Homeಮುಖಪುಟ‘ಹೆಡ್‌ ಬುಷ್‌’ ವಿಮರ್ಶೆ: ಜಯರಾಜ್‌ ದಾದಾಗಿರಿಯ ದಿನಗಳ ದರ್ಶನ

‘ಹೆಡ್‌ ಬುಷ್‌’ ವಿಮರ್ಶೆ: ಜಯರಾಜ್‌ ದಾದಾಗಿರಿಯ ದಿನಗಳ ದರ್ಶನ

- Advertisement -
- Advertisement -

ಇತ್ತೀಚಿನ ದಿನಗಳಲ್ಲಿ ರೌಡಿಸಂ ಕಥೆಗಳು ಕನ್ನಡ ಚಿತ್ರರಂಗದಿಂದ ಸ್ವಲ್ಪ ಹಿಂದಕ್ಕೆ ಸರಿದಂತೆ ಕಾಣುತ್ತಿದ್ದವು. ದುನಿಯಾ ಸೂರಿ ನಿರ್ದೇಶನದ ‘ಪಾಪ್‌ ಕಾರ್ನ್‌ ಮಂಕಿ ಟೈಗರ್‌’, ‘ಕೆಜಿಎಫ್‌’ ನಂತರದಲ್ಲಿ ರೌಡಿಸಂ ಸಿನಿಮಾಗಳು ಇಳಿಮುಖವಾದಂತೆ ಕಾಣುತ್ತಿದ್ದವು. ಆದರೆ ಡಾಲಿ ಧನಂಜಯ್‌ ಅಭಿನಯದ ‘ಹೆಡ್‌ ಬುಷ್‌’ ಇಂತಹ ಸಿನಿಮಾಗಳಿಗೆ ಮರುಜೀವ ನೀಡಿದೆ.

‘ಆ ದಿನಗಳು’, ‘ಎದೆಗಾರಿಕೆ’, ‘ತಮಸ್ಸು’, ‘ಕಳ್ಳರ ಸಂತೆ’ ಸಿನಿಮಾಗಳ ಮೂಲಕ ರಾಜಕೀಯ, ರೌಡಿಸಂ ಆಧಾರಿತ ಚಿತ್ರಕಥೆಗಳಿಗೆ ಬೇರೊಂದು ಆಯಾಮ ನೀಡಿದವರು ಅಗ್ನಿ ಶ್ರೀಧರ್‌. ಅವರ ‘ದಾದಾಗಿರಿಯ ದಿನಗಳು’ ಕೃತಿಯು ರಾಜ್ಯ ಕಂಡ ಭೂಗತ ಜಗತ್ತಿನ ದಾಖಲೆಯಾಗಿಯೂ ಗುರುತಿಸಿಕೊಂಡಿದೆ. ಈ ಕೃತಿಯನ್ನು ಆಧಾರಿಸಿಯೇ ‘ಆ ದಿನಗಳು’ ತೆರೆಗೆ ಬಂದಿತ್ತು. ಇದೇ ಪುಸ್ತಕವನ್ನು ಆಧರಿಸಿ ‘ಹೆಡ್‌ ಬುಷ್‌’ ನಿರ್ದೇಶಿಸಿದ್ದಾರೆ ‘ಶೂನ್ಯ’.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others

ಬೆಂಗಳೂರಿನ ಭೂಗತ ಪಾತಕಿ ಡಾನ್ ಜಯರಾಜ್‌ ಜೀವನದ ಸುತ್ತ ಸಾಗುವ ಶ್ರೀಧರ್‌ ಅವರ ಚಿತ್ರಕಥೆಯು, ಆ ಕಾಲದ ರಾಜಕಾರಣ, ರೌಡಿಸಂ, ಪಾತಕಿಗಳ ಪುಂಡಾಟ, ಪುಡಾರಿಗಳ ಒಳರಾಜಕಾರಣ, ಜನಜೀವನ ಒಂದರೊಳಗೊಂದು ಬೆಸೆದುಕೊಂಡಿರುವುದನ್ನು ಸರಳು ಸರಳಾಗಿ ಬಿಚ್ಚುತ್ತಾ ಹೋಗುತ್ತದೆ.

ರಾಜ್ಯದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತಂದ ಮುಖ್ಯಮಂತ್ರಿ ದೇವರಾಜ ಅರಸು ಅವರ ಕಾಲದಲ್ಲಿನ ಬೆಂಗಳೂರು, ರಾಷ್ಟ್ರ ರಾಜಕಾರಣದ ಬಿಕ್ಕಟ್ಟುಗಳ ನಡುವೆ ಇಂದಿರಾ ಕಾಂಗ್ರೆಸ್‌ನ ಭಾಗವಾಗಿ ಹುಟ್ಟಿಕೊಂಡ ಇಂದಿರಾ ಬ್ರಿಗೇಡ್‌, ಅರಸು ಅವರ ಅಳಿಯ ಎಂ.ಡಿ.ನಟರಾಜ್‌ ಹಾಗೂ ಮಗಳಾದ ನಾಗರತ್ನ (ಸಿನಿಮಾದಲ್ಲಿ ರತ್ನಪ್ರಭಾ) ಅವರ ಒಡನಾಟಕ್ಕೆ ಬಂದ ಡಾನ್ ಜಯರಾಜ್‌, ರೌಡಿಗಳಿಗೆ ಸಿಕ್ಕ ಪ್ರಭುತ್ವದ ಪೋಷಣೆ, ಆ ಕಾಲದ ಬಡ್ಡಿ ದಂಧೆ, ಸೇಟುಗಳ ವ್ಯವಹಾರ, ಕಾಂಗ್ರೆಸ್‌ನೊಳಗಿನ ಒಳರಾಜಕಾರಣ ಇತ್ಯಾದಿಗಳೆಲ್ಲ ಕಥೆಯೊಳಗೆ ಬರುತ್ತವೆ. ಪಾತಕಿಗಳಿಗೆ ಪ್ರಭುತ್ವದ ಪೋಷಣೆ ಸಿಕ್ಕರೆ ಏನೆಲ್ಲ ಅನಾಹುತಗಳಾಗುತ್ತವೆ ಎಂಬುದನ್ನು ಇಲ್ಲಿ ಕಾಣಬಹುದು.

“ರಾಜಕೀಯ ಅಂದರೆ ಉಪಾಯವಾಗಿ ಇರೋರ್‌ ಅತ್ರ ತಗೊಂಡು ಇಲ್ಲದೆ ಇರೋರಿಗೆ ಕೊಡೋದು” ಎನ್ನುತ್ತಾರೆ ಅರಸು. ಈ ಪಾಲಿಸಿಯನ್ನು ಪಾಲಿಸುವ ಜಯರಾಜ್‌ ಗ್ಯಾಂಗ್‌ನ ಗೂಂಡಾಗಿರಿಗೆ ಮಾನವೀಯ ಸ್ಪರ್ಶ ನೀಡಲು ಯತ್ನಿಸಲಾಗಿದೆ. ರೌಡಿಗಳ ಅಟ್ಟಹಾಸದ ಹಿಂದೆ ಬಡವರ ಪರ ಕಾಳಜಿಯೂ ಇತ್ತು ಎಂಬ ನಿರೂಪಣೆಯನ್ನು ಆರಂಭದಲ್ಲಿ ನೀಡಲಾಗಿದೆ. ಆದರೆ ಭೂಗತ ಸಾಮ್ರಾಜ್ಯದಲ್ಲಿ ಮೇಲುಗೈ ಸಾಧಿಸಬೇಕೆಂದು ನಡೆಸುವ ಗ್ಯಾಂಗ್‌ವಾರ್‌, ಅದರೊಳಗಿನ ಪಿತೂರಿಗಳು, ಸನ್ನಿವೇಶಗಳು ಉಂಟು ಮಾಡುವ ವೈಷಮ್ಯ, ಪಾತಕಿಗಳಿಗೆ ಪ್ರಭುತ್ವದ ಬೆಂ‘ಬಲ’ ಸಿಕ್ಕರೆ ಆಗಬಹುದಾದ ಅನಾಹುತಗಳೆಲ್ಲ ಕಥೆಯೊಳಗೆ ಮುಖ್ಯಸ್ಥಾನ ಪಡೆದಿವೆ. ರೌಡಿಗಳ ವೈಯಕ್ತಿಕ ದ್ವೇಷ, ಅಸೂಯೆ, ಸೇಡು ತೀರಿಸಿಕೊಳ್ಳುವ ಹಪಾಹಪಿ, ರಾಜಕೀಯ, ಪೊಲೀಸ್ ವ್ಯವಸ್ಥೆ- ಇವುಗಳೇ ಮುಖ್ಯವಾಗುವುದನ್ನು ‘ಹೆಡ್‌ ಬುಷ್‌’ನಲ್ಲಿ ಕಾಣಬಹುದು.

‘ಹೆಡ್‌ಬುಷ್‌’ ಎಂಬ ಟೈಟಲ್‌ ಇಟ್ಟು, ಅದಕ್ಕೆ ಸಮರ್ಥನೆ ನೀಡಲೆಂದೇ ಎರಡು ದೃಶ್ಯಗಳನ್ನು ತರುಕಿದಂತಿದೆ. ಜಯರಾಜ್‌, ಗಂಗಾ ಹಾಗೂ ಇತರ ಸ್ನೇಹಿತರ ಬಾಲ್ಯವನ್ನು ತೋರಿಸುವಾಗ ‘ಹೆಡ್‌- ಬುಷ್‌’ (ಹೆಡ್‌ ಅಥವಾ ಟೈಲ್‌) ಜೂಜಿನ ಒಂದು ದೃಶ್ಯ ಬರುತ್ತದೆ. ಜಯರಾಜ್ ಗ್ಯಾಂಗ್ ಬಾರ್‌ನಲ್ಲಿ ಹೆಡ್‌ ಬುಷ್‌ ಆಡುತ್ತಿರುವ ಮತ್ತೊಂದು ದೃಶ್ಯ ಬರುತ್ತದೆ. ಈ ಸಂದರ್ಭದಲ್ಲಿ ಬರುವ ಪ್ರೊಫೆಸರ್‌ (ವಿ.ರವಿಚಂದ್ರನ್‌) ಹೆಡ್‌- ಬುಷ್‌ ಬಗ್ಗೆ ತತ್ವಜ್ಞಾನ ಹೊಡೆದು ಹೋಗುತ್ತಾರೆ. ಆ ಮೂಲಕ ಟೈಟಲ್‌ಗೊಂದು ಮಾನ್ಯತೆ ಕೊಡಲು ಶ್ರೀಧರ್‌ ಯತ್ನಿಸಿದ್ದಾರೆ.

ಅರಸು, ಎಂ.ಡಿ.ನಟರಾಜ್‌, ಜಯರಾ‌ಜ್‌, ಗಂಗಾ, ಖಾನ್‌, ಅರಸು, ರತ್ನಪ್ರಭಾ, ಕೊತ್ವಾಲ್‌ ರಾಮಚಂದ್ರ ರಾವ್, ಸಾಮ್ಸನ್‌, ಪೊಲೀಸ್ ಅಧಿಕಾರಿ ಗರುಡಾಚಾರ್‌ ಮೊದಲಾದ ಪಾತ್ರಗಳ ಸುತ್ತ ಸಾಗುವ ಹೆಡ್‌ಬುಷ್‌- ದಾದಾಗಿರಿಯ ದಿನಗಳನ್ನು ಢಾಳಾಗಿ ಚಿತ್ರಿಸಿದೆ.

ಈವರೆಗೆ ಬಂದಿರುವ ರೌಡಿಸಂ ಸಿನಿಮಾಗಳಿಗೆ ಹೋಲಿಸಿದರೆ ಇಲ್ಲಿನ ಕಾಸ್ಟ್ಯೂಮ್‌, ಮೇಕಿಂಗ್‌ ವಿಶಿಷ್ಟವಾಗಿದೆ. ಚರಣ್‌ ರಾಜ್‌ ಸಂಗೀತ ಇಷ್ಟವಾಗುತ್ತದೆ. ಆ ದಿನಗಳು, ಎದೆಗಾರಿಕೆಗಿಂತ ಹೆಚ್ಚಿನ ಸಿನಿಮೀಯತೆ ಹೆಡ್‌ಬುಷ್‌ನಲ್ಲಿದೆ. ಜಯರಾಜ್‌ನನ್ನು ವೈಭವೀಕರಿಸುವ ಹೊಡೆದಾಟದ ದೃಶ್ಯಗಳಿವೆ. ಎಪ್ಪತ್ತರ ದಶಕದ ಪಾತಕ ಲೋಕವನ್ನು ತೆರೆದಿಡಲಾಗಿದೆ. ತಾಂತ್ರಿಕವಾಗಿ ಸಿನಿಮಾ ಉತ್ತಮವಾಗಿದೆ. ಆದರೆ ‘ಎದೆಗಾರಿಕೆ’, ‘ಆ ದಿನಗಳು’ ಸಿನಿಮಾ ಕಥೆಯಲ್ಲಿ ಕಾಣುವಷ್ಟು ಕಲಾತ್ಮಕತೆ, ತೀವ್ರತೆ ಈ ಸಿನಿಮಾದಲ್ಲಿ ಇಲ್ಲ. ಮೊದಲೆರಡು ಸಿನಿಮಾಗಳಲ್ಲಿ ಪಾತಕ ಲೋಕದೊಳಗಿನ ತಲ್ಲಣಗಳಿಗೆ ಮಾನವೀಯ ಸ್ಪರ್ಶವನ್ನು ನೀಡಲಾಗಿದೆ. ಆದರೆ ಇಲ್ಲಿ ಗಂಡಸರ ತೋಳ್ಬಲ ಪ್ರದರ್ಶನ ರಾರಾಜಿಸಿದೆ.

ಇದನ್ನೂ ಓದಿರಿ: ‘ಕಾಂತಾರ’ ದೈವಕ್ಕೂ ‘ಕರ್ಣನ್‌’ ದೈವಕ್ಕೂ ಎಷ್ಟೊಂದು ವ್ಯತ್ಯಾಸ!

‘ಎ’ ಸರ್ಟಿಫಿಕೇಟ್‌ ಪಡೆದಿರುವ ಈ ಸಿನಿಮಾದಲ್ಲಿ ರೌಡಿಗಳ ಭಾಷೆಯನ್ನು ಹಸಿಹಸಿಯಾಗಿ ಬಳಸಲಾಗಿದೆ. ಗತಕಾಲದ ಕತೆಯ ನೆಪದಲ್ಲಿ ಲಿಂಗ ಸೂಕ್ಷ್ಮತೆಗಳನ್ನು ಅಣಕಿಸುವ ಸಂಭಾಷಣೆಗಳು ಸೇರಿಕೊಂಡಿವೆ. ಮೊದಲಾರ್ಧ ಜಯರಾಜ್ ಗ್ಯಾಂಗ್‌ನ ಪಾತಕಗಳ ವೈಭವೀಕರಣಕ್ಕೆ ಮೀಸಲಾದರೆ, ದ್ವಿತೀಯಾರ್ಧ ರೌಡಿಸಂ ಜಗತ್ತಿನ ಒಳ ಹೂರಣವನ್ನು ತೆರೆದಿಡುತ್ತದೆ.

ಭೂಗತ ಜಗತ್ತಿಗೆ ಇದ್ದವರಿಗೆ ಬಡವರ ಪರ ಕಾಳಜಿಯೂ ಇತ್ತು ಎಂದು ತೋರಿಸಲು ಯತ್ನಿಸಿರುವುದು ಅಸ್ವೀಕೃತ ಸಂಗತಿ. ಜಯರಾಜ್‌ ಥರದ ರೌಡಿಗಳು ಬಡವರಿಗೆ ತೊಂದರೆ ಕೊಡುತ್ತಿರಲಿಲ್ಲ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ. ಇಂತಹ ನಿರೂಪಣೆಯು ರೌಡಿಸಂಗೆ ಜನಪ್ರಿಯತೆಯನ್ನು ತಂದುಕೊಡುವ ಅಪಾಯವಿರುತ್ತದೆ. ಹೀಗಾಗಿ ನಾಯಕ ಪಾತ್ರವನ್ನು ವೈಭವೀಕರಿಸುವ ಭರದಲ್ಲಿ ಯಾವ ವಿಚಾರಕ್ಕೆ ಒತ್ತು ನೀಡುತ್ತಿದ್ದೇವೆ ಎಂಬ ಎಚ್ಚರಿಕೆಯೂ ಇರಬೇಕಾಗುತ್ತದೆ.

‘ಹಿಂದಿ ಹೇರಿಕೆ’ಯನ್ನು ಪ್ರಶ್ನಿಸುವ ಈ ಕಾಲದ ತುರ್ತಿನ ಭಾಗವಾಗಿ ದೃಶ್ಯವೊಂದನ್ನು ಸಿನಿಮಾದಲ್ಲಿ ಸೇರಿಸಲಾಗಿದೆ. ಹಿಂದಿಯನ್ನು ಗೌರವಿಸುತ್ತೇವೆ, ಆದರೆ ಕನ್ನಡ ನಮ್ಮ ಹೃದಯದ ಭಾಷೆ. ಹಿಂದಿ ಹೇರಿಕೆಯನ್ನು ಸಹಿಸುವುದಿಲ್ಲ ಎಂಬ ಸಂದೇಶವನ್ನು ಪರೋಕ್ಷವಾಗಿ ಹೆಡ್‌ಬುಷ್ ಚಿತ್ರ ತಂಡ ನೀಡಿದೆ.

ಜಯರಾಜ್‌ ಹೆಂಡತಿಯ ಪಾತ್ರದಲ್ಲಿ ಪಾಯಲ್‌ ರಜಪೂತ್ ಅಭಿನಯಿಸಿದ್ದಾರೆ. ಆದರೆ ಈ ಪಾತ್ರದ ಮಹತ್ವ ಅರ್ಥವಾಗುವುದಿಲ್ಲ. ಹೀಗೆ ಬಂದು, ಹಾಗೆ ಹೋದದಷ್ಟೇ ಎನಿಸುತ್ತದೆ.

ದಾದಾಗಿರಿಯ ದಿನಗಳನ್ನು ದೃಶ್ಯರೂಪದಲ್ಲಿ ನೋಡಬೇಕೆಂದು ಬಯಸುವವರಿಗೆ, ಡಾಲಿ ಧನಂಜಯ ಅವರ ಅಭಿನಯವನ್ನು ಕಣ್ತುಂಬಿಕೊಳ್ಳಲು ಬಯಸುವವರಿಗೆ ಹೆಡ್‌ ಬುಷ್‌ ಇಷ್ಟವಾಗಬಹುದು.

ದೇವರಾಜ್ (ದೇವರಾಜ ಅರಸು), ಪ್ರಕಾಶ್ ಬೆಳವಾಡಿ (ಗರುಡಾಚಾರ್‌), ಧನಂಜಯ (ಜಯರಾಜ್‌), ಶ್ರುತಿ ಹರಿಹರನ್‌ (ಅರಸು ಅವರ ಮಗಳಾದ ನಾಗರತ್ನ), ಲೂಸ್‌ ಮಾದ ಯೋಗಿ (ಗಂಗಾ), ವಶಿಷ್ಟ ಸಿಂಹ (ಕೊಲ್ವಾಲ್ ರಾಮಚಂದ್ರ), ಬಾಲನಾಗೇಂದ್ರ (ಸಾಮ್ಸನ್‌), ರಘು ಮುಖರ್ಜಿ (ನಟರಾಜ್‌), ಪಯಲ್ ರಜಪೂತ್‌ (ಜಯರಾಜ್ ಹೆಂಡತಿ) ಅವರು ಅಭಿನಯದಲ್ಲಿ ಮಿಂಚಿದ್ದಾರೆ. ಬಾದಲ್ ನಂಜುಂಡಸ್ವಾಮಿಯವರ ಕಲಾ ನಿರ್ದೇಶನ ಆ ಕಾಲವನ್ನು ಮರುಸೃಷ್ಟಿಸುವಲ್ಲಿ ಹೆಚ್ಚಿನ ಪಾತ್ರವನ್ನು ವಹಿಸಿದೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ದಲಿತರು, ಅಲ್ಪಸಂಖ್ಯಾತರ ಮೇಲಿನ ಹಿಂಸಾಚಾರದ ಕುರಿತು ವಿಶ್ವಸಂಸ್ಥೆಯ ಕಠಿಣ ಪ್ರಶ್ನೆ: ಸಂಶೋಧನಾತ್ಮಕ ವರದಿಗಳನ್ನು ಆಧರಿಸಿ ಭಾರತಕ್ಕೆ CERD ಚಾಟಿ

ನವದೆಹಲಿ: ಭಾರತದಲ್ಲಿ ದಲಿತರು, ಆದಿವಾಸಿಗಳು, ಮುಸ್ಲಿಮರು ಹಾಗೂ ಇತರ ಅಲ್ಪಸಂಖ್ಯಾತ ಸಮುದಾಯಗಳು ಎದುರಿಸುತ್ತಿರುವ ತಾರತಮ್ಯ, ಹಿಂಸೆ ಮತ್ತು ಹಕ್ಕುಗಳ ಉಲ್ಲಂಘನೆ ಕುರಿತು ವಿಶ್ವಸಂಸ್ಥೆಯ ಜನಾಂಗೀಯ ತಾರತಮ್ಯ ನಿರ್ಮೂಲನೆ ಕುರಿತ ಸಮಿತಿ (CERD) ತೀವ್ರ...

ಪಶ್ಚಿಮ ಬಂಗಾಳ| ಕಳೆದ ಒಂದು ತಿಂಗಳಲ್ಲಿ ಕ್ರಿಶ್ಚಿಯನ್ನರ ಮೇಲೆ ಸತತ ದಾಳಿ

ಪಶ್ಚಿಮ ಬಂಗಾಳದ ಚರ್ಚ್ ಒಂದರ ಆವರಣದಲ್ಲಿರುವ ಸ್ಮಶಾನದಲ್ಲಿ ಮೃತರೊಬ್ಬರಿಗೆ ಕೊನೆಯ ವಿದಾಯ ಕೋರುತ್ತಿದ್ದ ಕ್ರಿಶ್ಚಿಯನ್ ಕುಟುಂಬದ ಮೇಲೆ ಹಿಂದುತ್ವ ಗುಂಪೊಂದು ದಾಳಿ ನಡೆಸಿದೆ ಎಂದು ಆರೋಪಿಸಲಾಗಿದೆ. ಈ ಘಟನೆಯು ಆಗಸ್ಟ್ 14 ರಂದು ಪೂರ್ಬ...

‘ನಮ್ಮ ರಕ್ತದಿಂದ ಅವರು ಬಾಯಾರಿಕೆಯನ್ನು ತಣಿಸಿಕೊಳ್ಳುತ್ತಾರೆಯೇ?’: ಕೇರಳ ವಿವಿಯಲ್ಲಿ ಜಾತಿ ತಾರತಮ್ಯದ ವಿರುದ್ಧ ದಲಿತ ಸಂಶೋಧನಾ ವಿದ್ಯಾರ್ಥಿನಿ ಅನಿರ್ದಿಷ್ಟಾವಧಿ ಉಪವಾಸ

ತಿರುವನಂತಪುರಂ: ಜಾತಿ ಮತ್ತು ಲಿಂಗ ಆಧಾರಿತ ತಾರತಮ್ಯ, ಕಿರುಕುಳ ಹಾಗೂ ಶೈಕ್ಷಣಿಕ ಅವಕಾಶಗಳ ನಿರಾಕರಣೆಯ ಆರೋಪಗಳನ್ನು ಮುಂದಿಟ್ಟುಕೊಂಡು ಕೇರಳದ ತುಂಚತ್ ಎಳುಥಾಚನ್ ಮಲಯಾಳಂ ವಿಶ್ವವಿದ್ಯಾಲಯದ ದಲಿತ ಪಿಎಚ್‌ಡಿ ಸಂಶೋಧನಾ ವಿದ್ಯಾರ್ಥಿನಿ ಅನಘಾ ಶಾಸಿ...

ಸ್ವತಂತ್ರ ಭಾರದ್ವಾಜ್ ಬಂಧನದ ಬೆನ್ನಲ್ಲೇ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿನಿ ಮನೆ ಮೇಲೆ ಕಲ್ಲು ತೂರಾಟ, ಪೊಲೀಸರ ರಕ್ಷಣೆಗೆ ಮನವಿ

ನವದೆಹಲಿಯ ಜಂತರ್ ಮಂತರ್‌ನಲ್ಲಿ ನಡೆದ ಸಿಜೆಪಿ ಪ್ರತಿಭಟನೆಯ ವೇಳೆ ಸಂಜಯ್ ಆಝಾದ್ ಎಂಬುವವರ ಮೇಲೆ ಸ್ವಯಂಘೋಷಿತ ಗೋರಕ್ಷಕ ಸ್ವತಂತ್ರ ಭಾರದ್ವಾಜ್ ಭೀಕರವಾಗಿ ಹಲ್ಲೆ ನಡೆಸಿದ್ದನು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆತನನ್ನು ಬಂಧಿಸಿದ...

ಜನ್ ಧನ್ ಯೋಜನೆಯಡಿ ತೆರೆಯಲಾದ ಪ್ರತಿ ನಾಲ್ಕನೇ ಬ್ಯಾಂಕ್‌ ಖಾತೆ ನಿಷ್ಕ್ರಿಯ: ಆರ್‌ಟಿಐ ಮಾಹಿತಿ

ಮಾಹಿತಿ ಹಕ್ಕು (ಆರ್‌ಟಿಐ) ಕಾಯ್ದೆಯಡಿ ಲಭ್ಯವಾಗಿರುವ ಉತ್ತರದ ಪ್ರಕಾರ, ಪ್ರಧಾನಮಂತ್ರಿ ಜನ್ ಧನ್ ಯೋಜನೆಯಡಿ ತೆರೆಯಲಾದ ಪ್ರತಿ ನಾಲ್ಕನೇ ಖಾತೆಯು ನಿಷ್ಕ್ರಿಯಗೊಂಡಿದೆ. ಸುಮಾರು 5.72 ಕೋಟಿ ಖಾತೆಗಳಲ್ಲಿ ಶೂನ್ಯ ಬ್ಯಾಲೆನ್ಸ್ ಇದೆ. ಆಗಸ್ಟ್ 12,...

ಬಡ ಪೌರ ಕಾರ್ಮಿಕರ ಮೇಲೆ ದರ್ಪ ಮೆರೆದ ಸಚಿವ ಕೃಷ್ಣ ಬೈರೇಗೌಡ : ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ

ಸೇವೆಯನ್ನು ಖಾಯಂಗೊಳಿಸುವಂತೆ ಮನವಿ ಮಾಡಿದ ಬಡ ಪೌರ ಕಾರ್ಮಿಕರೊಂದಿಗೆ ಗ್ರೇಟರ್ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ದರ್ಪ ಮೆರೆದಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಶನಿವಾರ (ಸೆ.6) ಬೆಂಗಳೂರಿನ...

ಗ್ರಾಮೀಣ ಭಾಗದ ಶಾಲಾ ಮಕ್ಕಳಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ 7.5% ಮೀಸಲಾತಿ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

ಗ್ರಾಮೀಣ ಹಾಗೂ ಬಡ ವಿದ್ಯಾರ್ಥಿಗಳ ಉನ್ನತ ಶಿಕ್ಷಣದ ಕನಸಿಗೆ ಬಲ ತುಂಬುವ ನಿಟ್ಟಿನಲ್ಲಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಶೇಕಡಾ 7.5 ರಷ್ಟು ಮೀಸಲಾತಿ ಕಲ್ಪಿಸುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್...

ಪಶ್ಚಿಮ ಬಂಗಾಳದ ಪ್ರವಾಸೋದ್ಯಮ ಜಾಹೀರಾತಿನಲ್ಲಿ ಐಫೆಲ್ ಟವರ್, ಈಜಿಪ್ಟ್ ಪಿರಮಿಡ್: ಆದರೆ ಬಂಗಾಳವೇ ನಾಪತ್ತೆ!

ಪಶ್ಚಿಮ ಬಂಗಾಳವನ್ನು ಜಾಗತಿಕ ಪ್ರವಾಸೋದ್ಯಮ ಭೂಪಟದಲ್ಲಿ ಮುನ್ನೆಲೆಗೆ ತರುವ ಉದ್ದೇಶದಿಂದ ಬಿಡುಗಡೆ ಮಾಡಲಾದ ರಾಜ್ಯದ ಹೊಸ ಪ್ರವಾಸೋದ್ಯಮ ಜಾಹೀರಾತು ಈಗ ತೀವ್ರ ಟೀಕೆ ಹಾಗೂ ಅಪಹಾಸ್ಯಕ್ಕೆ ಈಡಾಗಿದೆ. ಈ ಜಾಹೀರಾತನ್ನು ಒಮ್ಮೆ ಗಮನಿಸಿದರೆ...

ಅಮೆರಿಕದಲ್ಲಿ ಮೋಹನ್‌ ಭಾಗವತ್ ಸೌಹಾರ್ದತೆ ಮಾತು; ಮಹಾರಾಷ್ಟ್ರದ ಗಾರ್ಬಾ-ದಾಂಡಿಯಾ ಕಾರ್ಯಕ್ರಮಗಳಲ್ಲಿ ಮುಸ್ಲಿಮರಿಗೆ ನಿಷೇಧ ಹೇರಿದ ವಿಎಚ್‌ಪಿ

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಅವರು ನ್ಯೂಯಾರ್ಕ್‌ನಲ್ಲಿ ಮಾಡಿದ ಭಾಷಣದಲ್ಲಿ ಧಾರ್ಮಿಕ ಸೌಹಾರ್ದತೆ, ಪರಸ್ಪರ ಗೌರವ ಮತ್ತು ಪ್ರತಿಯೊಂದು ಸಮುದಾಯದ ಗುರುತಿನ ರಕ್ಷಣೆ ಕುರಿತು ಮಾತನಾಡಿದ ಕೆಲವೇ ದಿನಗಳ...

ಸೈಬರ್ ವಂಚನೆಗೊಳಗಾದ ಸಂತ್ರಸ್ತರಿಗೆ ನೆರವು: ಕರ್ನಾಟಕದಲ್ಲಿ ಶೀಘ್ರವೇ ‘ಇ-ಶೂನ್ಯ ಎಫ್‌ಐಆರ್’ ಜಾರಿ

ಸೈಬರ್ ವಂಚನೆಗೊಳಗಾದ ಸಂತ್ರಸ್ತರು ಇನ್ನು ಮುಂದೆ ದೂರು ದಾಖಲಿಸಲು ಪೊಲೀಸ್ ಠಾಣೆಗಳಿಗೆ ಅಲೆಯಬೇಕಿಲ್ಲ. ಸೈಬರ್ ಅಪರಾಧ ಪ್ರಕರಣಗಳ ಎಫ್‌ಐಆರ್ ದಾಖಲಾತಿಯನ್ನು ಚುರುಕುಗೊಳಿಸುವ ಹಾಗೂ ಜನಸ್ನೇಹಿಯಾಗಿಸುವ ಉದ್ದೇಶದಿಂದ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ...