Homeಮುಖಪುಟಪ್ರೊ. ಆನಂದ ತೇಲ್ತುಂಬ್ಡೆಯವರ ಬಂಧನ ವಿರೋದಿಸಿ ಸಹಿ ಸಂಗ್ರಹ ಅಭಿಯಾನ

ಪ್ರೊ. ಆನಂದ ತೇಲ್ತುಂಬ್ಡೆಯವರ ಬಂಧನ ವಿರೋದಿಸಿ ಸಹಿ ಸಂಗ್ರಹ ಅಭಿಯಾನ

- Advertisement -
- Advertisement -

ಪ್ರೊ. ಆನಂದ ತೇಲ್ತುಂಬ್ಡೆಯವರ ಮೇಲೆ ಸುಳ್ಳು ಅಪಾದನೆಗಳನ್ನು ಹೊರಿಸಿ ಬಂದಿಸುವುದನ್ನು ವಿರೋದಿಸಿ ಹಾಗೂ ಅವರ ಮೇಲಿನ ಸುಳ್ಳು ಆರೋಪಗಳನ್ನು ಕೈ ಬಿಡುವಂತೆ ಶಿಕ್ಷಣ ಹಕ್ಕಿಗಾಗಿ ಅಖಿಲ ಭಾರತ ವೇದಿಕೆ(ಎಐಎಫ್‌ಆರ್‌ಟಿಇ) ಅಭಿಯಾನ ಪ್ರಾರಂಭಿಸಿದೆ.

ಶಿಕ್ಷಣ ಹಕ್ಕಿಗಾಗಿ ಅಖಿಲ ಭಾರತ ವೇದಿಕೆಯು ಆನ್ ಲೈನ್ ಅರ್ಜಿಯನ್ನು ಸಹಿ ಮಾಡಲು ಕೋರಿದೆ. ಸರಕಾರವು  ಸುಳ್ಳು ಪ್ರಕರಣಗಳನ್ನು ಸೃಷ್ಟಿಸಿ ತೇಲ್ತುಂಬ್ಡೆಯವರು ಮುಂಬೈನ ಎನ್ ಐಎ ಕೋರ್ಟ್ ನ ಮುಂದೆ 6, ಎಪ್ರಿಲ್ 2020ರಂದು ಶರಣಾಗಬೇಕೆಂದು ಸೂಚಿಸಿದೆ ಎಂದು ವೇದಿಕೆ ಆರೋಪಿಸಿದೆ.

ಅರ್ಜಿಗೆ ಸಹಿ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಹಿರಿಯ ಪ್ರಾದ್ಯಾಪಕರಾಗಿರುವ ಆನಂದ ತೇಲ್ತುಂಬ್ಡೆ ಅವರ ನಿರೀಕ್ಷಣಾ ಜಾಮೀನನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿರುವುದು ಭಾರೀ ಅಘಾತ ಉಂಟು ಮಾಡಿದೆ ಎಂದಿರುವ ಎಐಎಫ್‌ಆರ್‌ಟಿಇ, ಜಾತಿ-ವರ್ಗ ಮತ್ತು ಸಾರ್ವಜನಿಕ ನೀತಿಗಳಿಗೆ ಸಂಬಂದಿಸಿದಂತೆ ಅತ್ಯಂತ ಮಹತ್ವದ ಚಿಂತಕರಾದ ಆನಂದ ತೇಲ್ತುಂಬ್ಡೆ ಅವರು ಪ್ರಜಾಪ್ರಭುತ್ವ ಮತ್ತು ಶಿಕ್ಷಣ ಹಕ್ಕುಗಳ ಪರವಾದ ಹೋರಾಟಗಾರರಾಗಿದ್ದಾರೆ ಎಂದಿದೆ.

ನಿಷೇದಿತ ಮಾವೋವಾದಿ ಸಂಘಟನೆಗಳೊಂದಿಗೆ ಸಂಬಂದ ಹೊಂದಿದ್ದಾರೆ ಎಂದು ಆರೋಪಿಸಿ ’ಕಾನೂನುಬಾಹಿರ ಚಟುವಟಿಕೆಗಳ ನಿಗ್ರಹ ಕಾಯಿದೆ” (ಯುಎಪಿಎ) ಯಂತಹ ಕರಾಳ ಶಾಸನವನ್ನು ಬಳಸಿಕೊಂಡು ಅವರ ವಿರುದ್ದ ಪ್ರಕರಣವನ್ನು ದಾಖಲಿಸಲಾಗಿದೆ. ೨೦೧೮ರಲ್ಲಿ ಭೀಮ್ – ಕೊರೆಗಾಂನಲ್ಲಿ ದಲಿತ ಸಂಘಟನೆಗಳು ಹಮ್ಮಿಕೊಂಡ ಪೇಶ್ವಾಗಳ ವಿರುದ್ದದ ಯುದ್ದದಲ್ಲಿ ಜಯ ಗಳಿಸಿದ ೨೦೦ನೆ ವರ್ಷದ ಆಚರಣೆಯ ಸಂದರ್ಭದಲ್ಲಿ ನಡೆದ ಹಿಂಸಾಚಾರವನ್ನು ಬಳಸಿಕೊಂಡ ಬಿಜೆಪಿ / ಆರೆಸ್ಸಸ್ ನೇತೃತ್ವದ ಎನ್ ಡಿಎ ಮೈತ್ರಿಕೂಟದ ಕೇಂದ್ರ ಸರಕಾರವು ಮಾನವ ಹಕ್ಕುಗಳ ಹೋರಾಟಗಾರರು, ನಾಗರಿಕ ಹಕ್ಕುಗಳ ಹೋರಾಟಗಾರರನ್ನು ಗುರಿಯಾಗಿಸಿಕೊಂಡಿದೆ ಎಂದು ಎಐಎಫ್‌ಆರ್‌ಟಿಇ ಹೇಳಿದೆ.

ಜನವರಿ 1, 2018 ರಂದು ನಡೆದ ಘಟನೆಯೂ ವಿಡಿಯೋಗಳಲ್ಲಿ ಚಿತ್ರೀಕರಣಗೊಂಡಿದೆ, ವಾಟ್ಸಾಪ್‌ಗಳಾದ್ಯಂತ ಪ್ರಸಾರವಾಗಿದೆ. ಅನೇಕರು ಗಾಯಗೊಂಡು, ಹಲವರ ವಾಹನಗಳು ಜಖಂಗೊಂಡವು. ಈ ಗಲಭೆಗಳನ್ನು ಪ್ರಚೋದಿಸಿದ ಸಮಸ್ಥ ಹಿಂದುತ್ವ ಅಗಾಡಿಯ ಮಿಲಿಂದ್ ಏಕಬೋಟೆ ಮತ್ತು ಶಿವ ಚತ್ರಪತಿ ಪ್ರತಿಷ್ಟಾನದ ಸಾಂಬಾಂಜಿ ಭಿಡೆಯವರು ಜಾಮೀನಿನ ಮೇಲೆ ಹೊರ ಬಂದಿದ್ದರು ಮತ್ತು ಇವರ ವಿರುದ್ದ ಅಪೀಲು ಸಲ್ಲಿಸಲಿರಲಿಲ್ಲ. ಇವರಿಬ್ಬರನ್ನು ರಕ್ಷಿಸಲು ಹಿಂದಿನ ದಿನ ಪುಣೆಯಲ್ಲಿ ಹಮ್ಮಿಕೊಳ್ಳಲಾದ ಎಲ್ಗಾರ್ ಪರಿಷದ್ ನಲ್ಲಿ ಮಾತನಾಡಿದ ಭಾಷಣಕಾರರು ಈ ಗಲಭೆಗೆ ಕಾರಣ ಎಂದು ಪುಣೆ ಪೋಲೀಸರು ’ಪಿತೂರಿ ಕಟ್ಟುಕತೆ’ಯನ್ನು ತೇಲಿ ಬಿಟ್ಟರು ಎಂದು ಎಐಎಫ್‌ಆರ್‌ಟಿಇ ಆರೋಪಿಸಿದೆ.

ಅರ್ಜಿಗೆ ಸಹಿ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಜಸ್ಟೀಸ್ ಕೋಲ್ಸೆ-ಪಾಟೀಲ್ ಮತ್ತು ಪಿ.ಬಿ.ಸಾವಂತ್ ಅವರು ಈ ಸಮಾವೇಶವನ್ನು ಸಂಘಟಿಸಿದ್ದರು. ಆದರೆ ಸಂಘಟಕರಿಗೂ ಮತ್ತು ನಿಷೇದಿತ ಮಾವೋವಾದಿಗಳಿಗೂ ಸಂಬಂದವಿರುವುದಕ್ಕೆ ನಮ್ಮ ಬಳಿ ಸಾಕ್ಷಿ ಇದೆ ಎಂದು ಪೋಲೀಸರು ವಾದಿಸಿ, ನಂತರ ಜೂನ್ ೨೦೧೮ರಿಂದ ಮಾನವ ಹಕ್ಕುಗಳ ಹೋರಾಟಗಾರರು, ನ್ಯಾಯವಾದಿಗಳನ್ನು ಮಾವೋವಾದಿಗಳ ಪರ ಒಲವುಳ್ಳವರು ಎಂದು ಆರೋಪಿಸಿ ಮತ್ತು ಇವರ ವಿರುದ್ದ ಕರಾಳ ’ಯುಎಪಿಎ’ ಶಾಸನ ಆಡಿಯಲ್ಲಿ ಬಂದಿಸಿದರು ಮತ್ತು ಇವರೆಲ್ಲಾ ಇಂದಿಗೂ ಬಂದನದಲ್ಲಿದ್ದಾರೆ ಎಂದಿದೆ.

ಫೆಬ್ರವರಿ ೨೦೧೯ರಲ್ಲಿ ಸಲ್ಲಿಸಲಾದ ಪೂರಕ ಚಾರ್ಜ್ ಶೀಟ್ ನಲ್ಲಿ ಪ್ರೊ. ಆನಂದ ತೇಲ್ತುಂಬ್ಡೆ ಅವರ ಹೆಸರನ್ನು ಸೇರಿಸಲಾಯಿತು. ಆದರೆ ತೇಲ್ತುಂಬ್ಡೆಯವರು ಎಲ್ಗಾರ್ ಪರಿಷದ್ ನ ಸಮಾವೇಶದಲ್ಲಿ ಭಾಗವಹಿಸಿರಲಿಲ್ಲ. ಆದರೆ ಈ ಮೊದಲು ಬಂದಿಸಿದ್ದವರ ಕಂಪ್ಯೂಟರ್ ನಲ್ಲಿ ಒಂದು ಪತ್ರವನ್ನು ಉಲ್ಲೇಖಿಸಿ ತೇಲ್ತುಂಬ್ಡೆಯವರ ವಿರುದ್ದ ಅದನ್ನೇ ಸಾಕ್ಷಿಯಾಗಿ ಮುಂದಿಟ್ಟರು. ಕಂಪ್ಯೂಟರ್ ನ ಹಾರ್ಡ್ ಡಿಸ್ಕ್ ಅನ್ನು ಪರೀಕ್ಷಿಸಿದ ಸೈಬರ್ ಫೋರೆನ್ಸಿಕ್ ಪರಿಣಿತರು ಅಲ್ಲಿ malware ಇರುವುದನ್ನು ತೋರಿಸಿ, ಇದು ದೂರದಿಂದಲೆ ಕಂಪ್ಯೂಟರ್ ಅನ್ನು ಅಕ್ರಮವಾಗಿ ಬಳಸಿಕೊಳ್ಳುವುದಕ್ಕೆ ಅನುಮತಿಸುತ್ತದೆ ಎಂದು ವಿವರಿಸಿದರು. ಆದರೆ ಮುಂಚೂಣಿ ತಂತ್ರಜ್ನಾನದ ಪರಿಣಿತರಾಗಿ ಪ್ರೊ. ತೇಲ್ತುಂಬ್ಡೆ ಯವರ ವೃತ್ತಿಪರ ಸಾಧನೆಗಳು ಇಂದಿಗೂ ಮುಖ್ಯವಾಗಿವೆ. ಭಾರತದಲ್ಲಿ ಮಾಹಿತಿ ತಂತ್ರಜ್ನಾವನ್ನು ಅಬಿವೃದ್ದಿಪಡಿಸಿದ ೨೦ ವೃತ್ತಿಪರರ ಪಟ್ಟಿಯಲ್ಲಿ ತೇಲ್ತುಂಬ್ಡೆಯವರೂ ಒಬ್ಬರು ಮತ್ತು ಇದನ್ನು ಡಾಟಾಕ್ವೆಸ್ಟ್ ಸಂಸ್ಥೆಯು ಸತತ ಮೂರು ವರ್ಷಗಳ ಕಾಲ ಮೌಲ್ಯಮಾಪನ ಮಾಡುತ್ತ ಬಂದಿದೆ ಎಂದು ಎಐಎಫ್‌ಆರ್‌ಟಿಇ ತನ್ನಅರ್ಜಿಯಲ್ಲಿ ಹೇಳಿದೆ.

ತೈಲ ಮತ್ತು ಅನಿಲ ವಲಯಗಳಲ್ಲಿ ಮೂರು ದಶಕಗಳ ಕಾಲ ನಿರಂತರವಾಗಿ ಸಂಶೋದನೆ ನಡೆಸಿಕೊಂಡು ಬಂದ ಮತ್ತು ಹೊಸದಾದ ಅವಿಷ್ಕಾರಗಳನ್ನು ಮಾಡಿದ, ವಿನ್ಯಾಸಗಳನ್ನು ರೂಪಿಸಿದ ತೇಲ್ತುಂಬ್ಡೆಯವರು ಗೌರವಾನ್ವಿತ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ ಎಂದಿರುವ ಎಐಎಫ್‌ಆರ್‌ಟಿಇ ಇದೆ ಕಂಪನಿಯಲ್ಲಿ ಸಿಇಓ ಆಗಿದ್ದ ತೇಲ್ತುಂಬ್ಡೆಯವರು ಉಪಾಂಗ ಸಂಸ್ಥೆಗಳಲ್ಲಿ ಸತತವಾಗಿ ಏಳು ವರ್ಷಗಳ ಕಾಲ ಸದಸ್ಯರಾಗಿದ್ದರು ಎಂದಿದೆ.

ಅರ್ಜಿಗೆ ಸಹಿ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಮಹಾರಾಷ್ಟ್ರದ ಯವತ್ಮಾಲ್ ಜಿಲ್ಲೆಯ ಭೂರಹಿತ ಕೂಲಿ ಕಾರ್ಮಿಕರ ಕುಟುಂಬದಲ್ಲಿ ಜನಿಸಿದ ಆನಂದ್ ತೇಲ್ತುಂಬ್ಡೆಯವರು ಶೋಷಿತರು ಮತ್ತು ದಮನಿತರ ಪರವಾಗಿ ಹೋರಾಡುತ್ತಾ ಬಂದಿದ್ದಾರೆ, ಮಾನವ ಹಕ್ಕುಗಳ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದಾರೆ ಸಾಮಾಜಿಕ ನ್ಯಾಯದ ಪರವಾಗಿ ಅತ್ಯಂತ ಪ್ರಮುಖ ಚಿಂತಕರು. ಅವರು ಬಾಬಾಸಾಹೇಬ್ ಬಿ.ಆರ್. ಅಂಬೇಡ್ಕರ್ ಅವರ ಮೊಮ್ಮಗಳನ್ನು ಮದುವೆಯಾಗಿದ್ದಾರೆ.

’ಎಐಎಫ್‌ಆರ್‌ಟಿಇ’ ಸಂಘಟನೆಯ ಮುಂದಾಳತ್ವದಲ್ಲಿರುವ, ಕಳೆದ ಹತ್ತು ವರ್ಷಗಳಿಂದ ಅದರ ಪ್ರಿಸಿಡಿಯಂ ಸದಸ್ಯರಾಗಿರುವ ತೇಲ್ತುಂಬ್ಡೆಯವರು ಉಚಿತ ಮತ್ತು ಕಡ್ಡಾಯ ನೆರೆಹೊರೆ ಶಾಲಾ ವ್ಯವಸ್ಥೆಯ ಪರವಾಗಿ, ತಾಯ್ನುಡಿ ಮಾದ್ಯಮದ ಪರವಾಗಿ ಸಂಘಟನೆ ಮಾಡಿದ್ದಾರೆ ಮತ್ತು ದೇಶದ ಅನೇಕ ಚಿಂತಕರು ಮತ್ತು ಹೋರಾಟಗಾರರನ್ನು ಈ ಸಂಘಟನೆಯಲ್ಲಿ ತೊಡಗಿಸಿದ್ದಾರೆ. ಸಾಮಾಜಿಕ ನ್ಯಾಯ ಮತ್ತು ಸಮಾನತೆ ಸಾದಿಸಲು ಇದೊಂದೆ ಏಕೈಕ ಮಾರ್ಗ ಎಂದು ನಂಬಿದ್ದಾರೆ. ನಮ್ಮ ದೇಶದ ಗೌರವಾನ್ವಿತ ರಾಷ್ಟ್ರಪತಿಗಳಿಗೆ ಪ್ರೊ. ಆನಂದ ತೇಲ್ತುಂಬ್ಡೆ ಮತ್ತು ಇತರರ ವಿರುದ್ದದ ಆರೋಪಗಳನ್ನು ಕೈಬಿಡಬೇಕು ಎಂದು ಮನವಿ ಮಾಡುತ್ತಿದ್ದೇವೆ ಎಂದು ಎಐಎಫ್‌ಆರ್‌ಟಿಇ ತನ್ನ ಅರ್ಜಿಯಲ್ಲಿ ಹೇಳಿದ್ದಾರೆ.

ಎಐಎಫ್‌ಆರ್‌ಟಿಇ ಸಹಿ ಆದ ಅರ್ಜಿಯನ್ನು ಭಾರತದ ರಾಷ್ಟ್ರಪತಿ, ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಾದೀಶರು, ಪ್ರದಾನ ಮಂತ್ರಿಗಳು ಹಾಹೂ ಕೇಂದ್ರ ಗೃಹ ಮಂತ್ರಿಗಳಿಗೆ ಸಲ್ಲಿಸಲಾಗುವುದು ಎಂದು ತಿಳಿಸಿದೆ.

ಈ ವಾರದೊಳಗಡೆ ಸಾವಿರಾರು ಸಹಿ ಸಂಗ್ರಹಣೆ ಮಾಡಬೇಕಿದೆ ಎಂದು ಎಐಎಫ್‌ಆರ್‌ಟಿಇ ಪ್ರಕಟನೆ ತಿಳಿಸಿದೆ. ಅರ್ಜಿಯ ಕನ್ನಡ ಅವತರಿಣಿಕೆಯನ್ನು ಲಗತ್ತಿಸಿದ ಎಐಎಫ್‌ಆರ್‌ಟಿಇ ಮತ್ತು ಅದರ ಸಹ ಸಂಘಟನೆಗಳು ಈ ಅರ್ಜಿಯನ್ನು ಸ್ನೇಹಿತರು, ಪರಿಚಿತರೊಂದಿಗೆ, ಸಂಘಟನೆಗಳೊಂದಿಗೆ ಹಂಚಿಕೊಳ್ಳಬೇಕೆಂದು ಕೋರಿದೆ.

ಅರ್ಜಿಗೆ ಸಹಿ ಮಾಡಲು ಇಲ್ಲಿ ಕ್ಲಿಕ್ ಮಾಡಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...

ಫ್ಯಾಕ್ಟ್‌ಚೆಕ್ : ಅತ್ಯಾಚಾರ ಅಪರಾಧಿ ಪರ ವಕೀಲೆಗೆ ಟಿಎಂಸಿಯಿಂದ ರಾಜ್ಯಸಭೆ ಸೀಟ್; ಬಿಜೆಪಿ ಆರೋಪದ ಸತ್ಯಾಸತ್ಯತೆ ಏನು?

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಪಾಣಿಹತಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ಆರ್‌ಜಿ ಕರ್‌ ಸಂತ್ರಸ್ತೆಯ ತಾಯಿ ಮತ್ತು ವಕೀಲೆ ಹಾಗೂ ತೃಣಮೂಲ ಕಾಂಗ್ರೆಸ್ (ಟಿಎಂಸಿ) ರಾಜ್ಯಸಭಾ ಸದಸ್ಯೆ ಮೇನಕಾ ಗುರುಸ್ವಾಮಿ ಅವರ ಎಐ-ರಚಿತ...