ಜನನ ಮತ್ತು ಮರಣ ನೋಂದಣಿ (ತಿದ್ದುಪಡಿ) ಕಾಯ್ದೆ 2023ರ ಪ್ರಕಾರ, ಮಕ್ಕಳ ಜನನ ನೋಂದಣಿ ಮಾಡುವಾಗ ಪೋಷಕರ ಧರ್ಮವನ್ನು ಪ್ರತ್ಯೇಖವಾಗಿ ದಾಖಲಿಸಬೇಕಿದೆ. ಇದು ಹೊಸ ಆತಂಕಕ್ಕೆ ಕಾರಣವಾಗಿದೆ.
ಇದುವರೆಗೆ ಜನನ ನೋಂದಣಿ ಮಾಡುವಾಗ ಮಗುವಿನ ಕುಟುಂಬದ ಧರ್ಮ ಮಾತ್ರ ಉಲ್ಲೇಖಿಸಲಾಗುತ್ತಿತ್ತು. ಆದರೆ, ಕಳೆದ ವರ್ಷ ಆಗಸ್ಟ್ 11ರಂದು ಸಂಸತ್ನಲ್ಲಿ ಅನುಮೋದನೆಗೊಂಡಿರುವ ತಿದ್ದುಪಡಿ ಕಾಯ್ದೆಯ ಪ್ರಕಾರ, ಮಗುವಿನ ಜನನ ನೋಂದಣಿ ಮಾಡುವಾಗ ತಂದೆ ಮತ್ತು ತಾಯಿಯ ಧರ್ಮಗಳನ್ನು ಸರ್ಕಾರ ಪ್ರತ್ಯೇಖವಾಗಿ ದಾಖಲಿಸಿಕೊಳ್ಳಲಿದೆ ಎಂದು ಪತ್ರಿಕೆಯೊಂದು ವರದಿ ಮಾಡಿದೆ.
ಈ ವರದಿಯನ್ನು ಎಕ್ಸ್ನಲ್ಲಿ ಹಂಚಿಕೊಂಡಿರುವ ತೃಣಮೂಲ ಕಾಂಗ್ರೆಸ್ ಪಕ್ಷದ ರಾಜ್ಯಸಭಾ ಸಂಸದ ಸಾಕೇತ್ ಗೋಖಲೆ, “ಇದು ಎನ್ಆರ್ಸಿ ಜಾರಿಗೊಳಿಸುವ ಹುನ್ನಾರವೇ?” ಎಂಬ ಅನುಮಾನ ಮತ್ತು ಆತಂಕ ವ್ಯಕ್ತಪಡಿಸಿದ್ದಾರೆ.
This new development is VERY sinister – Modi Govt is going to sneakily link Indian citizenship to religion 👇
The lies of the Modi Govt on the CAA are now exposed. Since the CAA rules were notified, the Modi Govt has kept claiming that "CAA will not take away citizenship".
But… pic.twitter.com/B1WZMkf0BZ
— Saket Gokhale (@SaketGokhale) April 5, 2024
“ಮೋದಿ ಸರ್ಕಾರವು ಭಾರತೀಯ ಪೌರತ್ವವನ್ನು ಧರ್ಮದೊಂದಿಗೆ ಜೋಡಿಸುತ್ತಿದೆ. ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ. ಸಿಎಎ ಜಾರಿಗೊಳಿಸುವಾಗ, ಅದು ಯಾವುದೇ ಭಾರತೀಯರ ಪೌರತ್ವ ಕಿತ್ತುಕೊಳ್ಳುವುದಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದರು. ಈಗಲೂ ಹೇಳುತ್ತಿದ್ದಾರೆ. ಆದರೆ, ಗೃಹ ಸಚಿವ ಅಮಿತ್ ಶಾ ಅವರು, ಸಿಎಎ ಬಳಿಕ ಎನ್ಆರ್ಸಿ ಜಾರಿಗೊಳಿಸುವುದಾಗಿ ಈ ಹಿಂದೆಯೇ ಹೇಳಿದ್ದಾರೆ” ಎಂದು ಸಾಕೇತ್ ಗೋಖಲೆ ನೆನಪಿಸಿದ್ದಾರೆ.
“ಇನ್ನು ಮುಂದೆ ಮೋದಿ ಸರ್ಕಾರ ಮಗುವಿನ ಜನನ ನೋಂದಣಿ ವೇಳೆ ಪೋಷಕರ ಧರ್ಮಗಳನ್ನು ಪ್ರತ್ಯೇಖವಾಗಿ ದಾಖಲಿಸಿದೆ ಎನ್ನಲಾಗ್ತಿದೆ. ಇದು ಧರ್ಮಾಧಾರಿತವಾಗಿ ಭಾರತೀಯರ ಪೌರತ್ವ ನಿರ್ಧರಿಸುವ ಎನ್ಆರ್ಸಿ ಜಾರಿಗೊಳಿಸುವ ಹುನ್ನಾರವಷ್ಟೆ. ಯಾಕೆಂದರೆ…
ಜುಲೈ 1987 ರ ಮೊದಲು ಜನಿಸಿದ ಪೋಷಕರು ತಾವು ಭಾರತೀಯ ನಾಗರಿಕರು ಎಂದು ಸಾಬೀತುಪಡಿಸಲು ಭಾರತದಲ್ಲಿ ಜನಿಸಿದ ಜನನ ಪ್ರಮಾಣಪತ್ರವನ್ನು ನೀಡಬೇಕು.
ಜುಲೈ 1987 ರ ನಂತರ ಜನಿಸಿದ ಪೋಷಕರು ತಮ್ಮ ಪೋಷಕರು ಭಾರತದಲ್ಲಿ ಜನಿಸಿದವರು ಮತ್ತು ಭಾರತೀಯ ಪ್ರಜೆಗಳು ಎಂದು ತೋರಿಸಲು ತಮ್ಮ ಪೋಷಕರ ಜನ್ಮ ಪ್ರಮಾಣಪತ್ರವನ್ನು ನೀಡಬೇಕು.
ಮೇಲಿನ ಮಾನದಂಡಗಳನ್ನು ಬಳಸಿಕೊಂಡು ತಮ್ಮ ಪೌರತ್ವವನ್ನು ಸಾಬೀತುಪಡಿಸಲು ಸಾಧ್ಯವಾಗದವರನ್ನು ಬಂಧನ ಕೇಂದ್ರಗಳಿಗೆ ಕಳುಹಿಸುವ ಸಾಧ್ಯತೆ ಇದೆ. ಒಂದು ವೇಳೆ ಈ ಜನರು ಮುಸ್ಲಿಮರು ಅಲ್ಲ ಎಂದಾದರೆ ನಾನು ಸಿಎಎ ಧನ್ಯವಾದ ಹೇಳುತ್ತೇನೆ ಎಂದು ಸಾಕೇತ್ ಗೋಖಲೆ ಹೇಳಿದ್ದಾರೆ. (ಇದರರ್ಥ ಬಲಿಪಶುಗಳು ಖಂಡಿತವಾಗಿ ಮುಸ್ಲಿಮರು ಎಂದಾಗಿದೆ.)
“ಸಿಎಎ ಕುರಿತು ಗುಪ್ತಚರ ಇಲಾಖೆ ಜಂಟಿ ಸಂಸದೀಯ ಸಮಿತಿಗೆ ಹೇಳಿರುವ ಪ್ರಕಾರ, ಅದು ಕೇವಲ 31,313 ಜನರಿಗೆ ಮಾತ್ರ ಪ್ರಯೋಜನವಾಗಲಿದೆ. ಹಾಗಾಗಿ, ಕೇವಲ 31,313 ಜನರಿಗೆ ಉಪಯೋಗವಾಗಲೆಂದು ಸಿಎಎ ಜಾರಿಗೊಳಿಸಿಲ್ಲ. ಸಿಎಎ ಹಿಂದಿನ ಅಜೆಂಡಾ ಎನ್ಆರ್ಸಿ ಜಾರಿಗೊಳಿಸಿ ಭಾರತೀಯ ಪೌರತ್ವವನ್ನು ಧರ್ಮ ಆಧಾರಿತವಾಗಿಸುವುದಾಗಿದೆ. ಸಿಎಎ ಹಿಂದಿನ ಮೋದಿ ಸರ್ಕಾರ ಕೆಟ್ಟ ಮತ್ತು ದುಷ್ಟ ಅಜೆಂಡಾ ಸ್ಪಷ್ಟವಾಗಿದೆ” ಎಂದು ಸಾಕೇತ್ ಗೋಖಲೆ ತಿಳಿಸಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ರಾಷ್ಟ್ರೀಯ ಜನ ಸಂಖ್ಯಾ ನೋಂದಣಿ (ಎನ್ಪಿಆರ್) ಬಗ್ಗೆಯೂ ಕಳವಳ ವ್ಯಕ್ತಪಡಿಸಿದ್ದ ಸಾಕೇತ್ ಗೋಖಲೆ, ಇದು ಗುಪ್ತವಾಗಿ ಎನ್ಆರ್ಸಿ ಜಾರಿಗೊಳಿಸುವ ಹುನ್ನಾರ ಎಂದಿದ್ದರು.
ಈ ಕುರಿತು ನಾನುಗೌರಿ ಪ್ರಕಟಿಸಿದ್ದ ವರದಿ ಇಲ್ಲಿದೆ
ಒಟ್ಟಾರೆಯಾಗಿ ಹೇಳುವುದಾದರೆ, ಸಿಎಎ ಜಾರಿಗೊಳಿಸಿರುವುದರ ಮೂಲ ಉದ್ದೇಶ ಎನ್ಆರ್ಸಿ ಜಾರಿಗೊಳಿಸುವುದಾಗಿದೆ ಎಂಬುವುದು ಸಾಕೇತ್ ಗೋಖಲೆ ಅವರ ವಾದ. ಸಿಎಎ ಭಾರತೀಯರ ಪೌರತ್ವ ಕಿತ್ತುಕೊಳ್ಳುವುದಿಲ್ಲ ಎಂದಿರುವ ಸರ್ಕಾರ, ಸಿಎಎ ಬೆನ್ನಲ್ಲೇ ಅದಕ್ಕೆ ಸಂಬಂಧಿಸಿದ ಎನ್ಪಿಆರ್ ಮೂಲಕ ಜನಗಣತಿ, ಮಗುವಿನ ಪೋಷಕರ ಧರ್ಮ ನೋಂದಣಿ ಇತ್ಯಾದಿ ಕಾನೂನುಗಳನ್ನು ಗೌಪ್ಯವಾಗಿ ಜಾರಿಗೊಳಿಸುತ್ತಿದೆ. ಈ ಬಗ್ಗೆ ಸಾಮಾನ್ಯ ಜನರಿಗೆ ಬಿಡಿ, ದೇಶದ ಉನ್ನತ ಮಟ್ಟದ ನಾಯಕರಿಗೂ ಮಾಹಿತಿಯಿಲ್ಲ ಎಂಬುದಾಗಿ ಕಳವಳದ ಸಂಗತಿ.
ಇದನ್ನೂ ಓದಿ : ‘ಶೀಘ್ರದಲ್ಲೇ ಹೊರಗೆ ಭೇಟಿಯಾಗುತ್ತೇನೆ..’; ತಿಹಾರ್ ಜೈಲಿನಿಂದ ಪತ್ರ ಬರೆದ ಮನೀಶ್ ಸಿಸೋಡಿಯಾ