Homeಮುಖಪುಟಪ್ರೊ. ಆನಂದ ತೇಲ್ತುಂಬ್ಡೆಯವರ ಬಂಧನ ವಿರೋದಿಸಿ ಸಹಿ ಸಂಗ್ರಹ ಅಭಿಯಾನ

ಪ್ರೊ. ಆನಂದ ತೇಲ್ತುಂಬ್ಡೆಯವರ ಬಂಧನ ವಿರೋದಿಸಿ ಸಹಿ ಸಂಗ್ರಹ ಅಭಿಯಾನ

- Advertisement -
- Advertisement -

ಪ್ರೊ. ಆನಂದ ತೇಲ್ತುಂಬ್ಡೆಯವರ ಮೇಲೆ ಸುಳ್ಳು ಅಪಾದನೆಗಳನ್ನು ಹೊರಿಸಿ ಬಂದಿಸುವುದನ್ನು ವಿರೋದಿಸಿ ಹಾಗೂ ಅವರ ಮೇಲಿನ ಸುಳ್ಳು ಆರೋಪಗಳನ್ನು ಕೈ ಬಿಡುವಂತೆ ಶಿಕ್ಷಣ ಹಕ್ಕಿಗಾಗಿ ಅಖಿಲ ಭಾರತ ವೇದಿಕೆ(ಎಐಎಫ್‌ಆರ್‌ಟಿಇ) ಅಭಿಯಾನ ಪ್ರಾರಂಭಿಸಿದೆ.

ಶಿಕ್ಷಣ ಹಕ್ಕಿಗಾಗಿ ಅಖಿಲ ಭಾರತ ವೇದಿಕೆಯು ಆನ್ ಲೈನ್ ಅರ್ಜಿಯನ್ನು ಸಹಿ ಮಾಡಲು ಕೋರಿದೆ. ಸರಕಾರವು  ಸುಳ್ಳು ಪ್ರಕರಣಗಳನ್ನು ಸೃಷ್ಟಿಸಿ ತೇಲ್ತುಂಬ್ಡೆಯವರು ಮುಂಬೈನ ಎನ್ ಐಎ ಕೋರ್ಟ್ ನ ಮುಂದೆ 6, ಎಪ್ರಿಲ್ 2020ರಂದು ಶರಣಾಗಬೇಕೆಂದು ಸೂಚಿಸಿದೆ ಎಂದು ವೇದಿಕೆ ಆರೋಪಿಸಿದೆ.

ಅರ್ಜಿಗೆ ಸಹಿ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಹಿರಿಯ ಪ್ರಾದ್ಯಾಪಕರಾಗಿರುವ ಆನಂದ ತೇಲ್ತುಂಬ್ಡೆ ಅವರ ನಿರೀಕ್ಷಣಾ ಜಾಮೀನನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿರುವುದು ಭಾರೀ ಅಘಾತ ಉಂಟು ಮಾಡಿದೆ ಎಂದಿರುವ ಎಐಎಫ್‌ಆರ್‌ಟಿಇ, ಜಾತಿ-ವರ್ಗ ಮತ್ತು ಸಾರ್ವಜನಿಕ ನೀತಿಗಳಿಗೆ ಸಂಬಂದಿಸಿದಂತೆ ಅತ್ಯಂತ ಮಹತ್ವದ ಚಿಂತಕರಾದ ಆನಂದ ತೇಲ್ತುಂಬ್ಡೆ ಅವರು ಪ್ರಜಾಪ್ರಭುತ್ವ ಮತ್ತು ಶಿಕ್ಷಣ ಹಕ್ಕುಗಳ ಪರವಾದ ಹೋರಾಟಗಾರರಾಗಿದ್ದಾರೆ ಎಂದಿದೆ.

ನಿಷೇದಿತ ಮಾವೋವಾದಿ ಸಂಘಟನೆಗಳೊಂದಿಗೆ ಸಂಬಂದ ಹೊಂದಿದ್ದಾರೆ ಎಂದು ಆರೋಪಿಸಿ ’ಕಾನೂನುಬಾಹಿರ ಚಟುವಟಿಕೆಗಳ ನಿಗ್ರಹ ಕಾಯಿದೆ” (ಯುಎಪಿಎ) ಯಂತಹ ಕರಾಳ ಶಾಸನವನ್ನು ಬಳಸಿಕೊಂಡು ಅವರ ವಿರುದ್ದ ಪ್ರಕರಣವನ್ನು ದಾಖಲಿಸಲಾಗಿದೆ. ೨೦೧೮ರಲ್ಲಿ ಭೀಮ್ – ಕೊರೆಗಾಂನಲ್ಲಿ ದಲಿತ ಸಂಘಟನೆಗಳು ಹಮ್ಮಿಕೊಂಡ ಪೇಶ್ವಾಗಳ ವಿರುದ್ದದ ಯುದ್ದದಲ್ಲಿ ಜಯ ಗಳಿಸಿದ ೨೦೦ನೆ ವರ್ಷದ ಆಚರಣೆಯ ಸಂದರ್ಭದಲ್ಲಿ ನಡೆದ ಹಿಂಸಾಚಾರವನ್ನು ಬಳಸಿಕೊಂಡ ಬಿಜೆಪಿ / ಆರೆಸ್ಸಸ್ ನೇತೃತ್ವದ ಎನ್ ಡಿಎ ಮೈತ್ರಿಕೂಟದ ಕೇಂದ್ರ ಸರಕಾರವು ಮಾನವ ಹಕ್ಕುಗಳ ಹೋರಾಟಗಾರರು, ನಾಗರಿಕ ಹಕ್ಕುಗಳ ಹೋರಾಟಗಾರರನ್ನು ಗುರಿಯಾಗಿಸಿಕೊಂಡಿದೆ ಎಂದು ಎಐಎಫ್‌ಆರ್‌ಟಿಇ ಹೇಳಿದೆ.

ಜನವರಿ 1, 2018 ರಂದು ನಡೆದ ಘಟನೆಯೂ ವಿಡಿಯೋಗಳಲ್ಲಿ ಚಿತ್ರೀಕರಣಗೊಂಡಿದೆ, ವಾಟ್ಸಾಪ್‌ಗಳಾದ್ಯಂತ ಪ್ರಸಾರವಾಗಿದೆ. ಅನೇಕರು ಗಾಯಗೊಂಡು, ಹಲವರ ವಾಹನಗಳು ಜಖಂಗೊಂಡವು. ಈ ಗಲಭೆಗಳನ್ನು ಪ್ರಚೋದಿಸಿದ ಸಮಸ್ಥ ಹಿಂದುತ್ವ ಅಗಾಡಿಯ ಮಿಲಿಂದ್ ಏಕಬೋಟೆ ಮತ್ತು ಶಿವ ಚತ್ರಪತಿ ಪ್ರತಿಷ್ಟಾನದ ಸಾಂಬಾಂಜಿ ಭಿಡೆಯವರು ಜಾಮೀನಿನ ಮೇಲೆ ಹೊರ ಬಂದಿದ್ದರು ಮತ್ತು ಇವರ ವಿರುದ್ದ ಅಪೀಲು ಸಲ್ಲಿಸಲಿರಲಿಲ್ಲ. ಇವರಿಬ್ಬರನ್ನು ರಕ್ಷಿಸಲು ಹಿಂದಿನ ದಿನ ಪುಣೆಯಲ್ಲಿ ಹಮ್ಮಿಕೊಳ್ಳಲಾದ ಎಲ್ಗಾರ್ ಪರಿಷದ್ ನಲ್ಲಿ ಮಾತನಾಡಿದ ಭಾಷಣಕಾರರು ಈ ಗಲಭೆಗೆ ಕಾರಣ ಎಂದು ಪುಣೆ ಪೋಲೀಸರು ’ಪಿತೂರಿ ಕಟ್ಟುಕತೆ’ಯನ್ನು ತೇಲಿ ಬಿಟ್ಟರು ಎಂದು ಎಐಎಫ್‌ಆರ್‌ಟಿಇ ಆರೋಪಿಸಿದೆ.

ಅರ್ಜಿಗೆ ಸಹಿ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಜಸ್ಟೀಸ್ ಕೋಲ್ಸೆ-ಪಾಟೀಲ್ ಮತ್ತು ಪಿ.ಬಿ.ಸಾವಂತ್ ಅವರು ಈ ಸಮಾವೇಶವನ್ನು ಸಂಘಟಿಸಿದ್ದರು. ಆದರೆ ಸಂಘಟಕರಿಗೂ ಮತ್ತು ನಿಷೇದಿತ ಮಾವೋವಾದಿಗಳಿಗೂ ಸಂಬಂದವಿರುವುದಕ್ಕೆ ನಮ್ಮ ಬಳಿ ಸಾಕ್ಷಿ ಇದೆ ಎಂದು ಪೋಲೀಸರು ವಾದಿಸಿ, ನಂತರ ಜೂನ್ ೨೦೧೮ರಿಂದ ಮಾನವ ಹಕ್ಕುಗಳ ಹೋರಾಟಗಾರರು, ನ್ಯಾಯವಾದಿಗಳನ್ನು ಮಾವೋವಾದಿಗಳ ಪರ ಒಲವುಳ್ಳವರು ಎಂದು ಆರೋಪಿಸಿ ಮತ್ತು ಇವರ ವಿರುದ್ದ ಕರಾಳ ’ಯುಎಪಿಎ’ ಶಾಸನ ಆಡಿಯಲ್ಲಿ ಬಂದಿಸಿದರು ಮತ್ತು ಇವರೆಲ್ಲಾ ಇಂದಿಗೂ ಬಂದನದಲ್ಲಿದ್ದಾರೆ ಎಂದಿದೆ.

ಫೆಬ್ರವರಿ ೨೦೧೯ರಲ್ಲಿ ಸಲ್ಲಿಸಲಾದ ಪೂರಕ ಚಾರ್ಜ್ ಶೀಟ್ ನಲ್ಲಿ ಪ್ರೊ. ಆನಂದ ತೇಲ್ತುಂಬ್ಡೆ ಅವರ ಹೆಸರನ್ನು ಸೇರಿಸಲಾಯಿತು. ಆದರೆ ತೇಲ್ತುಂಬ್ಡೆಯವರು ಎಲ್ಗಾರ್ ಪರಿಷದ್ ನ ಸಮಾವೇಶದಲ್ಲಿ ಭಾಗವಹಿಸಿರಲಿಲ್ಲ. ಆದರೆ ಈ ಮೊದಲು ಬಂದಿಸಿದ್ದವರ ಕಂಪ್ಯೂಟರ್ ನಲ್ಲಿ ಒಂದು ಪತ್ರವನ್ನು ಉಲ್ಲೇಖಿಸಿ ತೇಲ್ತುಂಬ್ಡೆಯವರ ವಿರುದ್ದ ಅದನ್ನೇ ಸಾಕ್ಷಿಯಾಗಿ ಮುಂದಿಟ್ಟರು. ಕಂಪ್ಯೂಟರ್ ನ ಹಾರ್ಡ್ ಡಿಸ್ಕ್ ಅನ್ನು ಪರೀಕ್ಷಿಸಿದ ಸೈಬರ್ ಫೋರೆನ್ಸಿಕ್ ಪರಿಣಿತರು ಅಲ್ಲಿ malware ಇರುವುದನ್ನು ತೋರಿಸಿ, ಇದು ದೂರದಿಂದಲೆ ಕಂಪ್ಯೂಟರ್ ಅನ್ನು ಅಕ್ರಮವಾಗಿ ಬಳಸಿಕೊಳ್ಳುವುದಕ್ಕೆ ಅನುಮತಿಸುತ್ತದೆ ಎಂದು ವಿವರಿಸಿದರು. ಆದರೆ ಮುಂಚೂಣಿ ತಂತ್ರಜ್ನಾನದ ಪರಿಣಿತರಾಗಿ ಪ್ರೊ. ತೇಲ್ತುಂಬ್ಡೆ ಯವರ ವೃತ್ತಿಪರ ಸಾಧನೆಗಳು ಇಂದಿಗೂ ಮುಖ್ಯವಾಗಿವೆ. ಭಾರತದಲ್ಲಿ ಮಾಹಿತಿ ತಂತ್ರಜ್ನಾವನ್ನು ಅಬಿವೃದ್ದಿಪಡಿಸಿದ ೨೦ ವೃತ್ತಿಪರರ ಪಟ್ಟಿಯಲ್ಲಿ ತೇಲ್ತುಂಬ್ಡೆಯವರೂ ಒಬ್ಬರು ಮತ್ತು ಇದನ್ನು ಡಾಟಾಕ್ವೆಸ್ಟ್ ಸಂಸ್ಥೆಯು ಸತತ ಮೂರು ವರ್ಷಗಳ ಕಾಲ ಮೌಲ್ಯಮಾಪನ ಮಾಡುತ್ತ ಬಂದಿದೆ ಎಂದು ಎಐಎಫ್‌ಆರ್‌ಟಿಇ ತನ್ನಅರ್ಜಿಯಲ್ಲಿ ಹೇಳಿದೆ.

ತೈಲ ಮತ್ತು ಅನಿಲ ವಲಯಗಳಲ್ಲಿ ಮೂರು ದಶಕಗಳ ಕಾಲ ನಿರಂತರವಾಗಿ ಸಂಶೋದನೆ ನಡೆಸಿಕೊಂಡು ಬಂದ ಮತ್ತು ಹೊಸದಾದ ಅವಿಷ್ಕಾರಗಳನ್ನು ಮಾಡಿದ, ವಿನ್ಯಾಸಗಳನ್ನು ರೂಪಿಸಿದ ತೇಲ್ತುಂಬ್ಡೆಯವರು ಗೌರವಾನ್ವಿತ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ ಎಂದಿರುವ ಎಐಎಫ್‌ಆರ್‌ಟಿಇ ಇದೆ ಕಂಪನಿಯಲ್ಲಿ ಸಿಇಓ ಆಗಿದ್ದ ತೇಲ್ತುಂಬ್ಡೆಯವರು ಉಪಾಂಗ ಸಂಸ್ಥೆಗಳಲ್ಲಿ ಸತತವಾಗಿ ಏಳು ವರ್ಷಗಳ ಕಾಲ ಸದಸ್ಯರಾಗಿದ್ದರು ಎಂದಿದೆ.

ಅರ್ಜಿಗೆ ಸಹಿ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಮಹಾರಾಷ್ಟ್ರದ ಯವತ್ಮಾಲ್ ಜಿಲ್ಲೆಯ ಭೂರಹಿತ ಕೂಲಿ ಕಾರ್ಮಿಕರ ಕುಟುಂಬದಲ್ಲಿ ಜನಿಸಿದ ಆನಂದ್ ತೇಲ್ತುಂಬ್ಡೆಯವರು ಶೋಷಿತರು ಮತ್ತು ದಮನಿತರ ಪರವಾಗಿ ಹೋರಾಡುತ್ತಾ ಬಂದಿದ್ದಾರೆ, ಮಾನವ ಹಕ್ಕುಗಳ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದಾರೆ ಸಾಮಾಜಿಕ ನ್ಯಾಯದ ಪರವಾಗಿ ಅತ್ಯಂತ ಪ್ರಮುಖ ಚಿಂತಕರು. ಅವರು ಬಾಬಾಸಾಹೇಬ್ ಬಿ.ಆರ್. ಅಂಬೇಡ್ಕರ್ ಅವರ ಮೊಮ್ಮಗಳನ್ನು ಮದುವೆಯಾಗಿದ್ದಾರೆ.

’ಎಐಎಫ್‌ಆರ್‌ಟಿಇ’ ಸಂಘಟನೆಯ ಮುಂದಾಳತ್ವದಲ್ಲಿರುವ, ಕಳೆದ ಹತ್ತು ವರ್ಷಗಳಿಂದ ಅದರ ಪ್ರಿಸಿಡಿಯಂ ಸದಸ್ಯರಾಗಿರುವ ತೇಲ್ತುಂಬ್ಡೆಯವರು ಉಚಿತ ಮತ್ತು ಕಡ್ಡಾಯ ನೆರೆಹೊರೆ ಶಾಲಾ ವ್ಯವಸ್ಥೆಯ ಪರವಾಗಿ, ತಾಯ್ನುಡಿ ಮಾದ್ಯಮದ ಪರವಾಗಿ ಸಂಘಟನೆ ಮಾಡಿದ್ದಾರೆ ಮತ್ತು ದೇಶದ ಅನೇಕ ಚಿಂತಕರು ಮತ್ತು ಹೋರಾಟಗಾರರನ್ನು ಈ ಸಂಘಟನೆಯಲ್ಲಿ ತೊಡಗಿಸಿದ್ದಾರೆ. ಸಾಮಾಜಿಕ ನ್ಯಾಯ ಮತ್ತು ಸಮಾನತೆ ಸಾದಿಸಲು ಇದೊಂದೆ ಏಕೈಕ ಮಾರ್ಗ ಎಂದು ನಂಬಿದ್ದಾರೆ. ನಮ್ಮ ದೇಶದ ಗೌರವಾನ್ವಿತ ರಾಷ್ಟ್ರಪತಿಗಳಿಗೆ ಪ್ರೊ. ಆನಂದ ತೇಲ್ತುಂಬ್ಡೆ ಮತ್ತು ಇತರರ ವಿರುದ್ದದ ಆರೋಪಗಳನ್ನು ಕೈಬಿಡಬೇಕು ಎಂದು ಮನವಿ ಮಾಡುತ್ತಿದ್ದೇವೆ ಎಂದು ಎಐಎಫ್‌ಆರ್‌ಟಿಇ ತನ್ನ ಅರ್ಜಿಯಲ್ಲಿ ಹೇಳಿದ್ದಾರೆ.

ಎಐಎಫ್‌ಆರ್‌ಟಿಇ ಸಹಿ ಆದ ಅರ್ಜಿಯನ್ನು ಭಾರತದ ರಾಷ್ಟ್ರಪತಿ, ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಾದೀಶರು, ಪ್ರದಾನ ಮಂತ್ರಿಗಳು ಹಾಹೂ ಕೇಂದ್ರ ಗೃಹ ಮಂತ್ರಿಗಳಿಗೆ ಸಲ್ಲಿಸಲಾಗುವುದು ಎಂದು ತಿಳಿಸಿದೆ.

ಈ ವಾರದೊಳಗಡೆ ಸಾವಿರಾರು ಸಹಿ ಸಂಗ್ರಹಣೆ ಮಾಡಬೇಕಿದೆ ಎಂದು ಎಐಎಫ್‌ಆರ್‌ಟಿಇ ಪ್ರಕಟನೆ ತಿಳಿಸಿದೆ. ಅರ್ಜಿಯ ಕನ್ನಡ ಅವತರಿಣಿಕೆಯನ್ನು ಲಗತ್ತಿಸಿದ ಎಐಎಫ್‌ಆರ್‌ಟಿಇ ಮತ್ತು ಅದರ ಸಹ ಸಂಘಟನೆಗಳು ಈ ಅರ್ಜಿಯನ್ನು ಸ್ನೇಹಿತರು, ಪರಿಚಿತರೊಂದಿಗೆ, ಸಂಘಟನೆಗಳೊಂದಿಗೆ ಹಂಚಿಕೊಳ್ಳಬೇಕೆಂದು ಕೋರಿದೆ.

ಅರ್ಜಿಗೆ ಸಹಿ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಮುಂಗಾರು ಮಳೆ ಕೊರತೆ: ಇಡೀ ದೇಶದಲ್ಲಿ ಆತಂಕದ ಕಾರ್ಮೋಡ

ಭಾರತದ ಆಕಾಶದಲ್ಲಿ ಸದ್ಯ ಮೂಡುತ್ತಿರುವ ಉಪಗ್ರಹ ಚಿತ್ರಗಳು ಮತ್ತು ಹವಾಮಾನ ಇಲಾಖೆಯ ದತ್ತಾಂಶಗಳು ದೇಶಕ್ಕೆ ದೊಡ್ಡ ಗಂಡಾಂತರದ ಮುನ್ಸೂಚನೆ ನೀಡುತ್ತಿವೆ. ಕೃಷಿ ಚಟುವಟಿಕೆಗಳ ಅತ್ಯಂತ ನಿರ್ಣಾಯಕ ಅವಧಿಯಾದ ಜೂನ್ ತಿಂಗಳಲ್ಲೇ ಮುಂಗಾರು ಮಳೆ...

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? : ಬಿ.ಕೆ ಹರಿಪ್ರಸಾದ್

ನೀಟ್ ಪರೀಕ್ಷೆ ಪದೇ ಪದೇ ಬರೆಯುವಂತೆ ಮಾಡಿದ್ದು ಯಾರು? ಬಿಜೆಪಿ ನಾಯಕರ ಆರೋಪಗಳನ್ನು ನೋಡಿದರೆ, ತಪ್ಪು ಮಾಡಿದವರೇ ಉಪದೇಶ ಮಾಡುವ ಸ್ಥಿತಿಗೆ ಬಂದಂತಿದೆ ಎಂದು ಕೆಪಿಸಿಸಿ ನೂತನ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಹೇಳಿದರು....

ಎಸ್‌ಐಆರ್‌ನಲ್ಲಿ ಕೈಬಿಟ್ಟ ವ್ಯಕ್ತಿ ಕುರಿತು ಮಹತ್ವದ ಹೇಳಿಕೆ ನೀಡಿದ ಸುಪ್ರೀಂ ಕೋರ್ಟ್

ವಿಶೇಷ ತೀವ್ರ ಪರಿಷ್ಕರಣೆಯ (Special Intensive Revision) ಸಂದರ್ಭದಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟಿರುವ ಅಥವಾ ಹೊರಗಿಟ್ಟಿರುವ ಬಂಗಾಳದ ಮುರ್ಷಿದಾಬಾದ್‌ನ 75 ವರ್ಷದ ವಕೀಲರೊಬ್ಬರು "ಪಶ್ಚಿಮ ಬಂಗಾಳದ ನಿಜವಾದ ಮತ್ತು ವಿಶ್ವಾಸಾರ್ಹ ನಾಗರಿಕ" ನಂತೆ...

ನೀಟ್ ಅಕ್ರಮ, ವ್ಯವಸ್ಥೆಯ ವೈಫಲ್ಯಕ್ಕೆ ಮತ್ತೊಂದು ಬಲಿ: ಮರು ಪರೀಕ್ಷೆ ಹಿಂದಿನ ದಿನವೇ ಆತ್ಮಹತ್ಯೆಗೆ ಶರಣಾದ ಪ್ರತಿಭಾವಂತ ವಿದ್ಯಾರ್ಥಿನಿ 

ಹೈದರಾಬಾದ್: ದೇಶದಲ್ಲಿ ವೈದ್ಯಕೀಯ ಶಿಕ್ಷಣದ ಪ್ರವೇಶಾತಿಗಾಗಿ ನಡೆಯುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (NEET) ಸುತ್ತ ಹಬ್ಬಿರುವ ಅಕ್ರಮಗಳ ಜಾಲ ಮತ್ತು ವ್ಯವಸ್ಥೆಯ ನಿರಂತರ ಗೊಂದಲಗಳು ಮತ್ತೊಂದು ಯುವ ಜೀವವನ್ನು ಬಲಿಪಡೆದಿವೆ.  ಜೂನ್...

ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿ ಮುಂದುವರೆದ ಸಿಜೆಪಿ ಪ್ರತಿಭಟನೆ; ಪ್ರಧಾನ್ ರಾಜೀನಾಮೆಗೆ ಪಟ್ಟು

ಪರೀಕ್ಷಾ ಅಕ್ರಮಗಳು ಮತ್ತು ಮೇ 3 ರ ನೀಟ್ ಪತ್ರಿಕೆ ಸೋರಿಕೆಯ ವಿರುದ್ಧ ತಮ್ಮ ಪ್ರತಿಭಟನೆಯನ್ನು ಮುಂದುವರಿಸಿರುವ ಜಿರಳೆ ಜನತಾ ಪಕ್ಷ (ಸಿಜೆಪಿ) ಸೋಮವಾರ ಸತತ ಮೂರನೇ ದಿನವೂ ಜಂತರ್ ಮಂತರ್‌ನಲ್ಲಿಯೇ ಕುಳಿತಿದ್ದಾರೆ. ಶನಿವಾರ...

ಸಂವಿಧಾನದ ಬುಡಕ್ಕೆ ಕೊಡಲಿ ಏಟು: ಆರ್‌ಎಸ್‌ಎಸ್-ಬಿಜೆಪಿಯ ಷಡ್ಯಂತ್ರ ಸೋಲಿಸಲು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಅನಿವಾರ್ಯ – ಬಿ.ಕೆ. ಹರಿಪ್ರಸಾದ್

ಎಸ್‌ಐಆರ್ (SIR) ವಿರೋಧಿ ಹೋರಾಟದಲ್ಲಿ ನಮ್ಮ ಪಕ್ಷ ನಿಮ್ಮ ಜೊತೆಗಿದೆ ಎಂದು ಹೇಳಲು ಸರ್ಕಾರದ ಪ್ರತಿನಿಧಿಯಾಗಿ ನಾನು ಇಲ್ಲಿ ಬಂದಿದ್ದೇನೆ. ನೀವು ಮಂಡಿಸಿರುವ ಹಕ್ಕೊತ್ತಾಯಗಳ ಕುರಿತು ನೂತನ ಮುಖ್ಯಮಂತ್ರಿಗಳು, ಸಿದ್ದರಾಮಯ್ಯ ಸೇರಿದಂತೆ ಪಕ್ಷದ...

ಮತದಾರರ ಪಟ್ಟಿಯಿಂದ 65 ಲಕ್ಷ ಜನರನ್ನು ಹೊರಹಾಕಿದ್ದು ಯಾರು? ಈ ಅಕ್ರಮಕ್ಕೆ ಚುನಾವಣಾ ಆಯೋಗವೇ ಉತ್ತರಿಸಬೇಕು: ಮೊಹಮ್ಮದ್ ಯೂಸುಫ್ ಕನ್ನಿ

"ಬ್ರಿಟಿಷರ ವಿರುದ್ಧ ಹೋರಾಡಿ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದೇವೆ. 1952ರ ಮೊದಲ ಚುನಾವಣೆಯ ಸಂದರ್ಭದಲ್ಲಿ ಸುಮಾರು 17.32 ಕೋಟಿ ಮತದಾರರಿದ್ದರು. 1955ರಲ್ಲಿ ಸಿಟಿಜನ್‌ಶಿಪ್ ಆಕ್ಟ್ ಜಾರಿಯಾದ ಬಳಿಕ ನಡೆದ 1957ರ ಚುನಾವಣೆಯಲ್ಲಿ ಈ ಸಂಖ್ಯೆ...

ಸರ್ಕಾರ-ನ್ಯಾಯಾಂಗ ವ್ಯವಸ್ಥೆ ಕೈಬಿಟ್ಟರೆ ರಾಜ್ಯದ ಜನ ಅನಾಥರಾಗುತ್ತಾರೆ : ಹಿರಿಯ ಸಾಹಿತಿ ಬಿ.ಟಿ. ಲಲಿತಾ ನಾಯ್ಕ್

ಎಸ್‌ಐಆರ್‌ ವಿಚಾರದಲ್ಲಿ ಇಂದು ನಾಡಿನ ಜನತೆ ಭೀಕರ ಸಂಕಷ್ಟದಲ್ಲಿದ್ದಾರೆ. ಈ ಗೊಂದಲವನ್ನು ಉಂಟು ಮಾಡಿದವರು ಯಾರು? ಕೇಂದ್ರ ಸರ್ಕಾರವೋ ಅಥವಾ ಕರ್ನಾಟಕ ಸರ್ಕಾರದ ಅಲಕ್ಷ್ಯ ಇದಕ್ಕೆ ಕಾರಣವೇ? ಅಥವಾ ನಮಗೆ ಸಂಬಂಧವೇ ಇಲ್ಲ...

ಎಸ್ಐಆರ್ ಹೆಸರಿನಲ್ಲಿ ನಡೆಯುತ್ತಿರುವ ಜನವಿರೋಧಿ ಹುನ್ನಾರಗಳನ್ನು ಸೋಲಿಸಬೇಕಿದೆ: ಎಸ್. ವರಲಕ್ಷ್ಮಿ

ಬೆಂಗಳೂರು: ರಾಜ್ಯಾದ್ಯಂತ ಎಸ್ಐಆರ್ (SIR) ವಿರುದ್ಧ ನಡೆಯುತ್ತಿರುವ ಸಮಾವೇಶವು ಆಕ್ರಮಣಕಾರಿ ಧೋರಣೆಯ ವಿರುದ್ಧದ ಬೃಹತ್ ಪ್ರತಿರೋಧವಾಗಿದೆ ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ವರಲಕ್ಷ್ಮಿ ತಿಳಿಸಿದರು. ಎಸ್ಐಆರ್ ಸಮಸ್ಯೆಯಲ್ಲ ಎಂದು ಬಿಂಬಿಸುವ ಸಂಘಪರಿವಾರದವರ...

ಮತದಾನ ನಮ್ಮ ಜನ್ಮಸಿದ್ದ ಹಕ್ಕು, ಎಸ್‌ಐಆರ್ ಕುರಿತು ಜನ ಜಾಗೃತಿ ಅಗತ್ಯ: ಪೀಟರ್ ಮಚಾಡೋ

'ಮತದಾನ ನಮ್ಮ ಜನ್ಮಸಿದ್ದ ಹಕ್ಕು ಅದನ್ನು ನಾವು ಬಿಟ್ಟು ಕೊಡುವುದಿಲ್ಲ' ಎಂದು ಕರ್ನಾಟಕ ಕ್ರೈಸ್ತ ಸಮುದಾಯದ ಮಹಾ ಧರ್ಮಾಧ್ಯಕ್ಷ ರೆವೆಂಡರ್ ಫಾದರ್ ಪೀಟರ್ ಮಚಾಡೋ ಹೇಳಿದರು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ...