Homeಮುಖಪುಟನೀವು ಪದೇ ಪದೇ ಸಮಸ್ಯೆಗೆ ಸಿಕ್ಕಿಹಾಕಿಕೊಳ್ಳುತ್ತೀರಾ? ಹಾಗಾದರೆ ಅವುಗಳ ವೈಜ್ಞಾನಿಕ ಪರಿಹಾರಕ್ಕೆ ಏನು ಮಾಡಬೇಕು ಗೊತ್ತೆ?

ನೀವು ಪದೇ ಪದೇ ಸಮಸ್ಯೆಗೆ ಸಿಕ್ಕಿಹಾಕಿಕೊಳ್ಳುತ್ತೀರಾ? ಹಾಗಾದರೆ ಅವುಗಳ ವೈಜ್ಞಾನಿಕ ಪರಿಹಾರಕ್ಕೆ ಏನು ಮಾಡಬೇಕು ಗೊತ್ತೆ?

ಪರಿಹಾರ ಹುಡುಕುವ ದೈಹಿಕ/ಮಾನಸಿಕ ಸ್ಥಿತಿಯಲ್ಲಿ ನಾವು ಇರದಿದ್ದಲ್ಲಿ ಕೂಡಲೇ ಸಹಾಯ ಯಾಚಿಸಬೇಕು. ದೊಡ್ಡಸ್ತಿಕೆ ಮಾಡಲುಹೋಗಬಾರದು. ಚಿಕ್ಕ ಮಗುವೂ ಕೂಡ ತನಗೆ ಯಾವುದನ್ನು ಮಾಡಲು ಸಾಧ್ಯವಿಲ್ಲ ಎಂದು ಅರಿಯುತ್ತದೆಯೋ, ಕೂಡಲೇ ದೊಡ್ಡವರ ಗಮನ ಸೆಳೆಯುತ್ತದೆ. ಎಷ್ಟೋ ಬಾರಿ ನಾವು ಈ ಸರಳ ವಿಷಯವನ್ನು ಮರೆತುಬಿಡುತ್ತೇವೆ.

- Advertisement -
- Advertisement -

ಜೀವನ ಕಲೆಗಳು: ಅಂಕಣ – 22

ಸಮಸ್ಯೆಗಳ ಪರಿಹಾರ

ಸಮಸ್ಯೆಗಳು ಜೀವನದ ಒಂದು ಅವಿಭಾಜ್ಯ ಅಂಗ. ಹಾಗೆಂದು ಸಮಸ್ಯೆಯಿಂದ ಓಡಿ ಹೋಗುವುದಾಗಲೀ, ಆತ್ಮಹತ್ಯೆಯಾಗಲೀ ಪರಿಹಾರವಲ್ಲ. ಜೀವನಾವಶ್ಯಕ ಕಲೆಗಳಲ್ಲಿ ಸಮಸ್ಯೆ ಬಗೆಹರಿಸುವುದು ಮತ್ತು ನಿರ್ಧಾರ ತೆಗೆದುಕೊಳ್ಳುವುದು ಜೊತೆ ಜೊತೆಯಾಗಿ ಹೋಗುತ್ತವೆ. ಸಮಸ್ಯೆ ಪರಿಹಾರಕ್ಕೆ ಎಲ್ಲೋ ಒಂದು ನಿರ್ಧಾರ ತೆಗೆದುಕೊಳ್ಳುವ ಅವಶ್ಯಕತೆ ಇದ್ದರೆ, ತೆಗೆದುಕೊಂಡ ನಿರ್ಧಾರ ಇನ್ನೆಲ್ಲೋ ಒಂದು ಸಮಸ್ಯೆಯನ್ನು ಸೃಷ್ಟಿಸಲೂಬಹುದು. ಹಾಗಾಗಿ ಅವೆರಡಕ್ಕೂ ಒಂದು ರೀತಿಯ ನಂಟು ಇರುವಂತಿದ್ದರೂ ಎಲ್ಲಾ ಸಮಸ್ಯೆಗೂ ನಿರ್ಧಾರವೇ ಪರಿಹಾರ ಎಂತಲೂ ಇಲ್ಲ; ಎಲ್ಲಾ ನಿರ್ಧಾರಗಳೂ ಹೊಸ ಸಮಸ್ಯೆಗೆ ಕಾರಣವಾಗುತ್ತವೆ ಎಂತಲೂ ಇಲ್ಲ.

ಇಲ್ಲಿ ಸಮಸ್ಯೆಯನ್ನು ನಾವು ಎರಡು ವಿಧವಾಗಿ ಪರಿಗಣಿಸಬಹುದು. ಒಂದು ವೈಯುಕ್ತಿಕ ಅಥವಾ ಸಾಮಾಜಿಕ. ಇದು ಮನಶಾಸ್ತ್ರಕ್ಕೆ ಸಂಬಂಧಿಸಿದ್ದು, ಮತ್ತೊಂದು ವಿಜ್ಞಾನಕ್ಕೆ ಸಂಬಂಧಿಸಿದ್ದು, ಅಂದರೆ ಗಣಿತ, ವ್ಯಾಕರಣ, ವೈದ್ಯಕೀಯ, ಇತ್ಯಾದಿ.. ಅದರ ಬಗ್ಗೆ ನಾವು ತಲೆ ಕೆಡಿಸಿಕೊಳ್ಳುವ ಅಗತ್ಯ ಇಲ್ಲ, ಕೇವಲ ವೈಯುಕ್ತಿಕ ಅಥವಾ ಸಾಮಾಜಿಕ ಸಮಸ್ಯೆಗಳ ಬಗ್ಗೆ ಚರ್ಚಿಸೋಣ. ಒಟ್ಟಿನಲ್ಲಿ ಸಮಸ್ಯೆ ಏನೇ ಇರಲಿ, ಅದು ಸ್ಪಷ್ಟವಾಗಿದ್ದಷ್ಟೂ ಪರಿಹಾರ ಸುಲಭ. ಸಮಸ್ಯೆ ಏನು ಎಂಬುದೇ ತಿಳಿಯದಿದ್ದಲ್ಲಿ ಪರಿಹಾರವೂ ಕಷ್ಟಸಾಧ್ಯ. ಪರಿಹಾರಕ್ಕೆ ನಮಗೆ ಬೇಕಾಗಿರುವುದು ವಿಮರ್ಶಾತ್ಮಕ ಮತ್ತು ಸೃಜನಾತ್ಮಕ ಚಿಂತನೆ. ಇವೆರಡರ ಬಗ್ಗೆ ನಾನು ಈಗಾಗಲೇ ತಿಳಿಸಿದ್ದೇನೆ.

ಸಮಸ್ಯೆಯ ಪರಿಹಾರದಲ್ಲಿ ನಮ್ಮ ಮನಃಸ್ಥಿತಿಯೂ ಮುಖ್ಯ ಭೂಮಿಕೆ ವಹಿಸುತ್ತದೆ. ಪರಿಹಾರ ಹುಡುಕುವ ದೈಹಿಕ/ಮಾನಸಿಕ ಸ್ಥಿತಿಯಲ್ಲಿ ನಾವು ಇರದಿದ್ದಲ್ಲಿ ಕೂಡಲೇ ಸಹಾಯ ಯಾಚಿಸಬೇಕು. ದೊಡ್ಡಸ್ತಿಕೆ ಮಾಡಲುಹೋಗಬಾರದು. ಚಿಕ್ಕ ಮಗುವೂ ಕೂಡ ತನಗೆ ಯಾವುದನ್ನು ಮಾಡಲು ಸಾಧ್ಯವಿಲ್ಲ ಎಂದು ಅರಿಯುತ್ತದೆಯೋ, ಕೂಡಲೇ ದೊಡ್ಡವರ ಗಮನ ಸೆಳೆಯುತ್ತದೆ. ಎಷ್ಟೋ ಬಾರಿ ನಾವು ಈ ಸರಳ ವಿಷಯವನ್ನು ಮರೆತುಬಿಡುತ್ತೇವೆ. ಅದೇ ರೀತಿ ಸಮಸ್ಯೆಯ ಎಲ್ಲಾ ಪಾರ್ಶ್ವಗಳನ್ನು ಸರಿಯಾಗಿ ತಿಳಿಯಲು ಸಾಧ್ಯವಾಗಿಲ್ಲದಿದ್ದಲ್ಲಿ, ನಮಗೆ ಗೊತ್ತಿರುವ ಅಲ್ಪ ಮಾಹಿತಿಯ ಆಧಾರದ ಮೇಲೆ, ಪರಿಹಾರಕ್ಕೆ ಕೈ ಹಾಕಿ ವಿಪರೀತ ಪರಿಣಾಮ ಎದುರಿಸಬೇಕಾಗುತ್ತದೆ. ಉದಾ: ಎಲೆಕ್ಟ್ರಿಕ್ ಮೀಟರ್ ರೂಂನಲ್ಲಿ ಬೆಂಕಿ ಕಾಣಿಸಿಕೊಂಡಾಗ ಅಥವಾ ಒಲೆಯ ಮೇಲಿರಿಸಿದ ಕಾಯ್ದ ಎಣ್ಣೆಗೆ ಬೆಂಕಿ ತಗುಲಿದಾಗ, ನಾವು ಬೆಂಕಿ ನಂದಿಸಲು ಅದರ ಮೇಲೆ ನೀರು ಎರಚಲು ಹೋದಲ್ಲಿ, ವಿದ್ಯುತ್ ಶಾಕಿನಿಂದ ಅಥವಾ ದೊಡ್ಡ ಬೆಂಕಿ ಅನಾಹುತದಿಂದ ಹೆಚ್ಚಿನ ತೊಂದರೆಗೆ ಸಿಲುಕುತ್ತೇವೆ. ಆದ್ದರಿಂದ ಸಮಸ್ಯೆ ಅರ್ಥವಾಗದಿದ್ದಲ್ಲಿ, ನಮ್ಮಲ್ಲಿ ಸಾಮರ್ಥ್ಯ/ಸಂಪನ್ಮೂಲದ ಕೊರತೆ ಇದ್ದಲ್ಲಿ, ಪರಿಹಾರಕ್ಕೆ ನಾವೊಬ್ಬರೇ ಯತ್ನಿಸದೇ, ಕೂಡಲೇ ಬೇರೆಯವರ ಸಹಾಯ ಪಡೆಯಬೇಕು. ಇದು ಸಮಸ್ಯೆ ಪರಿಹಾರ ಕಲೆಯ ಮುಖ್ಯ ಎಚ್ಚರಿಕೆ.

ಮೊಟ್ಟ ಮೊದಲಿಗೆ ನಾವು ಸಮಸ್ಯೆ ಏನು ಎಂಬುದನ್ನು ಸರಿಯಾಗಿ ಅರಿಯಬೇಕು. ಸಮಸ್ಯೆ ನೇರವಾಗಿ ನಮ್ಮ ಕಣ್ಣಿಗೆ ಕಾಣುವುದು ಅಪರೂಪ, ಕೇವಲ ಅದರ ಲಕ್ಷಣಗಳು ನಮಗೆ ಗೋಚರಿಸುತ್ತವೆ. ಸಮಸ್ಯೆ ಎಲ್ಲೋ ಇರುತ್ತದೆ, ಲಕ್ಷಣಗಳು ಇನ್ನೆಲ್ಲೋ ಕಾಣಿಸಿಕೊಳ್ಳುತ್ತವೆ. ಹೇಗೆ ವೈದ್ಯರು ನಮ್ಮ ಕಾಯಿಲೆ ಕಂಡು ಹಿಡಿಯುವಾಗ ನಮ್ಮಿಂದ ತೊಂದರೆಯ ಲಕ್ಷಣಗಳನ್ನು ಕೇಳಿ ತಿಳಿದುಕೊಳ್ಳುತ್ತಾರೋ ಹಾಗೆ ನಾವೂ ಸಹ ಸಮಸ್ಯೆಯ ಗುಣ-ಲಕ್ಷಣಗಳನ್ನು ಗುರುತಿಸಿ, ವಿಶ್ಲೇಷಿಸಿ ಅದರಿಂದ ಸಮಸ್ಯೆ ಏನು ಎಂಬ ನಿರ್ಧಾರಕ್ಕೆ ಬರಬೇಕಾಗುತ್ತದೆ. ಅದರಲ್ಲೂ ಸಮಸ್ಯೆಗೆ “ಮೂಲ ಕಾರಣ” ಏನು ಎಂಬುದನ್ನು ತಿಳಿದು, ನಂತರ ಮೂಲ ಕಾರಣ ಹೋಗಲಾಡಿಸುವಂತಹ ಪರಿಹಾರ ಹುಡುಕಬೇಕಾಗುತ್ತದೆ. ಮೂಲ ಕಾರಣ ತಿಳಿಯದಿದ್ದರೆ ನಾವು ಪರಿಹಾರಕ್ಕೆ ದಾರಿ ಸಿಕ್ಕದೆ, ಅದರ ಚಕ್ರವ್ಯೂಹದಲ್ಲಿ ಸಿಲುಕುವುದು ನಿಶ್ಚಿತ.

ಮೂಲ ಕಾರಣ (ರೂಟ್ ಕಾಸ್) ಹುಡುಕಲು ಹಲವಾರು ಉಪಕರಣಗಳಿವೆ. ಅವುಗಳಲ್ಲಿ ಒಂದು “ಫೈವ್ ವೈ” (Five Why) ಇದರಲ್ಲಿ ಸಮಸ್ಯೆಯ ಬಗ್ಗೆ ಐದು ಬಾರಿ “ಏಕೆ?“ ಎಂದು ಪ್ರಶ್ನಿಸುವುದು. ಈ ಐದು ಬಾರಿಯ ಪ್ರಶ್ನೆಗೆ ಉತ್ತರ ಸಿಗುವಂತಿದ್ದರೆ ನಮಗೆ ಸಮಸ್ಯೆಯ ಮೂಲ ಕಾರಣ ಸ್ಪಷ್ಟವಾಗುತ್ತದೆ.

ಇನ್ನೊಂದು ಉಪಕರಣ ”ಫಿಷ್ ಬೋನ್” ಡಯಾಗ್ರಾಮ್. ಇದರಲ್ಲಿ ಸಮಸ್ಯೆಗೆ ಯಾವುದು ಕಾರಣ – ನಮ್ಮ ವ್ಯವಸ್ಥೆಯೇ, ಸಲಕರಣೆಗಳೇ, ಪರ್ಯಾವರಣವೇ, ಬಳಕೆಯ ವಸ್ತುಗಳೇ, ಜನರೇ ಅಥವಾ ಪ್ರಕ್ರಿಯೆಯೇ? ಎಂಬುದಾಗಿ ಅವುಗಳ ಕಾರ್ಯವನ್ನು ನಿರೀಕ್ಷಿಸಿ, ವಿಶ್ಲೇಶಿಸಿ ಯಾವುದು “ಕಾರಣ”, ಯಾವುದು ಲಕ್ಷಣ ಎಂಬ ತೀರ್ಮಾನಕ್ಕೆ ಬರುವುದು. ಚಿತ್ರ ಮೀನಿನ ಮೂಳೆಯ ಆಕಾರದಲ್ಲಿರುವುದರಿಂದ ಇದಕ್ಕೆ ಫಿಶ್ ಬೋನ್ ಎನ್ನುತ್ತಾರೆ.

ಮೇಲಿನ ರೀತಿಗಳಲ್ಲದೆ ಸಮಸ್ಯೆ ಪರಿಹಾರಕ್ಕೆ ಇನ್ನೂ ಕೆಲವು ತಂತ್ರಗಳನ್ನು ಬಳಸಬಹುದು. ಅವೆಂದರೆ:

·         ಸಮಸ್ಯೆಯ ಒಂದು ನಿಜರೂಪ ಮಾದರಿ (ಮೊಡೆಲ್) ಮಾಡಿಕೊಂಡು ಅದರ ಮೇಲೆ ಮೊದಲು ಪ್ರಯೋಗ ಮಾಡುವುದು. ನಂತರ ಅದನ್ನು ನಿಜವಾದ ಸಮಸ್ಯೆಯ ಮೇಲೆ ಉಪಯೋಗಿಸುವುದು (ವೈದ್ಯರು ತಮ್ಮ ಔಷಧಿಗಳನ್ನು ಮೊದಲು ಬಲಿಪಶುಗಳ ಮೇಲೆ ಉಪಯೋಗಿಸುವ ರೀತಿಯಲ್ಲಿ).

·         ಸಮಸ್ಯೆಯ ತರಹವೇ ಇರುವ ಅನುರೂಪ ಮಾದರಿಯ ಮೇಲೆ ಪ್ರಯೋಗ ಮಾಡಿ ನೋಡುವುದು.

·         “ಹೀಗೆ ಮಾಡಿದರೆ ಹೀಗೆ ಆಗುತ್ತದೆ” ಎನ್ನುವ ಪಠ್ಯಪುಸ್ತಕ ತತ್ವವಾದವನ್ನು ಪ್ರಯೋಗಿಸಿ ನೋಡುವುದು.

·         ಸಂಕೀರ್ಣ ಸಮಸ್ಯೆಯನ್ನು ಚಿಕ್ಕ-ಚಿಕ್ಕದಾಗಿ ತುಂಡರಿಸಿ ಪರಿಹಾರ ಹುಡುಕುವುದು.

·         ಯಾವ ಯಾವ ತುಂಡುಗಳಿಗೆ ಪರಿಹಾರ ಸಿಗುತ್ತದೋ ಅಲ್ಲಿಂದ ಮುಂದಕ್ಕೆ ಹೊಸದಾಗಿ ಯೋಚಿಸುವುದು.

·         ಪರಿಹಾರ ಸಿಗದ ತುಂಡುಗಳನ್ನು ಒಟ್ಟು ಸೇರಿಸಿ ಪರಿಹಾರ ಕಂಡುಕೊಳ್ಳುವುದು

·         ಸಮಸ್ಯೆಯನ್ನು ಪರಿವರ್ತಿಸಿ ಪರಿಹಾರವಿರುವಂತಹ ಸಮಸ್ಯೆಯನ್ನಾಗಿ ಮಾಡುವುದು.

ಸಮಸ್ಯೆ ಪರಿಹಾರದ ಐದು ಹೆಜ್ಜೆಗಳು:

1.      ಸಮಸ್ಯೆಯ ಬಗ್ಗೆ ಸಂಪೂರ್ಣ ಮಾಹಿತಿ ಸಂಗ್ರಹಿಸಿ, ಸರಿಯಾಗಿ ಗುರುತಿಸಿ, ವ್ಯಾಖ್ಯಾನಿಸುವುದು.

2.      ಅದರ ಪರಿಹಾರಕ್ಕೆ ಬೇಕಾದ ಪರ್ಯಾಯ ಮಾರ್ಗಗಳನ್ನು, ಬೇಕಾದ ಸಂಪನ್ಮೂಲ ಹುಡುಕುವುದು/ಕ್ರೋಢೀಕರಿಸುವುದು.

3.      ಪರ್ಯಾಯ ಮಾರ್ಗಗಳ ಉಪಯುಕ್ತತೆ/ಮೌಲ್ಯ ಕಂಡುಹಿಡಿದು, ಅವುಗಳಲ್ಲಿ ಅತ್ಯಂತ ಸೂಕ್ತವಾದುದನ್ನು ಆಯ್ದುಕೊಳ್ಳುವುದು.

4.      ಆಯ್ದ ಯೋಜನೆಯನ್ನು ಚಾಚೂ ತಪ್ಪದಂತೆ ಜಾರಿಗೊಳಿಸುವುದು.

5.      ಸಮಸ್ಯೆ ಪರಿಹಾರವಾಯಿತೋ, ಇಲ್ಲವೋ ಎಂದು ನೋಡುವುದು. ಆಗಿಲ್ಲದಿದ್ದಲ್ಲಿ ಮತ್ತೆ. ಹೆಜ್ಜೆ ಕ್ರಮಾಂಕ 1 ರಿಂದ ಪ್ರಾರಂಭಿಸಬೇಕು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಕೊಂಕಣಿ – ಮಾಲ್ವಣಿ ಸಮುದಾಯಗಳು ಹಿಂದುತ್ವದ ಬೆಂಬಲಿಗರು..’; ಮಹಾರಾಷ್ಟ್ರ ಬಿಜೆಪಿ ನಾಯಕ ಅಮೀತ್ ಸತಮ್

ಮುಂಬೈನಲ್ಲಿ ವಾಸಿಸುತ್ತಿರುವ ಕೊಂಕಣಿ ಮತ್ತು ಮಾಲ್ವಣಿ ಸಮುದಾಯಗಳು ಸೇರಿದಂತೆ ಕೊಂಕಣ ಪ್ರದೇಶದ ಜನರು ಹಿಂದುತ್ವವನ್ನು ಬೆಂಬಲಿಸುತ್ತಾರೆ ಎಂದು ಬಿಜೆಪಿ ನಾಯಕ ಅಮೀತ್ ಸತಮ್ ಹೇಳಿದ್ದಾರೆ. ಮಹಾರಾಷ್ಟ್ರದ ಕೊಂಕಣ ಪ್ರದೇಶದ ಸಾವಂತವಾಡಿಗೆ ಗಣಪತಿ ಭಕ್ತರಿಗಾಗಿ ಛತ್ರಪತಿ...

SIR! ಸಾಮಾನ್ಯರಿಗೆ ಸಂಕಷ್ಟ; ಗಣ್ಯರಿಗೆ ಮನೆ ಬಾಗಿಲಲ್ಲೇ ಸೇವೆ?

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ಕರ್ನಾಟಕದಲ್ಲಿ ಮುಂದುವರೆದಿರುವ ನಡುವೆಯೇ, ಅದರ ಜಾರಿಯಲ್ಲಿ ಸಾಮಾನ್ಯ ಮತದಾರರು ಮತ್ತು ಪ್ರಭಾವಿ ವ್ಯಕ್ತಿಗಳ ಅನುಭವದ ನಡುವಿನ ವ್ಯತ್ಯಾಸದ ಕುರಿತು ಪ್ರಶ್ನೆಗಳು ಎದ್ದಿವೆ. ಮತದಾರರ ಪಟ್ಟಿಯಲ್ಲಿನ...

ದಲಿತ ಬಾಲಕಿ ನಿಶು ಆಜಾದ್ ಕುಟುಂಬಕ್ಕೆ ನಿಲ್ಲದ ಕಿರುಕುಳ; ಅಸಭ್ಯ ಭಾಷೆ – ಬೆದರಿಕೆ ಸಂದೇಶ ರವಾನೆ

ಸಿಜೆಪಿ ಪ್ರತಿಭಟನೆಯಲ್ಲಿ ಗಮನ ಸೆಳೆದಿದ್ದ ಹದಿನಾಲ್ಕು ವರ್ಷ ವಯಸ್ಸಿನ ದಲಿತ ಸಮುದಾಯದ ಕಂಟೆಂಟ್ ಕ್ರಿಯೇಟರ್ ನಿಶು ಆಜಾದ್ ಮತ್ತು ಅವರ ಕುಟುಂಬಕ್ಕೆ ಮೊಬೈಲ್‌ ಫೋನ್‌ ಮೂಲಕ ನಿರಂತರ ಕಿರುಕುಳ ಸಂದೇಶ ಬರುತ್ತಿವೆ ಎಂದು...

ಉತ್ತರ ಪ್ರದೇಶ| 8ನೇ ತರಗತಿಯ ದಲಿತ ವಿದ್ಯಾರ್ಥಿಗೆ ಶಿಕ್ಷಕಿಯಿಂದ ಜಾತಿ ತಾರತಮ್ಯ

ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯ ಸರ್ಕಾರಿ ಉನ್ನತ ಪ್ರಾಥಮಿಕ ಶಾಲೆಯ 8ನೇ ತರಗತಿಯ ವಿದ್ಯಾರ್ಥಿಯೊಬ್ಬರು ಶಿಕ್ಷಕಿಯಿಂದ ಜಾತಿ ಆಧಾರಿತ ತಾರತಮ್ಯ ಎಸಗಲಾಗಿದೆ ಎಂದು ಆರೋಪಿಸಿದ್ದಾನೆ. ಕೃಷ್ಣ ಎಂದು ಗುರುತಿಸಲ್ಪಟ್ಟ ಈ ವಿದ್ಯಾರ್ಥಿ ಪರಿಶಿಷ್ಟ...

ಯೆಮನ್ | ಸಂಪೂರ್ಣ ರೆಡ್ ಸೀ ಕರಾವಳಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡ ಹೌತಿ ಪಡೆ : ಮಂದೇಬ್ ಜಲಸಂಧಿ ಮೇಲೆಯೂ ಹಿಡಿತ ಸಾಧಿಸಿರುವುದಾಗಿ ವರದಿ

ಮಹತ್ವದ ಬೆಳವಣಿಗೆಯಲ್ಲಿ, ಹೌತಿ ಬಂಡುಕೋರರು ಯೆಮನ್‌ನ ಇಡೀ ಕೆಂಪು ಸಮುದ್ರದ (ರೆಡ್ ಸೀ) ಕರಾವಳಿಯನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಇರಾನ್ ಬೆಂಬಲಿತ ಹೌತಿ ಸಶಸ್ತ್ರ ಪಡೆಗಳು ಯೆಮನ್ ಸರ್ಕಾರದ ನಿಯಂತ್ರಣದಲ್ಲಿದ್ದ...

ಭಾರತದ ಚುನಾವಣಾ ಪ್ರಕ್ರಿಯೆಯು ಅತ್ಯಂತ ಪಾರದರ್ಶಕವಾಗಿದೆ: ಸಿಇಸಿ ಜ್ಞಾನೇಶ್ ಕುಮಾರ್

ಭಾರತದ ಚುನಾವಣಾ ಪ್ರಕ್ರಿಯೆಯು ವಿಶ್ವದಲ್ಲೇ ಅತ್ಯಂತ ಪಾರದರ್ಶಕವಾದದ್ದು ಎಂದು ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ಜ್ಞಾನೇಶ್ ಕುಮಾರ್ (ಸೆ.11) ಹೇಳಿದ್ದಾರೆ. ಗುಜರಾತ್ ವಿಶ್ವವಿದ್ಯಾಲಯದ ಅಟಲ್ ಕಲಾಂ ಸಭಾಂಗಣದಲ್ಲಿ ನಡೆದ 'ಮತಗಟ್ಟೆ ಮಟ್ಟದ ಅಧಿಕಾರಿಗಳೊಂದಿಗೆ...

SIR: 43ಲಕ್ಷದಲ್ಲಿ ನೋಟಿಸ್ ತಲುಪಿರುವುದು 25ಲಕ್ಷ ಜನರಿಗೆ ಮಾತ್ರ, ಬಾಕಿ 18ಲಕ್ಷ ಜನರಿಗೆ ಇನ್ನು ನೋಟಿಸ್ಸೇ ತಲುಪಿಲ್ಲ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಆಡಳಿತಾತ್ಮಕ ಗೊಂದಲ ಹಾಗೂ ಯಾಂತ್ರಿಕ ಲೋಪಗಳ ಜಾಲದಲ್ಲಿ ಸಿಲುಕಿಬಿದ್ದಿದೆ. ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಬಿಡುಗಡೆ ಮಾಡಿರುವ ಇತ್ತೀಚಿನ ದತ್ತಾಂಶವೇ ಆಯೋಗದ...

ಕಾಳಿಘಾಟ್‌ನಲ್ಲಿ ‘ಮೀನಿನ ಪ್ರಸಾದ’ ಸ್ವೀಕರಿಸಿದ ಸುವೇಂದು ಅಧಿಕಾರಿ; ಬಾಗೇಶ್ವರ್ ಬಾಬಾ ‘ಮಾಂಸಾಹಾರ’ ವಿವಾದಕ್ಕೆ ಹೊಸ ತಿರುವು!

ದುರ್ಗಾ ಪೂಜೆ ಸಂದರ್ಭದಲ್ಲಿ ಮೀನು–ಮಾಂಸ ಸೇವನೆ ಕುರಿತು ಬಾಗೇಶ್ವರ್ ಧಾಮದ ಧೀರೇಂದ್ರ ಕೃಷ್ಣ ಶಾಸ್ತ್ರಿ ನೀಡಿರುವ ಹೇಳಿಕೆ ಪಶ್ಚಿಮ ಬಂಗಾಳದಲ್ಲಿ ವಿವಾದಕ್ಕೆ ಕಾರಣವಾಗಿರುವ ನಡುವೆಯೇ, ಮುಖ್ಯಮಂತ್ರಿ ಸುವೇಂದು ಅಧಿಕಾರಿ ಕಾಳಿಘಾಟ್ʼನ ಕಾಳಿ ದೇವಸ್ಥಾನದಲ್ಲಿ...

ಎಸ್‌ಐಆರ್‌: ಹೈದರಾಬಾದ್, ಸಿಕಂದರಾಬಾದ್‌ನಲ್ಲಿ ಲಕ್ಷಾಂತರ ಮತದಾರರ ಹೆಸರು ಅಳಿಸುವಿಕೆ; 2029ರ ಚುನಾವಣೆಗೂ ಮುನ್ನ ಗಂಭೀರ ಆತಂಕ

ಹೈದರಾಬಾದ್: ತೆಲಂಗಾಣದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಡಿ ಮತದಾರರ ಪಟ್ಟಿಯಿಂದ ಭಾರೀ ಪ್ರಮಾಣದಲ್ಲಿ ಹೆಸರುಗಳನ್ನು ತೆಗೆದುಹಾಕಲಾಗಿರುವುದು ಮುಂದಿನ ಚುನಾವಣೆಯ ರಾಜಕೀಯ ಲೆಕ್ಕಾಚಾರಗಳ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯನ್ನು ಹುಟ್ಟುಹಾಕಿದೆ....

9/11 ದಾಳಿಗೆ 25 ವರ್ಷ: ‘ಭಯೋತ್ಪಾದನೆ ವಿರುದ್ಧದ ಯುದ್ಧ’ ಮತ್ತು ಕುಸಿದ ಪ್ರಜಾಪ್ರಭುತ್ವದ ಮೌಲ್ಯಗಳು

ನ್ಯೂಯಾರ್ಕ್‌ನ ಪ್ರತಿಷ್ಠಿತ ವರ್ಲ್ಡ್ ಟ್ರೇಡ್ ಸೆಂಟರ್ ಅವಳಿ ಗೋಪುರಗಳ ಮೇಲೆ ನಡೆದ ಭೀಕರ ಭಯೋತ್ಪಾದನಾ ದಾಳಿಗೆ ಇಂದಿಗೆ ಭರ್ತಿ 25 ವರ್ಷಗಳು ತುಂಬಿವೆ. ಈ ಕಾಲು ಶತಮಾನದ ಅವಧಿಯಲ್ಲಿ 'ಭಯೋತ್ಪಾದನೆ ವಿರುದ್ಧದ ಜಾಗತಿಕ...