Homeಅಂಕಣಗಳುಮಾತು ಮರೆತ ಭಾರತ; ಬಥಾನಿ ತೋಲ ಫೈಲ್: ತಿರುಗಿಬಿದ್ದರೆ ತಲೆದಂಡ

ಮಾತು ಮರೆತ ಭಾರತ; ಬಥಾನಿ ತೋಲ ಫೈಲ್: ತಿರುಗಿಬಿದ್ದರೆ ತಲೆದಂಡ

- Advertisement -
- Advertisement -

ಭಾರತದ ಜಾತೀಯ ಫ್ಯೂಡಲಿಸಂ ಹೇಗಿರುತ್ತದೆ ಎಂಬ ಉದಾಹರಣೆಗೆ ಬಿಹಾರ ರಾಜ್ಯಕ್ಕಿಂತಲೂ ಕರಾಳ ಉದಾಹರಣೆ ಮತ್ತೊಂದು ಇರಲಾರದು. ಜಾತೀಯ ಫ್ಯೂಡಲಿಸಂ ಮಧ್ಯಕಾಲೀನ ಇಡೀ ಭಾರತದ ವಿದ್ಯಮಾನವಾದರೂ ಕಣ್ಣಿಗೆ ರಾಚುವಂತೆ ಇಂದಿಗೂ ಅದರ ಲಕ್ಷಣಗಳನ್ನು ಮೈದೆಳೆದು ನಿಂತಿರುವ ರಾಜ್ಯ ಬಿಹಾರ. ಸ್ವತಂತ್ರ ಭಾರತದಲ್ಲಿ ಅತ್ಯಂತ ಭೀಕರವಾದ ದಲಿತರ ಹತ್ಯಾಕಾಂಡಗಳು ನಡೆದಿರುವುದೂ ಸಹ ಈ ಕಾರಣಕ್ಕಾಗಿಯೇ. ಬ್ರಿಟಿಷರಿಂದ ಭಾರತಕ್ಕೆ ದೊರೆತ ಸ್ವಾತಂತ್ರ್ಯ ನೇರವಾಗಿ ದ್ವಿಜ ಭೂಮಾಲೀಕರ ಕೈಗೆ ಹೋಯಿತು. ಭೂಸುಧಾರಣೆಯಿಂದಾಗಿ ಮೇಲ್-ಶೂದ್ರ ಜಾತಿಗಳೂ ಸಹ ಭೂಮಾಲೀಕರ ಸ್ಥಾನಕ್ಕೇರಿದವು. ಅಲ್ಲಿಯವರೆಗೆ ದ್ವಿಜ-ಭೂಮಾಲೀಕರ ದೌರ್ಜನ್ಯಕ್ಕೆ ತುತ್ತಾಗುತ್ತಿದ್ದ ಶೂದ್ರ-ದಲಿತರ ಜಾಗದಲ್ಲಿ ಭೂಸುಧಾರಣೆಯ ಬಳಿಕ ದಲಿತ ಕೂಲಿಗಳು ಏಕಾಂಗಿಯಾಗಿ ಸಿಕ್ಕಿಬಿದ್ದರು. ಈ ಕಾರಣದಿಂದಾಗಿ ದ್ವಿಜ ಹಾಗೂ ಮೇಲ್-ಶೂದ್ರ ಭೂಮಾಲೀಕರು ದಲಿತರನ್ನು ಹಾಗೂ ಕೆಳಶೂದ್ರ ಜಾತಿಗಳನ್ನು ಶೋಷಿಸಲು ಮುಂದುವರೆಸಿದರು. ಸ್ವತಂತ್ರ ಬಂದು ಸಂವಿಧಾನ ರಚನೆಯಾದ ಬಳಿಕವೂ ಬಿಹಾರದಲ್ಲಿ ಸರ್ಕಾರಗಳ ಬದಲು ಭೂಮಾಲೀಕರ ಸರ್ವಾಧಿಕಾರವೇ ಮುಂದುವರೆಯಿತು. ಈಗಲೂ ಆ ಪರಿಸ್ಥಿತಿಯಲ್ಲಿ ಅಂತಹ ಬದಲಾವಣೆ ಆಗಿಲ್ಲ.

ಈ ಮೇಲಿನ ಪರಿಣಾಮದಿಂದಾಗಿ ಬಿಹಾರ ಸರ್ಕಾರದ ಜಾಗದಲ್ಲಿ ಭೂಮಿಹಾರ್ ಜಾತಿಯವರ ರಣವೀರ ಸೇನೆ, ರಜಪೂತರ ಕುನ್ವಾರ್ ಸೇನೆ, ಬ್ರಹ್ಮಶ್ರೀ ಸೇನೆ, ಪಿಂಡಾವ ಗ್ಯಾಂಗ್, ಸನ್‌ಲೈಟ್ ಸೇನೆಗಳು ಭೂಮಾಲೀಕರ ಪರವಾಗಿ ಹುಟ್ಟಿಕೊಂಡು ದಲಿತ-ಶೂದ್ರ ಕೂಲಿಗಳನ್ನು ಶೋಷಿಸಿ ಬದುಕಿ ಬೆಳೆಯಲು ಆರಂಭಿಸಿದರು. ಸರ್ಕಾರದ ಮೇಲೆ ಸರ್ಕಾರಗಳು ಬಂದರೂ ಈ ಶೋಷಣೆಯನ್ನು ನಿಲ್ಲಿಸಲಾಗಲಿಲ್ಲ. ಏಕೆಂದರೆ ಆಯಾ ಸರ್ಕಾರಗಳಲ್ಲಿ ಈ ಭೂಮಾಲೀಕ ಜಾತಿಯವರೇ ತುಂಬಿಕೊಂಡಿದ್ದರು. ಆದ್ದರಿಂದಲೇ ಈ ಮೇಲಿನ ಭೂಮಾಲೀಕ ಸೇನೆಗಳನ್ನು ಮಣಿಸಲು ನಕ್ಸಲ್‌ಬರಿ ಹೋರಾಟ ರೂಪು ತಾಳಿತು. ಈ ದ್ವಿಜ ಭೂಮಾಲೀಕ ಸೇನೆಗಳನ್ನು ಎದುರಿಸಲು ಸಶಸ್ತ್ರ ಹೋರಾಟಗಳಿಗೆ ದಲಿತರೂ ಇಳಿದರು. ಭೂಮಾಲೀಕರು ಹಾಗೂ ದಲಿತ-ಶೂದ್ರ ಕೂಲಿಗಳ ನಡುವೆ ಮಾರಾಮಾರಿಗಳಾದವು. ಈ ಕಾರಣದಿಂದಾಗಿಯೇ ತದನಂತರ ಬಿಹಾರದಲ್ಲಿ ಭೂಮಿಯನ್ನು ದಲಿತರಿಗೆ ಹಂಚಲಾಯಿತು.

ಬಿಹಾರದ ಬೋಜಪುರ ಜಿಲ್ಲೆಯಲ್ಲಿ ಕೇವಲ 100 ಮೀಟರ್ ಅಂತರದಲ್ಲಿ ಎರಡು ಹಳ್ಳಿಗಳಿವೆ. ಒಂದು, ಭೂಮಿಹಾರ್ ಮತ್ತು ರಜಪೂತ ಭೂಮಾಲೀಕರು ನೆಲಸಿರುವ ಬಕ್ರಿ ಕಾರೋನ್ ಮತ್ತೊಂದು ದಲಿತರು ಹಾಗೂ ಮುಸ್ಲಿಮ್ ಕೃಷಿಕೂಲಿಗಳು ನೆಲೆಸಿರುವ ಬಥಾನಿ ತೋಲ. ಈ ಎರಡೂ ಹಳ್ಳಿಗಳ ನಡುವೆ ಇಂದಿಗೂ ವೈಷಮ್ಯ ಕುದಿಯುತ್ತಲೇ ಇದೆ. ಇಂದಿಗೂ ದಲಿತರು ಭೂಮಿಹಾರ್ ಭೂಮಾಲೀಕರ ಎದುರು ಚಪ್ಪಲಿ ಹಾಕುವಂತಿಲ್ಲ. ದಲಿತರು ಅಷ್ಟು ಭಯಭೀತರಾಗಿದ್ದಾರೆ. ಇದಕ್ಕೆ ಮೂಲಕಾರಣ ಜುಲೈ 11, 1996ರಂದು ನಡೆದ ಆ ನರಮೇಧ.

ಅಂದು ಬಕ್ರಿ ಕಾರೋನ್‌ನಿಂದ ಹೊರಟ ಭೂಮಾಲೀಕರ ರಣವೀರ ಸೇನೆ ಬಥಾನಿ ತೋಲ ಪ್ರವೇಶಿಸಿ ಸಿಕ್ಕಸಿಕ್ಕವರನ್ನು ಕೊಚ್ಚಿ ಕೊಂದಿತು. ಬಂದೂಕಿನಿಂದ ಸುಟ್ಟು ಸಾಯಿಸಿತು. ಈ ಮಾರಣಹೋಮ ಅದೆಷ್ಟು ಭೀಕರವಾಗಿತ್ತೆಂದರೆ, 18 ವರ್ಷದ ದಲಿತ ಯುವತಿಯನ್ನು ಸಾಮೂಹಿಕ ಅತ್ಯಾಚಾರ ಮಾಡಲಾಗಿತ್ತು! 25 ವರ್ಷದ ದಲಿತ ಮಹಿಳೆಯ ಮೊಲೆಗಳನ್ನು ಕತ್ತರಿಸಿ ಆಕೆಯನ್ನು ಕೊಲ್ಲಲಾಗಿತ್ತು! 9 ತಿಂಗಳ ದಲಿತ ಹೆಣ್ಣುಗೂಸನ್ನು ಮೇಲೆ ಗಾಳಿಯಲ್ಲಿ ಎಸೆದು ಕೆಳಗೆ ಬೀಳುವಾಗ ಕತ್ತಿಯಲ್ಲಿ ಕತ್ತರಿಸಿ ಎರಡು ಭಾಗ ಮಾಡಲಾಗಿತ್ತು! ದಲಿತ ಗರ್ಭಿಣಿ ಹೆಂಗಸಿನ ಗರ್ಭ ಬಗೆದು ಭ್ರೂಣ ಹೊರತೆಗೆದು ಕತ್ತರಿಸಿ ಬಿಸಾಕಲಾಗಿತ್ತು! ಈ ಘಟನೆ ನಡೆದಾಗ ಅಲ್ಲಿಯೇ ಒಂದು ಪೊಲೀಸ್ ತುಕಡಿ ಇತ್ತು. ಊರಿನ ಹೊರಭಾಗದಲ್ಲಿ ಎರಡು ಪೊಲೀಸ್ ತುಕಡಿಗಳಿದ್ದವು. ಆದರೆ ಈ ತುಕಡಿಗಳಾವುದಕ್ಕೂ ದಲಿತರನ್ನು ರಕ್ಷಿಸಲಾಗಲಿಲ್ಲ. ಈ ನರಮೇಧದಲ್ಲಿ ಹತರಾದದ್ದು 8 ಮಕ್ಕಳು, 12 ಮಹಿಳೆಯರು ಹಾಗೂ ಒಬ್ಬ ಗಂಡಸು ಸೇರಿದಂತೆ 21 ಕೃಷಿ ಕೂಲಿಗಳು.

ರಣವೀರ ಸೇನೆಯ ನಾಯಕ ಬ್ರಹ್ಮೇಶ್ವರ ಸಿಂಗ್ ಮುಖಯಾ ಈ ಬಗ್ಗೆ ಕೇಳಿದರೆ ಸ್ವಲ್ಪವೂ ವಿಷಾದವಿಲ್ಲದೆ ಮೀಸೆ ತಿರುವಿದನಂತೆ! ಆ ಗರ್ಭಿಣಿಯನ್ನು ಅಷ್ಟು ಕ್ರೂರವಾಗಿ ಏಕೆ ಕೊಂದಿರಿ ಎಂಬ ಪ್ರಶ್ನೆಗೆ ’ಆ ಗರ್ಭಿಣಿಯರು ನಕ್ಸಲೈಟರನ್ನು ಹಡೆಯುತ್ತಾರೆ. ಅದಕ್ಕೆ ಕೊಂದೆವು’ ಎಂದು ನಕ್ಕಿದನಂತೆ. ಆ ಮಕ್ಕಳನ್ನು ಏಕೆ ಕೊಂದಿರಿ ಎಂದದ್ದಕ್ಕೆ ’ಅವರು ಬೆಳೆದು ದೊಡ್ಡವರಾಗಿ ನಕ್ಸಲೈಟರಾಗುತ್ತಾರೆ’ ಎಂದನಂತೆ. ಇಂತಹವನ ಮುಖ್ಯಸ್ಥಿಕೆಯಲ್ಲಿ ರಣವೀರ ಸೇನೆ 227 ದಲಿತ ಕೃಷಿ ಕೂಲಿಗಳನ್ನು ಬಲಿ ತೆಗೆದುಕೊಂಡಿದೆ.

ಬತಾನಿ ತೋಲದಲ್ಲಿ ದಲಿತ ಕೃಷಿಕೂಲಿಗಳನ್ನು ಕೊಲ್ಲಲು ಇದ್ದ ಕಾರಣವಿಷ್ಟೆ. ಆ ದಲಿತ ಕೂಲಿಗಳ ಮೇಲೆ ಈ ಭೂಮಾಲೀಕರು ದೌರ್ಜನ್ಯವೆಸಗಿದರೆ, ಕಡಿಮೆ ಕೂಲಿ ಕೊಟ್ಟರೆ ನಕ್ಸಲೈಟರಿಗೆ ಹೇಳಿ ಭೂಮಾಲಿಕರಿಗೆ ಬೆದರಿಕೆ ಹಾಕಿಸುತ್ತಾರೆ ಎಂಬುದು. ಇದು ನಿಜವೂ ಸಹ. ಏಕೆಂದರೆ ಬಿಹಾರದಲ್ಲಿ ಸರ್ಕಾರವೆಲ್ಲಿತ್ತು! ಸರ್ಕಾರ ಕೈಕಟ್ಟಿ ಕುಳಿತಾಗ ಬಡಜನತೆ ರಾಬಿನ್‌ಹುಡ್‌ಗಾಗಿ ಕಾಯುತ್ತಾರೆ. ಆ ರಾಬಿನ್‌ಹುಡ್‌ಅನ್ನು ದಲಿತ ಕೃಷಿಕೂಲಿಗಳು ನಕ್ಸಲೈಟರಲ್ಲಿ ಕಂಡುಕೊಂಡಿದ್ದರು. ಹಲವು ಬಾರಿ ಸ್ವತಃ ರಾಬಿನ್‌ಹುಡ್‌ಗಳಾಗಿದ್ದರು. ನಕ್ಸಲೈಟರನ್ನು ನಂಬಿದ್ದಕ್ಕೆ ಹಲವು ದಲಿತ ಕುಟುಂಬಗಳಿಗೆ ಭೂಮಿಯೂ ದಕ್ಕಿದೆ. ಸಶಸ್ತ್ರ ಹೋರಾಟಗಾರರನ್ನು ನಂಬಲು ದಲಿತರೇನು ದಡ್ಡರಲ್ಲ. ಅದಕ್ಕೆ ಮುಖ್ಯ ಕಾರಣ ಶೋಷಕರನ್ನು ದಮನಿಸಬೇಕಾದ ಸರ್ಕಾರಗಳು ಅವರೊಂದಿಗೇ ಕೈ ಮಿಲಾಯಿಸಿದಾಗ ಇಂತಹ ಅಸಹಾಯಕ ನಡೆಗಳು ತೆರೆದುಕೊಳ್ಳುತ್ತವೆ.

ಬಥಾನಿ ತೋಲ ಹತ್ಯಾಕಾಂಡದ ಆರೋಪಿಗಳನ್ನು ಅಪರಾಧಿಗಳೆಂದು ಸೆಷೆನ್ ಕೋರ್ಟ್ ತೀರ್ಪಿತ್ತಿತಾದರೂ ಹೈಕೋರ್ಟ್ ಸಾಕ್ಷಿಗಳ ಮಾತುಗಳನ್ನೇ ಪರಿಗಣನೆಗೆ ತೆಗೆದುಕೊಳ್ಳದೆ ಎಲ್ಲಾ ಅಪರಾಧಿಗಳನ್ನು ಖುಲಾಸೆಗೊಳಿಸಿತು. 2002ರಲ್ಲಿ ಭೂಮಿಹಾರ್ ಸಂಘಟನೆಯನ್ನು ನಿಷೇಧಿಸಿದ ಬಿಹಾರ್ ಸರ್ಕಾರ ಬ್ರಹ್ಮೇಶ್ವರ ಸಿಂಗ್ ವಿರುದ್ಧ ಇದ್ದ 17 ಕೇಸುಗಳಲ್ಲಿ ಅವನನ್ನು 9 ವರ್ಷ ಜೈಲಿಗೆ ನೂಕಿತು. ತದನಂತರ ಜಾಮೀನು ಪಡೆದು ಹೊರಬಂದ ಅವನನ್ನು ಮುಸುಕುಧಾರಿಗಳು ಬೀದಿಯಲ್ಲಿ ಕೊಂದುಹಾಕಿದರು. 2012ರಲ್ಲಿ ನಡೆದ ಈ ಘಟನೆಗೆ ಲಾಲೂಪ್ರಸಾದ್ ಯಾದವ್, ಕಾಂಗ್ರೆಸ್ ಪಾರ್ಟಿ, ರಾಮ್ ವಿಲಾಸ್ ಪಾಸ್ವಾನ್ ಎಲ್ಲರೂ ಕಣ್ಣೀರಾಗಿದ್ದರು. ಈತನ ಅಂತ್ಯ ಸಂಸ್ಕಾರಕ್ಕೆ ಬಿ.ಜೆ.ಪಿ ಶಾಸಕ ಸಿ.ಪಿ.ಠಾಕೂರ್ ಹಾಗೂ ಬಿಹಾರದ ಮಂತ್ರಿಗಳು ಹಾಜರಿದ್ದರು.

ಇಂದಿಗೂ ಬಥಾನಿ ತೋಲ ಕೇಸು ಸುಪ್ರೀಂ ಕೋರ್ಟಿನಲ್ಲಿ ಧೂಳು ತಿನ್ನುತ್ತಿದೆ.


ಇದನ್ನೂ ಓದಿ: ಮಾತು ಮರೆತ ಭಾರತ; ಚುಂಡೂರು ಫೈಲ್ಸ್: ಅಟ್ರಾಸಿಟಿ ಕಾಯ್ದೆಯ ಹೊಸ್ತಿಲಲ್ಲಿ ದಲಿತರ ನರಮೇಧ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐದು ರಾಜ್ಯಗಳ ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟ; ಬಂಗಾಳದಲ್ಲಿ ಮಾತ್ರ ಎರಡು ಹಂತದ ಮತದಾನ

ಅಸ್ಸಾಂ, ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ ಮತ್ತು ಪುದುಚೇರಿ ವಿಧಾನಸಭಾ ಚುನಾವಣೆಗಳ ವೇಳಾಪಟ್ಟಿಯನ್ನು ಭಾರತೀಯ ಚುನಾವಣಾ ಆಯೋಗದ (ಇಸಿಐ) ಮುಖ್ಯಸ್ಥರಾದ ಜ್ಞಾನೇಶ್ ಕುಮಾರ್ ಪ್ರಕಟಿಸಿದರು. ದೆಹಲಿಯಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯ...

ಫ್ಲಿಪ್‌ಕಾರ್ಟ್‌ನಿಂದ 1 ರೂ.ಗೆ ಹಾಲು ಮಾರಾಟ; ಪ್ರಧಾನಿ ಮೋದಿ ಮಧ್ಯಸ್ಥಿಕೆಗೆ ಬಮುಲ್‌ ಆಗ್ರಹ

ಫ್ಲಿಪ್‌ಕಾರ್ಟ್‌ ಸಂಸ್ಥೆಯು ಆನ್‌ಲೈನ್‌ ಮೂಲಕ 1 ರೂ.ಗೆ ಲೀಟರ್‌ ಹಾಲನ್ನು ಮಾರಾಟ ಮಾಡಿರುವುದು ಭಾರಿ ಜನಾಕ್ರೋಶಕ್ಕೆ ಕಾರಣವಾಗಿದೆ. ಈ ಬಗ್ಗೆ, ಬೆಂಗಳೂರು ನಗರ, ಗ್ರಾಮೀಣ ಮತ್ತು ರಾಮನಗರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ...

“ಮಕ್ಕಳ ಹಂತಕನನ್ನು ಹುಡುಕಿ ಹತ್ಯೆ ಮಾಡುತ್ತೇವೆ” : ನೆತನ್ಯಾಹು ಸುರಕ್ಷಿತವಾಗಿದ್ದಾರೆ ಎಂಬ ಇಸ್ರೇಲ್ ಸ್ಪಷ್ಟನೆ ಬೆನ್ನಲ್ಲೆ ಐಆರ್‌ಜಿಸಿ ಹೇಳಿಕೆ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಹುಡುಕಿ ಹತ್ಯೆ ಮಾಡುತ್ತೇವೆ ಎಂದು ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ) ಹೇಳಿರುವುದಾಗಿ ವರದಿಯಾಗಿದೆ. ನೆತನ್ಯಾಹು ಅವರ ಹತ್ಯೆಯ ವದಂತಿಗಳನ್ನು ಇಸ್ರೇಲ್ ನಿರಾಕರಿಸಿದ ಬೆನ್ನಲ್ಲೇ, ಐಆರ್‌ಜಿಸಿ ಈ...

ಮಹಾರಾಷ್ಟ್ರ| ಇಫ್ತಾರ್ ಕೂಟಕ್ಕೆ ಸೇರಿದ್ದ ಮುಸ್ಲಿಮರ ಮೇಲೆ ಹಿಂದುತ್ವವಾದಿ ಗುಂಪಿನಿಂದ ದಾಳಿ

ರಂಜಾನ್‌ ಮಾಸದ ಉಪವಾಸ ಮುರಿಯಲು ನೆರೆದಿದ್ದ ಜನರ ಮೇಲೆ ಅಪರಿಚಿತ ವ್ಯಕ್ತಿಗಳ ಗುಂಪೊಂದು ದಾಳಿ ನಡೆಸಿರುವ ಘಟನೆ ಮಹಾರಾಷ್ಟ್ರದ ಪುಣೆಯಲ್ಲಿ ನಡೆದಿದೆ. ಇಫ್ತಾರ್ ಕೂಟಕ್ಕೆ ಸಿದ್ಧತೆ ನಡೆಸುತ್ತಿದ್ದಾಗ, ಸುಮಾರು 100 ಕ್ಕೂ ಹೆಚ್ಚು...

ಆಸ್ಕರ್‌ ಅಂತಿಮ ಪಟ್ಟಿಗೆ ಆಯ್ಕೆಯಾದ ‘ದಿ ವಾಯ್ಸ್ ಆಫ್ ಹಿಂದ್ ರಜಬ್’

ಗಾಝಾದ ಆರು ವರ್ಷದ ಬಾಲಕಿ ಹಿಂದ್ ರಜಬ್‌ ಮತ್ತು ಆಕೆಯ ಸಂಬಂಧಿಕರನ್ನು ಇಸ್ರೇಲಿ ಸೈನಿಕರು ಭೀಕರವಾಗಿ ಹತ್ಯೆ ಮಾಡಿದ ಕಥೆಯನ್ನು ಹೇಳುವ 'ದಿ ವಾಯ್ಸ್ ಆಫ್ ಹಿಂದ್ ರಜಬ್' ಚಲನಚಿತ್ರವು 2026ರ ಆಸ್ಕರ್...

ಉತ್ತರ ಪ್ರದೇಶ| ದಲಿತ ಕುಟುಂಬದ ಮದುವೆ ಮನೆಯಲ್ಲಿ ಸವರ್ಣಿಯರಿಂದ ಹಲ್ಲೆ; ಬಂದೂಕಿನಿಂದ ಬೆದರಿಕೆ

ಮಾರ್ಚ್ 10 ರಂದು ಉತ್ತರ ಪ್ರದೇಶದ ಲಖಿಂಪುರ ಖೇರಿ ಜಿಲ್ಲೆಯ ಟಿಕುನಿಯಾ ಪೊಲೀಸ್ ಠಾಣೆ ಪ್ರದೇಶದಲ್ಲಿ ಜಾತಿ ಆಧಾರಿತ ಹಿಂಸಾಚಾರದ ತೀವ್ರ ಆತಂಕಕಾರಿ ಘಟನೆ ಬೆಳಕಿಗೆ ಬಂದಿದೆ. 24 ಗಂಟೆಗಳ ಒಳಗೆ ಎಫ್‌ಐಆರ್...

’70 ಲಕ್ಷ ಬಂಗಾಳಿ ಮುಸ್ಲಿಮರನ್ನು ಹೊರದಬ್ಬಲು ಸಾಧ್ಯವಿಲ್ಲ..ಅವರೇ ದೇಶ ಬಿಡುವಂತಹ ಪರಿಸ್ಥಿತಿ ಸೃಷ್ಟಿಸುತ್ತೇವೆ’: ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ

ಸುಮಾರು 70 ಲಕ್ಷ 'ಬಂಗಾಳಿ ಮುಸ್ಲಿಮರ'ನ್ನು ಭಾರತದಿಂದ ಹೊರಹಾಕುವುದು 'ಮಾನವೀಯವಾಗಿ ಸಾಧ್ಯವಿಲ್ಲ'. ಹಾಗಾಗಿ, ಅವರಾಗಿಯೇ ದೇಶ ತೊರೆಯುವಂತಹ ಪರಿಸ್ಥಿತಿಯನ್ನು ನಾವು ಸೃಷ್ಟಿಸುತ್ತೇವೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ. ಈ...

ಮೋದಿಯವರ ವಿದೇಶಾಂಗ ನೀತಿ ಸಂಪೂರ್ಣವಾಗಿ ದಿಕ್ಕು ತಪ್ಪಿದೆ, ನಗೆಪಾಟಲಿಗೆ ಈಡಾಗಿದೆ, ಅನೈತಿಕತೆಯಿಂದ ಕೂಡಿದೆ. ಇದು ಜಗಜ್ಜಾಹೀರಾಗಿದೆ – ಶ್ರೀಪಾದ್‌ ಭಟ್

ತಮ್ಮ ಸ್ಥಳೀಯ ಮತಬ್ಯಾಂಕ್ ರಾಜಕಾರಣದ ಜೊತೆಗೆ ವಿದೇಶಿ ನೀತಿಯನ್ನು ತಳುಕು ಹಾಕುವುದು. ಉದಾಹರಣೆಗೆ ಅಮೆರಿಕ-ಇಸ್ರೇಲ್ ಜಂಟಿಯಾಗಿ ನಡೆಸುತ್ತಿರುವ ಇರಾನ್ ಮೇಲಿನ ಯುದ್ಧದ ಸಮಯದಲ್ಲಿ ಮೋದಿ ನೇತೃತ್ವದ ಸರ್ಕಾರವು ತಾನು ಇರಾನ್ ಪರ ನಿಲುವು ತಾಳಿದರೆ...

ದೆಹಲಿ ಪೊಲೀಸರಿಂದ 10 ಮಂದಿ ಹೋರಾಟಗಾರರ ಅಪಹರಣ ಆರೋಪ : ಹೈಕೋರ್ಟ್‌ಗೆ ಹೇಬಿಯಸ್ ಕಾರ್ಪಸ್ ಅರ್ಜಿ

ಸಿವಿಲ್ ಸೊಸೈಟಿಯ ಹತ್ತು ಮಂದಿ ಹೋರಾಟಗಾರರನ್ನು ದೆಹಲಿ ಪೊಲೀಸರು ಅಪಹರಿಸಿದ್ದಾರೆ ಅಥವಾ ಅಕ್ರಮವಾಗಿ ಬಂಧಿಸಿದ್ದಾರೆ ಎಂದು ಮಾನವ ಹಕ್ಕುಗಳ ಗುಂಪುಗಳು ಆರೋಪಿಸಿವೆ. ಹತ್ತು ಮಂದಿಯನ್ನು ದೆಹಲಿ ಪೊಲೀಸರು ಮತ್ತು ಇತರ ರಾಜ್ಯಗಳ ಏಜೆನ್ಸಿಗಳು ಅಪಹರಿಸಿವೆ...

ಗುಜರಾತ್‌: 34 ಜಿಲ್ಲೆಗಳ ಪೈಕಿ 20 ಜಿಲ್ಲೆಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ: ವಿಧಾನಸಭೆಗೆ ಮಾಹಿತಿ ನೀಡಿದ ಸರ್ಕಾರ

ಗಾಂಧಿನಗರ: ರಾಜ್ಯದ 34 ಜಿಲ್ಲೆಗಳ ಪೈಕಿ 20 ಜಿಲ್ಲೆಗಳಲ್ಲಿ 2 ಲಕ್ಷಕ್ಕೂ ಹೆಚ್ಚು ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ ಮತ್ತು ಪರಿಸ್ಥಿತಿಯನ್ನು ಸುಧಾರಿಸಲು ವಿವಿಧ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಗುಜರಾತ್ ಸರ್ಕಾರ ಶನಿವಾರ ವಿಧಾನಸಭೆಗೆ...