Homeಮುಖಪುಟಓಮರ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿ ಮತ್ತು ಶಾ ಫೈಸಲ್ ಬಂಧನದ ಹಿಂದಿನ ನಿಜ ಕಾರಣಗಳೇನು ಗೊತ್ತೆ?

ಓಮರ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿ ಮತ್ತು ಶಾ ಫೈಸಲ್ ಬಂಧನದ ಹಿಂದಿನ ನಿಜ ಕಾರಣಗಳೇನು ಗೊತ್ತೆ?

ಇದು ಸಂವಿಧಾನದ ಕೊಲೆಯಲ್ಲದೆ, ಮತ್ತಿನ್ನೇನು?! ಮೋದಿ ಸರಕಾರಕ್ಕೆ ಜನರಿಂದ, ಮಾಧ್ಯಮಗಳಿಂದ, ಪ್ರತಿಪಕ್ಷಗಳಿಂದ ವಿಧೇಯತೆ, ಗುಲಾಮಗಿರಿ ಬೇಕು! ಸದ್ಯದಲ್ಲೇ ಅದು ಹೇಳಲಿದೆ- ಮಕ್ಕಳೇ ನಮ್ಮ ಹಾಡನ್ನೇ ಹಾಡಿ! ಇಲ್ಲವೇ ಶ್ರೀಕೃಷ್ಣನ ಜನ್ಮಸ್ಥಾನ ಸೇರಲು ಸಿದ್ಧರಾಗಿ.

- Advertisement -
- Advertisement -

ರಾಜಕಾರಣಿಯಾಗಿ ಬದಲಾದ ಸರಕಾರಿ ಅಧಿಕಾರಿ ಶಾ ಫೈಸಲ್ ಅವರನ್ನು ಆಗಸ್ಟ್ 5ರಂದು ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ಬರಖಾಸ್ತು ಮಾಡಿದ ತಕ್ಷಣ ಬಂಧಿಸಿರಲಿಲ್ಲ. ಅವರನ್ನು ಆಗಸ್ಟ್ 14ರಂದು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಲು ಹಾರ್ವರ್ಡ್ ವಿಶ್ವವಿದ್ಯಾಲಯಕ್ಕೆ ಹೋಗಲು ಯತ್ನಿಸುತ್ತಿರುವಾಗ ವಶಕ್ಕೆ ತಗೆದುಕೊಳ್ಳಲಾಯಿತು. ಅಧಿಕಾರಿಗಳು ದಿಲ್ಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಿ, ಹಿಂದಿನ ದಿನ ಅವರು ಬಿಬಿಸಿಗೆ ನೀಡಿದ್ದ ಸಂದರ್ಶನದ ಬಗ್ಗೆ ವಿಚಾರಿಸಿದರು ಎಂದು ಅವರ ಗೆಳೆಯರೊಬ್ಬರು ‘ದಿ ಹಿಂದೂ’ ಪತ್ರಿಕೆಗೆ ತಿಳಿಸಿದ್ದಾರೆ.

ಅವರನ್ನು ಶ್ರೀನಗರಕ್ಕೆ ಹೊತ್ತೊಯ್ದು, ಕರಾಳ ಸಾರ್ವಜನಿಕ ಸುರಕ್ಷಾ ಕಾಯಿದೆ (Public Safety Act) ಅಡಿಯಲ್ಲಿ ಬಂಧಿಸಲಾಯಿತು. ಈ ಕಾಯಿದೆಯ ಪ್ರಕಾರ ಸರಕಾರವು ಯಾರನ್ನೇ ಆಗಲಿ ವಿಚಾರಣೆ ಇಲ್ಲದೇ ಆರು ತಿಂಗಳುಗಳ ಕಾಲ ಬಂಧನದಲ್ಲಿ ಇಡಬಹುದು. (ಪ್ರಜಾಪ್ರಭುತ್ವಕ್ಕೆ ಜಯವಾಗಲಿ!)

ಆವರು ಜಮ್ಮು ಮತ್ತು ಕಾಶ್ಮೀರದಲ್ಲಿ ಯಾವುದೇ ತೊಂದರೆ ಉಂಟುಮಾಡಿರಲಿಲ್ಲ ಬದಲಿಗೆ ಶಾ ಫೈಸಲ್ ಹಾರ್ವರ್ಡಿಗೆ ಓಡಿಹೋಗುತ್ತಿದ್ದರು. (ಮಹಾ ಬಿಕ್ಕಟ್ಟಿನ ಸಮಯದಲ್ಲಿ ತನ್ನ ಜನರನ್ನು ಕೈಬಿಟ್ಟು ಹೋಗುವವನು ಯಾವ ರಾಜಕಾರಣಿ! ಸರಕಾರವು ಈ ಬಂಧನದಿಂದ ಅವರಿಗೆ ಉಪಕಾರವನ್ನೇ ಮಾಡಿದೆ ಎಂದು ಕೆಲವು ಜನರು ಯೋಚಿಸುತ್ತಿರುವುದರಲ್ಲಿ ಅಚ್ಚರಿ ಏನಿಲ್ಲ!)

ನಿಜ ಕಾರಣ!

ಶಾ ಫೈಸಲ್ ಅವರನ್ನು ಗೃಹಬಂಧನದಲ್ಲಿ ಇರಿಸಿರುವುದಕ್ಕೆ ನೈಜಕಾರಣವೆಂದರೆ ಅವರು ಬಿಬಿಸಿಗೆ ಸಂದರ್ಶನ ನೀಡಿರುವುದು ಎಂಬುದು ಸ್ಪಷ್ಟವಾಗಿದೆ. ಅವರು ಕಾಶ್ಮೀರಕ್ಕೆ ಆಜಾದಿ ಕೇಳಿದರೇ? ಪಾಕಿಸ್ತಾನಕ್ಕೆ ಜಿಂದಾಬಾದ್ ಕೂಗಿದರೇ? ಇಲ್ಲವೇ ಇಲ್ಲ! ಬದಲಾಗಿ ಅವರು ಭಾರತೀಯ ಪ್ರಜಾಪ್ರಭುತ್ವ ಮತ್ತು ಅದರ ಸಂವಿಧಾನದ ಮೇಲೆ ವಿಶ್ವಾಸ ವ್ಯಕ್ತಪಡಿಸಿದ್ದರು. ಅವರು ಜಮ್ಮು ಮತ್ತು ಕಾಶ್ಮೀರ ರಾಜ್ಯವನ್ನು ನರೇಂದ್ರ ಮೋದಿ ಸರಕಾರ ಬರಖಾಸ್ತುಗೊಳಿಸಿದ್ದನ್ನು ಮತ್ತು ಅದನ್ನು ಮಾಡಲಾದ ವಿಧಾನಕ್ಕೆ ಭಿನ್ನಮತ ವ್ಯಕ್ತಪಡಿಸಿದ್ದರು ಅಷ್ಟೇ. ಮೋದಿ ಸಂವಿಧಾನದ ಕೊಲೆ ಮಾಡುತ್ತಿದ್ದಾರೆ ಎಂದವರು ಹೇಳಿದ್ದರು. ಇದನ್ನೇ ಪ್ರತಿಪಕ್ಷಗಳು ಈ ಸರಕಾರಕ್ಕೆ ಸಂಬಂಧಿಸಿದಂತೆ ಹೇಳುತ್ತಲೇ ಬಂದಿವೆ.

ಇದಕ್ಕಾಗಿ ಅವರ ಬಂಧನವಾಯಿತು, ಅವರ ನಾಗರಿಕ ಹಕ್ಕುಗಳನ್ನು ಅಮಾನತಿನಲ್ಲಿಡಲಾಯಿತು ಮತ್ತು ಅವರ ಧ್ವನಿಯನ್ನು ಅಡಗಿಸಲಾಯಿತು. ಸರ್ವಾಧಿಕಾರಿ ಆಡಳಿತಗಳು ಮಾಡುತ್ತಾ ಬಂದಿರುವುದು ಇದನ್ನೇ. ಇಂದಿರಾ ಗಾಂಧಿಯವರು ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಮಾಡಿದ್ದೂ ಇದನ್ನೇ. ಸಾರ್ವಜನಿಕರ ಜೊತೆ ಮಾತನಾಡದಂತೆ ತಡೆಯಲು ಪ್ರತಿಪಕ್ಷಗಳ ನಾಯಕರನ್ನು ಬಂಧಿಸಲಾಗುತ್ತದೆ. ಸತ್ಯವನ್ನು ಅರಗಿಸಿಕೊಳ್ಳಲು ಕಷ್ಟವಾದಾಗ ಸರ್ವಾಧಿಕಾರಿ ಆಡಳಿತಗಳು ಇದನ್ನೇ ಮಾಡಲು ಹೊರಡುತ್ತವೆ.

ಇದಕ್ಕಾಗಿಯೇ ಫಾರೂಕ್ ಅಬ್ದುಲ್ಲಾ, ಓಮರ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿ ಮತ್ತು ಅವರ ಕುಟುಂಬದ ಹಲವಾರು ಸದಸ್ಯರನ್ನು ಬಂಧನದಲ್ಲಿ ಇರಿಸಲಾಗಿರುವುದು. ಇವರೆಲ್ಲರೂ ಪ್ರತ್ಯೇಕತಾವಾದವು ತಾರಕಕ್ಕೇರಿದ್ದ ಸಂದರ್ಭದಲ್ಲಿ ತಮ್ಮ ಜೀವಕ್ಕಿರುವ ಅಪಾಯವನ್ನೂ ಲೆಕ್ಕಿಸದೆ, ಭಾರತದ ಧ್ವಜವನ್ನು ಎತ್ತಿಹಿಡಿದಿದ್ದ ಭಾರತೀಯ ರಾಜಕಾರಣಿಗಳು. ಆದರೆ, ಇಂದು ಅವರನ್ನೇ ದಮನಿಸಿ, ತಾತ್ಕಾಲಿಕ ಸೆರೆಮನೆಗೆ ತಳ್ಳಲಾಗಿದೆ.

ಅವರನ್ನು ಜೈಲಿಗೆ ತಳ್ಳಿರುವುದು ಅವರ ಆತ್ಮಸಾಕ್ಷಿಗಾಗಿ; ಕೇವಲ ಭಿನ್ನಾಭಿಪ್ರಾಯ ಹೊಂದಿದ್ದಾರೆ ಎಂಬಷ್ಟೇ ಕಾರಣಕ್ಕಾಗಿ ಅವರನ್ನು ಜೈಲಿಗೆ ತಳ್ಳಲಾಗಿದೆ. ಈ ಅನ್ಯಾಯಕ್ಕೆ ಹೆಚ್ಚಿನವರು ಬಾಯ್ಮಾತಿನ ಸೇವೆಗಿಂತ ಹೆಚ್ಚೇನನ್ನೂ ಮಾಡದಿರುವುದು ಅತ್ಯಂತ ನಾಚಿಕೆಗೇಡಿನ ವಿಷಯ. “ಕಾನೂನು ಮತ್ತು ಶಿಸ್ತನ್ನು ಕಾಪಾಡಲು ಪ್ರತಿಬಂಧಕ ಬಂಧನ” ಎಂಬುದು ಸರ್ವಾನುಮತದ ಭ್ರಮೆ ಹುಟ್ಟಿಸುವಂತೆ ಬ್ರಿಟಿಷ್ ರಾಜ್‌ನಲ್ಲಿ ನೀಡಲಾಗುತ್ತಿದ್ದ ಸಿದ್ಧ ನೆಪ. (ಅದನ್ನೇ ಮೋದಿ ಅನುಸರಿಸುತ್ತಿರುವುದು)

ಭಿನ್ನಮತಕ್ಕೆ ಮುನ್ನವೇ ಬಾಯಿಗೆ ಬೀಗ!

ಆಗಸ್ಟ್ 5ರಂದು ಘೋಷಿಸಲಾದ ಏಕಪಕ್ಷೀಯ ಸಾಂವಿಧಾನಿಕ ಬದಲಾವಣೆಯ ಬಳಿಕ ಮೋದಿ ಸರಕಾರವು ಕಾಶ್ಮೀರದಲ್ಲಿ ಎಲ್ಲವೂ ಕುಶಲಮಂಗಲ, ಕಾಶ್ಮೀರಿಗಳು ತುಂಬಾ ಕುಶಿಯಾಗಿದ್ದಾರೆ ಎಂಬ ಸುಳ್ಳಿನ ಕಂತೆಯನ್ನು ಬಿತ್ತಲು ಯತ್ನಿಸಿತ್ತು. ಈ ಕಟ್ಟುಕತೆಯನ್ನು ಎತ್ತಿಹಿಡಿಯಲು ಯಾವುದೇ ಕಾಶ್ಮೀರಿ ರಾಜಕಾರಣಿ ಟಿವಿಯಲ್ಲಿ ಕಾಣಿಸಿಕೊಳ್ಳದಿರುವುದು ಅಥವಾ ಬೀದಿಗಳಲ್ಲಿ ಮೋದಿ ಸರಕಾರದ ಕ್ರಮವನ್ನು ವಿರೋಧಿಸದಿರುವುದು ಅಗತ್ಯವಾಗಿತ್ತು.

ಅತ್ಯಲ್ಪ ಅವಧಿಗೆ ಗೃಹಬಂಧನದಲ್ಲಿರುವಾಗಲೇ ಮೆಹಬೂಬಾ ಮುಫ್ತಿಗೆ ಟ್ವೀಟ್ ಮಾಡಲು ಸಾಧ್ಯವಾಗಿತ್ತು. ಅವರು ಹೀಗೆ ಬರೆದಿದ್ದರು: “ಮೋದಿ ಜೀಗೆ ಸಿಕ್ಕ ಭಾರೀ ಬಹುಮತವು- ಅವರು ಮುತ್ಸದ್ದಿಯಂತೆ ಕಾಶ್ಮೀರದ ಜನತೆಯತ್ತ ಕೈಚಾಚುತ್ತಾರೆ; ಅವರು ಕೂಡಾ ಅಟಲ್ ಜೀ ಅವರು ತುಳಿದ ದಾರಿಯನ್ನೇ ತುಳಿಯುತ್ತಾರೆ ಎಂಬ ನಂಬಿಕೆಯನ್ನು ನಮ್ಮಲ್ಲಿ ಮೂಡಿಸಿತ್ತು. ಎಂತಹ ವಿಶ್ವಾಸದ್ರೋಹವಿದು.”

ಫಾರೂಕ್ ಅಬ್ದುಲ್ಲಾ ಅವರನ್ನು ಬಹಿರಂಗಪಡಿಸದ ಗೃಹಬಂಧನದಲ್ಲಿ ಇರಿಸಲಾಗಿದೆ. ಆದರೆ, ಅವರು ಬಂಧನದಲ್ಲಿಲ್ಲ ಎಂದು ಗೃಹಮಂತ್ರಿ ಅಮಿತ್ ಶಾ ಸಂಸತ್ತಿನಲ್ಲಿ ಹೇಳಿದ್ದಾರೆ.

ಭಾರತದ ಗೃಹಮಂತ್ರಿ ಸುಳ್ಳು ಹೇಳುತ್ತಿದ್ದಾರೆ ಎಂದು ಅವರು (ಫೈಸಲ್ ಮತ್ತು ಫಾರೂಕ್) ಹೇಳಿದ್ದಾರೆ. ಫಾರೂಕ್ ಗೃಹಬಂಧನದಿಂದ ತಪ್ಪಿಸಿಕೊಂಡುಬಂದು ಎನ್‌ಡಿಟಿವಿಯ ಜೊತೆ ಮಾತನಾಡಿದರು. ಈಗ ಅವರು ಮತ್ತೆ ಗೃಹಬಂಧನದಲ್ಲಿದ್ದು, ಒಂದು ಮಸೀದಿಯಲ್ಲಿ ಈದ್ ನಮಾಜ್ ಮಾಡಲು ಅವಕಾಶ ನೀಡಬೇಕು ಎಂಬ ಅವರ ಬೇಡಿಕೆಯನ್ನು ಕೂಡಾ ನಿರಾಕರಿಸಲಾಯಿತು.

ಓಮರ್ ಅಬ್ದುಲ್ಲಾ ತನ್ನ ಸ್ವಾತಂತ್ರ್ಯವನ್ನು ಕಸಿದುಕೊಳ್ಳಲಾಗುವ ಕೊಂಚವೇ ಮುನ್ನ ಜನರಿಗೆ ಹೇಳಿದ್ದೆಂದರೆ, ಶಾಂತವಾಗಿರಿ, ಹಿಂಸಾಚಾರಕ್ಕೆ ಇಳಿಯಬೇಡಿ ಎಂದು. ಈ ಗುಲಾಮಿ- ಕರಣಿಕ-ಕಾರಕೂನ ವರದಿಗಾರರ ಮೂಲಕ ಕೆಳಮಟ್ಟದ ಅಪಪ್ರಚಾರದ ಕತೆಗಳನ್ನು ಹರಿಯಬಿಡಲಾಗುತ್ತದೆ- ಏನೆಂದರೆ ಓಮರ್ ಅಬ್ದುಲ್ಲಾ ಮತ್ತು ಮೆಹಬೂಬಾ ಮುಫ್ತಿ ಅವರು ‘ಜೈಲಿನಲ್ಲಿ’ ಹೋರಾಟ ನಡೆಸುತ್ತಿದ್ದಾರೆ! (ಪ್ರಜಾಪ್ರಭುತ್ವವನ್ನು ಕೊಂದ ಬಳಿಕ ಈ ಮೋದಿ ಸರಕಾರ ತುಚ್ಛವಾದ ವ್ಯಂಗ್ಯದಿಂದ ಇಂತಹಾ ಆನಂದವನ್ನು ಅನುಭವಿಸುತ್ತಿದೆ.)

ಕೆಲವು ಮುಖ್ಯವಾಹಿನಿಯ ರಾಜಕೀಯ ಪಕ್ಷಗಳ ನಾಯಕರನ್ನು ಕೂಡಾ ಆಗ್ರಾ ಮತ್ತು ಬರೇಲಿಯಲ್ಲಿರುವ ಜೈಲುಗಳಿಗೆ ಸ್ಥಳಾಂತರಿಸಲಾಗಿದೆ. ತನ್ನನ್ನು ಯಾವ ಕಾರಣಕ್ಕಾಗಿ ಜೈಲಿನಲ್ಲಿ ಇರಿಸಲಾಗಿದೆ ಎಂದು ಮೆಹಬೂಬಾ ಮುಫ್ತಿಯವರ ಮಗಳು ಗೃಹಸಚಿವ ಅಮಿತ್ ಶಾಗೆ ಪತ್ರ ಬರೆದು ಕೇಳಲಿಚ್ಛಿಸಿದ್ದಾರೆ.

ಅವರೇನು ಬರೆದ್ದಿದ್ದಾರೆಂದರೆ, “ಏನಿದ್ದರೂ, ನಾನು ವಿವಿಧ ಪತ್ರಿಕೆಗಳಿಗೆ, ಮಾಧ್ಯಮ ಪೋರ್ಟಲ್‌ಗಳಿಗೆ ನೀಡಿದ ಸಂದರ್ಶನಗಳು ನನ್ನ ಬಂಧನಕ್ಕೆ ಕಾರಣ ಎಂದು ಭದ್ರತಾ ಸಿಬ್ಬಂದಿಗಳು ಹೇಳಿದ್ದಾರೆ. ವಾಸ್ತವವಾಗಿ, ನಾನು ಇನ್ನೊಮ್ಮೆ ಮಾತಾಡಿಬಿಟ್ಟರೆ ಗಂಭೀರ ಪರಿಣಾಮ ಎದುರಿಸಬೇಕಾದೀತು ಎಂದು ಅವರು ನನ್ನನ್ನು ಬೆದರಿಸಿದ್ದಾರೆ.”

ಮಾತನಾಡಿದರೆ ಜಾಗ್ರತೆ!

ಇದು ಹೇಗೆ ಕಾಣುತ್ತಿದೆ ಎಂದರೆ, ಮೋದಿ-ಶಾ (ಗಳಸ್ಯ-ಕಂಠಸ್ಯ) ಅವರು ಕೇವಲ ಭಾರತೀಯ ಸಂವಿಧಾನದ ವಿಧಿ 370 ಮಾತ್ರವಲ್ಲ; ವಿಧಿ 19ನ್ನೂ ವಜಾ ಗೊಳಿಸಿದೆ. (ಅದು ನಮ್ಮ ನಿಮ್ಮೆಲ್ಲರಿಗೆ ಅನ್ವಯಿಸುವಂತದ್ದು!) ಈ ವಿಧಿ ವಾಕ್ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯದಂತಹ ಹಲವಾರು ಮೂಲಭೂತ ಹಕ್ಕುಗಳನ್ನೂ ಕೊಟ್ಟಿದೆ. ಈ ತನಕ ಎಷ್ಟು ರಾಜಕಾರಣಿಗಳನ್ನು ಬಂಧಿಸಲಾಗಿದೆ ಎಂದು ನಿಖರವಾಗಿ ಗೊತ್ತಿಲ್ಲ; ಆದರೆ, ಮೋದಿ-ಶಾ ಹೇಳಿಕೆಗಳಿಗಿಂತ ಅದು ವ್ಯತಿರಿಕ್ತವಾಗಿದೆ. ಸುಮಾರು 400ರಷ್ಟು ರಾಜಕಾರಣಿಗಳನ್ನು ಎರಡೇ ದಿನಗಳಲ್ಲಿ ಬಂಧಿಸಲಾಗಿತ್ತು ಎಂದು ವರದಿಗಳು ಹೇಳುತ್ತವೆ. ಪತ್ರಕರ್ತರ ಬಂಧನ ಆರಂಭವಾಗಿದೆ.

ಇಂದು ಯಾರೂ ಭಾರತದಲ್ಲಿ ಕಾಶ್ಮೀರದ ಜೊತೆಗೆ ಸ್ಪಂದಿಸುತ್ತಿಲ್ಲ. ಆದರೆ, ಇದೇ ತಂತ್ರವನ್ನು ಈ ಮೋದಿ ಸರಕಾರ ಭಾರತದಾದ್ಯಂತ ಅನುಸರಿಸುವುದಿಲ್ಲ ಎಂದು ಹೇಳಬಲ್ಲವರು ಯಾರು? ಪ್ರತಿಪಕ್ಷಗಳವರನ್ನು ಜೈಲಿಗೆ ತಳ್ಳಿ, ಸ್ಥಳೀಯ ಮಾಧ್ಯಮಗಳನ್ನು ಹೊಸಕಿ, ಇಂಟರ್ನೆಟ್ ಸಂಪರ್ಕ ಕಡಿತಗೊಳಿಸಿ ಈ  ಸರಕಾರ ಕಾಶ್ಮೀರದಲ್ಲಿ ಎಲ್ಲವೂ ಸರಿಯಾಗಿದೆ ಎಂದು ಹೇಳುವಾಗ, ಅಲ್ಲಿನ ಜನರು ಸಂತೋಷವಾಗಿದ್ದಾರೋ, ಕಡುಕೋಪದಲ್ಲಿದ್ದಾರೋ ಎಂದು ನಮಗೆಲ್ಲಾ ಗೊತ್ತಾಗುವುದಾದರೂ ಹೇಗೆ?

ಇದು ಸಂವಿಧಾನದ ಕೊಲೆಯಲ್ಲದೆ, ಮತ್ತಿನ್ನೇನು?! ಮೋದಿ ಸರಕಾರಕ್ಕೆ ಜನರಿಂದ, ಮಾಧ್ಯಮಗಳಿಂದ, ಪ್ರತಿಪಕ್ಷಗಳಿಂದ ವಿಧೇಯತೆ, ಗುಲಾಮಗಿರಿ ಬೇಕು! ಸದ್ಯದಲ್ಲೇ ಅದು ಹೇಳಲಿದೆ- ಮಕ್ಕಳೇ ನಮ್ಮ ಹಾಡನ್ನೇ ಹಾಡಿ! ಇಲ್ಲವೇ ಶ್ರೀಕೃಷ್ಣನ ಜನ್ಮಸ್ಥಾನ ಸೇರಲು ಸಿದ್ಧರಾಗಿ.

ಕೃಪೆ-ಶಿವಂ ವಿಜ್ (ದಿ ಪ್ರಿಂಟ್)

ಅನುವಾದ: ನಿಖಿಲ್ ಕೋಲ್ಪೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಕೇರಳ | ಆದಿವಾಸಿ ಯುವಕ ಮಧು ಗುಂಪು ಹತ್ಯೆ ಪ್ರಕರಣ : 12 ಮಂದಿ ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಹೈಕೋರ್ಟ್

ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಕೇರಳದ ಆದಿವಾಸಿ ಯುವಕ ಮಧು ಗುಂಪು ಹಲ್ಲೆ ಮತ್ತು ಹತ್ಯೆ ಪ್ರಕರಣದ 12 ಜನ ಅಪರಾಧಿಗಳಿಗೆ ಹೈಕೋರ್ಟ್ ಸೋಮವಾರ (ಮೇ.25) ಜೀವಾವಧಿ ಶಿಕ್ಷೆ ಮತ್ತು ತಲಾ 2...

“ನನ್ನ ಅನುಮತಿ ಇಲ್ಲದೆ ನನ್ನ ಮಗುವನ್ನು ಸುಡಲಾಗಿದೆ”: ಕೊಲೆಯಾದ ಕೊಯಮತ್ತೂರು ಬಾಲಕಿಯ ತಾಯಿ ಅಳಲು

ಕೊಯಮತ್ತೂರು ಬಳಿ ಲೈಂಗಿಕ ದೌರ್ಜನ್ಯಕ್ಕೊಳಗಾಗಿ ಕೊಲೆಯಾದ 10 ವರ್ಷದ ಬಾಲಕಿಯ ತಾಯಿ, ತನ್ನ ಮಗಳ ಮೃತದೇಹದ ಅಂತ್ಯಸಂಸ್ಕಾರಕ್ಕೆ ತಾನು ಅನುಮತಿ ನೀಡಿರಲಿಲ್ಲ ಎಂದು ಹೇಳಿದ್ದಾರೆ. ಮಗುವಿನ ಮರಣೋತ್ತರ ಪರೀಕ್ಷೆಯ ನಂತರ, ತನ್ನ ಪತಿ...

ಅಷ್ಟೊಂದು ‘ಸೆಂಟಿಮೆಂಟ್’ ಬೇಡ: ‘ಕಾಕ್ರೋಚ್ ಅಭಿಯಾನ’ದ ವಿರುದ್ಧದ ಅರ್ಜಿಗೆ ಸಿಜೆಐ ಪ್ರತಿಕ್ರಿಯೆ

"ವ್ಯವಸ್ಥೆಯ ಮೇಲೆ ದಾಳಿ ಮಾಡುವವರ" ಕುರಿತು ತಾವು ನೀಡಿದ್ದ ಹೇಳಿಕೆಗೆ ವ್ಯಂಗ್ಯದ ರೂಪದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಸೃಷ್ಟಿಯಾಗಿರುವ ‘ಕಾಕ್ರೋಚ್ ಜನತಾ ಪಾರ್ಟಿ’  ವಿವಾದವನ್ನು ಅಷ್ಟೊಂದು "ಭಾವನಾತ್ಮಕವಾಗಿ ತೆಗೆದುಕೊಳ್ಳಬೇಡಿ" ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ...

ನಾಳೆ ದಿ. ಎಚ್.ಎಸ್ ದೊರೆಸ್ವಾಮಿ ಅವರಿಗೆ ‘ಕರ್ನಾಟಕದ ಗೌರವಾರ್ಪಣೆ’

ಸ್ವಾತಂತ್ರ್ಯ ಸೇನಾನಿ ದಿ. ಎಚ್.ಎಸ್ ದೊರೆಸ್ವಾಮಿ ಅವರಿಗೆ 'ಕರ್ನಾಟಕದ ಗೌರವಾರ್ಪಣೆ' ಕಾರ್ಯಕ್ರಮವನ್ನು ನಾಳೆ, ಅಂದರೆ 2026 ಮೇ 26 ರಂದು ಬೆಳಿಗ್ಗೆ 10.30ಕ್ಕೆ ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಆಯೋಜಿಸಲಾಗಿದೆ. ಎಚ್.ಎಸ್‌ ದೊರೆಸ್ವಾಮಿ ಸ್ಮಾರಕ ಪ್ರತಿಷ್ಠಾನ,...

FACT CHECK : ಕಾಕ್ರೋಚ್ ಜನತಾ ಪಾರ್ಟಿಯ ಹೆಚ್ಚಿನ ಫಾಲೋವರ್ಸ್ ಪಾಕಿಸ್ತಾನದವರಾ?

ಇತ್ತೀಚೆಗೆ ಹುಟ್ಟಿಕೊಂಡ ಕಾಕ್ರೋಚ್ ಜನತಾ ಪಕ್ಷದ (ಸಿಜೆಪಿ) ಇನ್‌ಸ್ಟಾಗ್ರಾಮ್ ಪೇಜ್ ಕಾಂಗ್ರೆಸ್‌ನ 13 ಮಿಲಿಯನ್ ಮತ್ತು ಬಿಜೆಪಿಯ 9 ಮಿಲಿಯನ್ ಫಾಲೋವರ್ಸ್‌ಗಳ ಗಡಿಯನ್ನು ದಾಟಿದ್ದು, ಬರೋಬ್ಬರಿ 23 ಮಿಲಿಯನ್ (ಮೇ 24ರಂತೆ) ಫಾಲೋವರ್ಸ್‌...

ಬಾಂಗ್ಲಾ ಗಡಿಯಾಚೆಗೆ ತಳ್ಳಿದವರ ವಾಪಸಾತಿ: ಭಾರತೀಯರನ್ನೇ ಗಡಿಪಾರು ಮಾಡುತ್ತಿರುವ ಕೇಂದ್ರ?

ದಾಖಲೆರಹಿತ ವಲಸಿಗರೆಂದು ಆರೋಪಿಸಿ ಅಧಿಕಾರಿಗಳು ಬಾಂಗ್ಲಾದೇಶದ ಗಡಿಯಾಚೆಗೆ 'ತಳ್ಳಿದ್ದ' ಪಶ್ಚಿಮ ಬಂಗಾಳದ ನಿವಾಸಿಗಳನ್ನು ವಾಪಸ್ ಕರೆ ತರುವುದಾಗಿ ಕೇಂದ್ರ ಸರ್ಕಾರ ಶುಕ್ರವಾರ (ಮೇ 22,2026) ಸುಪ್ರೀಂ ಕೋರ್ಟ್‌ಗೆ ವಾಗ್ದಾನ ಮಾಡಿದೆ ಎಂದು ವರದಿಯಾಗಿದೆ....

SIR ಜಾರಿಯಾದ್ರೆ ಗ್ಯಾರಂಟಿಯನ್ನು ಕಳೆದುಕೊಳ್ತೀರಿ!

"ಬಡವರ ಮತಗಳನ್ನು ಪಟ್ಟಿಯಿಂದ ತೆಗೆಯಲು ಎಸ್‌ಐಆರ್ (SIR) ಮೂಲಕ ದೊಡ್ಡ ಸಂಚು ರೂಪಿಸಲಾಗಿದೆ. ನಾವೆಲ್ಲರೂ ಬಹಳ ಎಚ್ಚರಿಕೆಯಿಂದ ಇರಬೇಕು, ಇಲ್ಲದಿದ್ದರೆ ಮತ ಹಕ್ಕಿನ ಜೊತೆಗೆ ಶಕ್ತಿ, ಗೃಹಲಕ್ಷ್ಮಿಯಂತಹ ಗ್ಯಾರೆಂಟಿ ಯೋಜನೆಯನ್ನು ಕಳೆದುಕೊಳ್ಳಬೇಕಾಗುತ್ತದೆ" ಎಂದು...

ವೈಯಕ್ತಿಕ ಸ್ವಾತಂತ್ರ್ಯ Vs ಕಠಿಣ ಕಾಯ್ದೆ: ಯುಎಪಿಎ ಜಾಮೀನು ಭಿನ್ನಾಭಿಪ್ರಾಯಕ್ಕೆ ಸಿಗುವುದೇ ಸುಪ್ರೀಂ ಪರಿಹಾರ?

ಯುಎಪಿಎ ಅಡಿಯಲ್ಲಿ ದೀರ್ಘಕಾಲದ ಜೈಲುವಾಸದ ಹಿನ್ನೆಲೆ, ಜಾಮೀನು ನೀಡುವ ಕುರಿತು ಸುಪ್ರೀಂ ಕೋರ್ಟ್‌ನ ಎರಡು ನ್ಯಾಯಪೀಠಗಳ ನಡುವೆ ಭಿನ್ನಾಭಿಪ್ರಾಯ ಮೂಡಿದ ಕಾರಣ, ವಿಚಾರವನ್ನು ಸುಪ್ರೀಂ ಕೋರ್ಟ್‌ ವಿಸ್ತೃತ ಪೀಠಕ್ಕೆ ಶಿಫಾರಸು ಮಾಡಲಾಗಿದೆ ಎಂದು...

ತಾಯ್ತನ ಕ್ರೀಡೆಗೆ ಅಡ್ಡಿಯಾಗಬಾರದು: ಕುಸ್ತಿ ಒಕ್ಕೂಟಕ್ಕೆ ದೆಹಲಿ ಹೈಕೋರ್ಟ್ ಚಾಟಿ, ವಿನೇಶ್ ಫೋಗಟ್‌ಗೆ ಬಿಗ್ ರಿಲೀಫ್!

ಖ್ಯಾತ ಮಹಿಳಾ ಕುಸ್ತಿ ಪಟು ವಿನೇಶ್ ಫೋಗಟ್ ಅವರನ್ನು ದೇಶೀಯ ಕ್ರೀಡಾಕೂಟಗಳಲ್ಲಿ ಭಾಗವಹಿಸದಂತೆ "ಅನರ್ಹ" ಎಂದು ಘೋಷಿಸಿದ್ದ ಭಾರತೀಯ ಕುಸ್ತಿ ಒಕ್ಕೂಟದ (WFI) ನಿರ್ಧಾರವನ್ನು ದೆಹಲಿ ಹೈಕೋರ್ಟ್ ಶುಕ್ರವಾರ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ....

ಗುಜರಾತ್: ಜಾನುವಾರು ಹತ್ಯೆ ಆರೋಪದಲ್ಲಿ ಬಂಧಿಸಿದ 70 ವರ್ಷದ ಮುಸ್ಲಿಂ ವ್ಯಕ್ತಿ ಸಾವು: ‘ತಂದೆಯನ್ನು ಕೊಂದರು’ ಎಂದು ಆರೋಪಿಸಿದ ಮಗ

ಗುಜರಾತ್‌ನ ಅಹಮದಾಬಾದ್ ನಗರದಲ್ಲಿ ಪೊಲೀಸ್ ಕಸ್ಟಡಿಯಲ್ಲಿದ್ದ 70 ವರ್ಷದ ಜಹೀರ್ ಶೇಖ್ ಎಂಬ ಮುಸ್ಲಿಂ ವೃದ್ಧರೊಬ್ಬರು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾರೆ. ಈ ಘಟನೆಯು ಗುಜರಾತ್‌ನಲ್ಲಿ ತೀವ್ರ ಸಂಚಲನ ಸೃಷ್ಟಿಸಿದ್ದು, ಕಸ್ಟಡಿ ನಿಂದನೆ, ಪೊಲೀಸರ ದೌರ್ಜನ್ಯ...