ಕೇಂದ್ರ ಸರಕಾರವು ಸರಕಾರಿ ಸಂಸ್ಥೆಗಳನ್ನು ನಾಶಪಡಿಸುತ್ತಿದೆ ಮತ್ತು ದೇಶವು ‘ಚುನಾಯಿತ ಸರ್ವಾಧಿಕಾರಿ’ ದೇಶವಾಗಿ ಬದಲಾಗುತ್ತಿದೆ ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಹೇಳಿದ್ದು, ದೇಶದ ಜನರ ಅಗತ್ಯಗಳನ್ನು ಅರ್ಥಮಾಡಿಕೊಳ್ಳುವ ಮತ್ತು ಅವರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪರ್ಯಾಯ ನಾಯಕತ್ವದ ಅಗತ್ಯವಿದೆ ಎಂದು ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ವಾಗ್ದಾಳಿ ನಡೆಸಿದ ಶಶಿ ತರೂರ್, ಕಳೆದ 10 ವರ್ಷಗಳಲ್ಲಿ ಒಬ್ಬ ವ್ಯಕ್ತಿಯ ಬಗ್ಗೆ ಮಾತ್ರ ಮಾತನಾಡಲಾಗುತ್ತಿದೆ ಮತ್ತು ದೇಶಕ್ಕೆ ಈಗ ಜನರ ಅಗತ್ಯಗಳನ್ನು ಅರ್ಥಮಾಡಿಕೊಳ್ಳುವ ಮತ್ತು ಅವರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪರ್ಯಾಯ ನಾಯಕತ್ವದ ಅಗತ್ಯವಿದೆ ಎಂದು ಹೇಳಿದರು.
ಜೈಪುರದಲ್ಲಿ ನಡೆದ 17ನೇ ಸಾಹಿತ್ಯ ಉತ್ಸವದಲ್ಲಿ ಇಂದ್ರಜಿತ್ ರಾಯ್ ಅವರ “ಅಡಾಸಿಯಸ್ ಹೋಪ್: ಹೌ ಟು ಸೇವ್ ಎ ಡೆಮಾಕ್ರಸಿ” ಎಂಬ ಪುಸ್ತಕದ ಕುರಿತಾದ ಚರ್ಚೆಯ ವೇಳೆ ಶಶಿ ತರೂರ್ ಈ ಹೇಳಿಕೆ ನೀಡಿದ್ದಾರೆ.
ನಮ್ಮಲ್ಲಿ ಸಂಸದೀಯ ವ್ಯವಸ್ಥೆ ಇದೆ, ಅದು ಅಧ್ಯಕ್ಷರಿಂದ ನಡೆಸಲ್ಪಡುತ್ತದೆ ಮತ್ತು 2014ರ ಕಾಂಗ್ರೆಸ್ ಘೋಷಣೆ ‘ನಾನು ಅಲ್ಲ, ನಾವು’ ಎಂಬುವುದನ್ನು ನೆನಪಿಟ್ಟುಕೊಳ್ಳಬೇಕು. ಕಳೆದ 10 ವರ್ಷಗಳಲ್ಲಿ ನಾನು, ನನ್ನ ಮತ್ತು ‘ನನ್ನ ಬಗ್ಗೆ’ ಸಾಕಷ್ಟು ಕೇಳಿದ್ದೇವೆ. ಒಬ್ಬ ವ್ಯಕ್ತಿಯ ಬಗ್ಗೆ ಮಾತ್ರ ಮಾತನಾಡಲಾಗಿದೆ ಎಂದು ಮೋದಿಯ ಹೆಸರನ್ನು ಉಲ್ಲೇಖಿಸದೆ ಹೇಳಿದ್ದಾರೆ. ಈ “ನಾನು” ನ ಪ್ರತಿವಿಷಯವೆಂದರೆ ವಿಭಿನ್ನ ರೀತಿಯ ನಾಯಕತ್ವವನ್ನು ಸೃಷ್ಟಿಸುವುದು, ಅದು ಕೇವಲ ತನ್ನ ಬಗ್ಗೆ ಹೆಮ್ಮೆಪಡುವುದಿಲ್ಲ, ಸಂಪೂರ್ಣ ನಮ್ರತೆಯಿಂದ ನಿಮ್ಮ ಮಾತನ್ನು ಕೇಳುತ್ತದೆ, ನಿಮ್ಮ ಬಗ್ಗೆ ಮಾತನಾಡುತ್ತದೆ, ನಿಮ್ಮ ಅಗತ್ಯಗಳನ್ನು ಅರ್ಥಮಾಡಿಕೊಳ್ಳುತ್ತದೆ ಮತ್ತು ಅವುಗಳನ್ನು ಪರಿಹರಿಸುತ್ತದೆ. ಆದರೆ ಇಂದು ಪ್ರಜಾಪ್ರಭುತ್ವ ಇಂದು “ನಿಜವಾದ ಬಿಕ್ಕಟ್ಟನ್ನು” ಎದುರಿಸುತ್ತಿದೆ ಎಂದು ಹೇಳಿದ್ದಾರೆ.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಯುವಕರು ತಮ್ಮ ಹಕ್ಕುಗಳನ್ನು ವ್ಯಾಪಕವಾಗಿ ಚಲಾಯಿಸಬೇಕೆಂದು ಮನವಿ ಮಾಡಿದ ಶಶಿ ತರೂರ್, ಅಂತಿಮವಾಗಿ ನಿಮ್ಮ ಮತ ಮಾತ್ರ ಮುಖ್ಯವಾಗಿದೆ. ನಿಮ್ಮ ಭವಿಷ್ಯ ನಿಮ್ಮ ಕೈಯಲ್ಲಿದೆ, ಭಾರತವು ಬಲಿಷ್ಠ ಮತ್ತು ಪ್ರಬುದ್ಧ ಪ್ರಜಾಪ್ರಭುತ್ವವಾಗಿದೆ ಎಂದು ಹೇಳಿದ್ದಾರೆ. ಪ್ರತಿಪಕ್ಷಗಳ INDIA ಮೈತ್ರಿಗೆ ಮತ ನೀಡಬೇಕು, ಅನೇಕ ರಾಜಕೀಯ ಪಕ್ಷಗಳು ಮೈತ್ರಿಯ ಭಾಗವಾಗಿವೆ. ಯಾವುದೇ ಒಂದೇ ಸೂತ್ರವು ಎಲ್ಲರಿಗೂ ಅನ್ವಯಿಸುವುದಿಲ್ಲ. ಪ್ರತಿಯೊಂದು ರಾಜ್ಯವು ತನ್ನದೇ ಆದ ರಾಜಕೀಯವನ್ನು ಹೊಂದಿದೆ. ನಾವು ಪರಸ್ಪರ ಒಪ್ಪುವ ಕೆಲವು ರಾಜ್ಯಗಳಿವೆ, ಕೆಲವು ರಾಜ್ಯಗಳಲ್ಲಿ ಮೈತ್ರಿ ಪರಸ್ಪರ ಒಪ್ಪುವುದಿಲ್ಲ ಎಂದು ಬಂಗಾಳದಲ್ಲಿನ ಮೈತ್ರಿ ಬಿರುಕಿನ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಶಶಿ ತರೂರ್, ಕಳೆದ ಆರು-ಏಳು ದಶಕಗಳಲ್ಲಿ ಹಿಂದಿನ ಸರ್ಕಾರಗಳು ಪ್ರಜಾಪ್ರಭುತ್ವದ ಸುಗಮ ಕಾರ್ಯನಿರ್ವಹಣೆಗಾಗಿ ವಿವಿಧ ಸಂಸ್ಥೆಗಳನ್ನು ಬಲಪಡಿಸಿದ್ದವು, ಆದರೆ ಇಂದು ಈ ಸಂಸ್ಥೆಗಳ ಸ್ವಾಯತ್ತತೆ ನಾಶವಾಗುತ್ತಿದೆ. ಬಹುಮತ ಮುಂದಿಟ್ಟು, ದೇಶವು ಚುನಾವಣಾ ಪ್ರಜಾಪ್ರಭುತ್ವದಿಂದ ಚುನಾವಣಾ ಸರ್ವಾಧಿಕಾರವಾಗಿ ಬದಲಾಗುತ್ತಿದೆ. ಜಾರಿ ನಿರ್ದೇಶನಾಲಯ, ಕೇಂದ್ರ ತನಿಖಾ ದಳ ಮತ್ತು ಇತರ ತನಿಖಾ ಸಂಸ್ಥೆಗಳನ್ನು ಉಲ್ಲೇಖಿಸಿದ ತರೂರ್, ಕೇಂದ್ರ ಸರ್ಕಾರವು ನಾಚಿಕೆಯಿಲ್ಲದೆ ಪಟ್ಟಭದ್ರ ಹಿತಾಸಕ್ತಿಗಳಿಗೆ ಇದನ್ನು ಬಳಸಿಕೊಳ್ಳುತ್ತಿದೆ ಎಂದು ಹೇಳಿದ್ದಾರೆ.
ಇದನ್ನು ಓದಿ: ಉತ್ತರಾಖಂಡ: ಏಕರೂಪ ನಾಗರಿಕ ಸಂಹಿತೆ ಕರಡು ಮಸೂದೆಗೆ ಕ್ಯಾಬಿನೆಟ್ ಅನುಮೋದನೆ