Homeಚಳವಳಿಕೊಲ್ಕತ್ತಾ: ದುರ್ಗಾ ಪೂಜೆ ಮಂಟಪಗಳಲ್ಲಿ ಹೊರಹೊಮ್ಮಿದ ರೈತ ಹೋರಾಟದ ಚಿತ್ರಗಳು

ಕೊಲ್ಕತ್ತಾ: ದುರ್ಗಾ ಪೂಜೆ ಮಂಟಪಗಳಲ್ಲಿ ಹೊರಹೊಮ್ಮಿದ ರೈತ ಹೋರಾಟದ ಚಿತ್ರಗಳು

- Advertisement -
- Advertisement -

ನವರಾತ್ರಿಗೆ ತಯಾರಾಗುತ್ತಿರುವ ಕೊಲ್ಕತ್ತಾದಲ್ಲಿ ದುರ್ಗಾ ಪೂಜೆ ಮಂಟಪಗಳನ್ನು ವಿಭಿನ್ನವಾಗಿ ಅಲಂಕರಿಸಲಾಗುತ್ತಿದೆ. ಉತ್ತರ ಕೊಲ್ಕತ್ತಾದ ಸ್ಥಳೀಯ ಕ್ಲಬ್‌ವೊಂದು, ಸುಮಾರು ಒಂದು ವರ್ಷದಿಂದ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರ ಹೋರಾಟವನ್ನು ಗೌರವಿಸುವ ಮೂಲಕ ದುರ್ಗಾ ಪೂಜೆಯನ್ನು ಆಚರಿಸುತ್ತಿದೆ.

ದುರ್ಗಾ ಪೂಜೆ ಪೆಂಡಾಲ್‌ನಲ್ಲಿ ರಚಿಸಿರುವ ಬೃಹತ್ ಕಲಾಕೃತಿಗಳು ರೈತರ ಸಂಕಷ್ಟವನ್ನು ಚಿತ್ರಿಸುತ್ತವೆ. ಇದರ ಜೊತೆಗೆ ಭಾನುವಾರ ನಡೆದ ಯುಪಿಯ ಲಖಿಂಪುರ್ ಖೇರಿಯಲ್ಲಿ ರೈತರ ಮೇಲೆ ನಡೆದ ಹತ್ಯಾಕಾಂಡವನ್ನು ತೀವ್ರವಾಗಿ ಟೀಕಿಸಿ ಚಿತ್ರಗಳನ್ನು ರಚಿಸಲಾಗಿದೆ.

ಡುಮ್‌ಡಮ್ ಉದ್ಯಾನವನದ ಭಾರತ ಚಕ್ರ ಪೆಂಡಾಲ್‌ನಲ್ಲಿ ಪ್ರವೇಶದ್ವಾರದಲ್ಲಿ ಟ್ರ್ಯಾಕ್ಟರ್‌ನ ಬೃಹತ್ ಪ್ರತಿರೂಪವನ್ನು ರಚಿಸಲಾಗಿದೆ. ಗೋಡೆ ಮೇಲೆ ಬಿಡಿಸಲಾಗಿರುವ ಭಿತ್ತಿ ಚಿತ್ರಗಳಲ್ಲಿ ಕಾರು ರೈತನ ಮೇಲೆ ಹರಿದು ಹೋಗುತ್ತಿರುವ ಚಿತ್ರವಿದೆ.

ಇದನ್ನೂ ಓದಿ: ಲಖಿಂಪುರ್ ರೈತರ ಹತ್ಯೆ ಪ್ರಕರಣ: ಪ್ರತ್ಯಕ್ಷದರ್ಶಿಗಳು ಹೇಳಿದ್ದೇನು?

ದೊಡ್ಡ ಟ್ಯ್ರಾಕ್ಟರ್‌ ಮೇಲೆ ದೊಡ್ಡ ರೆಕ್ಕೆಗಳನ್ನು ರಚಿಸಲಾಗಿದ್ದು, ಈ ರೆಕ್ಕೆಗಳಲ್ಲಿ ಪ್ರತಿಭಟನೆ ವೇಳೆ ಹುತಾತ್ಮರಾದ ರೈತರ ಹೆಸರುಗಳನ್ನು ಬರೆಯಲಾಗಿದೆ ಎಂದು ಈ ಕಲಾಕೃತಿಗಳನ್ನು ರಚಿಸಿರುವ ಕಲಾವಿದ ಅನಿರ್ಬನ್ ದಾಸ್ ಹೇಳಿದ್ದಾರೆ.

ಪೋಲಿಸರ ಹಲ್ಲೆಗಳಿಂದ ತಪ್ಪಿಸಿಕೊಳ್ಳುವಾಗ ಪ್ರತಿಭಟನಾಕಾರರು ತಮ್ಮ ಚಪ್ಪಲಿಗಳನ್ನು ಕಳೆದುಕೊಂಡು ಕಾಲ್ನಡಿಗೆಯಲ್ಲಿ ಆಂದೋಲನ ನಡಸುವುದನ್ನು ಸಂಕೇತಿಸಲು ನೂರಾರು ಚಪ್ಪಲಿಗಳನ್ನು ಇಳಿಬಿಡಲಾಗಿದೆ.  ಮುಖ್ಯ ಪೆಂಡಾಲ್‌ನ ಛಾವಣಿಯನ್ನು ಭತ್ತದಿಂದ ಅಲಂಕರಿಸಲಾಗಿದೆ. ದೆಹಲಿಯಲ್ಲಿರುವ ಮಾದರಿಯ ಬ್ಯಾರಿಕೇಡ್‌ಗಳನ್ನು ತಯಾರಿಸಿ ಇಲ್ಲಿ ಇರಿಸಲಾಗಿದೆ.

“ನಾವು ರೈತರು, ಭಯೋತ್ಪಾದಕರಲ್ಲ. ರೈತರು ಆಹಾರ ನೀಡುವ ಸೈನಿಕರು” ಎಂದು ಪೋಸ್ಟರ್‌ನಲ್ಲಿ, ಬರೆಯಲಾಗಿದೆ.

ಪೂಜಾ ಸಮಿತಿಯ ಕಾರ್ಯದರ್ಶಿ ಪ್ರತೀಕ್ ಚೌಧರಿ ಅವರು ರೈತರ ಮೇಲೆ ನಡೆಯುತ್ತಿರುವ ಶೋಷಣೆಯನ್ನು ಎತ್ತಿ ತೋರಿಸಲು ಬಯಸಿದ್ದೇವೆ ಎಂದಿದ್ದಾರೆ.

“1946-47ರಲ್ಲಿ ತೆಭಾಗ (Tebhaga movement)ಚಳುವಳಿಯ ದಿನಗಳಿಂದ ಹಿಡಿದು ಇತ್ತೀಚಿನ ಮೂರು ಕಾರ್ಪೊರೇಟ್ ಪರ ಕೃಷಿ ಮಸೂದೆಗಳ ವಿರುದ್ಧದ ಆಂದೋಲನದವರೆಗೆ, ನಮಗೆ ಆಹಾರವನ್ನು ಒದಗಿಸುವ ರೈತರ ಕಥೆಯನ್ನು ಹೇಳಲು ನಾವು ಪ್ರಯತ್ನಿಸಿದ್ದೇವೆ” ಎಂದು ಹೇಳಿದ್ದಾರೆ.

“ಉತ್ತರ ಪ್ರದೇಶದ ಲಖಿಂಪುರ್ ಖೇರಿಯಲ್ಲಿ ಇತ್ತೀಚೆಗೆ ನಡೆದ ಪ್ರತಿಭಟನೆಯಲ್ಲಿ ನಾಲ್ಕು ರೈತರ ಮೇಲೆ ಕಾರು ಹರಿಸಿ ಕೊಲೆ ಮಾಡಿರುವ ಘಟನೆ ನಮ್ಮ ಪೆಂಡಾಲ್ ಬಹುತೇಕ ಸಿದ್ಧವಾಗಿದ್ದಾಗ ಸಂಭವಿಸಿದೆ. ಆದರೂ, ನಾವು ಅದನ್ನು ಸೇರಿಸಿದ್ದೇವೆ” ಎಂದು ಚೌಧರಿ ಹೇಳಿದ್ದಾರೆ.


ಇದನ್ನೂ ಓದಿ: ರೈತರ ಮೇಲೆ ಹರಿದ ಕಾರನ್ನು ಅಜಯ್ ಮಿಶ್ರಾ ಪುತ್ರ ಆಶೀಶ್ ಚಲಾಯಿಸುತ್ತಿದ್ದರು: ಗಾಯಾಳು ರೈತ ಮುಖಂಡ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಅಧಿಕಾರಕ್ಕೆ ಬಂದರೆ ‘ಪಿತ್ರಾರ್ಜಿತ ಆಸ್ತಿ ತೆರಿಗೆ’ ಜಾರಿಗೊಳಿಸುವುದಾಗಿ ಕಾಂಗ್ರೆಸ್ ಹೇಳಿಲ್ಲ

0
ಕಳೆದ ಎರಡು ದಿನಗಳಿಂದ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' (Inheritance Tax) ಕುರಿತು ದೊಡ್ಡ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದಲ್ಲಿ 'ಪಿತ್ರಾರ್ಜಿತ ಆಸ್ತಿ ತೆರಿಗೆ' ಜಾರಿಗೆ ತರಲಿದೆ. ಈ...