Homeಅಂಕಣಗಳುಪುಟಕ್ಕಿಟ್ಟ ಪುಟಗಳುಚರಿತ್ರೆಯಿಂದ ವರ್ತಮಾನ ಕಲಿಯಬೇಕಾದ ಪಾಠ ಹೇಳುವ ಯುದ್ಧ ಮತ್ತು ಒಪ್ಪಂದ ಪುಸ್ತಕ

ಚರಿತ್ರೆಯಿಂದ ವರ್ತಮಾನ ಕಲಿಯಬೇಕಾದ ಪಾಠ ಹೇಳುವ ಯುದ್ಧ ಮತ್ತು ಒಪ್ಪಂದ ಪುಸ್ತಕ

ಯುದ್ಧ ಮತ್ತು ದೇಶಭಕ್ತಿಯ ರೋಚಕತೆಯನ್ನು ಸೃಷ್ಟಿಸುವಂತಹ ಸ್ವಾರ್ಥ ಪ್ರಭುತ್ವಗಳಿಗೆ ಇರುತ್ತದೆ. ಆದರೆ ಯುದ್ಧಗಳನ್ನು ವೈಭವೀಕರಿಸುವ ಹಾಗೂ ಅದಕ್ಕೆ ನಾನಾ ಕಾರಣಗಳನ್ನು ಹುಡುಕುವುದರಲ್ಲೇ ಮಗ್ನರಾಗಿರುವ ಚರಿತ್ರೆಕಾರರಿಗೆ ಯುದ್ಧದ ಸಾಮಾಜಿಕ ಹಾಗೂ ಆರ್ಥಿಕ ಆಯಾಮಗಳು ಆದ್ಯತೆಯ ವಿಚಾರವಾಗಿ ಕಂಡುಬರುವುದಿಲ್ಲ.

- Advertisement -
- Advertisement -

ಹದಿನೇಳು ಮತ್ತು ಹದಿನೆಂಟನೇ ಶತಮಾನದ ದಕ್ಷಿಣ ಭಾರತದ ರಾಜಕಾರಣ, ಆರ್ಥಿಕತೆ, ಸಾಮ್ರಾಜ್ಯ ವಿಸ್ತರಣೆಯ ದಾಹ, ವಾಣಿಜ್ಯ ನೀತಿ, ಸಂಘರ್ಷ, ಸಂಧಾನ, ಸಮಾಧಾನ, ದೇಶೀಯ ಮತ್ತು ವಿದೇಶೀಯರ ಉದ್ದೇಶ ಮತ್ತು ಧೋರಣೆಗಳು, ತಂತ್ರ ಮತ್ತು ಪ್ರತಿತಂತ್ರ ಎಲ್ಲವನ್ನೂ ಒಳಗೊಂಡಿರುವ ಕೃತಿಯಿದು. ಯುದ್ಧ ಮತ್ತು ಒಪ್ಪಂದಗಳು ಪ್ರದೇಶದ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ಚಿತ್ರಣವನ್ನು ಬದಲು  ಮಾಡುವುದರಿಂದ ವ್ಯವಸ್ಥೆಯ ಬಲಿಪಶುಗಳಾಗುವರು ಜನರು. ಈ ಕೃತಿಯ ಅಧ್ಯಯನದ ಮಹತ್ವವೇ ಚರಿತ್ರೆಯಲ್ಲಿ ಮಾಡಿರುವ ತಪ್ಪುಗಳನ್ನು ವರ್ತಮಾನದಲ್ಲಿ ಮಾಡದಿರಲು ಎಚ್ಚೆತ್ತುಕೊಳ್ಳುವುದು. ಆದರೆ ಇದನ್ನು ತಿಳಿಯಬೇಕಾದವರು ಯಾರು? ಬಲಿಪಶುಗಳಾಗುವ ಸಾಮಾನ್ಯರು ಮಾತ್ರವಲ್ಲ, ಆಡಳಿತ ಚುಕ್ಕಾಣಿ ಹಿಡಿದಿರುವವರು. ಹಿಂದಿನದನ್ನು ಅವಲೋಕಿಸಿ ಮುಂದೆ ಎಚ್ಚರಿಕೆಯಿಂದ ಹೆಜ್ಜೆ ಇಡುವಂತಹ ದೂರದೃಷ್ಟಿಯನ್ನು ಹೊಂದಲು ಸಹಾಯವಾಗುವ ಒಳನೋಟಗಳನ್ನು ಕೊಡುವ ಡಾ. ಕೆ ಮೋಹನ್ ಕೃಷ್ಣ ರೈರವರ ಕೃತಿ ಇದಾಗಿದೆ.

ನಮ್ಮ ಸಾಮಾನ್ಯ ಪ್ರಜೆಗಳಿಂದ ಹಿಡಿದು ವ್ಯವಸ್ಥೆಯನ್ನು ರೂಪಿಸುವವರ ತನಕ ಇರುವ ಬಹುದೊಡ್ಡ ಸಾಮಾನ್ಯ ಸಮಸ್ಯೆ ಎಂದರೆ ಯಾವುದಕ್ಕೆ ಆದ್ಯತೆಯನ್ನು ನೀಡುವುದು ಎಂದು ತಿಳಿಯದಿರುವುದು. ಈಗಲೂ ಮತ್ತು ಆಗಲೂ ಸ್ಥೂಲವಾಗಿ ರಾಜಕೀಯ ಸಂಘರ್ಷಗಳಾಗಿ ಕಾಣುವ ವಿದ್ಯಮಾನಗಳು ಸಾಮಾಜಿಕ ನಿಯಂತ್ರಣವನ್ನು ಹೊಂದುತ್ತಿರುತ್ತವೆ ಮತ್ತು ಆರ್ಥಿಕತೆಯು ಸ್ವಾರ್ಥದಿಂದ ತಮ್ಮ ವಲಯಕ್ಕೆ ಸೀಮಿತಗೊಳ್ಳುತ್ತಿರುತ್ತವೆ. ಆಗ ಈಸ್ಟ್ ಇಂಡಿಯಾ ಕಂಪನಿಗಳು ಸ್ಥಳೀಯ ಅರಸರನ್ನು ಎತ್ತಿಕಟ್ಟುತ್ತಾ, ಅವರ ನಡುವೆ ಯುದ್ಧಗಳನ್ನು ಹುಟ್ಟು ಹಾಕುತ್ತಿದ್ದವು. ಹಾಗೆ ಮಾಡುವಾಗ ಸ್ಥಳೀಯ ಅರಸರಿಗೆ ಅವರ ಮರ್ಕಂಟೈಲ್ ಮತ್ತು ಇಂಪೀರಿಯಲ್ ದೃಷ್ಟಿಯನ್ನು ಅರ್ಥೈಸಿಕೊಳ್ಳಲಾಗದೇ ಪ್ರಾದೇಶಿಕ ವಾಣಿಜ್ಯ ನೀತಿಗಳನ್ನು, ಆರ್ಥಿಕ ನಿಯಂತ್ರಣಗಳನ್ನು ಅವರ ಕೈವಶವಾಗಲು ಅನುವು ಮಾಡಿಕೊಟ್ಟು, ತಮ್ಮ ತಲೆದಂಡದಿಂದ ಅವರಿಗೆ ಲಾಭವನ್ನು ಮಾಡಿಕೊಡುತ್ತಿದ್ದರು. ಇದನ್ನು ಅರ್ಥಮಾಡಿಕೊಂಡ ಕೆಲವರಾದರೂ ಇದ್ದ ಪ್ರಾದೇಶಿಕ ಅರಸರಿಗೆ ಇತರರ ಒಣಪ್ರತಿಷ್ಟೆ ಮತ್ತು ಅಸೂಯೆಗಳು ಸಹಕರಿಸಲಿಲ್ಲ. ಅದೇ ಈಸ್ಟ್ ಇಂಡಿಯಾ ಕಂಪನಿಯ ಗೆಲುವಿಗೆ ಮುಖ್ಯ ಕಾರಣಗಳಲ್ಲಿ ಒಂದು ಎಂದು ಪುಸ್ತಕದ ಮೊದಮೊದಲ ಸಾಲುಗಳಲ್ಲೇ ಇದೆ. ಈಗ ಅಂತಹುದೇ ಪರಿಸ್ಥಿತಿ ವರ್ತಮಾನದಲ್ಲಿಯೂ ಇದೆ. ಈಗ ಈಸ್ಟ್ ಇಂಡಿಯಾ ಕಂಪನಿಯ ಕೆಲಸ ಮಾಡುತ್ತಿರುವುದು ಇಂಗ್ಲಿಷರಲ್ಲ. ಜನರಿಂದ ಚುನಾಯಿತರಾಗಿರುವ ಭಾರತೀಯ ಸರ್ಕಾರವೇ. ಆಗ ಪ್ರಾದೇಶಿಕ ರಾಜರುಗಳಲ್ಲಿ ಇದ್ದ ಅಸಹನೆ, ಹುಸಿಪ್ರತಿಷ್ಠೆ ವಿವೇಚನಾಶೂನ್ಯ ಸಂಘರ್ಷಗಳನ್ನು ವಿವಿಧ ರಾಜಕೀಯ ಪಕ್ಷಗಳಲ್ಲಿ ಕಾಣುತ್ತಿದ್ದೇವೆ. ಚರಿತ್ರೆ ಮರುಕಳಿಸುತ್ತಿದೆ.

ಡಾ. ರೈ ಹೇಳುವಂತೆ, ‘ಪೋರ್ಚುಗೀಸರ ಆಗಮನವಾದ ಬಳಿಕ ಯುರೋಪಿನ ವ್ಯಾಪಾರಿ ಕಂಪನಿಗಳು ಭಾರತದಲ್ಲಿ ಯುದ್ಧಗಳ ಯುಗವನ್ನೇ ಹುಟ್ಟುಹಾಕಿದವು. 17 ಮತ್ತು 18ನೆಯ ಶತಮಾನಗಳ ದಕ್ಷಿಣ ಭಾರತದ ರಾಜಕಾರಣದಲ್ಲಿ ಪೋರ್ಚುಗೀಸರು, ಬ್ರಿಟಿಷರು, ಡಚ್ಚರು ಮತ್ತು ಫ್ರೆಂಚರು ವಿದೇಶಿ ವ್ಯಾಪಾರಿಶಕ್ತಿಗಳಾಗಿ ಒಂದು ಕಡೆಗಾದರೆ, ಮೊಗಲರು, ಮರಾಠರು, ಹೈದರಾಬಾದಿನ ನಿಜಾಮರು, ಆರ್ಕಾಟಿನ ನವಾಬರು, ಮೈಸೂರಿನ ಹೈದರ್ ಅಲಿ ಮತ್ತು ಟಿಪ್ಪು, ತಿರುವಾಂಕೂರಿನ ಅರಸರು, ಮಲಬಾರಿನ ನಾಯಕರು ಮುಂತಾದ ಸ್ಥಳೀಯ ರಾಜಕೀಯ ಶಕ್ತಿಗಳು ಯುದ್ಧ ಹಾಗೂ ಒಪ್ಪಂದದಲ್ಲಿ ನಿರತವಾಗಿದ್ದವು. ಇದರ ಪರಿಣಾಮವೇ ಕರ್ನಾಟಿಕ್ ಯುದ್ಧಗಳು, ಆಂಗ್ಲೋ-ಮೈಸೂರು ಯುದ್ಧಗಳು, ಆಂಗ್ಲೋ-ಮರಾಠರ ಯುದ್ಧಗಳು, ಮೈಸೂರು-ಮರಾಠರ ಯುದ್ಧಗಳು. ಈ ಎಲ್ಲ ಯುದ್ಧಗಳ ಸಂದರ್ಭದಲ್ಲಿ ಯೂರೋಪಿನ ವ್ಯಾಪಾರಿಶಕ್ತಿಗಳು ತಮ್ಮ ಪಾಲ್ಗೊಳ್ಳುವಿಕೆಯನ್ನು ಅನಿವಾರ್ಯವನ್ನಾಗಿಸಿದವು.’

ಸ್ಥಳೀಯ ಅರಸುಮನೆತನಗಳು ವಿದೇಶಿಯರನ್ನು ಓಲೈಸಬೇಕಾದ ಒತ್ತಡ ಹೇಗೆ ಸೃಷ್ಟಿಗೊಂಡಿತು? ಪ್ರಾದೇಶಿಕತೆಯಲ್ಲಿ ಬಿಕ್ಕಟ್ಟುಗಳು ಮೂಡಿದ ಬಗೆ ಹೇಗೆ? ಶತ್ರುವಿನ ಶತ್ರು ಮಿತ್ರನಾಗುವುದು ಹೇಗೆ? ಒಪ್ಪಂದಗಳ ಭೌತಿಕ ಮತು ತಾತ್ವಿಕ ಸ್ವರೂಪಗಳೇನು? ಇವೆಲ್ಲವನ್ನೂ ವಿವರಿಸುವ ಜೊತೆಗೆ ಪ್ರಸ್ತುತ ರಾಜಕೀಯ ಮತ್ತು ಆರ್ಥಿಕತೆ ಪರಿಸ್ಥಿತಿಗಳನ್ನು ಈ ಹಿನ್ನೆಲೆಯಲ್ಲಿ ಅವಲೋಕಿಸುವ ಎಚ್ಚರಿಕೆಯ ಕರೆಗಂಟೆ ಈ ಕೃತಿಯಾಗುತ್ತದೆ.

18ನೆಯ ಶತಮಾನದ ದ್ವಿತೀಯಾರ್ಧ ಬ್ರಿಟಿಷರ ಪಾಲಿಗೆ ಮುಳ್ಳಿನಹಾದಿಯನ್ನಾಗಿ ಮಾಡಿದ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನನ ಪ್ರತಿರೋಧಗಳನ್ನು ಮತ್ತು ನಡೆಗಳನ್ನು ಕೃತಿ ತೆರೆದಿಡುತ್ತದೆ. ಮೈಸೂರು ಬೆಂಗಳೂರು ಒಳಗೊಂಡಂತೆ ಈ ಎಲ್ಲಾ ಭಾಗಗಳಿಗೆ ಹೈದರ್ ಅಲಿ ಇಲ್ಲದೇಹೋಗಿದ್ದರೆ ಏನಾಗುತ್ತಿತ್ತೆಂದು ಕಲ್ಪಿಸಿಕೊಳ್ಳಲು ಯತ್ನಿಸುತ್ತೇನೆ. ಆಗ ಹೈದರ್ ಅಲಿಯ ದೃಢತೆ ಮತ್ತು ಎದೆಗಾರಿಕೆಯೇ ಮಗ್ಗುಲು ಮುಳ್ಳಾಗಿದ್ದ ಮರಾಠರನ್ನೂ ಮತ್ತು ಬ್ರಿಟಿಷರನ್ನೂ ಎದುರಿಸಲು ಸಮರ್ಥವಾಗಿದ್ದದ್ದು. ಪರದೇಶೀಯರಾಗಿದ್ದು, ಸಂಸ್ಕೃತಿ ಮತ್ತು ಉದ್ದೇಶಗಳಿಂದ ಪರಕೀಯರೇ ಆಗಿದ್ದ ಬ್ರಿಟಿಷರನ್ನು ಬಿಡಿ, ನಮ್ಮದೇ ನೆಲದ ಭಾಗವೆನ್ನುವ ಮರಾಠರ ಮತ್ತು ನಿಜಾಮರ ರಾಜಕಾರಣದ ಸ್ವರೂಪ ಆಗಿನ ಬಿಕ್ಕಟ್ಟಿನ ಕರಾಳ ಸ್ವರೂಪವನ್ನು ಅನಾವರಣ ಮಾಡುತ್ತದೆ.

ಅಸ್ತಿತ್ವವನ್ನು ಕಂಡುಕೊಳ್ಳುವುದಕ್ಕೆ ಹಾಗೂ ತಮ್ಮತನದ ಛಾಪನ್ನು ಮೂಡಿಸುವುದಕ್ಕೆ ಯುದ್ಧ ಘಟಿಸುವುದು ಒಂದು ವಿಧಾನವಾದರೆ, ಆಕ್ರಮಣಕಾರಿ ಪ್ರವೃತ್ತಿಗೆ ಹಾಗೂ ಸಮಾಜದ ನಾಶಕ್ಕೆ ಯುದ್ಧ ಘಟಿಸುವುದು ಇನ್ನೊಂದು ವಿಧಾನ ಎನ್ನುವ ಡಾ ರೈ ಅವರ ಮಾತನ್ನು ಗಮನಿಸಿದರೆ, ಸ್ಥಳೀಯ ಅರಸುಮನೆತನದವರ ನಡೆಗಳಲ್ಲಿ ಈ ಎರಡೂ ಬೆರೆತಂತಾಗಿರುತಿತ್ತು, ಕೆಲವೊಮ್ಮೆ ಎರಡನ್ನೂ ಮೀರಿದಂತಾಗಿರುತ್ತಿತ್ತು. ಒಟ್ಟಾರೆ ಅವರವರ ಪ್ರತಿಷ್ಠೆ ಮತ್ತು ಹಠಗಳಿಗೆ ಸಾಮಾಜಿಕ ವ್ಯವಸ್ಥೆಯನ್ನು ಹದಗೆಡಿಸುತ್ತಿದ್ದದ್ದು, ಜನತೆಯ ಬದುಕನ್ನು ಹಾಳುಗೆಡುವುತ್ತಿದ್ದದ್ದಂತೂ ಸ್ಪಷ್ಟ. ಸಿಂಹಾಸನಕ್ಕಾಗಿ ನಡೆಯುವ ಯುದ್ಧಗಳು ಯಾವತ್ತೂ ರಕ್ತಸಂಬಂಧಕ್ಕೇ ಬೆಲೆ ಕೊಡದಿರುವಾಗ ಯಾರದೋ ಪ್ರಜೆಗಳ ಬದುಕನ್ನು ಹೇಗೆ ಪರಿಗಣಿಸಿಯಾರು!

ಕೃತಿಯಲ್ಲಿ ವೀರಮರಣ ಎನ್ನುವ ಸ್ವಾಮಿನಿಷ್ಠೆಯ ಅಲೌಕಿಕ ಪ್ರಪಂಚವನ್ನು ಸೃಷ್ಟಿಸಿ ಒಡೆಯನಿಗೆ ತಾವೂ ಸಾಯುವಂತಹ ಮನಸ್ಥಿತಿಯ ಬಗ್ಗೆಯೂ ಉಲ್ಲೇಖಿಸುತ್ತಾ, ‘ಪ್ರಭುತ್ವ ತನ್ನ ಅಸ್ತಿತ್ವಕ್ಕೆ ಧಕ್ಕೆ ಬರುವ ಸಂದರ್ಭದಲ್ಲಿ ಮಾತ್ರ ಪ್ರಜೆಗಳೊಂದಿಗೆ ಉದಾರವಾಗಿ ನಡೆದುಕೊಳ್ಳುವ’ ಪರಿಯನ್ನು ವಿಶ್ಲೇಷಿಸುತ್ತದೆ. ಎಲೈಟ್ ಶಕ್ತಿಗಳ ಧೋರಣೆಗಳು ಮತ್ತು ಅಜೆಂಡಾಗಳು ಒಂದೇ ಸ್ವರೂಪದಾಗಿದ್ದು, ದುಷ್ಟರೆಂದು ಬೆರಳು ಮಾಡುವವರನ್ನು ಮತ್ತು ಶಾಂತಿ ರಕ್ಷಣೆ ಮಾಡುತ್ತೇವೆ ಎನ್ನುವವರನ್ನು ಕೂಡಾ ಅನಾವರಣಗೊಳಿಸುತ್ತದೆ.

ಯುದ್ಧ ಮತ್ತು ದೇಶಭಕ್ತಿಯ ರೋಚಕತೆಯನ್ನು ಸೃಷ್ಟಿಸುವಂತಹ ಸ್ವಾರ್ಥ ಪ್ರಭುತ್ವಗಳಿಗೆ ಇರುತ್ತದೆ. ಆದರೆ ಯುದ್ಧಗಳನ್ನು ವೈಭವೀಕರಿಸುವ ಹಾಗೂ ಅದಕ್ಕೆ ನಾನಾ ಕಾರಣಗಳನ್ನು ಹುಡುಕುವುದರಲ್ಲೇ ಮಗ್ನರಾಗಿರುವ ಚರಿತ್ರೆಕಾರರಿಗೆ ಯುದ್ಧದ ಸಾಮಾಜಿಕ ಹಾಗೂ ಆರ್ಥಿಕ ಆಯಾಮಗಳು ಆದ್ಯತೆಯ ವಿಚಾರವಾಗಿ ಕಂಡುಬರುವುದಿಲ್ಲ. ಹಾಗಾಗಿ ಚರಿತ್ರೆಗಳು ಜನರ ಬದುಕನ್ನು, ವ್ಯಥೆ, ಕಥೆಗಳನ್ನು ಮರೆಮಾಚಿ ಥ್ರಿಲ್ಲರ್ ಆಗಿ ಉಳಿದುಬಿಡುತ್ತವೆ. ಸಮಾಜದ ವ್ಯಾಪಕ ಬದುಕಿನ ಸ್ಥಿತಿಯನ್ನು ಬೆಳಕಿಗೆ ತರುವುದೇ ಇಲ್ಲ.

‘ಸೋತವರು ಭವಿಷ್ಯದಲ್ಲಿ ಎಂದಿಗೂ ಜಯಿಸಿದವರನ್ನು ಎದುರಿಸುವ ಸಾಮರ್ಥ್ಯವನ್ನು ಪಡೆದುಕೊಳ್ಳಬಾರದು’ ಎಂಬ ಧೋರಣೆಯ ಒಪ್ಪಂದಗಳಲ್ಲಿ ಮತ್ತದೇ ಬಲಿಪಶುಗಳು ಸಾಮಾನ್ಯ ಜನರು. ಹೈದರನ ಮಟ್ಟ ಹಾಕಲು ಮೈಸೂರನ್ನು ಮುತ್ತುವ ಮರಾಠರು ಕ್ರೂರಿ ಪಿಂಡಾರಿಗಳ ಪಡೆಗಳನ್ನು ಸಾಮಾನ್ಯ ಪ್ರಜೆಗಳ ನಡುವೆ ನುಗ್ಗಿಸಿ ಕೊಲೆ, ಲೂಟಿ, ದಾಂಧಲೆಗಳನ್ನು ಮಾಡಿ ಗೊಂದಲಗಳನ್ನೆಬ್ಬಿಸಿ ಇತ್ತ ಯುದ್ಧಗಳನ್ನು ಮಾಡಿದ್ದೇನೂ ಮಹಾಭಾರತ ಅಥವಾ ರಾಮಾಯಣಗಳಲ್ಲಿ ಹೇಳುವಂತಹ ಕ್ಷತ್ರಿಯ ಧರ್ಮವೇನಲ್ಲ, ಶಾಸ್ತ್ರಗಳಲ್ಲಿ ಹೇಳುವ ಯುದ್ಧನೀತಿಯೂ ಅಲ್ಲ. ಅವರದ್ಯಾರದ್ದೂ ಜನತೆ, ಧರ್ಮ, ನೆಲ ಮತ್ತು ಸಂಸ್ಕೃತಿಗಳ ರಕ್ಷಣೆಯಲ್ಲ. ಬರೀ ಸ್ವಾರ್ಥ ಮತ್ತು ಅಧಿಕಾರ ದಾಹ.

ಬ್ರಿಟೀಷರೊಂದಿಗೆ ಕೈ ಜೋಡಿಸಿದ ಯಾರನ್ನೇ ಆಗಲಿ ಕಠಿಣವಾಗಿ ದಮನ ಮಾಡಿದ ಟಿಪ್ಪುವಿನ ಧೋರಣೆಯನ್ನು ಇಂದು ಮತಾಂಧ ಎಂದು ದೂರುವ ಧರ್ಮನಿಷ್ಟರಿಗಾಗಲಿ, ಸಾರ್ವಜನಿಕ ವಲಯಗಳನ್ನು ಖಾಸಗೀಕರಣ ಮಾಡುತ್ತಿರುವ ಆಡಳಿತದ ಚುಕ್ಕಾಣಿ ಹಿಡಿದಿರುವ ಚಾಣಾಕ್ಷರಾಗಲಿ, ವಾಟ್ಸಪ್ ಯೂನಿವರ್ಸಿಟಿಗಳಲ್ಲಿ ಕಲಿತು ಪ್ರಖಾಂಡ ಪಂಡಿತರಾಗಿರುವ ವಾದಿಗಳಾಗಲಿ ಈ ಕೃತಿಯಿಂದ ಚರಿತ್ರೆಯನ್ನು ವಿವೇಚಿಸುವುದು ಹೇಗೆ ಎಂದು ಕಲಿಯಬೇಕಿದೆ. ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗದಿಂದ ಪ್ರಕಟಗೊಂಡಿರುವ ಈ ಕೃತಿ ಭೂತ ಮತ್ತು ವರ್ತಮಾನದ ಚರಿತ್ರೆಯನ್ನು ಅವಲೋಕಿಸುವವರಿಗೆ ಒಂದು ಕೈದೊಂದಿ.


ಇದನ್ನೂ ಓದಿ: ಆರ್ಥಿಕ ಕುಸಿತದ ದುರಂತ : ಜನರ ಬದುಕು ಅತಂತ್ರ – ಡಾ. ಟಿ. ಆರ್. ಚಂದ್ರಶೇಖರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...