ಗೌತಮ್ ನವಲಖ ಜಾಮೀನು ವಿಚಾರದಲ್ಲಿ ನ್ಯಾಯಮೂರ್ತಿ ಎಸ್ ಮುರಳೀಧರ್ ಪಕ್ಷಪಾತ ತೋರಿದ್ದಾರೆ ಎಂದು ಅವಹೇಳನ ಮಾಡಿದ್ದ ಕಾಶ್ಮೀರ್ ಫೈಲ್ಸ್ ಸಿನಿಮಾದ ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ದೆಹಲಿ ಹೈಕೋರ್ಟ್ ಮುಂದೆ ಬೆಷರತ್ ಕ್ಷಮೆ ಕೇಳಿದ್ದಾರೆ.
2019 ರಲ್ಲಿ ಬಾಂಬೆ ಹೈಕೋರ್ಟ್ ಭೀಮಾ ಕೊರೇಗಾಂವ್ ಪ್ರಕರಣದಲ್ಲಿ ಮಾನವ ಹಕ್ಕು ಹೋರಾಟಗಾರರಾದ ಗೌತಮ್ ನವಲಖ ಅವರ ಪ್ರಕರಣ ಖುಲಾಸೆಗೊಳಿಸಲು ನಿರಾಕರಿಸಿತ್ತು. ಈ ಸಂದರ್ಭದಲ್ಲಿ ಟ್ವೀಟ್ ಮಾಡಿದ್ದ ವಿವೇಕ್ ಅಗ್ನಿಹೊತ್ರಿ, “ನವಲಖ ಕಾರ್ಯಕರ್ತನಲ್ಲ. ಕಾಶ್ಮೀರದ ಜೆಹಾದಿ ಭಯೋತ್ಪಾದಕರೊಂದಿಗೆ ನಿಕಟವಾಗಿ ಕೆಲಸ ಮಾಡಿದ ಅರ್ಬನ್ ನಕ್ಸಲರು” ಎಂದು ಕರೆದಿದ್ದರು.
navalakha is not an activist. He is #UrbanNaxals who also worked closely with Jehadi terrorists of Kashmir. https://t.co/W8otopZCNg
— Vivek Ranjan Agnihotri (@vivekagnihotri) September 13, 2019
ಅಲ್ಲದೆ ಇತ್ತೀಚಿಗೆ ಅವರಿಗೆ ಜಾಮೀನು ನೀಡಿದಾಗ ನ್ಯಾಯಮೂರ್ತಿ ಎಸ್ ಮುರಳೀಧರ್ ಪಕ್ಷಪಾತ ತೋರಿದ್ದಾರೆ ಎಂದು ಆರೋಪಿಸಿದ್ದರೆಂದು ಹಿಂದುಸ್ತಾನ್ ಟೈಮ್ಸ್ ವರದಿ ಮಾಡಿದೆ.
ಇದನ್ನೂ ಓದಿ: ದೆಹಲಿ ಗಲಭೆ ಕೇಸ್ನಲ್ಲಿ ಉಮರ್ ಖಾಲಿದ್ ಆರೋಪ ಮುಕ್ತ: ಯುಎಪಿಎ ಪ್ರಕರಣದಲ್ಲೂ ಸಮಾನ ಆರೋಪ ಗುರುತಿಸಿದ ಕೋರ್ಟ್