Homeಮುಖಪುಟಹಸಿವನ್ನು 'ಯುದ್ಧ ಅಸ್ತ್ರ'ವನ್ನಾಗಿಸಿದ ಇಸ್ರೇಲ್‌: ಗಾಝಾದಲ್ಲಿ ಪರಿಸ್ಥಿತಿ 'ನರಕಸದೃಶ'

ಹಸಿವನ್ನು ‘ಯುದ್ಧ ಅಸ್ತ್ರ’ವನ್ನಾಗಿಸಿದ ಇಸ್ರೇಲ್‌: ಗಾಝಾದಲ್ಲಿ ಪರಿಸ್ಥಿತಿ ‘ನರಕಸದೃಶ’

- Advertisement -
- Advertisement -

ಇಸ್ರೇಲ್‌ ಸರ್ಕಾರವು  ಗಾಝಾ ಪಟ್ಟಿಯಲ್ಲಿ ನಾಗರಿಕರನ್ನು ಹಸಿವಿನಿಂದ ಸಾಯುವಂತೆ ಪ್ರೇರೇಪಿಸುತ್ತಿದ್ದು, ಹಸಿವನ್ನು ಯುದ್ಧದ ಅಸ್ತ್ರವಾಗಿ ಬಳಸುತ್ತಿದೆ. ಇಸ್ರೇಲ್‌ ಪಡೆಗಳು ಗಾಝಾದ ಜನರಿಗೆ ಉದ್ದೇಶಪೂರ್ವಕವಾಗಿ ನೀರು, ಆಹಾರ ಮತ್ತು ಇಂಧನದ ವಿತರಣೆಯ ಮೇಲೆ ನಿರ್ಬಂಧ ವಿಧಿಸುತ್ತಿದೆ, ಮಾನವೀಯ ಸಹಾಯಕ್ಕೆ ಅಡ್ಡಿಪಡಿಸುತ್ತಿದೆ. ಕೃಷಿ ಪ್ರದೇಶಗಳನ್ನು ನೆಲಸಮ ಮಾಡುತ್ತಿದೆ, ನೀರಿನ ಮೂಲಗಳನ್ನು ಕಲುಷಿತಗೊಳಿಸುತ್ತಿದೆ ಮತ್ತು ನಾಗರಿಕರ ಉಳಿವಿಗೆ ಅನಿವಾರ್ಯವಾದ ಎಲ್ಲಾ ವಸ್ತುಗಳನ್ನು ಕಸಿದುಕೊಳ್ಳಲಾಗುತ್ತಿದೆ. ಉದ್ದೇಶಪೂರ್ವಕವಾಗಿರುವ ಈ ಕೃತ್ಯವು ಯುದ್ಧ ಅಪರಾಧವಾಗಿದೆ.

ಚೆಕ್‌ಪೋಸ್ಟ್‌ಗಳಲ್ಲಿ ಅಡ್ಡಿ ಹಿನ್ನೆಲೆ ಆಹಾರಗಳ ‘ಗಂಭೀರ ಕೊರತೆಯಿದ್ದರೂ’ ಖಾನ್ ಯೂನಿಸ್‌ನಲ್ಲಿರುವ ನಾಸರ್ ಆಸ್ಪತ್ರೆಗೆ ಆಹಾರವನ್ನು ತಲುಪಿಸಲು ಸಾಧ್ಯವಾಗಲಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಉತ್ತರ ಗಾಝಾಕ್ಕೆ ಆಹಾರ ನೆರವು ತಲುಪಿದಾಗ ಜನ ಸಂದಣಿ ಕೂಡಿತ್ತು. ಈ ಆಹಾರಕ್ಕಾಗಿ ನಡೆದ ನೂಕಾಟ-ತಳ್ಳಾಟದಲ್ಲಿ ಇಬ್ಬರು ಉಸಿರುಗಟ್ಟಿ ಸಾಯುವುದನ್ನು ನಾನು ನೋಡಿದೆ ಎಂದು ಪರಿಹಾರ ಸಾಮಾಗ್ರಿಯನ್ನು ರಾವನಿಸುತ್ತಿದ್ದ ಕಾರ್ಯಕರ್ತೆಯೋರ್ವರು ಹೇಳಿದ್ದಾರೆ.

ಅಕ್ಟೋಬರ್ 7, 2023ರಂದು ಹಮಾಸ್ ಇಸ್ರೇಲ್ ಮೇಲೆ ದಾಳಿ ಮಾಡಿದ ನಂತರ ಇಸ್ರೇಲ್‌ ಅಧಿಕಾರಿಗಳು ಗಾಝಾದಲ್ಲಿ ಆಹಾರ, ನೀರು ಮತ್ತು ಇಂಧನವನ್ನು ತಡೆದಿದ್ದಾರೆ. ಯುಎನ್‌ನ ಮಾನವೀಯ ವ್ಯವಹಾರಗಳ ಸೆಕ್ರೆಟರಿ ಜನರಲ್ ಮಾರ್ಟಿನ್ ಗ್ರಿಫಿತ್ಸ್, ಪ್ಯಾಲೇಸ್ತೀನ್‌ಗೆ ನೆರವನ್ನು ನಿಲ್ಲಿಸಿರುವುದನ್ನು ಗಾಝಾ ಪಟ್ಟಿಯಲ್ಲಿರುವ ಸಹಾಯ ವ್ಯವಸ್ಥೆಯ ಪತನಕ್ಕೆ ಕಾರಣವಾಗುತ್ತದೆ. ಪಾಶ್ಚಿಮಾತ್ಯ ದೇಶಗಳು ಘೋಷಿಸಿರುವ ನೆರವನ್ನು  ಯುಎನ್‌ಆರ್‌ಡಬ್ಲ್ಯೂಎಯಿಂದ ಹಿಂತೆಗೆದುಕೊಳ್ಳವ ನಿರ್ಧಾರವು ಅಪಾಯಕಾರಿ ಮತ್ತು ಇದು ದೂರಗಾಮಿ ಪರಿಣಾಮಗಳನ್ನು ಉಂಟುಮಾಡುತ್ತದೆ. ಜಗತ್ತು ಗಾಝಾದ ಜನರನ್ನು ತಿರಸ್ಕರಿಸಲು ಸಾಧ್ಯವಿಲ್ಲ ಎಂದು ಗ್ರಿಫಿತ್ಸ್ ಮಂಗಳವಾರ ಇತರ ಮಾನವೀಯ ಸಂಘಟನೆಯ ನಾಯಕರೊಂದಿಗೆ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಇದಲ್ಲದೆ ಇಸ್ರೇಲ್‌ ಪಡೆಗಳು ಆಕ್ರಮಿತ ವೆಸ್ಟ್‌ ಬ್ಯಾಂಕ್‌ನಲ್ಲಿ ಪ್ಯಾಲೆಸ್ತೀನಿಯನ್ನರ ಕಾನೂನುಬಾಹಿರ ಹತ್ಯೆಯನ್ನು ತಕ್ಷಣವೇ ಕೊನೆಗೊಳಿಸಬೇಕು ಎಂದು UN ಮಾನವ ಹಕ್ಕುಗಳ ಕಚೇರಿ ಹೇಳಿದೆ.

UNRWAಗಾಗಿ ನೆರವಿನ ನಿಧಿಯನ್ನು ನಿಲ್ಲಿಸುವ ವಿವಿಧ ಸದಸ್ಯ ರಾಷ್ಟ್ರಗಳ ನಿರ್ಧಾರಗಳು ಗಾಝಾದ 2.2 ಮಿಲಿಯನ್ ಜನರಿಗೆ ದುರಂತ ಪರಿಣಾಮಗಳನ್ನು ಉಂಟುಮಾಡುತ್ತವೆ. ಈ ನಿರ್ಧಾರಗಳನ್ನು ಮರುಪರಿಶೀಲಿಸುವಂತೆ ನಾವು ಮನವಿ ಮಾಡುತ್ತೇವೆ ಎಂದು ಹೇಳಿದ್ದಾರೆ. ಸುಮಾರು ಹನ್ನೆರಡು ಪಾಶ್ಚಿಮಾತ್ಯ ದೇಶಗಳು UNRWAಗೆ ಧನಸಹಾಯವನ್ನು ಸ್ಥಗಿತಗೊಳಿಸಿವೆ. 12 ಮಾಜಿ ಸಿಬ್ಬಂದಿಗಳು ಅಕ್ಟೋಬರ್ 7ರಂದು ಇಸ್ರೇಲ್ ಮೇಲಿನ ದಾಳಿಯಲ್ಲಿ ಭಾಗವಹಿಸಿದ್ದಾರೆ ಎಂಬ ಆರೋಪವನ್ನು ಮಾಡಲಾಗಿದೆ.

ಗಾಝಾದ ದಕ್ಷಿಣಕ್ಕೆ ಇಸ್ರೇಲ್‌ ಯುದ್ಧ ಘೋಷಣೆ ಬಳಿಕ ಲಕ್ಷಾಂತರ ಮಂದಿ ವಲಸೆ ಹೋಗಿದ್ದಾರೆ. ಇದರಿಂದ ಗಾಝಾದ ದಕ್ಷಿಣದಲ್ಲಿ ನಿರಾಶ್ರಿತರ ಕೇಂದ್ರಗಳಲ್ಲಿ ಲಕ್ಷಾಂತರ ಮಂದಿ ನೆಲೆಸಿದ್ದಾರೆ. ಈ ಭಾಗದಲ್ಲಿ ಹಸಿದ ಮತ್ತು ಹತಾಶೆಯ ಜನರು ಈಜಿಪ್ಟ್‌ನ ಗಡಿಯ ಸಮೀಪವಿರುವ ರಫಾ ಪ್ರದೇಶದಲ್ಲಿ ಆಹಾರ ಮತ್ತು ಇತರ ಸರಬರಾಜುಗಳನ್ನು ಸಾಗಿಸುವ ಟ್ರಕ್‌ಗಳನ್ನು ತಡೆಯುವುದು. ಆಹಾರ ಪೊಟ್ಟಣಗಳನ್ನು ಕಸಿದುಕೊಳ್ಳುತ್ತಿರುವುದು ಕಂಡು ಬಂದಿತ್ತು. ರಫಾ ಕ್ರಾಸಿಂಗ್‌ನಲ್ಲಿ ಜನರು ನೆರವು ಸಾಗಾಟ ಮಾಡುವ ಟ್ರಕ್‌ಗಳನ್ನು ಸುತ್ತುವರಿಯುತ್ತಾರೆ, ಕೆಲವರು ಟ್ರಕ್‌ಗಳ ಮೇಲೆ ಹಾರುತ್ತಾರೆ. ನೀರಿನ ಬಾಟಲಿಗಳನ್ನು, ಆಹಾರದ ಪೊಟ್ಟಣಗಳನ್ನು ಕಸಿದುಕೊಳ್ಳುತ್ತಿದ್ದಾರೆ. ಕೆಲವು ಟ್ರಕ್‌ಗಳನ್ನು ಮುಸುಕುಧಾರಿಗಳು ಕಾವಲು ಕಾಯುತ್ತಿರುವುದು ಕೂಡ ಕಂಡು ಬಂದಿತ್ತು.ಇದು ಕೇವಲ ರಫಾ ನಗರದ ಸ್ಥಿತಿ ಮಾತ್ರವಲ್ಲ. ಗಾಝಾದಲ್ಲಿನ ಮಾನವೀಯ ಪರಿಸ್ಥಿತಿಯು ತುಂಬಾ ಕೆಟ್ಟದಾಗಿದೆ.

ಪ್ಯಾಲೆಸ್ತೀನ್‌ಗೆ ಹರಿದು ಬರುತ್ತಿರುವ ನೆರವು ಸಾಕಾಗುತ್ತಿಲ್ಲ. ಜನರು ಮನೆಯಿಲ್ಲದೆ, ಆಹಾರವಿಲ್ಲದೆ, ನೀರಿಲ್ಲದೆ ಮತ್ತು ವೈದ್ಯಕೀಯ ಸಾಮಗ್ರಿಗಳಿಲ್ಲದೆ ಪರದಾಡುತ್ತಿದ್ದಾರೆ. ವಿಶ್ವಸಂಸ್ಥೆಯು ಇತ್ತೀಚೆಗೆ ಗಾಝಾದಲ್ಲಿರುವ ಜನರು ಆಹಾರಕ್ಕಾಗಿ ಹತಾಶರಾಗಿದ್ದಾರೆ, ಅವರು ನೆರವು ಟ್ರಕ್‌ಗಳನ್ನು ತಡೆದು ಸಿಕ್ಕಿದ್ದನ್ನು ಕಸಿದುಕೊಂಡು ತಿನ್ನುವ ಸ್ಥಿತಿಯಲ್ಲಿದ್ದಾರೆ. ಇತ್ತೀಚೆಗೆ ಗಾಝಾ ಪಟ್ಟಿಗೆ ಭೇಟಿ ನೀಡಿದ್ದ ಯುಎನ್‌ಆರ್‌ಡಬ್ಲ್ಯೂಎ ಮುಖ್ಯಸ್ಥ ಫಿಲಿಪ್ ಲಜ್ಜರಿನಿ ಮಾತನಾಡುತ್ತಾ, ಗಾಝಾ ನಿವಾಸಿಗಳು ಸುದೀರ್ಘ ವರ್ಷಗಳಿಂದ ಇಸ್ರೇಲ್‌ನ ದಾಳಿಗೆ ಒಳಗಾಗಿದ್ದರೂ ಈ ರೀತಿಯ ಹಸಿವನ್ನು ಎಂದು ಅನುಭವಿಸಿರಲಿಕ್ಕಿಲ್ಲ. ರಾಫಾದಲ್ಲಿನ ಜನರು ಸಂಪೂರ್ಣ ಹತಾಶೆಯಿಂದ ಟ್ರಕ್‌ನಲ್ಲಿ ಸಾಗಿಸುತ್ತಿದ್ದ ನೆರವು ಸಾಮಾಗ್ರಿ ಕಸಿದು ಸ್ಥಳದಲ್ಲೇ ತಿನ್ನುತ್ತಿದ್ದು, ಅವರ ಹಸಿವಿನ ದಾಹವನ್ನು ಸೂಚಿಸುತ್ತದೆ. ಈ ಭಯಾನಕ ಸ್ಥಿತಿ ನನ್ನ ಕಣ್ಣುಗಳಿಂದ ನೋಡಿದೆ ಎಂದು ಫಿಲಿಪ್ ಲಜ್ಜರಿನಿ ಹೇಳಿದ್ದರು.

ರಾಫಾದಲ್ಲಿ ಸಾಮೂಹಿಕ ಅಂತ್ಯಕ್ರಿಯೆ;  ದಕ್ಷಿಣ ಗಾಝಾದ ರಾಫಾದಲ್ಲಿ ಇಸ್ರೇಲ್‌ ಮಿಲಿಟರಿಯಿಂದ ಹತ್ಯೆಗೀಡಾದ ಪ್ಯಾಲೆಸ್ತೀನ್‌ ನಾಗರಿಕರ ಮೃತದೇಹವನ್ನು ಸಾಮೂಹಿಕವಾಗಿ ಅಂತ್ಯಕ್ರಿಯೆ ನಡೆಸಲಾಗಿದೆ. ನಾಪತ್ತೆಯಾದವರ ಸಂಬಂಧಿಕರು ಸಮಾಧಿ ಸ್ಥಳಕ್ಕೆ ಆಗಮಿಸಿದ್ದರೂ, ಮೃತರ ದೇಹಗಳನ್ನು ಗುರುತಿಸಲು ಸಾಧ್ಯವಾಗದೆ ಹಿಂತಿರುಗಿದ್ದಾರೆ.

ಅಕ್ಟೋಬರ್ 7ರಿಂದ ಗಾಝಾದ ಮೇಲೆ ಇಸ್ರೇಲ್‌ ನಡೆಸಿದ ದಾಳಿಯ ಬಳಿಕ ಗಾಝಾದಲ್ಲಿ ಕನಿಷ್ಠ 26,751 ಜನರು ಸಾವನ್ನಪ್ಪಿದ್ದಾರೆ ಮತ್ತು 65,636 ಮಂದಿ ಗಾಯಗೊಂಡಿದ್ದಾರೆ. ಲಕ್ಷಾಂತರ ಮಂದಿ ನಿರಾಶ್ರಿತರಾಗಿದ್ದಾರೆ. ಲಕ್ಷಾಂತರ ಮನೆಗಳು ನೆಲಸಮಗೊಳಿಸಲಾಗಿದೆ.

ಇದನ್ನು ಓದಿ: ದಲಿತ ರೈತರಿಗೆ ಇಡಿ ಸಮನ್ಸ್‌ ಪ್ರಕರಣ: ನಿರ್ಮಲಾ ಸೀತಾರಾಮನ್‌ ವಜಾಗೆ ಆಗ್ರಹಿಸಿ ಪತ್ರ ಬರೆದಿದ್ದ IRS ಅಧಿಕಾರಿ ಅಮಾನತು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಭಾರತದಲ್ಲಿ ಬಿಕ್ಕಟ್ಟಿನಲ್ಲಿ ಪತ್ರಿಕಾ ಸ್ವಾತಂತ್ರ್ಯ: ವರದಿ

0
ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯದ ಸ್ಥಿತಿ ಅತ್ಯಂತ ಕಟ್ಟದಾಗಿದ್ದು, ನೆರೆಯ ಪಾಕಿಸ್ತಾನ, ಶ್ರೀಲಂಕಾ, ನೇಪಾಳಕ್ಕಿಂತಲೂ ಕಳಪೆಯಾಗಿದೆ. ಇದು ಪ್ರಜಾಪ್ರಭುತ್ವ ದೇಶಕ್ಕೆ ಯೋಗ್ಯವಾದ ಬೆಳವಣಿಗೆಯಲ್ಲ ಎಂದು ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್ (ಆರ್‌ಎಸ್‌ಎಫ್) ಬಿಡುಗಡೆ ಮಾಡಿದ 2024ರ...