Homeಕರ್ನಾಟಕಸಿದ್ದರಾಮಯ್ಯ, ಡಿ.ಕೆ.ಶಿ.ಗೆ ಗುಂಡಿಕ್ಕಿ ಕೊಲ್ಲುವ ಬೆದರಿಕೆ: ಪಬ್ಲಿಕ್‌ ಟಿವಿ ವಿರುದ್ಧ ಕಾಂಗ್ರೆಸ್‌ ದೂರು

ಸಿದ್ದರಾಮಯ್ಯ, ಡಿ.ಕೆ.ಶಿ.ಗೆ ಗುಂಡಿಕ್ಕಿ ಕೊಲ್ಲುವ ಬೆದರಿಕೆ: ಪಬ್ಲಿಕ್‌ ಟಿವಿ ವಿರುದ್ಧ ಕಾಂಗ್ರೆಸ್‌ ದೂರು

- Advertisement -
- Advertisement -

ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್‌ ಅವರಿಗೆ ಕೊಲೆ ಬೆದರಿಕೆ ಹಾಕಿದ ದಾವಣಗೆರೆಯ ವೀರಣ್ಣ ಮತ್ತು ಪ್ರಚೋದನಕಾರಿ ಹೇಳಿಕೆಯನ್ನು ಪ್ರೋತ್ಸಾಹಿಸಿದ ಪಬ್ಲಿಕ್ ಟಿವಿ ನಿರೂಪಕ ಅರಣ್‌ ಬಡಿಗೇರ್‌, ವಿಡಿಯೊ ಪ್ರಕಟಿಸಿದ ಪಬ್ಲಿಕ್ ಟಿ.ವಿ. ಫೇಸ್‌ಬುಕ್ ಖಾತೆಯ ಅಡ್ಮಿನ್‌ ವಿರುದ್ಧ ಕಾಂಗ್ರೆಸ್ ದೂರು ನೀಡಿದೆ.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಕಾನೂನು ಮತ್ತು ಮಾನವ ಹಕ್ಕುಗಳ ವಿಭಾಗದ ಪ್ರಧಾನ ಕಾರ್ಯದರ್ಶಿ ಸೂರ್ಯ ಮುಕುಂದ್‌ರಾಜ್ ಅವರು ಬೆಂಗಳೂರಿನ ಹೈಗ್ರೌಂಡ್ಸ್‌‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಪಬ್ಲಿಕ್ ಟಿವಿಯಲ್ಲಿ ಪ್ರಸಾರವಾದ ಕಾರ್ಯಕ್ರಮದಲ್ಲಿ ಮಾಡಲಾಗಿರುವ ಕೊಲೆ ಬೆದರಿಕೆಯನ್ನು ಉಲ್ಲೇಖಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

“ಜೂನ್‌ 30ರಂದು ಕೋಮು ಭಾವನೆಯನ್ನು ಪ್ರಚೋದಿಸುವಂತೆ ಪಬ್ಲಿಕ್‌ ಟಿ.ವಿ. ವಾಹಿನಿಯಲ್ಲಿ ಸಾರ್ವಜನಿಕರ ಪೋನ್‌ ಇನ್ ಕಾರ್ಯಕ್ರಮ ಪ್ರಸಾರ ಮಾಡಲಾಗುತ್ತಿದ್ದ ಸಂದರ್ಭದಲ್ಲಿ ದಾವಣಗೆರೆಯಿಂದ ಕರೆ ಮಾಡಿದ ವೀರಣ್ಣ ಎಂಬಾತ ಕೊಲೆ ಬೆದರಿಕೆ ಹಾಕಿದ್ದಾನೆ. ‘ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್‌ ಅವರನ್ನು ಗುಂಡಿಕ್ಕಿ ಸಾಯಿಸಿದರೆ ಎಲ್ಲ ಸರಿಹೋಗುತ್ತದೆ’ ಎಂದು ಹತ್ಯೆ ಮಾಡಲು ಪ್ರಚೋದನೆ ನೀಡಿರುತ್ತಾನೆ. ಆತನ ಹೇಳಿಕೆಯನ್ನು ಕಾರ್ಯಕ್ರಮ ನಿರೂಪಕ ಅರುಣ್‌ ಬಡಿಗೇರ್‌ ತೀಕ್ಷ್ಣವಾಗಿ ಖಂಡಿಸುವುದನ್ನು ಬಿಟ್ಟು ಮತ್ತಷ್ಟು ಪ್ರಚೋದನಕಾರಿ ಮಾತನ್ನು ಹೇಳಲು ಪ್ರೋತ್ಸಾಹದಿಂದ ಮಾತನಾಡಿದ್ದಾರೆ. ನಿರೂಪಕ ಅರುಣ್‌ ಬಡಿಗೇರ್‌ ಮತ್ತು ದಾವಣೆಗೆರೆ ಮೂಲದ ಕಿಡಿಗೇಡಿ ವೀರಣ್ಣ ಇಬ್ಬರ ಸಂಭಾಷಣೆ ಇರುವ ವಿಡಿಯೊವನ್ನು ಪಬ್ಲಿಕ್‌ ಟಿವಿಯ ಫೇಸ್ಬುಕ್‌ ಖಾತೆಯಲ್ಲಿ ಪ್ರಕಟಿಸಲಾಗಿದೆ” ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಇದನ್ನೂ ಓದಿರಿ: ಪಬ್ಲಿಕ್‌, ಸುವರ್ಣ, ಟಿವಿ9 ಮತ್ತು ಪಬ್ಲಿಕ್ ಟಿವಿ ಕಚೇರಿ ಮುಂದೆ ಬುಧವಾರ ‘ಆತ್ಮಾವಲೋಕನ ಸತ್ಯಾಗ್ರಹ’

“ಫಸ್ಟ್‌ ಸಿದ್ರಾಮಣ್ಣ & ಡಿಕೆಶಿನ ಗುಂಡಿಟ್ಟು ಹೊಡೆದ್ರೆ ಇವ್ರೆಲ್ಲ ತಣ್ಣಗಾಗ್ತಾರೆ ಸರ್‌!” ಎಂಬ ಶೀರ್ಷಿಕೆಯಲ್ಲಿ ವಿಡಿಯೊ ಪೋಸ್ಟ್ ಮಾಡಲಾಗಿದ್ದು, #UdaipurTailor #Murder #TerrorAttack #KanhaiyaLal  #ProphetMohammad #Udaipur #Rajasthan #DKShivakumar #Siddaramaiah ಎಂಬ ಹ್ಯಾಷ್‌ಟ್ಯಾಗ್‌ಗಳನ್ನು ಪೋಸ್ಟ್‌ನಲ್ಲಿ ಹಾಕಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಜೊತೆಗೆ ಸಂಭಾಷಣೆಯ ವಿವರಣೆಯನ್ನು ಪೊಲೀಸರಿಗೆ ಸಲ್ಲಿಸಲಾಗಿದೆ.

ಪಬ್ಲಿಕ್ ಟಿ.ವಿ.ಯಲ್ಲಿ ನಡೆದ ಸಂಭಾಷಣೆ ಹೀಗಿದೆ:

ವೀರಣ್ಣ: ಮುಸಲ್ಮಾನರಿಗೆ ಯಾವುದೇ ರೀತಿಯ ಬೆಂಬಲ ಕೊಡಬಾರದು. ಪಬ್ಲಿಕ್‌ ಟಿ.ವಿ.ಗೆ ಮುಸಲ್ಮಾರನ್ನು ಕರೆಸಿ ಇದು ಮಾಡುತ್ತೀರಲ್ಲ, ಅದನ್ನು ಬಿಡಬೇಕು.

ಅರುಣ್ ಬಡಿಗೇರ್‌: ಅವರನ್ನು ಕರೆಸಲೇಬಾರದು ಅಂತೀರಾ?

ವೀರಣ್ಣ: ಕರೆಸಲೇಬಾರದು ಅವರನ್ನು. ಅವರೊಂದು ಇವರೊಂದು ಹೇಳುತ್ತಾರೆ. ಅವರು ಬಾಲ ಬಿಚ್ಚದಂತೆ ನೋಡಿಕೊಳ್ಳಬೇಕು. ಅವರಿಗೆ ಸ್ಥಾನ ಮಾನ ಕೊಡಬಾರದು.

ಬಡಿಗೇರ್:  ಅವರು ಬಾಲ ಬಿಚ್ಚದಂತೆ ನೋಡಿಕೊಳ್ಳಬೇಕು.

ವೀರಣ್ಣ: ಅವರನ್ನು ಕರೆಸಲೇಬಾರದು. ಅವರಿಗೆ ಭಾರತ ದೇಶದಲ್ಲಿ ಯಾವುದೇ ಸ್ಥಾನಮಾನ ಕೊಡಬಾರದು. ಅನ್ನ ನೀರು ಹಾಕಿರುವವರು ನಾವು. ನಮ್ಮ ಮೇಲೆಯೇ ಬಾಲ ಬಿಚ್ಚುತ್ತಿದ್ದಾರೆ. ಫಸ್ಟ್‌ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ಗೆ ಗುಂಡಿಕ್ಕಿ ಹೊಡೆದರೆ ಇವರೆಲ್ಲ ಸುಮ್ಮನಾಗುತ್ತಾರೆ.

(ಈ ಮಾತಿಗೆ ನಗುತ್ತಾ ಬಡಿಗೇರ್‌ ಪ್ರತಿಕ್ರಿಯೆ ನೀಡುತ್ತಾರೆ)

ಬಡಿಗೇರ್‌: ಸಾರ್‌, ನಾಯಕರ ವಿಚಾರದಲ್ಲಿ ಹಾಗೆಲ್ಲ ಮಾತನಾಡಬಾರದು. ಅವರ ಮೇಲೆ ಕೋಪ ಇದೆ ಎಂದು ಹೀಗೆಲ್ಲ ಹೇಳಬಾರದು. ಹಂತಕರಿಗೂ ನಿಮಗೂ ವ್ಯತ್ಯಾಸ ಏನಿದೆ?

ವೀರಣ್ಣ: ನಿನ್ನೆಯಿಂದ ಇವರ್‍ಯಾಕೆ ಮಾತನಾಡಿಲ್ಲ?

ಬಡಿಗೇರ್‌: ಭಿನ್ನಾಭಿಪ್ರಾಯ ಇರಲಿ. ಆದರೆ ನಮಗೂ ಅವರಿಗೂ ವ್ಯತ್ಯಾಸ ಇರುತ್ತದೆಯೇ? ತಮ್ಮ ಪಕ್ಷದಲ್ಲಿರುವ ವೋಟುಗಳಿಗೆ ತಮ್ಮ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ಹಾಗೆಂದು ಗುಂಡು ಹೊಡೆದು ಸಾಯಿಸಿ ಎಂದರೆ? ಇದು ಒಳ್ಳೆಯದಲ್ಲ.

ವೀರಣ್ಣ: ಒಂದು ಕಲ್ಲಂಗಡಿಯನ್ನು ಹೊಡೆದಿದ್ದಕ್ಕೆ ದಂಡ ಕಟ್ಟಿಸಲಿಲ್ಲವೇ?

ಬಡಿಗೇರ್‌: ಹೂಂ ಹೂಂ, ಹಾ… ಹಾ.. ಓಕೆ.

ವೀರಣ್ಣ: ಅವರ ಬೆಂಬಲದಿಂದಾಗಿಯೇ ನಿಗುರುತ್ತಿದ್ದಾರೆ.

ಬಡಿಗೇರ್‌: ಅವರನ್ನು ಬೆಂಬಲಿಸುವುದಕ್ಕಾಗಿಯೇ ಹೀಗೆ ಮಾಡುತ್ತಿದ್ದಾರೆ ಅಂತಾನಾ?

ವೀರಣ್ಣ: ಕರೆಕ್ಟ್‌ ಸರ್‌‌.

ಬಡಿಗೇರ್‌: ಓಕೆ ಓಕೆ

ವೀರಣ್ಣ: ಅವರನ್ನು ಫಸ್ಟ್‌ ನಿರ್ನಾಮ ಮಾಡಿದರೆ ಇವರೆಲ್ಲ ಪ್ಲಾಪ್‌ ಆಗುತ್ತಾರೆ.

ಬಡಿಗೇರ್‌: ಧನ್ಯವಾದಗಳು ವೀರಣ್ಣನವರೇ ನಮ್ಮ ಜೊತೆ ಮಾತನಾಡಿದ್ದಕ್ಕೆ…

– ಹೀಗೆ ಸಂಭಾಷಣೆ ನಡೆದಿರುವುದನ್ನು ದೂರಿನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿರಿ: ಪಬ್ಲಿಕ್‌‌ ಟಿವಿ ಸಂಪಾದಕ ರಂಗನಾಥ್‌ ಮತ್ತು ನಿರೂಪಕ ಅರುಣ್ ಬಡಿಗೇರ್‌ ವಿರುದ್ಧ FIR ದಾಖಲು

“ದೇಶದಾದ್ಯಂತ ಈಗಾಗಲೇ ಪರಿಸ್ಥಿತಿ ಉದ್ವಿಗ್ನವಾಗಿದ್ದು ಗೌರವಾನ್ವಿತ ಸುಪ್ರೀಂಕೋರ್ಟ್ ಕೂಡ ಇದನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಇಂತಹ ಸಂದರ್ಭದಲ್ಲಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಗೆ ಭಂಗ ತರುವಂತೆ ಪಬ್ಲಿಕ್‌ ಟಿವಿಯಲ್ಲಿ ಪ್ರಚೋದನಕಾರಿ ಕಾರ್ಯಕ್ರಮ ಪ್ರಸಾರ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಲಾಗಿದೆ. ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್‌ ಅವರನ್ನು ಕೊಲೆ ಮಾಡುವಂತೆ ಪ್ರಚೋದನೆ ನೀಡಿರುವ ದಾವಣೆಗೆರೆ ಮೂಲದ ವೀರಣ್ಣ, ಆತನಿಗೆ ಪ್ರೋತ್ಸಾಹಿಸುವಂತೆ ವರ್ತಿಸಿರುವ ನಿರೂಪಕ ಅರುಣ್ ಬಡಿಗೇರ್‌ ಹಾಗೂ ಪ್ರಚೋದನಕಾರಿ ಪೋಸ್ಟ್‌ ಮಾಡಿರುವ ಪಬ್ಲಿಕ್‌ ಟಿವಿ ಫೇಸ್ಬುಕ್‌ ಖಾತೆ ಅಡ್ಮಿನ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೋರುತ್ತೇನೆ” ಎಂದು ಮುಕುಂದ್ ರಾಜ್ ದೂರಿನಲ್ಲಿ ತಿಳಿಸಿದ್ದಾರೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

2 COMMENTS

  1. ಮೊದಲು ಕಮ್ಯೂನಿಸ್ಟ್ ರನ್ನಾ ಬೀದಿಯಲ್ಲಿ ಬಡಿಬೇಕು ,ಈ ರೀತಿ ದೇಶ ಹಾಳಾಗಲು ನೀವೇ ಕಾರಣ

  2. ವೀರಣ್ಣ, ಬಡಿಗೇರ್ ಇಬ್ರನ್ನು 4,5 ದಿನ ಪೊಲೀಸ್ ಕಸ್ಟಡಿಗೆ ಕೊಟ್ಟು ಲಾಠಿಗೆ ಉಪ್ಪು, ಖಾರ ಹಚ್ಚಿ ಮಸಾಜ್ ಮಾಡಸಬೇಕು ಆವಾಗ್ಲೇ ಬುದ್ದಿ ಬರೋದು,, ಮುಸಲ್ಮಾನರಿಗೆ ಊಟ, ಬಟ್ಟೆ ಈ 2 ಭೋ… ಮಕ್ಕಳು ಕೊಡತಾರ…? ಇಲ್ಲಿ ಎಲ್ಲರು ಟ್ಯಾಕ್ಸ್ ಕಟ್ಟತಾರೆ. ಮೊದಲು ಮೆದಳು ತಲೇಲಿದಿಯೋ ಅಥವಾ ಮುಕಳಿಲಿ ಇದಿಯಾ ಅಂತ ಸ್ಕ್ಯಾನಿಂಗ್ ಮಾಡಸ್ಕೊಳ್ರೋ ನಾಯಿಗಳ. 😡😡😡

LEAVE A REPLY

Please enter your comment!
Please enter your name here

- Advertisment -

Must Read

ತಮಿಳುನಾಡಿನ ಬಗ್ಗೆ ಸುಳ್ಳು ಸುದ್ದಿ ಹರಡಿ ಬಂಧಿಸಲ್ಪಟ್ಟಿದ್ದ ಯೂಟ್ಯೂಬರ್ ಕಶ್ಯಪ್ ಬಿಜೆಪಿಗೆ ಸೇರ್ಪಡೆ

0
ಯೂಟ್ಯೂಬರ್ ಮನೀಶ್ ಕಶ್ಯಪ್ ಇಂದು ಬಿಜೆಪಿ ಸಂಸದ ಮನೋಜ್ ತಿವಾರಿ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಬಿಹಾರ ಮೂಲದ ಯೂಟ್ಯೂಬರ್ ಕಶ್ಯಪ್ ಕಳೆದ ವರ್ಷ ನಕಲಿ ಮಾಹಿತಿ ಹರಡಿದ್ದಕ್ಕಾಗಿ ಜೈಲು ಶಿಕ್ಷೆ ಅನುಭವಿಸಿ ಜಾಮೀನಿನ...