2024ರ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ತನ್ನ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದು, ಉದ್ಯೋಗ ಸೃಷ್ಟಿ, ಮೂಲಸೌಕರ್ಯಗಳ ಅಭಿವೃದ್ಧಿ ಮತ್ತು ರಾಷ್ಟ್ರೀಯ ಜಾತಿ ಗಣತಿ ಪ್ರಮುಖ ಮುಖ್ಯಾಂಶಗಳಲ್ಲಿ ಒಂದಾಗಿದೆ.
ಪಕ್ಷದ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿಯವರು ದೆಹಲಿಯ ಪಕ್ಷದ ಕಚೇರಿಯಲ್ಲಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು.
ಮಾಜಿ ಕೇಂದ್ರ ಹಣಕಾಸು ಸಚಿವ ಪಿ ಚಿದಂಬರಂ ಅವರು ಪ್ರಣಾಳಿಕೆ ಸಿದ್ಧಪಡಿಸಿದ ಸಮಿತಿಯ ನೇತೃತ್ವ ವಹಿಸಿದ್ದರು.
“ಈ ಪ್ರಣಾಳಿಕೆಯು ದೇಶದ ರಾಜಕೀಯ ಇತಿಹಾಸದಲ್ಲಿ ‘ನ್ಯಾಯ ಕಾ ದಾಸ್ತಾವೆಜ್’ (ನ್ಯಾಯಕ್ಕಾಗಿ ದಾಖಲೆ) ಆಗಿರುತ್ತದೆ. ‘ಭಾರತ್ ಜೋಡೋ ನ್ಯಾಯ ಯಾತ್ರೆ’ಯ ಐದು ಸ್ತಂಭಗಳಾದ ಯುವ, ರೈತರು, ಮಹಿಳೆಯರು, ಕಾರ್ಮಿಕರು ಹಾಗೂ 25 ಗ್ಯಾರಂಟಿಗಳನ್ನು ಒಳಗೊಂಡಿದೆ” ಎಂದು ಖರ್ಗೆ ಹೇಳಿದರು.
✨ युवा न्याय ✨
✅ युवा रोशनी
युवाओं के लिए 5,000 करोड़ रुपए का नया स्टार्टअप फंड
हाथ बदलेगा हालात ✋ #CongressNyayPatra pic.twitter.com/W3L8oJJdmW
— Congress (@INCIndia) April 5, 2024
ಪ್ರಣಾಳಿಕೆಯ ಒಟ್ಟಾರೆ ಆಶಯವು, ಉದ್ಯೋಗ, ಸಂಪತ್ತು ಕ್ರೋಢೀಕರಣ ಮತ್ತು ಕಲ್ಯಾಣವನ್ನು ಆಧರಿಸಿದೆ ಎಂದು ಪಕ್ಷ ಹೇಳಿದೆ.
“ಉದ್ಯೋಗ ಎಂದರೆ ನೀವು ಉದ್ಯೋಗಗಳನ್ನು ನೀಡಬೇಕು. ಅದನ್ನು ಹಂಚುವ ಮೊದಲು ಸಂಪತ್ತು ಸೃಷ್ಟಿಸಬೇಕು. ‘ಕಲ್ಯಾಣ’ ಎಂದರೆ ಬಡ ವರ್ಗಗಳ ಬಗ್ಗೆ ಕಾಳಜಿ ವಹಿಸುವುದು” ಎಂದು ಕಾಂಗ್ರೆಸ್ ಹೇಳಿದೆ.
ದೇಶದಾದ್ಯಂತ ಜಾತಿ ಗಣತಿ:
ಕಾಂಗ್ರೆಸ್ನ ಪ್ರಮುಖ ಆಶ್ವಾಸನೆಯೆಂದರೆ ಜಾತಿ ಗಣತಿ; ನವೆಂಬರ್ನಲ್ಲಿ ಬಿಹಾರ ಸರ್ಕಾರದ ರಾಜ್ಯವ್ಯಾಪಿ ಸಮೀಕ್ಷೆ ಬಿಡುಗಡೆಯಾದಾಗಿನಿಂದ ದೇಶದಾದ್ಯಂತ ಈ ವಿಚಾರ ರಾಜಕೀಯದ ಬಿಸಿ ವಿಷಯವಾಗಿದೆ.
ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಜಾತಿಗಳು, ಉಪಜಾತಿಗಳು ಮತ್ತು ಅವರ ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಗುರುತಿಸಲು ಮತ್ತು ಎಣಿಸಲು ರಾಷ್ಟ್ರವ್ಯಾಪಿ ಜನಗಣತಿಯನ್ನು ನಡೆಸುವುದಾಗಿ ಪ್ರತಿಜ್ಞೆ ಮಾಡಿದೆ. ಸಂವಿಧಾನವನ್ನು ತಿದ್ದುಪಡಿ ಮಾಡುವ ಮೂಲಕ ಅಂಚಿನಲ್ಲಿರುವ ಗುಂಪುಗಳಿಗೆ; ಅಂದರೆ, ಬುಡಕಟ್ಟುಗಳು ಮತ್ತು ಇತರ ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿಗಳ ಕೋಟಾದ ಮೇಲೆ ಶೇಕಡಾ 50 ರಷ್ಟು ಮಿತಿಯನ್ನು ಹೆಚ್ಚಿಸಲು ಪ್ರತಿಜ್ಞೆ ಮಾಡಿದೆ.
ರೈತರಿಗೆ ಎಂಎಸ್ಪಿ
ವಾಣಿಜ್ಯ ಬೆಳೆಗಳನ್ನು ಬೆಳೆಯುವ ರೈತರಿಗೆ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್ಪಿ) ಜಾರಿಗೆ ತರುವುದಾಗಿ ಪಕ್ಷವು ಭರವಸೆ ನೀಡಿದೆ. ಎಂಎಸ್ಪಿ ಸಮಸ್ಯೆಯು 2020ರಿಂದ ರೈತರ ಪ್ರತಿಭಟನೆಯ ಮುಖ್ಯ ವಿಷಯವಾಗಿದೆ. ದ್ರದ (ಈಗ ರದ್ದುಪಡಿಸಿದ) ಮೂರು ಕೃಷಿ ಕಾನೂನುಗಳ ವಿರುದ್ಧ ದೇಶಾದ್ಯಂತ ಲಕ್ಷಾಂತರ ಜನರು ತಿಂಗಳ ಕಾಲ ಆಂದೋಲನ ನಡೆಸಿದರು.
ಸ್ವಾಮಿನಾಥನ್ ಆಯೋಗವು ಶಿಫಾರಸು ಮಾಡಿದ ಸೂತ್ರದ ಆಧಾರದ ಮೇಲೆ ಪ್ರತಿಭಟನಾ ನಿರತ ರೈತರ ಪ್ರಮುಖ ಬೇಡಿಕೆಯಾದ ಎಂಎಸ್ಪಿಗೆ ಶಾಶ್ವತ ಕಾನೂನು ಖಾತರಿ ನೀಡುವುದಾಗಿ ಕಾಂಗ್ರೆಸ್ ಹೇಳಿದೆ.
ಬಡತನ ನಿರ್ಮೂಲನೆ:
ಮುಂದಿನ ದಶಕದಲ್ಲಿ 23 ಕೋಟಿ ಜನರ ಭವಿಷ್ಯವನ್ನು ಸುಧಾರಿಸುವ ಮೂಲಕ ಬಡತನವನ್ನು ತೊಡೆದುಹಾಕಲು ಪಕ್ಷವು ಪ್ರತಿಜ್ಞೆ ಮಾಡಿದೆ. ಚಿದಂಬರಂ ಬಿಜೆಪಿಯನ್ನು “ಶ್ರೀಮಂತರ, ಶ್ರೀಮಂತರಿಂದ ಮತ್ತು ಶ್ರೀಮಂತರ ಸರ್ಕಾರ” ಎಂದು ವಾಗ್ದಾಳಿ ನಡೆಸಿದರು. ಇದು “ಮೇಲಿನ ಶೇಕಡಾ 1ರಷ್ಟು ಜನರ ಹಿತಾಸಕ್ತಿಗಳಿಂದ ನಡೆಸಲ್ಪಡುತ್ತದೆ” ಎಂದು ಹೇಳಿದರು.
✨ नारी न्याय ✨
✅ महालक्ष्मी
गरीब परिवार की एक महिला को हर साल 1 लाख रुपए
हाथ बदलेगा हालात ✋ #CongressNyayPatra pic.twitter.com/cPhNA2wVmV
— Congress (@INCIndia) April 5, 2024
“ಆದರೆ ನಾವು ಕೆಳ ಹಂತದ ಶೇಕಡಾ 50ರಷ್ಟು ಜನರನ್ನು ನೋಡುತ್ತೇವೆ. ಶೇಕಡಾ 50 ರಷ್ಟು ಜನರು ಮುಖ್ಯವಾಗಿದ್ದಾರೆ. ಈ ದೇಶದಲ್ಲಿ 23 ಕೋಟಿ ಜನರು ಇನ್ನೂ ಬಡವರು ಎಂದು ಅಂದಾಜಿಸಲಾಗಿದೆ. ಯುಪಿಎ 24 ಕೋಟಿ ಜನರನ್ನು ಬಡತನದಿಂದ ಮೇಲಕ್ಕೆತ್ತಿತು. ನಾವು ಭರವಸೆ ನೀಡುತ್ತೇವೆ, 2024 ರಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದರೆ 10 ವರ್ಷಗಳಲ್ಲಿ 23 ಕೋಟಿ ಜನರನ್ನು ಮೇಲಕ್ಕೆ ಎತ್ತುತ್ತೇವೆ” ಎಂದರು.
ಈ ಭರವಸೆಯ ಭಾಗವಾಗಿ, ಮಹಿಳೆಯರ ಸಬಲೀಕರಣಕ್ಕಾಗಿ ಪ್ರತಿ ಬಡ ಕುಟುಂಬದ ಹಿರಿಯ ಮಹಿಳಾ ಸದಸ್ಯರಿಗೆ ವರ್ಷಕ್ಕೆ 1 ಲಕ್ಷ ರೂಪಾಯಿಗಳ ಬೇಷರತ್ತಾದ ನಗದು ವರ್ಗಾವಣೆಯನ್ನು ಒದಗಿಸಲು ‘ಮಹಾಲಕ್ಷ್ಮಿ’ ಯೋಜನೆಯನ್ನು ಪ್ರಾರಂಭಿಸುವುದಾಗಿ ಕಾಂಗ್ರೆಸ್ ಹೇಳಿದೆ. ಫಲಾನುಭವಿಗಳನ್ನು ಆದಾಯ ಪಿರಮಿಡ್ನ ಕೆಳಗಿನ ಹಂತದಿಂದ ಗುರುತಿಸಲಾಗುತ್ತದೆ.
ಆದಾಯ ಮತ್ತು ಅವಕಾಶಗಳ ಅಸಮಾನತೆ ಭಾರತದ ಕಹಿ ಸತ್ಯವಾಗಿ ಉಳಿದಿದೆ. ಪ್ರತಿ ಕುಟುಂಬಕ್ಕೆ ಪ್ರತಿ ತಿಂಗಳು ಮೂಲ ಆದಾಯದ ಭರವಸೆ ನೀಡುವುದನ್ನು ಖಚಿತಪಡಿಸಿಕೊಳ್ಳುವುದು ಯಾವುದೇ ಸರ್ಕಾರದ ನೈತಿಕ ಮತ್ತು ರಾಜಕೀಯ ಜವಾಬ್ದಾರಿಯಾಗಿದೆ ಎಂದು ಪಕ್ಷ ಹೇಳಿದೆ.
ರಾಷ್ಟ್ರೀಯ ಭದ್ರತೆ:
ಚೀನಾದೊಂದಿಗಿನ ದೇಶದ ಗಡಿಯಲ್ಲಿ ಯಥಾಸ್ಥಿತಿಯನ್ನು ಪುನಃಸ್ಥಾಪಿಸಲು ಮತ್ತು “ಈ ಹಿಂದೆ ಎರಡೂ ಸೇನೆಗಳು ಗಸ್ತು ತಿರುಗುತ್ತಿದ್ದ ಪ್ರದೇಶಗಳನ್ನು ನಮ್ಮ ಸೈನಿಕರಿಗೆ ಮತ್ತೆ ಪ್ರವೇಶಿಸಬಹುದೆಂದು ಖಚಿತಪಡಿಸಿಕೊಳ್ಳಲು ಕೆಲಸ ಮಾಡುವುದಾಗಿ ಪಕ್ಷ ಹೇಳಿದೆ.
✨ युवा न्याय ✨
✅ गिग-वर्कर सुरक्षा
गिग वर्कर के लिए बेहतर काम-काजी नियम और संपूर्ण सामाजिक सुरक्षा
हाथ बदलेगा हालात ✋ #CongressNyayPatra pic.twitter.com/gCWWlmk01H
— Congress (@INCIndia) April 5, 2024
ಆರೋಗ್ಯ ರಕ್ಷಣೆ
ರೋಗನಿರ್ಣಯ, ಶಸ್ತ್ರಚಿಕಿತ್ಸೆ ಮತ್ತು ಔಷಧಿಗಳ ವೆಚ್ಚ ಸೇರಿದಂತೆ ಸಾರ್ವತ್ರಿಕ ಉಚಿತ ಆರೋಗ್ಯ ಸೇವೆ ಲಭ್ಯವಾಗುವಂತೆ ಮಾಡಲಾಗುವುದು ಎಂದು ಪಕ್ಷ ಹೇಳಿದೆ. ಇದು ರಾಜಸ್ಥಾನದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಜಾರಿಗೆ ತಂದ ಮಾದರಿಯಂತೆ ₹25 ಲಕ್ಷದವರೆಗಿನ ನಗದು ರಹಿತ ವಿಮೆಯೊಂದಿಗೆ ಬರಲಿದೆ.
“ಆಸ್ಪತ್ರೆಗಳು, ಚಿಕಿತ್ಸಾಲಯಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಎಂಎಚ್ಸಿಗಳು, ಔಷಧಾಲಯಗಳು ಮತ್ತು ಆರೋಗ್ಯ ಶಿಬಿರಗಳಂತಹ ಸಾರ್ವಜನಿಕ ಆರೋಗ್ಯ ಕೇಂದ್ರಗಳಲ್ಲಿ ಆರೋಗ್ಯವು ಸಾರ್ವತ್ರಿಕ ಮತ್ತು ಉಚಿತವಾಗಿರುತ್ತದೆ ಎಂದು ನಾವು ಭರವಸೆ ನೀಡುತ್ತೇವೆ. ಉಚಿತ ಆರೋಗ್ಯ ರಕ್ಷಣೆಯು ಪರೀಕ್ಷೆ, ರೋಗನಿರ್ಣಯ, ಚಿಕಿತ್ಸೆ, ಶಸ್ತ್ರಚಿಕಿತ್ಸೆ, ಔಷಧಗಳು, ಪುನರ್ವಸತಿ, ಮತ್ತು ಉಪಶಾಮಕ ಆರೈಕೆ ನೀಡಲಾಗುವುದು ಎಂದು ಭರವಸೆ ನೀಡಿದೆ.
ಅಸಿಸ್ಟೆಡ್ ಲಿವಿಂಗ್ ಅಂಡ್ ಕೇರ್ ಸೆಂಟರ್ ಕೂಡ ಸ್ಥಾಪಿಸುವ ಜೊತಗೆ, ಅಂಗವಿಕಲರಿಗೆ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಅವರಿಗೆ ಪ್ರಾತಿನಿಧ್ಯವನ್ನು ಒದಗಿಸುತ್ತದೆ ಎಂದು ಕಾಂಗ್ರೆಸ್ ಹೇಳಿದೆ
ಇತರ ಪ್ರಮುಖ ಅಂಶಗಳು:
ಬೃಹತ್ ಸಾಲಗಳೊಂದಿಗೆ ಹೋರಾಡುತ್ತಿರುವ ನಿರುದ್ಯೋಗಿ ಯುವಕರ ನಡುವೆ ಬಲವಾಗಿ ಪ್ರತಿಧ್ವನಿಸುವ ಒಂದು ಕ್ರಮದಲ್ಲಿ, ಪಕ್ಷವು “ಒಂದು ಬಾರಿ ಪರಿಹಾರದ ಕ್ರಮವಾಗಿ” ಪಾವತಿಸದ ಬಡ್ಡಿ ಸೇರಿದಂತೆ ಎಲ್ಲ ವಿದ್ಯಾರ್ಥಿ ಶೈಕ್ಷಣಿಕ ಸಾಲಗಳನ್ನು ಮನ್ನಾ ಮಾಡುವುದಾಗಿ ಹೇಳಿದೆ. ಈ ಮೊತ್ತವನ್ನು ಮಾರ್ಚ್ 15 ರಂದು ಲೆಕ್ಕ ಹಾಕಲಾಗುತ್ತದೆ. ಬ್ಯಾಂಕ್ಗಳಿಗೆ ಸರ್ಕಾರದಿಂದ ಪರಿಹಾರ ನೀಡಲಾಗುವುದು ಎಂದು ಕಾಂಗ್ರೆಸ್ ಹೇಳಿದೆ.
ಇದನ್ನೂ ಓದಿ; ಕಚ್ಚತೀವು ಮೇಲೆ ಹಕ್ಕು ಸಾಧಿಸಲು ಭಾರತಕ್ಕೆ ಯಾವುದೇ ಆಧಾರವಿಲ್ಲ: ಶ್ರೀಲಂಕಾ ಸಚಿವ