Homeಕರೋನಾ ತಲ್ಲಣಬಡಜನರ ಕೈಗೆ ನೇರ ನಗದು ನೀಡುವುದರಿಂದ ಮಾತ್ರ ಕುಸಿದಿರುವ ಆರ್ಥಿಕತೆ ಮೇಲೆತ್ತಲು ಸಾಧ್ಯ: ಆದರೆ ಸರ್ಕಾರಗಳು...

ಬಡಜನರ ಕೈಗೆ ನೇರ ನಗದು ನೀಡುವುದರಿಂದ ಮಾತ್ರ ಕುಸಿದಿರುವ ಆರ್ಥಿಕತೆ ಮೇಲೆತ್ತಲು ಸಾಧ್ಯ: ಆದರೆ ಸರ್ಕಾರಗಳು ಮಾಡುತ್ತಿರುವುದೇನು?

- Advertisement -
- Advertisement -

‘ಈಗ ಬಡತನ ರೇಖೆಗಿಂತ ಕೆಳಗೆ ಹೊಸದಾಗಿ ಸೇರಿರುವ ಜನರು ವಾಸ್ತವವಾಗಿ ಸಾಂಕ್ರಾಮಿಕಕ್ಕೆ ಮೊದಲು ಬಡತನ ರೇಖೆಗಿಂತ ಮೇಲಿದ್ದ ಜನರು. ಅವರು ಸಾಮಾನ್ಯ ಸ್ಥಿತಿಗೆ ಬರಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ ಎಂದು ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ ಅಭಿಪ್ರಾಯಪಟ್ಟಿದ್ದಾರೆ.

ಎನ್‍ಡಿಟಿವಿಗೆ ಗುರುವಾರ ನೀಡಿದ ಸಂದರ್ಶನದಲ್ಲಿ ಅವರು, “ಕೌಶಲ್ಯರಹಿತ ಕಾರ್ಮಿಕರು ಕೆಲಸ ಮಾಡುವ ಹೋಟೆಲ್‌ಗಳು, ಉತ್ಪಾದನೆ ಮತ್ತು ನಿರ್ಮಾಣ ವಲಯ ತ್ವರಿತವಾಗಿ ಪುನರುಜ್ಜೀವನಗೊಂಡರೆ, ಪರಿಸ್ಥಿತಿ ಸುಧಾರಿಸಬಹುದು” ಎಂದಿದ್ದಾರೆ.

ದೇಶದಲ್ಲಿ ಹಲವಾರು ಪ್ರಗತಿಪರ ಸಂಘಟನೆಗಳು-ನಮ್ಮ ರಾಜ್ಯದ ಕರ್ನಾಟಕ ಜನಶಕ್ತಿ ಸಂಘಟನೆಯೂ ಸೇರಿ- ಇದೇ ರೀತಿ ಆಗ್ರಹಿಸುತ್ತ ಬಂದಿವೆ. ಸರ್ಕಾರಗಳ ಕಿವಿಗಳಿಗೆ ಇದು ತಲುಪುತ್ತಿಲ್ಲ ಅಥವಾ ತಲುಪಿದರೂ ಅವು ತಮ್ಮದೇ ಸ್ವ ಹಿತಾಸಕ್ತಿಯ ಕಾರಣಕ್ಕೆ ಇದನ್ನು ಕೇಳಿಸಿ ಕೊಳ್ಳುತ್ತಿಲ್ಲ ಎಂಬುದು ಕಳೆದ ವರ್ಷದಿಂದ ಸಾಬೀತಾಗುತ್ತಲೇ ಇದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಘೋಷಿಸಿದ ಆರ್ಥಿಕ ಪ್ಯಾಕೇಜ್‍ಗಳು ಬಡವರನ್ನು ಭಾಗಶಃ ತಲುಪಿವೆ ಅಷ್ಟೇ.

ಸಾಂಕ್ರಾಮಿಕ ರೋಗದಿಂದಾಗಿ ಬಡತನಕ್ಕೆ ಇಳಿದ ಜನರಿಗೆ ಸಹಾಯ ಮಾಡಲು ನರೇಗಾ ಯೋಜನೆಯಡಿ ಸರ್ಕಾರ ದೊಡ್ಡ ಪ್ರಮಾಣದಲ್ಲಿ ನೇರ ಹಣ ಪಾವತಿ ಮಾಡಬೇಕೆಂದು ಹೇಳಿರುವ ನೊಬೆಲ್ ಪ್ರಶಸ್ತಿ ವಿಜೇತ ಅಭಿಜಿತ್ ಬ್ಯಾನರ್ಜಿ ಕೇಂದ್ರ ಸರ್ಕಾರವನ್ನು ಪರೋಕ್ಷವಾಗಿ ಟೀಕಿಸಿದ್ದಾರೆ.

ದೊಡ್ಡ ಪ್ರಮಾಣದ ನೇರ ನಗದು ವರ್ಗಾವಣೆ ಬಗ್ಗೆ ಸರ್ಕಾರ ಆಸಕ್ತಿ ಹೊಂದಿಲ್ಲ ಎಂಬುದನ್ನು ಅದು ಈಗಾಗಲೇ ಸೂಚಿಸಿದೆ, ಜನರು ಹಣವನ್ನು ಬ್ಯಾಂಕ್ ಖಾತೆಗಳಲ್ಲಿ ಮಾತ್ರ ಇಡುತ್ತಾರೆ ಮತ್ತು ಅದನ್ನು ಖರ್ಚು ಮಾಡುವುದಿಲ್ಲ ಎಂದು ಸರ್ಕಾರ ಭಾವಿಸಿದೆ ಎಂದು ಟೀಕಿಸಿದ್ದಾರೆ.

“ಈ ಸಮಯದಲ್ಲಿ ನಮಗೆ ನೇರ ನಗದು ವರ್ಗಾವಣೆ ಬೇಕು ಎಂದು ಹೇಳುವವರ ದೃಷ್ಟಿಕೋನವನ್ನು ನಾನು ಅನುಮೋದಿಸುತ್ತೇನೆ. ಆದರೆ ಎಲ್ಲಾ ನಗದು ವರ್ಗಾವಣೆಯು ಹೆಚ್ಚಿನ ಬ್ಯಾಂಕ್ ಠೇವಣಿಗಳಿಗೆ ಮಾತ್ರ ಕಾರಣವಾಗುತ್ತದೆ ಮತ್ತು ಹೆಚ್ಚಿನ ಬಳಕೆಯ ಖರ್ಚು ಸಂಭವಿಸುವುದಿಲ್ಲ. ಇದು ನಮಗೆ ಅಗತ್ಯವಿಲ್ಲ” ಎಂದು ನೀತಿ ಆಯೋಗ ಉಪಾಧ್ಯಕ್ಷ ರಾಜೀವ್ ಕುಮಾರ್ ಈ ವಾರದ ಆರಂಭದಲ್ಲಿ ಹೇಳಿದ್ದಾರೆ. ಅಂದರೆ ಇದರರ್ಥ ಸರ್ಕಾರಕ್ಕೆ ನೇರ ವರ್ಗಾವಣೆ ಮಾಡಲು ಮನಸ್ಸಿಲ್ಲ. ಅದು ಪ್ಯಾಕೇಜ್‍ಗಳ ಮೂಲಕ ಭ್ರಷ್ಟಾಚಾರವನ್ನು ವಿಕೇಂದ್ರಿಕರಣ ಮಾಡುತ್ತಿದೆ ಅಥವಾ ದೊಡ್ಡ ಅಂಕಿಸಂಖ್ಯೆ ತೋರಿಸಿ ಜನರನ್ನು ಮರಳು ಮಾಡುತ್ತಿದೆ ಅಲ್ಲವೇ? ಕಳೆದ ವರ್ಷದ ಪ್ಯಾಕೇಜ್‍ಗಳ ಪರಿಣಾಮಗಳು ಕಣ್ಣ ಮುಂದೆಯೇ ಇವೆಯಲ್ಲ?

ಈ ಬಗ್ಗೆ ನಾನುಗೌರಿ.ಕಾಂ ಜೊತೆ ಮಾತನಾಡಿದ ಚಿಂತಕ, ಸಾಮಾಜಿಕ ಹೋರಾಟಗಾರ ಬಂಜಗೆರೆ ಜಯಪ್ರಕಾಶ್‍, ‘ನರೇಗಾ ಕೆಲಸದ ದಿನಗಳನ್ನು ಹೆಚ್ಚಿಸುವುದು ಪರಿಣಾಮಕಾರಿ. ಆದರೆ ಇದು ರಾಜ್ಯದ ಬಹುಪಾಲು ಜನರನ್ನು ತಲುಪಲಾರದು. ಇಲ್ಲಿ ಟೇಲರ್‌ಗಳು, ಕ್ಷೌರಿಕರು, ಬಜ್ಜಿ-ಪಕೋಡಾ, ಸೊಪ್ಪು-ತರಕಾರಿ ಮಾರುವವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರಿಗೆ ತಿಂಗಳಿಗೆ 5 ಸಾವಿರ ರೂ. ಹಾಕಿದರೆ ಸರ್ಕಾರಕ್ಕೇನೂ ಹೊರೆ ಆಗಲಾರದು. ಉದ್ಯಮಿಗಳ ಸಾವಿರಾರು ಕೋಟಿ ರೂ ಸಾಲವನ್ನು ಮನ್ನಾ ಮಾಡಿರುವಾಗ ಇದೇನೂ ದೊಡ್ಡ ಹೊರೆಯಲ್ಲ, ಬದಲಿಗೆ ಅದು ಸಾಂವಿಧಾನಿಕ ಬದ್ಧತೆ’ ಎಂದು ಅಭಿಪ್ರಾಯಪಟ್ಟರು.

ಬಡತನವನ್ನು ಕಡಿಮೆ ಮಾಡುವ ಸಂಶೋಧನೆಯಲ್ಲಿ ಮುಂಚೂಣಿಯಲ್ಲಿರುವ ಅಭಿಜಿತ್ ಬ್ಯಾನರ್ಜಿ, ನರೇಗಾ (ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ) ಅಡಿಯಲ್ಲಿ ವಾರ್ಷಿಕ ಕೆಲಸದ ದಿನಗಳನ್ನು 100 ದಿನಗಳಿಂದ 150 ದಿನಗಳವರೆಗೆ ಹೆಚ್ಚಿಸಲು ಸೂಚಿಸುತ್ತಾರೆ.

ದುರ್ಬಲ ಕುಟುಂಬಗಳಿಗೆ ನೇರ ನಗದು ಹಸ್ತಾಂತರಿಸುವ ಬದಲು ಕಠಿಣವಾದ ವ್ಯವಹಾರಗಳಿಗೆ ಸಾಲವನ್ನು ಕೇಂದ್ರೀಕರಿಸಿದ್ದಕ್ಕಾಗಿ ಕೇಂದ್ರ ಸರ್ಕಾರ ತೀವ್ರ ಟೀಕೆಗಳನ್ನು ಎದುರಿಸುತ್ತಿದೆ. ಬಡ ಗ್ರಾಮೀಣ ಪ್ರದೇಶಗಳನ್ನು ಆವರಿಸಿರುವ ವಿನಾಶಕಾರಿ ಎರಡನೇ ಅಲೆಯು ಹೆಚ್ಚಿನ ಪ್ರಮಾಣದ ಸಾವುಗಳ ಮೂಲಕ ಹೊಸ ಅನಾಹುತಕ್ಕೆ ಕಾರಣವಾಗಬಹುದು ಎಂಬ ಆತಂಕಗಳಿವೆ.

‘ಎಲ್ಲಿಯವರೆಗೆ ಗ್ರಾಹಕರು ಹೊರಹೋಗಲು ಮತ್ತು ಸಂವಹನ ನಡೆಸಲು ಭಯ ಪಡುತ್ತಾರೋ  ಅಲ್ಲಿವರೆಗೆ ನೀವು ಏನೇ ಮಾಡಿದರೂ ಹೆಚ್ಚಿನ ಬಳಕೆ, ಹೆಚ್ಚಿನ ಬೇಡಿಕೆ ಮತ್ತು ಹೆಚ್ಚಿನ ಆರ್ಥಿಕ ಚಟುವಟಿಕೆ ಅಸಾಧ್ಯ ಎಂದು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಹೇಳುತ್ತಾರೆ.

ಜನರನ್ನು ಮನೆಯಲ್ಲಿ ಲಾಕ್‍ ಮಾಡಿದರೂ ಕೂಡ ನಿಗದಿತ ಅನುಮತಿಯ ಅವಧಿಯಲ್ಲಿ ಹೊರ ಬಂದು ತಮಗೆ ತೀರಾ ಅಗತ್ಯ ವಸ್ತುಗಳನ್ನು ಖರೀದಿಸುತ್ತಾರೆ ಎಂಬ ಪರಿಜ್ಞಾನವಿಲ್ಲದೇ ನೀತಿ ಆಯೋಗದ ಉಪಾಧ್ಯಕ್ಷ  ರಾಜೀವ್ ಕುಮಾರ್ ಮಾತನಾಡುತ್ತಿದ್ದಾರೆ. ಅವರ ಒಟ್ಟೂ ಉದ್ದೇಶ ನರೇಗಾಕ್ಕೆ ಹೆಚ್ಚು ಹಣ ನೀಡುವುದನ್ನು ಮತ್ತು ಜನರಿಗೆ ನೇರ ನಗದು ವರ್ಗಾವಣೆ ಮಾಡುವುದನ್ನು ವಿರೋಧಿಸುವ ಧಾಟಿಯಲ್ಲಿಯೇ ಇದೆ.

ಈ ಬಗ್ಗೆ ನಾನುಗೌರಿ. ಕಾಂ ಗೆ ಪ್ರತಿಕ್ರಿಯೆ ನೀಡಿದ ಜನಶಕ್ತಿ ಸಂಘಟನೆಯ ಸಂಚಾಲಕಿ ಮಲ್ಲಿಗೆ ಸಿರಿಮನೆ, ‘ನೀತಿ ಆಯೋಗ ಎಂಬುದೇ ಬ್ರಾಹ್ಮಣಶಾಹಿ ಆಲೋಚನೆಯಲ್ಲಿ ಮುಳುಗಿದೆ. ಬೆವರಿನ ಬೆಲೆ ಗೊತ್ತಿಲ್ಲದ, ಉದ್ಯಮಿಗಳ ಆರಾಧನೆ ಮಾಡುವ ಜನರೇ ಅಲ್ಲಿ ತುಂಬಿದ್ದಾರೆ. ಅಭಿಜಿತ್ ಬ್ಯಾನರ್ಜಿ, ಅಮರ್ತ್ಯಾ ಸೇನ್‍, ರಘುರಾಮ ರಾಜನ್‍ ತರಹದವರ ಜನಪರ ಆರ್ಥಿಕ ನಿಲುವುಗಳನ್ನು ನಮ್ಮ ಜನಶಕ್ತಿಯೂ ಬೆಂಬಲಿಸುತ್ತದೆ. ಸರ್ಕಾರದ ಮಾನದಂಡಗಳ ಪ್ರಕಾರವೇ ಒಂದು ಕುಟುಂಬಕ್ಕೆ ಕನಿಷ್ಠ ಮಾಸಿಕ 18 ಸಾವಿರ ರೂ. ಬೇಕು. ಇವರು ಅಷ್ಟು ಕೊಡುವುದು ಬೇಕಿಲ್ಲ. ಕುಟುಂಬದಲ್ಲಿ ದುಡಿಯುವ ಒಬ್ಬರಿಗೆ ಕನಿಷ್ಠ 5 ಸಾವಿರ ರೂ. ಮಾಸಿಕ ನಗದು ನೀಡಲಿ. ಕುಟುಂಬದಲ್ಲಿ ದುಡಿಯುವ ಏಕೈಕ ವ್ಯಕ್ತಿ  ಕೋವಿಡ್‍ನಿಂದ ಮೃತನಾಗಿದ್ದರೆ ಆ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರವನ್ನು ಕೂಡಲೇ ಒದಗಿಸಲಿ. ಎನ್‍ಪಿಎಗೆ (ವಸೂಲಾಗದ ಉದ್ಯಮಿಗಳ ಸಾಲ) ಹೋಲಿಸಿದರೆ ಇದೇನೂ ದೊಡ್ಡ ಮೊತ್ತವಲ್ಲ. ಇದನ್ನು ಮಾಡುವುದು ಸರ್ಕಾರಗಳ ಸಾಂವಿದಾನಿಕ ಬದ್ಧತೆ. ಸಾಮಾನ್ಯ ಜನರ ಕೈಗೆ ಬರುವ ನೇರ ನಗದು ಮರಳಿ ಮಾರುಕಟ್ಟೆಗೇ ಬರುತ್ತದೆ. ಇದರಿಂದ ಕುಸಿದ ಆರ್ಥಿಕತೆ ಚಿಗುರುತ್ತದೆ. ಎನ್‍ಪಿಎ ಗಿರಾಕಿಗಳು ದೇಶ ಬಿಟ್ಟು ಓಡಿ ಹೋಗಿ ಅಲ್ಲಿ ತಮ್ಮ ಅಕ್ರಮ ಸಂಪತ್ತನ್ನು ಬಳಸಿಕೊಳ್ಳುತ್ತಿದ್ದಾರೆ. ನಮ್ಮ ಜನರ ಕೈಗೆ ನಗದು ನೀಡಿ ನೋಡಿ, ಅವರು ಅದನ್ನು ಇಲ್ಲೇ ಹಾಕುತ್ತಾರೆ, ನಮ್ಮ ಆರ್ಥಿಕತೆಯನ್ನು ಕೆಳಗಿನಿಂದ ಮೇಲಕ್ಕೆ ಎತ್ತುತ್ತಾರೆ’ ಎಂದು ವಿವರಿಸಿದರು.

‘ರಾಜ್ಯದಲ್ಲಿ 7 ಸಾವಿರ ಕೋಟಿ ರೂ. ಹಣವನ್ನು ಬಿಪಿಎಲ್‍ ಕುಟುಂಬಗಳಿಗೆ ನೇರ ವರ್ಗಾಯಿಸಬೇಕು. ಇದೇನೂ ದೊಡ್ಡ ಹೊರೆಯಾ? ಈಗಾಗಲೇ ಅನ್ನಭಾಗ್ಯ ಯೋಜನೆ ಇದೆಯಲ್ಲ, ಅದರಲ್ಲಿ ಕನಿಷ್ಠ 10 ಕೆ.ಜಿ. ಅಕ್ಕಿಯನ್ನಾದರೂ ಕೊಡಬೇಕು. ಇದೆಲ್ಲ ಸರ್ಕಾರದ ಪ್ರಾಥಮಿಕ ಕರ್ತವ್ಯ. ಅತಂತ್ರವಾದ ಕುಟುಂಬಗಳಿಗೆ ಕನಿಷ್ಠ 5 ಸಾವಿರ ರೂ ನೇರ ನಗದು ನೀಡಬೇಕು. ಆಗ ಅವರ ಖರೀದಿ ಶಕ್ತಿಯೂ ಹೆಚ್ಚಾಗುತ್ತದೆ, ಅದರಿಂದ ಒಟ್ಟೂ ಆರ್ಥಿಕತೆ ಬಲಗೊಳ್ಳುತ್ತದೆ’ ಎನ್ನುತ್ತಾರೆ ಸಾಮಾಜಿಕ ಹೋರಾಟಗಾರ ಕೆ.ಎಲ್‍ ಅಶೋಕ್‍.

‘ಭಾರತದಂತಹ ಬಡ ದೇಶಗಳಿಗಿಂತ ಭಿನ್ನವಾಗಿ, ಸಾಂಕ್ರಾಮಿಕ ಪರಿಣಾಮಗಳನ್ನು ನಿವಾರಿಸಲು ಅಮೆರಿಕ, ಬ್ರಿಟನ್‍ ಮತ್ತು ಯುರೋಪಿಯನ್‍ ಒಕ್ಕೂಟದ  ಶ್ರೀಮಂತ ಸರ್ಕಾರಗಳು  ಕೂಡ ಬೃಹತ್ ಪ್ರಮಾಣದಲ್ಲಿ ಸಾಲ ಪಡೆದು, ಸಾಂಕ್ರಾಮಿಕದಿಂದ ನಿರುದ್ಯೋಗಿ ಆದವರಿಗೆ  ನಗದು ಪಾವತಿಸುತ್ತಿವೆ ಎಂದು ಬ್ಯಾನರ್ಜಿ ಹೇಳುತ್ತಾರೆ. ಸಾಂಕ್ರಾಮಿಕ ರೋಗದ ಆರಂಭದ ಮೊದಲಿಗಿಂತ ಈಗ ಜಾಗತಿಕವಾಗಿ ಸುಮಾರು 100 ಮಿಲಿಯನ್ ಜನರು ತೀವ್ರ ಬಡತನದಲ್ಲಿ ಬದುಕುತ್ತಿದ್ದಾರೆ ಎಂದು ಅವರು ಅಂದಾಜಿಸಿದ್ದಾರೆ.

ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಲಾಕ್‌ಡೌನ್ ಮೂಲಕ  ಆರ್ಥಿಕತೆಯನ್ನು ವಿನಾಶ  ಮಾಡುತ್ತಿವೆ. ಸದ್ಯ ಸಾಂಕ್ರಾಮಿಕ ಇನ್ನಷ್ಟು ಹೆಚ್ಚಿದೆ ಮತ್ತು ಸಾವಿನ ಸಂಖ್ಯೆ ಉಲ್ಬಣಗೊಂಡಿದೆ ಎನ್ನುವ ಬ್ಯಾನರ್ಜಿ, ಭಾರತದಲ್ಲಿ ಮೊದಲ ಲಾಕ್‌ಡೌನ್ ಕಾರಣಕ್ಕೆ ದೇಶದ ಜಿಡಿಪಿಯ ಕಾಲು ಭಾಗ ಕುಸಿದಿತ್ತು ಎನ್ನುತ್ತಾರೆ.

ತಜ್ಞರ ಮಾತುಗಳನ್ನೂ ಕೇಳದ, ತಳಮಟ್ಟದಲ್ಲಿ ಕೆಲಸ ಮಾಡುವ ಸಾಮಾಜಿಕ ಕಾರ್ಯಕರ್ತರ ಬೇಡಿಕೆಗಳನ್ನೂ ಪರಿಗಣಿಸದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಕುಸಿದಿರುವ ಆರ್ಥಿಕತೆ ಯಾವ ರೀತಿ ಮೇಲೆತ್ತುತ್ತಾರೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ.

  • ಪಿ.ಕೆ. ಮಲ್ಲನಗೌಡರ್

ಇದನ್ನೂ ಓದಿ: ಲಕ್ಷದ್ವೀಪ: ಕೇಂದ್ರದಿಂದ ಜೈವಿಕ ಅಸ್ತ್ರ ಬಳಕೆ ಆರೋಪ, ನಿರ್ಮಾಪಕಿ ವಿರುದ್ಧ ದೇಶದ್ರೋಹ ಪ್ರಕರಣ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

SIR: 43ಲಕ್ಷದಲ್ಲಿ ನೋಟಿಸ್ ತಲುಪಿರುವುದು 25ಲಕ್ಷ ಜನರಿಗೆ ಮಾತ್ರ, ಬಾಕಿ 18ಲಕ್ಷ ಜನರಿಗೆ ಇನ್ನು ನೋಟಿಸ್ಸೇ ತಲುಪಿಲ್ಲ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ಆಡಳಿತಾತ್ಮಕ ಗೊಂದಲ ಹಾಗೂ ಯಾಂತ್ರಿಕ ಲೋಪಗಳ ಜಾಲದಲ್ಲಿ ಸಿಲುಕಿಬಿದ್ದಿದೆ. ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಬಿಡುಗಡೆ ಮಾಡಿರುವ ಇತ್ತೀಚಿನ ದತ್ತಾಂಶವೇ ಆಯೋಗದ...

ಕಾಳಿಘಾಟ್‌ನಲ್ಲಿ ‘ಮೀನಿನ ಪ್ರಸಾದ’ ಸ್ವೀಕರಿಸಿದ ಸುವೇಂದು ಅಧಿಕಾರಿ; ಬಾಗೇಶ್ವರ್ ಬಾಬಾ ‘ಮಾಂಸಾಹಾರ’ ವಿವಾದಕ್ಕೆ ಹೊಸ ತಿರುವು!

ದುರ್ಗಾ ಪೂಜೆ ಸಂದರ್ಭದಲ್ಲಿ ಮೀನು–ಮಾಂಸ ಸೇವನೆ ಕುರಿತು ಬಾಗೇಶ್ವರ್ ಧಾಮದ ಧೀರೇಂದ್ರ ಕೃಷ್ಣ ಶಾಸ್ತ್ರಿ ನೀಡಿರುವ ಹೇಳಿಕೆ ಪಶ್ಚಿಮ ಬಂಗಾಳದಲ್ಲಿ ವಿವಾದಕ್ಕೆ ಕಾರಣವಾಗಿರುವ ನಡುವೆಯೇ, ಮುಖ್ಯಮಂತ್ರಿ ಸುವೇಂದು ಅಧಿಕಾರಿ ಕಾಳಿಘಾಟ್ʼನ ಕಾಳಿ ದೇವಸ್ಥಾನದಲ್ಲಿ...

ಎಸ್‌ಐಆರ್‌: ಹೈದರಾಬಾದ್, ಸಿಕಂದರಾಬಾದ್‌ನಲ್ಲಿ ಲಕ್ಷಾಂತರ ಮತದಾರರ ಹೆಸರು ಅಳಿಸುವಿಕೆ; 2029ರ ಚುನಾವಣೆಗೂ ಮುನ್ನ ಗಂಭೀರ ಆತಂಕ

ಹೈದರಾಬಾದ್: ತೆಲಂಗಾಣದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಡಿ ಮತದಾರರ ಪಟ್ಟಿಯಿಂದ ಭಾರೀ ಪ್ರಮಾಣದಲ್ಲಿ ಹೆಸರುಗಳನ್ನು ತೆಗೆದುಹಾಕಲಾಗಿರುವುದು ಮುಂದಿನ ಚುನಾವಣೆಯ ರಾಜಕೀಯ ಲೆಕ್ಕಾಚಾರಗಳ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯನ್ನು ಹುಟ್ಟುಹಾಕಿದೆ....

9/11 ದಾಳಿಗೆ 25 ವರ್ಷ: ‘ಭಯೋತ್ಪಾದನೆ ವಿರುದ್ಧದ ಯುದ್ಧ’ ಮತ್ತು ಕುಸಿದ ಪ್ರಜಾಪ್ರಭುತ್ವದ ಮೌಲ್ಯಗಳು

ನ್ಯೂಯಾರ್ಕ್‌ನ ಪ್ರತಿಷ್ಠಿತ ವರ್ಲ್ಡ್ ಟ್ರೇಡ್ ಸೆಂಟರ್ ಅವಳಿ ಗೋಪುರಗಳ ಮೇಲೆ ನಡೆದ ಭೀಕರ ಭಯೋತ್ಪಾದನಾ ದಾಳಿಗೆ ಇಂದಿಗೆ ಭರ್ತಿ 25 ವರ್ಷಗಳು ತುಂಬಿವೆ. ಈ ಕಾಲು ಶತಮಾನದ ಅವಧಿಯಲ್ಲಿ 'ಭಯೋತ್ಪಾದನೆ ವಿರುದ್ಧದ ಜಾಗತಿಕ...

‘ಈ ಪ್ರಕ್ರಿಯೆಯೇ ಶಿಕ್ಷೆಯಾಗಿದೆ’: ಉಮರ್ ಖಾಲಿದ್ ದೀರ್ಘ ಜೈಲುವಾಸದ ಬಗ್ಗೆ ಮಾಜಿ ನ್ಯಾಯಮೂರ್ತಿ ದೀಪಕ್ ಗುಪ್ತಾ ತೀವ್ರ ಟೀಕೆ

ನವದೆಹಲಿ: ಮಾನವ ಹಕ್ಕುಗಳ ಕಾರ್ಯಕರ್ತ, ವಿದ್ಯಾರ್ಥಿ ನಾಯಕ ಉಮರ್ ಖಾಲಿದ್ ಅವರ ದೀರ್ಘಕಾಲದ ವಿಚಾರಣಾಪೂರ್ವ ಬಂಧನ, ಎಲ್ಗರ್ ಪರಿಷತ್ ಪ್ರಕರಣದ ಆರೋಪಿಗಳ ವರ್ಷಗಳ ಜೈಲುವಾಸ ಹಾಗೂ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ನ್ಯಾಯಾಂಗದ...

‘ದೇಶವಿರೋಧಿ ಮನಸ್ಥಿತಿಯಲ್ಲ’: ಜಿ.ಎನ್. ಸಾಯಿಬಾಬಾ ಸ್ಮರಣೆ ಪ್ರಕರಣದಲ್ಲಿ ‘ಟಿಸ್’ ಮಾಜಿ ವಿದ್ಯಾರ್ಥಿಗೆ ಜಾಮೀನು!

ದೆಹಲಿ ವಿಶ್ವವಿದ್ಯಾಲಯದ ಮಾಜಿ ಪ್ರಾಧ್ಯಾಪಕ ದಿವಂಗತ ಜಿ.ಎನ್. ಸಾಯಿಬಾಬಾ ಅವರ ಸ್ಮರಣಾರ್ಥ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ (TISS) ಕ್ಯಾಂಪಸ್‌ನಲ್ಲಿ ನಡೆದ ಅನುಮತಿರಹಿತ ಕಾರ್ಯಕ್ರಮಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಬಂಧಿತರಾಗಿದ್ದ ಮಾಜಿ ವಿದ್ಯಾರ್ಥಿ...

ಜನಾಕ್ರೋಶದ ನಡುವೆಯೇ ಎಸ್ಐಆರ್ ಸಮರ್ಥಿಸಿಕೊಂಡ ಮುಖ್ಯ ಚುನಾವಣಾ ಆಯುಕ್ತ: ‘ರಾಜಕೀಯ ದಾಳಿಗಳಿಂದ ಆಯೋಗ ವಿಚಲಿತವಾಗದು’ ಎಂದ ಜ್ಞಾನೇಶ್ ಕುಮಾರ್

ಅಹಮದಾಬಾದ್: ದೇಶದ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ (SIR) ಕುರಿತು ರಾಜಕೀಯ ಪಕ್ಷಗಳು, ನಾಗರಿಕ ಸಂಘಟನೆಗಳು ಹಾಗೂ ವಿವಿಧ ವಲಯಗಳಿಂದ ತೀವ್ರ ಟೀಕೆಗಳು ವ್ಯಕ್ತವಾಗುತ್ತಿರುವ ನಡುವೆಯೇ, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್...

ಕರ್ನಾಟಕ ಎಸ್ಐಆರ್: ಹೆಸರಿನ ಸಣ್ಣ ವ್ಯತ್ಯಾಸಕ್ಕಾಗಿ ನಿವೃತ್ತ ಐಎಎಸ್ ಅಧಿಕಾರಿ ಎ.ಬಿ. ಇಬ್ರಾಹಿಂ ಅವರಿಗೆ ನೋಟಿಸ್; ‘ಸುಳ್ಳು ಮಾಹಿತಿ ನೀಡಿದರೆ ಜೈಲು’ ಎಂಬ ಬೆದರಿಕೆ

ಮೈಸೂರು: ಸುಮಾರು ಮೂರೂವರೆ ದಶಕಗಳ ಕಾಲ ರಾಜ್ಯದ ಆಡಳಿತ ವ್ಯವಸ್ಥೆಯಲ್ಲಿ ಸೇವೆ ಸಲ್ಲಿಸಿ, ಸ್ವತಃ ಚುನಾವಣಾ ಪ್ರಕ್ರಿಯೆಯ ಜವಾಬ್ದಾರಿಯುತ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ್ದ ನಿವೃತ್ತ ಐಎಎಸ್ ಅಧಿಕಾರಿ ಎ.ಬಿ. ಇಬ್ರಾಹಿಂ ಅವರೇ ಇದೀಗ ತಮ್ಮ...

SIR : ತಾಯಿಯೊಂದಿಗೆ ಮ್ಯಾಪಿಂಗ್ ಮಾಡಿದರೂ ಅಜ್ಜನ ವಯಸ್ಸಿನ ವ್ಯತ್ಯಾಸದ ನೆಪ ಹೇಳಿ ನೋಟಿಸ್ ನೀಡಿದ ಚುನಾವಣಾ ಆಯೋಗ

ಕರ್ನಾಟಕದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯು ದಿನಕ್ಕೊಂದು ವಿಲಕ್ಷಣ ಹಾಗೂ ಯಾಂತ್ರಿಕ ದೋಷಗಳನ್ನು ಹೊರಹಾಕುತ್ತಿದ್ದು, ಪ್ರಜಾಪ್ರಭುತ್ವದ ಹಕ್ಕನ್ನು ಚಲಾಯಿಸಲು ಬಯಸುವ ನೈಜ ಮತದಾರರನ್ನು ಆತಂಕಕ್ಕೆ ತಳ್ಳುತ್ತಿದೆ. ಬ್ಯಾಟರಾಯನಪುರ...

ಬ್ಯಾಂಕ್ ಮುಷ್ಕರ: ದೇಶಾದ್ಯಂತ ಶಾಖಾ ಸೇವೆಗಳಿಗೆ ಅಡಚಣೆ; ವಾರಾಂತ್ಯ, ಗಣೇಶ ಚತುರ್ಥಿಯಿಂದ ಹಲವು ದಿನ ಸೇವೆ ವ್ಯತ್ಯಯ 

ನವದೆಹಲಿ: ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ಕರೆ ನೀಡಿರುವ ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಸೆಪ್ಟೆಂಬರ್ 11ರಂದು (ಇಂದು) ನಡೆಯುತ್ತಿದ್ದು, ದೇಶದಾದ್ಯಂತ ಬ್ಯಾಂಕ್ ಗ್ರಾಹಕರ ಸಾಮಾನ್ಯ ಸೇವೆಗಳ ಮೇಲೆ ಪರಿಣಾಮ ಬೀರುವ...