Homeಮುಖಪುಟಚೀನಾದಿಂದ ಭಾರತದ ಭೂಭಾಗದ ಆಕ್ರಮಣ: ಮೈ ಕೊರೆವ ಚಳಿಯನ್ನು ಲೆಕ್ಕಿಸದೆ ಲಡಾಖ್‌ನಲ್ಲಿ ಬೃಹತ್‌ ಪ್ರತಿಭಟನೆ

ಚೀನಾದಿಂದ ಭಾರತದ ಭೂಭಾಗದ ಆಕ್ರಮಣ: ಮೈ ಕೊರೆವ ಚಳಿಯನ್ನು ಲೆಕ್ಕಿಸದೆ ಲಡಾಖ್‌ನಲ್ಲಿ ಬೃಹತ್‌ ಪ್ರತಿಭಟನೆ

- Advertisement -
- Advertisement -

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಒಂದು ಕಡೆ ರೈತರ ಪ್ರತಿಭಟನೆ, ಬಿಜೆಪಿ ವಿರುದ್ಧದ ಅಭಿಯಾನಗಳು ನಡೆಯುತ್ತಿರುವ ಮಧ್ಯೆ ಉತ್ತರ ಭಾರತದ ಶೀತ ಮರುಭೂಮಿಯಾದ ಲಡಾಖ್‌ನ ರಾಜಧಾನಿ ಲೇಹ್‌ನಲ್ಲಿ ಮೈ ಕೊರೆವ ಚಳಿಯ ಮಧ್ಯೆ ಬಹುತೇಕ ಬುಡಕಟ್ಟು ಪ್ರತಿಭಟನಾಕಾರರು ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ. ತಮ್ಮ ಭೂಮಿಯನ್ನು ಆಕ್ರಮಿಸಿಕೊಂಡಿರುವ ಚೀನಾದ ವಿರುದ್ಧ ಲಡಾಖ್‌ನ ಜನರು ಬೃಹತ್ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಆದರೆ ಪ್ರಧಾನಿ ಮೋದಿ ಮೌನವಾಗಿದ್ದಾರೆ, ಭಾರತ ಸರ್ಕಾರ ಮೌನವಾಗಿದೆ ಮತ್ತು ಭಾರತದ ಮಾಧ್ಯಮಗಳು ಚೀನಾ 2,000 ಚದರ ಕಿಮೀ ಭಾರತದ ಭೂಮಿಯನ್ನು ಕಬಳಿಸಿದರೂ ಮೌನವಾಗಿವೆ.

ಲಡಾಖ್‌ನಲ್ಲಿರುವ ಲೇಹ್‌ನಲ್ಲಿ, ಹದಿಹರೆಯದವರಿಂದ ಹಿಡಿದು ಹಿರಿಯ ನಾಗರಿಕರವರೆಗೂ ಸೇರಿ ಪ್ರತಿಭಟನೆಯನ್ನು ನಡೆಸುತ್ತಿದ್ದಾರೆ. ಬಿಜೆಪಿಯು, ಈ ಹಿಂದಿನ ಚುನಾವಣೆ ವೇಳೆ ನೀಡಿದ್ದ ಪ್ರಮುಖ ಭರವಸೆಯನ್ನು ಈಡೇರಿಸಲು ವಿಫಲವಾಗಿದೆ, ನಮ್ಮ ಭೂಭಾಗದ ಆಕ್ರಮಣ ನಡೆಯುತ್ತಿದೆ ಎಂದು ಸಾವಿರಾರು ಮಂದಿ ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ಪ್ರತಿಭಟನೆ ಹಿನ್ನೆಲೆ ಲಡಾಖ್‌ ಆಡಳಿತವು ಈ ಪ್ರದೇಶದಲ್ಲಿ ಸೆಕ್ಷನ್ 144ರ ಅಡಿಯಲ್ಲಿ ನಿಷೇಧಾಜ್ಞೆಗಳನ್ನು ವಿಧಿಸಿದೆ. ಚೀನಾದಿಂದ ಭಾರತದ ಭೂಭಾಗದ ಆಕ್ರಮಣ ಮಾಡಲಾಗಿದೆ ಮತ್ತು ದಕ್ಷಿಣದಲ್ಲಿ ಕಾರ್ಪೊರೇಟ್‌ಗಳಿಂದ ಸಾವಿರಾರು ಚದರ ಕಿಲೋಮೀಟರ್‌ಗಳಷ್ಟು ಭೂಮಿಗಳ ಆಕ್ರಮಣ ನಡೆದಿದೆ. ಚಾಂಗ್ಪಾ ಅಲೆಮಾರಿ ಬುಡಕಟ್ಟು ಜನಾಂಗದವರ ದುಃಸ್ಥಿತಿಯಲ್ಲಿ ಬದುಕುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.

ಲಡಾಖ್‌ ಜನರ ಬೇಡಿಕೆಯೇನು?

ಲಡಾಖ್‌ಗೆ ರಾಜ್ಯ ಸ್ಥಾನಮಾನ, ಲಡಾಖ್‌ನ್ನು ಆರನೇ ಶೆಡ್ಯೂಲ್‌ಗೆ ಸೇರಿಸುವುದು, ಲಡಾಖ್‌ನ ಸ್ಥಳೀಯರಿಗೆ ಸರಕಾರಿ ಉದ್ಯೋಗದಲ್ಲಿ ಮೀಸಲಾತಿ ಮತ್ತು ಲೇಹ್ ಮತ್ತು ಕಾರ್ಗಿಲ್ ಜಿಲ್ಲೆಗಳಿಗೆ ಸಂಸದೀಯ ಸ್ಥಾನವನ್ನು ನೀಡಬೇಕೆಂದು ಒತ್ತಾಯಿಸಲಾಗಿದೆ.

ಗಡಿ ಜಾಥಾ ರದ್ದುಗೊಳಿಸಿದ ವಾಂಗ್ಚುಕ್‌

ಲಡಾಖ್‌ನಲ್ಲಿ ಪ್ರತಿಭಟನೆಗಳು ತೀವ್ರಗೊಳ್ಳುತ್ತಿವೆ. ಚೀನಾದಿಂದ ಭಾರತದ ಭೂಭಾಗಗಳ ಆಕ್ರಮಣಗಳು ಮತ್ತು ಭಾರತೀಯ ಕಾರ್ಪೊರೇಟ್ ಹಿತಾಸಕ್ತಿಗಳಿಗೆ ಲಡಾಖ್‌ನ ಸಾವಿರಾರು ಎಕರೆ ಪಶುಪಾಲನಾ ಹುಲ್ಲುಗಾವಲು ಭೂಮಿಯನ್ನು  ನೀಡಿರುವುದನ್ನು, ಅಲ್ಲಿನ ಬುಡಕಟ್ಟು ಜನರಿಂದ ಭೂಮಿಯನ್ನು ಕಿತ್ತುಕೊಂಡಿರುವುದನ್ನು ಖಂಡಿಸಿ ವಾಂಗ್‌ಚುಕ್ ಏಪ್ರಿಲ್ 7ರಂದು ಚೀನಾ ಗಡಿಯಲ್ಲಿರುವ ಚಾಂಗ್‌ಥಾಂಗ್ ಪ್ರದೇಶಕ್ಕೆ ಮೆರವಣಿಗೆಯನ್ನು ಘೋಷಿಸಿದ್ದರು. ವಾಂಗ್ಚುಕ್‌ಗೆ ಅಪೆಕ್ಸ್ ಬಾಡಿ, ಲೇಹ್ (ಎಬಿಎಲ್) ಮತ್ತು ಕಾರ್ಗಿಲ್ ಡೆಮಾಕ್ರಟಿಕ್ ಅಲೈಯನ್ಸ್ (ಕೆಡಿಎ) ಸಂಘಟನೆಗಳು ಬೆಂಬಲವನ್ನು ಘೋಷಿಸಿದ್ದವು.

ಲಡಾಖ್ ಆಡಳಿತವು ಕಲಂ 144ರಡಿ ನಿಷೇಧಾಜ್ಞೆಯನ್ನು ಹೇರುವ ಮೂಲಕ ಜಾಥಾಕ್ಕೆ ಅನುಮತಿಯನ್ನು ನಿರಾಕರಿಸಿದ ಮತ್ತು ಪ್ರದೇಶದಲ್ಲಿ ಇಂಟರ್ ನೆಟ್‌ ನಿರ್ಬಂಧಿಸಿದ ಹಿನ್ನೆಲೆಯಲ್ಲಿ ಲಡಾಖ್ ನ ಸಾಮಾಜಿಕ ಕಾರ್ಯಕರ್ತ ಸೋನಂ ವಾಂಗ್ ಚುಕ್ ಅವರು ರವಿವಾರ ನಡೆಸಲು ಉದ್ದೇಶಿಸಿದ್ದ ತನ್ನ ಗಡಿ ಜಾಥಾವನ್ನು ರದ್ದುಗೊಳಿಸಿದ್ದಾರೆ.

ಲಡಾಖ್ ಕೇಂದ್ರಾಡಳಿತ ಪ್ರದೇಶಕ್ಕೆ ರಾಜ್ಯ ಸ್ಥಾನಮಾನ ಮತ್ತು ಸಂವಿಧಾನದ ಆರನೇ ಪರಿಚ್ಛೇದದಲ್ಲಿ ಅದರ ಸೇರ್ಪಡೆಗಾಗಿ ಹೋರಾಡುತ್ತಿರುವ ವಾಂಗ್ಚುಕ್, ಸರಕಾರದ ‘ಅತಿರೇಕದ ಕ್ರಮಗಳು’ ಘರ್ಷಣೆಗಳು ಮತ್ತು ದಂಗೆಗಳಿಗೆ ಕಾರಣವಾಗಬಹುದು. ಈ ಶಾಂತಿಯುತ ಪ್ರತಿಭಟನೆಯನ್ನು ಬುಡಮೇಲುಗೊಳಿಸಲು ಪ್ರಯತ್ನಗಳು ನಡೆಯಬಹುದು ಮತ್ತು ಬಳಿಕ ಹಿಂಸಾಚಾರಕ್ಕಾಗಿ ಪ್ರತಿಭಟನೆಯನ್ನು ದೂಷಿಸಬಹುದು ಹಾಗೂ ಲಡಾಖ್ ನಲ್ಲಿ ಶಾಂತಿಯುತ ಪ್ರತಿಭಟನೆಗಳಿಗೆ ಅವಕಾಶ ನಿರಾಕರಿಸಲು ಅದನ್ನು ನೆಪವಾಗಿಸಿಕೊಳ್ಳಬಹುದು ಎಂದು ಹೇಳಿದ್ದಾರೆ.

ಇದನ್ನು ಓದಿ: ಎನ್‌ಐಎ ಅಧಿಕಾರಿಗಳು ಮಧ್ಯರಾತ್ರಿ ಮನೆಗೆ ನುಗ್ಗಿ ಮಹಿಳೆಯರಿಗೆ ಹಿಂಸಿಸಿದ್ದಾರೆ: ಮಮತಾ ಬ್ಯಾನರ್ಜಿ

 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...