ಕೊರೊನಾ ಸಾಂಕ್ರಾಮಿಕದ ಆರ್ಥಿಕ ಸಂಕಷ್ಟದಲ್ಲೂ ವಾಹನ ಕೊಳ್ಳಲು ತೆಗೆದುಕೊಂಡಿದ್ದ ಸಾಲದ ಕಂತು ಕಟ್ಟಲು ಒತ್ತಾಯಿಸುತ್ತಿದ್ದ ಖಾಸಗಿ ಫೈನಾನ್ಸ್ಗಳ ಕಾಟ ತಾಳಲಾರದೆ ಮಾಲೀಕನೊಬ್ಬ ತನ್ನ ಸ್ವಂತ ವಾಹನಕೆಕ ಬೆಂಕಿ ಹಚ್ಚಿರುವ ದುರ್ಘಟನೆ ಕೊಪ್ಪಳದಲ್ಲಿ ವರದಿಯಾಗಿದೆ.
ಕೊಪ್ಪಳದ ಪೆಟ್ರೋಲ್ ಬಂಕ್ ಬಳಿಯ ವಿವೇಕಾನಂದ ಶಾಲೆಯ ಸರ್ಕಲ್ನಲ್ಲಿ ಕ್ರೂಸರ್ ವಾಹನ ಬೆಂಖಿಯಿಂದ ಹತ್ತಿ ಊರಿಯುತ್ತಿದ್ದನ್ನು ಕಂಡು ಜನತೆ ಆತಂಕಕ್ಕೆ ಒಳಗಾಗಿದ್ದಾರೆ. ಪ್ರಮುಖ ರಸ್ತೆಯಲ್ಲಿ ನಡೆದ ಬೆಂಕಿ ಅವಘಡದಲ್ಲಿ ಕ್ರೂಸರ್ನ ಟೈರ್ಗಳು ಸ್ಫೋಟಗೊಂಡಿವೆ. ಇದರಿಂದ ಜನ ಮತ್ತಷ್ಟು ಭಯ ಭೀತರಾಗಿದ್ದಾರೆ. ಜೊತೆಗೆ ಸ್ಥಳದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಕ್ರೂಸರ್ ಮಾಲೀಕ ಸುಭಾಶ್ಚಂದ್ರ ಎಂಬುವವರು ಖಾಸಗಿ ಫೈನಾನ್ಸ್ನವರ ಕಿರುಕುಳ ಹಿನ್ನೆಲೆ ತಮ್ಮ ಗಾಡಿ ಸಂಖ್ಯೆ ಕೆಎ 44 3584 ನ ವಾಹನಕ್ಕೆ ಬೆಂಕಿ ಹಚ್ಚಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ರಾಜಸ್ಥಾನ: ದಲಿತ ಯುವಕನಿಗೆ ಥಳಿಸಿ ಮೂತ್ರ ಕುಡಿಸಿದ ಜಾತಿವಾದಿ ದುಷ್ಕರ್ಮಿಗಳು; ಪ್ರಕರಣ ದಾಖಲು
ಕೋವಿಡ್ ಕಾಲದಲ್ಲಿಯೂ ಕಂತು ಕಟ್ಟಲು ಒತ್ತಾಯಿಸುತ್ತಿದ್ದ ಖಾಸಗಿ ಫೈನಾನ್ಸ್ಗಳ ಕಾಟ ತಾಳಲಾರದೆ ತಮ್ಮ ಕ್ರೂಸರ್ ವಾಹನಕ್ಕೆ ಸುಭಾಶ್ಚಂದ್ರ ಎಂಬ ಮಾಲೀಕನೊಬ್ಬ ನಡುರಸ್ತೆಯಲ್ಲಿ ಬೆಂಕಿ ಹಚ್ಚಿರುವ ದುರ್ಘಟನೆ ಕೊಪ್ಪಳದಲ್ಲಿ ವರದಿಯಾಗಿದೆ. pic.twitter.com/wP9rHOD5aY
— Naanu Gauri (@naanugauri) January 30, 2022
ಸ್ಥಳಕ್ಕಾಗಮಿಸಿದ ಅಗ್ನಿಶಾಂಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಅಷ್ಟರಲ್ಲಿ ವಾಹನ ಮೂಕ್ಕಾಲು ಭಾಗ ಸುಟ್ಟು ಕರಕಲಾಗಿದೆ.
ಬಾದಾಮಿ ತಾಲೂಕಿನ ಸುಭಾಶ್ ಚಂದ್ರ ಮತ್ತು ಖಾಸಗಿ ಫೈನಾನ್ಸ್ ಕಂಪನಿಯವರಿಗೆ ಹಣ ಕಟ್ಟುವಿ ವಿಚಾರಕ್ಕೆ ಇಂದು ಜಗಳವಾಗಿದ್ದು, ಇದೇ ಕೋಪದಲ್ಲಿ ಕ್ರೂಸರ್ ಮಾಲೀಕ ತಮ್ಮ ವಾಹನಕ್ಕೆ ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಕೋಲಾರ: ಬದುಕಿರುವ ರೈತನಿಗೆ ಮರಣ ಪ್ರಮಾಣ ಪತ್ರ ಕೊಟ್ಟ ಅಧಿಕಾರಿಗಳು