Homeಕರ್ನಾಟಕಬೆಂಗಳೂರಿನಲ್ಲಿ ಭೀಕರ ಘಟನೆ: ತನ್ನ ಮಗಳನ್ನು ನಾಲ್ಕನೇ ಅಂತಸ್ತಿನಿಂದ ಎಸೆದು ಕೊಂದ ವೈದ್ಯೆಯ ಬಂಧನ

ಬೆಂಗಳೂರಿನಲ್ಲಿ ಭೀಕರ ಘಟನೆ: ತನ್ನ ಮಗಳನ್ನು ನಾಲ್ಕನೇ ಅಂತಸ್ತಿನಿಂದ ಎಸೆದು ಕೊಂದ ವೈದ್ಯೆಯ ಬಂಧನ

- Advertisement -
- Advertisement -

ದಂತ ವೈದ್ಯೆಯೊಬ್ಬರು ಅಪಾರ್ಟ್‌ಮೆಂಟ್‌ನ ನಾಲ್ಕನೇ ಅಂತಸ್ತಿನಿಂದ ನಾಲ್ಕು ವರ್ಷದ ಸ್ವಂತ ಮಗಳನ್ನು ಎಸೆದು ಕೊಂದ ಅಮಾನುಷ ಘಟನೆಯೊಂದು ಬೆಂಗಳೂರಿನಲ್ಲಿ ವರದಿಯಾಗಿದೆ. ಗುರುವಾರ ನಡೆದ ಈ ಭೀಕರ ಘಟನೆಯು ಸಿಸಿಟಿವಿ ಕ್ಯಾಮರದಲ್ಲಿ ಸೆರೆಯಾಗಿದೆ.

ಮಗುವನ್ನು ಎಸೆದ ನಂತರ ಆಕೆಯೂ ಸಹ ರಕ್ಷಣ ಕಂಬಗಳನ್ನು ದಾಟಿ ಸ್ವಲ್ಪ ಹೊತ್ತು ನಿಂತಿದ್ದರು. ಅದನ್ನು ಗಮನಿಸಿದ ಕುಟುಂಬದ ಸದಸ್ಯರು ಆಕೆಯನ್ನು ವಾಪಸ್ ಮನೆಯೊಳಗೆ ಕರೆದೊಯ್ದಿದ್ದಾರೆ ಎನ್ನಲಾಗಿದೆ.

ಬೆಂಗಳೂರಿನ ಎಸ್‌.ಆರ್‌ ನಗರದ ನಿವಾಸಿಯಾದ ದಂತ ವೈದ್ಯೆಯು ನಾಲ್ಕನೇ ಅಂತಸ್ತಿನಿಂದ ಮಗುವನ್ನು ಎಸೆದ ನಂತರ ಆ ಮಗುವು ಸ್ಥಳದಲ್ಲಿಯೇ ಮೃತಪಟ್ಟಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಾಲ್ಕು ವರ್ಷ ಮಗು ವಾಕ್ ಮತ್ತು ಶ್ರವಣ ದೋಷದ ಸಮಸ್ಯೆ ಎದುರಿಸುತ್ತಿತ್ತು. ಇದರಿಂದ ವೈದ್ಯೆ ಖಿನ್ನತೆಗೊಳಗಾಗಿದ್ದಳು. ಆ ಕಾರಣದಿಂದಾಗಿಯೇ ಮಗವನ್ನು ಎಸೆದಿದ್ದಾಳೆ ಎನ್ನಲಾಗುತ್ತಿತ್ತು, ಈ ಕುರಿತು ಆಕೆಯ ಪತಿ ಪೊಲೀಸ್ ದೂರು ನೀಡಿದ ನಂತರ ವೈದ್ಯೆಯನ್ನು ಬಂಧಿಸಲಾಗಿದೆ.

“ಪ್ರಕರಣದ ಕುರಿತು ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸುತ್ತೇವೆ. ಸದ್ಯಕ್ಕೆ ಬಂಧಿತ ಮಹಿಳೆಯ ಆರೋಗ್ಯ ಸ್ಥಿತಿ ಚೆನ್ನಾಗಿದೆ” ಎಂದು ಹಿರಿಯ ಪೊಲೀಸ್ ಅಧಿಕಾರಿ ಶ್ರೀನಿವಾಸ್ ಗೌಡ ತಿಳಿಸಿದ್ದಾರೆ.

ಇದನ್ನೂ ಓದಿ: ಪ್ರತಿ ಮನೆಯಲ್ಲಿ ತ್ರಿವರ್ಣ ಧ್ವಜ ಹಾರಿಸಲು ಪ್ರಧಾನಿ ಮೋದಿ ಕರೆ: ಮನೆಯೇ ಇಲ್ಲದವರು ಏನು ಮಾಡಬೇಕು?

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಮೋದಿ ದ್ವೇಷ ಭಾಷಣದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಪಕ್ಷದಿಂದಲೇ ಉಚ್ಚಾಟನೆ!

0
ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮರ ವಿರುದ್ಧ ಮಾಡಿರುವ ದ್ವೇಷ ಭಾಷಣದ ಬಗ್ಗೆ ಮಾಧ್ಯಮವೊಂದರಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ರಾಜಸ್ಥಾನದ ಬಿಕಾನೇರ್ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷನನ್ನು ಪಕ್ಷದಿಂದಲೇ ಉಚ್ಚಾಟಿಸಲಾಗಿದೆ. ಈ ವಿಚಾರ ಈಗ...