Homeಕರ್ನಾಟಕನಮ್ಮ ಸಚಿವರಿವರು; ಬುದ್ಧ-ಬಸವ-ಅಂಬೇಡ್ಕರ್ "ಮಂತ್ರವಾದಿ" ಸತೀಶ್ ಜಾರಕಿಹೊಳಿ!

ನಮ್ಮ ಸಚಿವರಿವರು; ಬುದ್ಧ-ಬಸವ-ಅಂಬೇಡ್ಕರ್ “ಮಂತ್ರವಾದಿ” ಸತೀಶ್ ಜಾರಕಿಹೊಳಿ!

- Advertisement -
- Advertisement -

ಸಮಾಜಮುಖಿ-ಮೂರ್ತಿ ಭಂಜಕ ನೀತಿ-ನಿಲುವು ಮತ್ತು ನಿರ್ಧಾರಗಳಿಂದ ರಾಜ್ಯ ರಾಜಕಾರಣದ ಪಡಸಾಲೆಯಲ್ಲಿ ಬಹುಚರ್ಚಿತ ರಾಜಕಾರಣಿ ಎನಿಸಿರುವ ಸತೀಶ್ ಜಾರಕಿಹೊಳಿ ಮತ್ತೆ ಮಂತ್ರಿಯಾಗಿದ್ದಾರೆ; ತನಗೆ ಪ್ರಾಪ್ತವಾಗುವ ಸಂಪತ್ತು ಮತ್ತು ಅಧಿಕಾರವನ್ನು ಶೋಷಿತ-ಅಸಹಾಯಕ-ಬಡ ಸಮುದಾಯದ ಮಂದಿ ಸ್ವಾವಲಂಬಿಗಳಾಗಿ ಬದುಕಲು ಸಹಕಾರವಾಗುವಂತೆ ಬಳಸುವ ಅಪರೂಪದ ರಾಜಕಾರಣಿ ಸತೀಶ್ ಜಾರಕಿಹೊಳಿ. ಹರಿತ ವೈಚಾರಿಕ ನಡೆ-ನುಡಿಯಿಂದ ಸತೀಶ್ ಜಾರಕಿಹೊಳಿಯವರ ಹಲವು ನಡೆನುಡಿಗಳು ಸನಾತನ ಲೋಕದಲ್ಲಿ ಅಲ್ಲೋಲಕಲ್ಲೋಲ ಉಂಟುಮಾಡಿದ್ದೂ ಇದೆ! ಪರಿಶಿಷ್ಟ ಪಂಗಡದ ಪ್ರಭಾವಿ ಬೇಡ (ವಾಲ್ಮೀಕಿ) ಜನಾಂಗದ ಸತೀಶ್ ಜಾರಕಿಹೊಳಿ ಬುದ್ಧ-ಬಸವ-ಅಂಬೇಡ್ಕರ್ ತತ್ವ-ಸಿದ್ಧಾಂತ ಜಪಿಸುತ್ತಲೆ ಕರ್ನಾಟಕದ ರಾಜಕೀಯ ರಂಗದ ಮುಂಚೂಣಿಗೆ ಬಂದು ತಲುಪಿರುವುದು ಆಸಕ್ತಿದಾಯಕವಾಗಿದೆ.

ಪಿಯುಸಿವರೆಗೆ ಅಕಾಡೆಮಿಕ್ ಶಿಕ್ಷಣ ಮುಗಿಸಿರುವ ಸತೀಶ್ ಜಾರಕಿಹೊಳಿ ಪ್ರಖರ ವೈಚಾರಿಕತೆ ಮತ್ತು ದೂರದರ್ಶಿತ್ವವುಳ್ಳ ಜನಸಾಮಾನ್ಯರ ನಂಬಿಕಸ್ಥ ನಾಯಕ ಎಂಬುದನ್ನು ವಿರೋಧಿಗಳೂ ಒಪ್ಪಿಕೊಳ್ಳುತ್ತಾರೆ. ಗೋಕಾಕ್‌ನ ಬೇಡ ಸಮುದಾಯದ ತಳಮಟ್ಟದ ಒಕ್ಕಲುತನ ಕುಟುಂಬದ ಲಕ್ಷ್ಮಣರಾವ್ ಜಾರಕಿಹೊಳಿಯ ಎರಡನೆ ಮಗ ಸತೀಶ್. ಸಾಂಪ್ರದಾಯಿಕ ಶಿಕ್ಷಣದ ಗಂಧವಿಲ್ಲದಿದ್ದರೂ ಲಕ್ಷ್ಮಣರಾವ್ ಜಾರಕಿಹೊಳಿ ವ್ಯಾವಹಾರಿಕವಾಗಿ ಚಾಕಚಕ್ಯತೆಯ ಧಾಡಸಿಯಾಗಿದ್ದರು. ಸೇಂಧಿ ಇಳಿಸುವ ಕಸಬು-ಮಾರಾಟ ಮತ್ತು ಸರಕಾರಿ ಸಾರಾಯಿ ಗುತ್ತಿಗೆಯಿಂದ ಅಪಾರ ಹಣ ಗಳಿಸಿದ್ದ ಲಕ್ಷ್ಮಣರಾವ್‌ರ ಐವರು ಮಕ್ಕಳು ಸಕ್ಕರೆ, ಸಿನೆಮಾ ಉದ್ಯಮದಲ್ಲಿ ಆ ಹಣ ತೊಡಗಿಸಿ ಪ್ರವರ್ಧಮಾನಕ್ಕೆ ಬಂದರೆನ್ನಲಾಗುತ್ತಿದೆ; ಕ್ರಮೇಣ ಗೋಕಾವಿಯ ರಾಜಕೀಯ, ಸಾಮಾಜಿಕ, ಆರ್ಥಿಕ ವ್ಯವಹಾರ ನಿಯಂತ್ರಿಸುವ ಮಟ್ಟಕ್ಕೂ ಬಂದರು.

ಲಕ್ಷ್ಮಣರಾವ್ ಜಾರಕಿಹೊಳಿ

ಸಾವಿರಾರು ಕಾರ್ಮಿಕರು ಕೆಲಸ ಮಾಡುವ ಗೋಕಾಕ್‌ನ ನೂಲಿನ ಗಿರಣಿಯ ಕಾರ್ಮಿಕ ಸಂಘಟನೆ ಮೇಲೆ ಹಿಡಿತ ಸಾಧಿಸುವಾತ ಸ್ಥಳೀಯ ಎಮ್ಮೆಲ್ಲೆಯಾಗುತ್ತಾನೆಂಬ ರಾಜಕೀಯ ವಾತಾವರಣ 1990ರ ದಶಕದ ಆಸುಪಾಸಿನಲ್ಲಿತ್ತು. ಆ ಸಂದರ್ಭದಲ್ಲಿ ಶಾಸಕನಾಗಿದ್ದ ಶಂಕರ್ ಕರಿನಿಂಗ್ ತಂಡ ಮತ್ತು ಲಕ್ಷ್ಮಣರಾವ್ ಜಾರಕಿಹೊಳಿ ಮಕ್ಕಳ ಬಳಗದ ಮಧ್ಯೆ ಗೋಕಾವಿ ಮಿಲ್ ಸಾಮ್ರಾಜ್ಯ ವಶಪಡಿಸಿಕೊಳ್ಳುವ ಘನಘೋರ ಯುದ್ಧ ನಡೆಯಿತು. ಭೀಭತ್ಸ ರಕ್ತಪಾತ-ಕೊಲೆಯಾಗಿ ಹೋಯಿತು. ಕಾನೂನು ಓದಲೆಂದು ಧಾರವಾಡ ಸೇರಿಕೊಂಡಿದ್ದ ಸತೀಶ್ ಮೇಲೆ ಕ್ರಿಮಿನಲ್ ಕೇಸು ದಾಖಲಾಯಿತು. ಈ ವ್ಯಾಜ್ಯದಿಂದಾಗಿ ಶಿಕ್ಷಣ ಮೊಟಕುಗೊಳಿಸಿದ ಸತೀಶ್ ಗೋಕಾಕ್‌ನಲ್ಲಿ ಸಕ್ಕರೆ ಕಾರ್ಖಾನೆ ವ್ಯವಹಾರ ಮತ್ತು ರಾಜಕಾರಣದಲ್ಲಿ ತೊಡಗಿಕೊಂಡರು.

ಬೆಳಗಾವಿ ಜಿಲ್ಲೆಯ ವಿವಿಧ ಸಂಘ-ಸಂಸ್ಥೆ, ವಿದ್ಯಾರ್ಥಿ ಸಂಘಟನೆ, ಸಹಕಾರಿ-ಸಕ್ಕರೆ ರಾಜಕಾರಣದಲ್ಲಿ ಸಕ್ರಿಯವಾಗಿದ್ದ ಸತೀಶ್ ಹಿಂದುಳಿದ ವರ್ಗದ ನಾಯಕ ಸಿದ್ದರಾಮಯ್ಯರ ನಿಷ್ಠಾನುಯಾಯಿಯಾಗಿ ಜನತಾ ಪರಿವಾರದ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದರು. ಸಿದ್ದು ಅವರ ಬೆಂಬಲದಿಂದ 1998ರಲ್ಲಿ ವಿಧಾನ ಪರಿಷತ್ ಸದಸ್ಯರಾದ ಸತೀಶ್ ಜಾರಕಿಹೊಳಿ 2004ರಲ್ಲಿ ಮತ್ತೊಂದು ಅವಧಿಗೂ ಚುನಾಯಿತರಾದರು. ಜಿಲ್ಲೆಯ ಸಕ್ಕರೆ ಉದ್ಯಮ ಲಾಬಿಯ ಆಯಕಟ್ಟಿನ ನಾಯಕಾಗ್ರೇಸರಾದ ಸತೀಶ್, ಅಣ್ಣ ರಮೇಶ್ ಮತ್ತು ತಮ್ಮ ಬಾಲಚಂದ್ರ ಜಾರಕಿಹೊಳಿಗೂ ರಾಜಕೀಯ ನೆಲೆಯನ್ನು ಕಲ್ಪಿಸಿದರು ಎಂದು ಜಿಲ್ಲೆಯ ರಾಜಕಾರಣದ ಇತಿಹಾಸ ಬಲ್ಲವರು ಹೇಳುತ್ತಾರೆ. 2008, 2013 ಮತ್ತು 2018ರಲ್ಲಿ ಸತತ ಮೂರು ಬಾರಿ ಯಮಕನಮರಡಿ ಅಸೆಂಬ್ಲಿ ಕ್ಷೇತ್ರದಿಂದ ಶಾಸಕನಾಗಿ ಚುನಾಯಿತರಾದ ಸತೀಶ್ ಮೂರು ಬಾರಿಯೂ ಮೂರು ಸರಕಾರಗಳಲ್ಲಿ ಸಚಿವರಾಗಿದ್ದರು. ಈ ನಡುವೆ ಬುದ್ಧ, ಬಸವ ಮತ್ತು ಅಂಬೇಡ್ಕರ್ ತತ್ವಾದರ್ಶಗಳನ್ನು ಅತಿಯಾಗಿ ಎದೆಗೊತ್ತಿಕೊಂಡಿದ್ದ ಸತೀಶ್ ಪ್ರಗತಿಪರರು ಮತ್ತು ವೈಚಾರಿಕ ಸಂಘಟನೆಗಳ ನಿಕಟಸಂಪರ್ಕ ಸಾಧಿಸಿದ್ದರು.

ಇದನ್ನೂ ಓದಿ: ಮುಸ್ಲಿಂ ಸಮುದಾಯಕ್ಕೆ ಸೇರಿದ ಮೊದಲ ಸ್ಪೀಕರ್ ಯು.ಟಿ. ಖಾದರ್

ಈ ಹೊತ್ತಿಗೆ ಸತೀಶ್ ಜಾರಕಿಹೊಳಿಯವರಿಗೆ ತನ್ನ ಬೇಡ (ನಾಯಕ) ಸಮುದಾಯವೂ ಸೇರಿದಂತೆ ತಳ ಸಮುದಾಯಗಳ ಜನರು ಆರ್ಥಿಕ, ಸಾಮಾಜಿಕವಾಗಿ ಹಿಂದುಳಿಯಲು ಮೂಢನಂಬಿಕೆ ಮತ್ತು ಗೊಡ್ಡು ಸನಾತನ ಸಂಪ್ರದಾಯ ಪಾಲನೆಯೇ ಪ್ರಮುಖ ಕಾರಣವೆಂಬುದು ಮನದಟ್ಟಾಗಿತ್ತು. ಅಹಿಂದ ವರ್ಗವನ್ನು ಮೌಢ್ಯದಿಂದ ಹೊರತರುವ ವಿಸ್ತೃತ ಕಾರ್ಯಯೋಜನೆಯನ್ನು ಹಮ್ಮಿಕೊಂಡರು; ಬುದ್ಧ, ಬಸವ, ಅಂಬೇಡ್ಕರ್ ಸಿದ್ಧಾಂತ ಪ್ರಸಾರ ಮಾಡುವ ಟೀಮುಗಳನ್ನು ತಯಾರು ಮಾಡಿಸಿದರು. ವಿವಿಧ ಸಂಘಟನೆಗಳಿಗೆ ಉಚಿತ ವಸತಿ, ಊಟೋಪಚಾರ ಒದಗಿಸಿ ಪ್ರಗತಿಪರ ಚಿಂತನೆಯ ವಿಚಾರಸಂಕಿರಣ ನಡೆಸಿದರು; ತರಬೇತಿ ಕೊಡಿಸಿದರು. ನಿರುದ್ಯೋಗಿ ಯುವಕರಿಗೆ ಬದುಕಲು ಬೇಕಾದ ಜೀವನ ಕಸುಬಿನ ಕೌಶಲ್ಯ ತರಬೇತಿಗೆ ವ್ಯವಸ್ಥೆ ಮಾಡಿದರು. ದೇವರ ಭಯದಲ್ಲಿ ಅಸಹಾಯಕ ಮಂದಿ ದಿಕ್ಕೆಡುವುದನ್ನು ತಪ್ಪಿಸುವ ಪ್ರಯತ್ನ ಮಾಡಿದರು. ಪೊಲೀಸ್, ಸೈನಿಕ, ಐಎಎಸ್, ಕೆಎಎಸ್ ಮುಂತಾದ ಸರಕಾರಿ ನೌಕರಿ ಪಡೆಯಲು ಬೇಕಾದ ಆರೆಂಟು ಕೋಚಿಂಗ್ ಸೆಂಟರ್ ತೆರೆದರು.

ವಿಚಾರವಾದಿ ರಾಜಕಾರಣಿ ಎಂದು ಪರಿಚಿತರಾಗಿರವ ಸತೀಶ್ ಜಾರಕಿಹೊಳಿ ನೇತೃತ್ವದಲ್ಲಿ ರಚಿತವಾಗಿರುವ “ಮಾನವ ಬಂಧುತ್ವ ವೇದಿಕೆ” ಬೆಳಗಾವಿ ಜಿಲ್ಲೆಯ ಗಡಿ ದಾಟಿ ಇತರ ಕೆಲವು ಜಿಲ್ಲೆಗಳಲ್ಲೂ ನೆಲೆಕಂಡಿದೆ. ಬಂಧುತ್ವ ಬೆಳೆಸುವ ಈ ವೇದಿಕೆಯ ಮೂಢನಂಬಿಕೆ ವಿರೋಧಿ ಅಭಿಯಾನ, ಸಹಿಷ್ಣುತೆ, ಸೌಹಾರ್ದತೆ, ಸಹಬಾಳ್ವೆ ಕುದುರಿಸುವ ಕಾರ್ಯಕ್ರಮಗಳಿಗೆ ಜನರು ಆಕರ್ಷಿತರಾಗುತ್ತಿದ್ದಾರೆ. ಒಂದೆಡೆ ಮಾನವ ಬಂಧುತ್ವ ವೇದಿಕೆ ಅಸಮಾನತೆ, ಮೌಢ್ಯ, ಧರ್ಮ ದ್ವೇಷ, ದೇವರ ಭಯದ ಶೋಷಣೆಗಳ ಬಗ್ಗೆ ಜಾಗೃತಿ ಮೂಡಿಸುತ್ತಿದ್ದರೆ, ಸತೀಶ್ ಜಾರಕಿಹೊಳಿ ಖುದ್ದು ಸಾರ್ವಜನಿಕವಾಗಿ ಕಂದಾಚಾರಗಳನ್ನು ಧಿಕ್ಕರಿಸಿ ಮಾದರಿ ಆಗುತ್ತಿದ್ದಾರೆ. ವೈದಿಕ ಪಂಚಾಂಗ ಮತ್ತು ಜ್ಯೋತಿಷ್ಯ ಶಾಸ್ತ್ರದಲ್ಲಿ ಅನಿಷ್ಟ-ಅಶುಭವೆಂದು ಪರಿಗಣಿತವಾದ “ರಾಹುಕಾಲ”ದಲ್ಲಿಯೇ ತಮ್ಮ ಪ್ರಮುಖ ಮತ್ತು ಸವಾಲಿನ ಕೆಲಸ-ಕಾರ್ಯಕ್ಕೆ ಕೈಹಾಕುವ ಸತೀಶ್ ಜಾರಕಿಹೊಳಿ, ತನ್ನ ಮಗ ಮತ್ತು ಮಗಳನ್ನು ಕಟ್ಟಿಕೊಂಡು ಜತೆಗಾರರೊಂದಿಗೆ ಸ್ಮಶಾನದಲ್ಲಿ ರಾತ್ರಿ ವಾಸ್ತವ್ಯ ಮಾಡುವ ಕ್ರಾಂತಿಕಾರಕ ನಡೆಗೂ ಹೆಸರಾಗಿದ್ದಾರೆ.

2018ರ ಚುನಾವಣೆ ಹೊತ್ತಲ್ಲಿ ಸತೀಶ್ ಜಾರಕಿಹೊಳಿ ರಾಹುಕಾಲದಲ್ಲೇ ನಾಮಪತ್ರ ಸಲ್ಲಿಸಿ ಸ್ಮಶಾನದಿಂದ ಪ್ರಚಾರ ಶುರುಮಾಡಿದ್ದರು. ಅಷ್ಟೇ ಅಲ್ಲ ಕ್ಯಾಂಡಿಡೇಟ್ ಕ್ಷೇತ್ರದಲ್ಲಿ ಇಲ್ಲದಿದ್ದರೂ ಗೆಲ್ಲಬಹುದು ಎಂದು ತೋರಿಸುವ ಪ್ರಯತ್ನ ಮಾಡಿದ್ದರು. ಸತೀಶ್ ನಾಮಪತ್ರ ಸಲ್ಲಿಸಿದ ಮರುಕ್ಷಣವೆ ಸಿದ್ದರಾಮಯ್ಯನವರು ಸ್ಪರ್ಧಿಸಿದ್ದ ಬಾದಾಮಿಗೆ ಹೋಗಿ ಉಳಿದಿದ್ದರು; ಮತದಾನದ ದಿನ ಬಂದಿದ್ದ ಸತೀಶ್ ಆ ಚುನಾವಣೆಯಲ್ಲಿ 2,850 ಮತಗಳ ಕೂದಲೆಳೆ ಅಂತರದಲ್ಲಿ ಆಯ್ಕೆಯಾಗಿದ್ದರು. ಇದು ರಾಹುಕಾಲದ ಮಹಿಮೆ ಎಂದು ಸಂಪ್ರದಾಯವಾದಿ ಕರ್ಮಠರು ಜಾಗಟೆ ಬಾರಿಸಿದ್ದರೂ ಕೂಡ, ತಾನು ಕ್ಷೇತ್ರದಲ್ಲಿ ಇಲ್ಲದಿದ್ದರಿಂದ ಗೆಲುವಿನ ಅಂತರ ಕಡಿಮೆಯಾಗಿದೆ; ಮುಂದಿನ ಚುನಾವಣೆಯಲ್ಲಿ 50 ಸಾವಿರಕ್ಕಿಂತ ಹೆಚ್ಚು ಲೀಡ್‌ನಲ್ಲಿ ಗೆದ್ದುತೋರಿಸುತ್ತೇನೆ ಎಂದಿದ್ದರು.

ಕಳೆದ ವಾರ ಪ್ರಕಟವಾದ ಚುನಾವಣೆಯ ಫಲಿತಾಂಶದಲ್ಲಿ ಸತೀಶ್ ಜಾರಕಿಹೊಳಿ ತಮ್ಮ ಸಮೀಪದ ಬಿಜೆಪಿ ಪ್ರತಿಸ್ಪರ್ಧಿಯನ್ನು 57,211 ಮತದಿಂದ ಮಣಿಸಿ ಮೂಢನಂಬಿಕೆ “ಮಾಟಗಾರರ” ಬಂಡವಾಳ ಬಯಲುಗೊಳಿಸಿದ್ದಾರೆ ಎಂಬ ಅಭಿಪ್ರಾಯ ಕೇಳಿಬರುತ್ತಿದೆ. ಈ ಸಲವೂ ಸತೀಶ್ ಚುನಾವಣಾ ನಾಮಪತ್ರವನ್ನು ರಾಹುಕಾಲದಲ್ಲಿಯೇ ಸಲ್ಲಿಸಿದ್ದರಷ್ಟೇ ಅಲ್ಲ, ಸ್ಮಶಾನದಿಂದಲೇ ಮತಯಾಚನೆಯ “ಶುಭ”ಕಾರ್ಯ ಆರಂಭಿಸಿದ್ದರು! ಕೆಲವು ತಿಂಗಳ ಹಿಂದೆ ನಿಪ್ಪಾಣಿಯಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಸತೀಶ್ ಜಾರಕಿಹೊಳಿ “ಹಿಂದು” ಎಂಬ ಪದ ಪರ್ಶಿಯನ್ ಮೂಲದ್ದು; ಅದಕ್ಕೆ ಅಲ್ಲಿ ಅಶ್ಲೀಲ ಎಂಬರ್ಥವಿದೆ ಎಂದು ಹೇಳಿದ್ದು ಹಿಂದುತ್ವವಾದಿಗಳ ಕಣ್ಣು ಕೆಂಪಾಗಿಸಿತ್ತು. ಸಂಘ ಪರಿವಾರ ಸತೀಶ್‌ರನ್ನು ಸೋಲಿಸಲು ಸ್ಕೆಚ್ ಹಾಕಿತ್ತು. ಆದರೆ ಪ್ರವಾಹದ ವಿರುದ್ಧ ಈಜುವ ಕಲೆ ಕರಗತ ಮಾಡಿಕೊಂಡಿರುವ ಸತೀಶ್ ಭರ್ಜರಿ ಅಂತರದಲ್ಲಿಯೇ ಗೆದ್ದಿದ್ದಾರೆ.

ಸೈದ್ಧಾಂತಿಕ ಬದ್ಧತೆಯ ರಾಜಕಾರಣ ಮಾಡುತ್ತಿರುವ ಸತೀಶ್ 2013ರಲ್ಲಿ, ತಮ್ಮ “ಗುರು” ಸಿದ್ದು ಅಬಕಾರಿ ಖಾತೆ ವಹಿಸಿದಾಗ-ಇದು ತನಗೆ ಹೊಂದಿಕೆಯಾಗದ ಇಲಾಖೆ; ಜನರಿಗೆ ಸಾರಾಯಿ ಕುಡಿಸುವ ಕೆಲಸ ಮಾಡಲಾರೆ; ಬೇರೆ ಖಾತೆ ಕೊಡಿ ಎಂದು ತಗಾದೆ ತೆಗೆದು ಸಣ್ಣ ಕೈಗಾರಿಕಾ ಖಾತೆ ಪಡೆದುಕೊಂಡಿದ್ದರು. ಈಗ ಸತೀಶ್ ಯಾವ ಖಾತೆ ಪಡೆಯುತ್ತಾರೆ, ಸಿಕ್ಕ ಖಾತೆಯನ್ನು ಅಹಿಂದ ಹಿತಕ್ಕೆ ಹೇಗೆ ಬಳಸುತ್ತಾರೆಂಬ ಕುತೂಹಲ ಅವರು ಪ್ರತಿನಿಧಿಸುವ ಯಮಕನಮರಡಿ, ಬೆಳಗಾವಿ ಜಿಲ್ಲೆಗಳಲ್ಲಷ್ಟೇ ಅಲ್ಲ, ಇಡೀ ರಾಜ್ಯದಲ್ಲಿ ಮೂಡಿದೆ. ರಾಜಕೀಯ ಸ್ಥಾನಮಾನಕ್ಕಾಗಿ ಹೋರಾಡುವ “ಸಮನ್ವಯ” ಸಿದ್ಧಾಂತಿಗಳ ಹಾವಳಿಯ ಈ ಕಾಲಘಟ್ಟದಲ್ಲಿ ಪ್ರಖರ ವೈಚಾರಿಕತೆಯ ಸತೀಶ್ ಜಾರಕಿಹೊಳಿ ಶೋಷಿತ ಸಮದಾಯದ ಗಟ್ಟಿ ಧ್ವನಿಯ ಅಪರೂಪದ ರಾಜಕೀಯ ನಾಯಕನಾಗಿ ಕಾಣಿಸುತ್ತಿದ್ದಾರೆ.

ಇದನ್ನೂ ಓದಿ: ಬಿಕ್ಕಟ್ಟಿನಲ್ಲೂ ಸೆಕ್ಯುಲರ್ ಮೌಲ್ಯಗಳನ್ನು ಬಿಡದ ಎತ್ತರದ ನಾಯಕ ಸಿದ್ದರಾಮಯ್ಯ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಅಯ್ಯೋಧ್ಯೆ ರಾಮ ಮಂದಿರ ಹಗರಣ: ಎಂಟು ಜನರ ವಿರುದ್ಧ ಎಫ್‌ಐಆರ್; ಪ್ರಭಾವಿ ವ್ಯಕ್ತಿಗಳನ್ನು ರಕ್ಷಿಸಲಾಗಿದೆ ಎಂದು ಪ್ರತಿಪಕ್ಷಗಳ ಆರೋಪ 

ಅಯೋಧ್ಯೆ: ವಿಶ್ವದಾದ್ಯಂತ ಕೋಟ್ಯಂತರ ಭಕ್ತರ ಆರಾಧ್ಯ ದೈವವಾಗಿರುವ ಅಯೋಧ್ಯೆಯ ಶ್ರೀ ರಾಮ ಮಂದಿರದಲ್ಲಿ ಭಕ್ತರು ಸಮರ್ಪಿಸಿದ ನಗದು, ಚಿನ್ನಾಭರಣ ಸೇರಿದಂತೆ ಇತರೆ ಬೆಲೆಬಾಳುವ ಕಾಣಿಕೆಗಳ ಕಳ್ಳತನ ಮತ್ತು ಹಣ ದುರುಪಯೋಗದ ಗಂಭೀರ ಹಗರಣವೊಂದು...

ಪೋಕ್ಸೋ ಕೇಸ್ : ವಚನಾನಂದ ಸ್ವಾಮಿಯ ನಿರೀಕ್ಷಣಾ ಜಾಮೀನು ರದ್ದು

ಪೋಕ್ಸೋ ಪ್ರಕರಣದಲ್ಲಿ ವಚನಾನಂದ ಸ್ವಾಮಿಗೆ ಸೆಷನ್ಸ್ ಕೋರ್ಟ್ ನೀಡಿದ್ದ ನಿರೀಕ್ಷಣಾ ಜಾಮೀನನ್ನು ಹೈಕೋರ್ಟ್ ಗುರುವಾರ (ಜೂನ್ 25) ರದ್ದುಗೊಳಿಸಿದೆ. ಅಲ್ಲದೆ, ಸೆಷನ್ಸ್ ಕೋರ್ಟ್ ಜಾಮೀನು ನೀಡಿದ ರೀತಿಯ ಬಗ್ಗೆ ತೀವ್ರ ಕಳವಳ ಮತ್ತು...

ಎಸ್‌ಐಆರ್‌ಗೂ ಸರ್ಕಾರಿ ಸೌಲಭ್ಯಕ್ಕೂ ಲಿಂಕ್; ಅರ್ಜಿ ವಿಚಾರಣೆಗೆ ಸುಪ್ರೀಂ ನಕಾರ : ನಿಜವಾದ ಆತಂಕ

ಬಿಜೆಪಿ ನೇತೃತ್ವದ ಪಶ್ಚಿಮ ಬಂಗಾಳದ ಹೊಸ ಸರ್ಕಾರ ನೀಡಿರುವ ಆದೇಶಗಳ ವಿರುದ್ಧ ಸಲ್ಲಿಕೆಯಾಗಿದ್ದ ಅರ್ಜಿಯೊಂದರ ತುರ್ತು ವಿಚಾರಣೆಗೆ ಸುಪ್ರೀಂ ಕೋರ್ಟ್ 23 ಜೂನ್ 2026ರಂದು ನಿರಾಕರಿಸಿದೆ. ವಿಧಾನಸಭೆ ಚುನಾವಣೆಗೆ ಮುನ್ನ ನಡೆದ ವಿಶೇಷ...

ಒಂಬತ್ತನೇ ತರಗತಿ ಪಠ್ಯಪುಸ್ತಕದಲ್ಲಿ ತುರ್ತು ಪರಿಸ್ಥಿತಿ ಅಧ್ಯಾಯ ಸೇರಿಸಿದ ಎನ್‌ಸಿಇಆರ್‌ಟಿ

ಭಾರತದಲ್ಲಿ ತುರ್ತು ಪರಿಸ್ಥಿತಿ ಘೋಷಿಸಲ್ಪಟ್ಟ ಸುಮಾರು ಐದು ದಶಕಗಳ ನಂತರ, ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಈ ವಿಷಯವನ್ನು 9 ನೇ ತರಗತಿಯ ಸಮಾಜ ವಿಜ್ಞಾನ ಪಠ್ಯಪುಸ್ತಕದಲ್ಲಿ ಮೊದಲ...

‘ಆರ್‌ಎಸ್‌ಎಸ್ ಗಲಿಬಿಲಿಗೊಂಡರೆ ಬಿಜೆಪಿ ಬುಸುಗುಡುತ್ತದೆ’: ಗೃಹ ಸಚಿವ ಪ್ರಿಯಾಂಕ್ ಖರ್ಗೆ ವಾಗ್ದಾಳಿ

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ (RSS) ಹಾಗೂ ಆಡಳಿತಾರೂಢ ಬಿಜೆಪಿ ವಿರುದ್ಧ ಕರ್ನಾಟಕದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಮತ್ತೊಮ್ಮೆ ತೀವ್ರ ಸ್ವರೂಪದ ಸೈದ್ಧಾಂತಿಕ ದಾಳಿ ನಡೆಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸರಣಿ ಪ್ರಶ್ನೆಗಳನ್ನು...

ಹೊಸ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಜಾರಿಯ ಜೊತೆಯಲ್ಲೆ ಸುಪ್ರೀಂ ಕೋರ್ಟ್‌ಗೆ ಹೋಗಲು ಕರ್ನಾಟಕ ಸಜ್ಜು

ಕೇಂದ್ರ ಸರ್ಕಾರದ ಹೊಸ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ‘ವಿಕಸಿತ ಭಾರತ-ಗ್ಯಾರಂಟಿ ಫಾರ್ ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ)’ (VB-G RAM G) ಕಾಯ್ದೆಯ ಹಲವು ನಿಯಮಗಳಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರೂ...

ಉತ್ತರ ಪ್ರದೇಶ: ಮದುವೆ ರಿಸೆಪ್ಷನ್‌ನಲ್ಲಿ ಗೋಮಾಂಸ ಬಡಿಸಿದ ಆರೋಪ; ವರನ ತಂದೆ ಸೇರಿ ಏಳು ಮಂದಿ ಬಂಧನ, ಮಂಟಪ ಸೀಲ್

ಶಾಮ್ಲಿ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯ ಕೈರಾನಾ ಪಟ್ಟಣದಲ್ಲಿ ನಡೆದ ಮದುವೆ ಆರತಕ್ಷತೆ (ವಲೀಮಾ) ಸಮಾರಂಭವೊಂದು ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ. ಸಮಾರಂಭದಲ್ಲಿ ಅತಿಥಿಗಳಿಗೆ ಗೋಮಾಂಸವನ್ನು ಬೇಯಿಸಿ ಬಡಿಸಲಾಗಿದೆ ಎಂಬ...

ರಾಮ ಮಂದಿರ ದೇಣಿಗೆ ವಿವಾದ: ಎಫ್‌ಐಆರ್ ದಾಖಲಿಸಿ ತ್ವರಿತ ನ್ಯಾಯಾಲಯದ ವಿಚಾರಣೆಗೆ ವಿಶ್ವ ಹಿಂದೂ ಪರಿಷತ್ ಆಗ್ರಹ

ರಾಮ ದೇಣಿಗೆ ವಿವಾದ ದುರುಪಯೋಗ ಕುರಿತು ಎಸ್‌ಐಟಿ ತನ್ನ ಪ್ರಾಥಮಿಕ ವರದಿಯನ್ನು ಸಲ್ಲಿಸಿದ ಕೂಡಲೇ, ಬಲಪಂಥೀಯ ಹಿಂದುತ್ವ ಸಂಘಟನೆ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಪ್ರಕರಣದಲ್ಲಿ ಎಫ್‌ಐಆರ್ ದಾಖಲಿಸಬೇಕೆಂದು ಒತ್ತಾಯಿಸಿದೆ. ವಿಎಚ್‌ಪಿ ಅಂತರರಾಷ್ಟ್ರೀಯ...

ಪಾಸ್‌ಪೋರ್ಟ್ ಪೌರತ್ವದ ದಾಖಲೆಯಲ್ಲ: ವಿದೇಶಾಂಗ ಸಚಿವಾಲಯ

ಪಾಸ್‌ಪೋರ್ಟ್ ಒಂದು ಪ್ರಯಾಣದ ದಾಖಲೆಯಾಗಿದೆಯೇ ಹೊರತು, ಪೌರತ್ವದ ದಾಖಲೆಯಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ (ಎಂಇಎ) ಅಧಿಕಾರಿಗಳು ಬುಧವಾರ (ಜೂನ್ 24) ತಿಳಿಸಿದ್ದಾರೆ. ಈ ಮೂಲಕ ಅವರು ಭಾರತೀಯ ಪೌರತ್ವವನ್ನು ಖಚಿತವಾಗಿ ಸಾಬೀತುಪಡಿಸುವ...

90 ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ, ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಹಾಳಾಗಿದೆ ಆದರೆ ಪ್ರಧಾನ್ ತಮ್ಮ ಕುರ್ಚಿಗೆ ಅಂಟಿಕೊಂಡಿದ್ದಾರೆ: ಮಲ್ಲಿಕಾರ್ಜುನ ಖರ್ಗೆ

ನವದೆಹಲಿ: ದೇಶಾದ್ಯಂತ ಭಾರಿ ಸಂಚಲನ ಮೂಡಿಸಿರುವ 'ನೀಟ್' (NEET-UG) ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ತಮ್ಮ ಆಕ್ರೋಶವನ್ನು ಮತ್ತಷ್ಟು ತೀವ್ರಗೊಳಿಸಿವೆ. ಪರೀಕ್ಷಾ ಅಕ್ರಮಗಳನ್ನು ವಿರೋಧಿಸಿ...