Homeಅಂಕಣಗಳುಬಿಜೆಪಿ ಯಂಗೆ ಚೊಕ್ಕ ಮಾಡಿವಿ ನೋಡಿ!

ಬಿಜೆಪಿ ಯಂಗೆ ಚೊಕ್ಕ ಮಾಡಿವಿ ನೋಡಿ!

- Advertisement -
- Advertisement -

ಅದೊಂದು ಕಾಲವಿತ್ತು; ಚುನಾವಣೆ ಬಂತೆಂದರೆ ಲೀಡರ್‌ಗಳು ತಮ್ಮ ನಾಲಗೆಯನ್ನು ಮಸೆದುಕೊಂಡು, ಪರಿಣಾಮಕಾರಿ ಸುಭಾಷಿತಗಳನ್ನು ಬಾಯಿಪಾಠ ಮಾಡಿಕೊಂಡು, ಉಪಕತೆಗಳನ್ನು ಹೊಸೆದುಕೊಂಡು ಬಹಿರಂಗ ಸಭೆಗಳಲ್ಲಿ ಭಾಷಣ ಬಿಗಿದು ಓಟು ಕೇಳುತ್ತಿದ್ದರು. ಶಾಂತವೇರಿ ಗೋಪಾಲಗೌಡರಂತೂ ಗಂಟೆಗಟ್ಟಲೆ ಮಾತನಾಡಿ ರಾಜ್ಯ, ದೇಶ ಮತ್ತು ಅಂತಾರಾಷ್ಟ್ರೀಯ ಮಟ್ಟದ ರಾಜಕಾರಣ ಮಾತನಾಡಿ ಓಟನ್ನೇ ಕೇಳುತ್ತಿರಲಿಲ್ಲ. “ಓಟು ಕೇಳಿ ಸಾರ್” ಎಂದರೆ “ಜನಗಳಿಗೆ ಗೊತ್ತಿಲ್ಲವೆ” ಎಂದುಬಿಡುತ್ತಿದ್ದರು. ಅಂದಿನ ಸಮಾಜವಾದಿಗಳೆಲ್ಲ ಭಯಂಕರ ಭಾಷಣಕಾರರಾಗಿದ್ದರು. ಭಾಷಣದಿಂದಲೇ ಮತ ಪಡೆಯುತ್ತಿದ್ದರು. ಈಗ ಹಠಾತ್ ಎಲ್ಲವೂ ಬದಲುಗೊಂಡಿದೆ. ಮತದಾರರ ಪಟ್ಟಿ ಹಿಡಿದು, ಹಂಚಬಹುದಾದ ಸಾಮಗ್ರಿಯ ದಾಸ್ತಾನಿನ ಮೇಲೆ ಮತಗಳ ಎಣಿಕೆ ನಡೆಯುತ್ತಿದೆ. ಜನರಿಗೆ ಮಾಂಸ, ಮದ್ಯ ಮತ್ತು ಕಾಸುಕೊಟ್ಟ ಮೇಲೆ ಅವರೊಡನೆ ಮಾತನಾಡುವ ಅಗತ್ಯವಿಲ್ಲ, ಭಾಷಣದ ಅಗತ್ಯವಿಲ್ಲ, ಭಾವನಿಕೆ ಮಾತಿಲ್ಲ; ಮೌನದಲ್ಲಿಯೇ ಮತದ ವ್ಯವಹಾರ ಮುಗಿದ ಮೇಲೆ ಪ್ರಜಾಪ್ರಭುತ್ವವೂ ಕೂಡ ಯಕ್ಕುಟ್ಟಿ ಹೋಗಿದೆಯಂತಲ್ಲಾ, ಥೂತ್ತೇರಿ.

******

ತೊಂಭತ್ತೆರಡು ವರ್ಷದ ದೇವೇಗೌಡರು ಸ್ವತಂತ್ರವಾಗಿ ನಡೆಯಲಾರರು, ವಯೋಸಹಜವಾಗಿ ಮಾತನಾಡುವುದು ತ್ರಾಸವಾದರೂ ಅವರನ್ನು ಕರೆಸಿ ಒಂದೆರಡು ತೊಟ್ಟು ಕಣ್ಣೀರು ಹಾಕಿಸಿಬಿಟ್ಟರೆ ನನ್ನ ಗೆಲುವು ಗ್ಯಾರಂಟಿ ಎಂದು ಭಾವಿಸಿದ ನಾಗಮಂಗಲ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ, ಗೌಡರ ಮನೆಗೆ ಹೋಗಿ ಕೈ ಮುಗಿದಾಗ, ಇಲ್ಲ ಗೌಡರನ್ನು ಕಳುಹಿಸಲು ವೈದ್ಯರ ಒಪ್ಪಿಗೆ ಕಡ್ಡಾಯ ಎಂದರಂತಲ್ಲಾ. ಆಗ ದಿಕ್ಕು ಕಾಣದಂತಾದ ಜೆಡಿಎಸ್ ಅಭ್ಯರ್ಥಿ ದೇವೇಗೌಡರ ಎದುರು ನಿಂತು “ಅಪ್ಪಾ ನಿಮ್ಮ ವೈರಿಯಾದ ಚಲುವರಾಯಸ್ವಾಮಿ ಗೆಲ್ಲುವಂತೆ ಕಾಣುತ್ತಿದ್ದಾನೆ, ನನಗೆ ದಿಕ್ಕೇತೋಚದಂತಾಗಿದೆ” ಎಂದ ಕೂಡಲೇ ಗೌಡರು ಮೈಮೇಲೆ ದೆವ್ವ ಬಂದಂತೆ ಎದ್ದು ನಿಂತು, ಅಲ್ಲೇ ಇದ್ದ ಅಪ್ಪಾಜಿ ಹೆಗಲ ಮೇಲೆ ಬಲಗೈ ಊರಿ ಎಡಗೈಯ್ಯನ್ನು ಸುರೇಶಗೌಡನ ಭುಜಕ್ಕೆ ಹಾಕಿಕೊಂಡು ನಾಗಮಂಗಲದ ಕಡೆ ನಡೆದೇಬಿಟ್ಟರಂತಲ್ಲಾ. ನಾಗಮಂಗಲದಲ್ಲಿ ಗೌಡರನ್ನು ನೋಡಿದ ಗತಕಾಲದ ಜನ “ಅಬ್ಬಾಬ್ಬಾ ಸೇಡು ಅಂದರೆ ಇದು, ತೊಂಭತ್ತೆರಡು ವರ್ಷವಾಗಿದ್ದರೂ ಐವತ್ತು ವರ್ಷದ ವೈರಿಯನ್ನು ಹೊಡೆದುರುಳಿಸಲು ಬಂದು ನಿಂತಿರುವ ಗೌಡರ ಛಲ ಸಾಮಾನ್ಯವೇ ಅಂದರಂತಲ್ಲಾ. ಮನುಷ್ಯನಿಗೆ ವಯಸ್ಸಾದಂತೆ ದ್ವೇಷ ಅಸೂಯೆಗಳು ಕಡಿಮೆಯಾಗುತ್ತದಂತೆ, ಆದರೆ ನಮ್ಮ ಗೌಡರನ್ನ ನೋಡಿದರೆ ಆ ಮಾತು ಸುಳ್ಳಾಗಿ ಕಾಣುತ್ತಿದೆಯಲ್ಲಾ ಎಂದು ಉದ್ಘಾರ ತೆಗೆದರಂತಲ್ಲಾ, ಥೂತ್ತೇರಿ.

ಇದನ್ನೂ ಓದಿ: ಎಲೆಕ್ಷನ್ ಬಂದಾಕ್ಷಣ ಪಾರ್ಟಿನೇ ತಾಯಿ ಅಂತಾರೆ; ದೇಶನೇ ಮರ್ತೋಗ್ತಾರಲ್ಲಾ!

ನಾಗಮಂಗಲದಲ್ಲಿ ಕಾಣಿಸಿಕೊಂಡ ಗೌಡರು, “ಬರಗಾಲವೆಂಬ ಭೀಕರತೆಗೆ ಸಿಕ್ಕಿ ಗುಳೆ ಹೋಗುತ್ತಿದ್ದ ನಾಗಮಂಗಲದ ಜನ ನೋಡಲಾಗದೆ ನಾನು ಈ ತಾಲೂಕಿಗೆ ಹೇಮಾವತಿ ಹರಿಸಿದೆ; ಅಂದಿನಿಂದ ಜನ ಅನ್ನ ಉಣ್ಣುತ್ತಿದ್ದಾರೆ” ಎಂದು ಹಸಿಸುಳ್ಳು ಹೇಳಿ ಜನರನ್ನು ದಂಗು ಬಡಿಸಿದರಲ್ಲಾ. ನಾಗಮಂಗಲದ ಜನರ ಅಭಿಪ್ರಾಯದಂತೆ ಅಂದು ಸಂಸ್ಥಾ ಕಾಂಗ್ರೆಸ್ಸಿನ ಶಾಸಕರಾಗಿದ್ದ ಎಚ್.ಟಿ.ಕೃಷ್ಣಪ್ಪನವರನ್ನ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸು ಪಾರ್ಟಿಗೆ ಕರೆದಾಗ, ಅವರು “ನನ್ನ ನಾಗಮಂಗಲ ತಾಲೂಕಿಗೆ ಹೇಮಾವತಿ ನೀರು ಕೊಡುವುದಾದರೆ ನಿಮ್ಮ ಪಾರ್ಟಿಗೆ ಬರುತ್ತೇನೆ” ಎಂದರು. ಕೂಡಲೇ ಇಂಜಿನಿಯರ್ ಕರೆದ ಅರಸು ನಾಗಮಂಗಲಕ್ಕೆ ಸಾಧ್ಯವಾದಷ್ಟು ಹೇಮಾವತಿ ನೀರು ಹರಿಸಿ ಎಂದು ಹೇಳಿ ಕೃಷ್ಣಪ್ಪನವರನ್ನು ತಮ್ಮ ಪಾರ್ಟಿಗೆ ಸೇರಿಸಿಕೊಂಡರು. ಇದು ಇತಿಹಾಸದಲ್ಲಿ ದಾಖಲಾಗಿರುವ ಸತ್ಯ. ಆದರೆ ದೇವೇಗೌಡರು ತುಮಕೂರಿಗಾಗಲಿ, ನಾಗಮಂಗಲಕ್ಕಾಗಲಿ ಹೇಮಾವತಿ ಹರಿಸಲಿಲ್ಲ. ಅವರು ಮುಖ್ಯಮಂತ್ರಿಯಾಗಿದದ್ದು ಕೇವಲ ಹದಿನೆಂಟು ತಿಂಗಳು. ಸೇಡಿಗಾಗಿ ಸುಳ್ಳು ಹೇಳಬಾರದು. ಸತ್ಯ ಸಂಗತಿಯ ಅರಿವಿರುವ ಜನರು ನಗಾಡಬಹುದೆಂಬ ಎಚ್ಚರ ಗೌಡರಲ್ಲಿ ಕಾಣಲಿಲ್ಲವಂತಲ್ಲಾ, ಥೂತ್ತೇರಿ.

******

ಇತ್ತ ಬಿಜೆಪಿ ಅಜೆಂಡಾಗಳು ಒಂದೊಂದೇ ಅನಾವರಣಗೊಂಡು ಜನತೆ ಬೆಚ್ಚಿ ಬೀಳುವಂತಾಗಿದೆಯಲ್ಲಾ. ಎರಡು ದಶಕದ ಹಿಂದೆ ತಯಾರಾದ ಬಿಜೆಪಿ ಅಜೆಂಡಾದ ಮುಖ್ಯಾಂಶಗಳ ಸಂಖ್ಯೆ 25. ಅವುಗಳಲ್ಲಿ ಈಗಾಗಲೇ ಕೆಲವು ಜಾರಿಯಾಗಿವೆ. ಒಂದೆರಡನ್ನು ಮಾತ್ರ ಉಲ್ಲೇಖಿಸುವುದಾದರೆ, ಮಸೀದಿ ಕೆಡವಿ ಈ ದೇಶದಲ್ಲಿ ಕೋಮು ಸಾಮರಸ್ಯ ಕದಡಲಾಗಿದೆ. ರಾಮಮಂದಿರ ಕಟ್ಟಲಾಗಿದೆ. ಹಾಗೆಯೇ ರಾಮಮಂದಿರಗಳನ್ನ ದೇಶದ ಎಲ್ಲಾ ರಾಜ್ಯಗಳಲ್ಲಿ ನಿರ್ಮಿಸಲಾಗುತ್ತದೆ. ನಂತರ ಜಿಲ್ಲೆಗಳಲ್ಲಿ ನಿರ್ಮಾಣ ಮಾಡಲಾಗುತ್ತದೆ. ಇದರ ಸೂಚನೆ ಅಶ್ವತ್ಥನಾರಾಯಣ ಎಂಬುವವರ ಬಾಯಿಂದ ಬಂದಿದೆ. ಆ ಪ್ರಕಾರ ರಾಮನಗರಕ್ಕೂ ರಾಮಮಂದಿರ ಬರಲಿದೆ. ಹೀಗೆ ವ್ಯಾಪಕವಾಗಿ ಹರಡುವ ರಾಮಮಂದಿರಗಳ ಮುಖಾಂತರ ಆಡಳಿತ ನಡೆಯಲಿದೆ. ಪೂಜಾರಿಗಳು ಎರಡೆರೆಡು ಶಿಫ್ಟ್‌ನಂತೆ ಕೆಲಸ ನಿರ್ವಹಿಸಲಿದ್ದಾರೆ. ಪ್ರಧಾನ ಅರ್ಚಕರ ಕೆಳಗೆ ಸರಕಾರದ ಕರ್ಮಚಾರಿಗಳು ಬರುತ್ತಾರೆ, ಸರಕಾರಿ ಯಂತ್ರದಲ್ಲಿ ಯಾವ ಶೂದ್ರನು ಇರುವುದಿಲ್ಲ. ಬ್ರಾಹ್ಮಣರೇ ತುಂಬಿಕೊಂಡ ರಾಮಮಂದಿರದ ಆಡಳಿತದ ದೆಸೆಯಿಂದ ರಾಮರಾಜ್ಯ ಸ್ಥಾಪನೆಯಾಗಲಿದೆಯಂತಲ್ಲಾ, ಥೂತ್ತೇರಿ.

******

ಬಿಜೆಪಿಗಳ ಅಧಿಕೃತ ಘೋಷಣೆಯಂತಲೇ, “ನೀವು ಬಂದರೆ ಜೊತೆಯಾಗಿ, ಬಾರದಿದ್ದರೆ ನಿಮ್ಮನ್ನ ಬಿಟ್ಟು, ಅಡ್ಡಿಪಡಿಸಿದರೆ ಹತ್ತಿಕ್ಕಿ ನಾವು ರಾಮರಾಜ್ಯ ಸ್ಥಾಪನೆ ಮಾಡಿಯೇ ಮಾಡುತ್ತೇವೆ” ಎಂಬುದು ಈಗಾಗಲೇ ಜಾರಿಯಾಗಿದೆಯಂತಲ್ಲಾ. “ನೀವು ಬಾರದಿದ್ದರೆ, ನಿಮ್ಮನ್ನ ಬಿಟ್ಟೇ ನಾವು ರಾಮರಾಜ್ಯ ಕಟ್ಟುತ್ತೇವೆ” ಎಂಬುದು ಎಡೂರಪ್ಪ, ಈಶ್ವರಪ್ಪ, ಜಗದೀಶ್ ಶೆಟ್ಟರ್ ವಿಷಯದಲ್ಲಿ ನಿಜವಾಗಿದೆಯಲ್ಲಾ. ಈ ಬಗ್ಗೆ ಬಿಜೆಪಿ ಬುದ್ದಿಜೀವಿ ಮಂಜನನ್ನ ಕೇಳಿದರೆ ನೋಡಿ ಅದ್ವಾನಿಗಿಂತ ಇವರಾರೂ ದೊಡ್ಡವರಲ್ಲಾ, ಅದ್ವಾನಿ ಬಾಬ್ರಿ ಮಸೀದಿ ಕೆಡವಿಸಿದ ಲೀಡ್ರು, ಅದಕ್ಕೂ ಮೊದಲು ರಾಮನನ್ನ ರಸ್ತೆಗೆ ತಂದು ಮೆರವಣಿಗೆ ಮಾಡಿದರು. ನಂತರ ಇಟ್ಟಿಗೆ ಮೆರವಣಿಗೆ ಮಾಡಿದರು, ರಾಮ ಪಾದುಕ ಮೆರವಣಿಗೆ ಮಾಡಿದರು, ಜ್ಯೋತಿ ಮೆರವಣಿಗೆ ಮಾಡಿದರು, ಈ ದೇಶದಲ್ಲಿ ಬಿಜೆಪಿ ಆವರಿಸಿಕೊಳ್ಳುವಂತೆ ಮಾಡಿದರು. ಆದರೆ ಜಿನ್ನಾ ಸೆಕ್ಯುಲರಾಗಿದ್ದ ಅನ್ನ ಮಾತಿಗೆ ಅದ್ವಾನಿಯನ್ನೇ ಆಚೆಗೆ ಎಸೆದ ಬಿಜೆಪಿಗೆ ಈಶ್ವರ, ಎಡೂರಪ್ಪ, ಶೆಟ್ಟರ್ ಯಾವ ಲೆಕ್ಕಾರಿ. ಅಂಗೇ ನೋಡ್ತಾಯಿರಿ “ಬಿಜೆಪಿನ ಇನ್ನೂ ಹ್ಯಂಗೆ ಚೊಕ್ಕ ಮಾಡ್ತಿವಿ” ಅಂತ ಜಾರುತ್ತಿದ್ದ ಖಾಕಿ ಚೆಡ್ಡಿಯನ್ನ ಮೇಲೆಳೆದುಕೊಂಡು ಹೋದನಲ್ಲಾ, ಥೂತ್ತೇರಿ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

‘ಬೀಬಿ ನೀನು ಅಡಗಿಕೊಳ್ಳಲು ಸಾಧ್ಯವಿಲ್ಲ’: ವಾಷಿಂಗ್ಟನ್‌ ಗೆ ಭೇಟಿ ನೀಡಿದ ನೆತನ್ಯಾಹು ವಿರುದ್ಧ ಜನಾಕ್ರೋಶ: ಐಸಿಸಿ ವಾರಂಟ್ ನಿರ್ಲಕ್ಷಿಸಿ ಟ್ರಂಪ್ ಆತಿಥ್ಯ

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ಮಾತುಕತೆಗಾಗಿ ವಾಷಿಂಗ್ಟನ್ ಡಿಸಿಗೆ ಭೇಟಿ ನೀಡುತ್ತಿದ್ದಂತೆಯೇ, ರಾಜಧಾನಿಯಾದ್ಯಂತ ಅವರ ವಿರುದ್ಧ ಕಟು ಆಕ್ರೋಶ ಮತ್ತು ಪ್ರತಿಭಟನೆಗಳ ಕಾವು ತೀವ್ರಗೊಂಡಿದೆ. ಅಂತರರಾಷ್ಟ್ರೀಯ...

SIR: ಕರ್ನಾಟಕದಲ್ಲಿ 43 ಲಕ್ಷಕ್ಕೂ ಹೆಚ್ಚು ಜನರಿಂದ ಸಿಗದ ಸಹಿ ಮಾಡಿದ ನಮೂನೆ; ಕರಡು ಪಟ್ಟಿಯಿಂದ ಹೆಸರು ಕೈಬಿಡುವ ಭೀತಿ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಪ್ರಮುಖ ಮೈಲಿಗಲ್ಲುಗಳನ್ನು ತಲುಪಿದ್ದು, ರಾಜ್ಯಾದ್ಯಂತ ಶೇಕಡಾ 77ರಷ್ಟು ಗಣತಿ ನಮೂನೆಗಳು ಡಿಜಿಟಲೀಕರಣಗೊಂಡಿವೆ. ಆದಾಗ್ಯೂ, ರಾಜ್ಯದ 43.24 ಲಕ್ಷಕ್ಕೂ ಹೆಚ್ಚು ಮತದಾರರು...

ನೀಟ್‌ ಪ್ರತಿಭಟನೆಯಲ್ಲಿ ಉಮರ್ ಖಾಲಿದ್‌ಗೆ ಬೆಂಬಲ; ಸಂಘಟಕರನ್ನು ವಿಚಾರಣೆಗೆ ಒಳಪಡಿಸಿದ ಗೋವಾ ಪೊಲೀಸರು

ಗೋವಾದ ಪಣಜಿಯಲ್ಲಿ ನಡೆದ ನೀಟ್-ಯುಜಿ ಪ್ರತಿಭಟನೆಯಲ್ಲಿ ಉಮರ್ ಖಾಲಿದ್ ಪರ ಘೋಷಣೆಗಳನ್ನು ಕೂಗಿದ ಕೆಲವು ವಿದ್ಯಾರ್ಥಿಗಳ ಪ್ರತಿಭಟನೆ ಹಿಂದಿನ ಹಣಕಾಸು ಮತ್ತು ಉದ್ದೇಶದ ಬಗ್ಗೆ ಗೋವಾ ಪೊಲೀಸರು ಸಂಘಟಕರನ್ನು ವಿಚಾರಣೆಗೆ ಒಳಪಡಿಸಿದ್ದಾರೆ ಎಂದು...

ಅಸ್ಸಾಂ ಪ್ರವಾಹದ ಭೀಕರತೆ: 78 ಬಲಿ, 3 ಲಕ್ಷ ಜನರ ಬದುಕು ಸಂಕಷ್ಟಕ್ಕೆ: ವ್ಯವಸ್ಥೆಯ ವೈಫಲ್ಯಕ್ಕೆ ಬೆಲೆ ತೆತ್ತುತ್ತಿರುವ ನಾಗರಿಕರು

ಈಶಾನ್ಯ ಭಾರತದ ಗೇಟ್‌ವೇ ಎಂದೇ ಕರೆಯಲ್ಪಡುವ ಅಸ್ಸಾಂನಲ್ಲಿ ಪ್ರವಾಹದ ಅಟ್ಟಹಾಸ ಮುಂದುವರಿದಿದ್ದು, ಸಾವಿನ ಸಂಖ್ಯೆ 78ಕ್ಕೆ ಏರಿಕೆಯಾಗಿದೆ. ಇತ್ತೀಚಿನ ಅಧಿಕೃತ ವರದಿಗಳ ಪ್ರಕಾರ, ಶಿವಸಾಗರ್ ಜಿಲ್ಲೆಯಲ್ಲಿ ಇಬ್ಬರು ಹಾಗೂ ಗೋಲಾಘಾಟ್‌ನಲ್ಲಿ ಒಬ್ಬರು ನೀರಿನಲ್ಲಿ...

ನೀಟ್ ಪ್ರತಿಭಟನೆಯಲ್ಲಿ ಪೆಲೆಟ್ ಗನ್ ಬಳಕೆ ಆರೋಪ; RAF ಮದ್ದುಗುಂಡುಗಳ ದಾಖಲೆ ಕೇಳಿದ ಸುಪ್ರೀಂ ಕೋರ್ಟ್

ನೀಟ್-ಯುಜಿ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆಯ ಸಂದರ್ಭದಲ್ಲಿ ಜಂತರ್ ಮಂತರ್‌ನಲ್ಲಿ ನಿಯೋಜಿಸಲಾಗಿದ್ದ ಕ್ಷಿಪ್ರ ಕಾರ್ಯ ಪಡೆ (RAF) ಯ ಮದ್ದುಗುಂಡುಗಳ ದಾಖಲೆಯನ್ನು ಸಂರಕ್ಷಿಸುವಂತೆ ಸುಪ್ರೀಂ ಕೋರ್ಟ್ ಗುರುವಾರ (ಜುಲೈ...

ಕ್ರಿಸ್ತನಿಗಿಂತ ಮೊದಲೇ ಇಲ್ಲಿದ್ದೇವೆ..ನಮಗೆ ಯಾವುದೇ ದಾಖಲೆಗಳು ಬೇಡ : ಎಸ್‌ಐಆರ್ ತಿರಸ್ಕರಿಸಿದ ಜಾರ್ಖಂಡ್‌ನ ಆದಿವಾಸಿಗಳು

ಜಾರ್ಖಂಡ್‌ನ ಖುಂತಿ ಜಿಲ್ಲೆಯ ದಟ್ಟ ಅರಣ್ಯ ಭಾಗದಲ್ಲಿ ವಾಸಿಸುವ ಮುಂಡಾ ಬುಡಕಟ್ಟು ಸಮುದಾಯದ ಒಂದು ವರ್ಗವು ಚುನಾವಣಾ ಆಯೋಗದ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯನ್ನು ತೀವ್ರವಾಗಿ ವಿರೋಧಿಸಿದ್ದು, ಆಧುನಿಕ...

NICE ನಲ್ಲಿ ಯೋಜನೆಯಲ್ಲಿ ‘ನೈಸ್’ ಎನ್ನುವಂತಹದ್ದು ಏನೂ ಇಲ್ಲ: ರಾಜ್ಯದ ಅತಿದೊಡ್ಡ ಹಗರಣ ಎಂದ ಹೈಕೋರ್ಟ್

ಬೆಂಗಳೂರು-ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆ (ಬಿಎಂಐಸಿಪಿ) ಅಥವಾ 'ನೈಸ್' ಯೋಜನೆ ಕರ್ನಾಟಕದ ಇತಿಹಾಸದಲ್ಲೇ ಅತ್ಯಂತ ದೊಡ್ಡ ಹಗರಣಗಳಲ್ಲಿ ಒಂದಾಗಿ ಕಾಣಿಸುತ್ತಿದೆ ಎಂದು ಕರ್ನಾಟಕ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ನಂದಿ ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್...

ಪ್ರತಿಭಟನೆಗೆ ಹೋಗುವ ಮಹಿಳೆಯರು ಗ್ಯಾಂಗ್‌ರೇಪ್‌ ಆನಂದಿಸುತ್ತಾರೆ ಎಂದಿದ್ದ ಟಿ.ಜಿ. ಮೋಹನ್‌ದಾಸ್‌ ವಿರುದ್ಧ ಎಫ್‌ಐಆರ್‌ ದಾಖಲು

ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸುತ್ತಿರುವವರ ಮೇಲೆ, ನನ್ನ ಕೈಯಲ್ಲಿ ಅಧಿಕಾರವಿದ್ದರೆ ಗುಂಡು ಹಾರಿಸುತ್ತಿದ್ದೆ ಎಂದು ಇತ್ತೀಚಿನ ಯೂಟ್ಯೂಬ್ ವೀಡಿಯೊದಲ್ಲಿ ಹೇಳಿಕೆ ನೀಡಿದ್ದ ಹಿಂದುತ್ವವಾದಿ ಚಿಂತಕ ಟಿ.ಜಿ. ಮೋಹನ್‌ದಾಸ್ ವಿರುದ್ಧ ತಿರುವನಂತಪುರಂ ಸಿಟಿ...

ಫ್ರಾನ್ಸ್‌ನಲ್ಲಿ ಕೆಲಸದ ಸಮಯ ಟ್ರ್ಯಾಕಿಂಗ್ ಲೋಪ: ಇನ್ಫೋಸಿಸ್‌ಗೆ ₹1.9 ಕೋಟಿ ದಂಡ: ನಾರಾಯಣಮೂರ್ತಿಯವರ ‘70 ಗಂಟೆ ಶ್ರಮ’ದ ಮಾದರಿ ಟ್ರೋಲ್

ಭಾರತೀಯ ಐಟಿ ರಫ್ತು ಸೇವಾ ರಂಗದ ಬೃಹತ್ ಸಂಸ್ಥೆಯಾದ ಇನ್ಫೋಸಿಸ್‌ಗೆ ಫ್ರಾನ್ಸ್‌ನಲ್ಲಿ ಹಿನ್ನಡೆಯಾಗಿದೆ. ಉದ್ಯೋಗಿಗಳ ಕೆಲಸದ ಸಮಯವನ್ನು ದಾಖಲಿಸುವ ವ್ಯವಸ್ಥೆಯಲ್ಲಿನ ನ್ಯೂನತೆಗಳು ಹಾಗೂ ಸ್ಥಳೀಯ ಕಾರ್ಮಿಕ ನಿಯಮಾವಳಿಗಳ ಪಾಲನೆಯಲ್ಲಿ ಕಂಡುಬಂದ ಲೋಪಗಳ ಹಿನ್ನೆಲೆಯಲ್ಲಿ...

ವೋಟರ್ ಐಡಿ, ಬ್ಯಾಂಕ್ ಪಾಸ್‌ಬುಕ್, ಆಧಾರ್, ಜಮೀನಿನ ಹಕ್ಕು ಪತ್ರ ಇದ್ದ ಮಾತ್ರಕ್ಕೆ ಭಾರತೀಯ ಪ್ರಜೆಯಾಗಲ್ಲ: ಕಲ್ಕತ್ತಾ ಹೈಕೋರ್ಟ್

ಆಧಾರ್ ಕಾರ್ಡ್, ಪಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ಬ್ಯಾಂಕ್ ಪಾಸ್‌ಬುಕ್ ಮತ್ತು ಪಿತ್ರಾರ್ಜಿತ ಜಮೀನಿನ ದಾಖಲೆಗಳು ಭಾರತೀಯ ಪೌರತ್ವವನ್ನು ನಿರೂಪಿಸಲು ಅಂತಿಮ ಅಥವಾ ನಿರ್ಣಾಯಕ ಪುರಾವೆಗಳಲ್ಲ ಎಂದು ಕಲ್ಕತ್ತಾ ಹೈಕೋರ್ಟ್ ಮಹತ್ವದ...