ಹಿಂದೂ ಧರ್ಮೀಯರಲ್ಲ ಎಂಬ ಕಾರಣಕ್ಕೆ ಕೇರಳದ ತ್ರಿಶೂರ್ನಲ್ಲಿರುವ ದೇವಾಲಯದ ಆಡಳಿತವು ಭರತನಾಟ್ಯ ಕಲಾವಿದೆ ಮಾನ್ಸಿಯಾ ವಿ.ಪಿ. ಅವರ ಕಾರ್ಯಕ್ರಮವನ್ನು ರದ್ದುಗೊಳಿಸಿದೆ ಎಂದು ಆರೋಪಿಸಲಾಗಿದೆ. ಸರ್ಕಾರಿ ಆಡಳಿತದ ದೇವಸ್ವಂ ಮಂಡಳಿಗೆ ಒಳಪಡುವ ಕೂಡಲಮಾಣಿಕ್ಯಂ ದೇವಸ್ಥಾನವು ತನ್ನ ಆವರಣದಲ್ಲಿ ಹಿಂದೂಯೇತರರು ನೃತ್ಯ ಪ್ರದರ್ಶನ ನೀಡುವಂತಿಲ್ಲ ಎಂದು ಹೇಳಿದೆ.
ಭರತನಾಟ್ಯದಲ್ಲಿ ಪಿಎಚ್ಡಿ ಸಂಶೋಧನಾ ವಿದ್ವಾಂಸರಾಗಿರುವ ಮಾನ್ಸಿಯಾ ಅವರು ಮುಸ್ಲಿಂ ಧರ್ಮದಲ್ಲಿ ಬೆಳೆದವರಾಗಿದ್ದಾರೆ. ಈ ಹಿಂದೆ ಅವರು ಶಾಸ್ತ್ರೀಯ ನೃತ್ಯ ಪ್ರಕಾರಗಳ ಕಲಾವಿದೆಯಾಗಿದ್ದಕ್ಕೆ ಮುಸ್ಲಿಮರಿಂದಲೂ ಟೀಕೆಗಳನ್ನು ಎದುರಿಸಿದ್ದರು.
ಇದನ್ನೂ ಓದಿ: ಮುಸ್ಲಿಮರಿಗೆ ಜಾತ್ರೆಯಲ್ಲಿ ಬಹಿಷ್ಕಾರ: ರಾಜ್ಯ ಸರ್ಕಾರ ವಿರುದ್ದ ಬಿಜೆಪಿ MLC ಹೆಚ್. ವಿಶ್ವನಾಥ್ ಆಕ್ರೋಶ
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾನ್ಸಿಯಾ, “ಹಿಂದೂ ಅಲ್ಲದ ಕಾರಣಕ್ಕೆ ಪ್ರದರ್ಶನ ನೀಡಲು ಸಾಧ್ಯವಿಲ್ಲ ಎಂದು ತಿಳಿಸಲಾಗಿದೆ. ಎಲ್ಲಾ ವೇದಿಕೆಗಳೂ ಧರ್ಮ ಆಧಾರಲ್ಲಿ ನೀಡಲಾಗುತ್ತಿದ್ದು, ಉತ್ತಮ ನೃತ್ಯಗಾರ್ತಿಯೆ ಎಂಬುವುದು ನೋಡುತ್ತಿಲ್ಲ. ದೇವಸ್ಥಾನದ ಕಡೆಯಿಂದ ಕರೆ ಮಾಡಿರುವ ವ್ಯಕ್ತಿ ಮದುವೆಯಾದ ನಂತರ ಹಿಂದೂ ಮತಕ್ಕೆ ಮತಾಂತರವಾಗಿದ್ದೀರಾ ಎಂಬ ಪ್ರಶ್ನೆಯನ್ನೂ ಕೇಳಿದ್ದಾರೆ. ಆದರೆ ಯಾವುದೆ ಮತದಲ್ಲಿ ಇಲ್ಲದ ನಾನು ಯಾವ ಮತಕ್ಕೆ ಮತಾಂತರವಾಗಿಲಿ” ಎಂದು ಹೇಳಿದ್ದಾರೆ.
“ಮತಗಳ ಆಧಾರದ ಮೇಲೆ ಬಹಿಷ್ಕಾರದ ಅನುಭವ ಆಗುತ್ತಿರುವುದು ಇದುವೆ ಮೊದಲೇನಲ್ಲ. ಕೆಲವು ವರ್ಷಗಳ ಹಿಂದೆ ಗುರುವಾಯೂರು ದೇವಸ್ಥಾನದಲ್ಲಿ ನನ್ನ ಪ್ರದರ್ಶನವನ್ನು ಇದೇ ಕಾರಣಕ್ಕೆ ರದ್ದುಗೊಳಿಸಲಾಗಿತ್ತು. ಕಲೆ ಮತ್ತು ಕಲಾವಿದರು ಮತ ಮತ್ತು ಜಾತಿಯ ಕಟ್ಟುಪಾಡುಗಳಿಂದ ನಿರಂತರವಾಗಿ ಹೊಡೆತ ತಿನ್ನುತ್ತಲೆ ಇದ್ದಾರೆ. ಒಂದು ಮತ ಅದನ್ನು ನಿಷೇಧ ಮಾಡಿದಾಗ, ಇನ್ನೊಂದು ,ಮತ ಅದನ್ನು ಏಕಸ್ವಾಮ್ಯವಾಗಿಸುತ್ತದೆ. ನಮ್ಮ ‘ಜಾತ್ಯತೀತ’ ಕೇರಳದಲ್ಲಿ ಏನೂ ಬದಲಾಗಿಲ್ಲ ಎಂಬುದನ್ನು ನೆನಪಿಸುತ್ತಿದ್ದೇನೆ” ಎಂದು ಮಾನ್ಸಿಯಾ ಹೇಳಿದ್ದಾರೆ.
ಇದನ್ನೂ ಓದಿ: ಕಾಪು ಮಾರಿಗುಡಿ ಜಾತ್ರೆ: ಸಂಘಪರಿವಾರದ ಬೆದರಿಕೆಗೆ ಸೊಪ್ಪು ಹಾಕದೆ ಮುಸ್ಲಿಮರೊಂದಿಗೆ ವ್ಯಾಪಾರ ಮಾಡಿದ ಭಕ್ತಾದಿಗಳು!
ಇದೇ ವೇಳೆ, ಕೂಡಲಮಾಣಿಕ್ಯಂ ದೇವಸ್ವಂ ಮಂಡಳಿ ಅಧ್ಯಕ್ಷ ಪ್ರದೀಪ್ ಮೆನನ್ ಮಾತನಾಡಿ, ದೇವಸ್ಥಾನದ ಸಂಪ್ರದಾಯದಂತೆ ದೇವಸ್ಥಾನದ ಆವರಣದೊಳಗೆ ಹಿಂದೂಗಳು ಮಾತ್ರ ಕಾರ್ಯಕ್ರಮ ಮಾಡಬಹುದು ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.
“10 ದಿನಗಳ ಕಾಲ ದೇವಾಲಯದ ಆವರಣದಲ್ಲಿ ಉತ್ಸವ ನಡೆಯುತ್ತದೆ. ಸುಮಾರು 800 ಕಲಾವಿದರು ವಿವಿಧ ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡುತ್ತಾರೆ. ಕಲಾವಿದರು ಹಿಂದೂ ಸಮುದಾಯಕ್ಕೆ ಸೇರಿದ್ದಾರೋ ಇಲ್ಲವೋ ಎಂದು ಕೇಳಲಾಗುತ್ತದೆ. ಆದರೆ ತನಗೆ ಯಾವುದೇ ಧರ್ಮವಿಲ್ಲ ಎಂದು ಮಾನ್ಸಿಯಾ ಲಿಖಿತವಾಗಿ ನೀಡಿದ್ದರು. ಈ ಕಾರಣಕ್ಕಾಗಿ ಅವರ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿದೆ” ಎಂದು ಅವರು ಹೇಳಿದ್ದಾರೆ.
ಕೇರಳದಿಂದ ವರದಿಯಾಗುತ್ತಿರುವ ಎರಡನೇ ಪ್ರಕರಣ ಇದಾಗಿದೆ. ಈ ಹಿಂದೆ ಇದೇ ಮಾದರಿಯಲ್ಲಿ ಉತ್ತರ ಮಲಬಾರ್ನ ದೇವಸ್ಥಾನದ ಆಡಳಿತವು ತನ್ನ ಮಗ ಮುಸ್ಲಿಂ ಮಹಿಳೆಯನ್ನು ಮದುವೆಯಾದ ಆರೋಪದ ಮೇಲೆ ಪೂರಕ್ಕಳಿ ಕಲಾವಿದನಿಗೆ ದೇವಸ್ಥಾನಗಳಲ್ಲಿ ಪ್ರದರ್ಶನ ನೀಡುವುದಕ್ಕೆ ನಿಷೇಧಿಸಿತ್ತು. ಎರಡೂ ಸಂದರ್ಭಗಳಲ್ಲಿ ಅಧಿಕಾರಿಗಳು ದೇವಾಲಯದ ಸಂಪ್ರದಾಯಗಳನ್ನು ಮುರಿಯಲು ಸಾಧ್ಯವಿಲ್ಲ ಎಂದು ಸಮರ್ಥಿಸಿ ಕೊಂಡಿದ್ದಾರೆ.
ಇದನ್ನೂ ಓದಿ: ಕಮಿಷನ್ಗಾಗಿ ಈಶ್ವರಪ್ಪ ಪೀಡಿಸುತ್ತಿದ್ದಾರೆಂದು ಹಿಂದುತ್ವ ಮುಖಂಡ ದೂರು; ಕಾಂಗ್ರೆಸ್ ನಾಯಕರ ವಾಗ್ದಾಳಿ
ವೈದ್ಯರು,ಇತರೆ ವ್ಯಕ್ತಿಗಳು ಹಿಂದೂ ಅಲ್ಲದಿದ್ದರೂ ಅವರಲ್ಲಿ ವ್ಯವಹರಿಸುವುದು ಇಲ್ಲವೇ. ದೇವರಿಗೆ ದೊಡ್ಡ ಕಾಣಿಕೆ ನೀಡುವುದನ್ನು ಬೇಡ ಅನ್ನುವರೆ.