Homeಕರ್ನಾಟಕಬೆತ್ತಲಾಗುತ್ತಲೇ ಇದೆ ಬಿಜೆಪಿ ನಾಯಕರ ವಿಕೃತ ‘ಸಂಸ್ಕೃತಿ’: ಆ ವಿಡಿಯೋ ಎತ್ತುತ್ತಿರುವ ಪ್ರಶ್ನೆಗಳು, ಪ್ರತಿರೋಧಗಳು

ಬೆತ್ತಲಾಗುತ್ತಲೇ ಇದೆ ಬಿಜೆಪಿ ನಾಯಕರ ವಿಕೃತ ‘ಸಂಸ್ಕೃತಿ’: ಆ ವಿಡಿಯೋ ಎತ್ತುತ್ತಿರುವ ಪ್ರಶ್ನೆಗಳು, ಪ್ರತಿರೋಧಗಳು

- Advertisement -
- Advertisement -

ಬಿಜೆಪಿ ಇನ್ನೇನು ಸರ್ಕಾರ ರಚಿಸೇ ಬಿಟ್ಟಿತು, ಸಿಎಂ ಆಗಲಿರುವ ಯಡಿಯೂರಪ್ಪನವರು ಅರವಿಂದ ಲಿಂಬಾವಳಿಯವರನ್ನು ಡಿಸಿಎಂ ಮಾಡಲು ಆಸಕ್ತಿ ತೋರಿದ್ದಾರೆ ಎಂಬ ಹೊತ್ತಿಗೆ ಸರಿಯಾಗಿ ಹೊರಬಿದ್ದ `ನೀಲಿ’ ಸಿಡಿಯೊಂದು ಬಿಜೆಪಿಯೊಳಗಿನ ಮುಸುಕಿನ ಗುದ್ದಾಟದ ಜೊತೆಗೆ `ಪರಿವಾರ’ದೊಳಗಿನ `ಅನೈತಿಕ’ ದ್ವಂದ್ವಗಳನ್ನೂ ಬೆತ್ತಲಾಗಿಸಿದೆ…

ಧರ್ಮ ಮತ್ತು ಸಂಸ್ಕೃತಿಯ ವಿಷಯದಲ್ಲಿ ಆರೆಸ್ಸೆಸ್ ಮತ್ತು ಬಿಜೆಪಿಗಿರುವ ದ್ವಂದ್ವಗಳು ಮತ್ತೆ ಮತ್ತೆ ಬೆತ್ತಲಾಗುತ್ತಲೇ ಇವೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಕೃತ ಲೈಂಗಿಕತೆಯ ವಿಡಿಯೋವೊಂದು ಈಗ ಆರೆಸ್ಸೆಸ್ ಮತ್ತು ಬಿಜೆಪಿಯ ‘ಸಲಿಂಗಕಾಮ’ದ ಕುರಿತಾದ ದ್ವಂದ್ವಗಳು ಮತ್ತು ಅವಕಾಶವಾದಿ ನಿಲುವುಗಳ ಬಗ್ಗೆ ಹಲವು ಪ್ರಶ್ನೆಗಳನ್ನು ಮತ್ತೆ ಚಲಾವಣೆಗೆ ತಂದಿದೆ.

ಯುವಕನೊಂದಿಗೆ ರಾಜ್ಯ ಬಿಜೆಪಿಯ ಗಣ್ಯ ನಾಯಕರೊಬ್ಬರು ಲೈಂಗಿಕತೆಯಲ್ಲಿ ತೊಡಗಿರುವ ವಿಡಿಯೋ ಅದು. ಸಲಿಂಗಕಾಮ ಅಪರಾಧವಲ್ಲ ಎಂಬ ಹಿನ್ನೆಲೆಯಲ್ಲಿ ಇದು ಪ್ರಶ್ನಾರ್ಹ ಅಲ್ಲವೇ ಅಲ್ಲ. ಆದರೆ ಈ ಕೃತ್ಯ ಕುರಿತಂತೆ 2018ರಿಂದ ಕೆಲವು ‘ಸಂತ್ರಸ್ತ’ ಯುವಕರು ಪ್ರಚುರ ಪಡಿಸುತ್ತ ಬಂದಿರುವ ವಿಷಯಗಳ ಆಧಾರದಲ್ಲಿ ಹೇಳುವುದಾದರೆ ವಿಡಿಯೋದಲ್ಲಿರುವುದು ಸಹಜ ಲೈಂಗಿಕತೆ ಅಲ್ಲ, ಬದಲಾಗಿ ಅದು ಹಣ ಮತ್ತು ಅಧಿಕಾರ ಸ್ಥಾನ ದುರುಪಯೋಗ ಮಾಡಿಕೊಂಡು ನಡೆಸಿರುವ ವಿಕೃತ ಲೈಂಗಿಕ ಚಟುವಟಿಕೆ ಅನಿಸುತ್ತದೆ.

ಸದ್ಯ ವಿಡಿಯೋದಲ್ಲಿ ಕಾಣಿಸುತ್ತಿರುವ ಮತ್ತು ಈಗ ಈ ಬಗ್ಗೆ ಯಾವ ಸ್ಪಷ್ಟತೆಯನ್ನು ಧೈರ್ಯದಿಂದ ಹೇಳಲು ಹಿಂಜರಿಯುತ್ತಿರುವ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ. ಅವರ ಪ್ರಕಾರ, ಇದು ಕಿಡಿಗೇಡಿಗಳು ಸೃಷ್ಟಿಸಿದ ವಿಡಿಯೋ…. morphed video… ಆದರೆ ಇದನ್ನು ಮನದಟ್ಟು ಮಾಡಲು ಅವರು ವಿಫಲರಾಗಿದ್ದಾರೆ. ಸೋಮವಾರ ಸದನದಲ್ಲಿ ಈ ವಿಷಯ ಪ್ರಸ್ತಾಪವಾದಾಗ ಅವರು ಭಾವುಕರಾಗಿ ಅತ್ತಂತೆ ಮಾಡಿದರೇ ವಿನ:, ಈ ಬಗ್ಗೆ ತುರ್ತು ತನಿಖೆಯಾಗಲಿ ಸಭಾಧ್ಯಕ್ಷರೇ ಎಂದು ಗಟ್ಟಿಯಾಗಿ ಹೇಳುವ ಅವಕಾಶವನ್ನು ತಪ್ಪಿಸಿಕೊಂಡರು.

ಈ ವಿಡಿಯೋ ಕುರಿತಂತೆ, ಫೇಸ್‍ಬುಕ್‍ನಲ್ಲಿ ಸ್ಪಷ್ಟನೆ ನೀಡಿರುವ ಅವರು, ಈ ರಾಜಕೀಯ ಬಿಕ್ಕಟ್ಟಿನ ಸಂದರ್ಭದಲ್ಲಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ತಮ್ಮ ಚಾರಿತ್ರ್ಯಹರಣಕ್ಕೆ ಈ ಕೆಲಸ ಮಾಡುತ್ತಿವೆ ಎಂದಿದ್ದಾರೆ. ಮುಖ್ಯಮಂತ್ರಿ ಕಚೇರಿಯೇ ಇದರಲ್ಲಿ ಇನವಾಲ್ವ್ ಆಗಿದೆ ಎಂದಿದ್ದಾರೆ ಆದರೆ ಸದನದಲ್ಲಿ ಈ ಸಂಚಿನ ಹಿಂದೆ ಆ ಕಡೆಯವರೂ (ಕಾಂಗ್ರೆಸ್, ಜೆಡಿಎಸ್) ಇರಬಹುದು, ಈ ಕಡೆಯವರೂ (ತಮ್ಮದೇ ಬಿಜೆಪಿ ಪಕ್ಷದವರು) ಇರಬಹುದು ಎಂದರು. ‘ಸಭಾಧ್ಯಕ್ಷರೇ, ಶಿವಲಿಂಗೇಗೌಡರು ಈ ಪ್ರಶ್ನೆ ಎತ್ತಿದ್ದು ಸರಿಯಾಗೇ ಇದೆ. ನನಗಂತೂ ತುಂಬಾ ನೋವಾಗಿದೆ ಎಂದರು…

ಆಗ ಅವರ ಕಣ್ಣುಗಳ ಅಂಚಿನಲ್ಲಿ ನೀರು, ಆದರೆ, ಇವರೇ ಪಾರ್ಟಿಸಿಪೆಂಟ್ ಎಂದು ಓಡಾಡುತ್ತಿರುವ ವಿಡಿಯೋದಲ್ಲಿ ತಾನೂ ವಿವಿಧ ಲೈಂಗಿಕ ಆಟಗಳು ನಡೆಯುತ್ತವೆ. ಇದೆಲ್ಲ ವಿಡಿಯೋ ಆಗಿದ್ದಾದರೂ ಹೇಗೆ? ಒಂದೋ ದೌರ್ಜನ್ಯ ನಡೆಸಿದಾತನ ಕಡೆಯವರು ಆತನ ದೌರ್ಬಲ್ಯ ಬಳಸಿಕೊಂಡು ಈ ವಿಡಿಯೋ ಮಾಡಿರಬೇಕು.. ಇಲ್ಲವೇ ಆ ಪೀಡನೆಗೆ ಒಳಗಾದ ಹುಡುಗರು ಇದನ್ನು ಪ್ಲಾನ್ ಮಾಡಿ ವಿಡಿಯೋ ಮಾಡಿರಬೇಕು…. ಇವೆಲ್ಲ ಬರೀ ಗೆಸ್ ಅಲ್ಲ…

ಇದಕ್ಕೆ ರಾಜ್ಯ ಬಿಜೆಪಿಯ ಪ್ರತಿಕ್ರಿಯೆ ಏನು? ಅದಕ್ಕೆ ಸಾಂಕೇತಿಕ ಎಂಬಂತೆ ಸದನದಲ್ಲಿ ತರಾತುರಿಯಲ್ಲಿ ಒಂದೇ ಒಂದು ಸಾಲಿನ ಹೇಳಿಕೆ ಪಟ್ಟಂತ ಹೊರಬಿತ್ತು: ‘ರೀ, ಶಿವಲಿಂಗೇಗೌಡರೇ, ಇದರಲ್ಲಿ ಲಿಂಬಾವಳಿ ಅವರ ತಪ್ಪು ಏನೂ ಇಲ್ಲ. ಇದನ್ನು ಇಲ್ಲಿಗೇ ನಿಲ್ಲಿಸಿಬಿಡಿ….”

ಶಿವಲಿಂಗೇಗೌಡರೇನೂ ಅರವಿಂದ ಲಿಂಬಾವಳಿಯಂತಹ ‘ಸಭ್ಯಸ್ಥ’ ಜನಪ್ರತಿನಿಧಿ ಇಂತಹ ಹಲ್ಕಟ್ ಕೆಲಸ ಮಾಡಿದ್ದಾರೆ ಎಂದು ಹೇಳಿರಲೇ ಇಲ್ಲ! ಎ.ಟಿ.ರಾಮಸ್ವಾಮಿ ಅವರು ದ್ರೌಪದಿ ವಸ್ತ್ರಾಪಹರಣ ನಡೆವಾಗ ಸುಮ್ಮನಿದ್ದ ‘ಮಹಾಮಹಿಮರ’ ಬಗ್ಗೆ ಪ್ರಸ್ತಾಪಿಸಿದಾಗ, ಮಧ್ಯ ಪ್ರವೇಶಿಸಿದ ಶಿವಲಿಂಗೇಗೌಡರು, ‘ಸಭಾಧ್ಯಕ್ಷರೇ, ಈ ವಸ್ತ್ರಾಪಹರಣ ಅಂದಕೂಡಲೇ ನೆನಪಾಯ್ತು. ಇಲ್ಲಿ ಯಾವುಯಾವುದೋ ವಿಡಿಯೋ ಬಿಟ್ಟು ಸೋಷಿಯಲ್ ಮೀಡಿಯಾದಲ್ಲಿ ಶಾಸಕರ ಮಾನ ಹರಾಜು ಹಾಕ್ತಿದಾರೆ. ನಮ್ಮ ಲಿಂಬಾವಳಿಯವರ ಸೆಕ್ಸ್ ವಿಡಿಯೋ ನೋಡಿದ ಮೇಲೆ ನಮಗೆ ಭಯವಾಗಿದೆ ಸರ್… ಇದು ನಾಳೆ ನಮಗೂ ಬರಬಹುದು’ ಎಂದು ಪ್ರಶ್ನೆ ಎತ್ತಿದರಷ್ಟೇ.

ಆಗೇನಾಯ್ತು? ಮಾತಾಡುವುದಕ್ಕೆ, ಕೂಗುವುದಕ್ಕೆ, ಪ್ರತಿಭಟನೆ ಮಾಡುವುದಕ್ಕೆ, ಅನೈತಿಕ ಹಾಗೂ ಭ್ರಷ್ಟ ಶಾಸಕರನ್ನು ರಕ್ಷಿಸಲಿಕ್ಕೂ ದೊಡ್ಡ ಬಾಯಿ ತೆಗೆದು ರಂಪಾಟ ಎಬ್ಬಿಸುತ್ತಿದ್ದ ಯಡಿಯೂರಪ್ಪನವರು 10-12 ದಿನದಿಂದ ಎಂತಹ ಪ್ರಚೋದನೆ ಇದ್ದರೂ ಉದ್ವೇಗಗೊಳ್ಳದೇ ಇದ್ದವರು, ಥಟಕ್ಕಂತ ಎದ್ದು ನಿಂತು, ‘ಶಿವಲಿಂಗೇಗೌಡರೇ ಈ ವಿಷಯ ಇಲ್ಲಿಗೇ ನಿಲ್ಲಿಸಿಬಿಡಿ. ಲಿಂಬಾವಳಿ ತಪ್ಪೇನೂ ಇಲ್ಲ’ ಎಂದು ಫರ್ಮಾನು ಹೊರಿಸುವವರಂತೆ ಸಿಂಗಲ್ ಲೈನ್ ‘ರೂಲಿಂಗ್’ ಕೊಟ್ಟುಬಿಟ್ಟರು.

ನಂತರ ಏನಾಯ್ತು? ಝೀರೋ ಟ್ರಾಫಿಕ್ ಬಗ್ಗೆ ತಲೆ ಕೆಡಿಸಿಕೊಂಡು ಕೆಂಡಮಂಡಲ ಆಗುವ ಸ್ಪೀಕರ್ ಸಾಹೇಬರು ಹೇಳಿದರು: ‘ಲಿಂಬಾವಳಿ ಅವರೇ ನಿಮ್ಮ ದು:ಖ ನಮಗೆ ಅರ್ಥವಾಗುತ್ತದೆ… ಕೂಲ್ ಡೌನ್’ ಅನ್ನುತ್ತಾರೆ.
ಈಗಲೂ ಕಾಲ ಮಿಂಚಿಲ್ಲ, ಈ ಇಡೀ ಪ್ರಕರಣದ ಬಗ್ಗೆ ತನಿಖೆಗೆ ಏಕೆ ಆದೇಶಿಸಬಾರದು? ‘ಅಮಾಯಕ’ ಲಿಂಬಾವಳಿಯವರನ್ನು ಕಾಪಾಡಲು ಇದೊಂದೇ ಮಾರ್ಗ ಅಲ್ಲವೇ?

ದ್ವಂದ್ವ, ಚಟ, ಹಲ್ಕಟ್ಟತನ, ಭೋಳೆತನ…
ದೇಶ, ಧರ್ಮ, ಸಂಸ್ಕೃತಿ ಎಂದೆಲ್ಲ ಹಾರಾಡುತ್ತಲೇ ಈ ನೆಲದ ಸಹಜ ಮತ್ತು ನೈಸರ್ಗಿಕ ಲೈಂಗಿಕ ಕ್ರಿಯೆಗಳನ್ನೆಲ್ಲ ‘ಪಾಶ್ಚಿಮಾತ್ಯ’ ಕಲ್ಚರ್ ಎಂದೆಲ್ಲ ಲೇವಡಿ ಮಾಡುತ್ತ ಬಂದಿರುವ ಆರೆಸ್ಸೆಸ್ ಎಂಬ ಸಂಘಟನೆ ಮತ್ತು ಅದರ ರಾಜಕೀಯ ಮುಖ ಬಿಜೆಪಿಗೆ ಆರ್ಟಿಕಲ್ 377 (ಸಲಿಂಗಕಾಮ ಅಪರಾಧ, ಅಸಹಜ ಎನ್ನುವ ಬ್ರಿಟಿಷ್ ಕಾಯ್ದೆ) ಅನ್ನು ರದ್ದುಪಡಿಸಿದಾಗ ದ್ವಂದ್ವ ನೀತಿ ಪ್ರದರ್ಶನ ಮಾಡಿತ್ತು.

ಆಗ ಸಚಿವರಾಗಿದ್ದ ರಾಜನಾಥ್ ಸಿಂಗ್, ಸುಷ್ಮಾ ಸ್ವರಾಜ್ ಈ ಕುರಿತು ಆಕ್ಷೇಪ ವ್ಯಕ್ತ ಮಾಡಿದ್ದರು. ಮುಂದೆ ಸುಪ್ರಿಂಕೋರ್ಟ್ ಈ ಬಗ್ಗೆ ಕೇಂದ್ರದ ಸಲಹೆ ಕೇಳಿದಾಗ, ‘ಸಲಿಂಗಕಾಮ ಇತ್ಯಾದಿ ಎಲ್ಲ ನಮ್ಮ ದೇಶದ ಧರ್ಮಕ್ಕೆ, ಸಂಸ್ಕೃತಿಗೆ ವಿರುದ್ಧವಾದುದು…’ ಎಂದು ಅಫಿಡವಿಟ್ ಸಲ್ಲಿಸಿ ಉಗಿಸಿಕೊಂಡಿತ್ತು.

ಈಗಲೂ ಈ ಧರ್ಮ ರಕ್ಷಕರ ನಿಲುವು ಏನು ಗೊತ್ತೇ: ಸಲಿಂಗ ಕಾಮ ಓಕೆ.. ಆದರೆ ಅದಕ್ಕೆ ಸಮಾಜದ ಮಾನ್ಯತೆ ಬೇಡ… ಈ ಕಾರಣಕ್ಕಾಗಿಯೇ ಆರೆಸ್ಸೆಸ್‍ನಲ್ಲಿ ಹೊಸಬರನ್ನು ತಮ್ಮ ತೀಟೆಗೆ ಅವಿವಾಹಿತ ಮಧ್ಯ ವಯಸ್ಕರು ಮತ್ತು ಮುದುಕರು ಬಳಸಿಕೊಳ್ಳುತ್ತಿದ್ದಾರೆಂಬ ಅನುಮಾನ ಬರಲು ಎಲ್ಲಾ ಕಾರಣಗಳಿವೆ. ಈ ಕಾರಣಕ್ಕೇ ಕಳೆದ ತಿಂಗಳು, ಇಂತಹ ಅತ್ಯಾಚಾರಕ್ಕೆ ಒಳಗಾದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡೆನೇ ಎಂಬ ಪ್ರಶ್ನೆಯೂ ಸಾರ್ವಜನಿಕವಾಗಿ ಎದ್ದಿದೆ.

ಇದು ತನಿಖೆಯ ಕಡೆಗೆ ಏಕೆ ಸಾಗುವುದಿಲ್ಲ?

ಯಾರಿಗೂ ಅನ್ಯಾಯ ಆಗಬಾರದು ಎಂದು ಹೇಳುತ್ತಲೇ ಇರುವ ಸ್ಪೀಕರ್ ಅವರು ಆತುರಕ್ಕೆ ಒಳಪಟ್ಟು ವ್ಯಕ್ತಪಡಿಸುವ ಸಿಟ್ಟು ಅಥವಾ ಭಾವೋದ್ವೇಗಕ್ಕೆ ಒಳಗಾಗಿ ತೋರಿಸುವ ಅನುಕಂಪವನ್ನು ಇಲ್ಲಿ ಪ್ರಸ್ತಾಪಿಸಲೇ ಬೇಕಾಗಿದೆ.

ಝೀರೋ ಟ್ರಾಫಿಕ್ ಬಗ್ಗೆ ತಲೆ ಕೆಡಿಸಿಕೊಂಡ ಸ್ಪೀಕರ್ ಸಾಹೇಬರು ಗೃಹ ಸಚಿವರ ಮೇಲೆ ಎರ್ರಾಬಿರ್ರಿ ಕೂಗಾಡುತ್ತಾರೆ. ಆದರೆ ಅವರೇ ಹತ್ತು ನಿಮಿಷದವರೆಗೆ ಮುಂದೂಡಿದ ಕಲಾಪ ಒಂದೂವರೆ-ಎರಡು ತಾಸು ನಂತರ ಆರಂಭವಾದಾಗ, ‘ಝೀರೊ ಟ್ರಾಫಿಕ್ ಬಗ್ಗೆ ನಾವು ತಪ್ಪಾಗಿ ಭಾವಿಸಿದ್ವಿ. ಈಗ ಬೆಂಗಳೂರಿನ ಟ್ರಾಫಿಕ್ ಪೊಲೀಸರು ಎರಡು ವಿಡಿಯೋ ಕೊಟ್ಟಿದ್ದಾರೆ. ಅದರಲ್ಲಿ ಅತೃಪ್ತ ಶಾಸಕರನ್ನು ಕರೆತಂದ ಬಸ್ ನಾಲ್ಕು ಸಿಗ್ನಲ್‍ಗಳಲ್ಲಿ ನಿಂತಿದೆ… ಅಲ್ಲಿ ಯಾರೂ ಝೀರೋ ಟ್ರಾಫಿಕ್ ಮಾಡಿ ಅಂತ ಆದೇಶ ಮಾಡಿಲ್ಲ. ಈ ಮಾಧ್ಯಮ ನಂಬಿಕೊಂಡು ರಾಜ್ಯಪಾಲರೇ ಅಂತಹ ಆದೇಶ ಮಾಡಿದ್ದಾರೆ ಎಂಬ ಸಂಗತಿ ಹಬ್ಬಿದೆ. ನಾವೂ ಅದನ್ನ ನಂಬಿಬಿಟ್ಟೆವು..’ ಎನ್ನುವ ಸ್ಪೀಕರರು, ‘ಸಾರಿ ಗೃಹ ಸಚಿವರೇ’ ಎಂಬ ಮಾತು ಹೇಳಬಹುದಿತ್ತಲ್ಲ? ಝೀರೋ ಟ್ರಾಫಿಕ್ ವಿಷಯ ಬಂದಾಗ, ಬಡವರು, ರೋಗಿಗಳು ಅರ್ಜೆಂಟಿನಲ್ಲಿ ಇರುವಾಗ ಇಂತಹ ವ್ಯವಸ್ಥೆ ಕಲ್ಪಿಸುತ್ತೀರಾ ಎನ್ನುವ ಸ್ಪೀಕರ್ ಸಾಹೇಬರು, ಅದೇ ಸೆಕ್ಸ್ ವಿಡಿಯೋ ಬಗ್ಗೆ ಪ್ರಸ್ತಾಪವಾದಾಗ ಅಲ್ಲಿ ಆರೋಪಿ ಸ್ಥಾನದಲ್ಲಿರುವ ವ್ಯಕ್ತಿಯ ಬಗ್ಗೆ ಅನುಕಂಪದ ಮಾತಾಡಿದರೇ ಹೊರತು, ಚರ್ಚೆಯನ್ನು ತನಿಖೆಯ ಕಡೆಗೆ ತೆಗೆದುಕೊಂಡು ಹೋಗಲಿಲ್ಲ.

ಸ್ಪೀಕರ್ ಇಂತಹ ತನಿಖೆಗೆ ಆದೇಶಿಸುವ ಅಧಿಕಾರ ಹೊಂದಿಲ್ಲದಿರಬಹುದು. ಆದರೆ, ಆರೋಪಿ ಶಾಸಕ ವಿಪಕ್ಷ ಮತ್ತು ತಮ್ಮದೇ ಪಕ್ಷದ ಸದಸ್ಯರು ಈ ಸಂಚು ಮಾಡಿದ್ದಾರೆ ಎಂದು ಆರೋಪಿಸಿದಾಗಲೂ ಇವರೆಲ್ಲ ಆ ವಿಷಯವನ್ನು ಅಲ್ಲಿಗೇ ಮುಗಿಸಿಬಿಟ್ಟರಲ್ಲ?

ಸಂತ್ರಸ್ತ ಎನ್ನಲಾದ ಯುವಕನೊಬ್ಬ ಬಿಜೆಪಿ ನಾಯಕ ಈಶ್ವರಪ್ಪ ಅವರೊಂದಿಗೆ ಮಾತಾಡಿದ ಆಡಿಯೋ 2018ರ ವಿಧಾನಸಭಾ ಚುನಾವಣೆಯಲ್ಲೇ ಬಹಿರಂಗವಾಗಿತ್ತು. ಅದರಲ್ಲಿ ಆತ ನೇರವಾಗಿ ಏಕವಚನದಲ್ಲಿ ಆರೋಪ ಮಾಡುತ್ತ ಈಶ್ವರಪ್ಪರಿಗೆ ಹೇಳುತ್ತಾನೆ: ಸರ್ ಅವ್ನು ಲಿಂಬಾವಳಿ ಇದ್ದಾನಲ್ಲ ಸರ್ ಅವ್ನಿಗೆ ಒಮ್ಮೇಲೆ ಐದಾರು ಹುಡುಗರು ಬೇಕು… ಅವ್ನು ಹುಕ್ಕಾ ಹೊಡೆಯುತ್ತ ಎಣ್ಣೆ ಹೊಡೆಯುತ್ತ ಎಂಜಾಯ್ ಮಾಡ್ತಾನೆ… ಅವನ ಏಜೆಂಟ್ ಒಬ್ಬ ನಮಗೆ ಕೆಲಸ ಕೊಡಿಸುವುದಾಗಿ ಅಲ್ಲಿಗೆ ಕರೆದೊಯ್ದ ಸರ್… ಮೋಸ ಹೋದ ನಾವು ಪ್ಲಾನ್ ಮಾಡಿ ಈ ವಿಡಿಯೋ ಮಾಡಿದ್ವಿ… ಆರ್.ಅಶೋಕ್, ತೇಜಸ್ವಿನಿ ಅವರಿಗೆ ಈ ದುರಾಚಾರದ ಬಗ್ಗೆ ಹೇಳಿಕೊಂಡಿವಿ ….. ಈಗ ನಿಮ್ಮ ಮುಂದೆ ಇದನ್ನ ಹೇಳ್ತಾ ಇದ್ದೀವಿ…’ ಎನ್ನುತ್ತಾನೆ… ತಮ್ಮ ಪಕ್ಷದವರೇ ಇಬ್ಬರು ಈ ಸಂಚು ಮಾಡಿರಬಹುದು ಎಂದು ಸೋಮವಾರ (ಡೆಕ್ಕನ್ ಹೆರಾಲ್ಡ್ ವರದಿ) ಕೆಲವು ವರದಿಗಾರರ ಮುಂದೆ ಹೇಳಿದ್ದಾರೆ. ಹಾಗಾದರೆ ಅವರು ಅಶೋಕ್ ಮತ್ತು ಈಶ್ವರಪ್ಪನವರೇ ಇರಬೇಕಲ್ಲ? ಅಥವಾ ತೇಜಸ್ವಿನಿಯೂ ಇರಬಹುದಾ ಎಂಬ ಸಹಜ ಪ್ರಶ್ನೆ ಏಳುತ್ತವೆ ಅಷ್ಟೇ…

‘ಮಂತ್ರಿ ಇದ್ದಾಗಲೇ ಇಂತಹ ಹಲ್ಕಾ ಕೆಲಸ ಮಾಡ್ತಿದ್ದ…’

ಲೈಂಗಿಕ ಅಲ್ಪಸಂಖ್ಯಾತರ ಹಕ್ಕುಗಳಿಗಾಗಿ ಹೋರಾಡುತ್ತಿರುವ ಅಕ್ಷತಾ ಕೆ.ಪಿ., ಹಾವೇರಿ, ಈ ವಿಡಿಯೋ ಕುರಿತಾಗಿ ಮಾತಾಡಿದ್ದಾರೆ:
‘ಛೀ, ಅವ್ನು ಹಿಂದೆ ಯಡಿಯೂರಪ್ಪ ಸರ್ಕಾರದಲ್ಲಿ ಸಚಿವ (ಆರೋಗ್ಯ ಸಚಿವ) ಇದ್ದಾಗ್ಲೇ ಅವನ ಈ ಹಲ್ಕಟ್ ವಿಕೃತಿ ಬಗ್ಗೆ ನಮಗೆ ಗೊತ್ತಿತ್ತು. ಆಗ ಇದರ ವಿರುದ್ಧ ಧ್ವನಿ ಎತ್ತಲು ಸೂಕ್ತ ಸ್ಪೇಸ್ ಇರಲಿಲ್ಲ. ನಾವು ಹೇಳಿದರೆ ಸಮಾಜ ಮತ್ತು ಮೀಡಿಯಾ ನಮ್ಮನ್ನೇ ಗೇಲಿ ಮಾಡುತ್ತಿತ್ತೇನೋ? …

ಈಗ ವೈರಲ್ ಆಗಿರೋ ಲಿಂಬಾವಳಿಯ ವಿಡಿಯೋ ನಾನು ನೋಡಿದ್ದೇನೆ. ಸಲಿಂಗಕಾಮ ಎಂಬ ಪದಕ್ಕೆ ಅಲ್ಲಿ ಆಸ್ಪದವೇ ಇಲ್ಲ. ಅದು ವಿಕೃತ ಕಾಮ… ಹಣ, ಅಧಿಕಾರ ಮತ್ತು ಧರ್ಮದ ಅಮಲುಗಳ ಶಕ್ತಿ ಇರುವ ಕಾರಣಕ್ಕಾಗಿ ಈ ಮನುಷ್ಯ ಬಹು ಹಿಂದಿನಿಂದಲೂ ಬೆಂಗಳೂರಿಗೆ ಕೆಲಸ ಅರಸಿ ಬರುವ ಯುವಕರನ್ನು ಈ ರೀತಿ ಯಾಮಾರಿಸುತ್ತಲೇ ಬಂದಿದ್ದಾನೆ…. ಅದರ ವಿವರ ನಮಗೆಲ್ಲ ಗೊತ್ತಿದೆ… ಅವನದು ವಿಕೃತ ಕಾಮವಷ್ಟೇ…..

ಸೆಕ್ಷನ್ 377ಅನ್ನು ಸುಪ್ರಿಂಕೋರ್ಟ್ ತೆಗೆದು ಹಾಕಿದಾಗ, ಹಲವಾರು ಆರೆಸ್ಸೆಸ್ ಜನ ಸಂಭ್ರಮಪಟ್ಟರಂತೆ! ಆದರೆ ಅದರ ಮುಖಂಡರ ಪ್ರಕಾರ ಸಲಿಂಗಕಾಮಕ್ಕೆ ಮಾನ್ಯತೆ ಕೊಡಬಾರದಂತೆ! ಸಲಿಂಗಿಗಳು ಮದುವೆ ಆಗಬಾರದಂತೆ! ಅದು ಈ ದೇಶದ ಸಂಸ್ಕೃತಿಗೆ. ಧರ್ಮಕ್ಕೆ ವಿರುದ್ಧವಂತೆ!….

ರೀ, ಯಾವ ಧರ್ಮ, ಸಂಸ್ಕೃತಿ ಬಗ್ಗೆ ಈ ವಿಕೃತರೆಲ್ಲ ಮಾತಾಡ್ತಾ ಇದ್ದಾರೀ? ಅವರ ಸಂಘಟನೆಯಲ್ಲಿ ಅವಿವಾಹಿತ ಸದಸ್ಯರೆಲ್ಲ ಅಮಾಯಕ ಹೊಸಬರನ್ನು ತಮ್ಮ ಲೈಂಗಿಕ ತೀಟೆಗೆ (ಹಸಿವಿಗೆ) ಬಳಸಿಕೊಳ್ಳುತ್ತಾರೆ, ಆ ಕಾರಣಕ್ಕೇ ಅವರು 377 ರದ್ದಾಗ ಪಟಾಕಿ ಹೊಡೆದು ಸಂಭ್ರಮ ಪಟ್ಟರಷ್ಟೇ. ಆದರೆ, ಸಲಿಂಗ ಕಾಮ ಎನ್ನುವುದು ಕೇವಲ ಸಂಭೋಗದ ವಿಷಯವಲ್ಲ, ಅದು ವ್ಯಕ್ತಿಗಳ ನಡುವಿನ ಒಲವು, ನಂಬಿಕೆ, ಪ್ರೀತಿ ಮತ್ತು ವಿಶ್ವಾಸಗಳ ದ್ಯೋತಕ ಎಂಬುದು ಈ ಅಡ್ನಾಡಿಗಳಿಗೆ (ದ್ವಂದ್ವ ನಿಲುವಿನವರಿಗೆ) ಅರ್ಥ ಆಗಲ್ಲ….. ಲಿಂಬಾವಳಿ ಅವರಿಗೆ ಸಂಬಂಧಿಸಿದ ಸೆಕ್ಸ್ ವಿಡಿಯೋ ಬಗ್ಗೆ ತನಿಖೆಯಾಗಲೇ ಬೇಕು… ಅದರಿಂದ ಇನ್ನಷ್ಟು ಇಂತಹ ಲೈಂಗಿಕ ಅತ್ಯಾಚಾರಗಳು ಬಯಲಾಗುತ್ತವೆ… ನಕಲಿ ದೇಶಭಕ್ತರ ಮುಖವಾಡಗಳು ಕಳಚುತ್ತವೆ…..
ಜೈ ಭೀಮ್, ಜೈ ಸಂವಿಧಾನ, ಲಾಲ್ ಸಲಾಂ, ನಾನೂ ಗೌರಿ……’

 

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

1 COMMENT

LEAVE A REPLY

Please enter your comment!
Please enter your name here

- Advertisment -

ಬಂಗಾಳ SIR : ನ್ಯಾಯಮಂಡಳಿಗಳಿಂದ ಪರಿಹಾರ ಪಡೆದವರು ಕೇವಲ 0.01% ಜನ

ಪಶ್ಚಿಮ ಬಂಗಾಳದಲ್ಲಿ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಲ್ಲಿ ಉಂಟಾದ ವಿವಾದಗಳನ್ನು ಬಗೆಹರಿಸಲು ಮೇಲ್ಮನವಿ ನ್ಯಾಯಮಂಡಳಿಗಳನ್ನು ಸ್ಥಾಪಿಸಲಾಗಿದೆ. ಎಸ್‌ಐಆರ್ ಪ್ರಕ್ರಿಯೆಯ ನಂತರ ಮತದಾರರ ಪಟ್ಟಿಯಿಂದ ಹೆಸರುಗಳನ್ನು ಕೈಬಿಟ್ಟಿರುವುದರ ಅಥವಾ...

ಪ.ಬಂಗಾಳ ಎಸ್‌ಐಆರ್‌ : ದೇಶ ಕಾದ ಯೋಧನಿಂದ ತೀರ್ಪು ಕೊಟ್ಟ ನ್ಯಾಯಾಧೀಶರವರೆಗೆ.. ಮತ ಹಕ್ಕು ಕಳೆದುಕೊಂಡ ಲಕ್ಷಾಂತರ ಜನರು

ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್‌) ದೇಶದಲ್ಲಿ ಪ್ರಸ್ತುತ ಚರ್ಚೆಯಲ್ಲಿರುವ ಪ್ರಮುಖ ವಿಚಾರ. ಹಲವು ಗೊಂದಲಗಳ ನಡುವೆ ಮೊದಲ ಹಂತದಲ್ಲಿ ಬಿಹಾರದಲ್ಲಿ ಎಸ್‌ಐಆರ್‌ ಪೂರ್ತಿಗೊಳಿಸಿದ ಚುನಾವಣಾ ಆಯೋಗ, ನಂತರ ಅಲ್ಲಿ ವಿಧಾನಸಭಾ...

ತೆಲಂಗಾಣ ಜಾತಿ ಸಮೀಕ್ಷೆ: ಜನರ ಆರ್ಥಿಕ ಭವಿಷ್ಯ ನಿರ್ಧರಿಸುತ್ತಿರುವ ಜಾತಿ ಹಿನ್ನೆಲೆ

ತೆಲಂಗಾಣದಲ್ಲಿರುವ ಎಲ್ಲಾ ಪರಿಶಿಷ್ಟ ಜಾತಿ ಕಾರ್ಮಿಕರಲ್ಲಿ ಸುಮಾರು ಅರ್ಧದಷ್ಟು ಜನರು ದಿನಗೂಲಿ ಕಾರ್ಮಿಕರು. ಆದರೆ, ಸಾಮಾನ್ಯ ಜಾತಿ ಕಾರ್ಮಿಕರಲ್ಲಿ 10 ರಲ್ಲಿ ಒಬ್ಬರು ಮಾತ್ರ ದಿನಗೂಲಿ ಮಾಡುತ್ತಾರೆ. ಬ್ರಾಹ್ಮಣರು ಎಸ್‌ಟಿ ಸಮುದಾಯದ ಕೋಲಂಗಿಂತ...

ಲೆಬನಾನ್‌ನಲ್ಲಿ ಯೇಸುವಿನ ಪ್ರತಿಮೆ ಧ್ವಂಸ ಮಾಡಿದ ಇಸ್ರೇಲಿ ಸೈನಿಕ; ಫೋಟೋ ವೈರಲ್

ಇಸ್ರೇಲಿ ಸೈನಿಕನೊಬ್ಬ ದಕ್ಷಿಣ ಲೆಬನಾನ್‌ನಲ್ಲಿ ಸ್ಲೆಡ್ಜ್ ಹ್ಯಾಮರ್‌ನಿಂದ ಯೇಸುಕ್ರಿಸ್ತನ ಪ್ರತಿಮೆಯನ್ನು ಧ್ವಂಸ ಮಾಡುತ್ತಿರುವುದನ್ನು ತೋರಿಸುವ ವೈರಲ್ ಚಿತ್ರದ ಸತ್ಯಾಸತ್ಯತೆಯನ್ನು ಇಸ್ರೇಲ್ ರಕ್ಷಣಾ ಪಡೆಗಳು (ಐಡಿಎಫ್‌) ದೃಢಪಡಿಸಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಎಕ್ಸ್ ನಲ್ಲಿ 6.8...

TCS ನಾಸಿಕ್ ಪ್ರಕರಣ : ಮಾಧ್ಯಮಗಳ ಸುಳ್ಳು ಮತ್ತು ಕಂಪನಿ ಹೇಳಿದ ಸತ್ಯ

ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್‌) ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎನ್ನಲಾದ ಪ್ರಕರಣವೊಂದು ಪ್ರಸ್ತುತ ಇಡೀ ದೇಶದಾದ್ಯಂತ ಭಾರೀ ಚರ್ಚೆಯ ವಿಷಯವಾಗಿದೆ. ಈ ಪ್ರಕರಣದಲ್ಲಿ ಮುಖ್ಯವಾಗಿ ಲೈಂಗಿಕ ಕಿರುಕುಳ ಮತ್ತು...

‘ಅಮೆರಿಕದೊಂದಿಗೆ ಮಾತುಕತೆ ಇಲ್ಲ..’; ಇಸ್ಲಾಮಾಬಾದ್‌ ಸಭೆಯಲ್ಲಿ ಇರಾನ್ ಭಾಗವಹಿಸುವುದು ಅನುಮಾನ

ಯುನೈಟೆಡ್ ಸ್ಟೇಟ್ಸ್ (ಅಮೆರಿಕ) ಜೊತೆ ಹೊಸ ಸುತ್ತಿನ ಮಾತುಕತೆಗಾಗಿ ಇಸ್ಲಾಮಾಬಾದ್‌ಗೆ ಸಂಧಾನಕಾರರನ್ನು ಕಳುಹಿಸುವ ಯಾವುದೇ ಯೋಜನೆ ಇಲ್ಲ ಎಂದು ಇರಾನ್ ಸೂಚಿಸಿದೆ. ಕದನ ವಿರಾಮ ಮುಕ್ತಾಯಗೊಳ್ಳಲು 48 ಗಂಟೆಗಳ ಮೊದಲು ಯುದ್ಧ ನಿರತ...

ಇರಾನ್, ಇಸ್ರೇಲ್-ಅಮೆರಿಕ ಯುದ್ಧ : ವಿನಾಶದ ನಡುವೆಯೂ ಲಾಭ ಪಡೆದವರು ಯಾರು?

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) 2026ರ ಜಾಗತಿಕ ಬೆಳವಣಿಗೆಯ ಅಂದಾಜನ್ನು ಶೇಕಡ 3.3 ರಿಂದ 3.1ಕ್ಕೆ ಇಳಿಸಿದೆ. ಇರಾನ್ ವಿರುದ್ಧದ ಅಮೆರಿಕ-ಇಸ್ರೇಲ್ ಯುದ್ಧದ ಪರಿಣಾಮ ಮತ್ತು ಹಾರ್ಮುಝ್ ಜಲಸಂಧಿಯನ್ನು ಮುಚ್ಚಿರುವುದು ವಿಶ್ವ ಆರ್ಥಿಕತೆಯ...

ಕ್ಷೇತ್ರ ಮರುವಿಂಗಡಣೆ ವಿರುದ್ಧ ದಕ್ಷಿಣದ ರಾಜ್ಯಗಳ ಪಟ್ಟು: ಭವಿಷ್ಯದ ಮರುಚಿಂತನೆಗೆ ಇದುವೇ ಸೂಕ್ತ ಕಾಲ

ಲೋಕಸಭೆಯಲ್ಲಿ 131 ನೇ ಸಾಂವಿಧಾನಿಕ ತಿದ್ದುಪಡಿ ಮಸೂದೆಯನ್ನು ತಿರಸ್ಕರಿಸಿರುವುದು ಭಾರತದ ಪ್ರಜಾಪ್ರಭುತ್ವ ಪಥದಲ್ಲಿ ಮಹತ್ವದ ಕ್ಷಣವಾಗಿದೆ. ಇದು ಕೇವಲ ಶಾಸಕಾಂಗದ ಹಿನ್ನಡೆಯನ್ನು ಮಾತ್ರವಲ್ಲ, ಒಕ್ಕೂಟ ವ್ಯವಸ್ಥೆಯ ಸೂಕ್ಷ್ಮ ಸಮತೋಲನವನ್ನು ಹಾಳುಮಾಡುವ ಅಪಾಯವನ್ನುಂಟುಮಾಡುವ ಪ್ರಸ್ತಾಪಗಳ...

ಮೋದಿ ಸರ್ಕಾರದ ಯೂಟರ್ನ್ : ಜನಸಂಖ್ಯಾ ಸ್ಫೋಟದ ಕಳವಳದಿಂದ ಹೆಚ್ಚು ಜನಸಂಖ್ಯೆಯ ರಾಜ್ಯಗಳಿಗೆ ಗಿಫ್ಟ್ ಕೊಡುವವರೆಗೆ

ಭಾರತದ ಜನಸಂಖ್ಯೆಯ ಬಗ್ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅವರ ಸರ್ಕಾರ ನಿಜವಾಗಿಯೂ ಬಹಳ ಕಳವಳ ವ್ಯಕ್ತಪಡಿಸುತ್ತಿದೆ– ಅಥವಾ ಅವರು ನಮಗೆ ಆ ರೀತಿ ನಂಬುವಂತೆ ಮಾಡಿದ್ದಾರೆ. ಏಕೆಂದರೆ... 2019ರ ಸ್ವಾತಂತ್ರ್ಯ ದಿನಾಚರಣೆಯಂದು ಮೋದಿಯವರು,...

ದೇಶವನ್ನುದ್ದೇಶಿಸಿ ಮೋದಿ ಭಾಷಣ : ಚುನಾವಣಾ ನೀತಿ ಸಂಹಿತೆಯ ಉಲ್ಲಂಘನೆ

ಕ್ಷೇತ್ರ ಮರುವಿಂಗಡನೆಗೆ ಉದ್ದೇಶಿಸಿದ್ದ ಸಂವಿಧಾನದ 131ನೇ ತಿದ್ದುಪಡಿ ಮಸೂದೆಗೆ ಲೋಕಸಭೆಯಲ್ಲಿ ಸೋಲಾದ ಬೆನ್ನಲ್ಲೇ ಶನಿವಾರ (ಏ.18) ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಪ್ರತಿಪಕ್ಷಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಸಂಸತ್ತಿನಲ್ಲಿ ವಿರೋಧ...