Homeಕರೋನಾ ತಲ್ಲಣಬಡಜನರ ಕೈಗೆ ನೇರ ನಗದು ನೀಡುವುದರಿಂದ ಮಾತ್ರ ಕುಸಿದಿರುವ ಆರ್ಥಿಕತೆ ಮೇಲೆತ್ತಲು ಸಾಧ್ಯ: ಆದರೆ ಸರ್ಕಾರಗಳು...

ಬಡಜನರ ಕೈಗೆ ನೇರ ನಗದು ನೀಡುವುದರಿಂದ ಮಾತ್ರ ಕುಸಿದಿರುವ ಆರ್ಥಿಕತೆ ಮೇಲೆತ್ತಲು ಸಾಧ್ಯ: ಆದರೆ ಸರ್ಕಾರಗಳು ಮಾಡುತ್ತಿರುವುದೇನು?

- Advertisement -
- Advertisement -

‘ಈಗ ಬಡತನ ರೇಖೆಗಿಂತ ಕೆಳಗೆ ಹೊಸದಾಗಿ ಸೇರಿರುವ ಜನರು ವಾಸ್ತವವಾಗಿ ಸಾಂಕ್ರಾಮಿಕಕ್ಕೆ ಮೊದಲು ಬಡತನ ರೇಖೆಗಿಂತ ಮೇಲಿದ್ದ ಜನರು. ಅವರು ಸಾಮಾನ್ಯ ಸ್ಥಿತಿಗೆ ಬರಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ ಎಂದು ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಭಿಜಿತ್ ಬ್ಯಾನರ್ಜಿ ಅಭಿಪ್ರಾಯಪಟ್ಟಿದ್ದಾರೆ.

ಎನ್‍ಡಿಟಿವಿಗೆ ಗುರುವಾರ ನೀಡಿದ ಸಂದರ್ಶನದಲ್ಲಿ ಅವರು, “ಕೌಶಲ್ಯರಹಿತ ಕಾರ್ಮಿಕರು ಕೆಲಸ ಮಾಡುವ ಹೋಟೆಲ್‌ಗಳು, ಉತ್ಪಾದನೆ ಮತ್ತು ನಿರ್ಮಾಣ ವಲಯ ತ್ವರಿತವಾಗಿ ಪುನರುಜ್ಜೀವನಗೊಂಡರೆ, ಪರಿಸ್ಥಿತಿ ಸುಧಾರಿಸಬಹುದು” ಎಂದಿದ್ದಾರೆ.

ದೇಶದಲ್ಲಿ ಹಲವಾರು ಪ್ರಗತಿಪರ ಸಂಘಟನೆಗಳು-ನಮ್ಮ ರಾಜ್ಯದ ಕರ್ನಾಟಕ ಜನಶಕ್ತಿ ಸಂಘಟನೆಯೂ ಸೇರಿ- ಇದೇ ರೀತಿ ಆಗ್ರಹಿಸುತ್ತ ಬಂದಿವೆ. ಸರ್ಕಾರಗಳ ಕಿವಿಗಳಿಗೆ ಇದು ತಲುಪುತ್ತಿಲ್ಲ ಅಥವಾ ತಲುಪಿದರೂ ಅವು ತಮ್ಮದೇ ಸ್ವ ಹಿತಾಸಕ್ತಿಯ ಕಾರಣಕ್ಕೆ ಇದನ್ನು ಕೇಳಿಸಿ ಕೊಳ್ಳುತ್ತಿಲ್ಲ ಎಂಬುದು ಕಳೆದ ವರ್ಷದಿಂದ ಸಾಬೀತಾಗುತ್ತಲೇ ಇದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಘೋಷಿಸಿದ ಆರ್ಥಿಕ ಪ್ಯಾಕೇಜ್‍ಗಳು ಬಡವರನ್ನು ಭಾಗಶಃ ತಲುಪಿವೆ ಅಷ್ಟೇ.

ಸಾಂಕ್ರಾಮಿಕ ರೋಗದಿಂದಾಗಿ ಬಡತನಕ್ಕೆ ಇಳಿದ ಜನರಿಗೆ ಸಹಾಯ ಮಾಡಲು ನರೇಗಾ ಯೋಜನೆಯಡಿ ಸರ್ಕಾರ ದೊಡ್ಡ ಪ್ರಮಾಣದಲ್ಲಿ ನೇರ ಹಣ ಪಾವತಿ ಮಾಡಬೇಕೆಂದು ಹೇಳಿರುವ ನೊಬೆಲ್ ಪ್ರಶಸ್ತಿ ವಿಜೇತ ಅಭಿಜಿತ್ ಬ್ಯಾನರ್ಜಿ ಕೇಂದ್ರ ಸರ್ಕಾರವನ್ನು ಪರೋಕ್ಷವಾಗಿ ಟೀಕಿಸಿದ್ದಾರೆ.

ದೊಡ್ಡ ಪ್ರಮಾಣದ ನೇರ ನಗದು ವರ್ಗಾವಣೆ ಬಗ್ಗೆ ಸರ್ಕಾರ ಆಸಕ್ತಿ ಹೊಂದಿಲ್ಲ ಎಂಬುದನ್ನು ಅದು ಈಗಾಗಲೇ ಸೂಚಿಸಿದೆ, ಜನರು ಹಣವನ್ನು ಬ್ಯಾಂಕ್ ಖಾತೆಗಳಲ್ಲಿ ಮಾತ್ರ ಇಡುತ್ತಾರೆ ಮತ್ತು ಅದನ್ನು ಖರ್ಚು ಮಾಡುವುದಿಲ್ಲ ಎಂದು ಸರ್ಕಾರ ಭಾವಿಸಿದೆ ಎಂದು ಟೀಕಿಸಿದ್ದಾರೆ.

“ಈ ಸಮಯದಲ್ಲಿ ನಮಗೆ ನೇರ ನಗದು ವರ್ಗಾವಣೆ ಬೇಕು ಎಂದು ಹೇಳುವವರ ದೃಷ್ಟಿಕೋನವನ್ನು ನಾನು ಅನುಮೋದಿಸುತ್ತೇನೆ. ಆದರೆ ಎಲ್ಲಾ ನಗದು ವರ್ಗಾವಣೆಯು ಹೆಚ್ಚಿನ ಬ್ಯಾಂಕ್ ಠೇವಣಿಗಳಿಗೆ ಮಾತ್ರ ಕಾರಣವಾಗುತ್ತದೆ ಮತ್ತು ಹೆಚ್ಚಿನ ಬಳಕೆಯ ಖರ್ಚು ಸಂಭವಿಸುವುದಿಲ್ಲ. ಇದು ನಮಗೆ ಅಗತ್ಯವಿಲ್ಲ” ಎಂದು ನೀತಿ ಆಯೋಗ ಉಪಾಧ್ಯಕ್ಷ ರಾಜೀವ್ ಕುಮಾರ್ ಈ ವಾರದ ಆರಂಭದಲ್ಲಿ ಹೇಳಿದ್ದಾರೆ. ಅಂದರೆ ಇದರರ್ಥ ಸರ್ಕಾರಕ್ಕೆ ನೇರ ವರ್ಗಾವಣೆ ಮಾಡಲು ಮನಸ್ಸಿಲ್ಲ. ಅದು ಪ್ಯಾಕೇಜ್‍ಗಳ ಮೂಲಕ ಭ್ರಷ್ಟಾಚಾರವನ್ನು ವಿಕೇಂದ್ರಿಕರಣ ಮಾಡುತ್ತಿದೆ ಅಥವಾ ದೊಡ್ಡ ಅಂಕಿಸಂಖ್ಯೆ ತೋರಿಸಿ ಜನರನ್ನು ಮರಳು ಮಾಡುತ್ತಿದೆ ಅಲ್ಲವೇ? ಕಳೆದ ವರ್ಷದ ಪ್ಯಾಕೇಜ್‍ಗಳ ಪರಿಣಾಮಗಳು ಕಣ್ಣ ಮುಂದೆಯೇ ಇವೆಯಲ್ಲ?

ಈ ಬಗ್ಗೆ ನಾನುಗೌರಿ.ಕಾಂ ಜೊತೆ ಮಾತನಾಡಿದ ಚಿಂತಕ, ಸಾಮಾಜಿಕ ಹೋರಾಟಗಾರ ಬಂಜಗೆರೆ ಜಯಪ್ರಕಾಶ್‍, ‘ನರೇಗಾ ಕೆಲಸದ ದಿನಗಳನ್ನು ಹೆಚ್ಚಿಸುವುದು ಪರಿಣಾಮಕಾರಿ. ಆದರೆ ಇದು ರಾಜ್ಯದ ಬಹುಪಾಲು ಜನರನ್ನು ತಲುಪಲಾರದು. ಇಲ್ಲಿ ಟೇಲರ್‌ಗಳು, ಕ್ಷೌರಿಕರು, ಬಜ್ಜಿ-ಪಕೋಡಾ, ಸೊಪ್ಪು-ತರಕಾರಿ ಮಾರುವವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರಿಗೆ ತಿಂಗಳಿಗೆ 5 ಸಾವಿರ ರೂ. ಹಾಕಿದರೆ ಸರ್ಕಾರಕ್ಕೇನೂ ಹೊರೆ ಆಗಲಾರದು. ಉದ್ಯಮಿಗಳ ಸಾವಿರಾರು ಕೋಟಿ ರೂ ಸಾಲವನ್ನು ಮನ್ನಾ ಮಾಡಿರುವಾಗ ಇದೇನೂ ದೊಡ್ಡ ಹೊರೆಯಲ್ಲ, ಬದಲಿಗೆ ಅದು ಸಾಂವಿಧಾನಿಕ ಬದ್ಧತೆ’ ಎಂದು ಅಭಿಪ್ರಾಯಪಟ್ಟರು.

ಬಡತನವನ್ನು ಕಡಿಮೆ ಮಾಡುವ ಸಂಶೋಧನೆಯಲ್ಲಿ ಮುಂಚೂಣಿಯಲ್ಲಿರುವ ಅಭಿಜಿತ್ ಬ್ಯಾನರ್ಜಿ, ನರೇಗಾ (ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ) ಅಡಿಯಲ್ಲಿ ವಾರ್ಷಿಕ ಕೆಲಸದ ದಿನಗಳನ್ನು 100 ದಿನಗಳಿಂದ 150 ದಿನಗಳವರೆಗೆ ಹೆಚ್ಚಿಸಲು ಸೂಚಿಸುತ್ತಾರೆ.

ದುರ್ಬಲ ಕುಟುಂಬಗಳಿಗೆ ನೇರ ನಗದು ಹಸ್ತಾಂತರಿಸುವ ಬದಲು ಕಠಿಣವಾದ ವ್ಯವಹಾರಗಳಿಗೆ ಸಾಲವನ್ನು ಕೇಂದ್ರೀಕರಿಸಿದ್ದಕ್ಕಾಗಿ ಕೇಂದ್ರ ಸರ್ಕಾರ ತೀವ್ರ ಟೀಕೆಗಳನ್ನು ಎದುರಿಸುತ್ತಿದೆ. ಬಡ ಗ್ರಾಮೀಣ ಪ್ರದೇಶಗಳನ್ನು ಆವರಿಸಿರುವ ವಿನಾಶಕಾರಿ ಎರಡನೇ ಅಲೆಯು ಹೆಚ್ಚಿನ ಪ್ರಮಾಣದ ಸಾವುಗಳ ಮೂಲಕ ಹೊಸ ಅನಾಹುತಕ್ಕೆ ಕಾರಣವಾಗಬಹುದು ಎಂಬ ಆತಂಕಗಳಿವೆ.

‘ಎಲ್ಲಿಯವರೆಗೆ ಗ್ರಾಹಕರು ಹೊರಹೋಗಲು ಮತ್ತು ಸಂವಹನ ನಡೆಸಲು ಭಯ ಪಡುತ್ತಾರೋ  ಅಲ್ಲಿವರೆಗೆ ನೀವು ಏನೇ ಮಾಡಿದರೂ ಹೆಚ್ಚಿನ ಬಳಕೆ, ಹೆಚ್ಚಿನ ಬೇಡಿಕೆ ಮತ್ತು ಹೆಚ್ಚಿನ ಆರ್ಥಿಕ ಚಟುವಟಿಕೆ ಅಸಾಧ್ಯ ಎಂದು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್ ಕುಮಾರ್ ಹೇಳುತ್ತಾರೆ.

ಜನರನ್ನು ಮನೆಯಲ್ಲಿ ಲಾಕ್‍ ಮಾಡಿದರೂ ಕೂಡ ನಿಗದಿತ ಅನುಮತಿಯ ಅವಧಿಯಲ್ಲಿ ಹೊರ ಬಂದು ತಮಗೆ ತೀರಾ ಅಗತ್ಯ ವಸ್ತುಗಳನ್ನು ಖರೀದಿಸುತ್ತಾರೆ ಎಂಬ ಪರಿಜ್ಞಾನವಿಲ್ಲದೇ ನೀತಿ ಆಯೋಗದ ಉಪಾಧ್ಯಕ್ಷ  ರಾಜೀವ್ ಕುಮಾರ್ ಮಾತನಾಡುತ್ತಿದ್ದಾರೆ. ಅವರ ಒಟ್ಟೂ ಉದ್ದೇಶ ನರೇಗಾಕ್ಕೆ ಹೆಚ್ಚು ಹಣ ನೀಡುವುದನ್ನು ಮತ್ತು ಜನರಿಗೆ ನೇರ ನಗದು ವರ್ಗಾವಣೆ ಮಾಡುವುದನ್ನು ವಿರೋಧಿಸುವ ಧಾಟಿಯಲ್ಲಿಯೇ ಇದೆ.

ಈ ಬಗ್ಗೆ ನಾನುಗೌರಿ. ಕಾಂ ಗೆ ಪ್ರತಿಕ್ರಿಯೆ ನೀಡಿದ ಜನಶಕ್ತಿ ಸಂಘಟನೆಯ ಸಂಚಾಲಕಿ ಮಲ್ಲಿಗೆ ಸಿರಿಮನೆ, ‘ನೀತಿ ಆಯೋಗ ಎಂಬುದೇ ಬ್ರಾಹ್ಮಣಶಾಹಿ ಆಲೋಚನೆಯಲ್ಲಿ ಮುಳುಗಿದೆ. ಬೆವರಿನ ಬೆಲೆ ಗೊತ್ತಿಲ್ಲದ, ಉದ್ಯಮಿಗಳ ಆರಾಧನೆ ಮಾಡುವ ಜನರೇ ಅಲ್ಲಿ ತುಂಬಿದ್ದಾರೆ. ಅಭಿಜಿತ್ ಬ್ಯಾನರ್ಜಿ, ಅಮರ್ತ್ಯಾ ಸೇನ್‍, ರಘುರಾಮ ರಾಜನ್‍ ತರಹದವರ ಜನಪರ ಆರ್ಥಿಕ ನಿಲುವುಗಳನ್ನು ನಮ್ಮ ಜನಶಕ್ತಿಯೂ ಬೆಂಬಲಿಸುತ್ತದೆ. ಸರ್ಕಾರದ ಮಾನದಂಡಗಳ ಪ್ರಕಾರವೇ ಒಂದು ಕುಟುಂಬಕ್ಕೆ ಕನಿಷ್ಠ ಮಾಸಿಕ 18 ಸಾವಿರ ರೂ. ಬೇಕು. ಇವರು ಅಷ್ಟು ಕೊಡುವುದು ಬೇಕಿಲ್ಲ. ಕುಟುಂಬದಲ್ಲಿ ದುಡಿಯುವ ಒಬ್ಬರಿಗೆ ಕನಿಷ್ಠ 5 ಸಾವಿರ ರೂ. ಮಾಸಿಕ ನಗದು ನೀಡಲಿ. ಕುಟುಂಬದಲ್ಲಿ ದುಡಿಯುವ ಏಕೈಕ ವ್ಯಕ್ತಿ  ಕೋವಿಡ್‍ನಿಂದ ಮೃತನಾಗಿದ್ದರೆ ಆ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರವನ್ನು ಕೂಡಲೇ ಒದಗಿಸಲಿ. ಎನ್‍ಪಿಎಗೆ (ವಸೂಲಾಗದ ಉದ್ಯಮಿಗಳ ಸಾಲ) ಹೋಲಿಸಿದರೆ ಇದೇನೂ ದೊಡ್ಡ ಮೊತ್ತವಲ್ಲ. ಇದನ್ನು ಮಾಡುವುದು ಸರ್ಕಾರಗಳ ಸಾಂವಿದಾನಿಕ ಬದ್ಧತೆ. ಸಾಮಾನ್ಯ ಜನರ ಕೈಗೆ ಬರುವ ನೇರ ನಗದು ಮರಳಿ ಮಾರುಕಟ್ಟೆಗೇ ಬರುತ್ತದೆ. ಇದರಿಂದ ಕುಸಿದ ಆರ್ಥಿಕತೆ ಚಿಗುರುತ್ತದೆ. ಎನ್‍ಪಿಎ ಗಿರಾಕಿಗಳು ದೇಶ ಬಿಟ್ಟು ಓಡಿ ಹೋಗಿ ಅಲ್ಲಿ ತಮ್ಮ ಅಕ್ರಮ ಸಂಪತ್ತನ್ನು ಬಳಸಿಕೊಳ್ಳುತ್ತಿದ್ದಾರೆ. ನಮ್ಮ ಜನರ ಕೈಗೆ ನಗದು ನೀಡಿ ನೋಡಿ, ಅವರು ಅದನ್ನು ಇಲ್ಲೇ ಹಾಕುತ್ತಾರೆ, ನಮ್ಮ ಆರ್ಥಿಕತೆಯನ್ನು ಕೆಳಗಿನಿಂದ ಮೇಲಕ್ಕೆ ಎತ್ತುತ್ತಾರೆ’ ಎಂದು ವಿವರಿಸಿದರು.

‘ರಾಜ್ಯದಲ್ಲಿ 7 ಸಾವಿರ ಕೋಟಿ ರೂ. ಹಣವನ್ನು ಬಿಪಿಎಲ್‍ ಕುಟುಂಬಗಳಿಗೆ ನೇರ ವರ್ಗಾಯಿಸಬೇಕು. ಇದೇನೂ ದೊಡ್ಡ ಹೊರೆಯಾ? ಈಗಾಗಲೇ ಅನ್ನಭಾಗ್ಯ ಯೋಜನೆ ಇದೆಯಲ್ಲ, ಅದರಲ್ಲಿ ಕನಿಷ್ಠ 10 ಕೆ.ಜಿ. ಅಕ್ಕಿಯನ್ನಾದರೂ ಕೊಡಬೇಕು. ಇದೆಲ್ಲ ಸರ್ಕಾರದ ಪ್ರಾಥಮಿಕ ಕರ್ತವ್ಯ. ಅತಂತ್ರವಾದ ಕುಟುಂಬಗಳಿಗೆ ಕನಿಷ್ಠ 5 ಸಾವಿರ ರೂ ನೇರ ನಗದು ನೀಡಬೇಕು. ಆಗ ಅವರ ಖರೀದಿ ಶಕ್ತಿಯೂ ಹೆಚ್ಚಾಗುತ್ತದೆ, ಅದರಿಂದ ಒಟ್ಟೂ ಆರ್ಥಿಕತೆ ಬಲಗೊಳ್ಳುತ್ತದೆ’ ಎನ್ನುತ್ತಾರೆ ಸಾಮಾಜಿಕ ಹೋರಾಟಗಾರ ಕೆ.ಎಲ್‍ ಅಶೋಕ್‍.

‘ಭಾರತದಂತಹ ಬಡ ದೇಶಗಳಿಗಿಂತ ಭಿನ್ನವಾಗಿ, ಸಾಂಕ್ರಾಮಿಕ ಪರಿಣಾಮಗಳನ್ನು ನಿವಾರಿಸಲು ಅಮೆರಿಕ, ಬ್ರಿಟನ್‍ ಮತ್ತು ಯುರೋಪಿಯನ್‍ ಒಕ್ಕೂಟದ  ಶ್ರೀಮಂತ ಸರ್ಕಾರಗಳು  ಕೂಡ ಬೃಹತ್ ಪ್ರಮಾಣದಲ್ಲಿ ಸಾಲ ಪಡೆದು, ಸಾಂಕ್ರಾಮಿಕದಿಂದ ನಿರುದ್ಯೋಗಿ ಆದವರಿಗೆ  ನಗದು ಪಾವತಿಸುತ್ತಿವೆ ಎಂದು ಬ್ಯಾನರ್ಜಿ ಹೇಳುತ್ತಾರೆ. ಸಾಂಕ್ರಾಮಿಕ ರೋಗದ ಆರಂಭದ ಮೊದಲಿಗಿಂತ ಈಗ ಜಾಗತಿಕವಾಗಿ ಸುಮಾರು 100 ಮಿಲಿಯನ್ ಜನರು ತೀವ್ರ ಬಡತನದಲ್ಲಿ ಬದುಕುತ್ತಿದ್ದಾರೆ ಎಂದು ಅವರು ಅಂದಾಜಿಸಿದ್ದಾರೆ.

ಅಭಿವೃದ್ಧಿ ಹೊಂದುತ್ತಿರುವ ದೇಶಗಳು ಲಾಕ್‌ಡೌನ್ ಮೂಲಕ  ಆರ್ಥಿಕತೆಯನ್ನು ವಿನಾಶ  ಮಾಡುತ್ತಿವೆ. ಸದ್ಯ ಸಾಂಕ್ರಾಮಿಕ ಇನ್ನಷ್ಟು ಹೆಚ್ಚಿದೆ ಮತ್ತು ಸಾವಿನ ಸಂಖ್ಯೆ ಉಲ್ಬಣಗೊಂಡಿದೆ ಎನ್ನುವ ಬ್ಯಾನರ್ಜಿ, ಭಾರತದಲ್ಲಿ ಮೊದಲ ಲಾಕ್‌ಡೌನ್ ಕಾರಣಕ್ಕೆ ದೇಶದ ಜಿಡಿಪಿಯ ಕಾಲು ಭಾಗ ಕುಸಿದಿತ್ತು ಎನ್ನುತ್ತಾರೆ.

ತಜ್ಞರ ಮಾತುಗಳನ್ನೂ ಕೇಳದ, ತಳಮಟ್ಟದಲ್ಲಿ ಕೆಲಸ ಮಾಡುವ ಸಾಮಾಜಿಕ ಕಾರ್ಯಕರ್ತರ ಬೇಡಿಕೆಗಳನ್ನೂ ಪರಿಗಣಿಸದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಕುಸಿದಿರುವ ಆರ್ಥಿಕತೆ ಯಾವ ರೀತಿ ಮೇಲೆತ್ತುತ್ತಾರೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ.

  • ಪಿ.ಕೆ. ಮಲ್ಲನಗೌಡರ್

ಇದನ್ನೂ ಓದಿ: ಲಕ್ಷದ್ವೀಪ: ಕೇಂದ್ರದಿಂದ ಜೈವಿಕ ಅಸ್ತ್ರ ಬಳಕೆ ಆರೋಪ, ನಿರ್ಮಾಪಕಿ ವಿರುದ್ಧ ದೇಶದ್ರೋಹ ಪ್ರಕರಣ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಬಿಸಿಲಿನ ಬೆಂಕಿಗೆ ‘ಎಲ್ ನಿನೊ’ ತುಪ್ಪ: 2026ರ ಮುಂಗಾರು ಕಥೆ ಏನು?

ದೇಶಾದ್ಯಂತ ತಾಪಮಾನ ದಿನೇ ದಿನೇ ಏರುತ್ತಿದ್ದು, ಭೀಕರ ಶಾಖದ ಅಲೆಗಳಿಗೆ (Heatwaves) ಜನ ತತ್ತರಿಸಿ ಹೋಗಿದ್ದಾರೆ. ಈ ಹೊತ್ತಿನಲ್ಲಿ ಎಲ್ಲರ ಕಣ್ಣುಗಳು ಸಾವಿರಾರು ಕಿಲೋಮೀಟರ್ ದೂರದ ಪೆಸಿಫಿಕ್ ಮಹಾಸಾಗರದಲ್ಲಿ ಸಂಭವಿಸುತ್ತಿರುವ ಹವಾಮಾನ ಬದಲಾವಣೆಯ...

ಸುಮಾರು 1 ಲಕ್ಷ ಶಾಲೆಗಳಲ್ಲಿ ಬಾಲಕಿಯರಿಗೆ ಶೌಚಾಲಯವಿಲ್ಲ, 61,000 ಶಾಲೆಗಳಲ್ಲಿ ಕ್ರಿಯಾತ್ಮಕ ಶೌಚಾಲಯಗಳಿಲ್ಲ: ನೀತಿ ಆಯೋಗ

ಶಿಕ್ಷಣವು ಒಂದು ದೇಶದ ಅಭಿವೃದ್ಧಿಯ ಬೆನ್ನೆಲುಬು ಅಂತಲೇ ಹೇಳಲಾಗುತ್ತದೆ. ಆದರೆ, ಭಾರತದ ಶಾಲಾ ಶಿಕ್ಷಣದ ಮೂಲಭೂತ ಸೌಕರ್ಯಗಳು ಮತ್ತು ವ್ಯವಸ್ಥೆಯ ಕುರಿತಾಗಿ ನೀತಿ ಆಯೋಗ ಹಾಗೂ ಯುಡಿಐಎಸ್ಇ+ (UDISE+ 2024–25) ಇತ್ತೀಚೆಗೆ ಬಿಡುಗಡೆ...

CJI ಹೇಳಿಕೆಯಿಂದ ರಾತ್ರೋರಾತ್ರಿ ಹುಟ್ಟಿಕೊಂಡ ‘ಕಾಕ್‌ರೋಚ್ ಜನತಾ ಪಾರ್ಟಿ’

ಒಂದು ರಾಜಕೀಯ ಪಕ್ಷವನ್ನು ಕಟ್ಟಿ, ಅದಕ್ಕೊಂದು ರೂಪ ಕೊಡಲು ಎಷ್ಟು ಸಮಯ ಬೇಕಾಗಬಹುದು? ಕೇವಲ 48 ಗಂಟೆಗಳು! ಹೌದು, ಕಳೆದ ಭಾನುವಾರ ನೀವು ಸಾಮಾಜಿಕ ಜಾಲತಾಣಗಳಲ್ಲಿ ಸ್ವಲ್ಪ ಸಮಯ ಕಳೆದಿದ್ದರೆ ನಿಮಗಿದು ಖಂಡಿತ...

ಬೆಂಗಳೂರು: ಗಂಗಸಂದ್ರ ದಲಿತರ ಭೂಮಿ ಕಿತ್ತುಕೊಳ್ಳಲು ಮುಗಿಬಿದ್ದ ಅರಣ್ಯ ಇಲಾಖೆ: ಮಿತಿಮೀರಿದ ಅಧಿಕಾರಿಗಳ ದರ್ಪ

ಕೆಂಗೇರಿ ಬಳಿಯ ಗಂಗಸಂದ್ರ ಗ್ರಾಮದಲ್ಲಿನ ದಲಿತರ ಭೂಮಿಯನ್ನು ಅರಣ್ಯ ಭೂಮಿಯೆಂದು ಅರಣ್ಯ ಇಲಾಖೆಯ ವಶಕ್ಕೆ ಪಡೆಯಲು ಅಧಿಕಾರಿಗಳು ಮುಂದಾಗಿದ್ದಾರೆ. 2026 ಮೇ 19ರ, ಮಂಗಳವಾರ  ಬೆಳ್ಳಂಬೆಳಗ್ಗೆಯೇ ಅಧಿಕಾರಿಗಳ ದರ್ಪ ತಾರಕಕ್ಕೇರಿದೆ. ದಲಿತ ನಿವಾಸಿಗಳ...

ಜನಾಂಗೀಯ ದ್ವೇಷ: ಅಮೆರಿಕಾದ ಸ್ಯಾನ್ ಡಿಯಾಗೋ ಮಸೀದಿ ಸಂಕೀರ್ಣದಲ್ಲಿ ಗುಂಡಿನ ದಾಳಿ: ಮೂವರು ಸಾವು

ಸ್ಯಾನ್ ಡಿಯಾಗೋ: ಅಮೆರಿಕದ ಸ್ಯಾನ್ ಡಿಯಾಗೋ ನಗರದ ಇಸ್ಲಾಮಿಕ್ ಸೆಂಟರ್ ಆಫ್ ಸ್ಯಾನ್ ಡಿಯಾಗೋ (ICSD) ಮಸೀದಿ ಸಂಕೀರ್ಣದಲ್ಲಿ ಸೋಮವಾರ ನಡೆದ ಗುಂಡಿನ ದಾಳಿಯಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಅಧಿಕಾರಿಗಳು ಈ ಘಟನೆಯನ್ನು ಸಂಭಾವ್ಯ...

ರಸ್ತೆಗಳಲ್ಲಿ ಮುಕ್ತವಾಗಿ ಓಡಾಡುವುದು ಜನರ ಹಕ್ಕು: ಬೀದಿ ನಾಯಿಗಳ ದಯಾಮರಣಕ್ಕೂ ಸುಪ್ರೀಂ ಅಸ್ತು

ಸುಪ್ರೀಂ ಕೋರ್ಟ್ ಇಂದು (ಮೇ 19, ಮಂಗಳವಾರ) ಬೀದಿ ನಾಯಿಗಳ ನಿಯಂತ್ರಣ ಮತ್ತು ನಿರ್ವಹಣೆಗೆ ಸಂಬಂಧಿಸಿದ ಎಲ್ಲಾ ಅರ್ಜಿಗಳನ್ನು ವಜಾಗೊಳಿಸಿ ಮಹತ್ವದ ತೀರ್ಪು ನೀಡಿದೆ. ಸಾರ್ವಜನಿಕ ಸ್ಥಳಗಳಲ್ಲಿ ಬೀದಿ ನಾಯಿಗಳ ದಾಳಿಯಿಂದಾಗಿ ಸಾರ್ವಜನಿಕರು...

ಹರಿಯಾಣದ ಕಾರ್ಮಿಕ ನಾಯಕ ಅಜಿತ್ ಸಿಂಗ್ ಬಂಧನ ‘ಅಕ್ರಮ’ ಎಂದ ಕೋರ್ಟ್; ಜಾಮೀನು ಮಂಜೂರು

ಬೆಲ್ಸೋನಿಕಾ ಆಟೋ ಕಾಂಪೊನೆಂಟ್ ಇಂಡಿಯಾ ಎಂಪ್ಲಾಯೀಸ್ ಯೂನಿಯನ್‌ನ ಪ್ರಧಾನ ಕಾರ್ಯದರ್ಶಿ ಅಜಿತ್ ಸಿಂಗ್ ಅವರಿಗೆ ಗುರುಗ್ರಾಮ್ ಜಿಲ್ಲಾ ನ್ಯಾಯಾಲಯವು (ಮೇ 18) ಜಾಮೀನು ನೀಡಿದೆ. ಅವರು ಮಾನೇಸರ್ ಕೈಗಾರಿಕಾ ಪ್ರದೇಶದಲ್ಲಿ ಕಾರ್ಮಿಕರ ಪ್ರತಿಭಟನೆಗಳ...

ಉಮರ್, ಶಾರ್ಜೀಲ್‌ಗೆ ಜಾಮೀನು ನಿರಾಕರಿಸಿದ್ದಕ್ಕೆ ಆಕ್ಷೇಪ : ತನ್ನದೇ ಆದೇಶದ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿದ್ದೇನು?

ದೆಹಲಿ ಗಲಭೆ (2020ರ ಪ್ರಕರಣ) ಹಿಂದಿನ ದೊಡ್ಡ ಮಟ್ಟದ ಪಿತೂರಿ ಆರೋಪದಲ್ಲಿ ಬಂಧಿತರಾಗಿರುವ ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಅವರಿಗೆ ಜಾಮೀನು ನಿರಾಕರಿಸಿ, 2026ರ ಜನವರಿಯಲ್ಲಿ ತನ್ನದೇ ಮತ್ತೊಂದು ದ್ವಿಸದಸ್ಯ ಪೀಠ...

ಮುತ್ತುರಾಜ್ ‘ರಾಜಕುಮಾರ್‍’ ಆದ ಕಥೆ

’ಬೇಡರ ಕಣ್ಣಪ್ಪ’ ಚಿತ್ರದ ಚಿತ್ರೀಕರಣ ಭರದಿಂದ ಸಾಗುತ್ತಿದ್ದ ಸಮಯದಲ್ಲಿ ಒಂದು ದಿನ ನಾನು ಅಂದಿನ ಪತ್ರಿಕೆಯಲ್ಲಿ ಚಿತ್ರಸುದ್ದಿಯನ್ನು ಓದುತ್ತಿದ್ದಾಗ ಗುಬ್ಬಿ ಕರ್ಣಾಟಕ ಸಂಸ್ಥೆಯವರು ನಿರ್ಮಿಸುತ್ತಿರುವ ಬೇಡರ ಕಣ್ಣಪ್ಪ ಚಿತ್ರ ಎಂದು ಸುದ್ದಿ ಪ್ರಾರಂಭವಾಗಿ...

ಬಂಗಾಳ ಎಸ್‌ಐಆರ್ ಅವಾಂತರ ಹಕ್ಕು ಕಳೆದುಕೊಂಡ ಮತದಾರ

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್ ಪೂರ್ಣಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...