತ್ ಶಾ ಹೇಳಿದ್ದೆಲ್ಲವು ನಿಜವೇ?..ಇಲ್ಲಿದೆ ವಾಸ್ತವಾಂಶ

ದೇಶದ ಗೃಹ ಸಚಿವರು ಸಂಸತ್ತಿನಲ್ಲಿ ಪ್ರಮುಖ ಕಾನೂನಿನ ಬಗ್ಗೆ ವಿವರಿಸುವಾಗ ವಿಷಯ ಸ್ಪಷ್ಟವಾಗಿರಬೇಕು. ಆದರೆ, ಕ್ಷೇತ್ರ ಮರುವಿಂಗಡನೆ ಕುರಿತು ಗೃಹ ಸಚಿವ ಅಮಿತ್ ಶಾ ಮಾತನಾಡಿರುವುದು ಹಾಗಿರಲಿಲ್ಲ. ದಕ್ಷಿಣ ಭಾರತದ ರಾಜ್ಯಗಳು ತಮ್ಮ...

ಮಹಿಳಾ ಮೀಸಲು ಮಸೂದೆ 2023ರಲ್ಲೇ ಗೆದ್ದಿದೆ, ಈಗ ಸೋತಿರುವುದು ಮೋದಿ ಸರ್ಕಾರ

ಮೋದಿ ಸರ್ಕಾರ ಮಂಡಿಸಿದ್ದ ಮಹಿಳಾ ಮೀಸಲಾತಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾಗಿದೆ ಎಂಬುವುದು ದೇಶದಲ್ಲಿ ಪ್ರಸ್ತುತ ದೊಡ್ಡ ಚರ್ಚೆಯ ವಿಷಯವಾಗಿದೆ. ಕಾಂಗ್ರೆಸ್‌ ನೇತೃತ್ವದಲ್ಲಿ ವಿಪಕ್ಷಗಳು ಮಸೂದೆಯನ್ನು ಸೋಲಿಸುವ ಮೂಲಕ ದೇಶದ ಮಹಿಳೆಯರ ಸಬಲೀಕರಣಕ್ಕೆ...